ಒಟ್ಟು 548 ಕಡೆಗಳಲ್ಲಿ , 71 ದಾಸರು , 473 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡು ಬಿಡು ಮಾಯವನು ಕೆಡದಿರು ಕಪಟದಲಿ | ನಡಿ ನಡಿ ಸುಪಥವ ಜಗದೊಡಿಯೆನ ನೆನೆ ಮನವೆ ಪ ನಾನು ನನ್ನದು ಎಂಬೊ ಹೀನ ವಚನ ಸಲ್ಲ ಗೇಣುದರವಲ್ಲದೆ ಪೊರೆವದು ಮತ್ತೇನಾದರು ಉಂಟೆ 1 ಮಡದಿ ಮಕ್ಕಳ ನೋಡಿ ಕಡು ಹಿಗ್ಗಿ ಕೆಡಬೇಡ | ಕಡು ಮುನಿದೆಮನಾಳುಗಳು ಪಿಡಿದೆಳೆದೊಯ್ವಾಗ 2 ಇರುಳು-ಹಗಲು ನೀನು ಹರಿಸ್ಮರಣೆ ಚಿತ್ತದಲಿ | ಜನ್ಮಾಂತರ ಪಾಪ ಪೋಗುವುದು 3 ಜ್ಞಾನ ಮಾರ್ಗವಿಡಿದು ಆನಂದ ಮೂರುತಿಯ ಧ್ಯಾನದಿಂದಲಿ ಕಾಣ್ಯ ದೈನ್ಯವೃತ್ತಿಯ ಬಿಟ್ಟು ಹಾನಿ ವೃದ್ಧಿಯ ಜರಿದು4 ಅತಿ ಕಾಮಾತುರನಾಗಿ ರತಿಯಲ್ಲಿ ಸಿಗದಿರು | ಕರ್ಮ ವ್ಯಾಳೆವ್ಯಾಳೆಗೆ ಶ್ರೀಪತಿಗರ್ಪಿತವೆನ್ನು5 ಸಂತೋಷಗಳು ಬರಲಿ ಸಂತಾಪಗಳು ಇರಲಿ | ಇಂತು ಇವರಿಗೆಲ್ಲ ಪ್ರೇರಕ ಹರಿ ಜಗದಂತರ್ಯಾಮಿ 6 ಮಾನಿನಿ ನಂದನರು ಆರು ? | ತನುವೆ ನಿನ್ನದಲ್ಲ ತಿಳಿದುಕೊ ಗತಿ ಸಾಧನಕೆ ವಿಜಯವಿಠ್ಠಲ7
--------------
ವಿಜಯದಾಸ
ಬಿಡು ಬಿಡು ವಾಜಿಥರವಲ್ಲಾ | ಪ್ರಾಣಿ ಪ ಕಡಲಶಯನೆಚ್ಚರ ಗಳದೆಲ್ಲಾ | ಬಿಡದೇ ನಿನ್ನ ನೀ ಮರೆವುದು ಸಲ್ಲಾ | ಎಡಬಲ ನೋಡದೆ ನೀ | ವಿಡಿ ಗುರುಗಳ ಅಡಿಗಳ | ಪಡಿ ನಿಜಗತಿಯಾ 1 ಏಸು ಜನ್ಮವ ಸುತ್ತಿ ಬಂದ್ಯೋಯತ್ತಿ | ನ್ನೇಸು ಜನ್ಮವ ತಾಳಬೇಕು ಮುಂದ | ಹೇಸಲಿಲ್ಲವನೊಂದು ಘಾಸಿಯಿಂದ | ಅಶನ ವ್ಯಸನ ತೃಷಿ ಭಸಿಯೊಳು ನಿಶಿದಿನ | ಪಶುವಿನ ಪರಿಯಲಿ ದೆಶೆಗೆಡ ಬ್ಯಾಡಾ 2 ಎಂತು ಹೇಳಲಿನ್ನು ಮನವೇ ನಾನು | ಸಾಧು | ಸಂತರ ಸಂಗದಿ ಬಾಳು ನೀನು | ಅಂತರಂಗದಿ ಹರಿ ಮೂಡುವನು | ಹಿತಾಹಿತ ನರಿತು ಸುಮತಿಯಲಿ ಗುರು ಮಹೀ | ಪತಿ ಸುತ ಪ್ರಭು ಸ್ತುತಿರತಿಯಲಿ ಬಾಳು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೆಜ್ಜರವಿಡಿಯಲು ಗುರುಭಕ್ತಿಗೆ ತಾ ಹೆಜ್ಜೆಜ್ಜಿಗೆ ನಿಧಾನ ಸಜ್ಜನರನುದಿನ ಕೊಡುವರು ಸುಖ ಸಾಮ್ರಾಜ್ಯದ ಸುಸನ್ಮಾನ ಧ್ರುವ ಅಂಜಿಕೆಂಬುದು ಅಂಜನ ಕಣ್ಣಿಗೆ ಕಂಜನಾಭನ ಖೂನ ರಂಜಕವೆಂಬುದು ಇದೇ ಭಕ್ತರಿಗೆ ನಿಜತತ್ವದ ಸಾಧನ ರಂಜನೆದೋಲು ಒಣ ಭಂಜನೆ ತಾ ಪ್ರಾಂಜಳಾಗುರು ಙÁ್ಞನ ನಿರಂಜನ ಸೇವೆಯ ಮಾಡುದೆ ಪೂರ್ಣ 1 ಭಕ್ತಿಗೆ ಸಲಿಗಿ ಕೆಲಸಕೆ ಬಾರದು ಯುಕ್ತಿವಂತರು ನೋಡಿ ಶಕ್ತನಾದರೆ ಬಾಗಿರಬೇಕು ಅಹಂ ಭ್ರಮ ಈ ಡ್ಯಾಡಿ ಯುಕ್ತಿಗಿದೊಂದೇ ಕೀಲು ದೃಢ ಭಕ್ತಾಶ್ರಯ ಮಾಡಿ ಭೋಕ್ತಭಾವದ ಸದ್ಗುರುರಾಯ ತಾ ಬಾಹನು ಕೈ ಗೂಡಿ 2 ಅಂಜಂಜಿ ನಡೆದಮ್ಯಾಲೆ ಮಹಿಪತಿ ನಿಶ್ಯಂಕ ನೀನಾಗೊ ಅಂಜುವ ಭವಭಯ ನೀಗೊ ಗುಂಜಾಗಿಹ ಕರ್ಮದ ಬಾಧಿಯೊಳು ಸಿಲಕುವದೆಲ್ಲ ಸೋಂಗೊ ರಂಜಿಸುತಿ ಹ್ಯ ಸದ್ಗುರು ಪಾದಕೆ ನೀ ವಾಜಿಲಿ ಶರಣ್ಹೋಗೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೇಗ ಮಾಡೋ ಭಕುತಿ ಆಗುವುದು ಮುಕುತಿಆಗ ಈಗ ಎನ್ನದಿರು ಇದೆ ನಿನಗೆ ಮುಕುತಿ ಪ ಧ್ಯಾನ ಹಲವ ಬಿಡು ಧ್ಯಾನ ಆತ್ಮನ ಮಾಡುಧ್ಯಾನ ಧಾರಣ ಸಮಾಧಿಯಂಗಳ ನೋಡು ನಿಜವ ಕೂಡು 1 ಎಚ್ಚರ ಬಾಹಿರ ಮರೆತು ಎಚ್ಚರ ಅಂತರವರಿತುಎಚ್ಚರ ಬಾಹಿರ ಅಂತರ ಮರೆತು ಎಚ್ಚರ ಬೇರರಿತು 2 ನಿತ್ಯ ಬಿಡದೆ ವಾದಕೆ ಮಯ್ಯ ಕೊಡದೆಸಾಧಿಸು ನಿತ್ಯಾನಿತ್ಯಾ ವಸ್ತುವ ಸಾಧಿಸು ಗುರುವ ಹಿಡಿದೇ 3 ಬೇರೆ ಎಂಬುದ ಮಾಣು ಎಲ್ಲವ ನಿನ್ನಲೆ ಕಾಣು ನಾಬೇರೆಯೆಂಬ ಮತಿಯ ಮಾಣು ಬಳಿಕ ಜಾಣ 4 ಬೋಧ ಬೋಧ ಗುರಿವಿಡಿಯೋ 5
--------------
ಚಿದಾನಂದ ಅವಧೂತರು
ಬೇಡ ಬೇಡ ಹೋಗೆಂದು ಕಾಡದಿರು ಕೃಪೆಯೊಂದ ಬೇಡದಿರಲಾರೆ ಮಾಂಗಿರಿಯರಂಗ ಪ ಬೇಡುವನ ಕೈ ಕೀಳು ನೀಡುವನ ಕೈ ಮೇಲು ಬೇಡಿದಲ್ಲದೆ ಕೃಪೆಯ ಮಾಡನೈರಂಗಾ ಅ.ಪ ಗಾನಕೆ ನಲಿಯುವೆಯೋ ಧ್ಯಾನಕೆ ಒಲಿಯುವೆಯೋ ಜ್ಞಾನಕೆ ಸಿಗುವೆಯೋ ನಾನರಿಯೆನು ಗಾನದರಿವೆನಗಿಲ್ಲ ಧ್ಯಾನಮಾಡುವನಲ್ಲ ಜ್ಞಾನಾನುಭವವಿಲ್ಲ ಆಧಾರವಿಲ್ಲ 1 ನೀನೆನ್ನ ಕಡೆಗಣಿಸಿ ಹೀನ ಹೋಗೆಂದೆನಲು ನಾನಳುವೆನನವರತ ಶ್ವಾನದಂತೆ ಸೂನು ಬಾ ಬಾರೆಂದು ಸಾನುರಾಗದಿ ರಮಾದೇವಿ ಸಂತೈಪಳು 2 ಎನ್ನಮ್ಮ ಕೃಪೆಯಿಂದ ನಿನ್ನ ಕಾಲ್ವಿಡಿಯೆಂದು ಎನ್ನ ಕಳುಹುತ ನಿನಗೆ ಎನ್ನ ತೋರ್ದು ಎನ್ನನತಿಕೃಪೆಯಿಂದ ಮನ್ನಿಸೆನ್ನುವಳಾಗ ನಿನ್ನ ಕೃಪೆ ಯೆನಗುಂಟು ಮಾಂಗಿರೀಶಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬ್ರಹ್ಮದೇವರ ಸ್ತೋತ್ರ* ಮಟ್ಟತಾಳ ಕಂಬು ವಿಹಂಗ ಗಮನ ವಿಭುವೆನಂಬಿದವರ ಪೊರೆವ ವ್ಯಾಸವಿಠಲ ನೀ-ನೆಂಬುವರನ ನಂಬಿದ ನೀಚನ ಮರಿಯಾದಿರು 2 ತ್ರಿವಿಡಿತಾಳ ಜಿಹ್ವೆ ನುಡಿಯದುಸವಿಯದ ನಾನಾ ರಸವನುಂಡು ಬಹುಕಾಲಸವೆದು ಪೋದವು ನಟ್ಟ ಮನವು ಇನ್ನು ತಿರಗದುತವ ವಿಸ್ಮøತಿಯಲಿಂದ ಭೂ ವನದೊಳಿದ್ದ ಮಾ-ನವರ ಚರಿಯದಲಿ ಕೋಪವೆ ತಗ್ಗದುಎವೆ ಇಡುವಿನಿತು ಕಾಲವಾದರು ಪೂಜಾವಿವರದಲ್ಲಿಗೆ ಚಿತ್ತವು ನಿಲ್ಲದು ಭವವಿದೂರನೆ ಕೇಳುಕವಲ ಬುದ್ಧಿಯಲಿಂದ ನವನವ ರೂಪದ ಯುವತಿಯರನಿವಹದ ಅನುಭವ ದ್ವಿವಿಧವಿಂದಿಗೇ ಕಾ-ಯವ ನೋಡಲಿದ್ದಂತೆ ಇಲ್ಲದಂತೆಧ್ರುವದಲಿ ನುಡಿವೆ ಎನ್ನವಗುಣವಿನ್ನೊಂದುಭವಸಾಗರವ ದಾಟಿಸುವ ಜ್ಞಾನಿಗಳ ಪ್ರೀತಿಯನೆ ತ-ಗ್ಗುವಂತೆ ಚತುರ ತೋರುವೆಇವುಗಳಿಂದಾಗುವ ಜನನ ಬಾಧಿಯ ಬಲ್ಲೆಜೀವರಲ್ಲಿ ಹೀನ ಜನ್ಮವ ಬರುವದು ಬಲ್ಲೆಸ್ಥಾವಿರಾಯ ವ್ಯಾನಾದಿ ನೆಗುವವು ಪುಣ್ಯಾಖ್ಯಗಿರಿಗೆಪವಿಯಂಬದನುಗಾಲ ಪಠಿಸಬಲ್ಲೆಪವನನಂತರ್ಯಾಮಿ ಶ್ರೀವ್ಯಾಸವಿಠಲ ಇಂಥಅವಿವೇಕ ಮನುಜಂಗೆ ಆವಗತಿಯಾಗುವದೊ 3 ಅಟ್ಟತಾಳ ಅನ್ಯಾಯ ನಡತಿಗಳ ಚರಿಸುತಲಿಪ್ಪಮನುಜಾಧಮನಿಗೆ ಮಹಿಯೊಳಗೆ ವಿಪ್ರಜನ್ಮವ ನೀನಿತ್ತದಾವ ಬಗೆಯ ಕಾಣೆಇನ್ನೀಗ ಮಾಡುವ ಅನ್ಯಾಯ ನಡತಿಯುತಣ್ಣನ ಕಿಡಿಯಂತೆ ತತ್ಕಾಲಕಿಪ್ಪದುಘನ್ನ ಬವಣೆ ಮುಂದೆ ಅನುಭವವೇ ನಿಜಪನ್ನಗ ಶಯನ ಶ್ರೀ ವ್ಯಾಸವಿಠ್ಠಲ ಸುಪ್ರಸನ್ನ ವದನ ದೇವ ನಿನ್ನ ಪಾದವೆ ಗತಿ 4 ಆದಿತಾಳ ಪಾದ ಚೆನ್ನಾಗಿ ಪೊಂದಿಸಿನಿನ್ನವನಿವನೆಂದು ಮನುಜರಿಂದ ನುಡಿಸಿನಿನ್ನ ಕೀರ್ತನೆಯ ವದನದಿಂದ ಪೇಳಿಸಿಇನ್ನು ಈ ಬಗೆ ಮಾಳ್ಪರೆ ಘನ್ನದಯಾಂಬುಧೇಮನ್ನ ವಾಚ ಕಾಯದಿ ಅನ್ಯಾಯ ಪೆಚ್ಚಿಸದೆಎನ್ನ ಬೆಳವಿಗೆಯಂತೆ ಬೆಳಸದಂತೆ ಮಾಡಿದೆಮನ್ನಣಿಸುವ ಜನರಿಂದ ಮಾಂದ್ಯವ ಮಾಡಿಸಿದೆಸನ್ಯಾಯವಲ್ಲ ಧೊರಿಯೆ ನಿನ್ನ ಚಿತ್ತವೊ ಸ್ವಾಮಿಸನ್ಮುನಿಗಣ ಪ್ರೀಯ ವ್ಯಾಸವಿಠ್ಠಲರೇಯಾನಿನ್ನವರವನೊ ನಿನ್ನ ಸರಿ ಬಂದ ಬಗೆ ಮಾಡೊ 5 ಜತೆ ವೇಣುಗೋಪಾಲ ದಾಸರ ಮನ ಮಂದಿರಾ |ಪ್ರಾಣ ನಿನ್ನದೊ ವ್ಯಾಸವಿಠ್ಠಲ ಗೋಪಾಲಕೃಷ್ಣ ||
--------------
ವ್ಯಾಸವಿಠ್ಠಲರು
ಭಕುತ ಜನ ಮುಂದೆ ನೀನವರ ಹಿಂದೆ ಪ ಯುಕುತಿ ಕೈಗೊಳ್ಳದೊ ಗಯ ಗದಾಧರನೆ ಅ ಪ ಕಟ್ಟೆರಡು ಬಿಗಿದು ನದಿ ಸೂಸಿ ಪರಿಯುತ್ತಿರೆ | ಕಟ್ಟಲೆಯಲಿ ಹರಿಗೋಲು ಹಾಕಿ || ನೆಟ್ಟನೆ ಆಚೆಗೀಚೆಗೆ ಪೋಗಿ ಬರುವಾಗ | ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ ? 1 ಕಾಳೆ ಹೆಗ್ಗಾಳೆ ದುಂದುಛಿ ಭೇರಿ ತಮಟೆ ನಿ- | ಸ್ಸಾಳ ನಾನಾವಾದ್ಯ ಘೋಷಣಗಳು || ಸಾಲಾಗಿ ಬಳಿವಿಡಿದು ಸಂಭ್ರÀಮದಿ ಬರುವಾಗ | ಆಳು ಮುಂದಲ್ಲದೆ ಅರಸು ತಾ ಮುಂದೆ?2 ಉತ್ಸಾಹ ವಾಹನದಿ ಬೀದಿಯೊಳು ಮೆರೆಯುತಿರೆ | ಸತ್ಸಂಗತಿಗೆ ಹರಿದಾಸರೆಲ್ಲ || ಸಿರಿ ವಿಜಯವಿಠ್ಠಲ ವೆಂಕಟಾಧೀಶ ವತ್ಸ ಮುಂದಲ್ಲದೆ ಧೇನು ತಾ ಮುಂದೆ ? 3
--------------
ವಿಜಯದಾಸ
ಭಜಿಸಿದ್ಯಾ | ವೆಂಕಟನಾ ನೀ | ಭಜಿಸಿದ್ಯಾ ಪ ಭಜಿಸಿದ್ಯ ಈ ಭಾಗ್ಯನಿಧಿಯ | ನೋಡು | ತ್ರಿಜಗವಂದಿತ ಗುಣಾಂಬುಧಿಯಾ ||ಆಹ|| ಪಂಕಜ ಕರ್ಣಿಕೆ ವಾಸ | ಅಜ ಸುರಾರ್ಚಿತ ಪಾದರಜ ತಮದೂರನ್ನ ಅ.ಪ. ಮನ ಸೋಲಿಸುವ ಸುಲಲಾಟ | ಚನ್ನ | ಫಣಿಗೆ ಕಸ್ತೂರಿನಾಮ ಮಾಟ | ನ ಮ್ಮನು ಪಾಲಿಸುವ ವಾರೆನೋಟ |ಆಹ| ಕನಕ ಮೋಹನ ಕುಂಡಲಾ ಕರ್ಣ ಮಿನುಗುವ ಕದವು ಆವಿನ ಸೋಲಿಪ ನಿತ್ಯಾ1 ಭೃಂಗಕುಂತಳ ನೀಲಕೇಶ | ಹುಬ್ಬು | ಚಾಪ ವಿಲಾಸ | ಉ | ತ್ತುಂಗ ಚಂಪಕ ಕೋಶನಾಸ | ರಸ ರಂಗು ತುಟಿ ಮಂದಹಾಸ || ಆಹ || ತಿಂಗಳು ಯೆಳೆ ಬೆಳೆದಿಂಗಳು ಮೀರಿ ಭೂ ಕೃತಿ ತಿರುವೆಂಗಳ ಸ್ವಾಮಿಯ 2 ಪರಿಮಳವೀಳ್ಯ ಕರ್ಪೂರ | ಇಟ್ಟು | ಜಲಧಿ ಗಂಭೀರ | ದಂತ ಪರಿಪಜ್ಞೆ ಸಮ ವಿಸ್ತಾರ ||ಆಹ || ಮಿನುಗುವನಂತ ಚಂದೀರ ತೇಜಾಧಿಕ ಮುಖ ಪರಿಪರಿ ವೇದ ಉಚ್ಚರಿಸುವ ಚತುರಾರ 3 ಬಕುಳಾರವಿಂದ ಮಲ್ಲೀಗೆ | ಅದು | ಕುರುವಕ ಪನ್ನೀರು ಸಂಪಿಗೆ | ಭೂಚಂಪಕ ಜಾಜಿ ಯಿರುವಂತಿಗೆ | ಪೂಕೇತಕಿ ಮರುಗ ಶಾವಂತಿಗೆ ||ಆಹ|| ಸಕಲ ಪೂತರುವಿರೆ ವಿಕಸಿತ ಮುಕುಳಿತ ಮಕರಂದ ಮೊರದ್ವಂದ್ವ ಕಸ್ತೂರಿಯ ನಿಂದು4 ಕರತಾಳರೇಖೋಪರೇಖ | ಕಾಂತಿ | ಅರುಣಸಾರಥಿ ಮಯೂಖ | ಬೇರೆ | ಪರಿ ಶೊಭಿತ ಹಸ್ತ ಶಂಖ | ಗದೆ | ಧರಿಸಿದ ಚಕ್ರ ನಿಶ್ಶಂಕ || ಆಹ | ಸರಿಗೆ ಕೌಸ್ತಭಮಣಿ ಸಿರಿವತ್ಸವನ ಮಾಲೆ ವೈಜಯಂತಿ ಮಂಜರಹೀರ ಹಾರನ್ನ5 ಕಡಗ ಕಂಕಣ ಮುದ್ರೆ ಬೆರಳ | ಪಾಣಿ | ನಿಡಿತೋಳ ಕಕುಭುಜಿ ಕೊರಳ ಸ್ಕಂಧ ವಿಡಿ ಸಪ್ತವರಣ ವಿಸರಳ | ಬೆನ್ನು | ಮುಡಿಯವಿಟ್ಟ ಮಣಿಹವಳ ||ಆಹ | ಝಡಿತದ ಪವಳ ವಡಸೀದ ಕೇಯೂರ ವಡನೆ ಕಾಯಿಕ ಕೀರ್ತಿ ವಡಲೀಲಿ ಮೆರೆವನ್ನ6 ಮುತ್ತು ವೈಢೂರ್ಯ ಪ್ರವಾಳ | ಪಚ್ಚೆ | ಕೆತ್ತಿದ ಪದಕನ್ಯಾವಳ ಸುತ್ತ ಸುತ್ತಿದ ಸನ್ಮುಡಿವಾಳ | ಇತ್ತ ತುತಿಪ ಜನಕೆ ಜೀವಾಳ ||ಆಹ || ಪ್ರತ್ಯೇಕವಾಗಿ ತೂಗುತ್ತಿಹ ಸರಗಳ ಸುತ್ತುಲಸಿಯ ಮಾಲೆ ಚಿತ್ರವಾಗಿರೆ ಬಹಳ 7 ಕೇಸರಿ ಅಂಬರ | ಗೋರೋ ಚನ ನಖಚಂದ ನಗಾರು | ಪೆಚ್ಚಿ | ತೆನೆ ಮೃಗನಾಭಿ ಪನ್ನೀರ | ವೆಳ | ಘನಪರಿಮಳ ಗಂಧಸಾರ ||ಆಹ || ಸೊಗಸು ಸಲಿಸುತ್ತ ಒಪ್ಪುವ ಘನರುಹ ತ್ರಿವಳಿಯಾ 8 ತ್ರಿವಳಿ ಉಪಗೂಢ ಜಠರ | ಅಖಿ | ಳಾವನೀ ಧರಿಸಿದಾ ಧೀರಾ | ಮೇಲೆ | ಕುಸುಮ ಮಂದಿರಾ | ಮೃಗದೇವ ಉಡಿನಡು ಧಾರಾ ||ಆಹ || ಭಾವ ಕಿಂಕಿಣಿ ತೋಳಲಿವಾಸನಾ ಬಿರು ದಾವಳಿಕೊಂಡರು ದೈತ್ಯಾವಳಿ ಹಾರನ್ನಾ 9 ಊರು ಜಾನು ಜಂಘ ಗುಲ್ಫ | ವಿ ಚಾರ ಶಕ್ರ ಮಾತು ಅಲ್ಪ | ಎನ್ನ ತೋರುನೆಯ ಅಗ್ರ ಸ್ವಲ್ಪ | ಗುಣ | ಸಾರಮಾಡಿಪ್ಪ ಸಂಕಲ್ಪ ||ಆಹ || ವಾರಣಕರದಂತೆ ಹಾರೈಸು ಈ ತನೂ ಪುರ ಕಡಗಾ ಗೆಜ್ಜೆ ಚಾರುಚರಣ ಪೆಂಡ್ಯಾ10 ಪಾದ | ಪಾಪ ಪಾದ | ಕಾಮ ಪಾದ | ಬಹು ಪಾದ ||ಆಹಾ|| ಅನಂತ ಚಿನ್ಮಯ ಒಮ್ಮೆ ನೀನೇ ಗತಿಯೆಂಬ ಮಾನವಗೆ ಬಂದು ಕಾಣಿಸಿಕೊಂಬನ11 ಮೃದುತಾಳಾಂಗುಲಿನಿಸಿ ಭಾಸ | ರಕ್ತ ಪದತಳ ಧ್ವಜ ವಜ್ರಾಂಕುಶ | ಚಕ್ರ ಪದುಮ ಚಿಹ್ನೆ | ನಿರ್ದೋಷ | ಸುಧಿ ಸುಧ ಕಥಾಪಾಠ ಸರಸÀ ||ಆಹ|| ತ್ರಿದಶನಾಯಕ ಶಿವ ವಿಧಿಗಮುಗುಟ ಪಾದದಲಿ ಸಮರ್ಥವಾದರು ನೋಡು ತರುವಾಯ 12 ಆಪದ್ರಕ್ಷಕ ಸುರಾಧ್ಯಕ್ಷ | ಜಗ | ದ್ವ್ಯಾಪಕ ಕರುಣಾಕಟಾಕ್ಷ | ಜಾಗ್ರತ್ | ಸ್ವಪ್ನದಲಿ ನೀನೆ ದಕ್ಷಾ | ನಗೆ | ಆಪನ್ನರಿಗೆ ನೀನೆ ವೃಕ್ಷಾ ||ಆಹ || ರೂಪರೂಪಾಂತರ ವ್ಯಾಪಾರ ಮಾಳ್ಪನ್ನ ಆಪಾದ ಮೌಳಿ ಪರಿಯಂತರ ನೀನು 13 ಹಿಂದಾಣ ಅನುಭವ ಧಾನ್ಯ | ಲೋಹ | ತಂದು ಸಂಪಾದಿಸೋ ಜ್ಞಾನ | ಭಕ್ತಿ | ಯಿಂದ ಮುಂದಕೆ ನಿಧಾನ | ಚಿತ್ತ | ಯಿಂದು ಕೊಂಡಾಡೋ ಮುನ್ನೀನ ||ಆಹ|| ಬಂಧನ ಹರಿಸಿ ಆನಂದಾವ ಕೊಡುವ ಮು- ಕುಂದ ಅನಿಮಿತ್ತ ಬಂಧು ವೆಂಕಟನಾ ನೀ14 ನಿತ್ಯ | ನೀಲ | ಪುಣ್ಯ | ವ್ರಜವ ಪಾಲಿಸುವ ವಿಶಾಲ | ವಿತ್ತು | ನಿಜದೊಳಗಿಡುವ ಈ ಕೋಲ ||ಆಹ|| ವ್ರಜದಲ್ಲಿ ಪುಟ್ಟಿದ ಸುಜನಾರಾಂಬುಧಿ ಸೋಮ | ವಿಜಯವಿಠ್ಠಲರೇಯ ಗಜರಾಜವರದನ್ನ 15
--------------
ವಿಜಯದಾಸ
ಭಂಡನಾದೆ ಸಂಸಾರಕೊಂಡದೊಳಗೆ ಬಿದ್ದು ಕಂಡುಕಾಣದಂತಿರುವರೇ ಪುಂಡರೀಕನಯನ ಪ ಅಶÀನ ವಸನಕ್ಕಾಗಿ ದೆಸೆಗೆಟ್ಟು ಬಾಯ್ಬಿಡುತ ಅಸುವ ಕರದೊಳ್ಪಿಡಿದು ವಸುಧೆಯ ಜನರ ಬಸವಳಿದು ಬೇಡಲು ಕಣ್ಣೆಸಿದು ಬೈಯಲು ತಲೆಬಾ ಗಿಸಿಕೊಂಡು ನಿಂದೆ ಹರಿ ಉಸುರಲಳವಲ್ಲ 1 ರೊಕ್ಕದ ಆಸೆಗಾಗಿಕ್ಕೆಲದ ಜನರನ್ನು ತರ್ಕಿಸದೆ ದೈನ್ಯದಿಂ ಚಿಕ್ಕಮಗ ನಾ ಎನುತ ಫಕ್ಕನೆ ಕೈತಾಳನಿಕ್ಕುವರು ನಗಲು ಮಹ ದು:ಖದಿಂ ತಿರುಗಿದೆನು ಬಿಕ್ಕಿಬಿಕ್ಕಳುತ 2 ಯರ ಮೋಹಿಸಿ ದಂಡಿಸಿದೆ ಮನೆಸತಿಯ ಕಂಡವರು ತಿದ್ದಿದರು ಚಂಡಿತನವಿಡದೆ ಕಂಡವರ ಅರ್ಥವನು ಮನೆಸೇರಿಸಿ ಬಂಡೆದ್ದು ಜನರೊಳಗೆ ಮಂಡೆಯೆತ್ತದೆಹೋದೆ 3 ತಪದಿಂದ ಹರಿಪಾದ ಜಪಿಸುವುದ ಮರೆದು ನಾ ಕೃಪಣತ್ವಜನಸೇವೆ ಅಪರೂಪಗೈದೆ ಚಪಲತ್ವತನದಿಂದ ಅಪಹರಿಸಿ ಪರರರ್ಥ ಸುಪಥಕ್ಕೆ ದೂರಾಗಿ ಅಪರಾಧಿಯಾದೆ4 ಕದ್ದು ತಿಂದೆ ನೆರಹೊರೆಯ ಬಿದ್ದೆ ದುರ್ಬವಣೆಯೊಳು ಬದ್ಧನಾಗಿ ಧರೆಮೇಲೆ ಹದ್ದಿನಂತೆ ಬಾಳ್ದೆ ತಿದ್ದಿ ನೀ ಎನ್ನ ತಪ್ಪುಬುದ್ಧಿಯನು ಕಲಿಸೆನ್ನೊ ಳಿದ್ದು ಪೊರೆ ದಯದಿಂದ ಮುದ್ದು ಶ್ರೀರಾಮ 5
--------------
ರಾಮದಾಸರು
ಭರಬರನೆ ಬಾಜಾರಕೆ ನಾ ಬಂದೆನಯ್ಯ ಚಿದಾನಂದನ ಮರೆಯಲಿಕೆ ಪ ಐವರು ಗೌಡರು ಕಟ್ಟಿದ ಪೇಟೆ ಆ ಪೇಟೆಗೆಐದು ನಾಲ್ಕು ಬಾಗಿಲುಗಳುಐದು ಮಂದಿ ಸೆಟ್ಟರು ಸೇರಿಹರು ಆವರಲ್ಲಿಯೆಐದು ಮಂದಿ ಚಲವಾದಿಗಳು1 ಭಾರ ನೇಮಲ್ಲಿದೆ 2 ತಡುಗರೆಂಬವಾಲೆ ಶೆಟ್ಟಿಗಳೆ ಅಲ್ಲಿಗಲ್ಲಿಗೆಪಡುವಲ ಕೋರಿ ಶೆಟ್ಟಿಗಳೇಕಡುಕರ್ಮಿ ಕೋಮಟಿ ಶೆಟ್ಟಿಗಳೇ ಬಾಯಿ ಘನವಾಗೆಬಡಬಡಿಪ ಪಟ್ಟಣ ಶೆಟ್ಟಿ 3 ಪಾಪವೆಂಬ ವಸ್ತ್ರದಂಗಡಿಯೇ ನಾ ನೋಡಲಾಗಿತಾಪವೆಂಬ ಜವಳಿ ಅಂಗಡಿಯೆಕೋಪವೆಂಬ ಕುಪ್ಪಸ ದಂಗಡಿಯೇಒಪ್ಪುತಲಿರೆ ಕಾಪಥವೆಂಬ ಸಕಲಾತ್ಮಂಗಡಿಯೇ 4 ಚಿ, ಛೀ ಎಂಬ ಚಿಕ್ಕ ತಕ್ಕಡ ಗಂಡಿಯೆ ನಾ ಬರುತಿರೆನಾಚಿಕೆಯಿಲ್ಲದ ಕಂಚಿನಂಗಡಿಯೇಚು ಛೂ ಎಂಬ ಚೀನಿಯಂಗಡಿಯೇ ಯಡಬಲದಲ್ಲಿಕೋಚು ಮಾಡೋ ಉದ್ದಿನಂಗಡಿಯೇ 5 ತನು ವ್ಯಸನವೆಂಬ ತಾಡಪತ್ರಿ ತೋರಲಾಗಿಮನವ್ಯಸನವೆಂಬ ಕಿಂಕಾಪುಧನವ್ಯಸನವೆಂಬೋ ಮಖಮಲ್ಲು ನಾ ಬೆರಗಾಗೆಜನ ವ್ಯಸನವೆಂಬೋ ಜರತಾರಿಯೇ6 ನಾನಾ ವಿಷಯ ವೆಂಬೋ ಉತ್ತತ್ತಿ ಅಲ್ಲಿದ್ದಾವೆಜ್ಞಾನಶೂನ್ಯ ಜಾಜಿಕಾಯಿಮಾನ ಹಾನಿಯೆಂಬೋ ಜಾಪತ್ರಿನಾನು ನನ್ನದು ಎಂಬ ಭಂಗಿ ಸೊಪ್ಪು7 ಜೀವನೆಂಬ ಹೊಗೆಯ ತೊಪ್ಪಲೇ ಹಿರಿಯವಾದನೋವು ಕಷ್ಟಗಳೆಂಬ ಗಾಂಜಿಯೇಸಾವು ಬದುಕು ಎಂದೆಂಬ ಮಾಲೆಗಳೇ ಮಾರುತಲಿತ್ತೋನಾನು ನೀನು ಎಂಬ ಚಿಲುಮೆಗಳೋ 8 ಭೇದವೆಂಬ ನಿಲುವುಗನ್ನಡಿಯೆ ಒಳಗಿದ್ದಾವೆ ವಾದವೆಂಬವಜ್ರದಹರಳೇ ಹಾದಿ ಕಾಣೆನೆಂಬ ಹವಳದ ರಾಶಿಯೇ ಹರಡಿದ್ದಾವೆಗಾದೆ ಎಂಬ ಸೂಜಿದಬ್ಬಣವೇ 9 ಪ್ರಾರಬ್ಧವೆಂಬೋ ಉಂಬತಳಿಗೆಯೇ ಪಸರಿಸುತಿರುವಘೋರ ತಾಪತ್ರಯದ ತಟ್ಟೆಯೇನಾರಿ ನೋಟೆಂಬ ಕಠಾರಿಯೇ ನಿಲಿಸಿದ್ದಾವೆಸೂರಿಯ ಸುಕೃತವೆಂಬೋ ತುಬಾಕಿಯೇ10 ಪರಿಣಾಮಿಲ್ಲದ ಪಡವಲಕಾಯಿ ದಾರಿಯಲಿದಾರಿಯಿಲ್ಲದ ದೊಡ್ಡಿಲಕಾಯಿಅರಿವಿಲ್ಲದ ಕುಂಬಳಕಾಯಿ ಹಾಗಿದ್ದಾವೆಮರುಳು ಎಂಬ ಮಾವಿನಕಾಯಿ11 ಮಂಠ ಎಂಬೋ ಮೆಂತ್ಯ ಪಲ್ಲಯೇ ಮಾಸಲವಿತ್ತೆಕಂಟಕ ಎಂಬೋ ಹರಿವೆ ಪಲ್ಲೆಯೇಕೊಂಟೆಯೆಂಬೊ ಬಸಲೆ ಪಲ್ಲೆಯೇ ತೀವ್ರದಲಿತ್ತೆಶುಂಠವೆಂಬೋ ಬೆರಕೆ ಪಲ್ಲೆಯೇ 12 ಬಂಗಾರವೆಂಬೋ ಬಿಳಿಯ ಜೋಳವೇ ಬೆಡಗಿಲಿರೇರಂಗು ಎಂಬೋ ರಾಗಿ ರಾಶಿಯೇಸಂಗವೆಂಬೋ ಸಣ್ಣಕ್ಕಿಯೇ ಸಾರಿದ್ದಾವೆಹಿಂಗದೀಪರಿ ದಿವಾರಾತ್ರಿಯೇ 13 ಸಂಕಲ್ಪೆಂಬೋ ಧಾರಣೆ ಹಚ್ಚಿರೋ ಸಂಗಾತಲೆವಿಕಲ್ಪೆಂಬೋ ಧಾರಣೆಯಿಳಿವುದೇಸುಖದುಃಖವೆಂಬೋ ಮಾರಾಟವೇ ಸಾಗಿರಲಾಗಿಕಾಕಧಾವಂತರ ಸಂಧಾನವೇ 14 ಕಾಮಕ್ರೋಧಗಳೆಂಬ ಕಳ್ಳರೇ ಕಾವಲಿರ್ದುರಾಮನೆಂಬ ಸ್ಮರಣೆ ಕದ್ದಿಹರೋಕಾಮುಕರೆ ತಿರುಗಾಡುವರೆಲ್ಲ ಕಾಣದ ಹಾಗೆಆ ಮಹಾಜ್ಞಾನವ ಸುಲಿದಿಹರೋ15 ಬರಬಾರದ ನಾನು ಬಂದೆನೇ ಬಾಜಾರ ಬಿಟ್ಟುಹೊರಡುವ ತೆರನ ಕಾಣೆನೇಕರುಣಿಯಾಗಿ ಕೈ ವಿಡಿವರಾರೋಕರುಣಾಕರ ಹರ ವಿಶ್ವೇಶನೇ ಬಲ್ಲ 16 ಚಿಂತೆ ನಾನು ಮಾಡುತಿರಲಾಗಿ ಚಿದಾನಂದಚಿಂತೆ ಬೇಡೆಂದು ಮುಂದೆ ನಿಂದಿಹನುಚಿಂತೆ ಬಿಡು ಕಾವಲಿಹೆನೆಂದು ಚಿದ್ರೂಪ ತೋರಿಎಂತು ಪೇಳಲಿ ಎನ್ನೆದುರು ನಿಂದಿಹನೆ17
--------------
ಚಿದಾನಂದ ಅವಧೂತರು
ಭಾರಿಬಾರಿಗು ಹರಿ ಪಾದದಲಿ ಪ ಯುಕ್ತಿಯಾಗಿ ರಕ್ತಿನೀಗಿ | ಶಕ್ತಿಯೊದಗಿ1 ಯೇನು ಮಾಡಲಿ ಮಾನಸದಲಿ | ಜ್ಞಾನದಿಂದಲಿ 2 ಸ್ವಾಮಿಯೆನ್ನುತ ನೇಮ ವಿಡುತ | ಕಾಮಬಿಡುತ 3
--------------
ಗುರುರಾಮವಿಠಲ
ಮಡಿಮಡಿಯೆಂದು ಹಾರ್ಯಾಡಿ ಸುಳ್ಳೆ ಮಡಿಯಬೇಡಿರೋ ಭವದುರಳ್ಯಾಡಿ ಪ ಜಡಮತಿ ಕಡಿದು ಬಿಡಲಾಸೆ ತೊಡೆದು ನಡಿರೋ ಸನ್ಮಾರ್ಗದದು ನಿಜಮಡಿ ಅ.ಪ ಬದ್ಧಗುಣದೊಳಿರೆ ಅದು ಶುದ್ಧಮಡಿ ಕದ್ದು ತಿನ್ನುವ ಕ್ಷುದ್ರಬುದ್ಧಿ ನೀಗಿ ಪರಿ ಶುದ್ಧರಾಗಲದು ನಿರ್ಧಾರ ಮಾಡಿ1 ಕ್ಲೇಶಕಳೆವುದದು ಲೇಸುಮಾಡಿ ದು ರ್ವಾಸನಳಿಯೆ ಅದು ಮೀಸಲು ಮಡಿ ಮೋಸಮರವೆ ನೀಗಿ ಈಶನ ನಾಮವ ಧ್ಯಾಸದಿರಲು ಅನುಮೇಷ ಮಡಿ 2 ಬಿಟ್ಟದ್ದು ಉಟ್ಟರದು ಯಾವ ಮಡಿ ಉಟ್ಟು ಮುಟ್ಟೆಂಬುದಿದಾವಮಡಿ ಕೆಟ್ಟ ಪದ್ಧತಿಗಳ ಬಿಟ್ಟು ಸದಾಚಾರ ನಿಷ್ಠಪರರಾಗಲದು ಶಿಷ್ಟಮಡಿ 3 ಅರಿವುಗೂಡುವುದೆ ಸ್ಥಿರಮಡಿ ಬಹ ಜರ ಮರಣಳಿವುದೆ ಪರಮಮಡಿ ದುರಿತ ಗೆಲಿದು ಹರಿಶರಣರೊಳಾಡ್ವುದು ತಿರುಗಿ ಮುಟ್ಟಿಲ್ಲದ ಪರಮಮಡಿ 4 ಮಡಿಯಾದಮೇಲೆ ಮೈಲಿಗೆಲ್ಲಿ ಖೋಡಿ ಜ್ಞಾನ ವಿಡಿದುನೋಡು ನಿಜ ಹುಡುಕ್ಯಾಡಿ ಮಡಿಮುಟ್ಟಿಲ್ಲದ ನಮ್ಮೊಡೆಯ ಶ್ರೀರಾಮ ನಡಿ ದೃಢದಿ ನಂಬಲಿದೇ ಮೂಲಮಡಿ 5
--------------
ರಾಮದಾಸರು
ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ ತನುವನಾಗಿದ್ದವಗೆಲ್ಲಿಹುದು ಙÁ್ಞನ ಧ್ರುವ ನಿಗಮ ಓದಿದರೇನು ಅಗಮ ಹೇಳಿದರೇನು ಬಗೆ ಬಗೆ ವೇಷ ಜಗದೊಳುದೋರಿದರೇನು 1 ಮಠವು ಮಾಡಿದರೇನು ಅಡವಿ ಸಾರಿದರೇನು ಸಠೆ ಮಾಡಿ ಸಂಸಾರ ಹಟವಿಡಿದರೇನು 2 ನಿಗದಿ ಹಾಕಿದರೇನು ಗಗನಕ್ಹಾರಿದರೇನು ಮಿಗಿಲಾಗಿದೋರಿ ಬಗವಿಯ ಪೊದ್ದರೇನು 3 ಗುಹ್ಯ ಸೇರಿದರೇನು ಬಾಹ್ಯ ಮೆರೆದರೇನು ದೇಹ ದಂಡಿಸಿ ಹರವ ತೊರೆದರೇನು 4 ಮನಕೆ ಮೀರಿಹ್ಯ ಸ್ಥಾನ ಘನಸುಖದಧಿಷ್ಠಾನ ದೀನಮಹಿಪತಿ ನೀ ಸಾಧಿಸೊ ಗುರುಜ್ಞಾನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನವೆ ನಿನಗೇಕಿನ್ನು ಲಜ್ಜೆದೋರದು ಬಳಿಕಕನಲಿ ನಿಂದಿಸುವೆ ಜನರನಿತರಾ ಪಘನಘೋರಮಲಜನಿತ ತನುವಿನೊಳುನೀನಿರುತಲನವರತ ತೊಳಲಬಹುದೇ ಬರಿದೆ ಅ.ಪಓದಿ ಗ್ರಂಥಗಳನು ಪಠಿಸಿಯದರರ್ಥವನುಬೋಧಿಸುವೆ ಪರರಿಗೆಲ್ಲಾ ಸೊಲ್ಲಾಸಾದರದಿ ತನ್ನಿಷ್ಠೆಯಲಿ ನಡೆಯುತನುಭವವನೀದಿನಕು ತಂದುದಿಲ್ಲವಲ್ಲಾಬೋಧೆವಡದಿಹ ಯೋಗಿಗಳ ಜರೆವ ಬಗೆಯಲ್ಲಿನೀ ದೊಡ್ಡ ಜಾಣನಲ್ಲಾ ಬಲ್ಲಸಾಧಿಸಿದ ವಿದ್ಯವನು ವಾದದಲಿ ನೀಗಾಡಿಬೀದಿಯಲಿ ನಿಂತೆಯಲ್ಲಾ ನಲ್ಲಾ 1ಧನಧಾನ್ಯ ದಾಸ ಕತಿಯೊಳಗೊಂದಿಕೊಂದಿರುವಜನರಲವಿವೇಕ ವಿಡಿದೂ ಜರಿದೂತನು ಪಾಶ ಬದ್ದದಲಿ ನರಕ ಭಾಜನರಾಗಿದಿನವ ಕಳೆಯುತ್ತಲಿಹರೂ ುವರೂಎನುತಲನುತಾಪದಲಿ ನೀ ಮತ್ತೆಯನವರತಧನಿಕರಿದ್ದೆಡೆಗೆ ಬಂದೂ ನಿಂದೂಧನವ ಕೊಡಿ ಸತ್ಪಾತ್ರನಾನೆಂದು ವೊಂದುವರೆಹಣವ ಕೈಯೊಡ್ಡಿ ಕೊಂಡೂ ಉಂಡೂ2ತೋರುವ ಜಗತ್ತಿದುವೆ ಪರಮಾತ್ಮನಿಂದಲೆತೋರುವದು ಭ್ರಮೆಗೆ ಹಲವೂ ಕೆಲವೂತೋರದಡಗದ ನಿತ್ಯ ವಸ್ತುವೆ ತಾನೆÀಂದುಧೀರತನದಿಂದಲಿರವೂ ಅರಿವೂಈ ರೀತಿಯಲಿ ತಿಳಿದು ಮುಕ್ತನಾಗದೆ ಬರಿಯಕ್ರೂರ ಬುದ್ದಿಯಲಿ ುರವೂ ಮರವೂದಾರಿಗಾಣದೆ ನಿನ್ನ ಅನುಭವವ ನೀ ಮತ್ತೆಹೊರುವುದೆ ನಿನಗೆ ಮತವೂ ದೃಢವೂ 3ಇಂದ್ರಿಯಂಗಳ ಸುಖವನೆ ಮೆಚ್ಚಿ ನೀನವರಹಿಂದುಗೊಂಡೆರಗಿ ಬಿಡದೆ ಪಡೆದೆಸಂದ ಭೋಗದ ಸವಿಯನೆನನೆನದು ಮತ್ತದನುಮುಂದು ಬೇಕೆಂದು ಹೊರೆದೆ ಬೆರೆದೆಕಂದಿ ಕಾಮಕ್ರೋಧದಗ್ನಿಯಲಿ ನೀ ಬೆಂದುಹೊಂದಿ ನೀಂ ಜನ್ಮಪಿಡಿದೆ ಮರೆದೆಹಿಂದುಗಳೆವಾತ್ಮನನು ಹಿತವೆಂದು ಮಿಥ್ಯವನುನೊಂ[ದು] ನೋಡದೆ ಬರಿದೆ 4ಚದುರ ವಿದ್ಯವ ಕಲಿತೆನೆಂಬುದೊಂದೇ ಘನತೆಸುದತಿ ಸಂಪತ್ತಿನಲ್ಲೆ ರಮತೆಒದಗಿ ಬಹಳೋದ್ಯೋಗಗಳ ಮಾಡಿ ಬಹುದಿವಸಬದುಕಿದವ ನೆಂಬುದರಲೆ ುರತೆಇದ ನಾನು ಸಂಪಾದಿಸಿದೆನೆನ್ನ ಶೌರ್ಯತೆಗೆಇದಿರಿಲ್ಲವೆಂದು ಇದಕೆ ಬೆರತೆಮುದದಿ ಗುರು ವಾಸುದೇವಾರ್ಯವೆಂಕಟರಮಣನೊಡಮೂಡದಿತರ ನಡತೆ ಜಡಕೆ 5
--------------
ತಿಮ್ಮಪ್ಪದಾಸರು
ಮನವೇ ನೀ ಬರಿದೆಜನ್ಮ ವ್ಯರ್ಥಗಳೆವರೆ ಬಂಗಾರದಥಾ ಪ ಮನವೇ ನೀ ಬರಿದೇ ಜನ್ಮ ವ್ಯರ್ಥಗಳೆವರೆ ಬಂಗಾರದಂಥಾ | ಮರೆವ ದಿನಗಳ ಜರಿವರೇ ನರದೇಹವಿದು ಅ.ಪ ದೊರೆಯದಿನ್ನು ಮತ್ತ ತರುವರ ಏನಾದರೇನೀ | ಹರಿಯ ಸ್ಮರಣೆಯ ಬಿಡುವರೇ | ಅರಿವ ಪಂಥ ವಿಡಿದು ಜನ್ಮ ಮರಣ ಬಲಿಯಾ ತಪ್ಪಿಸದೇ | ತಿಗಳಿ ಹುಳುವಿನಂತೆ ಸಿಕ್ಕ ತನ್ನ ತಾ ಮರೆವರೇ 1 ಕೇಳೆಲೋ ನೀ ಪೊಡವಿಯೊಳಗಿದ್ದ ಸಾಯಸಾ | ಉದಯದಲೆದ್ದು ಬಿಡುವದೆ ಮಲಮೂತ್ರ ಕೆಲಸಾ | ಮಧ್ಯಾನ್ಹದಲಿ ವಡಲ ತುಂಬುವ ಕೆಲಸಾ | ನಿಶಿಕಾಲದಲ್ಲಿ ವಡನೆ ಮಲಗುವ ಕೆಲಸಾ | ಪಡೆದ ತಾಯಿಯವ್ವನೆಂಬ ದೃಢವನವಾ ಕಡಿಯಲು | ಕೊಡಲಿಯಂತೆ ಹುಟ್ಟಿ ಬಂದೆ ಮಡದಿ ಮಕ್ಕಳುದ್ದೇಶಾ 2 ಮನವೇ ನೀ ಹಿಂದಿನವ ಗುಣ ಜರಿದು ಸದ್ಭಾವ ಭಕು | ತಿಂದ ನಡುವಳಿ ಬಿರಿದು | ಸದ್ಗುರುವೀನ | ದ್ವಂದ್ವ ಪಾದಗಳ ವಿಡಿದು | ಅವರ ದಯ | ದಿಂದ ಗತಿ ಮುಕ್ತಿ ಪಡೆದು | ಇಂದು ಧನ್ಯನಾಗೆಲೋ ಮುಕುಂದ ನಾಮ ನೆನೆದು ನೀ | ತಂದೆ ಮಹಿಪತಿ ನಿಜನಂದನುಸುರಿದನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು