ಒಟ್ಟು 7812 ಕಡೆಗಳಲ್ಲಿ , 132 ದಾಸರು , 3804 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೃಂದಾವನ ಪ್ರವೇಶಿಸಿದಂದವ ಚಂದದಿ ಪೇಳುವೆ ಪಾಲಿಪುದು ಪ ಇಂದಿರೆಯರಸನ ಪ್ರೇರಣೆಯಿಂದ ಯತಿ ವೃಂದ ತಿಲಕ ರಾಘವೇಂದ್ರರಾನಂದದಿ ಅ.ಪ ಒಂದು ದಿನವು ಶ್ರೀ ರಾಯರು ಶಿಷ್ಯರ ವೃಂದಕೆ ಪಾಠವ ಹೇಳುತಿರೆ ಅಂದು ವಿಮಾನದಿ ಕೃಷ್ಣದ್ವೈಪಾಯನ ಪ ರಂಧಾಮಕೈದಲು ನೋಡಿ ಕೈ ಮುಗಿದು 1 ಎಷ್ಟು ದಿನವು ನಾವಿಲ್ಲಿರಬೇಕೆಂದು ಶಿಷ್ಟ ಗುರುವರರು ಕೇಳಿದೊಡೆ ಕೃಷ್ಣದ್ವೈಪಾಯನರೆರಡು ಬೆಳಗುಳ ಗಟ್ಟಿಯಾಗಿ ಬೀಸಿ ತೋರಿಸಿ ಪೊರಟರು 2 ನೆರೆದ ಶಿಷ್ಯರದರರ್ಥವೇನೆನುತ ಗುರುಗಳನ್ನು ತಾವ್ ಕೇಳಿದೊಡೆ ಎರೆಡು ವರ್ಷ ತಿಂಗಳು ದಿನವೆರಡೆರಡು ಇರುವುದು ಧರೆಯೊಳಗೆಂದರು ರಾಯರು 3 ಆದವಾನಿಗೆ ಗುರು ಸಂಚಾರ ಪೋಗಿರೆ ಆ ದಿವಾನ ವೆಂಕಣ್ಣ ಬಲು ಆದರಿಸಿದ ಬಳಿ ತಾ ನವಾಬನಿಂದ ಮೋದದಿ ಕೊಡಿಸಿದ ಮಂಚಾಲೆಯನು 4 ಹಿಂದೆ ಪ್ರಹ್ಲಾದರು ಯಾಗವ ರಚಿಸಿದ ಸುಂದರ ಕ್ಷೇತ್ರವಿದೆಂಬುದನು ತಂದು ಮನಕೆ ಗುರುರಾಯರೀ ಕ್ಷೇತ್ರವ ನಂದು ಪಡೆದು ತಾವಿಲ್ಲಿಯೇ ನಿಂತರು 5 ಉತ್ತಮ ನೀಲವರ್ಣದ ಶಿಲೆಯಪಳಿರಿಸಿ ಕೆತ್ತಿಸಿ ವೃಂದಾವನತರಿಸಿ ಕ್ಷೇತ್ರರಕ್ಷಣೆಯಗಷ್ಟ ದಿಕ್ಕುಗಳಲಿ ದೇವ ಮೂರ್ತಿಗಳನು ಸ್ಥಾಪಿಸಿ ನಿಲಿಸಿದರು 6 ವೃಂದಾವನದಲಿ ಸ್ಥಾಪಿಸಲೇಳ್ನೂರು ಚಂದದ ಸಾಲಿಗಾಮಗಳ ತಂದಿಟ್ಟರೆ ಸಿದ್ಧತೆಗಳು ಸಕಲವು ಕುಂದಿಲ್ಲದಂದೆ ನಡೆದಿರಲಾಗಲೆ 7 ಮುಂದಕೆ ತಮ್ಮ ಸಂಸ್ಥಾನವ ವಹಿಸಿ ಯೋ ಗೀಂದ್ರರೆಂಬ ಪ್ರಿಯ ಶಿಷ್ಯರಿಗೆ ಸಂದಿಪ ವಿರಹದಿ ನೊಂದಿದ ಶಿಷ್ಯರ ವೃಂದವ ಬಲು ಸಂತೈಸಿದರಾಗಲೇ8 ನಲವತ್ತೇಳು ಸಂವತ್ಸರ ನಾಲ್ಕು ತಿಂ ಗಳು ಇಪ್ಪತ್ತೊಂಭತ್ತು ದಿನಕಾಲ ನಲವಿನಿಂದ ವೇದಾಂತ ಸಾಮ್ರಾಜ್ಯವ ಸಲಹಿ ಸುಕೀರ್ತಿಯ ಗಳಿಸಿದ ಬಳಿಕ 9 ಸಾವಿರದೈನೂರು ತೊಂಭತ್ಮೂರನೆ ಕ್ರತು ಸಂವತ್ಸರದ ಶ್ರಾವಣ ಕೃಷ್ಣ ದ್ವಿತೀಯದ ಗುರುವಾರ ವಾಸರ ಮುಹೂರ್ತದಿ ಗುರುವರ 10 ಹಸ್ತದಿ ಜಪಮಾಲೆ ಪಿಡಿದು ಯೋಗೀಂದ್ರರ ಹಸ್ತಲಾಘವವ ಸ್ವೀಕರಿಸಿ ಸ್ವಸ್ತಿವಾಚನಗಳ್ ವಿಪ್ರರು ಪೇಳುತಿರೆ ಅರ್ಥಿಯಲಿ ವೃಂದಾವನವ ಪ್ರವೇಶಿಸಿ 11 ಪದ್ಮಾಸನದಲಿ ಮಂಡಿಸಿ ಎದುರಲಿ ಮುದ್ದುಪ್ರಾಣೇಶನ ನೋಡುತಲಿ ಪದ್ಮನಾಭನ ಧ್ಯಾನದೊಳಿರೆ ಜಪಸರ ಬಿದ್ದು ಬಿಡಲು ಮುಚ್ಚಳಿಕೆಯನಿಡಲು 12 ನೆರೆದಿಹ ವಿಪ್ರರು ಜಯ ಜಯವೆನ್ನುತ ಪರಿಪರಿ ರಾಯರ ಪೊಗಳಿದರು ಕರಿಗಿರೀಶನ ಕರುಣ ಪಡೆದ ನಮ್ಮ ಗುರುಸಾರ್ವಭೌಮನ ಸರಿಯಾರಿಹರು 13
--------------
ವರಾವಾಣಿರಾಮರಾಯದಾಸರು
ವೃಂದಾವನಕೈತಂದನು ಆ-ನಂದದಿಂ ಕ್ಷೀರಾಬ್ಧಿಯಿಂದ ಶ್ರೀಕೃಷ್ಣನು ಪ ತೆತ್ತೀಸರೂಪಿ ದೇವತೆಗಳೋಲೈಸಲುಮುತ್ತಿನ ಚಾಮರಗಳನಿಕ್ಕಲುಮುತ್ತೈದೆಯರೆಲ್ಲಾ ಧವಳವ ಪಾಡಲುಅರ್ಥಿಯಿಂದಿಂದಿರೆ ಸಹಿತ ಶ್ರೀಕೃಷ್ಣನು 1 ದ್ವಾರಾವತಿಯಿದ್ದು ಕ್ಷೀರಸಾಗರವಿದ್ದುಸಾರತರ ಶ್ವೇತದ್ವೀಪವಿರ್ದುಶ್ರೀ ವೃಂದಾವನ ಸುಖಮಂದಿರವೆನುತಲಿಕ್ಷೀರಸಾಗರವಾಸಿಯಾದ ಶ್ರೀಕೃಷ್ಣನು 2 ನಂದಗೋಕುಲವಿದ್ದು ಮಂದರಗಿರಿಯಿದ್ದುಚಂದವಾದ ವೈಕುಂಠಲೋಕವಿದ್ದುವೃಂದಾವನಪತಿಸುಖ ಗೃಹವೆನುತಲಿಇಂದಿರಾದೇವಿಯಿಂ ಸಹಿತ ಶ್ರೀಕೃಷ್ಣನು3 ಸುರದುಂದುಭಿ ದಂಧಣರೆಂದು ಮೊಳಗಲುಸುರರು ಹೂವಿನ ಮಳೆಯನು ಕರೆಯತರುಣ ತುಲಸಿಮಾಲೆಯಲುಗಲಿಂದಿರೆ ಸಹಗರುಡನ ಹೆಗಲಿನಿಂದಿಳಿದು ಶ್ರೀಕೃಷ್ಣನು4 ಉರದ ಕೌಸ್ತುಭರತ್ನ ಥಳಥಳಥಳಿಸಲುಕೊರಳ ವೈಜಯಂತಿಯ ಸರವಲುಗೆಸರಸಿಜ ಭವಮುಖ್ಯ ಸುರರೋಲೈಸಲುಪರಮ ಸಂಭ್ರಮದಿಂದ ಶ್ರೀಕೃಷ್ಣರಾಯನು5
--------------
ಕೆಳದಿ ವೆಂಕಣ್ಣ ಕವಿ
ವೃಂದಾವನಗಳಿಗಾನಮಿಸಿ ನಿತ್ಯ ನಂದ ತೀರ್ಥ ಮತೋದ್ದಾರಕರೆನಿಪ ಪ ವರ ಮಧ್ವಮುನಿ ಕÀಮಲಕರ ಪದ್ಮ ಸಂಜಾತ ಪದ್ಮನಾಭ ಶ್ರೀ ರಾಮತೀರ್ಥ ಕವೀಂದ್ರಾ ಕರಸರೋರುಹ ಜಾತ ವಾಗೀಶಮುನಿ ಪರಘುವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ 1 ಶ್ರೀ ಸುಧೀಂದ್ರಾರ್ಯರ ಪ್ರಪೌತ್ರರೆನಿಪ ವಸುಧೀಂದ್ರ ವ್ಯಾಸರಾಯ ಶ್ರೀನಿವಾಸ ಮುನಿಯಾ ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ ರ್ದೋಷರನ ಮಾಡಿ ಅಭಿಲಾಷೆ ಪೂರೈಸುತಿಹ 2 ದೇವತೆಗಳು ಇವರು ಸಂದೇಹ ಬಡಸಲ್ಲಾ ಮಿ ಪರಾಭವ ಮಾಡಿ ಈ ವಸುಂಧರೆಯೊಳಗೆ ಕೀರ್ತಿಯುತರಾಗಿ ಲಕ್ಷ್ಮೀವರ ಜಗ ನ್ನಾಥ ವಿಠಲನ ಐದಿಹರಾ 3 ಸತ್ಯಬೋಧ ತೀರ್ಥ
--------------
ಜಗನ್ನಾಥದಾಸರು
ವೃಂದಾವನದ ಸೇವೆಯ ಪ. ವೃಂದಾವನದ ಸೇವೆಮಾಡಿದವರಿಗೆ ಭೂ-ಬಂಧನ ಬಿಡುಗಡೆಯಾಗುವುದು ಅ.ಪ. ಕರವ ಮುಗಿದು ಬೇಗೀ-ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು1 ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-ನ್ನೀರನೆರೆದು ಪ್ರತಿದಿವಸದಲ್ಲಿಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನಸೇರಿಸುವಳು ತನ್ನ ಪದವಿಯನು 2 ಒಡೆಯನ ಮನೆಗೆ ನೀರುತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷಪದವಿಯನು 3 ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-ರಾಶೆಯಿಂದಲಿ ಮುಕ್ತಿ ದೊರಕುವುದು 4 ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮಎಡಭಾಗದಲಿ ಲಕ್ಷ್ಮಿದೇವಿಯ ಸಹಿತಸಡಗರದಿಂದಲಿ ಹಯವದನನ ಪಾದಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ 5
--------------
ವಾದಿರಾಜ
ವೃಂದಾವನದೊಳು ಶೋಭಿಸುತಿರುವಳು ಸುಂದರ ಶ್ರೀ ತುಳಸಿ ಪ ನಂದನಂದನ ಗತಿ ಪ್ರಿಯಳೆಂದೆನಿಸುತ ಭವ ಬಂಧವ ಬಿಡಿಸುತ ಅ.ಪ ನಿತ್ಯವು ಪ್ರಾತಃಕಾಲದೊಳೆದ್ದು ಪವಿತ್ರ ಚಿತ್ತದಲಿ ಭಕ್ತಿಯಲಿ ಸ್ತೋತ್ರವ ಗೈಯುತ ಸುತ್ತಿ ಪ್ರದಕ್ಷಿಣೆ ಮತ್ತೆ ನಮಿಪರಘ ಬತ್ತಿಸಿ ಸಲಹುತ 1 ತುಳಸಿ ವೃಂದಾವನ ಮಹಿಮೆಯ ಮನದಲಿ ನಿಲಿಸಿ ಸೇವಿಸುವ ಸಜ್ಜನರ ಕಲಿದೋಷಗಳನು ಕಳೆದು ಸತತ ಶ್ರೀ ನಿಲಯನÉೂಳ್ ಭಕ್ತಿಯ ಕೊಡುವೆನೆಂದೆನುತ 2 ತುಳಸಿ ದಳದಿ ಶ್ರೀ ಕರಿಗಿರೀಶನ ವಿಲಸಿತ ಪೂಜೆಯ ಮಾಡುವರ ಸುಲಲಿತ ಸತ್ಪಥದೊಳು ನಡೆಸುತ ನಿ ರ್ಮಲಮತಿ ಕರುಣಿಸಿ ಸಲಹುವೆನೆನ್ನುತ 3
--------------
ವರಾವಾಣಿರಾಮರಾಯದಾಸರು
ವೃಂದಾವನೀ ದೇವಿ ವಂದಿಸುವೆ ಶ್ರೀ ತುಳಸಿ ವಂದಾರು ಜನತತಿಗೆ ಮಂದಾರಳೆನಿಸಿರುವಿ ಸಂದೇಹವಿಲ್ಲವಿದಕೆ 1 ಅಂದು ಧನ್ವಂತರಿಯು ತಂದಿರುವ ಪೀಯೂಷ ದಿಂದ ಪೂರಿತ ಕಲಶದಿ ಇಂದಿರಾಪತಿಯ ಆನಂದ ಬಾಷ್ಪೋದಕದ ಬಿಂದು ಬೀಳಲು ಜನಿಸಿದಿ2 ಶ್ರೀ ತುಳಸಿ ನಿನ್ನನು ನಿಕೇತನದಿ ಪೂಜಿಪರ ಪಾತಕವ ಪರಿಹರಿಸುವಿ ಶ್ರೀ ತರುಣಿಪತಿಗೆ ಬಲುಪ್ರೀತಿ ವಿಷಯಳೆನಿನ್ನ ನಾ ಸ್ತುತಿಸಲೆಂತು ಜನನಿ 3 ಸರ್ವ ತೀರ್ಥಗಳೆಲ್ಲ ತರುಮೂಲದಲ್ಲಿಹವು ಸರ್ವ ವಿಬುಧರು ಮಧ್ಯದಿ ಸರ್ವ ವೇದಗಳೆಲ್ಲ ತರುಅಗ್ರಭಾಗದಲಿ ಇರುತಿಹರು ಬಿಡದೆ ನಿರುತ 4 ತುಳಸಿ ನಿಮ್ಮಯ ಲಕ್ಷದಳಗಳಿಂದಲಿ ಲಕ್ಷ್ಮಿನಿಲಯನಂಘ್ರಿಗಳರ್ಚಿಸಿ ಕಲುಷ ವರ್ಜಿತನಾಗಿ ಬಲುಬೇಗ ಶ್ರೀಹರಿಯ ಒಲುಮೆ ಪಡೆವನು ಜಗದೊಳು 5 ತುಳಸಿ ದೇವಿಯೆ ನಿನಗೆ ಜಲವೆರೆದು ಕುಂಕುಮದ ತಿಲಕವಿಡುತಲಿ ನಿತ್ಯದಿ ಲಲನೆಯರು ಪೂಜಿಸಲು ಒಲಿದಿತ್ತು ಸೌಭಾಗ್ಯ ಸಲಹುವಿಯೆ ಕರುಣದಿಂದ 6 ಮಾಧವ ಪ್ರಿಯ ತುಳಸಿ ಸಾದರದಿ ನಿನ್ನೊಳಗೆ ಶ್ರೀದೇವಿ ನಿಂದಿರುವಳು ಮೋದಮುನಿ ಶಾಸ್ತ್ರವನು ಬೋಧಿಸುವ ಬುಧಜನರ ಪಾದಸೇವೆಯ ಕರುಣಿಸು 7 ಮಿತ್ರನುದಯದಲೆದ್ದು ಚಿತ್ತನಿರ್ಮಲರಾಗಿ ಭಕ್ತಿಯಲಿ ಶ್ರೀ ತುಳಸಿಯ ಮೃತ್ತಿಕೆಯ ಧರಿಸಿದ ಮಹಾತ್ಮರನು ಕಂಡು ಯಮ ಭೃತ್ಯರಂಜುವರು ಭಯದಿ 8 ಇಂತು ಶ್ರೀತುಳಸಿ ಸೀಮಂತಿನಿಯ ಸ್ತೋತ್ರವ ನಿ- ರಂತರದಿ ಪಠಿಸುವವರ ಚಿಂತಿತ ಪ್ರದನಾಗಿ ನಿಂತು ಕಾರ್ಪರದಿ ಸಿರಿ ಕಾಂತ ನರಹರಿ ಪೊರೆವನು 9
--------------
ಕಾರ್ಪರ ನರಹರಿದಾಸರು
ವೆಂಕಟ ಗಿರಿ ವಿಠಲ | ಲೆಂಕಳನ ಪೊರೆಯೋ ಪಪಂಕಜಾಸನ ವಂದ್ಯ | ಆಕಳಂಕ ಮಹಿಮಾ ಅ.ಪ. ಸಾಧ್ವಿಮಣಿ ತವದಾಸ್ಯ | ಬುದ್ದಿಯಲಿ ಮೊರೆಯಿಟ್ಟುಉದ್ಧರಕೆ ಕಾದಿಹಳೊ | ಅಧ್ವರೇಡ್ಯ ಹರೀ |ಮಧ್ವಮತ ಪೊತ್ತಿರುವ | ಶುದ್ಧಕಾರಣದಿಂದಉದ್ಧಾರ ಗೈಯ್ಯುವುದೊ | ಶ್ರದ್ಧ ಪತಿನುತನೇ 1 ಖೇಚರೋತ್ತಮ ದೇವ | ವಾಚಾಮ ಗೋಚರನೆಪ್ರಾಚೀನದುಷ್ಕರ್ಮ | ಮೋಚನವಗೈಸೇಯಾಚಿಸುವೆ ನಿನ್ನಲ್ಲಿ | ಕೀಚಕಾರಿ ಪ್ರಿಯನೇಮೋಚಕೇಚ್ಛೆಯ ಮಾಡಿ | ಸೂಚಿಸೋ ಕರುಣಾ 2 ಕರ್ಮ ಪಥಸವೆಸೋ 3 ಹರಿನಾಮ ಸ್ಮøತಿಗಿಂತ | ಪರಮ ಸಾಧನ ಕಾಣೆವರಕಲೀಯಲಿಯೆಂದು | ಸಾರತಿವೆ ಶಾಸ್ತ್ರಾತುಣಿಗಂತೆಯೆ ಮತ್ತೆ | ವರ ಸ್ವಪ್ನವನುಸರಿಸಿಬರೆದಿಹೆನೊ ಅಂಕಿತವ | ಕರುಣ ರಸ ಪೂರ್ಣಾ 4 ಕೈವಲ್ಯ ಫಲದಾತಸೇವಕಳ ಕೈಪಿಡಿಯೆ | ಓವಿ ಪ್ರಾರ್ಥಿಸುವೇ |ಭಾವುಕರ ಪಾಲ ಸಂ | ಭಾವಿಸೀಕೆಯ ಕಾಯೊಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೆಂಕಟ ನರಹರಿ ವಿಠಲ | ಪಂಕಕಳೆದಿವಳಾ ಪ ಸಂಕಟವ ಪರಿಹರಿಸಿ | ಕಾಪಾಡ ಬೇಕೋ ಅ.ಪ. ಸಾರ ಶರಧಿಯು ಎಂಬವೀರವೈರಾಗ್ಯ ಕಂ | ಸಾರಿ ಕೊಡುತಿವಳಾಪಾರುಗೈ ಭವದಕೂ | ಸಾರವನು ಎಂದೆನುತಮಾರಾರಿಸ್ವದ್ವಿನುತ | ಪ್ರಾರ್ಥಿಪೆನೊ ಹರಿಯೆ 1 ಪತಿಸುತರು ಭ್ರಾತೃ ಶ್ರೀ | ಪತಿಯೆ ನೀನಾಗಿ ಹರಿಮತಿ ಮತಾಂವರರಂಘ್ರಿ | ಹಿತಸೇವಕಳೆನಿಸಿಪಥವು ಸಾಗಲಿ ದೇಹ | ಯಾತ್ರೆಯ ಸುಮಾರ್ಗದಲಿಗತಿಗೋತ್ರ ನೀನೆಂಬ | ಮತ್ತಿಯಿತ್ತು ಪೊರೆಯೊ 2 ಪಾದ ಕಮಲನೇಮ ಸೇವೆಯನಿತ್ತು | ಉದ್ದರಿಸೊ ಹರಿಯೇ 3
--------------
ಗುರುಗೋವಿಂದವಿಠಲರು
ವೆಂಕಟ ಬಾರೋ ರಿಪುಸಂಕಟ ಬಾರೊ ಕಿಂಕರಿಗೊಲಿದ ನಿಶ್ಶಂಕ ಬಾರೋ ಪ ಪೊಂದೇರಿನೊಳಗೆ ಭೂಮಿ ಇಂದಿರೆಗೂಡಿ ಚೆಂದದಿಂದಲೊಪ್ಪುತಿಹ ಇಂದುವದÀನ ಮಂದರೋದ್ಧಾರನೆ ಮಹಾನಂದ ಮೂರುತಿ ಪಾದ ವಂದಿಪನೆಂದು 1 ಲೌಕೀಕ ವಿಲಕ್ಷಣ ಅನೇಕ ಏಕ ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ ಪ್ರಾಕೃತ ರಹಿತಗಾತ್ರ ಲೋಕಪಾವನ ಶೋಕ ಮೂಲ ನಾಶನ ವಿಶೋಕ ಜನಕ 2 ಅಂಗ ಅಂಗೀ ಭಾವದಿಂದ ಅಂಗದೊಳಿದ್ದು ಸಂಗಡ ತಿರುಗುವೊ ನೀಲಾಂಗ ನಿಸ್ಸಂಗ ಭೃಂಗ ಜಗದಂತೆ- ರಂಗ ರಂಗರಾಜ ಸುಖಸಂಗ ಅನಂಗ 3 ಆಪ್ತಕಾಮ ಅಮೃತಾಂಗ ಗುಪ್ತಮಹಿಮ ತಪ್ತಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ ತೃಪ್ತ ತೃಣ ಬೊಮ್ಮಾದಿ ನಿರ್ಲಿಪ್ತವಾಸ ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲ 4 ಅಗಣಿತ ಬಂಧು ಅಗನಾಗ ಧಾರಕನೆ ನಾಗ ಭಂಜನ ಆಗಸದಂಗಾಂಗುಷ್ಟದಿಂದ ಪೆತ್ತನೆ ಆಗಲೀಗಲೆನ್ನದಲೆ ಸಾಗಿ ಬೇಗದಿ5 ನಿರ್ದೋಷ ವಸ್ತು ನೀನೆಂದು ನಿರ್ಧಾರ ಮಾಡೆ ಪೊದ್ದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳು ಭದ್ರ ಫಲದಾಯಕ ಸಮುದ್ರಶಯನ ಮಧ್ಯಜೀವಿ ವಂದ್ಯ ಸುಪ್ರಸನ್ನ ಮೋಹನ್ನ 6 ಜೀವಾಭಿಮಾನಿ ಗಿರೀಶ ದೇವ ದೇವೇಶ ಜೀವರಾಶಿಗಳ ಸ್ವಾಭಾವ ಪ್ರೇರಕ ಜೀವನನಾಗಿ ನಮ್ಮ ಕಾವುತಲಿಪ್ಪ ರಾ- ಜೀವ ನಯನ ವಿಜಯ ವಿಠ್ಠಲ ಪೂರ್ಣ 7
--------------
ವಿಜಯದಾಸ
ವೆಂಕಟಪತೇಧೀರ | ಮಾಡೋಯನ್ನ ಸಂಕಟ ಪರಿಹಾರ || ಶಂಕರನ ವರ ಬಿಂಕರಕ್ಕಸಂ ಕಳೆದು ನಿ:ಶ್ಯಂಕನಾದ ಪ ನಿಜಾಂಕ ಗುಣಪೂರ್ಣಾಂಕ ನಿನ್ನಯ ಕಿಂಕರರ ಕಿಂಕರನು ನಾನು | ವರದ ಕೋಮಲ ಶುಭಾಂಗ| ಪಾವನಗಂಗ | ಬೆರಳಲಿಪಡೆದರಂಗ ಉರಗಾದ್ರಿ ಸ್ಥಿರನಿವಾಸ || ಶಿರೆಯೆರಗುತಿರುವರು ಮಹಿಮ ನಿನ್ನದು 1 ಅಂಡಜವಾಹನ ಧೋರೆ | ಪುಂಡಲೀಕವರದನೆ | ಗೋಪಾಲನೇ | ಪಾಂಡವರಕ್ಷಕನೆ | ಹಿಂಡು ದೈವರ ಗಂಡ | ವೀರ ಪ್ರಚಂಡ | ಜಗದುದ್ದಂಡ ಮಂಡಲಾಧಿಪ ದೇವ ದೇವ 2 ಪಾಲಸಾಗರ ಶಯನ | ಪಾವನ್ನ | ಪಾಲಿಸೋ ದಾಸರನ್ನ | ಜ್ವಾಲಾ ಹೆನ್ನೆವಿಠಲ | ಭಕ್ತವತ್ಸಲ | ಲಾಲಿತ ಗುಣಶೀಲ | ಪಾಲಿತಾಮರ ಲÉೂೀಲಗೋಪಿ ಬಾಲಾ ಲೀಲಾ ವಿಶಾಲನಾಯಕ | ಮಂಗಮನೋಹರ3
--------------
ಹೆನ್ನೆರಂಗದಾಸರು
ವೆಂಕಟರಮಣ ಮಾಂಪಾಹಿ ಸಂಕಟಹರಣ ಸರ್ವಲೋಕಕಾಧಾರ ಪ ಮತ್ಸ್ಯರೂಪವತಾಳಿ ವೇದಗಳ ರಕ್ಷಿಸಿದೆ ಮತ್ತೆ ಬೆಟ್ಟವ ಪೊತ್ತೆ ಕೂರ್ಮನಾಗಿ ಹೊತ್ತು ಭೂಮಿಯ ಪೊರೆದೆ ವರಾಹಾವತಾರದಲಿ ಬತ್ತಿ ಕಂಬದಿ ಬಂದೆ ನರಸಿಂಹನಾಗಿ ನೀ ಇತ್ತೆ ವರವನು ತುಳಿದು ಬಲಿಯು ನೀಡಲು ತಲೆಯ ವಟುರೂಪಿನಿಂದ ವೆಂಕಟರಮಣ ಮಾಂ ಪಾಹಿ 1 ಹೊತ್ತು ಪರಶುವ ಭುವಿಯ ಕ್ಷಾತ್ರಿಯರನೀ ಕೊಂದೆ ಮತ್ತೆ ರಾಮಾವತಾರದಲಿ ರಾವಣನ ಕೊಂದೆ ನಿತ್ತು ಕಾಪಾಡಿದೆಯೋ ಕೃಷ್ಣ ಪಾಂಡವರನ್ನು ಮತ್ತೆ ಬುದ್ದನರೂಪ ತಾಳಿ ಮೆರೆದೆ ತಾಳಿ ದರುಳ ದುರ್ಜನರನ್ನು ಮೆಟ್ಟಿ ಕುಟ್ಟಿದೆಯೋ ವೆಂಕಟರಮಣ ಮಾಂ ಪಾಹಿ 2 ಬೇಡಿದವರ ಇಷ್ಟಾರ್ಥಗಳನೀವ ಕಾಡಿದ ರಕ್ಕಸರ ಜೀವ ಕೊಳುವ ನೋಡಿ ದಯಮಾಡಿ ನೀಸುಜನರನು ಕಾವ ಆಡಿ ಅಡಗಿಸೋ ನೀನೇ ಮನದ ನೋವ ಗಾಢ ರಕ್ಷಿಸು ಕಡು ಬಾಡಿದೆ ಭಯದಲ್ಲಿ ವೆಂಕಟರಮಣ ಮಾಂ ಪಾಹಿ 3 ವರ ಅಜಾಮಿಳಗೆ ವರವಿತ್ತು ಸಲಹಿದೆಯೋ ಕರಿ ರಾಜ ಬರಲಿದಡೆ ಬಂದು ಕಾಯ್ದೆ ದುರುಳ ಕಾಳಿಂಗನನು ಮೆಟ್ಟಿಕುಣಿದಾಡಿದೆಯೋ ಧರಿಸಿ ಗೋವರ್ಧನವ ಕಾಯ್ದೆಗೋವಳರನ್ನು ವೆಂಕಟರಮಣ ಮಾಂ ಪಾಹಿ 4 ಇಳೆಯೊಳಗೆ ಮೂಡಲಗಿರಿವಾಸನಾಗಿ ನೆಲೆಯ ನರಿದು ಭಜಿಪರ ಪಾಪನಾಶ ಸೂರ್ಯ ಕೋಟಿ ಪ್ರಕಾಶ ಕಲಿಯುಗದೊಳು ನಿನ್ನ ಮಹಿಮೆ ವಿಶೇಷ ಸಲಹೋ ಪಾತಳ ಸೇವೆಯ ಗೆಣಸಿನ ಕುಣಿ ವೆಂಕಟರಮಣ ಮಾಂ ಪಾಹಿ 5
--------------
ಕವಿ ಪರಮದೇವದಾಸರು
ವೆಂಕಟರಮಣ ವೇದಾಂತಕೋಟಿವಂದ್ಯ ಪತಿ ಏಳೆನ್ನುತ ಪ. ಪಂಕಜಮುಖಿ ಪದ್ಮಾವತಿ ಸರ್ವಾ- ಲಂಕಾರದ ನಿದ್ದೆ ಸಾಕೆನ್ನುತ ಅ.ಪ. ಮಂಗಲಚರಿತ ಭುಜಂಗಶಯನ ನಿ- ನ್ನಂಗದಾಯಾಸವ ಪರಿಹರಿಸಿ ಪೊಂಗಲಶದಿ ಉಷ್ಣೋದಕ ಗಂಧ ತೈಲಾ- ಮೂರ್ತಿ 1 ದಧಿಯ ಪೃಥುಕದಲಿ ಹದಗೈದು ಮಧುರದಿ ಮಧುಸೂದನ ನಿನ್ನ ಪದದ ಮುಂದೆ ಸದ್ ಹೃದಯರು ತಂದಿಹರು ಸಮರ್ಪಿಸೆ ಮದಜನಕ ನಿನ್ನ ಓಲೈಸುವರಯ್ಯ 2 ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿ ಚೆನ್ನಾದ ಗೋಕ್ಷೀರವನ್ನು ತಂದು ಉನ್ನತ ಮಹಿಮನೆ ಉಣ್ಣೆಂದು ಲಲಿತ ಸು- ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ 3 ವಿಧವಿಧ ಷಡುರಸಭರಿತ ಮನೋಹರ ಸುಧೆಗೆಯಿಮ್ಮಡಿ ಮಧುರತ್ವದಲಿ ಮೃದುವಾದ ಉದ್ದಿನ ದೋಸೆಯ ಸವಿಯೆಂದು ಪದುಮನಾಭನೆ ನಿನ್ನ ಹಾರೈಸುವರಯ್ಯ 4 ಕದಳಿ ಉತ್ತಮ ಫಲಗಳ ತಂದು ರಕ್ಕಸವೈರಿಯೆ ನಿನ್ನ ಮುಂದೆ ಚೊಕ್ಕಟವಾಗಿಡೆ ಲೆಕ್ಕ ಲೇಖನಗಳ ವಾಸುದೇವ ನೀನೇಳಯ್ಯ5 ಸಾರಹೃದಯ ಗೌಡಸಾರಸ್ವತ ವಿಪ್ರ ಭೂರಿ ವೇದಾದಿ ಮಂತ್ರದ ಘೋಷದಿ ಶ್ರೀರಮಣನೆ ದಯೆದೋರೆಂದು ಕರ್ಪೂರ- ದಾರತಿಯನು ಪಿಡಿದಿಹರು ಶ್ರೀಹರಿಯೇ 6 ಭಾಗವತರು ಬಂದು ಬಾಗಿಲೊಳಗೆ ನಿಂದು ಭೋಗಿಶಯನ ಶರಣಾದೆನೆಂದು ಜಾಗರದಲಿ ಮದ್ದಳ ತಾಳರಭಸದಿ ರೇಗುಪ್ತಿರಾಗ ಸಂಗೀತ ಪಾಡುವರಯ್ಯ 7 ಕರುಣಾಸಾಗರ ನಿನ್ನ ಚರಣದ ಸೇವೆಯ ಕರುಣಿಸೆಂದೆನುತಾಶ್ರಿತ ಜನರು ಕರವ ಮುಗಿದು ಕಮಲಾಕ್ಷ ನಿನ್ನಯ ಪಾದ- ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ 8 ನಾನಾ ಜನರು ಬಂದು ಕಾಣಿಕೆ ಕಪ್ಪವ ಶ್ರೀನಿವಾಸನೆ ನಿನ್ನ ಪದಕೆ ಒಪ್ಪಿ ದಾನವಾಂತಕ ನಿನ್ನ ದಯವೊಂದೆ ಸಾಕೆಂದು ಧ್ಯಾನಮಾಳ್ಪರು ದಯಮಾಡೆಂದು ಹರಿಯೇ 9 ನೀನೆ ಗತಿಯೆಂದು ನಿನ್ನ ನಂಬಿಹರು ಲ- ಕ್ಷ್ಮೀನಾರಾಯಣ ಪುರುಷೋತ್ತಮನೆ ಮಾನದಿ ಭಕ್ತರ ಸಲಹಯ್ಯ ಸಂತತ ಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ 10
--------------
ತುಪಾಕಿ ವೆಂಕಟರಮಣಾಚಾರ್ಯ
ವೆಂಕಟರಮಣ ಶ್ರೀ ವೆಂಕಟರಮಣ ಶ್ರೀವೆಂಕಟರಮಣನೇ ||ಅ|| ಪಂಕಜೋದ್ಭವ ಪಿತ ಪಿಳ್ಳಂಕೇರಿಯ ವಾಸವೆಂಕಟರಮಣನೇ ಅ.ಪ. ಭದ್ರ ಮೂರುತಿ ಸಣ್ಣ | ಆದ್ರಿಯಾಶ್ರಯಿಸಿ ನಿಂತಿದ್ದಿ ಕಾರಣವೇನೋ |ಶುದ್ಧ ಜನರು ಮಾಳ್ಪ | ಶುದ್ಧ ಸೇವೆಯ ಗೊಂಡುದ್ಧರಿಸಲು ಯೋನೋ 1 ನೀರೊಳು ಮುಳು ಮುಳಿಗಿ | ಭಾರಿ ಗಿರಿಯ ಪೊತ್ತುಕೋರೆಹಲ್ಲನು ತೋರೇನೋ |ಧೀರ ಕಂದನ ಕಾಯ್ದ | ನಾರಸಿಂಹನೆ ಬಲಿಯದ್ವಾರ ಕಾಯ್ದಿಹದೇನೋ 2 ನೃಪರ ಸವರಿ | ನಾರಿ ಚೋರನ ಕೊಂದುಚಾರ ಗೋಪೆರ ಕೂಡೇನೊ |ಸಾರಿ ತ್ರಿಪ್ಪುರವನ | ನಾರೇರ ವ್ರತ ಕೆಡಿಸಿವೀರ ರಾವುತನಾದದ್ದೇನೋ 3 ಪಂಚ ರೂಪದಿ ಪ್ರ | ಪಂಚವ ವ್ಯಾಪಿಸಿಪಂಚಾತ್ಮಕ ನಾದದ್ದೇನೋ |ಅಂಚೆ ಗಮನನಾದಿ | ಪಂಚ ಪಂಚರಲ್ಲಿಸಂಚು ಗೊಳಿಪುದೇನೋ | 4 ಇಂದ್ರಾ ವರಜ ದೇ | ವೇಂದ್ರ ಗಭೀಷ್ಟದಬಂದಲ್ಲಿ ನಿಂದಿರ್ಪುದೇನೋಇಂದು ಕುಲಜ ರಾ | ಜೇಂದ್ರ ಜನಮೇಜಯಗಂದು ಒಲಿದು ನಿಂತಿಲ್ಲೇನೋ 5 ತೊಂಡ ಮಾನಾನಂದಅಂಡಜವಾಹ ವಿಖ್ಯಾತಾ6 ಭಾವ ಶುದ್ಧೀಲಿ ಸ್ತವನ | ದೇವ ಶರ್ಮನು ಮಾಡೆಭಾವಕ್ಕೊಲಿದು ಮೋಕ್ಷವಿತ್ಯೋ |ಗೋವ ಕಾವ ಗುರು | ಗೋವಿಂದ ವಿಠಲ ಭಕ್ತಿಭಾವ ನಿನ್ನಯ ಪದದಲ್ಲಿಯೋ7
--------------
ಗುರುಗೋವಿಂದವಿಠಲರು
ವೆಂಕಟರಮಣನೆ ಸಂಕಟಹರಣನೆ ಶಂಖ ಚಕ್ರ ಪೀತಾಂಬರನೆ ಪ ಪಂಕಜನಾಭನೆ ಪರಮಗೋವಿಂದನೆ ಲಂಕೆ ವಿಭೀಷಣ ನಿಗಿತ್ತವನೇ ಅ.ಪ ಹಿಂದನ ಕರ್ಮದಿನೊಂದೆನು ನಿನ್ನಯ ಕಂದನಮೊರೆಯನು ಲಾಲಿಪುದೂ ಬಂದಿಸಿ ಭವಗಳ ಹೊಂದಿಸೊ ನಿಜಪುರ ಚಂದದೆ ಕ್ಷಿತಿಯೊಳ್ ಪಾಲಿಪುದೂ 1 ಘಾಸಿ ಬಿಡಿಸಿ ನಿಜದಾಸನ ಮಾಡೆಲೊ ಈಶನೆ ಕೇಶವ ಮೂರಿತಯೇ ಆಸೆಯ ತೀರಿಸಬೇಕೈಯಾ ಭವ ನಾಶನೆ ಪಾರ್ಥವ ಸಾರಥಿಯೆ 2 ಪರಿಪರಿ ಭವಗಳ ಹರಿಯುವನೆನ್ನುತಾ ಕರದೊಳು ಕಂಕಣ ಕಟ್ಟಿರುವೇ ಮೊರೆ ಬಿದ್ದೆನು ಶ್ರೀ ತುಲಸೀರಾಮನ ಸ್ಮರಣೆಯ ಹೃದಯದೊಳಿಟ್ಟರುವೆ 3
--------------
ಚನ್ನಪಟ್ಟಣದ ಅಹೋಬಲದಾಸರು
ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ | ಕಿಂಕರರಿಗೊಲಿದ ನಿಃಶಂಕ ಬಾರೊ ಪ ಇಂದಿರೆ ಕೂಡ | ಚಂದದಿಂದಲೊಪ್ಪುತಿಹ ಇಂದುವದನಾ || ಮಂದರೋದ್ಧಾರನೆ ಮಹನಂದ ಮೂರುತಿ | ವೃಂದಾರಕ ವಂದ್ಯಪಾಲ ವಂದಿಪೆ ನಿಂದು 1 ಲೌಕಿಕ ವಿಲಕ್ಷಣ ಅನೇಕ ಏಕಾ | ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ || ಪ್ರಾಕೃತ ರಹಿತಗಾತ್ರ ಲೋಕಪಾವನ | ಶೋಕ ಮೂಲನಾಶನ ಅಶೋಕ ಜನಕಾ 2 ಮಣಿ ಅಗಣಿತ ಬಂಧು | ಆಗನಾಗಧಾರಕನೆ ನಾಗ ಭಂಜನಾ || ಆಕಾಶ ಗಂಗೆಯ ಅಂಗುಷ್ಟದಿ ಪೆತ್ತನೆ | ಆಗಲೀಗಲೆನ್ನದಲೆ ಸಾಗಿ ವೇಗದಿ 3 ಅಂಗ ಅಂಗಿ ಭಾವದಿಂದ ಅಂಗದೊಳಿದ್ದು | ಸಂಗಡ ತಿರುಗುವ ನೀಲಾಂಗ ನಿಃಸಂಗಾ || ಭೃಂಗ ಜಗದಂತ | ರಂಗ ರಂಗರಾಜ ಸುಖಸಂಗ ನಿಸ್ಸಂಗಾ 4 ಆಪ್ತಕಾಮಿ ಅಮೃತಾಂಗ ಗುಪ್ತ ಮಹಿಮ | ತಪ್ತ ಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ || ತೃಪ್ತ ತೃಣ ಬೊಮ್ಮದಿ ನಿರ್ಲಿಪ್ತ ವ್ಯಾಪ್ತಾ | ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲಾ 5 ನಿರ್ದೋಷ ವಸ್ತುವಿನಿಂದ ನಿರ್ಧರ ಮಾಡೆ | ಪೊಂದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳೂ || ಭದ್ರ ಫಲದಾಯಕ ಸಮುದ್ರಶಯನಾ | ಮಧ್ಯಜೀವಿ ವಂದ್ಯ ಸುಪ್ರಸಿದ್ಧ ಮೋಹನ 6 ಜೀವಾಭಿಮಾನಿ ಗಿರೀಶ ದೇವ ದೇವೇಶಾ | ಜೀವ ರಾಶಿಗಳ ಸ್ವಭಾವ ಪ್ರೇರಕಾ || ಜೀವನವಾಗಿ ನಮ್ಮನು ಕಾವುತಿಪ್ಪ | ರಾಜೀವ ನಯನ ವಿಜಯವಿಠ್ಠಲ ಪೂರ್ಣಾ 7
--------------
ವಿಜಯದಾಸ