ಒಟ್ಟು 7318 ಕಡೆಗಳಲ್ಲಿ , 132 ದಾಸರು , 4469 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಯ ನಿಜ ನೋಡೊ ಧ್ರುವ ನೋಡದೆ ನೀ ಗುಣದೋಷ ಮಾಡೊ ಸದ್ಗುರು ಉಪದೇಶ ಕಡಿವದು ಭವಭಯಪಾಶ ಕೊಡುವದಾನಂದದ ಹರುಷ 1 ಉಪಾಯದ ಗುಣವರಿಯ ಸುಪಥದೋರು ಶ್ರೀಹರಿಯೆ ಉಪಕಾರವು ನಾ ಮರೆಯೆ ಕೃಪೆಯುಳ್ಳ ನೀ ಧೊರಿಯೆ 2 ತರಣೋಪಾಯದ ಸುಖಬೆರಿಯೊ ಮಹಿಪತಿಯ ನೀ ಹೊರಿಯೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಯ ನಿವಾರಣ ಸುಳಾದಿ ನಾಕೇಶ ದೇವತತಿ ಆ ಕಮಲನಾಭ ಯತಿ ನಿಕರಗೊಲಿದನೆ ಶ್ರೀಕರವದನ ಸರ್ವಲೋಕಕಧಿಪ ಕೃಪಾ- ಲೋಕನದಲಿ ನೋಡಿ ಸುಖತೀರ್ಥನುತ ಚರಣ ವ್ಯಾಕುಲ ಬಿಡಿಸಿ ನಿನ್ನಾನೇಕ ಮಹಿಮೆ ತಿಳಿಸಿ ಜೋಕೆಯಿಂ ಕಾಯ್ದ ಗುರು ಆಕಾರಂತರ್ಯಾಮಿ ಈ ಕಾಲದಲಿ ಮನ ವ್ಯಾಕುಲಪಡಿಸುವ ಕಾಕು ಭಯವ ಬಿಡಿಸಿ ನೀ ಕಾಯಬೇಕೊ ದೇವ ಲೋಕ ಲೋಕಾದಿಗಳ ಸಾಕುವ ಭಾರಕರ್ತ ಆ ಕಮಲಭವನಭಯ ವ್ಯಾಕುಲ ಬಿಡಿಸಿದೆ ಲೋಕ ಸೃಷ್ಟಿಪ ಶಕ್ತಿ ಏಕಚಿತ್ತವ ಕೊಟ್ಟು ಲೋಕಲೋಕಾಧಿಪರ ನೀ ಕಾಯ್ದೆ ಕರುಣದಿ ಲೋಕವೆಲ್ಲವ ಕೊನೆಗೆ ಏಕಾಪೋಶನಗೈವ ಲೋಕಪತಿಯೆ ಭಕ್ತಾನೀಕಕÀಭಯದಾತ ಭೀಕರ ಬೆನ್ಹತ್ತಿ ತಾಕಿದ ಮನಸಿನ ವ್ಯಾಕುಲ ಭಯಬಿಡಿಸಿ ಜೋಕೆಯಿಂದಲಿ ಕಾಯೊ ಗೋಕುಲಾಂಬುಧಿ ಚಂದ್ರ ಗೋಪಾಲಕೃಷ್ಣವಿಠ್ಠಲ ಈ ಕಾಲಕೊದಗೆ ನಿನ್ನಾನೇಕ ಕೀರ್ತಿಯು ನಿಜವೋ 1 ಭಯ ನಿವಾರಕದೇವ ಭಕ್ತವತ್ಸಲ ನೀನೆ ದಯಮಾಡು ಮನಸಿನಲಿ ತಗುಲಿದ ಭಯವನೆ ಬಿಡಿಸಿ ಭಯಪಡಿಸುತಿರೆ ಖಳನು ಬಾಲಕನ ಪ್ರತಿದಿನದಿ ನಯವಿನಯದಿ ಕಂದ ನಿನ್ನನು ಮೊರೆಯಿಡೆ ಕೇಳಿ ದಯಮಾಡುತ ತರಳನಲಿ ಕನಲುತ ದೈತ್ಯನ ಕೊಂದು ಭಯ ಬಿಡಿಸಿದೆ ಬಾಲಕಗೆ ಭಕ್ತವತ್ಸಲ ನೃಹರೆ ಅಯೋನಿಜೆ ದ್ರೌಪದಿಗೊದಗಿದ ಅನುತಾಪಗಳನೆಲ್ಲ ದಯದಲ್ಲಿ ಪರಿಹರಿಸಿದ ಆಪದ್ಭಾಂಧವ ಸ್ವಾಮಿ ಭಯಪಡಿಸುತ ಭಸ್ಮಾಸುರ ಮೃತ್ಯುವಿನಂದದಿ ಮೃತ್ಯುಂ ಜಯನನು ಬೆನ್ನಟ್ಟಿ ಬರೆ ಹರನು ನಿನ್ನನು ಮೊರೆಹೋಗಲು ಸಂತೈಸಿ ತರುಣಿಯ ರೂಪದಿ ಖಳನ ಕೈಯಿಂದಲೆ ಅವನ ಶಿರ ಉರಿಸುತ ಶಿವನನು ಪೊರೆದೆ ಭಯಹಾರಕ ನರಹರೆ ಶ್ರೀ ಗೋಪಾಲಕೃಷ್ಣವಿಠ್ಠಲ ಜಯವಲ್ಲದೆ ದಾಸರಿಗೆ ಭಯವುಂಟೆ ಪೇಳೋ 2 ನಿತ್ಯ ನಿನ್ನನು ನಂಬಿ ಚಿತ್ತದಿ ನೆನೆವಂಥ ಆಪ್ತವರ್ಗಕೆ ಇನ್ನು ಮೃತ್ಯು ಭಯವು ಉಂಟಿ ಆಪ್ತನಲ್ಲವೆ ನೀನು ಚಿತ್ತಕಂಟಿದ ಭಯ ಮೃತ್ಯು ಪರಿಹರಿಸೈಯ್ಯ ಎತ್ತ ನೋಡಲು ನಿನ್ನ ವ್ಯಾಪ್ತಿ ಸುತ್ತಿರೆ ಜಗದಿ ಮೃತ್ಯುವೆತ್ತಣದೊ ನಿನ್ನುತ್ತಮ ಭಕ್ತರಿಗೆ ಇತ್ತ ದೇಹವು ನಿಂದು ಚಿತ್ತಾದಿಂದ್ರಿಯ ನಿಂದು ನಿತ್ಯ ನಡೆವ ಜೀವಕೃತ್ಯವು ನಿನದೈಯ್ಯ ಸುತ್ತುವೊ ಗ್ರಹಗತಿ ಮೃತ್ಯು ಪರಿವಾರವೆಲ್ಲ ಭೃತ್ಯರಲ್ಲವೆ ನಿನ್ನ ಚಿತ್ತಕ್ಕೆದುರಾಗುವರೆ ಭೃತ್ಯತ್ವದಲ್ಲಿರೆ ಎತ್ತಣ ಭಯವೈಯ್ಯ ಹತ್ತಿಕಾಡುವ ದುಷ್ಟಗ್ರಹಗಳ ಕಡೆಗೆ ನೂಕಿ ಚಿತ್ತ ನಿರ್ಮಲವಿತ್ತು ಮತ್ತೆ ಮಂಗಳವಿತ್ತು ನಿತ್ಯ ಕಾಯಲಿಬೇಕೊ ನಿನ್ನ ಸೇವೆಯನಿತ್ತು ಮೃತ್ಯು ಮೃತ್ಯುವೆ ಮಹಾದೈತ್ಯ ಸಂಹರಣನೆ ಚಿತ್ತದಲ್ಲಿ ನೀನು ಆಪ್ತನಾಗಿರೆ ಬೇರೆ ಹತ್ತಿಕಾಡುವ ಗ್ರಹ ಹತ್ತಿರ ಬರಲುಂಟೆ ಸಿರಿ ಗೋಪಾಲಕೃಷ್ಣವಿಠ್ಠಲ ಹತ್ತಿದ ಮೃತ್ಯು ಭಯ ಕಿತ್ತಿ ಬಿಸುಟು ಕಾಯೊ 3 ವಾಸುದೇವನೆ ನಿನ್ನ ದಾಸನ ಕಾಯುವಂಥ ಈಶನಲ್ಲವೆ ಜೀವರಾಶಿಗಳಿಗೆ ಬಿಂಬ ಸುಷುಪ್ತಿಯಲ್ಲಿ ಕಾವ ಆತ್ಮ ಆನಂದರೂಪ ತಾಸು ತಾಸಿಗೆ ಬಂದ ಭಯವ ಬಿಡಿಸುವದರಿದೆ ದಾಶರಥಿಯೆ ನಿನ್ನ ಅನುಜನ ಜೀವಭಯ ದಾಸ ಹನುಮನಿಂದ ಗಿರಿತರಿಸಿ ಹರಿಸಿದೆ ಆ ಸುಗ್ರೀವನ ಮೊರೆ ಕೇಳಿ ಅಭಯವಿತ್ತು ತೋಷದಿಂದಲಿ ಒಲಿದು ರಾಜ್ಯ ಸುಖವನಿತ್ತೆ ವಾಸವ ಮೊರೆಯಿಡೆ ಒಲಿದು ಅಮೃತವಿತ್ತು ಘಾಸಿಗೊಳಿಪ ಮೃತ್ಯುದೈತ್ಯರ ಸದೆಬಡಿದೆ ನಾಶರಹಿತ ನೃಹರಿ ಗೋಪಾಲಕೃಷ್ಣವಿಠ್ಠಲ ನಾಶದ ಭಯ ಉಂಟೆ ನಿನ್ನ ನಂಬಿದವರಿಗೆ 4 ತರಳತ್ವದಲಿ ಭಯವು ವರ ಯೌವ್ವನದಲಿ ಭಯವು ಜರೆ ಮರಣದಲಿ ಭಯವು ಪರಿಪರಿ ರೋಗದ ಭಯವು ಆರೆಘಳಿಗೆಯು ಬರದಂತೆ ಹರಿ ನೀ ಪರಿಹರಿಸುತಲಿ ಪರತರ ನಿನ್ನಯ ಮಂಗಳ ಚರಿತೆಯ ಸ್ಮರಣೆಯನಿತ್ತು ಹರಿಭಕ್ತರ ಕಾಯುವುದು ಬಿರುದಲ್ಲವೆ ನಿನಗಿನ್ನು ಪರಿಪರಿ ಭಯ ಕ್ಲೇಶಗಳ ಪರಿಹರ ಮಾಡುತ ಕಾಯೊ ವರಯಂತ್ರ ಮಂತ್ರಗಳು ಪರಿಪರಿ ಜಪ ಹೋಮಗಳು ತರತರದೌಷಧ ಪಥ್ಯ ನರಹರಿ ಎಲ್ಲವು ನೀನೆ ಹೊರಗೊಳಗೆಡಬಲದಲ್ಲಿ | ಮರೆವು ಸ್ಮರಣೆಗಳಲ್ಲಿ ಪರಿಪರಿ ಕ್ರೀಡೆಗಳಲ್ಲಿ ಚರಿಸುವ ಕರ್ಮಗಳಲ್ಲಿ ನೆರೆದಿಹ ಜನವೃಂದದಲಿ ಹಗಲಿರುಳು ಸಂಧಿಯಲಿ ಪರಿಪರಿ ಕಾಲಗಳಲ್ಲಿ ಪರಿಪರಿ ದೇಶಗಳಲ್ಲಿ ನರಹರಿ ದುರ್ಗಾಸಹಿತ ವರ ಮೃತ್ಯುಂಜಯ ವರದ ಸಿರಿಭಾರತಿಪತಿಸಹಿತ ಚರಿಸುತ ಬೆಂಬಿಡದಲೆ ನೀ ನಿರುತದಿ ಕಾಯಲಿಬೇಕೊ ಬರಿದನು ಮಾಡದೆ ಸ್ತುತಿಯ ವರ ಸುದರ್ಶನ ಪಾಂಚಜನ್ಯ ಪದ್ಮವ ಪಿಡಿದ ಪರಮ ಮಂಗಳರೂಪ ದೈತ್ಯರಿಗತಿ ಘೋರ ಗುರುಬಿಂಬನೆ ನೀನೆಂದು ಪರಿಪರಿ ಪ್ರಾರ್ಥಿಪೆನಿನ್ನು ಕೊರಗಿಸದಲೆ ಮನವನ್ನು ಹರಿ ಸೌಭಾಗ್ಯವನಿತ್ತು ಕರೆಕರೆಗೊಳಿಸದೆ ಕಾಯೊ ಕರುಣಾಬ್ಧಿಯೆ ದಾಸರನು ವರಭಾಗ್ಯವು ಆಯಸ್ಸು ಆರೋಗ್ಯಂಗಳೂ ಎಲ್ಲ ನಿರುತವಿರಲಿ ಬೇಕೊ ನಿನ್ನವರಿಗೆ ಸಾಧನಕೆ ಕರುಣಾಕರ ಗೋಪಾಲಕೃಷ್ಣವಿಠ್ಠಲ ನಿನ್ನ ಸ್ಮರಿಸಿದ ಮಾತ್ರದಿ ಸಕಲ ಭಯ ಪರಿಹಾರಕವೋ 5 ಜತೆ ನಿತ್ಯ ಮಂಗಳ ನಿನ್ನ ಸ್ಮರಿಪರ ಮನದ ಭಯವ ಕಿತ್ತು ಬಿಸುಟು ಸಲಹೋ ಗೋಪಾಲವಿಠ್ಠಲ
--------------
ಅಂಬಾಬಾಯಿ
ಭಯ ನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ಧ್ರುವ ಕ್ಲೇಶಪಾಶವು ಕತ್ತರಿಸಿ ದೋಷನಾಶವನು ಗೈಸಿ ಪೋಷಿಸುವ ಕೇಶವ ನಿಮ್ಮ ನಾಮ 1 ನರಕ ಘೋರದ ಘಟವೆಂಬ ನರಜನ್ಮದುರ್ಘಟ ತಾರಿಸುವ ನಾರಾಯಣ ನಿಮ್ಮ ನಾಮ 2 ಮದಮತ್ಸರವ ಜರಿಸಿ ಭೇದಾಭೇದವು ಹರಿಸಿ ಮಾಧವ ನಿಮ್ಮ ನಾಮ 3 ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ 4 ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ 5 ಮೊದಲು ಮೂವಿಧಿಯಗಳು ಜರಿಸಿ ಸದಮಲ ಪುಣ್ಯ ಪದವೀವ ಮಧುಸೂದನ ನಿಮ್ಮ ನಾಮ 6 ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ ಭಾವಭಕ್ತೀವ ತ್ರಿವಿಕ್ರಮ ನಿಮ್ಮ ನಾಮ 7 ವರ್ಮಧರ್ಮವನರಿಸಿ ಕರ್ಮಪಾಶವ ಹರಿಸಿ ಜನ್ಮ ತಾರಿಸುವ ವಾಮನ ನಿಮ್ಮ ನಾಮ 8 ಶ್ರೀಕರವನಿತ್ತು ಸಿರಿಸಕಲ ಸೌಭಾಗ್ಯದಲಿ ಸೃಷ್ಟಿಯೊಳು ಹೊರೆವ ಶ್ರೀಧರ ನಿಮ್ಮ ನಾಮ 9 ಹರಿಸಿ ಸಂದೇಹ ಸಂಕಲ್ಪ ಬಾಧೆಯಗಳು ಹರುಷ ಗತಿನೀವ ಹೃಷೀಕೇಶ ನಿಮ್ಮ ನಾಮ 10 ಪಾತಕ ಹರಿಸಿ ಪದ್ಮನಾಭ ನಿಮ್ಮ ನಾಮ 11 ದುರಿತ ವಿಧ್ವಂಸನಿಯ ಮಾಡಿ ಧರೆಯೊಳು ದ್ಧರಿಸುವ ದಾಮೋದರ ನಿಮ್ಮ ನಾಮ 12 ಸಕಲ ಪದವಿತ್ತ ಸುಖಸಾಧನವ ತೋರುತಿಹ್ಯ ಅಖಿಳದೊಳು ಸಂಕುರುಷಣ ನಿಮ್ಮ ನಾಮ 13 ವಾಸನೆಯು ಪೂರಿಸುತ ಭಾಷೆ ಪಾಲಿಸುತಿಹ ಲೇಸಾಗಿ ಶ್ರೀವಾಸುದೇವ ನಿಮ್ಮ ನಾಮ 14 ಪ್ರಾಣಪ್ರಿಯವಾಗಿ ಪ್ರಸನ್ನವಾಗುವ ಪೂರ್ಣ ಪ್ರತ್ಯಕ್ಷವಿದು ಪ್ರದ್ಯುಮ್ನ ನಿಮ್ಮ ನಾಮ 15 ಅನುಮಾನ ಪರಿಹರಿಸಿ ಅನುಭವಾಮೃತ ಸುರಿಸಿ ಅನಿರುದ್ಧ ನಿಮ್ಮ ನಾಮ 16 ಪೂರ್ವಕರ್ಮವ ಹರಿಸಿ ಪೂರ್ಣಕಳೆಯೊಳು ಬೆರೆಸಿ ಪುಣ್ಯಪದವೀವ ಪುರುಷೋತ್ತಮ ನಿಮ್ಮ ನಾಮ 17 ಅಧ್ಯಾತ್ಮ ಸುಖವರಿಸಿ ಸಿದ್ಧಾಂತವನು ತೋರಿ ಅಧ್ಯಕ್ಷವಾಗುವಾಧೋಕ್ಷಜ ನಿಮ್ಮ ನಾಮ 18 ನರಜನ್ಮವನು ಹರಿಸಿ ಹರಿಭಕ್ತಿಯೊಳು ಬೆರೆಸಿ ಅರುವು ಕುರ್ಹುವ್ಹಿಡಿದ ನರಸಿಂಹ ನಿಮ್ಮ ನಾಮ 19 ಅರ್ಚನೆಯು ಪ್ರಾರ್ಥನೆಯು ಪರಮಪೂಜೆಯನರಿಸಿ ಅಚ್ಯುತ ನಿಮ್ಮ ನಾಮ 20 ಜನನ ಮರಣವನಳಿಸಿ ತನುಮದೊಳು ಬೆರಿಸಿ ಜನುಮ ಹರಿಸುವ ಜನಾರ್ದನ ನಿಮ್ಮ ನಾಮ21 ಉಪಮೆಯ ರಹಿತ ವಸ್ತುವುಪಾಯದಲಿ ತೋರಿ ಕೃಪೆಯಿಂದ ಹೊರೆವ ಉಪೇಂದ್ರ ನಿಮ್ಮ ನಾಮ22 ಹರಿಸಿ ಅಹಂಭಾವ ಅರಿಸಿ ಅನುಭವ ಪೂರ್ಣ ಸುರಿಸುವ ಸುಖ ಶ್ರೀಹರಿ ನಿಮ್ಮ ನಾಮ 23 ಕರಕಮಲವಿಟ್ಟು ಶಿರದಲಿ ಸದ್ಗೈಸುತಿಹ ಕರುಣಾಳು ಮೂರುತಿ ಶ್ರೀಕೃಷ್ಣ ನಿಮ್ಮ ನಾಮ 24 ಸಾರ ಸಂಧ್ಯಾಯನದಿ ಮಹಿಪತಿಯ ಹೊರೆವ ಶ್ರೀಗುರು ನಿಮ್ಮ ನಾಮ 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಯಕೃದ್ಭಯಹಾರೀ ರಾಧಾನಯನ ಮನೋಹಾರೀ ಪ ತಾಪತ್ರಯ ಪರಿಹಾರಕ ರಂಗಾ ಗೋಪೀಜನ ಹೃತ್ಪದ್ಮ ಪತಂಗಾ 1 ಸುಂದರ ಸುಸ್ಮಿತಶೋಭಿತ ವದನಾ ಮಾಧವ ಜಿತಮದನಾ 2 ದುಷ್ಟಕುಲಾಂತಕ ಈ ಧರೆಯೊಳು ಶ್ರೀದ - ವಿಠಲ ವಿಧಿಭವವಂದಿತ ಪಾದಾ 3
--------------
ಶ್ರೀದವಿಠಲರು
ಭಯದೂರ ಧರ್ಮಸಾರ ಭುವನಾಧಾರ ಪ. ಭಕ್ತಾರ್ತಿಭಂಜನ ಭವಪಾಶಮೋಚನ ದಮನ ನಿಕೇತನ ಸಾರಿ ಮೈದೋರು ಬಾ ಶ್ರೀರಮಾಮನೋಹರ 1 ಸಂದಿಗ್ಧ ಸಮಯಂಗಳ್ ಬಂದಿರ್ಪವೇಳೆಯೊಳ್ ನೊಂದಿರ್ಪ ಭಜಕರೊಳ್ ಇಂದೇಕೆ ಸಂದೆಗಂ ಪೇಳ್ ಇಂದಿರಾಮನೋಹರ ನಂದನಕುಮಾರ 2 ಶ್ರೀನಾಥ ನಿನ್ನಂಘ್ರಿಯೊಳ್ ಅನ್ಯೂನ ಭಕ್ತಿಯಿರಲ್ ಮಾನಾಭಿಮಾನಂಗಳೇನೊಂದನೆಣಿಸದೆ ಜ್ಞಾನೋದಯಂ ತಾನಾಗೆ ಚಿದಾನಂದಮಪ್ಪುದೈ 3
--------------
ನಂಜನಗೂಡು ತಿರುಮಲಾಂಬಾ
ಭರ್ತø ಭವನದಿ ಮಗಳೆ ಚಿರಕಾಲ ಸುಖಿಸೌ ಕರ್ತ ಶ್ರೀಹರಿ ಪದವನರ್ಥಿಯಿಂ ಭಜಿಸೌ ಪ ಪತಿಯೆ ಸಿರಿವರನೆಂದು ಅತಿಶಯದಿ ಭಾವಿಸುತ ಸತತ ಸೇವೆಯ ಮಾಡಿ ಗತಿಯೆ ನೀನೆನುತ ಸತಿಶಿರೋಮಣಿಯಾಗಿ ಮಿಗಿಲು ಮೋದವ ಪಡೆದು ಕ್ಷಿತಿಯೊಳಗೆ ನೀ ಬಾಳು ಮತಿವಂತೆಯಾಗಿ1 ಅತ್ತೆಮಾವಂದಿರನು ತಾಯಿತಂದೆಗಳಂತೆ ಅತ್ತಿಗೆ ನಾದಿನಿಯ ಅಕ್ಕತಂಗಿಯರೋಲ್ ಉತ್ತಮಳೆ ಭಾವನಂ ಮೈದುನನ ಸಹಜರೆಂ ದರ್ಥಿಯಿಂದರಿಯುತ್ತ ಉಪಚರಿಸುತಿರು ನೀಂ 2 ಬಂಧುಗಳ ನೀ ಬಹಳ ಪ್ರೇಮದಿಂ ಕಾಣುತ್ತ ವಂದಿಸುವುದೌ ಪರಮಭಾಗವತರಡಿಗೇ ಇಂದಿರಾದೇವಿಯೆಂದೈದೆಯ ಪೂಜಿಸೌ ಸುಂದರ ವಿದ್ವರ ಸುತರಕೂಡ 3 ಸರ್ವತ್ರದಲಿನೀನು ಹಿತವಚನ ಮಾಡುತ್ತ ನಿತ್ಯ ಪಡೆಯುತ್ತ ಗರ್ವವರ್ಜಿತೆಯಾಗಿ ಗುಣಮುಖಿಯು ಎಂದೆನಿಸಿ ಸರ್ವಕಾಲವು ಗೌರವ ಕೀರ್ತಿಯನು ಬೀರೌ 4 ಜಾಜಿಕೇಶವ ನಿನ್ನ ಸೌಭಾಗ್ಯವತಿಯಾಗಿ ಸಾಜದಿಂ ಸಲಹುವನು ಸುಜನವಂದಿತನು ಪೂಜಿಪರ ಮರೆಯದಿಹ ಶ್ರೀಹರಿಯ ಕರುಣದಿಂ ಈ ಜಗದಿ ರಾಜಿಸೌ ಪರಮಮಂಗಳೆಯೇ 5
--------------
ಶಾಮಶರ್ಮರು
ಭವ - ಸಂಕಟ ಕಳೆ - ವೆಂಕಟೇಶ ||ಅ|| ಪಂಕ ಸಿರಿ ವೆಂಕಟೇಶ ಅ.ಪ. ಮಹ ವೇದಗಳನು ಕದ್ದ ದೈತ್ಯನ ಕೊಂದೆ ವೆಂಕಟೇಶಮಹ ಮೀನನಾಗಿ ನೀ ಸತ್ಯವ್ರತಗೆ ಒಲಿದೆ ವೆಂಕಟೇಶ 1 ಕೂರ್ಮ ನೀನಾಗುತ - ವೆಂಕಟೇಶಮಂದರಗಿರಿ ಪೊತ್ತು ಭಕ್ತರ ಸಲಹಿದೆ ವೆಂಕಟೇಶ 2 ಮತ್ತರಾದ ಮಧುಕೈಟಭರ - ಕೊಂದೆ ವೆಂಕಟೇಶಮತ್ತೆ ಭೂ ಚಾಪೆಯ ಮಾಡಿದವನ ಕೊಂದೆ ವೆಂಕಟೇಶ 3 ಕಶಿಪು ಬಾಧೆ ಕಳೆಯಲು - ತರಳಗೆ ವೆಂಕಟೇಶಕ್ಷಣದಿ ಕಂಭದಿ ಬಂದು ದುರುಳನ ಸವರಿದೆ ವೆಂಕಟೇಶ 4 ಮೂರು ಪಾದವ ಬೇಡಿ - ಬಲಿಯ ಭಂಜಿಸಿದೆ ವೆಂಕಟೇಶಪಾರಗಾಣದ ಮಹಿಮೆ ಬಾಗಿಲ ಕಾಯ್ದೆ ವೆಂಕಟೇಶ 5 ಹಂಚಿ ಮೆರೆದೆ ವೆಂಕಟೇಶ 6 ಮಡದಿಯ ಕದ್ದೊಯ್ದ ದೈತ್ಯನನ್ನಳಿದೆ ವೆಂಕಟೇಶಧೃಢ ಭಕುತಗೆ ಲಂಕೆಯ ಪಟ್ಟಣವಿತ್ತೆ ವೆಂಕಟೇಶ 7 ಗೋಪಿ ಜನರ ಪ್ರಿಯ | ಸುಪರ್ಣವರವಾಹ ವೆಂಕಟೇಶಪಾಪಿ ಕೌರವ ಕುಲಹರ ಧರ್ಮ ಸ್ಥಾಪಿ ವೆಂಕಟೇಶ 8 ಬೆತ್ತಲೆ ನೀ ನಿಂತು ಕುತ್ಸಿತ ಅಸುರರಸದೆದ್ಯೋ ವೆಂಕಟೇಶಕುತ್ಸಿತ ಅಸುರರ ಮೋಹಿಸುತಳಿದೆಯೊ ವೆಂಕಟೇಶ 9 ತುರಗನೇರಿ ಕಲ್ಕಿ ಎನಿಸಿಕೊಂಡೆಯೊ ವೆಂಕಟೇಶಉರಗಾದ್ರಿ ವಾಸ ಗುರು ಗೋವಿಂದ ವಿಠಲ ವೆಂಕಟೇಶ 10
--------------
ಗುರುಗೋವಿಂದವಿಠಲರು
ಭವ | ಭಂಗವಾಗುವದು ಅಂಗವಯ್ಯೋ ಪ ಅಗ್ಗವಾದರು ಸಂತರು ಲಾಭವನು | ಮುಗ್ಗು ಜೋಳವ ಕೊಟ್ಟಿತು | ಗೊಗ್ಗಯ್ಯನೆಂಬರೇ ಕಡೆಯಲ್ಲಿ ನಿನಗೆ ಅಗ್ಗಳವದಕಿಂತ ಒಂದುಂಟು ಗಂಟು 1 ಸಕಲ ಶಾಸ್ತ್ರಗಳ ಬಲ್ಲೆ | ಮಿಕ್ಕ ಕಾಪುರುಷರಂತೇನು ಕಲ್ಲೇ | ಪ್ರಕಟಿಸುವರಾರಿಲ್ಲೆ ನಿನಗಿನ್ನು ಶಿವ ಶಿವಾನುಭವ ನೀನ್ಯಾಕ ಒಲ್ಲೆ ಇಲ್ಲೇ 2 ಹುಚ್ಚರೇ ಭವತಾರಕನ ಭಕ್ತರು ? ನೆಚ್ಚುವರೆ ಸಂಸಾರವ ? ಮೆಚ್ಚುವರೆ ಶ್ರುತಿಯುತರು ಈ ಮಾತಿಗೇ ? ಎಚ್ಚರಿಕೆ ಇನ್ನಾರ ಹಿಡಿಯೊ ಬೇಗ ಈಗ 3
--------------
ಭಾವತರಕರು
ಭವ ಕಾಮಹರ ನಿನ್ನಂಘ್ರಿ ತಾಮರಸಯುಗಳ ಭಜಿಸುವೆ | ಭಜಿಸಿ ಬಿನ್ನೈಸುವೆ ಶ್ರೀ ಮನೋಹರನ ತೋರಯ್ಯ 1 ಕೃತ್ತಿವಾಸನೆ ಎನ್ನ ಚಿತ್ತದಲಿ ಹರಿಯಪದ ನಿತ್ಯದಲಿ ಭಜಿಪ ಮತಿ ನೀಡೊ | ಮತಿ ನೀಡೊ ಪಾರ್ವತಿ ಚಿತ್ತದೊಲ್ಲಭನೆ ನಮಿಸುವೆ 2 ಸುವರ್ಣಮುಖರಿಯ ತೀರದಲಿ ನೆಲಸಿರುವೆ ಶ್ರೀ ವರಾಹನಂಘ್ರಿ ಭಜಿಸುತ್ತ | ಭಜಿಸುತ್ತ ನೆಲಸಿರುವ ಪಾವನರೂಪ ಸಲಹಯ್ಯ 3 ಕಾಳಸ್ತಿನಿಲಯನೆ ಪೇಳಲಿನ್ನೇನು ನಾ ತಾಳಲಾರೆನು ಈ ಭವಬಂಧ | ಭವಬಂಧ ಬಿಡಿಸುವ ವ್ಯಾಳ ಶಯನನ್ನ ತೋರೈಯ್ಯ 4 ಭಕ್ತರಿಗೊಲಿದು ಅಪಮೃತ್ಯು ಪರಿಹರಿಸಿದೆ ಸತ್ಯ ಸಂಕಲ್ಪ ನಿನ್ನಂಘ್ರಿ | ನಿನ್ನಂಘ್ರಿ ಕಮಲಗಳ ಚಿತ್ತದಲಿ ತೋರಿ ಸಂತೈಸು 5 ಮನಕೆ ಗುರು ನೀನಹುದು ಮನವ ಹರಿಯಲಿ ನೆಲಸೊ ವೈರಿ ಮಮತೆಯಿಂ | ಮಮತೆಯಿಂದಲಿ ನಿತ್ಯ ಮನಶುದ್ಧಿಗೈದು ಕಾಯಯ್ಯ 6 ಶಂಖಚಕ್ರವ ಪಿಡಿದ ಸಂಕರ್ಷಣನ ರೂಪ ನಿತ್ಯ ಭಜಿಸುವೆ | ಭಜಿಸುವೆ ಕೈಲಾಸ ಅಂಕದಲಿ ನೆಲಸಿ ಹರುಷದಿ 7 ನರಸಿಂಹ ರೂಪವನು ಸ್ಮರಿಸುತ್ತ ಮೈಮರೆವೆ ಉರುತರ ಭಾವ ಭಕ್ತಿಯಲಿ | ಭಕ್ತಿಯಲಿ ಭಜಿಪ ನಿನ್ನ ಸ್ಮರಿಸುವರ ಭಯವ ಹರಿಸುವೆ 8 ಶ್ರೀ ರಾಮನಾಮವನು ಪ್ರೇಮದಿಂದುಮೆಗರುಹಿ ಆರಾರು ಅರಿಯದಾನಂದ | ಆನಂದವಿತ್ತೆ ಭವ ತಾರಕವೆಂದು ಕರುಣಾಳೂ 9 ಅಜನ ಭ್ರೂಮಧ್ಯದಲಿ ಜನಿಸಿದೆಯೊ ಜಗದಲ್ಲಿ ಭಂಜನ | ಭಂಜನಗೊಳಿಸಿದೆ ತ್ರಿಜಗದಲಿ ನಿನಗೆ ಸರಿಯುಂಟೆ 10 ಶೇಷ ಪರ್ಯಂಕನಿಗೆ ಹಾಸಿಗೆಯಾಗಲು ತೋಷದಲಿ ತಪವಾಚರಿಸಿದೆ | ಚರಿಸಿ ಸಾಧಿಸಿದೆ ನೀ ಶೇಷ ಪದವಿಯನು ತ್ರಿನೇತ್ರ 11 ಶರಧಿ ಮಥಿಸಲು ಗರಳ ಉದ್ಭವಿಸಿ ಭಯವಾಗೆ | ಭಯವಾಗಿ ಪರಿಹರಿಸಿ ಗರಳವನೆ ಕುಡಿದೆ ಶ್ರೀ ಕಂಠ 12 ಅಸುರರ ವಂಚಿಸಿದ ವಶವಲ್ಲದ ಹೆಣ್ಣು ವಶವಾಗಲೆಂದು ಹಾರೈಸಿ | ಹಾರೈಸಿ ಬಳಲುತಿರೆ ಬಿಸಜಾಕ್ಷ ನಿನ್ನ ಸಲಹಿದ 13 ತಾರಕಾಸುರನಿಂದ ಘೋರಪಡುತಿರೆ ಜಗವು ಮಾರ ಪೂಅಸ್ತ್ರ ಎಸೆಯಲು | ಎಸೆಯಲು ದಹಿಸಿ ಕು- ಮಾರನನು ಪಡೆದೆ ಗಿರಿಜೇಶ 14 ಸ್ತುತಿಪ್ರಿಯ ನಿನ್ನ ನಾ ಸ್ತುತಿಸಲಾಪೆನೆ ಮಂದ ಮತಿ ಎಂದು ನೀನೆ ಸಂತೈಸೊ | ಸಂತೈಸಬೇಕಿನ್ನು ಮತಿಯಿತ್ತು ಹರಿಯ ಪದದಲ್ಲಿ 15 ಶಿರದಲ್ಲಿ ಗಂಗೆ ಚಂದ್ರನ ಮೆರೆಯುವ ಉರಗ ಭೂಷಣನೆ ಕೇಳಿನ್ನು | ಕೇಳಿನ್ನು ಎನ್ನ ಮನ ಮರೆಯದೆ ಹರಿಯ ನೆನೆಯಲಿ 16 ವಿಷ್ಣು ಭಕ್ತರೊಳಗೆ ಶ್ರೇಷ್ಠ ನೀನಹುದಯ್ಯ ಜಿಷ್ಣುವಿಗೆ ಮೆಚ್ಚಿ ಧನುವಿತ್ತೆ | ಧನುವಿತ್ತೆ ಗೋಪಾಲ- ಕೃಷ್ಣವಿಠ್ಠಲನ ತೋರಯ್ಯ 17
--------------
ಅಂಬಾಬಾಯಿ
ಭವ ಕೃತ ಪಾಪ ನಿಷ್ಕøತಿ ನಿನ್ನಚರಣಾಂಬುವೆಂದರುಹುತಲಿದೆ ಶ್ರುತಿತತಿ 1ಮೊದಲು ಪಾತ್ರಾಂತರದಲಿ ಗ್ರಹಿಸಿಯೆ ಯಂತ್ರವಿಧಿುಂದ ಬರೆದು ಬೀಜಾಕ್ಷರಂಗಳನುಹದಿನಾರೆಂಟಾವರ್ತಿ ಜಪಿಸಿ ಮೂಲವನೆತ್ತಿವದನದಿಂ ಬಿಂದು ಸೂಸದವೋಲ್ಸೇವಿಪ ಹಾಗೆ 2ಮೂರಾವರ್ತಿಯೊಳಿಂತು ಸೇವಿಸಿ, ಶಿರದಲ್ಲಿಸೇರಿಸಿ, ಬೇರೆ ಹಸ್ತವ ಮಾರ್ಜಿಸಿಸಾರಿಸಿ ತಡವಿ ತನುವ ಧನ್ಯನಹೆನು ಸಂಸಾರಸಾಗುವ ದಾಂಟಿಸುವರೆ ಜಗದೀಶ 3ಚರಣದಂಗುಟದಿಂದ ಚಿಮ್ಮಿದ ತುಲಸಿಯುಬೆರೆದ ಪುಷ್ಪವು ಬಂತೆನ್ನೊರೆಗೆ ಸರ್ವೇಶಹರುಷದಿಂ ನಿನ್ನಡಿ ಸರಸಿಜಯುಗಳವಮರೆಯೊಕ್ಕ ದೀನನೊಳ್ಕರುಣ ಬಂದುದೆ ಕೃಷ್ಣಾ 4ತಿರುಪತಿನೆಲೆವಾಸ ವರದವೆಂಕಟೇಶಗುರು ವಾಸುದೇವಾರ್ಯನಾಗಿಯೆ ನೀನೆಅರುಹಿದ ಮತ ಪಿಡಿದಿರುವೆನು ತ್ವನ್ನಾಮಸ್ಮರಣೆ ಮಾತ್ರವನಿತ್ತು ಪೊರೆಯಬೇಕೆನ್ನನು 5ಓಂ ಜಿಷ್ಣವೇ ನಮಃ
--------------
ತಿಮ್ಮಪ್ಪದಾಸರು
ಭವ ಪಾರಗಾಣಿಸಲು ಭಾರತಿ ರಮಣ ಸಮೀರನಲ್ಲದೆ ಬೇರೆ ಪ ವೀರ ಹನುಮ ರಘು ವೀರ ಭಕುತ ಬ್ರಹ್ಮ ಚಾರಿಯಾಗಿ ಜೀವ ಸಾರವೆನಿಸಿದೆ ಅ.ಪ ಶೇಷ ಗರುಡ ಶಿವ ಮುಖಸುರರೊಬ್ಬರೂ ದೋಷದೂರಲ್ಲವೊ ಪವಮಾನ ಈಶದಜ್ಞಾನ ಸಂಶಯ ಭ್ರಮೆ ಪೊಂದದೆ ಶ್ರೀಶನ ಪರಮ ಸಂತೋಷಕೆ ಪಾತ್ರನು 1 ವೀರರಧಿಕರೆಲ್ಲರು ನಿನ್ನೆದುರಲಿ ಸಾರಮೇಯದಂತಾದರೊ ಭೀಮ ನಾರಾಯಣನಿಗೊಬ್ಬನಿಗಲ್ಲದೆ ಶಿರಬಾಗದೆ ಮರೆದೆಯೊ ಧೀರ ಕಂಠೀರವ 2 ಶಾಂತನು ನೀ ಬಲುದಾಂತನು ನೀನೆ ಸ್ವಾಂತದಿ ಹರಿಯು ಪ್ರಸನ್ನನು ಸತತವು ಅಂತಿಮಭಾಷ್ಯಾದಿಗಳ ರಚಿಸಿ ವೇ ದಾಂತ ಸಾಮ್ರಾಜ್ಯದಿ ಸಾರ್ವಭೌಮ ಯತಿ3
--------------
ವಿದ್ಯಾಪ್ರಸನ್ನತೀರ್ಥರು
ಭವ ಬಂಧವೂ ಪಗಂಗಾಜನಕ ಖಗೊತ್ತುಂಗ ತುರಗನೆ ದೇವ ರಂಗಾಪುರಾಗಾರನೆ ಸ್ವಾ'ು ಅ.ಪದುರಿತ ಕೋಟಿಗಳ ಪರಿಹರಿಸಿ ರಕ್ಷಿಪ ನಿನ್ನ ಬರಿನಾಮಸ್ಮರಣೆಯೊಂದುಪರಿಪರಿಯ ಭವದ ಕೋಟಲೆಯ ಬಿಡಿಸುವ ನಿನ್ನ ಚರಿತೆಯ ಶ್ರವಣವೊಂದುಅರಿತರಿಯದೆಸಗಿದಘರಾಶಿಯ ದ'ಸಿ ನಿನ್ನ ಶರಣಜನ ಸಂಗವೊಂದುಇರಲಿವನು ಬಯಸಿ ಬೇಡುವೆನೆಂದು ನಿನ್ನ ಸಿರಿಚರಣದೆಡೆಗೈದಿ ಸಂತಸದಳೆದುನಿಂದೂ 1ಆವಜನ್ಮಾರ್ಜಿತದ ಸುಕೃತ ಪರಿಪಾಕವೊ ದೇವ ನಿನ್ನಯ ಕರುಣವೋಸಾವಧಾನದಿ ನಿನ್ನ ನೆನೆದು ಪೂಜಿಸಿ ನುತಿಪ ಸೇವಕರ ಪ್ರೇಮದೊಲವೋಜೀವರಾಶಿಗಳೊಳುದುಸಿ ಮಡಿಯೆ ಪುಟ'ಟ್ಟ ಭಾವಬಂದೀ ಬಣ್ಣವೋಆವುದನು ತಿಳಿಯದಜ್ಞನನು ನಿನ್ನವರೊಯ್ದು ಪಾವನಕ್ಷೇತ್ರವನು ಪೊಗಿಸಿದತಿಶಯವೋ 2ಗುರು ವಾಸುದೇವಾರ್ಯನಾಗಿ ಚಿಕನಾಗಾಖ್ಯಪುರದಿ ಮ'ಮೆಯ ತೋರ್ದೆಯೈಕರೆದಜ್ಞರಜ್ಞತೆಯ ಪರಿದು ಸುಜ್ಞಾನ ಸುಧೆಯೆರೆದು ನೀನೆ ಪೊರೆದೆಯೈಪರದೇಸಿ ವೇಷದಿಂ ಮೂಢ ಜನರಿಗೆ ಭಕ್ತಿುರವ ಕೈಸಾರಿಸಿದೆಯೈಮರೆಯೊಕ್ಕೆ ನಾನು ತಿಮ್ಮದಾಸ ದೇವ ಪರಾಕು ಕರ'ಡಿದು ಕಾಯಬೇಕೆನ್ನ ವೆಂಕಟರಮಣ 3
--------------
ತಿಮ್ಮಪ್ಪದಾಸರು
ಭವ ಭಯಂಕರ ಪ ಶಂಕರ ತ್ವತ್ಪದ ಪಂಕಜದಲಿ ಮನ ಶಂಕೆಯಿಲ್ಲದೆ ಕೊಟ್ಟು ಕಿಂಕರನನು ಪೊರೆ 1 ಮೃತ್ಯುಪಾಶಕೆ ಸಿಕ್ಕಿ ತತ್ತರಿಸುತಲಿದ್ದ ಭಕ್ತನ ಸಲಹಿದ ಮೃತ್ಯುಂಜಯ ಸಲಹೆನ್ನ 2 ವಿಷವು ಆವರಿಸಲು ತ್ರಿದಶರು ಬೇಡಲು ನಸುನಗುಗಲಿ ವಿಷ ಧರಿಸಿದ ಸದಾಶಿವ 3 ಶಿವಶಿವಾವಲ್ಲಭ ಭವಾಭವ ಪ್ರಭವನೆ ಭುವನ ಪವಿತ್ರನೆ ಭವಹರ ಸಲಹೆನ್ನ 4 ಅಂಬಿಕನಾಥನೆ ನಂಬಿದೆ ನಿನ್ನನೆ ಶಂಭುವೆ ಭಕ್ತನ ಬೆಂಬಿಡದೆಲೆ ಪೊರೆ 5 ಅಷ್ಟ ವಿಭೂತದ ಅಷ್ಟಮೂರ್ತಿಯೆ ಪದ ಮುಟ್ಟಿ ಭಜಿಪ ಮನ ಕೊಟ್ಟು ರಕ್ಷಿಸು 6 ದಿಗಂಬರ ದಯಾಕರ ಭಗೀರಥ ಹಿತಕರ ಅಘಹರ ಮೃಗಧರ ಹಗರಣಗೊಳಿಸಿದೆ 7 ವಿಘ್ನಪ ಜನಕನೆ ಅಜ್ಞತೆ ಬಿಡಿಸಯ್ಯ ಸುಜ್ಞನೆ ಭವಾಂಬುಧಿ ಮಗ್ನನನುದ್ಧರಿಸಯ್ 8 ಲಕುಮಿಕಾಂತನ ಪ್ರಿಯಸÀಖನೆ ಶ್ರೀಕಂಠನೆಭಕುತಿ ಭಾಗ್ಯವನೀಯೊ ಶಕುತ ಬಿಡದೆ ಕಾಯೊ 9
--------------
ಲಕ್ಷ್ಮೀನಾರಯಣರಾಯರು
ಭವ ಭಯದಾ ಕೊಳೆ ತೊಳೆÉದಾನಂದವೀವ ಸಾರಂಸಂಸಾರ ಸಾರಂ ಪ. ಸುಳಿದು ಯಮಭಟರೆಳೆಯುವ ಕಾಲದಿ ಪರಿ ಸಾರ ಮನುಜರು ಅ.ಪ. ಅಳಿದವರಾರು ಝಳಝಳ ಮನದಿಂ ಕಳೆಗೊಟ್ಟಿಹ ಪುರುಷನಾರುಂ ಸಲೆ ನಾರದರಲ್ಲದೆ ಯಿದನಂ ಸೆಳೆದುರೆ ಭಕ್ತಿಯೊಳ್ ಹರಿಯಂ ಅಳವಲ್ಲದಾನಂದದಿಂ ಹರಿ ಸುಳಿವ ಪೊಳೆವ ಮನದೊಳಗಿಹನೆನುತಂ ಸಾರಿ ಹರಿದನಂ ಸಾರಂ ಸಂಸಾರಂ 1 ಅರ್ಣವದೊಳು ಭವಾರ್ಣ ನಿರ್ಮಾಣನ ಕರ್ನದೊಳಾಲಿಸಿ ಧ್ವನಿಮಾಡಿ ನಿರ್ಣಯದಲಿ ಸ್ವರ್ಣರೂಪನ ಜೀರ್ಣಿಪ ವೀಣಾನಾದದೀ ಸಾರಂ ಕರ್ಣಾನಂದದಿ ಹಾಡಿದನಾರುಂ ವರ್ಣಾಶ್ರಮ ಧರ್ಮ ಮರ್ಮವರಿತು ಚರ್ಮಸುಖವಳಿದು ಪೂರ್ಣಜ್ಞಾನದ ಪುರಂದರದಾಸರಲ್ಲಿದೆ ಈ ಸಾರಂ ಸಂಸಾರಂ 2 ತರಲಾನಂದದಿಂ ಸರಿಗಮ ಪದನಿಸ ಸನಿದಪ ಮಗರಿಸ ಶೋಡಷಕ್ಷರದಿಂ ತರಲಾ ಸಂಗೀತಕೆ ಸರಳಾಗಿಹ ಹರಿ ನಾಮಾಮೃತವಂ ಧರಿಶಿದ ಪುರಂದರರಂ ಶರಣ ಭರಣ ಕರುಣ ಪಡೆವುದು ನಿರುತ ಹರಿ ಶರಣರೆನುತ ಅರುಹಿದ ಸಂಗೀತವೀ ಸಾರಂ ಸಂಸಾರಂ 3 ಈ ತೆರ ಭಜಿಸಿದಗ್ಯಾತರ ಭಯ ಪಾತಕಹರ ಜಗದೀಶ ಮಾನಸ ದಾತುರದೊಳು ಹರಿ ದಾತನೆಂದರಿತು ನೀತಾಚಾರದಿ ಯಾವಾತ ಸ್ತುತಿಸಲು ಜ್ಯೋತಿ ಪ್ರಕಾಶದಿ ತನುಜಾತನಾಗಿ ಬಹ ಪ್ರೀತಿಗೊಡುತ ಖ್ಯಾತ ಭಕ್ತ ಪಾರಿಜಾತನೆಂದು ತಿಳಿದಾತಗೆ ಇದು ಸಾರಂ ಸಂಸಾರಂ 4 ಭಗವಂತನ ಧ್ಯಾನಿಪನ ಪುಡುಕುತ ಮಿಗೆ ಸಂಚರಿಸುತಲಿಹರೀಗಲು ಭಾಗವತರಿದು ಸತ್ಯಂ ಜಗಕೆ ಜಗದೀಶ ಶ್ರೀ ಶ್ರೀನಿವಾಸನೆಂದು ಮಿಗೆ ಜಗದಾನಂದ ಪುಳಕಿತ ತನುವಿನ ಜೀವರ ಸೊಗವಿಲಿ ನಾಲ್ಮೊಗನೈಯ್ಯನು ಸಿಗುವ ಪರಿಯಗೊಡುತಗಣಿತ ಮಹಿಮರು ಕರುಣಿಸಿದೀ ಸಾರಂ ಸಂಸಾರಂ 5
--------------
ಸರಸ್ವತಿ ಬಾಯಿ
ಭವ ಭಸಿ- ತಾಂಗನ ನೋಡಿದೆ ಪ. ರಂಗನ ತನ್ನಂಗದೊಳಗೆ ಇಟ್ಟು ಹಿಂಗದೆ ನೆನೆಯುವ ಮಂಗಳ ಮೂರುತಿ ಅ.ಪ. ತ್ಯಕ್ಷನ ನೋಡಿದೆ | ಕರುಣಕ- ಟಾಕ್ಷನ ನೋಡಿದೆ ವೀಕ್ಷಣದಿಂದ ಶ್ರೀ ವಕ್ಷನ ಸುತನನು ಶಿಕ್ಷಿಸಿದ ಫಾಲಾಕ್ಷನ ಶಿವನ 1 ಹರನನು ನೋಡಿದೆ | ಗಂಗಾ- ಧರನನು ನೋಡಿದೆ ಗಿರಿಜೆವಲ್ಲಭ ಭಾಸುರ ವಂದಿತನಾ ಸರಿತು ತುಂಗ ಪಂಪಾಪುರವಾಸನ 2 ಶೂಲಿಯ ನೋಡಿದೆ | ರುಂಡ ಮಾಲಿಯ ನೋಡಿದೆ ಕೈಲಾಸದಿ ಉಮೆ ಲೋಲನೆನಿಸಿ ಇಲ್ಲಿ ವ್ಯಾಳಭೂಷಣನಾಗಿ ಲೀಲೆಯೊಳ್ ಮೆರೆವನ 3 ಈಶನ ನೋಡಿದೆ | ನರಹರಿ ದಾಸನ ನೋಡಿದೆ ಪಾಶುಪತಾಸ್ತ್ರವ ವಾಸವಜನಿಗಿತ್ತ ಪೋಷಿಕಿರಾತನ ವೇಷನ ಹರುಷದಿ 4 ದಿಟ್ಟನ ನೋಡಿದೆ | ವೈಷ್ಣವ ಶ್ರೇಷ್ಠನ ನೋಡಿದೆ ವೃಷ್ಣೀಶ ಗೋಪಾಲಕೃಷ್ಣವಿಠ್ಠಲನಿಗೆ ಪುಟ್ಟ ಮೊಮ್ಮಗನಾಗಿ ತುಷ್ಟಿಪಡಿಸುವನ5
--------------
ಅಂಬಾಬಾಯಿ