ಒಟ್ಟು 15236 ಕಡೆಗಳಲ್ಲಿ , 134 ದಾಸರು , 5865 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರಂಜನ ಪಂಕ್ತಿಗೆ ಕೂರಲು ಅನಬೇಕೇನಜೀವನೆ ಬ್ರಹ್ಮವು ಸತ್ಯವೆಂದರಿ ಇದಕೇನಿಲ್ಲನುಮಾನ ಪ ಗುಲಾಮ ಹೋಗಿ ಸದರಿಗೆ ಕೂರಲುಗುಲಾಮನನ ಬೇಕೇನಗುಲಾಮನಹುದೇ ಸದರಿಗೆ ಕುಳಿತವಗುರು ಅವ ಸಂಶಯವೇನ 1 ಗೌಡಿಯು ಅರಸಗೆ ಪಟ್ಟದರಸಿಯಾಗೆಗೌಡಿಗೆ ಅನಬೇಕೇನಗೌಡಿಯೆ ಪಟ್ಟದರಸಿಯಾಗಲಿಕೆಗೌಡಿಯೆ ಅರಸು ಅನಮಾನೇನು 2 ನರ ಚಿದಾನಂದ ಸದ್ಗುರುವನು ಹೊಂದಲುನರನನು ಅನುಬೇಕೇನನರಚಿದಾನಂದ ಸದ್ಗುರುತಾನಲ್ಲದೆ ಯೋಚನೆ ಮಾಡಲಿಕೇನು 3
--------------
ಚಿದಾನಂದ ಅವಧೂತರು
ನಿರಂಜನ ಶರಧಿಜಕಂಜಕರದಿ ಸುರಸ ಭುಂಜಿಸೋ ದೇವ ಪ ಜಂಬು ನೀರಲ ಸುಗೋಡಂಬಿ ಪಲಸು ದಾ-ಳಿಂಬ ಸುರಸ ಇಕ್ಷುರಂಭೆ ಫಲಗಳಾ 1 ನಾರಿಕೇಳವು ದ್ರಾಕ್ಷಿ ಪೇರು ಖರ್ಜೂರ ಕವಳಿಭೂರಿ ಕಿತ್ತಳೆ ಚೂತಕೇರು ಫಲಗಳು2 ಕಾಯಿಸಿದಾ ಪಾಯಸ ದೋಸೆ ಮೊಸರುಬೆಣ್ಣೆದೋಸೆ ಕೊಡುವೆ ಇಂದಿರೇಶ ಯಾದವಗೆ3
--------------
ಇಂದಿರೇಶರು
ನಿರಂಜನ ಸ್ವಾನುಭವವ ಪಡೆದು ನೋಡು ಪ ಬಿಡು ದೇಹದಿ ಆತ್ಮಭಾನ ಪಡೆ ಗುರುವಿನ ದಿವ್ಯ ಜ್ಞಾನ ನುಡಿ ಮನಸಿಗೆ ನಿಲುಕದಿರುವ ಕಡೆ ಇಲ್ಲದ ಸ್ಥಿತಿಯ ನೋಡು ಒಡಲುಪ್ರಾಣಮನಾದಿಗಳು ಜಡವಾದವು ಎಂದು ತಿಳಿದು ದೃಢನಿಶ್ಚಯದಿಂದ ಕಳೆಯೆ ಕಡೆಗುಳಿಯುವ ಮೂಲರೂಪ 1 ಪರಮಾತ್ಮನ ನೋಡುವುದಕೆ ಹೊರಗೆಲ್ಲಿಯು ಹೋಗಬೇಡ ಭರಿತನವನು ವಿಶ್ವದಲ್ಲಿ ಇರನೆ ನಿನ್ನ ಹೃದಯದಲ್ಲಿ ಮರೆಯದೆ ಈ ನುಡಿಯ ಬೇಗ ಅರಿತುಕೊಳ್ಳು ನಿನ್ನ ರೂಪ ಪರಮಪದವ ಪೊಂದುವಿ ನೀ ಗುರುಶಂಕರನುಕ್ತಿಯಂತೆ 2
--------------
ಶಂಕರಭಟ್ಟ ಅಗ್ನಿಹೋತ್ರಿ
ನಿರವದ್ಯ ಪ ಸದ್ಗುಣಪೂರ್ಣ ನೀನೇನೊ ಮೂಢ ಅ.ಪ ಬ್ರಹ್ಮಜಿಜ್ಞಾಸದ ಕ್ರಮವ | ನಿರ- ಸಮ್ಯಕ್ ಶೋಧಿಸದೇ ಅಹಂ ಬ್ರಹ್ಮಾಸ್ಮಿ ಎಂಬುವ ಆಮ್ನಾಯ ವಾಕ್ಯಕೆ ಅರ್ಥವ ತಿಳಿಯದೆ 1 ಕಾಕುಮಾಡುತಲರ್ಥ ಪೇಳ್ವುದಧರ್ಮ ಏಕವಾವುದು ಇನ್ನು ಏಕವಾವುದು ಎಂದು ನೀಕಳವಳಿಸುತ ನಿಜತತ್ವವರಿಯದೆ 2 ಆತ್ಮನಾತ್ಮಗಳೆಂದರೇನೊ | ಪರ- ಮಾತ್ಮ ಜೀವಾತ್ಮರೊ ಜೀವದೇಹಗಳೊ ಸ್ವಾತ್ಮಾನುಸಂಧಾನದಿಂದಲಿ ನೋಡ- ಧ್ಯಾತ್ಮ ವಿದ್ಯಾಭ್ಯಾಸ ಮಾಡದೆ ಬಾಯೊಳು 3 ರವಿ ಗಣಪತಿ ಶಿವ ಶಕ್ತಿ | ಭೈ- ರವ ವಿಷ್ಣು ಎಂಬುವ ಷಣ್ಮತಯುಕ್ತಿ ಎವೆ ಮಾತ್ರ ಸ್ವಾತಂತ್ರ್ಯವಿಲ್ಲ ಕೇಳ್ ಸರ್ವಶ- ಬ್ದವುಯಾವನಲ್ಲಿ ಸಮನ್ವಯವರಿಯದೆ 4 ಜೀವ ಜೀವರಿಗೆಲ್ಲ ಭೇದ | ವಿದುಸ್ವ ಭಾವವಾಗಿರುವುದು ಯಾತಕೀವಾದ ಜೀವರೂಪದಿ ಸರ್ವಜೀವರೊಳಗಿದ್ದು ದೇವಸಕಲ ಕರ್ಮಗಳ ಮಾಡಿಸುವನು 5 ಕರ್ಮವೆಂಬುದು ಅವನಿಗೆ ಲೋಪವಿಲ್ಲ ನಿರ್ಮಲ ಸಚ್ಚಿದಾನಂದ ಬ್ರಹ್ಮ ಎಂದು ನೀನೆ ಪೇಳುವೆಯಲ್ಲ ನಿನಗೆ ನಿಜವಿಲ್ಲ 6 ಸೂರ್ಯ | ಚಂದ್ರ ಕಿನ್ನರ ಸಿದ್ಧ ಸಾಧ್ಯ ನರತಿರ್ಯಕ್ ಪಶುಪಕ್ಷಿ ಕೀಟಾದಿ ನಾಮಗಳು ಪರಮಾತ್ಮನಲಿ ಸಮನ್ವಯವರಿಯದೆ 7 ಮಾಯಾ ಪ್ರಪಂಚವಿದೆನ್ನುತ | ನಿ- ಮಾಯೆಯಧಿಷ್ಠಾನದೊಳನಂತ ಜೀವನಿ- ಕಾಯವು ಗುಣಗಳಿರುವ ಮರ್ಮವರಿಯದೆ 8 ಸಾರ ಭೇದವಬದ್ಧ ಅಭೇದ ನಿಶ್ಚಯವೆಂದು ವಾದಿಸುವುದಕೇನಾಧಾರ ನಿನಗುಂಟೊ 9 ಜೀವಬ್ರಹ್ಮೈಕ್ಯವೆ ಮುಕ್ತಿ | ವೇ- ದಾವಳಿಗಳ ಪರಮಾರ್ಥದ ಉಕ್ತಿ ಜೀವನಿಂದೇನಾಗುವುದೆಂಬುದರಿಯದೆ 10 ದ್ವಾಸುಪರ್ಣವೆಂಬುವುದಕೆ | ವಿಷ- ಯಾಸಕ್ತ ಜೀವ ಆತ್ಮನು ಸಾಕ್ಷಿಯದಕೆ ನೀಸರ್ವೋತ್ತಮನಾದರೆ ಇನ್ನು ಮಹದಾದಿ ಈ ಸೃಷ್ಟಿ ಸ್ಥಿತಿಲಯವೇತಕೆ ತಿಳಿ ಜೋಕೆ 11 ಅಂಧ ಪರಂಪರವಾದ | ಬಿಟ್ಟು ಚಂದಾಗಿ ಪರಿಶೋಧಿಸು ಭÉೀದಾಭÉೀದ ತಂದೆತಾಯಿಗು ಮಗನಿಗೂ ಎಷ್ಟು ಭÉೀದ ಆ- ಪರಿ ತಿಳಿದರೆ ನಿರ್ವಾದ 12 ಪೂರ್ವೋತ್ತರ ವಿರೋಧವಿಲ್ಲ | ದಂತೆ ಸರ್ವಶೃತಿಗಳರ್ಥ ತಿಳಿದು ನುಡಿಸೊಲ್ಲ ಗರ್ವವೇತಕೆ ನಿನಗಿದರೊಳೇನಿಲ್ಲ ನೀ ಸರ್ವಜ್ಞನೊ ಕಿಂಚಜ್ಞನೊ ನೋಡು ದೃಢಮಾಡು 13 ಯೋಗ ಒದಗಿದಾಗ ಒಂದೆ ಎಂಬುವರೆ ಈಗೇನು ಆಗೇನು ಇಲ್ಲೇನು ಉಂಟೆ ನಾ- ವಾಗಲು ಜೀವರಿಗೆ ಹರಿಕರ್ತನಾಗಿರೆ 14 ಕಾಲಕರ್ಮ ಸ್ವಭಾವ ಜೀವ | ಹರಿಯ ಆಲಸ್ಯ ಬಿಟ್ಟು ಅವನಿಗೆ ದಾಸನಾಗದೆ 15 ಆಲೋಚಿಸಿದರರ್ಥ ನಿಜವಾಗಿ ತಿಳಿಯದೆ 16 ಜ್ಞಾನವೆ ನಾನು ಕರ್ಮವೆ ಮಿಥ್ಯವೆಂದು ನೀನಾಡುವುದಕೇನು ನೆಲೆ ಮೂಲ ಯಾವುದು ಸ್ವಾನುಭವವೋ ಶಾಸ್ತ್ರವೊ ಮನಕೆ ತೋರಿದ್ದೊ 17 ಹೋಮ ಜಪವು ಸ್ನಾನ ದಾನ | ನಿತ್ಯ ಭೃತ್ಯ ನ್ಯಾಯವರಿಯದವನು ಶುದ್ಧ ತತ್ವಾರ್ಥಿ ಎನಿಸುವನೆ 18 ಕರ್ತನು ನೀನೆಂದು ಭೃತ್ಯನು ನಾನೆಂದು ತೀರ್ಥಪಾದನ ದಿನದಿನದಿ ಸಂಸ್ತುತಿಸದೆ 19 ಪಾದ ವನಜಕೊಪ್ಪಿಸಿ ಸಂಸಾರದ ಕರಕರೆಯ ಮನದಿ ಲೆಕ್ಕಿಸದೆ ಚಿಂತನಗೈದು ಸರ್ವತ್ರ ಘನಮಹಿಮನ ದಿವ್ಯಗುಣರಾಶಿ ಪೊಗಳದೆ 20 ಹೊರಗಣ್ಣ ಮುಚ್ಚಿ ಮೋದದಲಿ | ಒಳ- ಗಿರುವಾಧಾರಾದಿ ಚಕ್ರಗಳ ಸ್ಥಾನದಲಿ ಸರಸಿಜಭವ ಶಂಕರಾದಿ ಸುರರ ನೋಡಿ ತರತಮವಾಗಿ ಮುಂದಿನ ಪರಿಯ ತಿಳಿಯದೆ 21 ಮಂಗಳ ಮೂರ್ತಿಯ ನೋಡಿ ಕೊಂಡಾಡಿ ಅ- ನಂಗಗೆ ಸಿಲುಕದೆ ಅರ್ಥಿಯ ಪೊಂದದೆ 22 ಎಪ್ಪತ್ತೆರಡು ಸಹಸ್ರನಾಡಿ | ಗಳೊ- ಳೊಪ್ಪುವ ಭಗವದ್ರೂಪಗಳನು ನೋಡಿ ಅಪ್ಪ ನೀನೆಂದು ಭಕ್ತಿಯಲಿ ಕೊಂಡಾಡಿ ಪುನ- ರಾವರ್ತಿರಹಿತ ಶಾಶ್ವತ ಸುಖಿಯಾಗನೆ 23 ವಿಪರೀತ ಮತಿಪುಟ್ಟದಂತೆ | ಧ್ಯಾನ- ಗುಪಿತವಾಗಿರುತ ಜನರಿಗೆ ಹುಚ್ಚನಂತೆ ಅಪವರ್ಗಾಪೇಕ್ಷಯಿಂ ನಿಷ್ಕಾಮಿಯಾಗದೆ24 ಆಪಾದಮಸ್ತಕ ದೇಹ | ದಿಸು ರಾಪದಜನಕ ಶ್ರೀಗುರುರಾಮವಿಠಲ ವ್ಯಾಪಾರವೆಲ್ಲ ಮಾಡಿಸುವನೆಂದರಿತರೆ ಸಾಫಲ್ಯನಾಗಿ ಜೀವನು ಧನ್ಯನಾಗುವ 25
--------------
ಗುರುರಾಮವಿಠಲ
ನಿರವಧಿ ಬಲ ಲಾವಣ್ಯ ಸಂಪನ್ನ ಪ ಚರಣ ಸೇವಕನೆಂದೆನಿಸಲೋ ಎನ್ನ ಅ.ಪ ನಿಖಿಲ ಜಗಂಗಳ ಜನನಾದಿಗಳಿಗೆ ಅಖಿಲ ಕಾರಣನೇ ಸುಖಮಯನೇ ಶುಕಭಾಷಣದಿಂ ಪೊಗಳುತಿಹನೋ ನಿನ್ನ ಭಕುತಿಯ ಮಾರ್ಗವ ತೋರಿ ಪೊರೆಯೆಲೋ 1 ಹೆಚ್ಚಿನ ಜ್ಞಾನದ ಕೆಚ್ಚೆನಗಿಲ್ಲವೊ ಉಚ್ಚಪದವು ನಿನ್ನ ಇಚ್ಛೆಯಿಂದಲ್ಲವೇ ಹುಚ್ಚನಾದೆನೊ ಜನಮೆಚ್ಚುಗೆ ಬಯಸುತ ಅಚ್ಯುತ ಎನ್ನ ಉಪೇಕ್ಷಿಸದಿರೆಲೊ 2 ನಿನ್ನನು ಪೂಜಿಸಿ ಧನ್ಯ ನಾನಾದೆನೊ ಎನ್ನ ಸತ್ಕಾಲವು ಮಾನ್ಯವಾಯಿತೊ ಇನ್ನು ನಿನ್ನಯ ಪ್ರಸನ್ನತೆಯಲ್ಲದೆ ಅನ್ಯ ವಿಷಯಗಳ ಬಯಸುವುದಿಲ್ಲವೊ 3
--------------
ವಿದ್ಯಾಪ್ರಸನ್ನತೀರ್ಥರು
ನಿರ್ತದೊಡ್ಡದೈಯ್ಯಾ | ಅರ್ತವರಿಗೆಲ್ಲಿದೆ ಭಯವು ಪ ಗುರುವಿನಂಘ್ರಿಯ ಕಂಡು | ಗುರುದಯ ಪಡಕೊಂಡು | ಚರಿಸುವರಾನಂದ ನುಂಡು 1 ಘನದೆಚ್ಚರುಳ್ಳವಗ | ಬಿನಗುದೈವದ ಸಂಗ | ಆನಿಯೇರಿ ಕುನ್ನಿಯ ಹಂಗ 2 ಮೊಮ್ಮಕ್ಕಳ ಕಂಡಿರೆ | ಗುಮ್ಮನೆಂದರಂಜುವರೆ | ತಮ್ಮನುಭವ ಬಿಡುವರೆ 3 ಮುಂದಾಗುವ-ಹಿತೊಂದು | ಇಂದಿವೆ ಬಾರದ್ಯಾಕೆಂದು | ಮುಂದಗಿಡನು ಎಂದೆಂದು 4 ಮದಿರೆಕೊಂಡವನಂತೆ | ಮದವೇರಿಹ ನಗುತ | ಮಧುಹರನ ಕೊಂಡಾಡುತ 5 ತಂದೆ ಮಹಿಪತಿದಯಾ | ನಂದ ಕವಚದಿ ಕಾಯಾ | ಛಂದ ಮಾಡಿದಾ ಉತ್ಸಾಯಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿಲ್ಲದೆ ವೈರಿಗಳುನಿನ್ನ ಮ್ಯಾಲೆ ಬಂದರೆ ಬಿಲ್ಲುಕೆಳಗಿಟ್ಟು ಬೇಡಿಕೊಂಡೆಲೊ ಪಾರ್ಥಸಾಕೊ ಸಾಕೊ ನಿನ್ನ ಹೋಕೆ ಬಡಿವಾರವುಸಾಕು ಜನರು ನಗರೆ ಪ. ನಿನ್ನ ಪುಣ್ಯವ ಪಾರ್ಥ ಬಣ್ಣಿಸಲೊಶವಲ್ಲಇನ್ನು ಸುಭದ್ರಾ ಒಲಿಯಲು ಇನ್ನು ಸುಭದ್ರಾ ಒಲಿಯಲು ಸುಖದಿಂದ ಮಾನ್ಯವಾಗಿದ್ಯೊ ಜನರೊಳು 1 ಕನ್ಯೆ ಸುಭದ್ರೆ ನಿನ್ನ ಮದುವ್ಯಾಗಿಅನ್ನ ವಸ್ತ್ರದ ನೆಲಿಗಂಡ್ಯೊಅನ್ನ ವಸ್ತ್ರದ ನೆಲಿಗಂಡ್ಯೊ ಎಲೊ ಪಾರ್ಥನಿನ್ನ ಭಾಗ್ಯವನ್ನೆ ಅರಿಯಲೊ ಪುರುಷ 2 ಗಿಳಿ ಮಾತಿನ ಜಾಣ ಹೊಳೆವು ಎಷ್ಟೆ ್ಹೀಳಲ್ಯೊಬಳೆಯನಿಟ್ಟದ್ದು ಮರೆತೇನೊಬಳೆಯನಿಟ್ಟದ್ದು ಮರೆತೇನೊ ಸುಭದ್ರಾತಿಳಿಯದೆ ನಿನ್ನ ಬೆರೆದಳೊ ಎಲೊ ಪಾರ್ಥ 3 ಹೆರಳು ಹಾಕಿಸಿ ಕೊಂಡು ತಿಳಿಯಲಿಲ್ಲವೊ ಬುದ್ದಿಇಳೆಯೊಳು ಇದು ಅಪವಾದ ಇಳೆಯೊಳಗಿದು ಅಪವಾದ ಬಲರಾಮ ಹಳಿಯದೆ ನಿನ್ನ ಬಿಡವೋನೆ ಎಲೊ ಪಾರ್ಥ4 ದನಗಾಹಿ ನೀನೆತ್ತ ವನಜಕುಸುಮಳೆತ್ತಕನಕ ಕಬ್ಬಿಣಕೆ ಸರಿಯೇನೊಕನಕ ಕಬ್ಬಿಣಕೆ ಸರಿಯೇನೊ ಸುಭದ್ರೆಗೆಅಣಕವಾಡಿದನೆ ರಮಿಯರಸು5
--------------
ಗಲಗಲಿಅವ್ವನವರು
ನಿಲ್ಲು ನಿಲ್ಲು ಕೃಷ್ಣ ನಿನ್ನ ಸೊಲ್ಲ ಮುರಿಯ ಬಂದೆವು ಸೊಲ್ಲ ಮುರಿಯ ಬಂದೆವು ಈ ಕಳ್ಳತನವ ಸಹಿಸೆವು 1 ದಿಕ್ಕು ರಕ್ಷಿಪರಿಗೆ ದಿಕ್ಕು ಕಾಣದಂತೆ ಇರುವುದು ಸೊಕ್ಕು ಮುರಿದು ನಿಮ್ಮ ಕಾರ್ಯ ಧಿಕ್ಕರಿಸುವೆ ಕ್ಷಣದಲಿ 2 ಈಡುಮಾಡಲೇಕೆ ಇಂಥ ಕೇಡಿಗೆ ಈ ಅಬಲೆಯ ನೋಡಿ ಎಮ್ಮ ಅವಿತುಕೊಂಡ ಹೇಡಿ ಇವನ ಬಿಡುವೆನೆ 3 ಎಂಟು ಜನ ದಿಕ್ಪಾಲಕರು ಸೊಂಟ ಮುರಿವ ರಾಣಿಯ ಶೌರಿ ತಂಟೆಗಾರು ಬರುವರು 4 (ಸತ್ಯಭಾಮೆ ಮತ್ತು ದೇವೇಂದ್ರನ ವನಪಾಲಕರ ಸಂವಾದ)
--------------
ವಿದ್ಯಾಪ್ರಸನ್ನತೀರ್ಥರು
ನಿಲ್ಲು ನಿಲ್ಲೆಲೋ ನಿನ್ನ ಚಲ್ವಮೋರೆಯ ನೋಡಿ ಕಳ್ಳ ನಿನ್ನಯ ಬಿಡೆನೋ ಶ್ರೀ ಕೃಷ್ಣ ಪ ಬೆಣ್ಣೆ ಪಾತ್ರೆಯೊಳೇಕೆ ನಿನ್ನ ಕರವನಿಟ್ಟೆ ಸಣ್ಣತನವಿದಲ್ಲವೇ ನಂದಕುಮಾರ ಅ.ಪ ಕೋಮಲಾಂಗಿಯೇ ಇಂಥ ಸಾಮಾನ್ಯ ವಿಷಯದ ನೀ ಮರೆತುದು ತರವೇ ಯೋಚಿಸಿ ನೋಡು ಈ ಮೃದುವಸ್ತುವು ಕಲ್ಲು ಎದೆಯ ನಿನ್ನ ಧಾಮದಲ್ಲಿರಬಹುದೇ ಯೋಚಿಸಿ ನೋಡು 1 ನಾ ಕರುಣಾಮಯ ಲೋಕ ಸುಂದರನೆಂದು ಏಕೆ ಹೆಮ್ಮೆಯ ತೋರುವೆ ಗೋಕುಲನಾಥ ಆ ಶಕಟನ ಪುಡಿ ಮಾಡಿ ಪಾದಗಳಿಂದ ನೀ ಕೋಮಲನೆಂಬುದ ನಾ ಕಾಣೆನೇ 2 ಕೇಳಿ ಕೋಪಿಸಬೇಡ ಬಾಲನೆನ್ನನು ಎತ್ತಿ ಲಾಲನೆಯನು ಮಾಡಿದಿ ಪ್ರಸನ್ನಳು ಬಾಲೆ ನಿನ್ನಯ ಇಷ್ಟು ಸ್ಥೂಲ ಕುಚವು ತಗಲಿ ಕಾಲು ಕಠಿಣವಾಯಿತೇ ಪೇಳುವೆ ನಿಜ 3
--------------
ವಿದ್ಯಾಪ್ರಸನ್ನತೀರ್ಥರು
ನಿಶಿಕಾಂತನು ತೆರಳಿದ ಸುಸೀಲ ಪುರದಿಂದ ಪುರಕೆ ಪ ಪತಿ ಪಿತನ ಪದಸನ್ನಿಧಿಗೆ ಅ.ಪ. ಮಂಗಳಾಂಗ ಮಹ ಮಂಗಳ ಮಹಿಮನು ಮಂಗಳಾಂಗ ಕೊಂಡು ಮಂಗಳವರವನುಮಂಗಳವಾರದಿಗರೆಯುತಮಂಗಳ ಪುರವನು ಬಿಟ್ಟು ಮಂದಗಮನದಿಂದ 1 ರಘುಕುಲ ಯತಿವರ ಪಾದದ್ವಯ ರಾಗದಿಂದಲಿ ಸರನದಿ ಪತಿಪುರ ವರದಾತಟ ಅನುರಾಗದಿ ಹರಣವ ತ್ಯಜಿಶ್ಯಕ್ಷಹರ ಫಲಶರಣರಿಗೀವುತ 2 ಸುಮನಸರೆಲ್ಲರು ಸುಮಮಳೆಗರೆಯುವ ಸಮಯ ಕುಸುಮರ ರಥವೇರಿ ಸೋಮಧರನ ಪದ ಸುಮ್ಮನದಲಿ ಅರ್ಚಿಸುತಲಿ ಸುಸ್ವರ ಮ್ಯಾಳಂಗಳಿಂದಲಿ ಸೋಮವಾರದಿ ತಂದೆವರದಗೋಪಾಲವಿಠಲನ ಸೇವೆಗೆ 3
--------------
ತಂದೆವರದಗೋಪಾಲವಿಠಲರು
ನಿಷ್ಠೆಯಿಂದ ನಿಂತ ಈ ಪುಟ್ಟ ಕಪಿಯ ನೋಡೆ ಪ. ಎಷ್ಟು ಮೌನ ಧರಿಸಿದಂಥ ಪುಟ್ಟ ಕಪಿಯ ನೋಡೆ ಅ.ಪ. ವಾರಿಧಿಯ ದಾಟಿದಂಥ ಪುಟ್ಟ ಕಪಿಯ ನೋಡೆ ಹೀರಿದ ಕುರುಪರ ರಕ್ತ ಪುಟ್ಟ ಕಪಿಯ ನೋಡೆ 1 ತೂರಿದ ಅನ್ಯರ ಮತ ಪುಟ್ಟ ಕಪಿಯ ನೋಡೆ ಸಾರಿ ಹರಿ ಸರ್ವೋತ್ತಮನೆಂದ ಪುಟ್ಟ ಕಪಿಯ ನೋಡೆ2 ಶೌರ್ಯವೆಲ್ಲ ಉಡುಗಿದಂಥ ಪುಟ್ಟ ಕಪಿಯ ನೋಡೆ ಹಾರಿ ಯಂತ್ರದಲ್ಲಿ ಶಿಲ್ಕಿದ ಪುಟ್ಟ ಕಪಿಯ ನೋಡೆ 3 ಮಾನ ಉಳಿಸಿಕೊಳ್ಳಲು ಮೌನದ ಪುಟ್ಟ ಕಪಿಯ ನೋಡೆ ಧ್ಯಾನ ಮುದ್ರಾಂಕಿತದಿ ಶೋಭಿಪ ಪುಟ್ಟ ಕಪಿಯ ನೋಡೆ 4 ಯೋಗಾಸನದಿ ಪದ್ಮಾಸನವು ಪುಟ್ಟ ಕಪಿಯ ನೋಡೆ ವಾಗೀಶನ ಪದಕ್ಹೋಗುವ ತಪದ ಪುಟ್ಟ ಕಪಿಯ ನೋಡೆ 5 ವ್ಯಾಸರಿಗೊಲಿದ ವೇಷಧಾರಕ ಪುಟ್ಟ ಕಪಿಯ ನೋಡೆ ಮೋಸವೊ ಧ್ಯಾನವೊ ಅರಿಯೆ ಪುಟ್ಟ ಕಪಿಯ ನೋಡೆ 6 ಕಷ್ಟದ ಭವಕಟ್ಟು ಬಿಡಿಸುವ ಪುಟ್ಟ ಕಪಿಯ ನೋಡೆ ಕಟ್ಟಿನೊಳ ಸಿಲ್ಕಿ ಗುಟ್ಟು ತಿಳಿಸದ ಪುಟ್ಟ ಕಪಿಯ ನೋಡೆ 7 ಸಿದ್ಧ ಸಾಧನ ಬುದ್ಧಿ ಬಲಿದ ಪುಟ್ಟ ಕಪಿಯ ನೋಡೆ ಉದ್ಧಾರಕ ಪ್ರಸಿದ್ಧ ಪುರುಷ ಪುಟ್ಟ ಕಪಿಯ ನೋಡೆ 8 ಸ್ವಾಪರೋಕ್ಷಿ ಜಗದ್ವ್ಯಾಪಕನಾದ ಪುಟ್ಟ ಕಪಿಯ ನೋಡೆ ಗೋಪಾಲಕೃಷ್ಣವಿಠ್ಠಲನ ದಾಸನೀ ಪುಟ್ಟ ಕಪಿಯ ನೋಡೆ 9
--------------
ಅಂಬಾಬಾಯಿ
ನೀ ಎನ್ನ ಕಾಯಲಿ ಬೇಕೊ - ಘನ್ನ ಮಹಿಮಾ ಪ ಬನ್ನ ಬಡಿಸುವದು ಅನ್ಯಾಯ ನಿನಗಿದಾಪನ್ನಪಾಲ ಅ.ಪ ಘನ್ನ ಮಹಿಮೆಯತೋರಿ - ಎನ್ನ ಕಾಯಲಿ ಬೇಕು ನಿನ್ಹೊರತು ಗತಿ ಎನಗೆ - ಮುನ್ನಾರು ಗುರುವೆ 1 ಎನ್ನ ಮಾತನು ನೀನು - ಚನ್ನಾಗಿ ಚಿತ್ತೈಸಿ ಅನ್ಯಜನರಾಬಾಧೆ - ಮುನ್ನ ಕಳೆಯ ಬೇಕೊ 2 ಘನ್ನ ಶಿರಿ ಕೃಷ್ಣನು ತನ್ನ ಸಖನಿಗೆ ಮಹಾ ಉನ್ನ ತೈಶ್ವರ್ಯವಿತ್ತವ - ನನ್ನ ಕಾಯ್ದ ತೆರದಿ 3 ಇನ್ನು ಪೇಳುವುದೇನೊ ಗುರು - ರನ್ನ ಭವದಾಶ್ರಮವು ಇನ್ನು ತಿಳಿಯದೆ ನಿನಗೆ -ಘನ್ನ ಸರ್ವಙ್ಞರಾಯಾ 4 ಸನ್ನುತಜನಪ್ರೀಯ - ನಿನಗೆ ಮೊರೆಯಿಡುವೆ ಘನ್ನ ಗುರು ಜಗನ್ನಾಥ ವಿಠಲ ದೂತಾ ದಾತಾ 5
--------------
ಗುರುಜಗನ್ನಾಥದಾಸರು
ನೀಂ ಕಟಾಕ್ಷಿಸೆನ್ನನೊಲವಿಂ ಲೋಕನಾಥ ಪಾಲಿಸೈ ಪ. ಸಂಕಟಂಗಳೆಲ್ಲಮಂ ನಿಷ್ಕಲಂಕ ನೀಂ ನಿವಾರಿಸೈ ಅ.ಪ ತಾತ ನೀನೇ ನಾಥನೇ ಆತ್ಮಜಾತಂ ನೀನೆಲೈ ದಾತ ನಿನ್ನ ನಂಬಿದೀಯನಾಥರಂ ಪ್ರೀತಿಯಿಂ1 ಭಾವಜಾತಜನಕ ಭೂ ದೇವದೇವ ಶ್ರೀಧವ ಭಾವಿಸುವೆನನನ್ಯಭಾವದೆ ಕಾವುದೈ ಶ್ರೀನಿಧೇ 2 ಪರಮಪುರಷ ಶೇಷಶೈಲವರದ ಶ್ರೀಕರ ಪರಿಭವಂಗಳೆಲ್ಲ ಪರಿದು ಪಾಲಿಸೈ ಪರಾತ್ಪರ 3
--------------
ನಂಜನಗೂಡು ತಿರುಮಲಾಂಬಾ
ನೀ ಕರುಣದಿಂದ ಪಾಲಿಸದಿದ್ದರೆ ಇನ್ನುನಾ ಕಾಣೆ ಮನ್ನಿಸುವರ ಪ. ಸಾಕಾರ ಮೂರುತಿ ಸರ್ವೋತ್ತಮನೆನೀ ಕಾಯೊ ಪರಾಕುಮಾಡದೆ ಎನ್ನನು ದೇವ ಅ.ಪ. ಗುರುಹಿರಿಯರನು ಕಂಡು ತರಳತನದಲಿ ನಾನುಚರಣಕೆರಗದೆ ತಿರುಗಿದೆವರ ಸಕಲ ಸಂಪದವ ಬೇಡಿ ಬಯಸುತ ನಿನ್ನಸ್ಮರಣೆಯನು ಮರೆತಿದ್ದೆನೊಸ್ಮರನ ಬಾಣಕೆ ಸಿಲುಕಿ ಪರಸತಿಗೆ ಮರುಳಾಗಿದುರ್ಗತಿಗೆ ನೆಲೆಯಾದೆನೊಸಿರಿಯರಸನೆ ನಿನ್ನ ಚರಣವನು ನಂಬಿದೆನೊಕರುಣದಿಂ ಕಡೆಹಾಯಿಸೊ 1 ಆರುಮಂದಿಗಳೆಂಬ ಕ್ರೂರವೈರಿಗಳಿಂದಗಾರಾದೆನವರ ದೆಸೆಗೆಮಾರಿಹಬ್ಬದÀ ಕುರಿಯು ತೋರಣವ ಮೆಲುವಂತೆತೋರುತಿದೆ ಎನ್ನ ಮತಿಗೆಘೋರ ಸಂಸಾರವೆಂಬೋ ವಾರಿಧಿಯ ದಾಟಿಸುವಚಾರುತರ ಬಿರುದು ನಿನಗೆಮಾರನಯ್ಯನೆ ನಿನ್ನ ಚರಣವನು ನಂಬಿದೆನುಪಾರಗಾಣಿಸೊ ಎನ್ನನು 2 ಹಲವು ಜನ್ಮಗಳಲ್ಲಿ ಬಲುನೊಂದು ಬಾಯಾರಿತೊಳತೊಳಲಿ ಬಳಲುತಿಹೆನುಸಲೆ ಉದರ ಪೋಷಣೆಗೆ ತಲೆಹುಳುಕ ನಾಯಂತೆಹಲವು ಮನೆ ತಿರುಗುತಿಹೆನೊಜಲದ ಮೇಲಿನ ಗುಳ್ಳೆಯಂತಿಪ್ಪ ಈ ದೇಹನೆಲೆಯೆಂದು ನೆಚ್ಚುತಿಹೆನೊಜಲಜನಾಭನೆ ನಿಮ್ಮ ಮಹಿಮೆಯನು ಪೊಗಳುವೆನುಚೆಲುವ ಶ್ರೀ ಹಯವದನ ರನ್ನ 3
--------------
ವಾದಿರಾಜ
ನೀ ಕರುಣಿಸದಿರೆ ಸಾಕುವರ್ಯಾರು ದಯಾಕರ ಮೂರುತಿ ರಾಘವೇಂದ್ರ ಪ ಪಾರು ಮಾಡೊ ಸಂಸಾರಭವದಿ ಅ- ಪಾರ ಮಹಿಮ ಗುರು ರಾಘವೇಂದ್ರಾ ದೂರ ನೋಡಿದರೆ ಬಿಡಿಸೋ ತವ ಚರ- ಣಾರವಿಂದಕೆ ಕೊರಳನು ಕಟ್ಟಿಸೊ 1 ಒಡವೆ ವಸ್ತುಗಳ ಮಡದಿ ಮಕ್ಕಳ ಕೊಡು ಎನುತಲಿ ಬೇಡುವುದಿಲ್ಲ ಒಡೆÉಯನೆ ನಿನ್ನಯ ಅಡಿಗಳಲಿ ದೃಢ ಭಕುತಿಯ ಕೊಡದಿರೆ ಬಿಟ್ಟವನಲ್ಲ 2 ನರರ ಸೇವೆಯಾ ಬಿಡಿಸೋ ಹರಿವಾಯುಗಳ ಸೇವೆಯಾ ಹಿಡಿಸೊ ವರದ ಹನುಮೇಶವಿಠಲನಾ ಸರ್ವೋತ್ತಮನೆಂದು ಕರೆದವನೆ 3
--------------
ಹನುಮೇಶವಿಠಲ