ಒಟ್ಟು 648 ಕಡೆಗಳಲ್ಲಿ , 90 ದಾಸರು , 478 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರವೆ ಮುಸುಕಿತುಋಣದ ಬಾಧೆ ಹತ್ತಿತು ರೋಗವಡಸಿತುಜನರ ಪ್ರೀತಿ ತೊಲಗಿತು ಜಾಣ್ಮೆ ತಾನು ಸಡಿಲಿತು... ದಿಯ ವಾಸ'ಲ್ಲವಾಯ್ತು ... ಮರೆ ದೂರವಾಯ್ತು 1ನಿನ್ನ ಸನ್ನಿಧಿಯ 'ುೀರಿ ಪುಣ್ಯವ ಬೇರೆ ಬಯಸಿದೆನೆನಿನ್ನ ಮೂರ್ತಿಯನುಳಿದು ಅನ್ಯರ ನೆನೆದೆರಗಿದೆನೆನಿನ್ನ ಸೇವೆಗಧಿಕವೆಂದನ್ಯದೇವರ ಸೇ'ಸಿಕೊಂಡೆನೆ 2ಸನ್ನಿಕರ್ಷವನಾದರತೆಯನ್ನು ಕೊಡುವದೆದೆಂದೆನೆ ಅರಿವೆನ್ನೊಳುದಿಸಿತೆ ದೂರನಾದೆನೇತಕೆಇನ್ನುದಾಸೀನಗೈದರೆ ಎನ್ನಿಂದಾಹುದೇನು ಬೇರೆಮನ್ನಿಸಿ ನೀನೊಂದಿರೆ ಸೈರಿಸಲಾರೆಂ 3ಪತಿತಪಾವನನು ನೀನು ಪರಮಕರುಣಾನಿಧಿ ನೀನು ಪತಿಕರಿಸಿ ಬಿಡುವದೇ ಪಾಪಿಯೆ ನಾನು ಸತತ ನಿನ್ನ ನೆನೆಯುವೆನು ಸೇವೆಗೆ ಕಾತರಿಸಿಹೆನು ಅತಿಶಯವ ತೋರಿಸು ಆ ನನ್ನನಿಧಿಯೆ ನೋಡಿನ್ನು 4ಕರೆದು ಮೂಢರಜ್ಞತೆಯ ಪರಿದು 'ಜ್ಞಾನ ಸುಧೆಯಎರೆದು ಕಾಯೆ ಚಿಕ್ಕನಾಗಪುರದೊಳು ನೀನೆಗುರುವರ್ಯ ವಾಸುದೇವಾರ್ಯ ಚರಣಕೆರಗಿದೆನಯ್ಯಾನಿರತ ಮಂಗಳಾರತಿಯಸಿರಿಯ ತೋರಿಸೊ ದಮ್ಮಯ್ಯಾ 5
--------------
ವೆಂಕಟದಾಸರು
ಮರುಳು ಮನವೇ ವ್ಯರ್ಥ ಚಿಂತಿಸುವಿಯಾಕೋ ಹರಿ ತಾನೇ ಕಾಯ್ವ ಮನ ದೃಢವಿರಲಿ ಬೇಕೊ ಪ ಎಲ್ಲಿ ನೋಡಿದರಲ್ಲಿ ಇರುವಾತಾ ಎಲ್ಲರನು ಪೊರೆವಾತಾ ಬಲ್ಲಿದನು ಬಲಿಯ ತುಳದಾತಾ ಸೊಲ್ಲು ಸೊಲ್ಲಿಗೆ ಬಂದು ಎಲ್ಲಿವನು ಪೇಳಿದರೆ ಕಲ್ಲಾಗುವನೇ ಸ್ವಾಮಿ ಪ್ರಲ್ಹಾದ ತಾತಾ 1 ಹಬ್ಬಿರುವ ಮಾಂಸಗಾಗರ್ಭದೊಳಿರುವಾಗ ಉಬ್ಬಸವ ಬಡುವಾಗ ಸಲಹಿದವರ್ಯಾರೋ ಅಬ್ಬರದ ನೋವಿನೊಳು ಒಬ್ಬನೇ ಬರುವಾಗ ಹೆಬ್ಬಾಗಿಲವ ನಿನಗೆ ತೋರಿದವರ್ಯಾರೋ 2 ವರದ ಹನುಮೇಶವಿಠಲನ ಚರಣವ ನಂಬು ಮೊರೆಯಾಗ್ವನಲ್ಲಾ ಹರಿ ಕರುಣ ಸಾಗರನೋ ಕರಿರಾಜ ಕರಿಯಲಾಕ್ಷಣಕೆ ಅವಸರದಲಿ ಗರುಡವಾಹನ ಕೃಷ್ಣ ಬರಲಿಲ್ಲವೇನೋ 3
--------------
ಹನುಮೇಶವಿಠಲ
ಮರೆತು ಇರುವರೆ ಸರ್ವಜ್ಞನೆನಿಸಿ ಪ ಮರೆತು ಇರುವರೇನೋ ಕರುಣಾ ವಾರಿಧಿ ನರಹರಿಯೆ ಬಾಲನ ದುರುಳತನಗಳೆಣಿಸಿದೊಡೆ ನೀ ಕರೆದು ಮುಂದಕೆ ಪೊರೆವರ್ಯಾರು 1 ಕಲ್ಲು ಕೊಟ್ಟ ಬಿಲ್ಲಿಲಿಟ್ಟ ಕ್ಷುಲ್ಲಕ ಮಾತಾಡಿ ಬಿಟ್ಟ ಕಳ್ಳ ಸುಳ್ಳ ಜಾರನೆಂದ ಗೊಲ್ಲತಿಯರನೆಲ್ಲ ಪೊರೆದಿ 2 ತರಳ ನಿನ್ನ ಪೂಜಿಸಲಾರದೆ ಕರವ ಶಿರದಿ ಇರಿಸೆ ಕೂತು ಕರದಿ ಗುಂಜವಿರಿಸಿ ಸಿರಿಯ ಮರೆತು ಇರುವವರಂತೆ 3 ವರ ಸುಮೌನೀಗಣಕೆ ಬಲ ನಾ ನರಿಯಿರೆಂದು ಬೀರಿ ಚರಣ ಚರಣದರ ಮನೆಯೊಳಿರಿಸಿ ಪೊರೆವಿ ತರಳನ ನೀ ಜರಿವರೇನೊ 4 ಧರಣಿಯೊಳಗೆ ಇರುವ ಕ್ಷೇತ್ರದಿ ವರ ಸುಕ್ಷೇತ್ರವಿದೆಂದು ಅರುಹಿ ಬರುವ ಸಜ್ಜನರನು ಪೊರೆವಿ ಭಾರ ನಾನೊಬ್ಬನೇ ಪೇಳೋ 5 ಶ್ರೀ ನರಹರಿಯೆ ಇನಿತು ಜ್ಞಾನ ಶೂನ್ಯನ ಮಾಡಿ ನಿನ್ನ ಕಾಣಿಸುವರೊಡನೆ ಮಾಧವ 6
--------------
ಪ್ರದ್ಯುಮ್ನತೀರ್ಥರು
ಮರೆಯದ ಭಾವಗೋಚರವಾುತಯ್ಯಾಕರುಣಿ ವೆಂಕಟದಾಸವರ್ಯ ಸದ್ಗುರುವೆ ಪಸನ್ನಿಕರ್ಷವನಾದರಣ ಹೇತು ಮಾನವರಿಗೆನ್ನುತಾನಂದ ರಸರುಚಿ ದೋರಿಸಿನಿನ್ನನೆ ತೊಳಲಿ ಬಳಲುತ ನಿನ್ನೊಳೆರಗುವಂತುನ್ನತರ ಮಾಡಲಂತರ್ಧಾನವಡೆವೆ 1ಗೋಪಿನಾರಿಯರಿಗಾನಂದ ರೂಪವ ತೋರಿತಾಪಬಡುವಂತಗಲಿ ುದ್ಧವರ ಮುಖದಿಸೋಪಾಯವಚನದಿಂ ತಿಳು'ದರ್ಥವ ನೆನೆಯಲೀ ಪರಿಯ ತೋರಿತೆನಗೆಲೆ ದಯಾನಿಧಿಯೆ 2ನೆರೆಧನ್ಯರಾದೆವಾ'ಲ್ಲ ಸಂದೇಹ ಗುರುವರ ವಾಸುದೇವಾರ್ಯ ಚಿಕನಾಗಪುರದೀಪರತತ್ವವರುಪಿ ವೆಂಕಟದಾಸ ವೇಷದಿಂಮರಳಿ ನಿಜದೊಳು ನಿಂದೆ ಕರುಣಾಸಮುದ್ರಾ 3
--------------
ತಿಮ್ಮಪ್ಪದಾಸರು
ಮರೆಯಲಿನ್ನೆಂತುಪಕಾರ ಮಾರುತಿ ಮರೆಯಲಿನ್ನೆಂತುಪಕಾರ ಪ. ವಿಧಿ ಮುಂತಾದ ತ್ರಿದಶರಿಂದೆನ್ನಯ ಸದಮಲಪ್ರಾಣಾಧಾರ 1 ಬ್ರಹ್ಮಚರ್ಯವ್ರತಧರ್ಮನಿಯಾಮಕ ನಿರ್ಮಲ ವಜ್ರಶರೀರ 2 ದಾಸವರ್ಯ ಗುಣರಾಶಿ ತ್ವದೀಯ ವಿ- ಶ್ವಾಸವಿನ್ನೆಷ್ಟೊ ಗಭೀರ 3 ವ್ಯಾಪ್ತಮಾದಾಪದಕಾಪ್ತ ನಿನ್ನುಪಕೃತಿ ಸಪ್ತಸಾಗರದಿಂದಪಾರ 4 ಶ್ರೀಲಕ್ಷ್ಮೀನಾರಾಯಣನು ಹನುಮನ ಆಲಿಂಗಿಸಿದನುದಾರ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮರೆಯುವರೆ ಮರೆಯುವರೆ ರಾಮರಾಯಾ | ಗುರುಗಳಾರಾಧನೆಗೆ | ಶಿರಿವಾರದೊಡೆಯಾ || ಪರಿವಾರ ಸಹಿತಾಗಿ ತೆರಳುವದು ನಿಶ್ಚಯಿಸಿ ಬರೆವದಕೆ ಕಾಗದವು ಸಿಗದ್ಹೋಯಿತೆ | ಭರದಿ ಬರಬೇಕೆಂದು | ಕರೆಕಳುಹದಕೆನ್ನ | ಚರನೋರ್ವ ನಾದರು ದೊರೆಯದಾದನೆ ಅಕಟ 1 ಕ್ರೋಧ ವಿರಹಿತರಾದ ಸಾಧುವರ್ಯರ ಸಮಾರಾಧ | ನೆಗೆ ನಾ ಭಾರವಾದೆನೇನೈ | ಆದರವು ತಗ್ಗಿತೇ | ಯುಗ್ಮಪಾದಪಶುವಾದಿನೇ 2 ಗುರುಕರುಣವೆಗ್ಗಳದ ಗರುವಿಕೆಯೋ ಕಾರ್ಪರ ನರಸಿಂಹರರ್ಚಕರಮೋಕ್ಷ ಬಲವೋ ಪರಮ ಸತ್ಪುರುಷರುಪದೇಶ ಶ್ರವಣದ ಮದವೋ | ಹರಿಕಥಾ ಪಾನದ ಹಂಕಾರವೋ 3 ಇರಬೇಕು ಸರ್ವದಾ ಸಕಲರಲಿ ಸಮದೃಷ್ಟಿ ಹಿರಿಯರಾದವರಲ್ಲಿ ಏಕನಿಷ್ಟಿ | ನಿರುತದಲ್ಲಿ ಸದ್ಗೋಷ್ಟಿ ಪರನಾಗಿ ಮನಮುಟ್ಟಿ ಹರಿಪಾದಸ್ಮರಿಪರಿಗೆ ಕೈವಲ್ಯಷಟ್ಟಿ 4 ಶ್ರೀ ಶಾಮಸುಂದರನ ದಾಸಕೂಟಸ್ಥರೊಳು ನಾ ಸಲ್ಲದವನೆಂದು ಧೃಡವಾಯಿತೇ | ಭೂಸುರವೇಷದಲಿ ಎಂದು ಉದಾಸೀನ ಮಾಡಿನ್ನು 5
--------------
ಶಾಮಸುಂದರ ವಿಠಲ
ಮರ್ಯಾದಿ ಗುಣ ವಳ್ಹದೋ | ಗುರುವರ್ಯರ ಸೇವೆಲಿ ಬಾಳ್ವೆನೆಂಬನಿಗೆ ಪ ಅರಸುವಲಿದು ಅತಿ ಪ್ರೀತಿ ಮಾಡಿದರೇನು ? ಕರಗಳ ಮುಗಿದು ನಿಂದಿರಬೇಕು ಚರನು 1 ಹಿಂಗದೆ ಭಕುತಿಗೆ ಬೆಜ್ಜರ ವಿಡಿದರ | ಬಂಗಾರಕ ಸುವಾಸನೆಯು ಬಂದಂತೆ 2 ಕುದುರೆಗೆ ಉತ್ತತ್ತಿ ತುಸು ಕೊಟ್ಟರಾರೋಗ್ಯ | ಅದೇ ವಿಶೇಷ ಕೊಡಲು ವಿಪರೀತವೋ 3 ಯೋಗ್ಯವಲ್ಲದ ಅಲಂಕಾರಿಸಿಕೊಂಡರೆ ತನ್ನ | ಶ್ಲಾಘ್ಯವೇ ಜಗದೊಳು ಉಪಹಾಸ್ಯ ಮೂಲಾ 4 ತರಳತನವ ಬಿಟ್ಟೆಚರದಲಿ ನಡಿಬೇಕು | ಗುರು ಮಹಿಪತಿಸುತ ಪ್ರಭು ನೊಲುವಂತೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾತ್ರೆಯಿದು ಸಜ್ಜನರಿಗಾರೋಗ್ಯ ಮಾತ್ರೆ ಸೂತ್ರ ನಾರದನಿದಕೆ ನೆನಪಿನಾ ಮಾತ್ರೆ ಪ ಸಾರ ಪಾಕಗಳಿಲ್ಲ ಊರೂರಿಗೊಯ್ವುದಕೆ ಭಾರವಲ್ಲ ಅ.ಪ ಚಾರು ಚೂರ್ಣವಿದಲ್ಲ | ನೀರೊಳಲೆದುದು ಅಲ್ಲ ಕ್ಷಾರ ಹುಳಿ ಕಹಿಯಿಲ್ಲದೈಶ್ವರ್ಯದಾ ಮಾತ್ರೆ 1 ಇಂದಿರಾಪತಿಯೆಂಬ ಚಂದ್ರೋದಯದ ಮಾತ್ರೆ ಮಂದರೋದ್ಧಾರನೆಂಬ ಸಿಂಧೂರಮಾತ್ರೆ 2 ನಾರಾಯಣಾಯೆಂಬ ನೀರ ಬೆರಸಿರೋದಿದಕೆ ಸಾರತರ ರಸಪಾಕ ತೋರುವಾ ಮಾತ್ರೆ3 ಶ್ರೀರಮಣನೆಂಬ ಮಧುಸೇರಲಾ ಮಾತ್ರೆಗಳ [ಮೂರೊತ್ತು ಸೇವಿಸೆ ಮನಕಹುದು ಹಿತ] 4 ಕರುಣಾಕರಾಯೆಂಬ ವರಸಕ್ಕರೆಯ ಬೆರಸಿ ಶರಣಜನವರದನೆಂದೊರೆವರು ಸದಾ 5 ಪರಮಾತ್ಮನೆಂಬ ಒರಳೊಳ್ ಹರಿಯೆಂಬ ಗುಂಡಿನಿಂದ ಅರೆದೊಡದು ಕೇಳಾ ಮಾಂಗಿರಿರಂಗನೆನಿಪಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾಧವ ಗೀತೆ ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ ಶರುಣು ಭವಗೆ ಶರಣು ಶಿವೆಗೆ ಶರಣು ಬೆನಕಗೆ ಶರಣು ತತ್ವಮಾನಿಗಳಿಗೆ ಶರಣು ಮುನಿ ಸಮೂಹಗಳಿಗೆ ಮಾಧವ 1 ಪರಮಭಕ್ತರಾಗಿ ಮೆರೆದ ಗುರು ಪುರಂದರಾದಿ ಸಾಧು ವರರ ವಚನ ಮಣಿಗಳನ್ನು ಮನದೊಳಾರಿಸಿ ಸರವ ಮಾಡಿ ಶರಣ ಜನರ ಕರುಣದೆಳೆಯೊಳಿದನು ಬಿಗಿಸಿ ಮಾಧವ 2 ಶ್ರೀಯೆ ಸತಿಯು ನಿನಗೆ ಬ್ರಹ್ಮರಾಯ ಹಿರಿಯ ಮಗನು ವೈನ- ತೇಯ ರಥವು ಖಾದ್ರವೇಯೆ ಶಯ್ಯೆ ಛತ್ರವು ಮನೆಯ ದಾಸಿ ಸುರನಿ ಮಾಧವ 3 ಪರ್ವತೇಶನಣುಗಿ ತಂಗಿ ಶರ್ವದೇವ ನರ್ಮ ಸಖಳು ಸರ್ವದುರಿತವಳಿವ ಗಂಗೆ ನಿನ್ನ ಪುತ್ರಿಯು ಸರ್ವಕರ್ತ ಸರ್ವಶಕ್ತ ಸರ್ವಕಾಲ ದೇಶ ವ್ಯಾಪ್ತ ಭೋಕ್ತ ಮಾಧವ 4 ನೀನೆ ತಾಯಿ ನೀನೆ ತಂದೆ ನೀನೆ ಬಂಧು ನೀನೆ ಬಳಗ ನೀನೆ ಸಖಳು ನೀನೆ ಗುರುವು ನೀನೆ ದ್ರವ್ಯವು ನೀನೆ ಧೃತಿಯು ನೀನೆ ಸ್ಮøತಿಯು ನೀನೆ ಮತಿಯು ಮಾಧವ 5 ನಿನ್ನ ನಾಮ ಪುಣ್ಯನಾಮ ನಿನ್ನ ರೂಪ ಮಾನ್ಯರೂಪ ಅನ್ಯ ದೈವರನ್ನು ಕಾಣೆ ಘನ್ನ ಭಕ್ತವರ್ಯರಾಣೆ ಮಾಧವ 6 ದೀನ ನಾನು ದಾನಿ ನೀನು ಹೀನ ನಾನು ಮಾನಿ ನೀನು ಏನ ಬಲ್ಲೆನೈಯ ನಾನು ಜ್ಞಾನಪೂರ್ಣನೈಯ ನೀನು ಮಾಧವ 7 ಹೃದಯದಲ್ಲಿ ನಿನ್ನ ರೂಪ ವದನದಲ್ಲಿ ನಿನ್ನ ನಾಮ ಉದರದಲ್ಲಿ ಅರ್ಪಿತಾನ್ನವಿತ್ತು ಅನುದಿನ ಒದಗಿ ಬಂದು ಬದಿಯಲಿದ್ದು ಮದಡ ಬುದ್ಧಿಯನ್ನು ಬಿಡಿಸಿ ಮಾಧವ 8 ಸ್ನಾನ ಮೌನ ಧ್ಯಾನ ತಪಗಳೇನು ಮಾಡಲೇನು ದೇವ ನೀನೆ ಕೃಪೆಯಿನೊಲಿಯದಿರಲು ಜ್ಞಾನ ಬಾರದು ಏನು ಹೀನ ಹಾನಿ ಬರಲು ನೀನು ಮಾತ್ರ ಬಿಡದಿರೆನ್ನ ಮಾಧವ 9 ನಿತ್ಯವಲ್ಲ ದೇಹವಿನ್ನು ವ್ಯರ್ಥವಾಗಿ ಪೋಪುದಾಯು ಮತ್ತೆ ಬರುವುದೇನು ನಿಜವು ಮತ್ರ್ಯಕಾಯವು ನಿತ್ಯ ನಿನ್ನ ಭಜಿಸುತಿಪ್ಪ ಮಾಧವ 10 ಅಂಬುಗುಳ್ಳೆಯಂತೆ ಇರುವ ಡಿಂಬವನ್ನು ನಂಬಿ ಕೆಟ್ಟು ಹಂಬಲಿಸುತ ವಿಷಯಗಳಿಗೆ ಡೊಂಬನಾದೆನು ಕಂಬಳಿಯೊಳು ಕಟ್ಟಿದನ್ನ ತಿಂಬುವನಿಗೆ ದೊರೆವ ಸುಖವು ಮಾಧವ 11 ಹೊಟ್ಟು ತಂದು ಕುಟ್ಟಿ ಕೇರಿ ಕಷ್ಟಪಟ್ಟು ತುಕ್ಕಿ ಬೀಸಿ ಅಟ್ಟಹಾಸದಿಂದ ರೊಟ್ಟಿ ಸುಟ್ಟು ತಿನ್ನಲು ಎಷ್ಟು ಸುಖವೊ ಅಷ್ಟೆಯಿನ್ನು ಭ್ರಷ್ಟ ಭವದಿ ಮಮತೆಯಿಡಲ ಮಾಧವ 12 ಹೊಟ್ಟೆಕಿಚ್ಚು ಪಡುವೆ ದೈವಕೆಷ್ಟು ಪೂಜೆ ಮಾಡೆ ಕರುಣ ಪುಟ್ಟಲೊಲ್ಲದದಕೆ ಬೆಟ್ಟದಷ್ಟು ಕೊಟ್ಟರು ಬೆಟ್ಟು ನೀರೊಳದ್ದಿ ಬಾಯೊಳಿಟ್ಟು ಚಪ್ಪರಿಸಲು ರುಚಿಯ ಮಾಧವ 13 ತಪ್ಪು ಸಾಸಿರಂಗಳನ್ನು ಒಪ್ಪಿಕೊಂಡು ಕಾವದೇವ ಮುಪ್ಪುರಂಗಳನ್ನು ಗೆಲಿಸಿದಪ್ರಮೇಯನೆ ಕಪ್ಪು ಮೇಘಕಾಂತಿಯಿಂದಲೊಪ್ಪುತಿಪ್ಪ ತಿರುಮಲೇಶ ಮಾಧವ 14 ಒರಳ ನೆಕ್ಕಿ ವ್ರತವ ಕೆಟ್ಟ ಮರುಳನಂದವಾಯ್ತು ದೇಹ ಧರಿಸಿದುದಕೆ ನಿನ್ನ ಬಿಟ್ಟು ನರರ ಸ್ತುತಿಸಲು ಹರಕು ಚಿಂದಿ ಬಿಡಿಸಲಿಲ್ಲ ಕರಕು ಅನ್ನ ಹೋಗಲಿಲ್ಲ ಮಾಧವ 15 ಮೊರಡು ತುರುವ ಹಿಡಿದು ಕಟ್ಟಿ ಕರೆದು ಕಷ್ಟ ಪಟ್ಟು ಪಾಲ ನುರಗಗಳಿಗೆ ಎರೆದ ತೆರದಲಾಯ್ತು ನಿನ್ನನು ತರಣಿ ಮುಣಗ ದುಡಿದು ಬಡಿದು ಮಾಧವ 16 ಕೆರವ ತಿಂಬ ನಾಯಿಗಿನ್ನು ಸುರುಚಿಯನ್ನ ಸೊಗಯಿಸುವುದೆ ನರಕ ಭಾಗಿ ಪಾಮರಂಗೆ ನಿನ್ನ ನಾಮವು ಗರಳದಂತೆ ತೋರ್ಪುದೈಯ ಗುರುಗಳಿಲ್ಲ ಹಿರಿಯರಿಲ್ಲ ಮಾಧವ 17 ಕ್ರೂರ ಮಾನವರೊಳುದಾರ ಧೀರ ಶೂರರೆಂದು ಸಾರಿ ಬಾರಿ ಬಾರಿಗಿನ್ನು ಪೊಗಳಿ ಬೊಬ್ಬೆಯಿಟ್ಟರು ಬಾರದವರಿಗೆಂದು ಕರುಣ ಘೋರತನದ ದನುಜರವರು ಶೌರಿ ಮಾಧವ 18 ಹಾಳು ಹೊಲಕೆ ನೀರನೆತ್ತಿ ತೋಳು ಬೀಳು ಹೋದವೋಲು ಖೂಳ ಜನಕೆ ಪೇಳಿಕೊಳ್ಳುತಿಹನು ಬಾಳ್ವೆಯು ದಾಳಿ ಮಾಳ್ಪ ವಿಷಯಗಳನು ಹೂಳಿ ಜ್ಞಾನ ಭಕ್ತಿಯನ್ನು ಮಾಧವ 19 ಎಷ್ಟು ನೀಲಿಯನ್ನು ತೊಳೆಯೆ ಬಿಟ್ಟು ಹೋಗದವರ ಬಣ್ಣ ದುಷ್ಟ ಮಾನವರಿಗೆ ಕರುಣ ಪುಟ್ಟದೆಂದಿಗು ಕಷ್ಟಪಟ್ಟು ಸೇವಿಸುವರ ಹೊಟ್ಟೆಯನ್ನು ಹೊಡೆದು ತಮ್ಮ ಮಾಧವ 20 ನಿರುತ ನಿನ್ನ ಕಥೆಯ ಬಿಟ್ಟು ನರರ ಕಥೆಗಳನ್ನು ಕೇಳಿ ಗುರುಗಳನ್ನು ಹಿರಿಯರನ್ನು ಜರೆಯುತಿಪ್ಪರು ಪೊರೆದ ತಂದೆ ತಾಯ ಮಾತ ಪರಿಕಿಸದಲೆ ತೊರೆದು ತಮ್ಮ ಮಾಧವ 21 ಪಟ್ಟದರಸಿಯನ್ನು ತೊರೆದು ಬಿಟ್ಟು ಪರರ ಸತಿಯ ಕೂಡಿ ಕೊಟ್ಟ ಸಾಲವನ್ನು ಕೊಡದೆ ನುಂಗುತಿಪ್ಪರು ಕರವ ಭಾಷೆಯನ್ನು ಕೊಟ್ಟು ಮೋಸ ಮಾಡುತಿಹರು ಮಾಧವ 22 ಉಂಡ ಮನೆಗೆ ಬಗೆವರೆರಡನವರು ಭಂಡರು ಕಂಡು ನುತಿಸಿ ಬೇಡಿಕೊಂಡರು ದಂಡಿಸುವರ ಕಂಡು ನಡುಗಿ ಮಾಧವ 23 ಕೊಳ್ಳರೊಳಗೆ ಸ್ನೇಹ ಬಹಳ ಸುಳ್ಳರೊಳಗೆ ಸೋಲುತಿಹರು ಒಳ್ಳೆಯವರ ಕಂಡವರ ಟೊಳ್ಳು ಮಾಳ್ಪರು ಬಳ್ಳೆಸುರಿದು ಬಲ್ಲಿದವರಿಗಳ್ಳೆ ಬಿರಿಯಲುಣಿಸಿ ದಣಿಸಿ ಮಾಧವ 24 ಮಾಡಿದಂಥ ಕೃತಿಯು ಮರೆತು ಕೇಡು ಬಗೆದು ಕಾಡುತಿಹನು ನೋಡರೊಮ್ಮೆಗಾದರವರು ಬಡವರೆಂಬುದ ಜಾಡೆಯರಿತು ನಿನ್ನ ನಾಮ ಪಾಡಿ ಪೊಗಳುತಿಹರಿಗೆಂದು ಮಾಧವ 25 ಶಾಕವ್ರತದೊಳೆಲ್ಲ ಶಾಕಂಗಳನ್ನು ಬಿಡುವ ತೆರದಿ ಬೇಕು ಬೇಕು ಎಂಬ ಬಯಕೆ ಬಿಡಲು ಬಾರದು ಸಾಕೆನಿಸದೆ ರತಿಯ ಸುಖದೊಳೇಕ ಚಿತ್ತನಾಗುವಂತೆ ಮಾಧವ 26 ನೇಮ ನಿಷ್ಠೆಯೆಂದು ಪರರ ಧಾಮದನ್ನ ಬಿಡುವವೋಲು ಕಾಮಲೋಭ ಮೋಹಗಳನು ಬಿಡಲು ಬಾರದು ನಿತ್ಯ ಪರರ ಮಾಧವ 27 ಹೇಸಿಗೆಯನು ಕಂಡು ಕರದಿ ನಾಸಿಕವನು ಹಿಡಿಯುವಂತೆ ಹೇಸಿ ವಿಷಯ ವಾಸನೆಯನು ಬಿಡಲು ಸಲ್ಲದು ಘಾಸಿಬಟ್ಟು ಪರರ ಸೇವೆಯಾಸೆಬಟ್ಟು ಮಾಡುವಂತೆ ಮಾಧವ 28 ವಿತ್ತ ಪದವಿ ಕಂಡು ಹರುಷ ಕ್ಲೇಶಗಳಿಗೆ ಸಿಲುಕು- ತಿರುಳು ಹಗಲು ಬಿಡದೆ ಕುದಿದು ತೊಳಲುತಿರುವೆನು ದುರುಳ ವಿಷಯಗಳಿಗೆ ಮನವ ಮಾಧವ 29 ಹೇಸಿ ವಿಷಯ ಸುಖವ ನಾನು ಲೇಸೆನುತ್ತೆ ತಿಳಿದು ಮಮತೆ ಯಾಸೆಯಲ್ಲಿ ಕಟ್ಟುಬಿದ್ದು ಕ್ಲೇಶಪಡುತಿಹೆ ಪಾಶಬಿಡಿಸಿ ದಾಸ ದಾಸ ದಾಸನಾಗಿಸೆನ್ನ ದೋಷ ಮಾಧವ 30 ಆಗದೆನಗೆ ಅಬುಜನಾಭ ಭಾಗವತವ ಕೇಳೆ ಮನಸು ಬೈಗು ಬೆಳಗು ಪೋಗುತಿಹುದು ಸಾಗಿ ಬಾರದು ಭೋಗ ಭಾಗ್ಯಗಳನು ಬಯಸಿ ರಾಗ ಲೋಭಗಳಲಿ ನೆಲಸಿ ಮಾಧವ 31 ಬಂದ ಕಾರ್ಯವಾಗಲಿಲ್ಲ ಎಂದು ಬ್ರಹ್ಮ ದೇಹ ಧರಿಸಿ ಮುಂದ ನೊಂದನರಿಯೆ ಮಾಧವ 32 ದಾಸ ವೇಷವನ್ನು ಹಾಕಿ ದೇಶ ದೇಶವನ್ನು ತುಕ್ಕಿ ಮೋಸಮಾಡಿ ಸುಜನರನ್ನು ಘಾಸಿಗೊಳಿಸಿದೆ
--------------
ಲಕ್ಷ್ಮೀನಾರಯಣರಾಯರು
ಮಾನವ ಗುರುಚರಣ ಸರೋಜವ ಪ ಶೇರಿದ ಶರಣರ ಘೋರ ಪಾತಕವೆಂಬೊ ವಾರಿದ ಗಣಕೆ ಸಮೀರ ಜಗನ್ನಾಥ ಸೂರಿವರ್ಯ ದಾಸಾರ್ಯರಂಘ್ರಿಯನುಅ.ಪ ತಾರತಮ್ಯವ ತಿಳಿಯದೀ ಕಲಿಯುಗದಿ ಮುಕ್ತಿ ದಾರಿಗಾಣದೆ ಭವದಿ ಬಿದ್ದ ಸಜ್ಜನೋ- ದ್ದಾರ ಮಾಡಲು ದಯದಿ ಬ್ಯಾಗವಾಟದಿ ನಾರ ಸಿಂಹಾಖ್ಯ ವಿಪ್ರಾಗಾರದೊಳುದ್ಭವಿಸಿ ಚಾರು ಸಾರವಧರೆಯೊಳು ಬೀರಿದಂಥವರ 1 ಮೇದಿನಿಯೊಳು ಚರಿಸಿ ವ್ಯಾಕ್ಯಾರ್ಥದಿ ಬಹುದು- ರ್ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ ಭೋಧ ಮತಾಬ್ಧಿಗೆ ಶಶಿ ನೃಪಮಾನ್ಯರೆನಿಸಿ ಶ್ರೀದ ಪ್ರಹ್ಲಾದಾನುಜ ಸಲ್ಹಾದರೆ ಇವರೆಂದು ಪಾದ ಪಂಕಜಾ ರಾಧಕರಿಗೆಸುರ ಪಾದಪರೆನಿಪರ 2 ಕ್ಷೋಣಿ ವಿಬುಧ ಗಣದಿ ಸೇವೆಯಕೊಳುತ ಮಾನವಿಯೆಂಬೊ ಕ್ಷೇತ್ರದಿ ಮಂದಿರ ಮಧ್ಯ ಸ್ಥಾಣುವಿನೊಳು ಮುದದಿ ಕಾರ್ಪರವೆಂಬೊ ಕಾನನದಲಿ ಕೃಷ್ಣಾವೇಣಿ ಕೂಲದಿ ಮೆರೆವ ಶ್ರೀನಿಧಿ ನರ ಪಂಚಾನನಂಘ್ರಿಯುಗ ಧ್ಯಾನದಿ ಕುಳಿತ ಮಹಾನುಭಾವರನು 3
--------------
ಕಾರ್ಪರ ನರಹರಿದಾಸರು
ಮಾನವ ಪ ಸ್ಮರಿಸಿ ಜೀವಿಸು ರಂಗವಲಿದ ದಾಸರ ಪಾದ ಶರಧಿ ಚಂದಿರನಾದ ಮೊರೆ ಹೊಕ್ಕ ಶರಣಘುಕರಿಗೆ ಕೇಸರಿಯಾದ ಪರಮ ಸಾಧು ಸಹ್ಲಾದ ಅ.ಪ ತರಣಿ ತನಯನ ಸೂತ ಪುರಂದರಾರ್ಯರ ಗೃಹದಿ ತರಳನೆಂದೆನಿಸಿದಾತ ಮರುತ ದೇವನ ಪದಕೆ ಬರುವ ಯತಿಗಳ ದೂತ ವರದೇಂದ್ರ ತೀರ್ಥರಿಗೆ ಪ್ರೀತ || ಗುರುಧೇನು ಪಾಲ ವಿಜಯ ದಾಸವರ್ಯರ ಮಮತ ಭರಿತನಾಗುತ ಪೋಗಿ ಹರಿಣಾಂಕ ಭಾಗದಲಿ ತ್ವರಿತ ಸಿರಿ ಜಗನ್ನಾಥ ವಿಠಲಾಂಕಿತ ಪಡೆದಾತ ನಮಗೀತ ಗತಿ ಪ್ರದಾತ 1 ದುರಿತ ವಿದೂರ ಮೂರ್ಹತ್ತು ಶರಯುಗ್ಮ ಗ್ರಂಥಗಳ ಸುವಿಚಾರ ತೋರಿ ಬರುತಿಹ ದಿವ್ಯ ಹರಿಕಥಾಮೃತಸಾರ ಸಾರಿದಂಥ ಸುಧೀರ || ಕಾರುಣ್ಯದಲಿ ಪೊರೆವ ಧರಣಿಸುರ ಪರಿವಾರ ಸುಜನ ಕೋರಿಕೆಯ ಮಂದಾರ ಭೂರುಹದ ತೆರದಿ ಘುನ ಸೂರೆ ಕೊಡುವನುದಾರ ದುರಿತವಿಪಿನ ಕುಠಾರ 2 ಇವರ ಕವನ ಪಠಣ ಶ್ರವಣ ಮನನಗಳಿಂದ ಲವಕೇಶವಾಗದು ಜವನ ಭವನದ ಬಂಧ ಅವಿವೇಕತಮದಿ ವರಚರಿತೆ ತಿಳಿಯದೆ ನಿಂದೆ ಗೈದ ಮನಜ ದಿವಾಂಧ | ಭುವನದೊಳು ಬೆಳಗುತಿಹ ಇವರ ಮಹಿಮಾನಂದ ವಿವರಿಸಲು ಎನಗೊಶವೆ ಅವನಿಯೊಳು ನಾ ಮಂದ ಇವರ ಸನ್ನಿಧಿಯಲ್ಲಿ ಸಕಲ ನದಿಗಳ ವೃಂದ ನೆಲಸಿಹವು ನಲವಿಂದ 3 ಮೆರೆವ ಮಾನವಿ ಪುರದಿ ಇರುವ ಸ್ತಂಭದಿ ಜಾಣ ಎರಡೆರಡು ಸಚ್ಛಾಸ್ತ್ರವರಿತ ಘನ್ನ ಪ್ರವೀಣ ಪರವಾದಿಗಳ ವಾಗ್ಧುರದಿ ಗೆದ್ದ ಧುರೀಣ ಹರಿಗೆ ಪಂಚಪ್ರಾಣ || ಅರುಹಲೇನಿವರ ಚರಣನಂಬಿದ ಸುಜನ ಪರಮಭಾಗವತರೆನಿಸಿ ನಿರುತ ಹರಿಪದ ಧ್ಯಾನ ಪರರಾಗಿ ಮೆಟುತಲಿ ಮುಕುತಿಪಥ ಸೋಪಾನ ಸೇರಿದರು ನಿಜ ಸ್ಥಾನ 4 ಶಾಮಸುಂದರ ವಿಠಲ ಸ್ವಾಮಿಗತಿ ಪ್ರಿಯದಾಸ ಶ್ರೀಮದಕ್ಷತೆ ಗಂಧ ನಾಮದ್ವಾದಶ ಭೂಷ ತಿಮಿರ ದಿನೇಶ ಭೂಮಿ ವಿಬುಧರ ಪೋಷ || ಈ ಮಹಾತ್ಮರ ಚಾರುಧವಲಕೀರ್ತಿಪ್ರಕಾಶ ಸೋಮಸುಪ್ರಭೆಯಂತೆ ಪಸರಿಸುತÀ ಸಕಲದೇಶ ಸುಜನ ಕುಮುದ ವಿಕಾಸ ಗೊಳಿಸಿಗರೆದುದುಲ್ಹಾಸ 5
--------------
ಶಾಮಸುಂದರ ವಿಠಲ
ಮಾನವ ಶಿಂಗಾರ್ಯರ ಸುತನಮೋ ನಮೋ ಪ ಮಂಗಳಕರ ಕುಲಿಶಾಂಗ ಮತಾಂಬುಧಿ ತಿಂಗಳಸುಗುಣಿತ ನಮೊ ನಮೊ ಅ.ಪ ತುಂಗಮಹಿಮ ದ್ವಿಜ ಪುಂಗವ ವಿಜಿತಾ ನಂಗ ಶರ ದಯಾಪಾಂಗ ನಮೋ || ಡಿಂಗರೀಕ ಜನಪಾಲ ನಮೊ ಭವ ಭಂಗ ವಿದಾರಣ ನಮೊ ನಮೊ 1 ಜಾತರೂಪ ಶಯ್ಯಾತ್ಮಜ್ಯಾತೆ ಹರಿ | ದೂತ ಪ್ರಹ್ಲಾದರನುಜ ನಮೊ || ಪೂತುರೆ ಘನ ಸತ್ವಾತಿಶಯದ ಪ್ರ ಖ್ಯಾತ ದಿನಪ ಪ್ರಸೂತ ನಮೊ 2 ಪಾತಕಾದ್ರಿಜೀಮೂತ ಭ್ರಾತ ಪಣಿ ಪುರಂದರ ಪೋತನಮೊ ಪೂತಗಾತ್ರ ಶುಭದಾತ್ರ ಭರಿಕ್ಷ ಣ್ಮಾತಿರಿಷ್ಯಶ್ವ ಸುಪ್ರೀತ ನಮೊ 3 ಮೌನಿವರ್ಯ ವರದೇಂದ್ರ ಪಾದಾಂಬುಜ ರೇಣು ವಿಭೂಷಿತ ಪಾಲಯಮಾಂ ಧೇನು ನಿಧೆ ದೇವಾಂಶಜ ಪರಮತ ಪಾವಕ ಪಾಲಯಮಾಂ 4 ಮಾನವಿ ಕ್ಷೇತ್ರನಿಕೇತನ ಸನ್ನುತ ಮಾನಿತ ಗುರುವರ ಪಾಲಯ ಮಾಂ ಧೇನುಪಲ ವಿಜಯರಾರ್ಯ ಕೃಪಾನ್ವಿತ ಧೀನೋದ್ಧರಣ ಫಾಲಯಮಾಂ ಮಾನದಿ ಕ್ಷೇತನಿಕೇತನ ಸನ್ನುತ ಮಾನಿತ ಗುರುವರ ಪಾಲಯಮಾಂ ಜ್ಞಾನನಿಧೆ ದೇವಾಂಶಜ ಪರಮತ ಪಾವಕ ಪಾಲಯ ಮಾಂ 5 ಶೌರಿಕಥಾಮೃತ ಸಾರಗ್ರಂಥ ಕೃತ ಸೂರಿ ಕುಲೋತ್ತುಮ ಜಯ ಜಯಭೋ ಧಾರುಣಿ ಸುರಪರಿವಾರ ನಮಿತ ಪದ ಚಾರುಸ್ತಂಭಾಲಯ ಜಯ ಜಯ ಭೀ 6 ಮಂದವೃಂದ ಮಂದಾರ ಭೂಜನತ ಬಂಧೋ ಭಯಾಪಹ ಜಯ ಜಯ ಭೋ ನಂದಜ ಶಾಮಸುಂದರಾಂಘ್ರಿ ಅರ ವಿಂದ ಮರಂದುಣಿ ಜಯ ಜಯ ಭೋ 7
--------------
ಶಾಮಸುಂದರ ವಿಠಲ
ಮುನಿರಾಯಗೊಂದಿಸುವೆನನು ದಿನದಲಿ ಮನವಚನಕಾಯದಿಂ ಮರೆಯದಲೆ ಗುರು ಮಧ್ವ ಪ ವಾಸುದೇವ ಅಮಾನವಪ್ರತಿಮ ವಿಷ್ಣು ಹರಿ ದಾಸವರ ಪ್ರಥುಧಿ ತ್ರಿಜಗದ್ಗುರು ವರ ಶ್ವಾಸಪತಿ ಚತುರಧೀ ತ್ರಿಜಗದ್ಗುರುವರೇಣ್ಯ ಬೋಧ 1 ವಿಭುವಿಶ್ವವಿತುಪೂರ್ಣ ಬೋಧಾಲವ ಸುಬುದ್ಧಿ ತ್ರಿಭುವನಾಲಯ ಧಿಷಣ ಭೂರಿಚೇತಾ ಅಮಿತ ಬುದ್ಧಿ ಸುಖತೀರ್ಥ ಜಗ ದಭಿವಂದ್ಯದಭ್ರಚೇತಸ ಮಹಾಮನ ಮಧ್ವ2 ಸೂರಿಮಸ್ತಕ ಮುಕುಟ ಸಕಳಜ್ಞ ಸರ್ವವಿತ್ ಮಾರುತಾತ್ಮಜ ಪೂರ್ಣ ಪುಷ್ಠ ಬುದ್ಧಿ ವೃಜಿನ ನಾಶಕನಂತ ಕವಿ ಲೋಕನಾಯಕ ಪ್ರಾಜ್ಞ 3 ಆನಂದತೀರ್ಥ ಗುರು ಬುದ್ಧಿ ಸುಖತೀರ್ಥ ಅನು ಮಾನಯತಿ ಸಂಮೋದ ಹಂಸರಾಟ್ ಚಾರು ಕೃತಾಂತವಿತ್ ಮಹಾ ಮಾನಸ ಪ್ರ್ರಮೋದಾರ್ಯವರ್ಯ ವಿದ್ಯಾಧಿಪತಿ4 ಭುವನ ಭೂಷಣ ವ್ಯಾಸಶಿಷ್ಯ ಅಜಸಮ ಧನ್ಯ ಪ್ರವರ ಪ್ರಾಜ್ಞಾರ್ಯ ಧ್ವಸ್ತದುರಾಗಮ ಕವಿರಾಯಾ ಸುಹೃತ್ ಅಖಿಳಜ್ಞ ದಶಧಿಷಣನೆ ಅವಿರಳ ಜಗನ್ನಾಥ ವಿಠಲನಿಗತಿ ಪ್ರಿಯ 5
--------------
ಜಗನ್ನಾಥದಾಸರು
ಮೂರು ನಾಮಗಳ ಧರಿಸಿರುವ ಕಾರಣವೇನು ಸಾರಿ ಪೇಳಲೊ ಈಗಲೆ ಪ. ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ ಯಾರು ಇಟ್ಟರೋ ನಿನಗೆ ಈ ಮೂರು ನಾಮ ಅ.ಪ. ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು ಕರವ ಮುಗಿದು ಎದ್ದು ನೋಡಲು ನಿನ್ನ ಫಣಿಯೋಳೀ ತರವಿರಲು ಮಧ್ವಮತ ದೈವವೆಂದಿನ್ನು ತಿಳಿಯುವರೆ 1 ಮೂರುರೂಪನು ನಾನು ಮೂರು ಲೋಕಗಳಿಹವು ಮೂರು ಮಾಳ್ಪೆನು ಜಗವ ಮೂರು ಗುಣದಿ ಮೂರು ತಾಪವ ಗೆದ್ದು ಮೂರು ಮಾರ್ಗದಿ ಭಜಿಸೆ ಪಾರು ಮಾಡುವೆನೆಂದು ತೋರುವ ಸೊಬಗೊ 2 ಸಾಲದೆ ನಿನಗೆ ಸೌಂದರ್ಯಕೆ ಒಂದು ತಿಲುಕ ಪಾಲಸಾಗರಶಾಯಿ ಚಲುವಮೂರ್ತಿ ಕಾಲಕಾಲಕೆ ಜನರ ದೃಷ್ಟಿ ತಗುಲುವುದೆಂದು ಲೀಲೆಯಿಂದಲಿ ಹೀಗೆ ಧರಿಸಿದೆಯ ಪೇಳೊ 3 ಮೂರೆರಡು ಎರಡೊಂದು ಇಂದ್ರಿಯವನರ್ಪಿಸಲು ತೋರುವನು ನಿಜರೂಪ ಭಕ್ತಗೆಂದು ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದರೆ ಮೂರುನಾಮವೆ ಗತಿ ಎನ್ನುವ ಬಗೆಯೊ 4 ಶ್ರೀಲೋಲ ಗೋಪಾಲಕೃಷ್ಣವಿಠ್ಠಲ ನಿನ್ನ ಈ ಲೀಲೆ ಬಗೆಯನು ಅರಿವವರ್ಯಾರೊ ವ್ಯಾಳಶಯನ ವೆಂಕಟೇಶ ಎನ್ನ ಮನದಿ ಕಾಲಕಾಲಕೆ ನಿನ್ನ ರೂಪವನೆ ತೋರೋ 5
--------------
ಅಂಬಾಬಾಯಿ
ಮೂರ್ತಿ ಸತ್ಯ ಸಂಧರ ಕೀರ್ತಿ ಜಗದಲ್ಲಿ ಉದ್ಧರರ ಪ. ಪದ್ಮನಾಭ ಮಾಧವ ಮಾಧವ ಅಕ್ಷೋಭ್ಯರ ಚರಣವವಿದ್ಯುಕ್ತದಿಂದ ಬಲಗೊಂಬೆ ರನ್ನದ 1 ಪಾದ ಪದ್ಮವ ಮೊದಲೆ ಬಲಗೊಂಬೆ ರನ್ನದ 2 ರಘುನಾಥ ರಘುವರ್ಯ ರಘೋತ್ತಮ ತೀರ್ಥರ ವೇದವ್ಯಾಸ ವಿದ್ಯಾಧೀಶರೆ ರನ್ನದ ವೇದವ್ಯಾಸ ವಿದ್ಯಾಧೀಶರ ಚರಣವ ಜಗದ ಗುರುಗಳನು ಬಲಗೊಂಬೆ3 ಉತ್ತಮ ವೇದನಿಧಿ ಸತ್ಯವೃತ ತೀರ್ಥರ ಸತ್ಯನಿಧಿ ಸತ್ಯನಾಥರ ರನ್ನದ ಸತ್ಯನಾಥರ ಚರಣವ ಭಕ್ತಿಂದ ಮೊದಲ ಬಲಗೊಂಬೆ 4 ಸತ್ಯಾಭಿನವ ತೀರ್ಥ ಸತ್ಯಪೂರ್ಣ ತೀರ್ಥರಸತ್ಯವಿಜಯ ಸತ್ಯಪ್ರಿಯರ ರನ್ನದ ಸತ್ಯಪ್ರಿಯರ ಚರಣವ ಅತ್ಯಂತವಾಗಿ ಬಲಗೊಂಬೆ 5 ಸತ್ಯಬೋಧ ಸತ್ಯಸಂಧ ಸತ್ಯವರಚಿತ್ತಶುದ್ಧಿಯಲೆ ಬಲಗೊಂಬೆಚಿತ್ತಶುದ್ಧಿಯಲೆ ಸಭೆಯೊಳುಸತ್ಯವಾಕ್ಯಗಳ ನುಡಿಸಲು ರನ್ನದ6 ಸತ್ಯವರ್ಯರೆಂಬ ಉತ್ತಮ ಗುರುಗಳ ಹಸ್ತಕಮಲದಲೆ ನಮಿಸುವೆ ರನ್ನದ ಹಸ್ತಕಮಲದಲೆ ನಮಿಸುವೆ ಜಗದೊಳುಮೆರೆವ ಸತ್ಯಧರ್ಮರನು ಬಲಗೊಂಬೆ 7 ಪಾದ ಪೊಂದಿದ್ದ ಗುರುಗಳು ವಿದ್ಯುಕ್ತದಿಂದ ಬಲಗೊಂಬೆ ರನ್ನದ ವಿದ್ಯುಕ್ತದಿಂದ ಬಲಗೊಂಬೆ ಅತ್ತಿಗೆಯರ ಗೆದ್ದು ದುಂಧುಭಿಯ ಹೊಯಿಸೇವ ರನ್ನದ 8 ಯತಿ ಮುನಿರಾಯರು ಅತಿ ಭಕ್ತರಾಗಿದ್ದಅತಿಪ್ರಿಯರಾದ ಗುರುಗÀಳು ಅತಿ ಪ್ರಿಯರಾದ ರಾಮೇಶನ ಅತಿ ಭಕ್ತರ ಮೊದಲ ಬಲಗೊಂಬೆ ರನ್ನದ 9
--------------
ಗಲಗಲಿಅವ್ವನವರು