ಒಟ್ಟು 3814 ಕಡೆಗಳಲ್ಲಿ , 122 ದಾಸರು , 2565 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ ನೀನು ಎನ್ನಾ ಮೊರೆಯ ಲಾಲಿಸೆಂದೆನೂ ಪಥsÀರವಲ್ಲ ನಿನಗೇನೂ ಅ.ಪಪರಮಭಕುತಿಯಿಂದಾ ನಿನ್ನಪರಿಯ ವಾಕ್ಯವಕೇಳಿನಾನೂಜರಿದುಬಿಟ್ಟರೆ ನೀನೂಪರಮಕೋಪವಮಾಡಿಧರಣೀಶರೊಡನೆ ಕಾದಾಡಿ ಸಾ -ವರತುರಗವನೇರೋಡೀ 1ನಿನ್ನಾ ಬೇಡಿದಾರೆ ಅ -ದನ್ನು ನೀಡದಾಲೆ ಆ -ಬನ್ನಬಡಿಸುವರೆ ಎಂದಾಎನ್ನ ನುಡಿಯಾಕೇಳಿಚಿನ್ನಕಶಿಪುನ ಕೊಂದು ಭೂ -ವನ್ನೇ ದಾನವ ತಂದು ತಾ -ಯನ್ನೇ ನೀನೇ ಕೊಂದು ಅ -ರಣ್ಯದೊಳು ಬಂದೂ ಗೋ -ವನ್ನೆ ಕಾವುತ ನಿಂದೂಪರ-ಘನ್ನ ತುರಗೇರುವೆನೆಂದೂ 2ಪಾತಕಕಳೆಯೋ ಇನ್ನಾಪಾತಕಕಳೆÀಯದಿರುವರೇನೋಯಾತರ ಮಾತೆಂದು ನುಡಿಯಲದು -ಪಾಥಾಚರನು ತಾನೂ ಅದು -ಶ್ವೇತವರಾಹನುಅತ್ತನರಮೃಗರೂಪಾನುತಾತನಾಜÕವ ಕೇಳ್ಯಾನುಪರ-ಧೂತಾನೆನಸಿದಾನು ಅವ -ಶ್ವೆತಾಶ್ವಗ ಗುರುಜಗನ್ನಾಥವಿಠಲ ನೀನೂ 3
--------------
ಗುರುಜಗನ್ನಾಥದಾಸರು
ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ |ದುರಿತಪರ್ವತ ಖಂಡಿಪುದು ವಜ್ರದಂತೆ ಪ.ಮೇರು ಸುವರ್ಣದಾನವ ಮಾಡಲು ಪುಣ್ಯ |ನೂರು ಕನ್ಯಾದಾನವ ಮಾಡಲು ||ಧಾರಿಣಿಯೆಲ್ಲವ ಧಾರೆಯ ನೆರೆಯಲು ||ನಾರಾಯಣ ಸ್ಮರಣೆಗೆ ಸರಿಬಹುದೆ ? 1ಹತ್ತುಲಕ್ಷ ಗೋದಾನ ಮಾಡಲು ಪುಣ್ಯ - |ವ್ರತಗಳಅನುದಿನ ಆಚರಿಸಲು ||ಶತಕೋಟಿ ಯಜÕನ ಮಾಡಲು ಲಕ್ಷ್ಮೀ - |ಪತಿನಾಮ ಸ್ಮರಣೆಗೆ ಸರಿಯೆನ್ನಬಹುದೆ 2ಗಂಗೆ ಕಾಳಿಂದಿ ಗೋದಾವರಿ ಕಾವೇರಿ |ತುಂಗಭದ್ರೆಯಲಿ ಸ್ನಾನವ ಮಾಡೆ ||ಮಂಗಳಮೂರುತಿ ಪುರಂದರವಿಠಲ |ರಂಗನ ಸ್ಮರಣೆಗೆ ಸರಿಯೆನ್ನಬಹುದೆ ? 3
--------------
ಪುರಂದರದಾಸರು
ಹರಿಹರಿಧ್ಯಾನಿಸೊ ಲಕ್ಷ್ಮೀವರನ ಧ್ಯಾನಿಸೊಪಉರಗಶಯನನಾಗಿಘೋರಶರಧಿಯನ್ನು ಮಧಿಸಿರುವಸುರರಿಗಮೃತವೆರೆದ ನಮ್ಮ ಗರುಡಗಮನ ತಾನುಅ.ಪದಂಡಧರಗೆ ಸಿಲುಕಿ ನರಕ ಕೊಂಡದಲ್ಲಿ ಮುಳುಗಲ್ಯಾಕೆಪುಂಡರೀಕನಯನ ಪಾಂಡುರಂಗನೆನ್ನದೇಶುಂಡಲಾಪುರಾದಿ ಪಾಲ ಪಾಂಡುಪುತ್ರ ಧರ್ಮರಾಯಕಂಡು ನಮಿಸಿ ಪೂಜೆಗೈದ ಅಂಡಜವಾಹನನೆಂದು1ಬಾಯಬಡಿಕನಾಗಿ ಸರ್ವ ನ್ಯಾಯ ತಪ್ಪಿ ಮಾತನಾಡಿಕಾಯಬೆಳೆಸಿ ತಿರುಗಿ ಬಂದೆ ಸಾಯಲಾ ಕಥೆವಾಯುತನಯ ವಂದ್ಯಚರಣಕಾಯಜಛೆಂದೆರಗಿದವಗೆಆಯುಧವರೇಣ್ಯ ಸರ್ವಸಹಾಯವ ಮಾಡುವಾ2ಕಂದ ಅಬಲ ವೃದ್ಧರೆಂದು ಬಂಧು ಜನರು ಭಾಗ ಕಿರಿದುಕಂದುಕುಂದುರೋಗಿ ಸ್ತ್ರೀಯರೆಂದು ಭೇದವೊಇಂದಿರೇಶಗಿಲ್ಲ ನರರು ಒಂದೇ ಮನದಿ ಧ್ಯಾನಿಸಿದರೆಸುಂದರಾಂಗಮೂರ್ತಿಗೋವಿಂದ ಪೊರೆಯುವಾ3
--------------
ಗೋವಿಂದದಾಸ
ಹಲವನು ಯೋಚಿಸಲೇನು ಫಲ ಬರಿ |ಜಲವನು ಮಥಿಸಲಿನ್ನೇನು ಫಲ ||ಕುಲಜನು ಶೂದ್ರನ ಲಲನೆಯ ಕೂಡುತ |ಸಲಿಲದಿ ಮುಳುಗಿದರೇನು ಫಲ ||ಜಲಜಾಕ್ಷನ ಪದದೊಲುಮೆಯಿಲ್ಲದೆನರ|ಬಲಯುತ ತಾನೆನಲೇನು ಫಲ1ಪರಸತಿ ಪರಧನದಾಸೆಯೊಳಿರ್ಪನು |ಸುರನದಿಮುಳುಗಿದರೇನು ಫಲ ||ಪರಮಾತ್ಮನ ತಮ್ಮ ಹೃದಯದಿ ಕಾಣದೇ |ಧರೆಯಲ್ಲರಸಿದರೇನು ಫಲ2ಕಾಣದೆ ಕುಣಿಯೊಳು ಬಿದ್ದಾನೆಯು ಬಲು |ತ್ರಾಣಿಯಂತಾದರಿನ್ನೇನು ಫಲ ||ಕ್ಷೋಣಿಯೊಳಗೆ ಹರಿದಾಸರ ಜರೆಯುತ |ಜ್ಞಾನಿಯು ತಾನೆನಲೇನು ಫಲ3ಧೂರ್ತತನದಿ ಹಣ ಗಳಿಸುತ ಲೋಭದಿಸ್ವಾರ್ಥವೆಂದೆನಿಸಿದರೇನು ಫಲ ||ಪಾತ್ರಾಪಾತ್ರವನೆಣಿಸದೆ ದಾನವ |ಅರ್ತಿಯೊಳೆಸಗಿದರೇನು ಫಲ4ಪತಿಯನು ವಂಚಿಸಿರೂಪಮಾರುವಸತಿ|ವ್ರತಗಳ ಮಾಡಿದರೇನು ಫಲ ||ರತಿಪತಿಪಿತಗೋವಿಂದನ ನೆನೆಯದೆ |ಗತಿಯನುಬಯಸಿದರೇನು ಫಲ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಹಲವು ಜನ್ಮದಲ್ಲಿ ಹರಿಯ ನೆನೆಯಲಿಲ್ಲಕಲಿಗಳು ಆಗಿ ನೀ ಕೆಡಬೇಡ ಮನುಜ 1ನೀಚಜಾತಿಯಲಿ ಪುಟ್ಟಿ ಅಧಮನಾಗಿರಬೇಡಭಜಿಸು ಭಕ್ತಿಗಳಿಂದ ಮಹಾಮಹಿಮ ಕೃಷ್ಣರ 2ನಂದ ಭದ್ರಾ ಜಯರಿಕ್ತ ಪೂರ್ಣ ವೆಂಬೊಚೆಂದುಳ್ಳ ತಿಥಿಯಲ್ಲಿಘೃತನವನೀತದಧಿಕ್ಷೀರ3ನಂದದಿ ಸಕ್ಕರೆಘೃತನವನೀತದಧಿಕ್ಷೀರದಿಂದಲಿ ಅರ್ಚಿಸಿ ಸುಕೃತವಪಡಿ4ಶಯನಾದಿಗಳಿಂದ ಶಾಖಾದಿ ಫಲವ್ರತಭಯದಿಂದ ಮಾಡೋರೆ ಸತತ 5ಅದರಿಂದ ಚಾತುರ್ಮಾಸ ನಾಲ್ಕು ತಿಂಗಳುಉಳಿದಿನ ಬಂತಲ್ಲ ಭವನ ಪಾವಕ(?) ಭೀತಿ 6ಆಷಾಢÀ ಶುದ್ಧ ಏಕಾದಶಿ ಮೊದಲಾಗಿಕಾರ್ತಿಕ ಶುದ್ಧ ದ್ವಾದಶಿ ಪರಿಯಂತ್ರ 7ಶ್ರೀಕಾಂತ ಯೋಗನಿದ್ರೆಲಿ ತಾ ಪವಳಿಸಿಈಕ್ಷಿಸುತಿರುವೋನೆ ಭಕ್ತರ 8ಹರಿಮಲಗ್ಯಾನೆ ಎಂದು ಅಜ್ಞಾನದಲಿ ನೀವ್ ಕೆಡಬೇಡಿಪರಿಪರಿಕಲ್ಪೋಕ್ತದ ಪ್ರಕಾರದ ವ್ರತಗಳ ಮಾಡಿ9ಸ್ನಾನ ಸಂಧ್ಯಾವಂದನೆಯ ಕಾಲಕಾಲದಲಿ ಮಾಡಿಮನದಲ್ಲಿ ವಾಮನನ ನೆನದು ಸುಕೃತವಪಡಿ10ಅತಿಥಿಗಳ ಮನ್ನಿಸಿ ಅನಾಚಾರಗಳ ಬಿಡಿಸತಿಸುತರನೆ ಒಡಗೂಡಿ ವಿಹಿತವ್ರತಗಳ ಮಾಡಿ 11ಆಷಾಡಮಾಸದಲಿ ಶಾಕ ಹದ್ದಿನ ಮಾಂಸಭೂಷಣ ಶ್ರಾವಣದಲಿದಧಿನಾಯಿಶ್ಲೇಷ್ಮ12ಭಾದ್ರಪದ ಮಾಸದಲಿ ಪಾಲು ಸುರಾಪಾನ ಆಶ್ವೀಜಕಾರ್ತೀಕ ಮಾಸದಲಿ ಚಿತ್ರಕ್ರಿಮಿರಾಶಿದ್ವಿದಳಬಹುಬೀಜ13ಮಾಸನಿಷಿದ್ಧ ವಸ್ತುವನು ಕುದಿಸಿ ಬೇಯಿಸಿದರೆಅಸ್ತ್ರವನು ದೇವರ ಅಂಗದೊಳಿಟ್ಟಂತೆ 14ಮಾಸನಿಷಿದ್ಧ ವಸ್ತುವನು ದೇವರಿಗೆ ಸಮರ್ಪಿಸಿದರೆಬಹುಕಲ್ಪ ನರಕದೊಳದ್ದುವಿರಿ ಪಿತೃಗಳ 15ಧರ್ಮಜರು ನಾರದರು ಸ್ತುತಿ ಮಾಡುತಿರುವೋರುಧರ್ಮರಾದರ ಸಂವಾದ ಚಾತುರ್ಮಾಸದ ಸಂಕಲ್ಪ 16ಈ ಕಥೆ ವ್ರತವನೆಲ್ಲ ಅರಿತು ಯೋಚಿಸಿದವರಿಗೆಬೇಕೆಂಬೊ ಮುಕ್ತಿಯನು ಕೊಡುವ ಹಯವದನ 17
--------------
ವಾದಿರಾಜ
ಹಲವು ಬ್ರಾಹ್ಮಣ ಮಂದಿಗಳಿಗಶನವನಿಕ್ಕಿಸಲಹುವೆಯನುದಿನ ತಳೆದು ಖ್ಯಾತಿಯನು1ನಳಿನನೇತ್ರನೆ ನಿನ್ನ ಪಾದದರ್ಶನದಿಂದಹಲವು ಜನ್ಮದ ದೋಷ ನಾಶವಾಯ್ತದೆಂದು2ಅನ್ನಬ್ರಹ್ಮನುಉಡುಪಿಕೃಷ್ಣನೆಂದೆನಿಸಿದೆಸ್ವರ್ಣಬ್ರಹ್ಮನು ತಿರುಪತಿ ಶ್ರೀನಿವಾಸ3ನಾದಬ್ರಹ್ಮನು ಪಂಢರೇಶ ವಿಠಲರಾಯ-ನೆನ್ನಿಸಿ ಮೆರೆªÀಗೋವಿಂದದಾಸರ ಪ್ರೀತ್ಯ4xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಹಾಳು ಮಾಡಿದ ಹನುಮ ಸಾಲು ವನಗಳ |ಧಾಳಿ ಕೊಟ್ಟನಿತರ ಜನಕೆ |ಕೇಳಲಿದನು ದನುಜನೆಂದು ಪಚರರು ಪೇಳಲವನು ಖತಿಯ |ಲಿರುವ ದಳವ ಕಳುಹಲದನು ||ತರಿದ ಭಯವಬಡದೆ ಮುಂದಕೆ |ಚರಣವಿಡದೆ ಬಹು ಸಮರ್ಥ 1ಹರಿಜಿತ ಬಲು ಭರದಿ ಬರಲು |ಥರವು ಸಿಗುವದಿವನ ವಶಕೆ ||ಮೂರೇಳು ಮುಖನ ಕಾಂಬುವೆನೆನುತ |ಕರವಮರೆದ ಮರುತ ಕುವರ 2ದಾನವ ಪತಿಯಲ್ಲಿ ಪೋಗಿ |ಏನು ಯೋಚನೆಯನ್ನು ಮಾಡದೆ ||ತಾನು ಗಂಭೀರ ಸ್ವರದಿ ಪೇಳ್ದ |ಪ್ರಾಣೇಶ ವಿಠ್ಠಲನ ಮಹಾತ್ಮೆಯನ್ನು 3
--------------
ಪ್ರಾಣೇಶದಾಸರು
ಹುಚ್ಚು ಮಾಡಿದ ಎನ್ನ ಗುರುವುಈ ಹುಚ್ಚನರಿವೊಡೆ ಸಚ್ಚರಿತರಿಗರಿವುಪಆಶ್ರಮ ಧರ್ಮವು ಹೋಯ್ತುನಿರಾಶ್ರಮವೆಂಬುದು ನಿಜವಾಯ್ತುಕುಶ್ರಮಗಳು ನಾಶವಾಯ್ತುಜೀವಭ್ರಮೆಯೆಂಬುದು ಖಿಲವಾಯ್ತು1ಸ್ನಾನವು ಮನದಿಚ್ಛೆಯಾಯ್ತು ಸಂಧ್ಯಾದಿಜಪವೆಲ್ಲ ಮರತೇಹೋಯ್ತುಮೌನವೆಂಬುದು ಬಹಳವಾಯ್ತು ಗುರುತಾನೆಎಂದೆಂಬ ಧ್ಯಾನವುಪೂರ್ಣವಾಯ್ತು2ಕುಲಗಳೆಂಬುವು ಕಾಣದಾಯ್ತುಕುಲಛಲಗಳು ಮರತೇಹೋಯ್ತುಹೊಲೆ ಶುದ್ಧಗಳು ಬರಡುನುಡಿಯಾಯ್ತುನಿಶ್ಚಲನಿಜಾನಂದವೆಂಬುದೇ ಸತ್ಯವಾಯ್ತು3ಭೇದಾಭೇದವು ಮಾಯವಾಯ್ತುಹಾಳುವಾದಗಳು ಕೇಳದಂತಾಯ್ತುಸಾಧುಸಂಗವ ಬಿಡದಂತಾಯ್ತುಸುವಾದವಮಾಡಿ ಸುಖಿಸುವಂತಾಯ್ತು4ದಯೆ ನಿರ್ದಯೆಗಳ ತೊರೆದಾಯ್ತುಭಯ ನಿರ್ಭಯಗಳು ಅದೃಶ್ಯವಾಯ್ತುಜಯಾಪಜಯಗಳು ಕಾಣದಾಯ್ತು ಸ್ವಕ್ಷೇಮಪರಕ್ಷೇಮಗಳ ವಿಚಾರ ಹೋಯ್ತು5ಕೋಪ ತಾಪವು ಶಮವಾಯ್ತುತಾಪತ್ರಯದಬಿತ್ತು ಮೊಳೆಯದಾಯ್ತುಯೋಗ ವಿದ್ಯೆಯ ಹರಿತವಾಯ್ತುನಿರ್ವಾಣವಾಗಿ ಎಲ್ಲ ಇಂತಾಯ್ತು6ಇಂತಹ ಹುಚ್ಚನು ಎನಗೆ ಕವಿಯಿಸಿನಿರಂತರ ಚಿಂತೆಯ ನೆನ್ನ ಪಾಲಿಗಿರಿಸಿಅಂತರಂಗದಿ ತಾನೆ ನೆಲೆಸಿ ಚಿಂತಾಯಕಚಿದಾನಂದ ತಾ ಬೆರೆಸಿ7
--------------
ಚಿದಾನಂದ ಅವಧೂತರು
ಹೆಂಡತಿ ಎಂಬ ದೇವರನು ನಂಬಿಹನಣ್ಣಹೆಂಡತಿಯೆ ದೇವರೆಂದು ಕೆಡುತಿಹನಣ್ಣಪತಲೆಗೆ ತಾನೆರೆಯುವುದೆ ಮಂಗಲ ಸ್ನಾನವಣ್ಣಬಲು ವಸ್ತ್ರವುಡಿಸುವುದೆ ಅಭಿವಸ್ತ್ರವಣ್ಣಎಲೆಗೊಪ್ಪು ಮೊದಲಾಗಿಡುವುದೇ ಆಭರಣವಣ್ಣಹಲವು ಪರಿಮಳ ಲೇಪನವೇ ಗಂಧವಣ್ಣ1ನಾನಾ ದಂಡೆಯ ಹಾರವ ಮುಡಿವುದೆ ಪುಷ್ಪವಣ್ಣನಾನಾ ಬಹುಮಾನ ಮಾಡುವುದೆ ಧೂಪವಣ್ಣನಾನಾಪರಿಉಣಿಸುವುದೆ ನೈವೇದ್ಯವಣ್ಣನಾನಾ ಸಂತಸಪಡಿಸುವುದೆ ದೀಪವಣ್ಣ2ನೆನೆದೂಳಿಗ ಮಾಡುವುದೆ ಪ್ರದಕ್ಷಿಣವಣ್ಣಮುನಿಸುವಳ ತಿಳಿಸುವುದೆ ಸಾಷ್ಟಾಂಗವಣ್ಣಇನಿತು ಪೂಜೆಯ ಮಾಡಿ ತಿರುಗೊಂದು ಭವವಣ್ಣಚಿನುಮಯ ಚಿದಾನಂದ ನಿನಗೆ ದೊರೆಯನಣ್ಣ3
--------------
ಚಿದಾನಂದ ಅವಧೂತರು
ಹೆಣಗಿದರಾಗದು ಒಣತರ್ಕದಲಿದಣಿದರೆ ಕೂಡದು ಭಕುತಿವನಜಾಕ್ಷನ ಕೃಪೆ ಮನಸ್ಸಾಕ್ಷ್ಯಾದರೆತನ ತಾನಾಹದು ಮುಕುತಿ ಪ.ಸೂಕ್ಷ್ಷ್ಮತತ್ವದಿ ದಕ್ಷನೆನಿಸದೆದೀಕ್ಷಿತ ನಾಮಿದ್ದೇನುಅಕ್ಷರಬಲದಲಿ ಲಕ್ಷವು ವೃಥಾಗುರುಶಿಕ್ಷಿಲ್ಲದ ಜನುಮೇನುಭಿಕ್ಷುಕ ಧಾನ್ಯದ ಲಕ್ಷ್ಷ್ಯದಲಿ ಪದ್ಮಾಕ್ಷನ ಪೊಗಳಿದರೇನುಕುಕ್ಷಿಯ ಲಾಭವುಅಕ್ಷಯತೋಷದಮೋಕ್ಷೋಪಾಯವದೇನು 1ದ್ರವ್ಯಾದಿವ್ರಯ ಹವ್ಯಾದಿಕ್ರಯಅವ್ಯಯಜೀವ ಸ್ವಭಾವಾಖ್ಯಕಾವ್ಯರಚನೆ ಶಬ್ದ ವ್ಯಾಕರಣದಹವ್ಯಾಸವು ಇಹ ಸೌಖ್ಯಅವ್ಯಾಕೃತ ನಾಮಾವ್ಯವಹಾರಿಲ್ಲದನವ್ಯ ಕಥಾಜನಸಖ್ಯದಿವ್ಯಮೂರುತಿ ವೇದವ್ಯಾಸಜಭವಸೇವ್ಯನ ನಿಷ್ಠೆಯೆ ಮುಖ್ಯ 2ಕಡು ಆದರದೊಳು ಕಡಲಳಿಯನ ಪದವಿಡಿಯದವನ ಶ್ರುತಿಶಾಸ್ತ್ರನಡುಹೊಳೆ ದಾಟುತ ತಡಿಯಲಿ ನಾವೆಯುಬುಡಮೇಲಾಯಿತು ವ್ಯರ್ಥದೃಢ ಪ್ರಸನ್ವೆಂಕಟ ಒಡೆಯನಾಚ್ಛಿನ್ನ ದಯಪಡೆದನುಗುರುಸುಖತೀರ್ಥನುಡಿಗಳ ಮಾಲೆಯ ತುಡುಗರ ತಮಸಕೆಬಡಿದಟ್ಟುವನು ಸಮರ್ಥ 3
--------------
ಪ್ರಸನ್ನವೆಂಕಟದಾಸರು
ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನನಾಗಶಯನ ನಾರದವಂದಿತನೆ ದೇವಾ ಪಮಂಗಳಾಭಿಷೇಕಕೆಉದಕತರುವೆನೆನೆಗಂಗೆಯ ಅಂಗುಟದಿ ಪಡೆದಿಹೆಯೊ ||ಸಂಗೀತ ಕೀರ್ತನೆ ಪಾಡುವೆನೆಂದರೆಹಿಂಗದೆ ತುಂಬುರ ನಾರದರು ಪಾಡುವರೊ 1ಪುಷ್ಪವ ತಂದು ನಿನಗರ್ಪಿಸುವೆನೆಂದರೆಪುಷ್ಪ ಫುಲ್ಲಯಿಸಿದೆ ಹೊಕ್ಕುಳಲಿ ||ಮುಪ್ಪತ್ತು ಮೂರ್ಕೋಟಿ ದೇವತೆಗಳು ನಿನಗೊಪ್ಪಯಿಸೆ ನೈವೇದ್ಯ ನಿತ್ಯತೃಪ್ತನು ನೀನು 2ಕೋಟಿಸೂರ್ಯರ ಕಾಂತಿ ಮಿಗಿಲಾದವನಿಗೊಂದುಮೋಟು ದೀವಿಗೆ ಬೆಳಗೆ ಬೆಳಕಹುದೆ? ||ಸಾಟಿಗಾಣದಸಿರಿಉರದೊಳು ನೆಲಸಿರೆಪೋಟುಗಾಸನು ಎಂತು ಕಾಣಿಕೆಯಿಡಲಯ್ಯ 3ಹಾಸಿಗೆಯನು ನಿನಗೆ ಹಾಸುವೆನೆಂದರೆಶೇಷನ ಮೈಮೇಲೆ ಪವಡಿಸಿಹೆ ||ಬೀಸಣಿಕೆಯ ತಂದು ಬೀಸುವೆನೆಂದರೆಆಸಮೀರಣ ಚಾಮರವ ಬೀಸುತಿಹನೋ4ನಿತ್ಯಗುಣಾರ್ಣವ ನಿಜಸುಖ ಪರಿಪೂರ್ಣಸತ್ತು ಚಿತ್ತಾನಂದ ಸನಕಾದಿ ವಂದ್ಯ ||ಮುಕ್ತಿದಾಯಕ ನಮ್ಮಪುರಂದರವಿಠಲನುಭಕ್ತಿಪ್ರಿಯನು ಎಂದು ಭಜಿಸಿ ಕೊಂಡಾಡುವೆ 5
--------------
ಪುರಂದರದಾಸರು
ಹೇಗೆ ಶ್ರೀಹರಿದಯ ಮಾಡುವನೋ-ನಮಗೆ-|ಹೇಗೆ ಶ್ರೀಹರಿ ದಯ ಮಾಡುವನೊ ಪಯೋಗಿವರೋದಿತ ಭಾಗವತಾದಿ-ಸ-|ದಾಗ ಮಗಳನನುರಾಗದಲಿ ನೆನೆಯದಗೆ 1ಶಕ್ತಿಮಿರಿ ಗುರುಭಕ್ತಿಪೂರ್ವಕ ಹರಿ-|ಭಕ್ತಿ ಇಲ್ಲದ ಕುಯುಕ್ಕಿವಂತರಿಗೆ 2ದಾಸದಾಸ ಎನ್ನೀಶಗೆ ಮೊರೆಯಿಡೆ |ಲೇಸು ಕೊಡುವ ನಮ್ಮ ಪುರಂದರವಿಠಲ 3
--------------
ಪುರಂದರದಾಸರು
ಹೇಳಿದ ಯಮಧರ್ಮ ತನ್ನಾಳಿಗೆ ಪ.ಹೇಳಿದ ಯಮ ತನ್ನೂಳಿಗದವರಿಗೆಖೂಳದುರಾತ್ಮರಾಗಿ ಬಾಳುವರನು ತರ1ಹರಿಸಂಕೀರ್ತನೆಯನರನಾರಿಯರು ಆದರದಲಿ ಮಾಡಿದವರ ನಿಂದಿಪನ ತರ 2ಹರಿದಾಸರಿಗೆ ಉಣಕರಿಯದೆ ಜನ್ಮಾಂತಒರಟುಮಾತಿನ ಲುಬ್ಧನರನ ನಿಲ್ಲದೆ ತರ 3ಹರಿಕಥಾಮೃತ ಉಪಚಾರಕಾಗಿ ಕೇಳುವಪರನಾರೇರಾಳುವ ದುರುಳನಕಟ್ಟಿತರ4ಗುರುಹಿರಿಯರೊಳು ನೀಚೋತ್ತರವನು ಕೊಡುವಮರುಳಾಗಿ ಮತಿಯ ಸತಿಯರಿಗಿತ್ತವನ ತರ 5ಅಂಬುಜಾಕ್ಷನ ಪೂಜೆ ಸಂಭ್ರಮದಿ ಮಾಡದೆರಂಭೆಯೊಡನಾಡುವ ಡಂಭಕನ ಹಿಡಿ ತರ 6ಒಳ್ಳಿದರ್ಹಳಿದು ತಾ ಬಲ್ಲವನೆನುವಚೆಲ್ವ ಪ್ರಸನ್ವೆಂಕಟ ವಲ್ಲಭನ ವೈರಿಯ ತರ 7
--------------
ಪ್ರಸನ್ನವೆಂಕಟದಾಸರು
ಹೊರ ಹೋಗಿ ಆಡದಿರೊ ಹರಿಯೆ-|ಎನ್ನ ದೊರೆಯೆ ಪಮನೆಯೊಳಗಾಡುವುದೆ ಚೆಂದ - ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ||ವನಿತೆಯರು ಮೋಹದಿಂದ - ನಿನ್ನ |ಮನವಸಹರಿಸಿಕೊಂಬುವರೋ ಗೋವಿಂದ 1ಏನು ಬೇಡಿದರೂ ನಾ ಕೊಡುವೆ-ಕೆನೆ-|ಬೆಣ್ಣೆ ಕಜ್ಜಾಯವ ಕೈಯೊಳಗಿಡುವೆ ||ನಿನ್ನ ಗುಣಗಳನು ಕೊಂಡಾಡುವೆ - ನಿನಗೆ |ಚಿನ್ನ ರನ್ನದ ಅಲಂಕಾರಗಳಿಡುವೆ 2ಹೊಲಸು ಮೈಯವನೆನ್ನುವರೊ-ದೊಡ್ಡ |ಕುಲಗಿರಿಯನ್ನು ಪೊತ್ತವನೆನ್ನುವರೊ ||ಬಲುಕೇಶದವನೆನ್ನುವರೊ-ಆ |ಎಳೆಯನನೆತ್ತಿದ ಕುರೂಪಿಯೆಂಬುವರೊ 3ಭಿಕ್ಷೆಬೇಡಿದೆ ಎಂಬುವರೊ-ಭೂಮಿ |ರಕ್ಷಿಪ ರಾಯರ ಕದಡಿದೆಯೆಂಬುವರೊ ||ಲಕ್ಷ್ಮಿಯ ಕಳೆದೆಯೆಂಬುವರೊ-------ವೈ-|ಲಕ್ಷಣ ಬೆಣ್ಣೆಯ ಕದ್ದೆಯೆಂಬುವರೊ 4ಮಾನಬಿಟ್ಟವನೆನ್ನುವರೊ-ಮಹಾ |ಹೀನರ ಬೆನ್ನಟ್ಟಿ ಹೋದನೆಂಬುವರೊ ||ದಾನವವೈರಿಯೆಂಬುವರೊ-ಸುರ-|ರಾನತ ಪುರಂದರವಿಠಲನೆಂಬುವರೊ 5
--------------
ಪುರಂದರದಾಸರು
ಹೊಲೆಯ ಹೊರಗಹನೆ ಊರೊಳಗಿಲ್ಲವೆಸಲೆ ಶಾಸ್ತ್ರವನು ತಿಳಿದು ಬಲ್ಲವರು ನೋಡಿ ಪ.ಭಾಳದಲಿ ಭಸಿತ ಭಂಡಾರವಿಡದವ ಹೊಲೆಯಕೇಳಿ ಸಲೆ ಶಾಸ್ತ್ರವನು ತಿಳಿಯದವ ಹೊಲೆಯಆಳಾಗಿ ಅರಸರಿಗೆ ಕೈಮುಗಿಯದವ ಹೊಲೆಯಸೂಳೆಯರ ಕೊಡುವಾತನೇ ಶುಧ್ಧ ಹೊಲೆಯ 1ಇದ್ದ ಧನ ದಾನ - ಧರ್ಮವ ಮಾಡದವ ಹೊಲೆಯಕದ್ದು ತನ್ನೊಡಲ ಹೊರೆವಾತನೇ ಹೊಲೆಯಬದ್ಧವಹ ನಡೆ - ನುಡಿಗಳಿಲ್ಲದಿದ್ದವ ಹೊಲೆಯಮದ್ಧಿಕ್ಕಿ ಕೊಲುವವನೆ ಮರಳು ಹೊಲೆಯ 2ಆಶೆಯನು ತೋರಿ ಭಾಷೆಗೆ ತಪ್ಪುವವ ಹೊಲೆಯಲೇಸು ಉಪಕಾರಗಳನರಿಯದವ ಹೊಲೆಯಮೋಸದಲಿ ಪ್ರಾಣಕ್ಕೆ ಮುನಿಯುವವನೇ ಹೊಲೆಯಹುಸಿಮಾತನಾಡುವವನೇ ಸಹಜ ಹೊಲೆಯ3ಕೊಂಡ ಋಣವನು ತಿರುಗಿ ಕೊಡಲರಿಯದವ ಹೊಲೆiÀುಭಂಡ ಮಾತುಳಾಡುವವನೆ ಹೊಲೆಯಗಂಡ - ಹೆಂಡಿರ ನಡುವೆ ಭೇದಗೈವವ ಹೊಲೆಯಹೆಂಡರಿಚ್ಚೆಗೆ ನಡೆವ ಹೇಡಿ ಹೊಲೆಯ 4ಪರಧನಕೆ ಪರಸತಿಗೆ ಅಳುಪಿದವನೇ ಹೊಲೆಯಗುರು ಹಿರಿಯರನು ಕಂಡು ಎರಗದಿದ್ದವ ಹೊಲೆಯಅರಿತು ಆಚಾರವನು ಮಾಡದಿದ್ದವ ಹೊಲೆಯಪುರಂದರವಿಠಲನನು ನೆನೆಯದವ ಹೊಲೆಯ 5
--------------
ಪುರಂದರದಾಸರು