ಒಟ್ಟು 11785 ಕಡೆಗಳಲ್ಲಿ , 132 ದಾಸರು , 6311 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಡುವರು ಮತ್ಯಾರಿಲ್ಲ ಪ ಬೇಡದಿರುವ ಸಜ್ಜನರಡಿಗಳ ಕೊಂ- ಡಾಡುತಲಿರು ನೀ ಹಗಲೆಲ್ಲ ಅ.ಪ ಕಾಸಾದರು ಹಿಡಿಕಾಳಾದರು ಹರಿ- ದಾಸರಿಗೋಸುಗ ಕೊಡಲಿಲ್ಲ ಲೇಸು ದೊರೆವುದೆಂದ್ಹಾರಾಡಿದರಾ- ಯಾಸವಲ್ಲದೆ ಫಲವಿಲ್ಲ 1 ನಿನ್ನಂತೆಯೆ ಪರರನು ನೋಡಿ ದಯೆ- ಯನ್ನು ಅವರಲ್ಲಿ ಇಡಲಿಲ್ಲ ಮುನ್ನಿನ ಕರ್ಮವು ಬಿಡದಲ್ಲ 2 ತಿಳಿವಳಿಕೆಯು ಸ್ವಪ್ನದಲಿಲ್ಲ ನೆಲದೊಳು ಬಚ್ಚಿಟ್ಟಿರುತಿಹ ದ್ರವ್ಯವು ಎಲೊ ನಿನಗದು ಸ್ವಾಧೀನವಲ್ಲ 3 ವ್ಯಾಪ್ತವಾಗಿ ಹೆಚ್ಚುವದೆಲ್ಲ ಆಪ್ತರು ದಾರಾ ಪುತ್ರಾದ್ಯರು ನಿ- ನ್ನಾದರಿಸುವರೊಬ್ಬರು ಇಲ್ಲ 4 ಕಾಮಕ್ರೋಧದೊಳಗೆ ಮುಳುಗಿ ನೀ ಕಂಡ ಕಂಡದು ಕೋರುವೆಯಲ್ಲ ಕ್ಷಣವಾದರು ನೆನೆ ಭಯವಿಲ್ಲ 5
--------------
ಗುರುರಾಮವಿಠಲ
ನೀಡೆಲೋ ಶ್ರೀರಂಗಾ ನಿನ್ನ ದಾಸರ ಸಂಗಾ ಪ ಕೂಡಿಸಿ ತವ ಚರಿತಾಮರ ಗಂಗಾ | ಮಾಡುವದು ಭವಭಂಗಾ1 ಮೂಡಲುದಯದಲಿ ಜ್ಞಾನಪತಂಗಾ | ಓಡುದು ತಮ ಅಂತರಂಗಾ 2 ಸುಗಮದಿ ಗುರುಮಹಿಪತಿ ಪ್ರಭು | ಕಂಗಳಿಗೆ ದೋರುವುದು ಸುಖದಂಗಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನಲ್ಲದನ್ಯವೆನಗಿಲ್ಲ ನಾರದ ವರದಏನೆಂಬೆ ಸರ್ವರಿಗು ನೀನೆಯಹುದಾದಡೆಯು ಪಧನದ ಬಲವುಳ್ಳವರು ಧರ್ಮಗಳ ಮಾಡುವರುಮನದ ಮೇಧಾವಿಗಳು ಮಂತ್ರಿಸುವರು ತನುವಿನಲಿ ತ್ರಾಣಿಗಳು ತೀರ್ಥಗಳ ಪಡೆಯುವರುಅನುವದಿಸಿ ವೇದಗಳನವರಾಢ್ಯರಹರು 1ತನುವ ದಂಡಿಸಿ ಪೂಜ್ಯ ತನುವಾದರವರ್ಗುಂಟುಧನದ ತ್ಯಾಗದಿ ಮುಂದೆ ದೈನ್ಯ ಹರವುಮನವ ನಿಗ್ರಹಿಸಿದರೆ ಮುಖ್ಯ ಜ್ಞಾನವುಬಹುದುಇನಿತಾದರವರ್ಗಿರುವದೇನುಂಟು ನನಗೆ 2ಇತರ ಮಾತುಗಳಾಡದೀ ವಾಕನೊಳಗಿರಿಸಿಮಿತವಾಗಿ ಸತ್ಯಯುತಮಾಗಿ ನುಡಿಸಿಅತಿದೋಷಗಳು ಹೋಗಿಯವರ್ಗೆ ಮುಂದಣ ಭವದಿವಿತತವಾಹದವಿದ್ಯೆ ವಿವರಿಸಲಿದುಂಟೆ 3ಸತತವೂ ಧನವಿಲ್ಲ ಸಾಧು ಸಮ ತನುವಿಲ್ಲವ್ರತತೀರ್ಥಗಳಲಾಡಿದೊಡಲಿದಲ್ಲಮತಿಯಲ್ಲಿ ನೋಡಿದರೆ ಮಂತ್ರ ಮನನಗಳಿಲ್ಲಸ್ತುತಿ ಮಾಳ್ಪ ಸೂಕ್ತಗಳ ಸೊಲ್ಲು ತಾನಿಲ್ಲ 4ಹಿಂದಾದ ಮುಂದೆ ಬಹ ಹೊಂದಿದೀ ಭವ ಸಹಿತತಂದೆ ಕಣ್ದೆರಪಾಗಿ ತಾ ತೋರಿತುಬಿಂದು ಸಾಧನವಿಲ್ಲದೊಡಲೊಂದು ಲಭಿಸಿರಲುಬಂಧವನು ಬಿಡಿಸುವರೆ ಬಂದೆ ಗುರುವಾಗಿ 5ಪರಮ ಕರುಣಾಸಿಂಧು ಪತಿತ ಪಾವನ ಶೀಲದುರಿತಾಂಧಕಾರಕ್ಕೆ ದಿವಸಕರನುಹರಿ ದೀನವತ್ಸಲನು ಹಾಗನಾಥರ ತಾನುಹೊರೆವನೆಂಬೀ ಮಾತು ಹುಸಿಯಾಗಲಿಲ್ಲ 6ನನ್ನನೀಪರಿಯಲ್ಲಿ ನೋಡಿ ಸಲಹಿದ ಮೇಲೆುನ್ನೇಕೆ ಸಂದೇಹವಿದೆ ಚೋದ್ಯವುಸನ್ನುತನೆ ತಿರುಪತಿಯ ಸ್ವಾಮಿ ವೆಂಕಟರಮಣನಿನ್ನಡಿಯ ಸ್ಮರಣೆಯನು ನನಗಿತ್ತೆಯಾಗಿ 7ಕಂ|| ಭೃಗುವಾರದರ್ಚನೆಯನಿದಭೃಗುಸುತೆ ಸಹ ನೀನು ಕೊಳುತೆ ರಕ್ಷಿಸುಯೆನ್ನಂಹೊಗಲಾರೆನು ಭವಸಿಂಧುವನಿಗಮಾರಾಧಿತನೆ ದೇವ ವೆಂಕಟರಮಣಾಓಂ ಯಜ್ಞ ಭೋಕ್ತ್ರೇ ನಮಃ
--------------
ತಿಮ್ಮಪ್ಪದಾಸರು
ನೀನಲ್ಲದಲೆ ಇನ್ನು ನಾನಾರ ಕೂಗಲೊ ಮಾನನಿಧಿ ಗೋಪಾಲ ಶ್ರೀನಿಧಿಯೇ ಪ. ಶ್ರೀನಿವಾಸನೆ ಎನ್ನ ನಾನಾ ಪರಿಯ ಕಷ್ಟ ನೀನೆ ಬಿಡಿಸಿ ಸಲಹೊ ಮಾನಾಭಿಮಾನದೊಡೆಯ ಅ.ಪ. ಕಡುಕೋಪದಿಂ ಖಳನು ಹುಡುಗನ ಬಾಧಿಸೆ ದೃಢ ಭಕ್ತಿಯಿಂದ ನಿನ್ನಡಿಯ ಭಜಿಸೆ ಕೆಡಹಿ ಅಸುರನ ಕೊಂದು ಒಡನೆ ಭಕ್ತನ ಕಾಯ್ದೆ 1 ತೊಡೆಯನೇರಲು ಬರೆ ಜಡಿದು ನೂಕಲು ತಾಯಿ ಒಡನೆ ಮನದಿ ನೊಂದು ಪೊಡಮಡುತ ಅಡವಿ ಅಡವಿ ತಿರುಗಿ ದೃಢದಿ ಭಜಿಸೆ ಧ್ರುವ ಒಡನೆ ಓಡಿ ಬಂದು ದೃಢಪಟ್ಟ ಕೊಡಲಿಲ್ಲೆ 2 ಕರಿ ಕರೆಯೆ ತಡೆಯದೆ ಸಲಹಿದ ಪೊಡವೀಶ ನೀನಲ್ಲೆ ಕಡುಕರುಣಿ ಬಡವಗೆ ಸಿರಿಯಿತ್ತೆ ಮಡದಿಗಕ್ಷಯವಿತ್ತೆ ಕಡುದ್ರೋಹಿಗಳ ಕೊಲಿಸಿ ಒಡನೆ ಐವರ ಕಾಯ್ದೆ3 ಚಿನುಮಯ ಗುಣಪೂರ್ಣ ಅಣು ಮಹತ್ ಅಂತರಾತ್ಮ ಎಣಿಸಲಾಹೊದೆ ನಿನ್ನ ಘನ ಮಹಿಮೆ ಮನಸಿಜಪಿತ ಸರ್ವ ಮನನಿಯಾಮಕ ಹರಿ ಮನದಲ್ಲಿ ನೀ ನಿಲ್ಲೊ 4 ಶ್ರೀಪದ್ಮಭವನುತ ನಾ ಪಾಮರಾಳಿಹೆ ಗೋಪಾಲಕೃಷ್ಣವಿಠಲ ಶ್ರೀಪತಿಯೆ ನೀ ಪಾರು ಮಾಡದೆ ಕಾಪಾಡುವವರ್ಯಾರೊ ತಾಪ ಬಿಡಿಸಿ ಸಲಹೋ5
--------------
ಅಂಬಾಬಾಯಿ
ನೀನಹುದೋ ಘನ ಮಹಿಮ ಮುನಿಜನರೊಡಿಯ ಪೂರ್ಣ ದೀನದಯಾಳು ನೀನೆ ಹರಿಯೆ 1 ಪತಿತಪಾವನನೆಂದು ಶ್ರುತಿ ಸಾರುವರು ಕೇಳಿ ಅತಿ ಹರುಷದಲಿ ಬಂದೆನೊ ಹರಿಯೆ 2 ಮತಿ ಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವದು ಎನಗೆ ಹರಿಯೆ 3 ಮರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ 4 ಅರಿಯೆ ನಾ ನಿಮ್ಮ ವಿನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ 5 ಶರಣಾಗತರ ಹೊರೆವ ಬಿರದು ನಿಮ್ಮದು ಪೂರ್ಣ ಸಾರುವದು ತಿಳಿದುಕೊಳ್ಳೊ ಹರಿಯೆ 6 ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ 7 ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ ಸಿರಿ ಸಕಲಪದವು ನೀನೆ ಹರಿಯೆ 8 ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ ಧನ್ಯಗೈಸೊ ಪ್ರಾಣವ ಹರಿಯೆ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನಹುದೋ ಶ್ರೀ ಹರಿ ಮುನಿಜನರ ಸಹಕಾರಿ ಅನಾಥÀರಿಗಾಧಾರಿ ನೀನೆವೆ ಪರೋಪರಿ ಧ್ರುವ ಪತಿತ ಪಾವನ ಪೂರ್ಣ ಅತಿಶಯಾನಂದ ಸುಗುಣ ಸತತ ಸುಪಥ ನಿಧಾನ ಯತಿ ಜನರ ಭೂಷಣ1 ಬಡವರ ನೀ ಸೌಭಾಗ್ಯ ಪಡೆದವರಿಗೆ ನಿಜ ಶ್ಲಾಘ್ಯ ದೃಢ ಭಕ್ತರಿಗೆ ಯೋಗ್ಯ ಕುಡುವದೇ ಸುವೈರಾಗ್ಯ 2 ಭಾಸ್ಕರ ಕೋಟಿ ಲಾವಣ್ಯ ಭಾಸುತಿಹ್ಯ ತಾರ್ಕಣ್ಯ ದಾಸ ಮಹಿಪತಿ ಜನ್ಮ ಧನ್ಯ ಲೇಸುಗೈಸಿದಿ ನಿನ್ನ ಪುಣ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನಾರು ಪೇಳೆನಗೆ ನಿರುಪಮ ಬಲಪೂರ್ಣ ಮಾನವರೊಳೀ ಪರಿಯ ಶೌರ್ಯವುಂಟೆ ಪ ದಾನವಂತಕನೆಂದು ಮಾನಸಕೆ ತೋರುತಿದೆ ಪ್ರಾಣಿಗಳಿಗೆಲ್ಲಾ ನೀ ತ್ರಾಣದಾಯಕನೆ ಅ.ಪ. ಆಕಾರದಲಿ ನೋಡೆ ನರವೇಷಧಾರಿ ಪ ರಾಕ್ರಮದಿ ಪರಿಕಿಸಲು ಪರಮಪುರುಷ ಶ್ರೀಕಂಠಚಾಪವನು ಖಂಡಿಸಿದ ಕಡುಧೀರ ಕಾಕುತ್ಸ್ಥ ಶ್ರೀರಾಮನೆಂದು ತೋರುವುದೆನಗೆ 1 ಕೋದಂಡಧರ ನಿನ್ನ ಕ್ರೋಧಾಗ್ನಿಗಂಜುತ ಮ ಪಥ ಬಿಡಲು ಲಂಕೆಗೈದಿ ಆ ದಶಾಸ್ಯನ ಕಂಠಪಂಕ್ತಿಯನು ಕಳಚಿಸಿದ ಆ ದಾಶರಥಿಯು ನೀನಲ್ಲದೆ ಬೇರಿಲ್ಲ 2 ಲೋಕಕಾರಣ ನೀನೆ ಲೋಕೇಶ ಲೋಕಧರ ಲೋಕಾಂತರಾತ್ಮಕನು ಲೋಕಜನಕ ಲೋಕರಕ್ಷಕ ಸಕಲ ಲೋಕನಿಯಾಮಕನು ಏಕಮೇವಾದ್ವಿತೀಯನು ಕರಗಿರೀಶನು ನೀನೆ 3
--------------
ವರಾವಾಣಿರಾಮರಾಯದಾಸರು
ನೀನು ನಾನು ಸಮನೆಂತಹೆವು ಕಾಣೆನ್ಯಯ್ಯಾ ಪ ಮಾನವ ರಕ್ಕಸ ಜನರ ಕುತರ್ಕವದೇನೊ ಅ.ಪ. ಹದಿನಾಲ್ಕು ಲೋಕಗಳನು ಪೊರೆವ ದಾತನು ನೀನು ಉದರಕಾಗಿ ಅಂಡಲೆವ ತಿಂಡಿಪೋತನು ನಾನು ಮಧುರ ರಕ್ಕಸನ ಸೀಳ್ದ ಘನ ಪರಾಕ್ರಮಿ ನೀನು ಸುದತಿ ಗದರಿಸಲು ಗದಗದ ನಡುಗುವೆ ನಾನು 1 ವ್ಯಾಳಶಯನನಾಗಿ ಸುಖದಿ ನಿದ್ರಿಸುವೆ ನೀನು ಚೇಳು ಕುಟುಕಲು ಬಾಯ್ಬಡುಕೊಂಬುವೆನು ನಾನು ನಿತ್ಯ ತೃಪ್ತನು ನೀನು ಕೂಳಿಲ್ಲದಿರೆ ಮೇಲಕೇಳಲಾರೆನೊ ನಾನು 2 ಸರ್ವಜ್ಞನಾದ ರಂಗೇಶವಿಠಲ ನೀನು ಗರ್ವಿಷ್ಟನಾದ ಮಹಾಜ್ಞಾನಿಯು ನಾನು ಶರ್ವಾದಿಗಳಿಂದ ಸ್ತುತ್ಯನಾದವ ನೀನು ಉರ್ವಿಯೊಳು ಸರ್ವರಿಂದ ನಿಂದಿತನು ನಾನು 3
--------------
ರಂಗೇಶವಿಠಲದಾಸರು
ನೀನು ಸರ್ವಜ್ಞನಾಗಿರಲು ನಿನ್ನಲಿ ಜನರು ಜಾಣತನ ತೋರಲಾಗುವುದೆ ಪವಮಾನ ಪ ಪ್ರಾಣಪತೇ ನಿನ್ನೊಲುಮೆ ಪಡೆದು ಸುಜನರು ದಿವ್ಯ ಸ್ಥಾನಗಳ ಪೊಂದಿ ಇಹಪರದಿ ಸುಖಿಸುವರು ಅ.ಪ ಧರ್ಮಯೋನಿಯ ಶಾಸನಗಳ ಸಂರಕ್ಷಣೆಯ ಕರ್ಮ ನಿನಗಲ್ಲದನ್ಯರಿಗೆ ತರವೆ ಕಿಮ್ಮೀರ ಕೀಚಕ ಜರಾಸಂಧ ಮೊದಲಾದ ಧರ್ಮಘಾತಕರ ಸದೆ ಬಡಿದ ಬಲಭೀಮ 1 ಜ್ಯೇóಷ್ಠನೆಂಬುವ ಮಮತೆ ತೊರೆದು ಧೈರ್ಯದಲಿ ಧೃತ ರಾಷ್ಟ್ರನಿಗೆ ಕಿಲುಬು ಕಾಸನು ಕೊಡದೆಲೆ ಭಾಗವತ ಧರ್ಮಗಳ ಹಂಚುವ ಹರಿಗೆ ಪ್ರೇಷ್ಟತಮ ನೀನಲ್ಲದನ್ಯರಾರಿಹರೊ 2 ನಿನ್ನ ಮತವೇ ಸಿರಿಯರಮಣನಿಗೆ ಸಮ್ಮತವು ನಿನ್ನ ದಯವೇ ಸಾಧು ಜನಕೆ ಅಭಯ ನಿನ್ನ ಮಾರ್ಗವ ನಂಬಿ ಧನ್ಯರಾಗುವರಲಿ ಪ್ರ ಸನ್ನನಾಗುವ ಹನುಮ ಭೀಮ ಮಧ್ವೇಶ 3
--------------
ವಿದ್ಯಾಪ್ರಸನ್ನತೀರ್ಥರು
ನೀನುಳಿಯೆ ರಕ್ಷಕರ ಕಾಣೆನೀ ಜಗದೊಳಗೆ ಶ್ರೀನಿವಾಸ ಜಗನ್ನಿವಾಸ ಪ ದೀನರಕ್ಷಕ ನಿಖಿಲ ಮಾನವರ ಮಾನಾಭಿ ಮಾನದೊಡೆಯನು ನೀನೆಯಲ್ಲದಿಲ್ಲಾ ಅ.ಪ ನಕ್ರಮುಖದಲ್ಲಿ ಸಿಕ್ಕಿ ದುಃಖಿಸುವ ಕರಿರಾಜ ಚಕ್ರವರ್ತಿಯು ಶರಣುಹೊಕ್ಕೆನೆನಲು ಚಕ್ರವನು ಪಿಡಿದು ನೀನಕ್ಕರೆಯೊಳೈತಂದು ನಕ್ರವದನವ ಸೀಳಿ ರಕ್ಷಿಸಿದೆ ಗಜವಾ ದೇವಾ 1 ಹಿಂದೆ ನಾನಾ ನಗರಿಯಿಂದ ಬಹದಾರಿಯೊಳು ಸಂದುಗಳೀಚಲು ಭಂಡಿ ಸಂಜೆಯೊಳಗೆ ಮುಂದಾಗ ಜೊತೆಯೊಳಗೆ ಬಂಧುಜನದಲ್ಲಿ ನೀ ಬಂದು ಬೆಳಕನು ತೋರಿ ಮುಂದೆಗೂಡಿದೆ ಕೃಷ್ಣಾ 2 ಇಂದು ನಿಜಸತಿಯು ನೊಂದಳುಬ್ಬಸರೋಗ ದಿಂದ ಗಾಳಿಯದೀಪದಂದಮಾಗಿ ನಂದಿ ಪೋಗದ ಮುನ್ನ ಬಂದು ನೀಮರೆಯಾಗು ಎಂದು ಮೊರೆಯಿಡಲಾಗ ಬಂದು ಸಲಹಿದೆ ತಂದೆ 3 ಗುರುಸುತನ ಸಂಯಮದೀ ಪುರದಿಂದ ತಂದಿತ್ತೆ ತುರುಗಾಯ್ವರಸುಗಳನು ಮರಳಿ ಪಡೆದೆ ನರಪೌತ್ರನ ಬಾಣದುರಿಯಿಂದ ರಕ್ಷಿಸಿದೆ ಸರಿಯಾರು ನಿನಗೆ ಸುರನರಭುಜಂಗರಲ್ಲಿ 4 ತರಳಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಕರು ವರವಿಭೀಷಣ ತಾಪಸರನು ಪೊರೆದೆ ಶರಣರನು ಪಾಲಿಸುವ ಬಿರುದು ಧರಿಸಿಹ ವ್ಯಾಘ್ರ ಗಿರಿಯೊಳಗೆ ನೆಲೆಸಿರುವ ವರದವಿಠಲರಾಯ 5
--------------
ವೆಂಕಟವರದಾರ್ಯರು
ನೀನೆ ಅನಾಥನಾಗಿರಲು ಅನ್ಯರಿಗೆ ಏನು ದಾನವ ನೀ ಮಾಡುವಿಯೊ ಪ ಜ್ಞಾನಪೂರ್ಣ ನೀನೆಂದು ಅರಿತು ನಿನ್ನ ಜ್ಞಾನಲೇಶವನು ಯಾಚಿಸುವೆ ಅ.ಪ ಯಾರು ನಿನ್ನ ತಂದೆ ಯಾರು ನಿನ್ನ ತಾಯಿ ತೋರೆಲೊ ಈರೇಳು ಭುವನದಲಿ ಊರೊಳು ವಾಸಕೆ ಗೃಹವನು ಕಾಣದೆ ವಾರಿಧಿಯೊಳು ನೀನಡಗಿದೆಯೊ ರಂಗ 1 ಎಡಬಿಡದಿಹ ನಿನ್ನ ಮಡದಿಯ ಬಯಸದೆ ಪಡೆದೆಯೊ ನಾಭಿಯೊಳ್ನಾಲ್ಮುಗನ ಅಡಿಯಾಕಾಶವ ಕಾಣದ ಇಂತಹ ದುಡುಕಿನ ಲೋಕೋತ್ತರ ಪುರುಷ 2 ಪೆತ್ತುದನೆಲ್ಲವ ತುತ್ತು ಮಾಡುವುದು ಎತ್ತರ ನಡತೆಯೊ ನಾ ಕಾಣೆ ಪುತ್ಥಲಿ ಗೊಂಬೆಗಳಂದದಿ ಎಲ್ಲರ ಸುತ್ತಿಸುತಿಹೆ ಪುರುಷೋತ್ತಮನೆ 3 ಚಂಚಲಳಾದÀ ಮಡದಿಯು ನಿನ್ನನÀು ವಂಚಿಪಳೆನ್ನುವ ಭಯದಿಂದ ಹೊಂಚು ಕಾಯಲು ನಿನ್ನ ಹೃದಯದಲ್ಲಿ ಪೊತ್ತು ಸಂಚರಿಸುವೆ ವಿಲಕ್ಷಣ ಪುರುಷ 4 ಅಣುವಿನೊಳಗೆ ಅಣು ಮಹತಿನೊಳಗೆ ಮಹ ತೆನಿಪ ವಿರೋಧ ಧರ್ಮಕೆ ಧರ್ಮಿ ಎನ್ನಿಪ ನಿನ್ನಯ ಗುಣವರಿಯಲು ಸಂತತ ಸುಜನ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು
ನೀನೆ ಎನಗಾಗಿ ಬಂದು ನೀನೆ ನೀನಾಗೆನಗಿಂದು ಧ್ರುವ ಅಪ್ಪನಾಗೆನಗೆ ನೀ ಬಂದು ತಪ್ಪು ಕ್ಷಮೆ ಮಾಡಿದಿಂದು ಒಪ್ಪಿಸಿಕೊಳಲೆನ್ನ ಬಂದು ಅಪ್ಪಳಿಸಿದೆ(?) ಜನ್ಮವಿಂದು 1 ಅಮ್ಮನಾಗೆನಗೆ ನೀ ಬಂದು ರಂಬಿಸಿದೆ ಎನಗಿಂದು ಸಮ್ಯಜ್ಞಾನದಲಿ ನೀ ಬಂದು ಸುಮ್ಮನÉದೋರಿದೆನಗಿಂದು 2 ಅಣ್ಣನಾಗೆನಗೆ ನೀ ಬಂದು ಕಣ್ಣಿನೊಳಗೆ ಸುಳಿದಿಂದು ಸುಗುಣ ಸಹಕಾರದಲಿ ಬಂದು ಪುಣ್ಯಚರಣದೋರಿದಿಂದು 3 ಅಕ್ಕನಾಗೆನಗೆ ನೀ ಬಂದು ಅಕ್ಕಿದೆ ಆತ್ಮದಲಿಂದು ಸಾಕಿ ಸಲಹಲೆನ್ನ ಬಂದು ಸಿಕ್ಕಿದಕ್ಕಿದೆ ಎನಗಿಂದು 4 ತಮ್ಮನಾಗೆನಗೆ ನೀ ಬಂದು ತಮ್ಮೊಳರ್ಪಿಸಿಕೊಂಡೆ ಇಂದು ತಮ್ಮ ನಿಜವಾದಾರ(?) ಬಂದು ತನುವಿನೊಳಗೆ ಸುಳಿದಿಂದು 5 ತಂಗಿಯಾಗೆನಗೆ ನೀ ಬಂದು ಹಿಂಗಿಸಿದೆ ಭವವಿಂದು ಸಂಗ ಸುಖವದೋರ ಬಂದು ಅಂತರಂಗದಿ ಸುಳಿದಿಂದು 6 ಈಸು ಪರಿಯಲೆನಗಿಂದು ಆಶೆಪೂರಿಸಿದೆನಗಿಂದು ಭಾಸ್ಕರ ಗುರುವಾಗಿ ಬಂದು ಭಾಸಿ ಪಾಲಿಸಿದೆನಗಿಂದು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ಎನಗಾಧಾರಿ ಶ್ರೀಹರಿ ನೀನೆ ಎನಗಾಧಾರಿ ಧ್ರುವ ಸಕಲ ಸುಖವ ಬೀರುವ ಉದಾರಿ ಭಕುತ ವತ್ಸಲ ಮುಕುಂದ ಮುರಾರಿ 1 ಅಂತರ್ಬಾಹ್ಯದ ಲೀಹ ನರಹರಿ ಕಂತುಪಿತನೆ ಪೀತಾಂಬರಧಾರಿ 2 ಹಿತದಾಯಕ ನೀನೆವೆ ಪರೋಪರಿ ಪತಿತಪಾವನ ಮಹಿಪತಿ ಸಹಕಾರಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ಕರುಣಿ ದೀನಪಾಲ ದಾನವಾಂತಕನಾಥಬಂಧು ಪ ಕಾಸಾರಕಿಳಿದು ಕರಿಯ ಕಾಯ್ದಿ ಹೇಸದೆ ತರುಣಿ ಮೊರೆಯ ಕೇಳ್ದಿ ಬೇಸರಿಲ್ಲದೆ ದಾಸಜನರ ಆಸೆ ಪೂರೈಸಿ ಪೊರೆದಿ ಪ್ರಭು 1 ಬಾಲಗೈದ ತಪಕೆ ಒಲಿದಿ ಮೇಲುಪದವಿ ಕರುಣಿಸಿದಿ ಕಾಲಗೆ ಕಾಲನಾಗಿ ಮೆರೆವ ಖೂಳರಕ್ಕಸನುದರ ಸೀಳ್ದಿ 2 ನಿಗಮ ತಂದಿ ಭಾರಬೆನ್ನಲಿ ಪೊತ್ತು ನಿಂದಿ ಹಾರೈಸಿ ಕರೆವ ಭಕುತ ಜನಕಾ ಧಾರ ಮಮಪ್ರಾಣೇಶ ಶ್ರೀರಾಮ 3
--------------
ರಾಮದಾಸರು
ನೀನೆ ಕಾಮಿಸಿ ನಿರುತವು ಕೆಡುವೆ ಪ ಸ್ವರೂಪವರಿಯದೆ ನೀ ಕರೆಕರೆ ಪಡುವೆ 1 ಭ್ರಾಂತಿಯಪಡುತಲಿ ಬಾಯಿ ಬಾಯಿ ಬಿಡುವೆ 2 ನಾಯಂದದಿ ಪರಸ್ತ್ರೀಯರ ಬಯಸುತ ಹೇಯನೆನಿಸಿಕೊಂಡು ನೊಯ್ಯುವೆಯಲ್ಲದೆ 3 ಮಲಮೂತ್ರದಿ ನೀ ಮಲಗಿರಲಿಲ್ಲವೇ ಮರೆತು ಯೌವ್ವನ ಗರ್ವದಲಿ ತಲೆ ತೂಗುತ4 ಪರಿಪರಿವಿಧದಲಿ ಭಕ್ತರ ಪಾಲಿಪ ಗುರುರಾಮವಿಠಲನ ಚರಣವ ನಂಬದೆ 5
--------------
ಗುರುರಾಮವಿಠಲ