ಒಟ್ಟು 494 ಕಡೆಗಳಲ್ಲಿ , 84 ದಾಸರು , 393 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೀಮ ಶಾಮ ಕಾಮಿನಿಯಾದನು ಪ ಭೀಮ ಶಾಮ ಕಾಮಿನಿಯಾಗಲು ಪತಿ ಪುಲೋಮ ಜಿತುವಿನ ಕಾಮಿನಿ ಸಕಲ ವಾಮ ಲೋಚನೆಯ- ರಾಮೌಳಿ ಕೂಗುತಲೊಮ್ಮನದಿ ಪಾಡೆಅ.ಪ ದಾಯವಾಡಿ ಸೋತು ರಾಯ ಪಾಂಡವರು ನ್ಯಾಯದಿಂದ ಸ್ವಾಮಿಯ ಸೇವೆಯೆಂದು ಕಾಯದೊಳಗೆ ಅಸೂಯೆಪಡದಲೆ ಮಾಯದಲ್ಲಿ ವನವಾಯಿತೆಂದು ರಾಯ ಮತ್ಸ್ಯನಾಲಯದೊಳು ತಮ್ಮ ಕಾಜು ವಡಗಿಸಿ ಅಯೋನಿಜೆ ದ್ರೌಪ- ದೀಯ ವಡಗೂಡಿ ಆಯಾಸವಿಲ್ಲದೆ ಅಯ್ವರು ಬಿಡದೆ ತಾವಿರಲು 1 ಬಾಚಿ ಹಿಕ್ಕುವ ಪರಿಚಾರತನದಲಾ ಪಾಂಚಾಲಿಗೆ ಮತ್ಸ್ಯನಾ ಚದುರೆಯಲ್ಲಿ ಆಚರಣೆಯಿಂದ ಯಾಚಕರಂದದಿ ವಾಚವಾಡಿ ಕಾಲೋಚಿತಕೆ ನೀಚರಲ್ಲಿಗೆ ಕೀಚಕನಲ್ಲಿಗೆ ಸೂಚಿಸಲು ಆಲೋಚನೆಯಿಂದಲಿ ನಾಚಿಕೆ ತೋರುತಲಾ ಚೆನ್ನೆ ಪೋಗಲು ಕರ ಚಾಚಿದನು 2 ಎಲೆಗೆ ಹೆಣ್ಣೆ ನಿನ್ನೊಲುಮೆಗೆ ಕಾಮನು ಕಳವಳಿಸಿದ ನಾ ಗೆಲಲಾರೆನಿಂದು ವಲಿಸಿಕೊ ಎನ್ನ ಲಲನೆಯ ಕರುಣಾ- ಜಲಧಿಯೆ ನಾರೀ ಕುಲಮಣಿಯೆ ಬಳಲಿಸದಲೆ ನೀ ಸಲಹಿದಡೇ ವೆ- ಗ್ಗಳೆಯಳ ಮಾಡಿಪೆನಿಳೆಯೊಳೆನ್ನೆ-ಆ- ಖಳನಾ ಮಾತಿಗೆ ತಲೆದೂಗುತಲಿ ಅ- ನಿಳಜನೆನ್ನ ನೀ ಸಲಹೆಂದ 3 ಮೌನಿ ದ್ರೌಪದಿ ಮೌನದಲ್ಲಿ ಹೀನನಾಡಿದಾ ಊನ ಪೂರ್ಣಗಳು ಮನೋಭಾವವ ಧೇನಿಸಿ ನೋಡುತ್ತ ಹೀನಕೆ ತಿಳಿದಳು ಮನದಲಿ ದೀನವತ್ಸಲ ಕರುಣವು ಮೀರಿತು ಕಾನನದೊಳ್ಕಣ್ಣು ಕಾಣದಂತಾಯಿತು ಏನು ಮಾಡಲೆಂದು ಜಾಣೆಯು ಚಿಂತಿಸಿ ಅನಿಲಗೆ ಬಂದು ಮ-ಣಿದಳು4 ಚೆಲ್ವೆ ಕಂಗಳೇ ನಿಲ್ಲೆ ನೀ ಘಳಿಗೆ ಸಲ್ಲದೆ ಆತನ ಹಲ್ಲನು ಮುರಿದು ಹಲ್ಲಣವ ಹಾಕಿ ಕೊಲ್ಲುವೆ ನಾನೀಗ ತಲ್ಲಣಿಸದಿರೇ ಗೆಲ್ಲುವೆನೆ ಪುಲ್ಲನಾಭ ಸಿರಿನಲ್ಲನ ದಯವಿ- ದ್ದಲ್ಲಿಗೆ ಬಂದಿತು ಎಲ್ಲ ಕಾರ್ಯಗಳ ಸಲ್ಲಿಸಿ ಕೊಡುವನು ಬಲ್ಲಿದ ನಮಗೆ ಮಲ್ಲಿಗೆ ಮುಡಿಯಾ ವಲ್ಲಭಳೆ 5 ಎಂದ ಮಾತಿಗಾನಂದ ಮಯಳಾಗಿ ಬಂದಳಾ ಖಳನ ಮಂದಿರದೊಳು ನೀ- ನೆಂದ ಮಾತಿಗೆ ನಾನೊಂದನು ಮೀರೆನು ಕಪಟ ಸೈರಂಧಿರಿಯೂ ಕುಂದಧಾಭರಣವ ತಂದು ಕೊಡಲು ಆ- ನಂದದಿಂ ಪತಿಯ ಮುಂದೆ ತಂದಿಟ್ಟಳು ಮಂದರೋದ್ಧರನ ಚಂದದಿ ಪೊಗಳುತ ಇಂದು ಸುದಿನವೆಂದ ಭೀಮ6 ಉಟ್ಟ ಪೀತಾಂಬರ ತೊಟ್ಟ ಕುಪ್ಪಸವು ಇಟ್ಟತಿ ಸಾದಿನ ಬಟ್ಟು ಫಣಿಯಲ್ಲಿ ಕಟ್ಟಿದ ಮುತ್ತಿನ ಪಟ್ಟಿಸ ಕಿವಿಯಲ್ಲಿ ಇಟ್ಟೋಲೆ ತೂಗಲು ಬಟ್ಟ ಕುಚ ಘಟ್ಟಿ ಕಂಕಣ ರ್ಯಾಗಟೆ ಚೌರಿ ಅ- ದಿಟ್ಟಂಥ ಈರೈದು ಬೆಟ್ಟುಗಳುಂಗರ ಮುಟ್ಟೆ ಮಾನೆರಿ ದಟ್ಟಡಿವೊಪ್ಪತಿ ಕಟ್ಟುಗ್ರದ ಜಗ ಜಟ್ಟಿಗನು 7 ತೋರ ಮೌಕ್ತಿಕದ ಹಾರ ಸರಿಗೆ ಕೇ ಯೂರ ಪದಕ ಭಂಗಾರ ಕಾಳಿಸರ ವೀರ ವಿದ್ರುಮದ ಭಾಪುರಿ ಉ- ತ್ತಾರಿಗೆ ವರ ಭುಜಕೀರುತಿಯು ಮೂರೇಖೆಯುಳ್ಳ ಉದಾರ ನಾಭಿವರ ನಾರಿ ನಡು ಉಡುಧಾರ ಕಿಂಕಿಣಿ ಕ- ಸ್ತೂರಿ ಬೆರಸಿದ ಗೀರುಗಂಧವು ಗಂ- ಬೂರ ಲೇಪ ಶೃಂಗಾರದಲಿ8 ವಂಕಿ ದೋರ್ಯವು ಕಂಕಣ ಒಮ್ಮೆಯೀ- ಚಾಪ ಭ್ರೂ ಅಲಂಕಾರ ಭಾವ ಪಂಕಜಮಾಲೆ ಕಳಂಕವಿಲ್ಲದಲೆ ಸಂಕಟ ಕಳೆವ ಪಂಕಜಾಂಘ್ರಿ ಝಂಕಾರಕೆ ಲೋಕ ಶಂಕಿಸೆ ನಾನಾ- ಅಂಕುರ ವೀರ- ಕಂಕಣ ಕಟ್ಟಿದ ಬಿಂಕದಿಂದಲಾ- ತಂಕವಿಲ್ಲದೆಲೆ ಕಂಕಾನುಜ 9 ಕಂಬು ಕೊರಳು ದಾಳಿಂಬ ಬೀಜ ದಂತ ದುಂಬಿಗುರುಳು ನೀಲಾಂಬುದ ಮಿಂಚೆಂ- ದೆಂಬ ತೆರದಲಾ ಅಂಬಕದ ನೋಟ ತುಂಬಿರೆ ಪವಳ ಬಿಂಬಾಧರ ಜಂಬೀರ ವರ್ಣದ ಬೊಂಬೆಯಂತೆಸೆವ ತಾಂಬೂಲ ಗಿಳಿಯೆಂಬ ಗಂಭೀರ ಪುರುಷನು ಹಂಬಲಿಸಿದ ತಾ ಸಂಭ್ರಮದಿ 10 ಸಂಧ್ಯಾದೇವಿಯೊ ಇಂದ್ರನ ರಾಣಿಯೊ ಚಂದ್ರನ ಸತಿಯೋ ಕಂದರ್ಪನಾಕರ- ದಿಂದ ಬಂದ ಅರವಿಂದದ ಮೊಗ್ಗೆಯೊ ಅಂದ ವರ್ಣಿಪರಾರಿಂದಿನಲಿ ಇಂದು ರಾತ್ರಿ ಇದೆ ಎಂದಮರಮುನಿ ಸಂದೋಹ ಕೊಂಡಾಡೆ ಇಂದುಮುಖಿಯೊಡ ನಂದು ತಾ ನಾಟ್ಯದ ಮಂದಿರಕೆ ನಗೆ- ಯಿಂದ ಬಂದ ಕುಂತಿನಂದನನು11 ಭಂಡ ಉಡಿಯಲಿ ಕೆಂಡವೊ ಪರರ ಹೆಂಡರ ಸಂಗ ಭೂಮಂಡಲದೊಳೆನ್ನ ಗಂಡರು ಬಲು ಉದ್ದಂಡರು ನಿನ್ನನು ಕಂಡರೆ ಬಿಡರೋ ಹಂಡಿಪರೋ ಲಂಡ ಬಾಯೆಂದು ಮುಕೊಂಡು ಕೈದುಡುಕಿ ಅಂಡಿಗೆಳೆದು ಅಖಂಡಲನ ಭಾಗ್ಯ ಮಂಡೆ ಮೊಗ ಗಲ್ಲ ಡುಂಡು ಕುಚ ಮುಟ್ಟಿ ಬೆಂಡಾದನು 12 ಸಾರಿಯಲ್ಲ ಮಕಮಾರಿಯಿದೆನುತ ಶ- ರೀರ ವತಿ ಕಠೋರವ ಕಂಡು ಜ- ಝಾರಿತನಾಗಿ ನೀನಾರು ಪೇಳೆಂದು ವಿ- ಕಾರದ್ಯಬ್ಬರಿಸಿ ಕೂರ್ರನಾಗಿ ತೋರು ಕೈಯೆಂದು ಸಮೀರನು ಎದ್ದು ವಿ ಚಾರಿಸಿಕೋ ಎನ್ನ ನಾರಿತನವೆಂದು ವೀರ ಮುಷ್ಟಿಯಿಂದ್ಹಾರಿ ಹೊಡೆಯಲು ಕ್ರೂರನು ರಕ್ತವ ಕಾರಿದನು 13 ಹಾರಿ ಹೊಯ್ಯತಲೆ ಮೋರೆಲಿದ್ದ ಕಳೆ- ಸೂರೆಯಾಯಿತು ಪರನಾರೇರ ಮೋಹಿಸಿ ಪಾರಗಂಡವರುಂಟೆ ಶರೀರದೊಳಿದ್ದ ಮಾರುತೇಶ ಹೊರಸಾರಿ ಬರೆ ಧೀರ ಭೀಮರಾಯ ಭೋರಿಡುತ ಹಾರಿ ಕೋರ ಮೀಸೆಯನೇರಿಸಿ ಹುರಿಮಾಡಿ ನಾರಿಮಣಿ ಯಿತ್ತ ಬಾರೆಂದು ಕರೆದು ಸಾರಿದನು ನಿಜಾಗಾರವನು 14 ಸರಸವು ನಿನಗೆ ವಿರಸವು ಆಯಿತು ಕರೆಸೆಲೊ ಈ ಪುರದರಸಾ ಕಳ್ಳನ ನರಸಿಂಹನ ನಿಜ ಅರಸಿಗೆ ಮನವನು ಮಂದರ ಅರಸನೆ ಅರಸಿ ನೋಡುತಿರೆ ವರೆಸಿದನಾ ಜೀವ ದೊರಸೆಯ ಖೂಳನ ಬೆರೆಸಿ ಸವಾಂಗ ಸಿರಿ ವಿಜಯವಿಠ್ಠಲ ಅರಸಿನ ಲೀಲೆಯ ಸ್ಮರಿಸುತಲಿ 15
--------------
ವಿಜಯದಾಸ
ಭೂತ ರಾಜನುತ ವಿಠಲ | ಕಾಪಾಡೊ ಇವನಾ ಪ ದಾತ ನೀನಲ್ಲದಲೆ | ಕಾವರಾರಿಹರೋ ಅ.ಪ. ಗುರು ರೂಪಿ ತೈಜಸನು | ನೆರವಾಗಿ ಸ್ವಾಪದಲಿವರಸು ಉಪದೇಶವನು | ಇತ್ತು ಪೊರೆದಿಹನೋ |ಮರಳಿ ಇವ ಲಾತವ್ಯ | ಗುರುರಾಜ ಭಕ್ತನಿಹಪೊರೆಯ ಬೇಕಿವನೆನುತ | ಪ್ರಾರ್ಥಿಸುವೆ ಹರಿಯೇ 1 ನಿಷ್ಕಾಮ ಭಕ್ತನನ | ಮಾಡಿ ನೀ ಸಲಹಯ್ಯಸತ್ಕಾಮಗಳ ಗರೆದು | ಸಾಧನೆಯ ಗೈಸೀದುಷ್ಕಾಮಗಳಿಗೆಡೆಯ | ನೀ ಕೊಡದೆ ಪೊರೆಯಯ್ಯಸತ್ಕರ್ಮ ಸತ್ಸಂಗ | ಸರ್ವದಾ ಕೊಡುತಾ 2 ಸತಿಸುತರು ಹಿತರಲ್ಲಿ | ದುರ್ಮಮತೆ ಕಳೆಯುತ್ತಮತಿಮತಾಂ ವರರಂಘ್ರಿ | ಶತ ಪತ್ರರತನಾಹಿತದಿಂದ ನೀ ಸಲಹಿ | ಗತಿ ಪ್ರದನು ಆಗಯ್ಯಕೃತಿ ರಮಣ ಪ್ರದ್ಯುಮ್ನ | ಪ್ರತಿ ರಹಿತ ದೇವಾ 3 ಮಧ್ವಮತ ಪದ್ಧತ್ಯಭಿ | ವೃದ್ಧಿಗೈಸುತಲಿವಗೆಸಿದ್ಧಾಂತ ಜ್ಞಾನದಲಿ | ಸಿದ್ಧ ನೆನಿಸಯ್ಯಾವೃದ್ಧಿಯಾಗಲಿ ಜ್ಞಾನ | ವೈರಾಗ್ಯ ಭಕ್ತಿಗಳುಮಧ್ವರಮಣನೆ ದೇವ | ಬುದ್ಧಿ ಬೋದಕನೇ 4 ಬದಿಗ ನೀನಾಗಿದ್ದು | ಹೃದಯದವಕಾಶದಲಿಮುದದಿಂದ ತವರೂಪ | ತೋರಿ ಸಲಹಯ್ಯಾ |ಇದಕನ್ಯ ನಾ ಬೇಡೆ | ಯದು ವರೇಣ್ಯನೆ ಕೃಷ್ಣಸದಯ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಭೋಗಿವರನೇ ಪಾಲಿಸೋ ಪ ಆಗಸದೊಳು ನೀನಾಗಮಿಸುತಲಿ ಸ-ದಾಗತಿ ಭೋದವ ಭೋಗಿಸಿ ನಿಂದೇ ಅ.ಪ. ಪರಿ ಪ್ರಾ |ರಬ್ಧವ ಭೋಗವ | ನಾದರದನುಭವಸಾಧನವೀವುದು | ಹೇ ದಯವಂತ 1 ಹೃದಯಾಬ್ಜಾಮಲ | ಸದನದಿ ಸುರತರುಹದುಳ ದೊಳಾಶ್ರಿತ | ಬದಿಗನಿನಾದೆಯೊ |ಸದಮಲ ಶಯ್ಯನೆ | ಇದಿರಾವನು ತವಪದವಿಗೆ ಸುರರೊಳು | ಬುಧಜನ ವಂದ್ಯ 2 ಪತಿ ಗುರುಗೋವಿಂದ ವಿಠಲನ | ಭಾವದಿ ಕಾಣಿಸಿ 3
--------------
ಗುರುಗೋವಿಂದವಿಠಲರು
ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ ಮಂಗಳಂ ಲೋಕಾಭಿರಘುರಾಮ ಸದ್ಗುಣ ಸ್ತೋಮ ಪ ದಶರಥನ ವರಪುತ್ರ ನೀನಾಗಿ ಕೌಶಿಕನ ಯಜ್ಞದಿ ಅಸಮಸಾಹಸ ದೈತ್ಯರನು ಗೆಲಿದಿ ವಸುಧೆಯೊಳು ಗೌತಮನ ಸತಿಯಳನು ಉದ್ಧರಿಸಿ ತಾಟಕಿ ಹೊಸಪರಿಯ ದೈತ್ಯರನು ಸಂಹರಿಸಿ ಎಸೆವ ಮಿಥಿಲಾ ಪುರದಿ ಜಾನಕಿ ಬಿಸಜನೇತ್ರೆಯ ಕೈಪಿಡಿದು ರನ್ನ ಹೊಸ ಪರಿಯ ರಥದೊಳಗೆ ಪೊರಟು ಸತಿಸಹಿತ ಅಯೋಧ್ಯೆಯಲಿ ಮೆರೆದಗೆ1 ದಶರಥನು ಪುತ್ರಗೆ ಪಟ್ಟವನು ಕಟ್ಟುವೆನು ಎನಲು ದಶದಿಕ್ಕಿಗೆ ಪತ್ರವನು ಕಳುಹಿಸಲು ಎಸೆವ ಮಂಗಳ ವಾದ್ಯ ಕೇಳುತಲೆ ಕೈಕೇಯಿ ಬರಲು ಅಸದಳದವರ ಬೇಡಿ ಕಾಡಿಸಲು ವಸುಧೆಗೀಶನ ವನಕೆ ಕಳುಹಲು ಕುಶಲವಿಲ್ಲದೆ ಮರುಗೆ ದಶರಥ ಮಿಸುಣಿಮಣಿ ಸಿಂಹಾಸನ ತ್ಯಜಿ- ಸುತಲಿ ಪಿತೃ ವಾಕ್ಯವ ನಡೆಸಿದಗೆ 2 ಮಡದಿ ಸೀತಾ ಲಕ್ಷ್ಮಣರ ಕೂಡಿ ಬಿಡದೆ ದೈತ್ಯರನೆಲ್ಲ ಕಡಿದಾಡಿ ಒಡತಿ ಸೀತೆಗೆ ಉಂಗುರವ ನೀಡಿ ಹನುಮಂತ ಬರಲು ಕಡುಜವದಿ ಸಾಗರದಿ ಸೇತುವೆಯ ಮಾಡಿ ತಡೆಯದಲೆ ರಾವಣನ ಮೂಲವ ಕಡಿದು ಕಮಲನಾಭ ವಿಠ್ಠಲನು ಮಡದಿಸಹಿತಾಯೋಧ್ಯೆ ಪುರದಲಿ ಸಡಗರದಿ ಸಾಮ್ರಾಜ್ಯವಾಳ್ದಗೆ3
--------------
ನಿಡಗುರುಕಿ ಜೀವೂಬಾಯಿ
ಮಂದೇಹರ ಹರವೂ | ಕಾಲದಿ | ಸಂಧ್ಯಾ ವಂದನವೂ ಪ ಶುಭ | ವೆಂದ್ಹೇಳುವುದು ಅ.ಪ. ಶಚಿ ನೀನಾಗಿರಲೂ | ಕಾಯೋ | $ಶುಚೀ ಎನಿಸಿರಲೂ ||ಶುಚಿಯೆನಿಸುವಿ ಕಿವಿಯು | ಪಚರಿಸುತಲ್ಹರಿವಚ ನುಡಿಸುತ ಶ್ರೀ | ತಾಚಮನದಲೀ 1 ಕಾಲ ಕಾಲ ಮೂರ್ತಿಯನು 2 ಯುಕುತಿ ತಿಳಿದು ನೀನು | ಆರ್ಯರ | ಉಕುತಿ ಪಾಲಿಸಿನ್ನೂಮುಕುತಿದಾಯಕ ಗುರು ಗೋವಿಂದ ವಿಠಲನುಭಕುತಿಗೊಲಿದು ನಿಜ ಭಕುತರ ಪಾಲಿಪ 3
--------------
ಗುರುಗೋವಿಂದವಿಠಲರು
ಮಧ್ವಾಂತರ್ಯಾಮಿ ಶ್ರೀ ಗುರು ಬಿಂಬ ಕಾಯೊ ಪ. ಹೃದ್ವನಜದಲಿ ನೆಲಸಿ ಆಜ್ಞಾನ ಹರಿಸಿ ಅ. ಸಾಟಿ ರಹಿತನೆ ನಿನ್ನ ಮುಖ ದರ್ಶನಾ ಹಾಟಕೋದರ ಮುಖರು ಅರಿಯದಂತವನನ್ನು ಕೋಟಲೆಯಭವ ಜನರು ಅರಿವದೆಂತಯ್ಯಾ 1 ತ್ರಿವಿಧ ಜೀವರ ತೆಗೆದು ಜನ್ಮದಲಿ ತೊಡಕಿಸೀ ಕರ್ಮ ಬಲೆ ಬೀಸಿ ಪವನನೈಯ್ಯನೆ ನಿನ್ನ ಮಾಯ ಮೋಡವ ಕವಿಸಿ ಭವಣಪಡಿಸಲು ಇನ್ನು ಬಿಡುಗಡೆಯದೆಂತೋ 2 ನೀನಾಗೆ ವಲಿದು ನಿನ್ನ ಭಕ್ತರನು ಕಾಯುತಿಯೊ ಮಾನಾಭಿಮಾನದೊಡೆಯನೆ ಆರ್ತಪಾಲ ಗಾನಲೋಲನೆ ನಿನ್ನ ಧ್ಯಾನ ಮೌನವನಿತ್ತು ಮಾನಸದಿ ನಿನ್ನ ತೋರೊ ದೀನ ರಕ್ಷಕನೇ3 ಅಂಗುಟದಿ ಗಂಗೆಯನು ಪೆತ್ತ ಪಾವನಪಾದ ಶೃಂಗಾರ ವಸನ ವಡ್ಯಾಣ್ಯನಡುವೂ ಅಂಗನೆಯು ವಕ್ಷದಲಿ ಹಾರಪದಕಗಳುಲಿಯೆ ಉಂಗುರದ ಬೆರಳು ಕಂಕಣ ಕಡಗ ಪಾಣೀ 4 ಕರ್ಣಕುಂಡಲ ಕಾಂತಿ ಮುಗುಳುನಗೆ ಕುಡಿನೋಟ ರನ್ನ ತಿಲಕದ ಫಣಿಯ ಮುಂಗುರುಳ ಸೊಬಗೊ ಸ್ವರ್ಣಕಾಂತಿಯ ತೇಜ ಕಡಗೋಲ ಕೈ ಸೊಬಗು ಚನ್ನಗೊಪಾಲಕೃಷ್ಣವಿಠಲ ಉಡುಪೀಶಾ 5
--------------
ಅಂಬಾಬಾಯಿ
ಮನಕೆ ಬೇಸರ ಬೇಡ ಮಣಿವೆ ಮಾಧವನೆ ಕ್ಷಣಕೊಂದು ಬೇಡುವ ಈ ಪಾಮರನೆಂದೆನುತ ಪ ತಂದೆಯನು ಕೊಲ್ಲೆನಲು ತಕ್ಕ ಶಿಕ್ಷೆಯ ಮಾಡು ಕೊಂದು ಅಣ್ಣನ ರಾಜ್ಯ ಕೊಡು ಎನಗೆ ಎನಲು ಕುಂದಿಟ್ಟು ಮನ್ನಿಸದಿರಲ್ಲದೆ ಎನ್ನ ಬಂಧನದ ಬಲೆಯನ್ನು ಬಯಲೆನಿಸು ಎಂಬೆ 1 ಹೆಣ್ಣಾಗಿ ಬಾರೆನಲು ಕಣ್ಣೆತ್ತಿ ನೋಡದಿರು ಎನ್ನ ಮನೆಯ ಕುದುರೆಯನು ಕಾಯಲು ಗನ್ನಗತಕನೆಂದು ಮನ್ನಿಸಿ ಸಲಹದಿರಲು ಅನ್ಯ ಬೇಡಿದೆನೇನು ಸಂತಸ ನೀಡೆಂಬೆ 2 ನಾಯಾಗಿ ಬಂದು ನಿನ್ನ ಲತ್ತೆತಿನುಯೆಂದೆನಲು ಕಾಯದಿರು ಕರುಣದಿ ದೇವದೇವೇಶ ಆವಾವ ಕಾಲದಿ ಬಾಯಬಿಡಿಸದಿರಲ್ಪ ಮಾಯ ಮೋಹಿಗಳ ಬಳಿಯೆಂದು ಬೇಡುವೆನು 3 ನೀರುಕೊಟ್ಟೆನ್ನ ಕರದಿಂದ್ಹೊಡಿಸಿಕೊಯೆನಲು ಚೋರನು ಇವನೆಂದು ಬಾರದೆ ಇರೆಲೋ ಘೋರಸಂಸಾರ ತಾಪವಾರಿಧಿಯ ಕಷ್ಟದಿಂ ಪಾರುಮಾಡೆಂದೆನುತ ಸಾರಿ ಬೇಡುವೆನು 4 ಸಲಿಸೆನ್ನ ನೈವೇದ್ಯ ಕುಲಗೇಡು ಎಂದೆನುತ ಛಲದಿ ಬೇಡಲು ಎನಗೊಲಿಯದಿರು ಸ್ವಾಮಿ ಬಲು ಹೊಲೆಯ ಪ್ರಪಂಚದ್ಹಲುಬಾಟ ಬಿಡಿಸೆನ್ನ ಮಲಿನತ್ವಳಿಕಿಸಿ ಚೆಲುವ ಸಲಹೆಂಬೆ 5 ತಿಳಿಯದೆ ನಿನ್ನನ್ನು ಕುಲಗೇಡಿಯೆಂದೆನುತ ಕುಲದಿಂದ ಹೊರಹಾಕಲೊಳಿತಾಗಿ ತಳ್ಳೋ ಮಳ್ಳತನ ಬಿಡಿಸೆನ್ನ ಮನಸಿನ ಕಿಲ್ಬಿಷವ ತೊಳದೆ ನಿಜಜ್ಞಾನದ ಪಾಲಿಸು ಎಂಬೆ 6 ನರನ ಭವಗುಣಗಳ ಪರಿಹರಿಸಿ ಬೇಗನೆ ಕರುಣಿಸು ಎನಗೆ ಪರರ ಬೇಡದ್ದನು ಕರುಣಾಳು ಶ್ರೀರಾಮ ಗುರುವೆ ನೀನಾಗೆನ್ನ ಪರಿಭವದ ದು:ಖವನು ತ್ವರಿತದ್ಹರಿ ತಂದೆ 7
--------------
ರಾಮದಾಸರು
ಮನದಣಿ ನೋಡಿದೆನೊ ಸನಕಾದಿನಮಿತ ಮನದಣಿ ನೋಡಿದೆನು ದೃಢದಿ ಪ ನಿನಗೆ ಸರಿಯಿಲ್ಲ ಭುವನತ್ರಯದಿ ಮನಕೆ ಬೇಸರವಿಲ್ಲದನುದಿನ ತನುವನಪ್ಪಿಹಿಡಿದು ಭಕುತರ ಮನದ ವರಗಳನಡೆಸಿ ಸಲಹುವ ಕನಿಕರಾರ್ಣವ ವಿಠಲ ನಿನ್ನಡಿ ಅ.ಪ ಒಂದು ದಿನ ಆ ತ್ರೇತಾಯುಗದಲ್ಲಿ ಋಷಿಗಡಣ ಕೂಡಿ ಬಂದು ನಿಮ್ಮಯ ಚರಣಸನ್ನಿಧಿಲಿ ಭಯಭಕುತಿಯಿಂದ ವಂದಿಸಾಲಿಂಗನೆಯ ಕೋರುತಲಿ ಅಭಯ ಬೇಡುತಲಿ ನಿಂದ ಋಷಿಗಳಿಗ್ಹಲವು ಪರಿಯಲಿ ತಂದೆ ನೀ ಸಮ್ಮತವ ಪೇಳಿ ಬಂದು ದ್ವಾಪರಾಂತ್ಯಯುಗದಲಿ ಒಂದು ಅರಲವ ಅಗಲದಲೆ ನಿಮ್ಮ ಪೊಂದಿ ಆಲಿಂಗನವನೀಯುವೆ ನೆಂದು ವರವಿತ್ತ ವಿಠಲ ನಿಮ್ಮಡಿ 1 ಅಪಾರಮಹಿಮಜಾಲ ಅವತರಿತಿಸಿದಿ ದ್ವಾಪರಯುಗದಿ ಬಾಲಕೃಷ್ಣ ನೀನಾಗಿ ಶ್ರೀಪತಿ ಸುಜನಪಾಲ ದನುಜಕುಲಕಾಲ ಪಾಪಸಂಹಿತ ಅಮಿತಲೀಲ ಶಾಪಪರಿಹಾರ ವೇಣುಲೋಲ ತಾಪಸೋತ್ತಮರಿಷ್ಟ ನೀಡಲು ಗೋಪಿಕಾಸ್ತ್ರೀಯರೆನಿಸಿ ಪುಟ್ಟಿಸಿ ಗೌಪ್ಯದಾಲಿಂಗನವನಿತ್ತ ಭೂಪ ಭೂಪತಿ ವಿಠಲ ನಿಮ್ಮಡಿ 2 ಸುಗುಣ ಸಂತರಹೃದಯಸಂಚಾರ ದಾಸಾನುದಾಸರು ಪೊಗಳಿ ಭಜಿಸುವ ಗಾನಪ್ರಿಯಕರ ಮೌಲಕೌಸ್ತುಭ ಜಗದಜೀವನ ಪಾವನಾಕಾರ ಪರಮಸುಖಕರ ಅಗಣಿತಾಗಣಿತಮಹಿಮಭರಿತ ಪೊಗಳಲಳವೆ ನಿಮ್ಮ ಚರಿತ ತ್ರಿ ಜಗನಾಟಕ ಸುಲಭದಲಿ ನೀ ಅಗಲದನವರತಸಮ ಈ ಕಲಿ ಯುಗದಿ ಭಕ್ತರಿಗಾಲಿಂಗನೀಯುವ ನಿಗಮಗೋಚರ ವಿಠಲ ನಿನ್ನಡಿ 3 ಮಂದಹಾಸ ಮಂದರೋದ್ಧಾರ ಸುರಕಲ್ಪಧೇನು ಇಂದಿರೆಯರ ಪ್ರಾಣ ಮನೋಹರ ಹೇ ದೀನಬಂಧು ಸುಂದರಾಂಗ ಸುಗುಣಗುಣಹಾರ ಬಂಧನಿವಾರ ಸಿಂಧುಕಲಕಿದಪಾರ ಶೂರ ಕುಂದದೆ ಮೊರೆಕಾಯ್ದ ಸುರರ ಹೊಂದಿಭಜಿಸುವ ಭಕುತಜನಕಾ ನಂದ ನೀಡುತ ಚಂದನೋಡುತ ಸಿಂಧುನಿಲಯ ಮುಕ್ಕುಂದ ಮುರಹರಿ ಅಂದಮಾದ ವಿಠಲ ನಿಮ್ಮಡಿ 4 ಸುತ್ತಮುತ್ತ ಭಕ್ತರಾಲಯವು ಹಿಂಭಾಗದಲ್ಲಿ ಸತ್ಯಭಾಮ ರುಕ್ಮಿಣೀಕಾಂತನು ಮುಂಭಾಗದಲಿ ನಿತ್ಯನಿರ್ಮಲ ಚಂದ್ರಭಾಗಿನಿಯು ನಡುಮಧ್ಯ ರಂಗವು ಭಕ್ತಗೊಲಿದು ಭೂವೈಕುಂಠವ ಸತ್ಯವೆನಿಸಿ ಮೀರಿ ಮೆರೆವ ಭಕ್ತಜನರ ಕೈಯೆತ್ತಿ ಸಾರುವ ಪೃಥ್ವಿಗಧಿಕ ಮಹ ಪಂಢರಾಪುರ ಮುಕ್ತಿ ತವರೆಂಬ ಮಂದಿರದಲ್ಲಿ ಕರ್ತುಶ್ರೀರಾಮ ವಿಠಲ ನಿನ್ನಡಿ5
--------------
ರಾಮದಾಸರು
ಮನುಜ ಮೃಗವೇಷ | ವಿಠಲ ಪೊರೆ ಇವಳಾ ಪ ಅನಘ ಅನಿಲಾಂತಸ್ಥ | ಗುಣಪೂರ್ಣ ಹರಿಯೇ ಅ.ಪ. ಗುರುಮಹಿಮೆ ಅರಿಯದಲೆ | ಚಿರಕಾಲ ಬಾಳಿಹಳೊಮರುತಾಂತರಾತ್ಮಹರಿ | ವರಭೋಗಿ ಶಯನಾತರತಮದ ಸುಜ್ಞಾನ | ಎರಡು ಮೂರ್ಭೇದಗಳಅರುಹಿ ನೀ ಪೊರೆ ಇವಳ | ಸರ್ವ ಸುಲುಭಾಖ್ಯ 1 ಬದಿಗ ನೀನಾಗಿದ್ದು | ಮುದುಡ ಜೀವಿಯ ಮನಕೆವದಗಿ ಬಾರದಲೇವೆ | ಅಜ್ಞಾನ ಮುಸುಕೀಸದಮಲಾಂತಃ ಕರಣ | ದುದಯವನೆ ಕಳಕೊಂಡುವಿಧವಿಧದಿ ಪರಿತಪಿಸಿ | ನೊಂದಿಹಳ ಪೊರೆಯೋ 2 ಸರ್ವ ಬಗೆಯಲಿ ವಂದ್ಯ | ಸರ್ವಂತರಾತ್ಮಕನೆನಿರ್ವಿಕಾರನೆ ನಿನ್ನ | ನಾಮ ಸುಧೆಯಾಸರ್ವದಾ ಉಣಿಸಿ ಪೊರೆ | ಇವಳ ಎನೆ ಬಿನ್ನವಿಪೆಸರ್ವಸುಂದರ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಮರವೆ ಮುಸುಕಿದುದುತಾ ಪರಮ ಕೃಪೆವಂತ ಬಂದು ಪ್ರಳಾಪವೇನಿದುಯೆಂದು ನನ್ನಯತಾಪವನು ತಂಪಿಸುತ ಬಿಗಿಯಪ್ಪಿದನು ದೇಶಿಕನು 1ಕಂಗಳೊಳಗಾನಂದಜಲ ಸುರಿದಂಗದೊಳು ರೋಮಾಂಚವಾಗಿಯೆಮಂಗಳಾಕೃತಿಗಂಡು ಚರಣಕ್ಕೆರಗಿದೆನು ಮರಳಿಕಂಗಳೊರತೆಯ ತೊಡೆದು ದಿವ್ಯ ಕರಂಗಳಿಂದಲಿ ಶಿರತಡ' ಸರ್ವಾಂಗವನು ಬಿಗಿಯಪ್ಪಿಯಭಯವನಿತ್ತ ದೇಶಿಕನು 2ನಿನ್ನೊಳಾನಿಹೆನೆಲ್ಲಿ ಪೋಪೆಡೆಯನ್ನು ತೋರಿಸು ನನಗೆ ನೀನಾರೆನ್ನ ಮನ ನಿನ್ನುವನುಳಿದು ನಿಲಬಲ್ಲುದೇ ಮಗನೇಇನ್ನು ಧೈರ್ಯವ ಮಾಡು ಗಿರಿಗುಹೆಯನ್ನು ಸೇರ್ವೆನು ನಾನು ಜನತತಿಯನ್ನು ಹೊದ್ದುವದಿಲ್ಲವೆಂದುಸುರಿದನು ದೇಶಿಕನು 3ಇರಿಸಿರುವೆನೀ ಪಾದುಕೆಗಳನು ಹರುಷದಿಂದರ್ಚಿಸುತ ಭಾ'ಸುಬರಿಯ ಭ್ರಾಂತಿಯ ಬಿಟ್ಟು ಭಕ್ತಿಯ ಬಲದಿ ಮಂತ್ರವನುನಿರುತ ಜಪಿಸುತ್ತಿರು ಯಥೇಚ್ಛೆಯೊಳರಿವು ಸುಖಸಂಪತ್ತಿ ಲಭಿಪುದುಪರಮ ಭಕತನು ನೀನೆನುತ ವಾಚಿಸಿದನು ದೇಶಿಕನು 4'ಜಯದಶ'ುಯ ದಿವಸ ಲಭಿಸಿತು 'ಜಯಕರ ಮುಂದಿನ್ನು ನಿನಗೆಲೆದ್ವಿಜನೆ ಸುತ ಪೌತ್ರಾದಿ ಕುಲಪಾರಂಪರೆಗೆ ನಿನ್ನಾಸುಜನತೆಯ ಕರುಣಿಪುದು ಭಕ್ತವ್ರಜದೊಲೋಲಾಡುವದು ತಪ್ಪದು'ಜಯಸಾರಥಿ ನಿನ್ನ ವಶವೆಂದನು ಗುರೂತ್ತಮನು 5ಅನಿತರೊಳು ಜನಸಂದಣಿಯ ಧ್ವನಿಯನು ತಿಳಿದು ನಾನೆದ್ದೆ ಬೇಗದಿಘನಕೃಪಾನಿಧಿ ಗುರುವ ಕಾಣದೆ ಮತ್ತೆ ಬಳಲಿದೆನುಇನನುದಿಸಿದೊಂದರೆಘಳಿಗೆ ತಲೆಯನು ಬಿಡದೆುದ್ದಲ್ಲಿ ಪಾದುಕೆಯನು ಶಿರದಿ ತಾಳಿದೆನು ಮನೆಗೈದಿದೆನು ಹರುಷದಲಿ 6ತಿರುಪತಿಯ ವೆಂಕಟನು ಸುಖವನು ಕರುಣಿಸಲು ದೇಶಿಕನ ತನುವನುಧರಿಸಿ ಪಾದುಕೆುತ್ತು ಸಲ'ದನೊಲಿದು ಕೃಪೆುಂದಹರುಷದಿಂದೀ ದಿವಸ ಶ್ರೀ ಗುರುವರನ ಪೂಜಾಕಾರ್ಯವೆನಿಪುದುನಿರುತ ಭಜಿಸುವರಿಂಗೆ ಸಕಲೇಷ್ಟಾರ್ಥ ಸಿದ್ಧಿಪುದು * 7
--------------
ತಿಮ್ಮಪ್ಪದಾಸರು
ಮರುಗದೇ ನಿಂತಿಹುದೆ ಮನವು ನಿನ್ನಾಅರಿಯದಪರಾಧ ತಾನಳಿಸುತಿರಲೆನ್ನ ಪನೆರೆಯವರ ಮೈಸಿರಿಯ ನೋಡಿ 'ರಿಯರ ನಡೆಯಮರೆತು ಧನದಲಿ ಮತಿಯನಳಿದೆಯಾಕರಕೊಂಡು ನರತತಿಯ ಕೆಣಕಿುವರ ಸಹನೆಯಪರಿಪಾಕದಿಂ ನೋಡಿ ಬಂದ ಪೀಡನೆಯ 1'ತವರೆಂಬಂತಿರುವ 'ಂಸೆಯನಾಳೋಚಿಸುತ ಜೊತೆಯೊಳಾರೋಗಿಸುತ ಜಾರಿ ನಿಲ್ಲುತಸತಿ ಸುತಾದ್ಯರ ಭೋಗಸಾಧನವ ಕೆಡಿಸುತ್ತಪತಿತರಿಂದರಸುತ್ತ ಪಿಡಿಸಲು[ಕಾ]ಯುತ 2ಪಾದುಕಾರ್ಚನೆಯನ್ನು ಪಾಲಿಸಿದ ಬಗೆಯನುಬೋಧಿಸುತ ಚಿತ್ತವನು ಬೆದರಿಸುವದೆನೀ ದಯಾಸಾಗರನು ನೀಚರುಪಹತಿಯನುಸಾದರದಿ ಬಿಡಿಸಿನ್ನು ಸಾಕು ಮುನಿಸನು 3ಕಾಲ ದೇಶವ ಕಂಡು ಕಾಪಥವ ಕೈಕೊಂಡುಬಾಳಿದರಳು ಕೂತುಂಡು ಭಕ್ತಿ ಮುಂಕೊಂಡುಊಳಿಗವ ಬೆಸಗೊಂಡು ಊರೊಳಗೆ ತಿರುಕೊಂಡುಬಾಲ ಇರಲರಿದಾಡುಬಡಿಯೆ 'ಡುಕೊಂಡು 4ಮಂಗಳಾರ್ತಿಯ ಸೇವೆ ಮಾಣುತಿಹುದೇಗೈವೆಕಂಗಳಿಗೆ ನೀ 'ಭುವ ಕಾಣಿಸಿದೆ ಸುಖವೆತಿಂಗಳೆನಿತಾದರುವೆ ತಿರಿದೂಳಿಗಕೆ ತರುವೆಸಂಗಿನವರೊಳಗಿರುವೆ ಸತತವೆಲೆ ಗುರುವೆ 5ತಪ್ಪಿಗನುಸಾರವಾಗಿ ತಿಳಿಯೆ ಶಿಕ್ಷಿಪೆಯಾಗಿಒಪ್ಪದ ಪದವ ನೀಗಿಪೊಳಿತಾಗಿತೆಪ್ಪಗೂಳಿಗಕಾಗಿ ತಗುಲಿಸುವೆ ನೀನಾಗಿಸುಪ್ರಸನ್ನತೆಯಾಗಿ ಸುಖಬಡುವರಾಗಿ 6ದುರುಳರಹುದಹುದಿವರು ದೂರಿಗೊಳಗಾದವರುಚರಣಾಬ್ಜ ಸೇವಕರು ಚಾರುಮತಿಯವರುದುರಿತ ಶತವಡಿಸಿದರು ದಾಟುವರು ನಿನ್ನವರುಕರುಣಾಬ್ಧಿ ನೀನಿದಿರುಗಾಣೆ ಸುಖಮಯರು7ಸೆರೆಯ ಪರಿಹರಿಸಿನ್ನು ಸುಖಿಸು ಸದ್ಭಕ್ತರನುಗುರು ಸುತರ ಚರಣವನು ಕಂಡು ಬದುಕುವೆನುಬರಿದೆ ಬೇಡುವೆ ನಾನು ಪಾಲಿಸುವ 'ಭು ನೀನುಶರಣಾಗತಪ್ರಿಯನು ಶಾಂತಿದಾಯಕನು 8ಧರೆಯ ಜನರಜ್ಞತೆಯ ದ'ಸಿ ನಿಜ ಸದ್ಗತಿಯಕರೆದೀವ ಗುರುರಾಯ ವಾಸುದೇವಾರ್ಯಕರುಣ ನಾಗನಗರಿಯ ಸ್ಥಿರಗೈದು ಸುವಸತಿಯಒರೆದೆ ಭವ'ಜಯ ವೇದಾಂತಪದ್ಧತಿಯ 9
--------------
ವೆಂಕಟದಾಸರು
ಮರೆಯಲಾರೆ ನಿನ್ನ ತೊರೆಯಲಾರೆ ಮರೆತು ತೊರೆದು ಜೀವಿಸಲಾರೆ ಕೃಷ್ಣಮುರಾರೆ ಪ ಹರಿಚರಣಂಗಳೆ ಶರಣೆನದಿದ್ದರೆ ನಾನಪರಾಧಿ ರಂಗ ಕರುಣವ ಬೀರದೆ ಮರೆ ನೀನಾದರೆ ನೀನಪರಾಧಿ 1 ಭಕ್ತಿ ವಿರಕ್ತಿಯ ಮಾರ್ಗವ ಬಿಟ್ಟರೆ ನಾನಪರಾಧಿ ರಂಗ ಯುಕ್ತಿಯೊಳೆನ್ನನು ಕತ್ತಲೆಯೊಳಗಿಡೆ ನೀನಪರಾಧಿ 2 ನೀನೇ ಗತಿಮತಿಯೆನಗೆನದಿದ್ದರೆ ನಾನಪರಾಧಿ ಎನ್ನಪರಾಧವ ಮನ್ನಿಸದಿದ್ದರೆ ನೀನಪರಾಧಿ 3 ಅಪರಾಧಗಳಿನ್ನಿಬ್ಬರಿಗೇತಕೋ ಕಮಲಾಂಗ ಸುಪಥವ ತೋರುವ ಜಾಣ್ಮೆಯು ನಿನ್ನದು ಮಾಂಗಿರಿರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಲಗು ಮಲಗಮ್ಮ ತಾಯೆ ಶ್ರೀಹರಿಯ ಜಾಯೆ ಮಲಗು ದುಗ್ಧಾಬ್ಧಿನಿಲಯೆ ಸಾಗರನ ತನಯೆ ಜೋ ಜೋ ಪ ಇಂದಿರೆಯೆ ಹರಿ ನಿನ್ನ ಅಂದವನು ನೋಡಿ ಮಂದರಧರ ತನ ವಕ್ಷದಿ ಮಂದಿರವ ಮಾಡಿ ಚಂದದಿ ಮುದ್ದಿಪನು ಗೋವಿಂದ ನಲಿದಾಡಿ ಮಂದಸ್ಮಿತನಾಗಿ ತಾ ನಿಂದಿರುವ ನಿನ ಕೂಡಿ 1 ಮೂರುಕಣ್ಣ ಮೋಹಿಸಿದನೇನೆಂಬೆನಾಗ ಮಾರಮಣನು ಸ್ತ್ರೀ ವೇಷಧರಿಸಿದಾಗ ಆ ರಮೇಶ ಮರುಳಾದನಮ್ಮ ನಿನಗೀಗ ನೀರೆ ನೀ ಮಲಗು ನಿಶ್ಚಿಂತಳಾಗಿ ಬೇಗ 2 ಪನ್ನಗಾರಿಧ್ವಜಗೆ ಛತ್ರ ಚಾಮರವಾದಿ ಉನ್ನಂಥ ವಸ್ತ್ರ ಆಭರಣಗಳು ನೀನಾದಿ ಅನ್ನಪಾನಾದಿಗಳಿತ್ತು ತೃಪ್ತಿಪಡಿಪಳಾದಿ ನಿನ್ನಂತೆ ಸೇವಿಪರ್ಯಾರು ಮೂರು ಭುವನದಿ 3 ಏನು ಸುಕೃತಗೈದಿದ್ದೆ ನಾ ಕಾಣೆನಮ್ಮಾ ಜಾಣೆ ನಿನಗೆಣೆಯ ಕಾಣೆ ಜನನಿ ಕೇಳಮ್ಮಾ ತಾನೆ ತನ್ನಲ್ಲಿ ರಮಿಪನಲ್ಲವೇನಮ್ಮಾ ದಾನವಾಂತಕನು ನಿನ್ನ ಕೈಪಿಡಿದನಮ್ಮಾ 4 ಮಂಗಳಾಂಗಿಯೆ ನಿನಗೆ ಸರಿಸಮರ್ಯಾರಿಲ್ಲ ಭೃಂಗಕುಂತಳೆ ಕೈ ಜೋಡಿಪರು ಸುರರೆಲ್ಲ ಬಂಗಾರದ ಮಂಚವಣಿಯಾಗಿಹುದಲ್ಲ ರಂಗೇಶವಿಠಲ ತಾ ಪವಡಿಸಿರ್ಪನಲ್ಲ 5
--------------
ರಂಗೇಶವಿಠಲದಾಸರು
ಮಹಿಷಿ ಎನಿಸಿಹಳೇ ಪ ವಸುದೇವ ಭಗಿನಿ ಕೈಕೆಯೀ ಉದರದಲಿಅಸುವ ನೀಧರಿಸುತ್ತ ಅವತರಿಸುತಾ |ವಸುಧೆಯೊಳು ಸುಗುಣ ಗಣಯುತೆಯು ನೀನಾಗಿಪೆಸರಾಂತೆ `ಭದ್ರೆ` ಎಂದೆನುತ ಅವನಿಯಲೀ 1 ಪಿತನು ನಳನೆಂಬನಿಗೆ ಪ್ರೀತಿಯಲಿ ನೀ ಪೇಳ್ದೆಹಿತವು ಶ್ರೀ ಹರಿಗೆಂದು ನುತಿಸುವ ಸುಕರ್ಮ |ಅತಿಶಯದೆ ಪೂಜೆಯಿಂದಧಿಕದಲಿ ಶ್ರೀ ಹರಿಯುನುತಿಗೆ ಪ್ರೀತಿಸುವನೆಂದೊರೆದೆ ಭಕುತಿಯಲೀ2 ಹರಿನಾಮ ಸ್ಮರಿಸುತ್ತ ಹರಿ ಚರಣ ನಮಿಸುವರದುರಿತರಾಶಿಗಳಿರದೆ ಪರಿಹಾರವೆನುತಾ |ಒರೆಯುತೀಪರಿ ನಮನ ಭಕ್ತಿಗೇ ಪ್ರಾಶಸ್ತ್ಯಪರಿಪರಿಯ ಪೇಳಿಹಳೆ ನಮಿಪೆ ನಿನ್ನಡಿಗೇ3 ಈ ಪರಿಯ ತಪಗೈದು ದ್ವಾಪರದ ಯುಗದಲ್ಲಿಶ್ರೀ ಪತಿಯ ದರ್ಶನದಿ ತಾಪತ್ರಯ ಕಳೆದೂ |ಆ ಪರಮ ಪುರುಷನ್ನ ಕೈ ಪಿಡಿದ ಮಹ ಭದ್ರೆಕಾಪುರುಷನಾದೆನ್ನ ಪಾಪ ಪರಿಹರಿಸೇ 4 ಭದ್ರಾಣಿ ಪತಿಗಿನ್ನು ಕಾದ್ರವೇಯನು ಮತ್ತೆಆದ್ರಿ ಮಂದಿರ ತಂದ ಅವಿಕಾರಿ ವಿಪಗೇ |ಸಿದ್ಧೈದು ಗುಣದಿಂದ ಹೀನಳೆಂದೆನಿಸುತ್ತಭದ್ರ ಗುರು ಗೋವಿಂದ ವಿಠಲ ಪ್ರಿಯೆ ಪಾಹೀ 5
--------------
ಗುರುಗೋವಿಂದವಿಠಲರು
ಮಾಧವ ವಿಠಲ ನೀದಯದಿ ಕಾಪಾಡೊ ಇವಳ ಪ ಯಾದವೇಶನೆ ಸ್ವಾಮಿ | ಹೇಸದಾಗತಿವಂದ್ಯಪಾದ ಸೇವಕಳ ಮನದಾಶೆ ಸಲಿಸುತ್ತ ಅ.ಪ. ತೂಲ | ರಾಶಿಗಳನ ಪರಿಯಗೈಸಿ ನೀನಾಗಿ ತವ | ದಾಸಿ ಎಂದೆನಿಸೋ 1 ನೀಚೋಚ್ಚ ತರತಮದಿ | ಯೋಚನೆಯ ನೆಲೆಗೊಳಿಸಿಪ್ರಾಚೀನ ಕರ್ಮಾಳಿ | ಮೋಚನೆಯ ಗೈಯ್ಯೇ |ಖೇಚರೊತ್ತಮ ವಾಹ | ಕೀಚಕಾರಿ ಪ್ರಿಯನೆಯಾಚಿಸುವೆನೋ ಸವ್ಯ | ಸಾಚಿ ಸಖ ಕೃಷ್ಣ 2 ಜ್ಞಾನಗಮ್ಯನೆ ದೇವ | ಜ್ಞಾನಿಜನ ಸುಪ್ರೀಯಆನಂದ ತೀರ್ಥ ಮತ | ದಾನಂದ ಉಣಿಸೀಗಾನಲೋಲನೆ ಇವಳ | ಗಾನಕೊಲಿಯುತ ನೀನುಧ್ಯಾನ ಗೋಚರನಾಗೊ | ಹೃತ್ಕಂಜದೊಳಗೇ 3 ಸುಸ್ವತಂತ್ರನೆ ದೇವ | ಅಸ್ವತಂತ್ರಳ ಕಾವಸರ್ವ ಭಾರವು ನಿಂದೆ | ಶರ್ವವಂದ್ಯಾಸರ್ವವ್ಯಾಪಕನಾಗಿ | ಸರ್ವಜ್ಞ ನೀನಿರಲುಅಶ್ವಮೊಗನೇ ಕಾಯೊ | ವಿಶ್ವಸೃಜಿ ದೇವ 4 ತೈಜಸನೆ ನೀನಾಗಿ | ಯೋಜಿಸಿದ ಪರಿಯಂತೆಭ್ರಾಜಿಸುವ ಅಂಕಿತವ | ನೈಜ ಭಕ್ತಳಿಗೇಯೋಜಿಸಿಹೆ ಮರುತನಿಂ | ಪೂಜ್ಯನೇ ಪರಿಪೂರ್ಣತೇಜಾತ್ಮನಾದ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು