ಒಟ್ಟು 852 ಕಡೆಗಳಲ್ಲಿ , 95 ದಾಸರು , 665 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರಣೆಯನಾಳ್ವ ಪಾರ್ಥಿವರಿಂಗೆ ಪ್ರಜೆಗಳು ಬೇಡವಾಯ್ತು ವರಹದ ಮೇಲಣಾಸೆಯಿಂದ ರಹಿತರ ಬಡಿವುದಾಯ್ತು ಪ ರಾಜ್ಯಕೆ ದಂಡ ಹಾಕಿದರು ತೀರಿತೆಲ್ಲಿ ಪ್ರಜೆಗಳ ಬಾಳು ನಜರು ಕೊಡುವುದಾಯ್ತು ತೆರತೆರುವುದರಿಂದ ವರಹಕೊಂಡು ಬಂದು ಏರೆಯ ರೂಪಾಯಿಗಳನು ಎತ್ತಿ ದಂಡಿಗೆ ಕೊಡುವುದಾಯ್ತು 1 ಮತ್ತೆ ಸೇನಭೋಗರು ಶಿರಸ್ತೆದಾರರು ಸಾವಿರ ಸಾವಿರ ವೆತ್ತಿ ಜನಕೆ ಬೆದುಕಮಾಳ್ವ ಕರಣಿಕರಿಗೆ ಪತ್ತು ನೂರು ಮೂರು ಸಾವಿರವೆಂದು ದಂಡವನುಕಟ್ಟಿ ವಿತ್ತವನ್ನು ಸೆಳೆದರದುವೆ ಬಿತ್ತು ಬೇರೆ ಪ್ರಜೆಗಳ ಮೇಲೆ 2 ಸೂಳೆ ಮಾಲೆಯರನು ಕರೆಸಿ ಜನಕೆ ಸಾವಿರದಂಡಕಟ್ಟಿ ಕೂಳತಿನಲು ಬಿಡದೆ ತರುಬಿವಾಲೆ ಮೂಗುತಿ ನಾಣ್ಯಗೊಂಡು ಬೀಳು ಕೊಟ್ಟು ಮನೆಗೆ ಅಂಗಡಿ ಸಾಲುವಳಿಗೆಯರನು ಕಾಲನಂತೆ ದಣಿಸಿ ರೊಕ್ಕದ ಜಾಳಿಗೆಯನು ಕೊಂಡು ಮೆರೆವ 3 ಸುಲಿಗೆಯಾಗ ದುಳಿಯಲಿಲ್ಲ ಬೆಳೆದ ಬೆಳೆಯ ನುಣ್ಣಲಿಲ್ಲ ಹೊಳಲ ಸುಟ್ಟು ಬಿಟ್ಟುದೆಲ್ಲ ಕುಲಕೆ ಪಶುಗಳುಳಿಯಲಿಲ್ಲ ತಲೆಯ ಚಂಬುಹಾರಿತಲ್ಲ ಜನರು ಸತ್ತು ಹೋದುದೆಲ್ಲ ಮಲೆತ ರಿಪುಗಳನ್ನು ಕುಟ್ಟಿ ಪ್ರಜೆಗಳ ಕಾಯ್ದು ಕೊಳ್ಳಲಿಲ್ಲ 4 ತಿರುಕರಿಂಗೆ ಸುಖಿಗಳಿಂಗೆ ಹರುವೆ ಸೊಪ್ಪುಮಾರ್ವರಿಂಗೆ ತರುಣಿಯರನು ಬಿಟ್ಟು ತಲೆಯ ಹೆರೆಸಿ ಕೊಂಡಲೆಗಳರಿಂಗೆಗೆ ಹಿರಿದು ಕಿರಿದು ಎಂದು ಬಿಡದೆ ಮರುತ ಸುತನ ಕೋಣೆಲಕ್ಷ್ಮಿ ಯರಸ ರುದ್ರರೂಪಧರಿಸಿ ಜನರಿಗಿನಿತು ಮಾಡಿದ 5
--------------
ಕವಿ ಪರಮದೇವದಾಸರು
ಧರೆಯನಾಳುವನೊಬ್ಬ ದೊರೆ ಜೈಶೀಲನಾ ಹರದಿ ಮಂಜುಳೆಯಿರಲು ಮಕ್ಕಳಿಗಾಗಿ ಮರುಗುತ ಸೊರಗಿರಲು ಈ ಪರಿಯ ನೋಡುತ ಹರನು ಬ್ಯಾಗ ತಾ ತಿಳಿದವರ ಮನ ತಿರುಕನಂದದಿ ಬರಲು ಧಾನ್ಯವ ಕರೆದು ನೀಡಿದರೊಲ್ಲದಾಗಲೆ ತಿರುಗಿ ಪೋದನೆ ಉರಗಭೂಷಣ ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ ಮಂಗಳಾಂಗಿಯರು ಬ್ಯಾಗ 1 ನಂದಿವಾಹನನ ಪೂಜಿಸಿ ಫಲಗಳ ಬೇಡೆ ಕಂದನಿಗಾಯುಷ್ಯವು ಐದರಾ ಮ್ಯಾಲ್ ಹ- ನ್ನೊಂದು ವರುಷವೆನಲು ವರ ನೀಡುತಿರಲು ಮಂಜುಳೆಯು ಗರ್ಭವನೆ ಧರಿಸಲು ಬಂಧುಗಳು ಹೂ ಮುಡಿಸಿ ಪರಮಸಂಭ್ರಮದಿ ಸೀ- ಮಂತ ಮಾಡಲು ತುಂಬಿತಾ ನವಮಾಸವಾಗಲೆ 2 ಜಾತವಾಗಲು ನಾಮಕರಣ ಮಾಡುತ ಚಂದ್ರಶೇಖರ- ನೆಂದ್ಹೆಸರಿಡುತ ಜಾವಳ ಜುಟ್ಟು ಪ್ರೀತಿಂದುಪನಯನ ಮಾಡುತ ವಿದ್ಯೆಗಳ ಕಲಿಸುತ ಆತಘದಿನಾರ್ವರುಷ ಬರುತಿರೆ ಪ್ರೀತಿಯಿಂದ್ಹಣಕೊಟ್ಟು ಕಾಶಿಯಾತ್ರೆಗೆನುತಲಿ ಕಳುಹೆ ಬ್ಯಾಗನೆ3 ಒಂದಾಗಿ ಅಳಿಯ ಮಾವಂದಿರು ಬರುತಿರೆ ಕಂಡಿಳಿದರು ತೋಟವ ಗೆಳತಿಯರು ಬಂದು ಹೂವಿಗೆ ಆಟವಾಡುತಲಿ ಕೋಪಿಸೆ ಒಂದಕ್ಕೊಂದು ಮಾತಾಡೆ ರಾಜ ನಂದನೆಯು ತಾ ನೊಂದುಕೊಳ್ಳದೆ ನಂದಿವಾಹನನರಸಿ ದಯವಿರಲೆಂದು ನಡೆದಳು ಮಂದಿರಕೆ 4 ಬಂದ ರಾಜನ ಮಗಳಿಗೆ ನಿಬ್ಬಣವು ಕರೆ- ತಂದರಸುಕುಮಾರನ ಧಾರೆಯನೆರೆದು ಮಂಗಳ ಸೂತ್ರವನು ಬಂಧನವ ಮಾಡಿದ- ರÀಂದದಿಂದಲಿ ಲಾಜಹೋಮವ ಬಂಧುಗಳ ಸಹಿತುಂಡು ಭೌಮವ ಚೆಂದದಿಂದಲಿ ಸುತ್ತಿಸಾಡ್ಯವ ಅಂದಿನಿರುಳಲಾನಂದವಾಗಿರೆ 5 ಸತಿಪತಿಯರು ಭಾಳ ಹಿತದಿಂದ ಮಲಗಿರೆ ಅತಿ ಹಸಿವೆನಗೆನಲು ಲಡ್ಡಿಗೆ ತಂದು ಘೃತ ಬಟ್ಟಲೊಳು ಕೊಡಲು ತಿಂದಿಡಲು ಮುದ್ರಿಕಾ ಸತಿ ಸಹಿತ ಸುಖನಿದ್ರೆಲಿರೆ ಪಾ- ರ್ವತಿಯು ಬಂದಾ ಖದ್ರುದೇವಿಸುತ ಬರುವನೆಂದ್ಹೇಳೆ ಕಳಸವ ಅತಿಬ್ಯಾಗದಿ ತುಂಬಿಟ್ಟಳುರಗವ 6 ಅತ್ತೆ ಕಾಶಿಗೆ ಪೋಗಿ ಅಳಿಯ ಮಾವಂದಿರು ಕ್ವಾಷ್ಟನ ಕರೆದು ತಂದು ಕುಳಿತಿರಲಾಗ್ವಿಚಿತ್ರ- ಭೂಷಿತಳು ಬಂದು ನೋಡುತಲಿ ನಿಂದು ಥಟ್ಟನೆದ್ದು ತಾ ತಿರುಗಿ ಪೋಗೆನ್ನ ಪಟ್ಟದರಸಿವನಲ್ಲವೆನುತಲಿ ಹೆತ್ತಜನಕ ನೀ ಅನ್ನಕ್ಷೇತ್ರವ ಇಟ್ಟು ನಡೆಸೀಗ್ವೀಳ್ಯಗಳ ಕೊಡುವುದು 7 ತಂದು ಭೋಜನಮಾಡುತ ಕುಳಿತಿರಲಾಗ ತಂದು ವೀಳ್ಯವ ಕೊಡುತ ಮುಖ ನೋಡಿ ನಗುತ ಸಂದೇಹಿಲ್ಲದೆ ಎನ್ನಪತಿ ಹೌದೆಂದು ನುಡಿದಳು ಬಂದು ಜನರು ನಿಂದು ಗುರುತೇನೆಂದು ಕೇಳಲು ತಂದು ತೋರಿದುಂ(ದಳುಂ?) ಗುರವ ಜನರಿಗೆ 8 ನಿನ್ನ ಗುರುತು ಏನ್ಹೇಳೆನ್ನಲು ಸಭೆಯೊಳು ಪನ್ನಂಗದ ಕಳಸವನು ತೆಗೆಯಲು ಬಾಯಿ ರನ್ನ ಮುತ್ತಿನ ಸರವು ಆಗಿರಲು ಉರಗವು ಕನ್ನೆಯರು ಹರಸ್ಹಾಕೆ ಕೊರಳಿಗೆ ಮನ್ನಿಸುತ ಮಹಾರಾಜ ಮಗಳನು ಚಿನ್ನದಾಭರಣಗಳು ಉಡುಗೊರೆ ತನ್ನಳಿಯಗುಪಚಾರ ಮಾಡುತ 9 ಸತಿಪತಿಯರು ತಮ್ಮ ಪಿತರ ಅಪ್ಪಣೆಗೊಂಡು ರತುನದಂದಣವೇರಲು ಮಾರ್ಗದಿ ಗೌರೀ- ವ್ರತ ಮಾಡಿ ನಡೆತರಲು ಪಿತಗ್ಹೇಳಿ ಕಳುಹಲು ಸುತನು ಬಂದರಮನೆಗೆ ಭಾಗೀ- ರಥಿಯು ಮಾತುಳ ಮಡದಿ ಸಹಿತ ಹಿತದಿ ಬಂದೆರಗಿದರೆ ಸೊಸೆಮಗ ಅತಿಹರುಷದಿಂದಪ್ಪಿ ಕೇಳುತ 10 ದಾವ ಪುಣ್ಯದ ಫಲದಿಂದ ನಿನ್ನರಸನ ಪ್ರಾಣ ಪಡೆದಿಯೆನಲು ಮಂಗಳಗೌರಿ ದೇವಿ- ದಯವಿರಲೆಂದು ಹೇಳಲು ಶ್ರೀಗೌರಿಕಥೆಯನು ಕಾಮಿತವನದೊಳಗೆ ದ್ರೌಪದಿಗ್ಹೇಳಿದನು ಭೀಮೇಶಕೃಷ್ಣನು ಮಾಡಿದರೆ ಮುತ್ತೈದೆತನಗಳ ಬೇಡಿದಿಷ್ಟಾರ್ಥಗಳ ಕೊಡುವೋಳು ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ ಮಂಗಳಾಂಗಿಯರು ಬ್ಯಾಗ 11
--------------
ಹರಪನಹಳ್ಳಿಭೀಮವ್ವ
ಧುಮ್ಮಸಾಲೆಯ ನೋಡಿ ಧುಮ್ಮಸಾಲೆಯಾ ಪ ಧುಮ್ಮಸಾಲೆಯ ನೋಡಿ ಘಮ್ಮವಾದ ಪ್ರಾಣಿಗಳು | ತಮ್ಮ ಸುದ್ದಿ ತಮಗಿಲ್ಲಾ ಹಮ್ಮಿನಿಂದಲಿ | ಧಿಮ್ಮಹಿಡಿದು ಭವದೊಳು ಸುಮ್ಮನೆವೆ ಕೆಟ್ಟು ಹೋದ | ಗ್ಯಾದರೆಯು ಪರಬೊಮ್ಮನಾಮ ನೆನೆಯಿರೋ 1 ವಿದ್ಯೆಯಿಂದ ವಾದಿಸುತ ಮುದ್ದಿಯಿಂದ ಕಣ್ಣು ಮುಚ್ಚಿ | ಸದ್ಯ ಶಕ್ತಿ ಯೌವನದಿ ಗುದ್ದಿ ಹೆಟ್ಟು ತಾ | ಪರಿ ನಿಜ | ಬುದ್ಧಿ ಹೋಗಾಡಿಸಿ ಅನಿರುದ್ಧನನ ಮರೆತಿರೋ 2 ಒಂದು ಕವಡಿಯಲಾಭ ತಮಗೆ ಹೊಂದದಿದ್ದರೆ ಸರಿ | ಬಂದು ನಿಂದು ಒಳ್ಳೆವರಾ ನಿಂದೆ ಮಾಡುತಾ | ಇಂದು | ಕೂಪ ಲಿಟ್ಟರೋ 3 ಉಡಗಿ ಬಿಟ್ಟು ಹುಡಿಯಹಚ್ಚಿ ಜಡಿಯಬಿಟ್ಟು ಸಿದ್ಧಗಾಗಿ | ಪೊಡವಿಲಿನ್ನು ಲಾಭಾ ಲಾಭಾ ನುಡಿಯ ಹೇಳುವಾ | ತುಡುಗರಿಗೆ ಹೋಗಿಕಾಲ ವಿಡಿದು ಗೋಂದಲ್ಹಾಕುವರು | ಕಡಲಶಯನನ ಭಜಿಸದೆವೆ ಅಡಲು ಬಿಟ್ಟು ಹೋದರೋ 4 ಸಿರಿಯ ಸುಖಗೀಪರಿ ಪರಿಯ ವೃತ ತಪದಿಂದಾ | ಚರಿಸಿ ನೋಡು ಕಣ್ಣು ವಿದ್ದು ಕುರುಡರಾದರೋ | ಗುರುಮಹಿಪತಿ ಸ್ವಾಮಿ ಚರಣ ನಂಬಿಯಚ್ಚರದಿ | ನಿರಪೇಕ್ಷ ಭಕ್ತಿಯಿಂದಾ ತರಣೋಪಾಯ ನೋಡರೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧ್ಯಾನವನು ಮಾಡು ಬಿಂಬ ಮೂರುತಿಯಪ ಆನಂದದಲಿ ಕುಳಿತು ಅಂತರಂಗದಲಿ ಅ.ಪ ಸದಾಚಾರನಾಗಿ ದ್ವಾದಶಗುರುಗಳಿಗೆರಗಿ ಮುದದಿಂದ ಮೂಲಮಂತ್ರವನು ಜಪಿಸಿ ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು ಪದಮಾಸನವ ಹಾಕಿ ಪರಮ ವಿಶ್ವಾಸದಲಿ1 ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು ಮಂಗಳ ಶೋಭಿತ ಅಖಂಡ ಧ್ಯಾನದಂತ ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ 2 ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ ಮಗುಳೆ ಪರಮ ಗುರುವಿನ ಮೂರ್ತಿಗೆ ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು3 ತಿರುಗಿ ಮೆಟ್ಟಿಕೆ ಮೂರು ವೇಗದಿಂದಲಿ ನಿನ್ನ ಲ್ಲಿರುವ ಮೂರ್ತಿಯಲ್ಲಿ ಚಿಂತನೆಯ ಮಾಡೊ ಭರದಿಂದ ಎಲ್ಲವನು ತಂದು ಹೃದಯದಲ್ಲಿ ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕಲೆಸು 4 ಆತನೆ ಬಿಂಬ ಮೂರುತಿಯೆಂದು ತಿಳಿದುಕೊ ಆ ತರುವಾಯ ನಾಡಿಗಳ ಗ್ರಹಿಸಿ ಆ ತೈಜಸನ ತಂದು ವಿಶ್ವಮೂರ್ತಿಯಲ್ಲಿ ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ 5 ಜ್ಞಾನ ಪ್ರಕಾಶದಲಿ ಇದ್ದು ನಿನ್ನ ಹೃದಯ ಕಮಲ ಮಧ್ಯ ಮೂರ್ತಿ ನಿಲ್ಲಿಸಿ ಬಾಹ್ಯದಲಿ ಏನೇನು ಪೂಜೆಯನು ಉಳ್ಳದನು ಮಾಡೊ6 ಗುಣ ನಾಲ್ಕರಿಂದಲಿ ಉಪಾಸನವನೆ ಮಾಡು ಕ್ಷಣ ಕ್ಷಣಕೆ ಹರಿಪಾದವನು ನೋಡುತ ಅಣುರೇಣು ಚೇತನಾಚೇತನಕೆ ನೇಮಕ ಫಣಿಶಯನನಲ್ಲದೆ ಮತ್ತೊಬ್ಬರಿಲ್ಲವೆಂದು 7 ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ ಸಮ ವಿಷಮ ತಿಳಿದೊಂದೆ ಭಕುತಿಯಲ್ಲಿ ಸ-ಮಾಧಿಗೊಳಗಾಗಿ ದಿವ್ಯ ದೃಷ್ಟಿಲಿ ಸರ್ವ ಕ್ರಮ ಅನುಕ್ರಮದಿಂದ ಭರಿತಭಾವುಕನಾಗೊ 8 ಪರಿ ಧೇನಿಸಲು ದೇವ ಕರುಣನ ಮಾಡೆ ಪಾಪ ಸಂಚಿತವು ಪ್ರಾರಬ್ಧ ನಾಶ ಅಪರೋಕ್ಷಿತನಾಗಿ ತನ್ನ ಯೋಗ್ಯತದಷ್ಟು ಗೋಪಾಲ ವಿಜಯವಿಠ್ಠಲನೊಲಿವನಾಗ9
--------------
ವಿಜಯದಾಸ
ನಡತೆ ನನ್ನದು ಕೇಳಿರಯ್ಯ ಪ ಒಡೆಯ ವಲಿವ ಹ್ಯಾಗೆ ಪೇಳಿರಯ್ಯ ಅ.ಪ. ಒಡವೆ ತರದಿಹನೆಂದು ಕೋಪ ಮಡದಿನಟಿಸುತ ಹೆದರೀ ಒಡನೆ ಸ್ನಾನವ ಮಾಡಿತಂದು ಕೊಡುವ ಪ್ರಸನ್ನ ಗೈಯ್ಯಲವಳಾ ಆಹಾ ಒಡಿಯ ದೇವಗೆ ಹರಕೆ ನಡಿಸಬೇಕೆನ್ನಲು ಭೂರಿ ನೋಡುವೆನೆಂತೆಂಬೆ 1 ಒರಿಸೆ ಸಾಲಿಗ್ರಾಮ ಗೃಹದಿ ಅರಿವೆ ಹರಕು ಸಹ ಇಲ್ಲವೆನ್ನೇ ತರುವೆನೆನುತ ತಿಂಗಳಾರು ಕಾಲ ಬರಿದೇ ಆಹಾ ತರಲು ಸೂಳೆಗೆ ಸೀರೆ ಭರದಿ ಕೂಡಿಯೆ ಅವಳ ಪುರವ ಪೇಟೆಪೇಟೆಗಳೆಲ್ಲ ತಿರುಗಿ ತಿರುಗುವೆ ಮುದದೀ 2 ಹರಿಗೆ ದೀಪವ ಹಚ್ಚೆ ತೈಲ ಇರದು ತಾರೆನೆ ಹಡೆದ ತಾಯಿ ಬರಲಿ ಸಂಬಳ ತರುವೆ ಕೊಡುವಿ ಉರಿವ ಕಾಟವನೆಂದು ನುಡಿವೆ ಆಹಾ ಪರಮ ಸಂಭ್ರಮದಿಮದ ತಿಂಡಿ ಅಂಗಡಿಯಲಿ ಹರಕು ಜಿಹ್ವೆಂiÀi ಚಪಲ ಪೂರ್ಣಮಾಡುವೆ ನಿರುತ 3 ವೃತ್ತಪತ್ರಿಕೆಯಲ್ಲಿ ಹೆಸರು ಎತ್ತಿಹಾಕುವರೆನೆ ಒಡನೆ ವಿತ್ತದಾನವಗೈವೆ ಬರಿ ಉ- ನ್ಮತ್ತಕಾರ್ಯಕಾದರು ಸರಿಯೇ ಆಹಾ ಉತ್ತಮಭಕ್ತರು ಅರಸುತ್ತ ಬರ್ಪುದ ಕಂಡು ವತ್ತಿ ಬಾಗಿಲು ಕೊಂಡಿ ಸ್ವಸ್ಥವಿಲ್ಲೆಂಬೆ4 ಕಂಡು ಕರೆಯುತ ಭಾರಿ ಊಟ ತೊಂಡನಂದದಿ ನೀಡಿ ಮನದಿ ಉಂಡು ಹರುಷವ ನೆನೆವೆ ಧನ್ಯ\ ಆಹಾ ಕೆಂಡ ಬಿಸಿಲಲಿ ಬಡವ ಕಂಡು ಮಹಡಿಯ ಬರಲು ಪಿಂಡ ಪಿಡಿಯನು ಹಾಕೆ ತಂಡುಲವಿಲ್ಲೆಂಬೆ5 ದಾನಗೈದರು ಒಮ್ಮಿಂದೊಮ್ಮೆ ಮಾನಪಡೆಯಲು ಊರ ಒಳಗೆ ನಾನೆಂಬ ಹಂಕಾರ ಬಿಡದೆ ಶ್ರೀನಿಧಿ ಸ್ವಾಮಿತ್ವ ನೆನೆಯೆ ಆಹಾ ಸ್ವಾನುಭವ ಕಾಣದೆಲೆ ಜ್ಞಾನ ಭಾಸ್ಕರನಂತೆ ಪು- ರಾಣಪೇಳುತ ನನ್ನ ಸಮಾನ ವಿಲ್ಲಂತೆಂಬೆ6 ನೂರಿತ್ತು ಸಂಬಳ ಹಿಂದೆ ಮನದಿ ಊರಿತ್ತು ಹರಿಭಕ್ತಿ ಎಲ್ಲಿ ಈಗ ನೂರ್ಹತ್ತು ಕೊಟ್ಟರು ದೇವ ಬೆ- ನ್ಹತ್ತಿದೆ ತಾಪತ್ರಯ ಬಹಳ ಆಹಾ ಸಿರಿ ಕೃಷ್ಣವಿಠಲನೆ ದೃಷ್ಟಿ ವಾರುಗಾಣೆನು ಕಾಣೆನು ಸತ್ಯ ಪೊರೆಯೋ ಶರಣೆಂತೆಂಬೆ7
--------------
ಕೃಷ್ಣವಿಠಲದಾಸರು
ನನ್ನ ಮಗನೆಂಬರು ನಾಯಿ ಮಕ್ಕಳುತನ್ನ ತಾನೆ ಬ್ರಹ್ಮವದು ತಾನೆ ವೇಷ ಹಾಕಿ ಬರೆ ಪ ಸತಿಪತಿ ತಾವು ಆಗ ಸಂಯೋಗದ ಕಾಲದಲ್ಲಿಸುತನ ಕಿವಿ ಮೂಗ ಏನ ತಿದ್ದಿದರೇನೋಅತಿ ಆಶ್ಚರ್ಯವಲ್ಲದೆ ಅವಯವ ತಾಳಿಕೊಂಡುಕ್ಷಿತಿಗೆ ಮೈದೋರುತ ತಾನೆ ಬಂದರೆ 1 ಗಂಧ ಕಸ್ತೂರಿಯ ಪೂವು ಗಮಕದಲಿ ಧರಿಸುವಾಗಒಂದನ್ನ ಸುತೆಗೆ ಗುರುತು ಮಾಡಿದರೇನೋಇಂದು ಇದೆನೆವವೆಂದು ಇಳಿದು ಸಪ್ತಧಾತು ತಾಳಿಛಂದದಿ ವಿನೋದಕಾಗಿ ತಾನೆ ಬಂದರೆ 2 ಮಂಚವೇನು ಸಂಪತ್ತಿಗೆ ಮಡಿಹಾಸಿಗೆಯೊಳಿರ್ದುಮಂಚದಲಿರುತ ಸುತಗೆ ಚೇತನ ತುಂಬಿದರೇನೋಹೊಂಚಿನೋಡಿ ಚಿದಾನಂದ ಹೊರೆಯೇರಿ ಹರುಷದಿಪಂಚವಿಂಶತಿ ತತ್ವ ಕೊಡಿ ತಾನೆ ಬಂದರೆ 3
--------------
ಚಿದಾನಂದ ಅವಧೂತರು
ನಂಬಿ ಭಜಿಸಿರೈಯ್ಯಾ ಶರಣರು ಪ ನಂಬಿ ಭಜಿಸಿರೈಯ್ಯಾ ಶರಣರು|ಅಂಬುಧಿವಾಸ ಶ್ರೀ ದೇವನಾ| ಹಂಬಲ ಬಿಡಿ ಅನ್ಯ ಮಾರ್ಗದಾ| ಅಂಬುಜಾಂಬಕ ಪರದೈವನು ಗಡಾ| 1 ತ್ರಿಮೂರ್ತಿಯೊಳು ಮಿಗಿಲಾರೆಂದು ನೋಡಾ| ಲಾ ಮುನಿಯಮರರು ಕಳುಹಲು| ಪರದೈವವೆಂದನು ಗಡಾ|2 ದೇವಾ|ಸುರರೆಲ್ಲ ತವಕದಿ ಕುಳಿತಿರೇ| ಇಂದಿರೆ ಬಂದು|ಹರಿಗೆ ಮಾಲೆಯ ಹಾಕಿದಳು ಗಡಾ 3 ಶ್ರೀ ಚರಣವ ತೊಳೆಯಲು| ಸುರನದಿ ಬರೆ| ಮೃಢ ಶಿರಸದಿ ಧರಿಸಿದ ಗಡಾ4 ಮೂರಕ ಮೂರ ಮೂರುತಿಯಾಗಿ ಗುಣ| ಮೂರಕದೂರವದೆನಿಸುವಾ| ಸಾರಿದವರಾ ಕಾವಾ ಮಹಿಪತಿಸುತ| ಸಾರಥಿಯಾಗಿ ರಕ್ಷಾಪ ಗಡಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿದೆ ನಮ್ಮಮ್ಮನ ನಂಬಿದೆ ಪ ಕದಂಬ ಕರರ್ಚಳ ನಂಬಿದೆ ಅ.ಪ. ಕರವೀರದೊಳಗಿರುತಿಹಳು ರವಿ ಕಿರಣ ಕಾಂಚನ ಪೀಠ ನಿಧಿತಳು ಸುರತರುಣಿ ಸಂಘಾತ ಸೇವಿತಳು ಆಹಾಹರಿಯ ವಕ್ಷದಿ ಕೂತು ಕರುಣ ಕಟಾಕ್ಷದಿಪರಿವಾರ ಜನಕೆಲ್ಲ ಸುರಿವಳು ಸುಖವನ್ನು 1 ಕರದಿ ಕಂಕಣ ತೋಡೆ ಬಳೆಯು ನಾಗಮುರಿಗೆ ವಂಕಿಯುಶೋಭ ಸಿರಿಯು ಪಾದಾಭರಣದ ಕಲಕಲಧ್ವನಿಯು ಆಹಾಕರಣದಿ ವಾಲಿ ಕಂಠದಿ ಸರ ಸುರಗಿಯುಭರಮ ಮೇಖಳ ಕಾಂತಿ ಹರವಿಲಿ ಬೆಳಗೋದು 2 ಮುಖವನೋಡಲು ಸೋಮಬಿಂಬ ದಿವ್ಯ ಚಿಕುರಮ ಭ್ರಮರದಂಬನಾಸ ಮುಖದಿ ಮಣಿಯು ರವಿಬಿಂಬ ಆಹಾವಿಕಸಿತ ಸುಮಮಾಲೆ ವಿಕಸರ ಫಣಿವೇಣಿಚಕಚಕಿತಾಭರಣಳಕಳಂಕ ಚಲಿವಿಯ 3 ಕವಿ ಭುವನದೊಳಿರುವಳ 4 ದೇಶಕಾಲಗಳಿಂದಸಮಳು ಹರಿಗಾಸುಗುಣಗಳಿಂದಾಸಮಳುಸುಖರಾಶಿ ಸೌಂದರ್ಯ ಸೌಭಗಳು ಆಹಾವಾಸುದೇವನ ಭಕ್ತಿರಾಶೆ ಪೂರೈಸುತಿಂದಿ-ರೇಶನು ಚ್ಛಾಂಗದಿ ತಾ ಸುಖಿಸುವಳಂಬ 5
--------------
ಇಂದಿರೇಶರು
ನಂಬಿದೆ ನಾನಿನ್ನ ಚರಣವನಂಬಿಗ ಅಂಬೆಗಳ ಸುತನೆ ಕೋ ಬ್ಯಾಗಂಬಿಗ ಪ ಇಂಬಾಗಿ ದಡ ಸೇರಿಸೆನ್ನನೇನಂಬಿಗ ತುಂಬಿ ನದಿ ಸೂಸುತಲಿದೆ ನೋಡಂಬಿಗ ಅ.ಪ. ಕರ್ಮವೆಂಬ ಪ್ರವಾಹವ ನೀ ನೋಡಂಬಿಗ ಚರ್ಮದಿಂದೇಳು ಹೊದ್ದಿಕಿ ಅಂಬಿಗ ಮರ್ಮ ಒಂಭತ್ತು ರಂಧ್ರ ಉಂಟಂಬಿಗ ಶರ್ಮವಿದಕೆ ಕಾಯದ್ಹರಿಗೋಲಂಬಿಗ 1 ಆಳ ಬಹಳ ಗೊತ್ತಾಗದಂಬಿಗ ಶೆಳವು ಘನ ಉಳ್ಳುಹುದು ನೋಡಂಬಿಗ ಸುಳಿಗಾಳಿಗೆ ಸಿಗಿಸದಿರೊ ಅಂಬಿಗ ಬಳಸಿ ಕೊಂಡೊಯ್ಯೋದು ಒಳ್ಳೇದೆ ಅಂಬಿಗ 2 ಸಂಚಿತಾಪ್ತಿ ಇವರೊಳುಂಟಂಬಿಗ ಭಾರ ಜಡಿಯೋದು ನೀ ನೋಡಂಬಿಗ ವಂಚಕ ಮಾತು ರಾಗವು ಹೆಚ್ಚಂಬಿಗ ಚಂಚಲಗೊಂಡು ಭ್ರಮಿಸೋದು ಕಾಣಂಬಿಗ 3 ಆಶಾಜಲ ಮೇಲೆ ಮೇಲೆ ಬರುವುದಂಬಿಗ ಮೋಸ ಮಾಡುವುದೇನೊ ಕೊನೆಗೆ ಅಂಬಿಗ ಪೊಸ ಪೊಸ ಕಾಮತೆರೆ ತುಂಬಾಯಿತಂಬಿಗ ಲೇಶವಾದರು ಬತ್ತದು ನೋಡಂಬಿಗ4 ಅಷ್ಟ ಆನೇ ಒಳಗಿಟ್ಟುಕೊಂಡಿಹುದಂಬಿಗ ಹುಟ್ಟು ಹಾಕೋದು ಬಿಟ್ಟು ಜಲ್ಲೆ ಕೊಳ್ಳಂಬಿಗ ಬೆಟ್ಟ ಆರಕ್ಕೆ ಸಿಕ್ಕಿಸದೆ ನೋಡಂಬಿಗ ನೆಟ್ಟ ನಡುವಿನ ಪಥದಿ ಒಯ್ಯೋ ಅಂಬಿಗ 5 ಸುತ್ತ ಕಾರ್ಮುಗಿಲು ಬಂತಲ್ಲೊ ಅಂಬಿಗ ಹತ್ತು ಹನಿಗಳು ಬಿತ್ತು ನೋಡಂಬಿಗ ಎತ್ತಿ ನಡೆಸೋದು ಶಕ್ತಿ ನಿನ್ನದು ಕಾಣಂಬಿಗ ಹತ್ತಿಸೊ ಭಕ್ತಿದಡಕಿನ್ನಂಬಿಗ 6 ಮರಕಟಿ ಸೇರಿಹದಿದರೊಳಗಂಬಿಗ ಕರೆಕರೆಗೆ ಗುರಿ ಮಾಡೊದಿದೆ ಅಂಬಿಗ ಸರಿಯಾಗಿ ನಡೆಸೊ ಇನ್ನಾದರಂಬಿಗ ವರದವಿಜಯ ರಾಮಚಂದ್ರವಿಠಲ ನೀನಂಬಿಗ 7
--------------
ವಿಜಯ ರಾಮಚಂದ್ರವಿಠಲ
ನಂಬಿದೆನೊ ನೀರೇರು ಹಾಕ್ಷ ನಿನ್ನ ನಂಬಿದೆನೊ ನಿನ್ನ ನಂಬಿದೆ ಯನ್ನ ಸಲಹುವದಿನ್ನು ಮನ್ನಿಸೊ ಹೆನ್ನೆ ವಿಠ್ಠಲ ಪ ಸಿಂಧು ಗಂಭೀರ ಶ್ರೀ ವೇಣುನಾದ ಮಂದರಾದ್ರಿಧರ ನಂದನಂದನ ಕುಂದರದನ ಗೋವಿಂದ ಪರಮಾ- ನಂದ ವಿಗ್ರಹ 1 ಜಾನಕೀರಮಣ ಸರ್ವೇಶ ಈಶವಿನುತ ಚರಣ ದೀನಬಾಂಧವ ದೇವರದೇವ ಪುರಾಣಪುರುಷ ಮಹಾನುಭಾವ ಹರಿ 2 ಬಾಲಗೋಪಾಲ ಭಾಸುರ ಗುಣಶೀಲ ಶ್ರೀಲೋಲ ನೀಲವರ್ಣ ಹೆನ್ನೆಪುರೀಶ ಕುಚೇಲವರದ ಮಾಧವ 3
--------------
ಹೆನ್ನೆರಂಗದಾಸರು
ನಂಬುಗೆ ಪಡಿಯಿರೋ ದೇವರ ದೇವನಾ ಪ ಧಾಮ ಸಾರ್ವಭೌಮ ತಾಮರಸ ಸಖ ಆ ಮಹಾಕುಲೋದ್ದಾಮ ಆಹವ ಭೀಮ| ಸ್ವಾಮಿ ಸಕಲರ ಕಾಮಿತಾರ್ಥವ ನೇನಿ ಮುನಿಜನ ಪ್ರೇಮಿ| ಚರಿತ ನಿಸ್ಸೀಮಿಯಾ1 ಧಾಟಿಯಲಿ ನರನಾಟಕ ವಿಡಿದ ಆಟವಾಡಲು ನೀಟಾ| ಕೋಟಿ ಕೋಟಿ ನಿಶಾಟ ದರ್ಪೋಚ್ಚಾಟ ಮಾಡಿದ ಸ್ಪೋಟಾ| ನೀಟ ಶರಣ ಮುಕುಟಿಗಿತ್ತನು ಪೀಠಾ| ಧೀಟ ಶ್ರೀ ಜಟೆ ಜೂಟ ವಂದಿತ ಪಾಟರಹಿತ ಸ್ಪರಾಟನಾ 2 ಅಂದು ಇಂದೇ-ನೆಂದಿಗಾದರ ವಂದೇ ದಯದಿಂದ| ಛಂದ ಛಂದದ-ಲಿಂದ ಭೋಕ್ತರ ಬಂಧು ಭಕ್ತರ ವೃಂದ| ಸುಂದರಾನನ ಕುಂದರದನ ಸುಮಂದ ಹಾಸಾನಂದ| ಇಂದಿರೈರಸ ತಂದೆ ಮಹಿಪತಿ ಕಂದ ಪ್ರೀಯ ಮುಕುಂದನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮಿಸುವೆ ನಿನ್ನ ಶ್ರೀಗುರುವೆ ಅಮಿತಾನಂದಾತ್ಮಸ್ವರೂಪನೇ ಶಮನ ಮಾತು ಈ ಭವಭಾಧೆಯ ನೀ ಚಿನುಮಯ ಮೂರುತಿಯೇ ಪ ಬೆಂದೆನು ಸುಖದುಃಖಗಳಲಿ ನಾ ಬಹು ನೊಂದೆನು ಜನಿಮೃತಿ ಹೊಂದುತಾ ಎಂದಿಗೆ ಪರಮಾನಂದವ ಪಡೆವೇ ಬಂದೆನು ಶರಣಾಗಿ 1 ಭೋಗದಿ ಸುಖಿಸುವೆನೆಂಬುವಾ ಅನು ರಾಗದಿ ವಿಷಯಗಳಲಿ ಸಿಲುಕಿ ಭೋಗಿಸಿದಂತೆಯೆ ವಾಸನಾ ಬಲ ವಾಗಂತ ಬಂದಿತು ಮನದಲ್ಲಿ 2 ಭವ ರೋಗದಿ ಬಳಲುವೆನೀಗಲೇ ತ್ಯಾಗದಿ ನಿಜಸುಖ ದೊರಕುವ ರೀತಿಯ ತಿಳುಹಿಸು ಗುರುವರನೆ 3 ವಿಶ್ವದ ತೊಡಕನು ಹಾಕಿಕೊಂತು ಈಶ್ವರನನ್ನೇ ಮರೆತಿರುವೆ ನಶ್ವರವಾಗಿಹ ಈ ಜಗವನು ಶಾಶ್ವತವೆಂದೇ ತಿಳಿದಿರುವೇ 4
--------------
ಶಂಕರಭಟ್ಟ ಅಗ್ನಿಹೋತ್ರಿ
ನಮೋ ನಮೋ ನಂದಕುಮಾರ ನಿನ- ಗೆದುರ್ಯಾರೊ ಯದುಕುಲ ವೀರ ಭಜಿ- ಸುವ ಭಕ್ತ ಜನರುದ್ಧಾರ ಮಾಡೊ ಪರಮ ದಯಾಳು ನೀ ಸರ್ವ ಸ್ವತಂತ್ರ ನಿನ್ನ ಧ್ವಜ ವಜ್ರಾಂಕುಶ ರೇಖಾ ವೆಂಕಟಾದ್ರೀಶ ನಮೋ ನಮೋ ಪ ಶ್ರೀಶ ಜಗದ್ಭರಿತ ನೀನು ಒಂದು- ಕಾಸಿಗ್ವಿಷಯಗಳಲ್ಲ ನಾನು ನಿನ್ನ ದ(ರ್ಶ)ನ ಹಾರೈಸುವೆನು ಪರಮ ನುಗ್ರ(ಹ)ದಿ ಪಾಲಿಸೋ ನೀನು ಹರೇ ದೋಷರಹಿತ ಎನ್ನ ದೋಷನಾಶನ ಮಾಡಿ ಶೇಷಶಯನ ಶ್ರೀನಿವಾಸ ನೀ ದಯಮಾಡೊ1 ಬಾಯಿ ಬೀಗವನ್ಹಾಕಿ ಚರಿಯೆ ಗಂ- ಡಾರತಿ(?) ಶಿರದ ಮೇಲ್ಹೊರೆಯೆ ನಿನ್ನ ನಾಮವ ಕೊಂಡಾಡಲರಿಯೆ ಪಾದ- ಚಾರ್ಯಾಗಿ ಬರುವುದೀಪರಿಯೆ ತಿಳಿದು ಮಾನ್ಯದೊಕ್ಕಲು ಎಂದು ಬಹುಮಾನದಿಂದಿಟ್ಟು ಮಾಧವ ಕರುಣದಿ 2 ಬಾಡಿಗಿದ್ದರಾಯನ್ಹಿಡಿಯ (?) ನಿನ್ನ ಅನುಮತಿಲ್ಲದೆ ದಾರಿ ನಡೆಯ ಬ್ಯಾಡ ಬಿಡು ಲೋಭಿತನವ ಎ- ನ್ನೊಡೆಯ ಬಿಡದೆ ಕಾಡುತ ಕಾಸು ಕವಡೆ ಕಡ್ಡಿ ಕಣಜಕ್ಕೆ ಈ ಪರಿ ಗಳಿಕೆ ದೇಶದ ಮೇಲೆ ಕಾಣೆನು 3 ಮುಡಿಪು ಬೇಡುವುದ್ಹೇಳೊ ಎಷ್ಟು ನಿನ್ನ ಬಡಿತ ತಡೆಯಲಾರೆ ಪೆಟ್ಟು ಮಡಿ ಮೈಲಿಗೆಂದರೆ ಅತಿಸಿಟ್ಟು ನಾ ಬಿಚ್ಚಾಡುವೆನೊ ಬೀಡ ಬಿಟ್ಟು ಪ ್ರ- ಸಾದ ತೀರ್ಥ ಬೇಕಾದರೆ ಕ್ರಯಕಟ್ಟಿ ಗಂ- ಟ್ಯಾರಿಗೆ ಮಾಡುವಿ ಹೇಳೆನಗೊಂದಿಷ್ಟು 4 ಸತಿಗೆ ಮಾಡುವೆ ಲಕ್ಷ್ಮೀಪತಿಯೆ ನಿನ ಸುತ ಸತ್ಯಲೋಕದಧಿಪತಿಯೆ ಅತಿ ಹಿತ ಭಕ್ತರಿಗೆ ಭಿಕ್ಷೆಗತಿಯೇ ನೀಡಲು ಧನವೊಲ್ಲದೆ ಬೇಡುವರೊ ಸದ್ಗತಿಯ ನಿನ- ಗತಿಯಾಸೆ ಘನತ್ಯಲ್ಲ ಗತಿಪ್ರದಾಯಕ ಕೇಳೊ ಪೃಥುವೀಶ ನಿನ್ನದಲ್ಲವೆ ಸಕಲೈಶ್ವರ್ಯ 5 ಕನಕಗಿರಿದೊರೆಯೆಂಬೊದೆಲ್ಲೊ ಬಂದ ಜನಕೆ ಅನ್ನವ ನೀಡಲೊಲ್ಲ್ಯೊ ಜಗ- ಜನಕ ನಿನ್ನನು ಕಾಣಲಿಲ್ಲೋ ನಾನಿ- ರ್ಧನಿಕನೆಂಬುವುದು ನೀ ಬಲ್ಲ್ಯೊ ಎನ- ಗನುಕೂಲ ಧೈರ್ಯವ ಕೊಟ್ಟು ನಿನ್ನ ದರುಶನ ಸನಕಾದಿಗಳೊಡೆಯ ನಿನ್ನ ಮನಕೆ ಬಂದರೆ ನೀಡೊ6 ಶಂಕರ ಸುರರಿಂದ್ವಂದಿತನೊ ನಾ ಕಿಂಕರ ನರರಿಂದ ನಿಂದಿತನೊ ನೀ ಮಂಕುಜನರ ಪಾಪ ಪರಿಹಾರಕನೊ ಹರೇ ಶಂಖ ಚಕ್ರಾಂಕಿತ ಭೀಮೇಶಕೃಷ್ಣನ ನಾಮ ಶಂಕೆಯಿಲ್ಲದೆ ಕೊಟ್ಟು ವೆಂಕಟ ದಯಮಾಡೊ 7
--------------
ಹರಪನಹಳ್ಳಿಭೀಮವ್ವ
ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣ ನಮೋ ಬಾದರಾಯಣ ನರನ ಪ್ರಾಣ ಪ ಶಿವನ ಮೋದದಲಿ ಪಡೆದೆ ಶಿವರೂಪದಲಿ ನಿಂದೆ ಶಿವನೊಳಗೆ ಏರಿದೆ ಶಿವನಿಗೊಲಿದೆ ಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆ ಶಿವನ ಮಗನಾ ಪಡೆದೆ ಶಿವನ ಕಾಯ್ದೆ1 ಶಿವಗೆ ಸಹಾಯಕನಾದೆ ಶಿವನ ಕಂಗಡಿಸಿದೆ ಶಿವನ ಧನುವನು ಮುರಿದೆ ಶಿವನೊಲಿಸಿದೆ ಶಿವನ ಜಡ ಮಾಡಿದೆ ಶಿವನ ಒಡನೆ ಬಂದೆ ಶಿವಮುನಿಗೆ ಉಣಿಸಿದೇ ಕೇಶವನೆನಿಸಿದೇ 2 ಶಿವನ ಜಡೆಯೊಳಗಿದ್ದ ಶಿವಗಂಗೆಯ ಪೆತ್ತೆ ಶಿವನ ಕೂಡಲಿ ಕಾದಿದವನ ಭಾವ ಶಿವ ಭಕ್ತನ್ನ ನಿನ್ನವನಿಂದ ಕೊಲ್ಲಿಸಿದೆ ಶಿವನ ಶೈಲವನೆತ್ತಿದವನ ವೈರಿ3 ಶಿವ ನುಂಗಿದದ ನುಂಗಿದವನ ಒಡನಾಡುವ ಶಿವ ಪರಾಶಿವ ನಿನ್ನ ಶಿವ ಬಲ್ಲನೇ ಯವೆ ಇಡುವನಿತರೊಳಗೆ ಧವಳ ಹಾಸಾ4 ಶಿವನ ಮೇಲಿದ್ದ ಸಹಭವೆ ರಮಣ ಸರ್ವದಾ ಶಿವನೊಳಗಿಳಿದ ಶಿಷ್ಯನಿವ ಹರಾತೀ ತಲ್ಪ ಶಿವ ಸಮಾನಿಕ ರೂಢ ಶಿವನ ಮನೆ ತೊಲಗಿಸುವ ಶಿವ ಬಾಂಧವಾ 5 ಶಿವನ ಧೊರಿಯೆ ಜ್ಞಾನ ಶಿವ ಹಚ್ಚುವದೆ ಕೊಡು ಶಿವಮಣಿ ಎನಿಸುವ ಸ್ತವ ಪ್ರಿಯನೇ ವಾಹನ ವೈರ ಶಿರವ ತರಿಸಿದೆ ದೇವ ಶಿವ ಪ್ರತಿಷ್ಠಿಸಿದೆ ಶಿವಗೆ ಕಾಣಿಸದಿಪ್ಪೆ6 ಶಿವನ ಸೋಲಿಸಿದವನ ಜವಗೆಡಿಸಿದೆ ಶಿವನು ಕುದರಿಯ ಹೆರವ ಅವನು ಕಾಯಿದ ಗೋವ ಶಿವನವತಾರ ಶಸ್ತ್ರವನು ಹಳಿದೆ 7 ಶಿವನಧರ್Àನಾಗಿ ದಾನವನು ಕೊಂದ ಮಹಿಮಾ ಶಿವಋಷಿ ಪೇಳಿದ ಯುವತಿ ರಮಣಾ ಶಿವನ ವೀರ್ಯವ ಧರಿಸಿದವನ ಮುಖದಲಿ ಉಂಬ ಅವರ ಬೆಂಬಲವೇ ಯಾದವಕುಲೇಶಾ 8 ಶಿವಗೆ ತ್ವಂಚ ಬಾಹುಯೆಂದು ಪೇಳಿ ಮೋಹ ದಿವಿಚಾರಿಗಳ ತಮಸಿಗೆ ಹಾಕುವೆ ಶಿವಮೂರುತಿ ನಮ್ಮ ವಿಜಯವಿಠ್ಠಲರೇಯ ಶಿವನಾಳು ಮಾಡಿ ಆಳುವ ದೈವವೇ9
--------------
ವಿಜಯದಾಸ
ನಮ್ಮ ನಿಮ್ಮಗೊಂದಾದ ಮಾತು ಬ್ರಹ್ಮಾದಿಗಳು ಹೋದರು ಸೋತು ಒಮ್ಮನಾದರೆ ತಿಳಿವದಂತು 1 ಬಿಟ್ಟು ಕೊಡೊ ನಿನ್ನ ಬಾಜಿ ಗಂಟುಹಾಕಿಹೆ ಬಲು ಗಜಿಬಿಜಿ ಮುಟ್ಟಲಾರದು ಮೊನೆ ಸಣ್ಣ ಸೂಜಿ ಗುಟ್ಟು ಹೇಳೊ ಸದ್ಗುರು ದೇವಾಜಿ 2 ನಮ್ಮ ನಿಮ್ಮಳಗ್ಯಾಕೆ ತೊಡಕು ಇಮ್ಮನಾದರೆ ಹುಟ್ಟಿತು ಒಡಕು ಹಮ್ಮು ಎನ್ನೊಳಗಿಲ್ಲ ನೀ ಹುಡುಕು ಸುಮ್ಮನ್ಯಾಕಿದು ಶ್ರಮೆಯ ತಿಡುಕು 3 ಗುರು ಹೇಳಿದ ಮಾತಿಗೆ ಮುಟ್ಟಿ ತೋರಿ ಕೊಡಬೇಕು ನೀನೆ ಗಟ್ಟಿ ಅರಿತ ಮ್ಯಾಲೆ ಮಿಸುಕನು ತುಟ್ಟಿ ಖರೆ ಮಾಡಿಕೊ ಜಗಜಟ್ಟಿ 4 ಒಂದು ಮಾತು ಎಂಬುದು ಬಲ್ಲಿ ಸಂದ ಸಂದೇಹ್ಯಾರಿಸೊ ನೀ ಇಲ್ಲಿ ಕಂದ ಮಹಿಪತಿ ಮನದಲ್ಲಿ ಚಂದವಾಗಿರೊ ನೀನೆವೆ ಅಲ್ಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು