ಒಟ್ಟು 5063 ಕಡೆಗಳಲ್ಲಿ , 120 ದಾಸರು , 3402 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಪ್ರಸನ್ನ ಶ್ರೀನಿವಾಸ ಸ್ತುತಿಗಳು ಅದ್ರಿಜಾಪತಿ ಪಿತನ ಪಿತ ಸುಭದ್ರೆಯ ಪ. ಅಣ್ಣ ಸಮುದ್ರಜಾಪತಿ ಪ್ರಸನ್ನ ಶ್ರೀನಿವಾಸನೇ ನಮೋ || 1 ವಜ್ರ ಮನೋ ವಾಂಛಿsÀತದ ಕಪರ್ದಿನುತ ವಿಧಿಪಿತ ಪ್ರಸನ್ನ ಶ್ರೀನಿವಾಸ || 2
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪ್ರಹ್ಲಾದ ಚರಿತ್ರೆ ಅಧ್ಯಾಯ ಒಂದು ಪದ ಆದಿಯಲಿ ಲಕ್ಷ್ಮೀಸಹಿತ ಪ್ರಹ್ಲಾದವರದನ ಪಾದಕೊಂದಿಸಿ ಬೋಧನಿಧಿ ಮಧ್ವಾದಿ ಗುರುಗಳ ಪಾದಕೊಂದಿಸುತಾ ಕೇಳುವರ ಮನಕಾ ಲ್ಹಾದ ಕೊಡುತಿರುವಂಥ ಶ್ರೀ ಪಹ್ಲಾದ ಚರಿತವನು 1 ಸಹಿತಾಗಿ ಪರಮಾ ನಂದದಿಂದ ವಿಹಾರ ಮಾಡುತ ಚಂದದಿಂದಿರಲು ಬಂದರಾ ಕಾಲದಲಿ ಸನಕ ಸನಂದನಾದಿಗಳಲ್ಲೆ ಬೇಡೆಂ ತೆಂದು ಆ ಜಯವಿಜಯರವನು ಹಿಂದುಕೊತ್ತಿದರು 2 ಮೂರುಜನ್ಮದೊ ಳಸುರರಾಗಿರಿ ನೀವು ಹೀಗೆಂತೆಂದು ಶಾಪಿಸಲು ಅಸುರರಾಘ್ಯುಟ್ಟಿದರು ಶಾಪದಿ ಹುಸಿಯದಾಗದು ದೊಡ್ಡವರು ಕೋಪಿಸುತ ನುಡಿದದ್ದು 3 ದಿತಿಯ ಸುತರಾಗ್ಯವರು ಮುಂದಕೆ ಪ್ರಥಿತರಾದರು ದ್ವಿತೀಯ ಹಿರಣ್ಯಾಕ್ಷಾ ಪೃಥಿವಿಯನು ಮುಣುಗಿಸಿದ ಕಾರಣ ಅತಿರಭಸದಲೆ ಕೊಂದು ಮತ್ತಾ ಪೃಥಿವಿಯನು ತಂದಾ 4 ತನ್ನ ಅನುಜನ ನಾಶವನು ಕೇಳುತಲೆ ಮನದಲಿ ಕ್ಲೇಶವನು ಪಟ್ಟು ಶ್ರೀಸುರೇಶನ ಮೇಲೆ ಬಹಳಾಕ್ರೋಶದಿಂದಲೆ ನಡೆದ ತಪಸಿಗೆ ದೋಷ ರಹಿತಾನಂತಾದ್ರೀ±ನÀ ದ್ವೇಷಿತಾನಾಗಿ5 ವಚನ ಸುರರು ಆ ಸಂಧಾನ ಯುದ್ಧವ ಮಾಡಿ ಕೊಂದುಹಾಕಿದರು ಆ ಇಂದ್ರನಾ ಕಂಡು ಒಂದು ನೋಡದೆ ಪ್ರಾಣ ಒಂದು ಉಳಿದರೆ ಸಾಕು ಯೆಂದು ಓಡಿದರು 1 ಅಡಗಿರಲು ದೇವೇಂದ್ರ ಬಂದು ನಡತೆ ಕಂಡವನ ಬಿಡು ಬೇಗ ಈಕೆಯ ನಿಮಗೆ ಕೆಡಕು ಕೊಡುತೆಲ್ಲರ ಮುಂದೆ ನುಡಿದನಾ ರಾಜನ ಮಡದಿಗೀಪರಿಯು 2 ರಾಗ ಅಂಜಿಕೆಯ ಬಿಡಿಸುವೆನಮ್ಮಾ ಪ ಪುಟ್ಟುವನಮ್ಮಾ ಸಂದರ್ಭವನು ತಿಳಿಸುವೆನಮ್ಮಾ 1 ಸ್ಮರಿಸುವನು ಹರಿಗುಣಗಳಮ್ಮಾ ಗಭಯ ಕಾಣಮ್ಮಾ 2 ಅಭಯದಾನಂತಾದ್ರೀಶನ ಭಕ್ತನಮ್ಮಾ ನಿಶ್ಚಿಂತೆಯಿಂದಲಿ ನೀನಿರಮ್ಮಾ 3 ರಾಗ ಕೇಳಿ ಅರ್ಭಾಟವು ಗರ್ಭಿಣಿಯುದರದಲಿರುವಾ ನಡೆದರು ಅರ್ಭಕನಾ ಸ್ಮರಿಸಿ 1 ಕೊಟ್ಟು ತಂದೆಯ ಪರಿ ಮುಂದಾಕೆಯು ನಾರದನ ಬೇಡಿದಳು ವಂದಿಸಿ ವರಗಳನ್ನು2 ಭೋ ಮಹಾ ಮುನಿಯೇ ಮಾತನು ಕೇಳುತಲೆ ಆ ಮಹಾ ಮುನಿ ನಾರದನು ಪ್ರೇಮದಿ ನುಡಿದನು ಕೊಟ್ಟಕಾಮಿತ ವರಗಳನ್ನು 3 ನಿನಗಿನ್ನು ಪರತತ್ವವÀ ನೀ ಕೇಳಮ್ಮಾ ಹರಿಮಹಿಮೆಯ ಹರುಷವ ಕೊಡುತಿಹುದು 4 ಪರಿ ಗರ್ಭದಲಿ ಇರುವನೆ ವರದಾನಂತಾದ್ರೀಶನ ಸ್ಮರಿಸುತ ಪರಮೇಷ್ಠಿಯ ಸುತನು 5 ವಚನ ತಪವನು ಮಾಡಿ ಮನಸಿನೊಳಗಿಟ್ಟು ಪಾದದುಂಗುಷ್ಠವನು ನೆಟ್ಟನೆ ಮೇಲೆತ್ತಿ ಘಟ್ಯಾಗಿ ನಿಂತಾ 1 ಸುಡತಲೆ ಸಕಲ ಕಣವಿದು ಮುಚ್ಚಿತು ಅವನ ಭಯದಲಿ ತಮ್ಮ ಭವನ ಅವನ ಮುಂದು ಸುರಿದರು ಅವನ ಕಥೆಯಾ ಸಕಲ ಭುವನ ಪಾಲಕರೂ 2 ರಾಗ ಮೊರೆಯ ಕೇಳೋ ನೀನುಪ ಹಿರಣ್ಯ ಕಶಿಪು ಮೂಜಗ ಸಂಹರಿಸುವನಯ್ಯ ಅ.ಪ ದಿಟ್ಟ ಕೇಳವನ ವಿಶಿಷ್ಟ ಕಥೆಯ ಪಾದಾಂಗುಷ್ಟದಿಂದಲಿ ಭೂಮಿ ಮೆಟ್ಟಿನಿಂತಿ- ಮಂದರಾದ್ರಿಯಲ್ಲಿರುವಾ 1 ಉಪವಾಸದಿಂದುಗ್ರ ತಪಸಿ ಲೋಕಗಳನೆಲ್ಲ ಸುಡುವಾ 2 ರೋಷದಿ ಮಾಡುವಾ ದ್ಷೇಷ ನಮ್ಮಲ್ಲೆ ನಿತ್ಯದಲ್ಲೆ ನಿತ್ಯದಲ್ಲೆ ಅನಂತಾದ್ರೀಶನಲ್ಲೆ 3 ವಚನ ಮಾಡುವ ಚರ್ಯಾ ಹತ್ತಿತಾ ಹಂಸವನು ಸತ್ವರದಿ ಕಂಡು ನೆತ್ತಿಯಾ ಮೇಲಗ್ನಿ ಬೆಳದಿಹದಲ್ಲೆ ಸುತ್ತಲೆ ನುಡಿದನು ಬ್ರಹ್ಮದೈತ್ಯ ಗೀಪರಿಯ 1 ರಾಗ ಹಿರಣ್ಯ ಕಶಿಪು ಏಳು ಏಳು ಏಳು ಬೇಗನೇ ಪ ಮಾತು ನಿನ್ನ ಭಾಳ ತಪಸಿಗಾಗಿ ನಾನು ಭಾಳ ಮೆಚ್ಚಿದೆನೋ ಇನ್ನು ಅ.ಪ ಹೋದುವಯ್ಯಾ ಮತ್ತು ತಪಸಿ ನಲ್ಲಿ ನೀನು ಚಿತ್ತಮಾಡಬೇಡ ಬಿಟ್ಟು 1 ಕೊಡುವೆನು ವರಗಳನ್ನು ದಾನವೇಶ ಎನ್ನ ನೋಡು ಮೌನಬಿಟ್ಟು ಮಾತನಾಡು 2 ಬಲ್ಲಿದವನೋ ನೀನು ಬೇಡಿ ದ್ದೆಲ್ಲ ನಾನು ಕೊಡುವೆ ನಿನಗೆ 3 ವಚನ ಮನ್ನಿಸಿದನಾ ದೇಹವನ್ನು ಘನ್ನದಿವ್ಯೋದಕದಿ ಚೆನ್ನಾಗಿ ಘನ್ನ ದೈತ್ಯನು ಎದ್ದು ಮುನ್ನನತಿ ಸ್ತುತಿಮಾಡಿ ಹಿರಣ್ಯ ಕಶಿಪಿಂತು 1 ರಾಗ ಮರಣ ಬೇಡಾ ಧರೆಯೊಳು ನಿನ್ನಿಂದ್ಹುಟ್ಟಿರುವ ಪ್ರಾಣಿಗಳಿಂದ ಮರಣಬೇಡಾ 1 ಮರಣ ಬೇಡ ಇಳೆ ಯೊಳೆನಗಾಕಾಶದೊಳೆನಗೆ ಮತ್ತು ಮರಣ ಬೇಡಾ 2 ಮರಣ ಬೇಡಾ ಮೃಗಗಳೊಗ್ಹೆಚ್ಚಿನ ಮೃಗಗಳಿಂದಾದದರು ಮರಣ ಬೇಡಾ 3 ಮರಣಬೇಡಾ ನರರಿಂದ ವಿಷವುಳ್ಳ ಹರಿವ ಹಾವುಗಳಿಂದ ಮರಣ ಬೇಡಾ 4 ವಿಸ್ತಾರವಾದ ದೇ ವಾಸ್ತ್ರಗಳಿಂದಲಿ ಮರಣಬೇಡಾ 5 ಮರಣಬೇಡಾ ಅಂತಕ ನಾದ ಅನಂತಾದ್ರೀಶನ ಮುಂಚೆ ಸ್ಮರಣೆ ಬೇಡಾ 6 ರಾಗ ಹಾಗೆ ಆಗಲಿ ಎಂದು ಸಾಗಿದತಾನು ಆಗೆದ್ದು ಮದವೇರಿದ ನಾಗೇಂದ್ರನಂತೆ ಬೇಗ ಮನೆಯಲಿ ಬಂದಸಾಗಿ ದೈತ್ಯೇಂದ್ರಾ 1 ತಂದು ಒಪ್ಪಿಸಿದಾತಗೆ ಚಂದಾಗಿ ಮುನಿಯು ಹಿಂದಾದುದೆಲ್ಲಾತನ ಮುಂದೆ ತಿಳಿಸಿದನು ಮುಂದಾ ಸ್ಥಳವನು ಬಿಟ್ಟು ಬಂದಾ ಸ್ವಸ್ಥಳಕೆ
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀ ಪ್ರಾಣದೇವರ ಸ್ತೋತ್ರಗಳು ಆನಮಿಸುವೆ ನಿನಗೆ ಶ್ರೀ ಪವಮಾನ ಪಾಲಿಸೆನಗೆ ಜ್ಞಾನ ಪೂರ್ವಕದಿ ಶ್ರೀನಿವಾಸನಗುಣ ಗಾನ ಮಾಡುವಮತಿ ಸಾನುರಾಗದಿ ಕೊಡು ಪ ಶರಧಿಯ ಲಂಘಿಸಿಧರಿಜೆ ದೇವಿಪದ - ಕ್ಕೆರಗಿ ಮುದ್ರಿಕೆ ಕೊಟ್ಟಹರುಷದಿ ಹನುಮನೆ 1 ಹೇಮನಗರ ದಹಿಸಿ ಸತ್ವರ ರಾಮ ಪದಕೆ ನಮಿಸಿ ಪ್ರೇಮದಿ ಜಾನಕಿ ಕ್ಷೇಮವ ತಿಳುಹಿಸಿ ತಾಮರಸಜಪದ ನೇಮದಿ ಐದಿದ 2 ಕುಂತಿಗರ್ಭದಿ ಜನಿಸಿ ರುಕ್ಮಿಣಿಕಾಂತನಣುಗನೆನಿಸಿ ಅಂತಕಾತ್ಮಜನ ಸಂತತ ಸಲಹಿದೆ ಹಂತಧಾರ್ತೃರಾಷ್ಟ್ರಾಂತಕ ಭೀಮನೆ 3 ದೇಶಿಕಪತಿಯನಿಸಿ ಬದರಿನಿವಾಸನ ಪದ ಭಜಿಸೆ ವಾಸುದೇವಸರ್ವೇಶನೆಂದರುಹಿದೆ ದೂಷಿತ ಮತ ತಮ ನೇಸರಮಧ್ವನೆ 4 ಕಾಮಕ್ರೋಧದಿ ಬೆಂದೆ ನಾ ಬಲು ತಾಮಸದಲಿ ನೊಂದೆ ಶ್ರೀ ಮನೋಹರ ವರದೇಶ ವಿಠಲನ ನಾಮ ಬರೆದೆ ಕುಪ್ಪೀ ಭೀಮನೆ ಪಾಲಿಸು 5
--------------
ವರದೇಶವಿಠಲ
ಶ್ರೀ ಭಾರತೀ ದೇವಿಯ ಸ್ತೋತ್ರ ಪಾಲಿಸೆನ್ನನು ಪವಮಾನನ ರಾಣಿ ಪಾಲಿಸೆನ್ನ ಸುಗುಣಾಲಯ ಶ್ರೀಹರಿ ಲೀಲೆ ತಿಳಿಸಿ ಭವಜಾಲವ ಹರಿಸೆ ಪ ಮಾತರಿಶ್ವÀ ಸತಿ, ಪ್ರೀತಿಲಿ ಹರಿಪದ ದೂತನೆನಿಸಿ, ಅನಾಥನ ಪೊರಿಯೆ 1 ವಿದ್ಯುನ್ನಾಮಕೆ ವಿದ್ವಜ್ಜನಪಾ - ದದ್ವಯ ಸೇವಿತ ಬುದ್ಧಿಯ ನೀಡೆ 2 ಲಿಂಗನಿವಾಸಿ ವಿಲಿಂಗಗೈಸಿ ಯನ್ನ ರಂಗನ ಪದದಲಿ ಭೃಂಗನ ಮಾಡಿ3 ಜನನಿಯೆ ನಿನ್ನಯ ತನಯಗೆ ಙÁ್ಞನದ ಸ್ತನವನಿತ್ತು ಪೊರೆ ಹನುಮನರಸಿಯೆ 4 ಶರಣಾಗತಜನ ಪೊರೆಯುವ ಕರುಣಿಯ ವರದೇಶ ವಿಠಲನ ಚರಣವ ತೋರೆ 5
--------------
ವರದೇಶವಿಠಲ
ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ ಆ ಮಹಾತತ್ವ ತಾರತಮ್ಯಗಳ ತಿಳಿದು ಕಾಮ ಕ್ರೋಧಗಳೆಲ್ಲ ಹಳಿದು ಗುರು ಹನುಮಂತ ಭೀಮ ಮಧ್ವಮುನಿಯ ಸಾರಿರಯ್ಯ | ಅಯ್ಯಯ್ಯಾ ಪ ಅಂಜನೇಯ ಗರ್ಭದಲಿ ಜನಿಸಿ ಆಕಾಶದಲ್ಲಿ ಕಂಜನಾಪ್ತನ ತುಡುಕಿ ಕಿಷ್ಕಿಂಧದಲಿ ಕಪಿ ರಂಜನನ ಕೂಡಿ ಪಂಪಾ ತೀರದಲಿ ದೇವಂಜನ ಪಾದವ ಅಕ್ಷರಿ ಎನೊ ಭಂಜನವ ಮಾಡಿ ಲಂಕೆಯನುರಿಪಿ ಬಂದ ಪ್ರ ಭಂಜನಿಯ ಭಜಿಸಿರಯ್ಯಾ | ಅಯ್ಯಯ್ಯಾ | 1 ಧರ್ಮನಂದನೊಡನೆ ಜನಿಸಿ ಹಾಲಹಲ ಉಂಡು ಸೀರ್ಮುಟ್ಟಿ ಪೋಗಿ ನಾಗನ ಗೆದ್ದು ಅರಗಿನ ಅರ್ಮನೆಯ ದಾಟಿ ವನದೊಳಗೆ ಹಿಡಂಬನ ಶಾ ರಿರ್ಮುರಿದು ಸೀಳಿ ಬಿಸಟು ಕಿರ್ಮೀರ ದನುಜರ ಸದೆದು ಪೂತಂದು ಸು- ಶರ್ಮಕನ ಬಿಗಿದು ಕಣದೊಳಗೆ ದುಶ್ಯಾಸನನ ನಿರ್ಮಳಾತ್ಮಕನ ಭಜಿಸಿರಯ್ಯಾ | ಅಯ್ಯಾಯ್ಯಾ 2 ಹರಿಯೆ ಪರನೆಂದು ಬೊಬ್ಬಿಕ್ಕಿ ವಾದಿಗಳೆದೆ ಬಿರಿಯೆ ದು:ಶಾಸ್ತ್ರಜ ಜರಿಯೆ ದುರ್ಮತಗಳು ಪರಿಯ ಬಿಡದು ಠಕ್ಕೆ ಮೆರೆಯೆ ಧರೆಯೊಳಗೆ ಈ ಪರಿಯೆ ಮುನಿಗಾರು ಸರಿಯೆ ಪೊರೆಯ ಭಕ್ತರಿಗೆ ಸುಧೆ ಗರಿಯೆ ಜ್ಞಾನ ಮಾರ್ಗಾಂಕುರಿಯೆ ವೇದದ ಸಾರ ನೆರಿಯೆ ರಿಪುಕಾಲ ಮದಕರಿಗೆ ಕೇಸರಿಯೆ ಒಪ್ಪುವ ಭಜಿಸಿರಯ್ಯಾ | ಅಯ್ಯಯ್ಯಾ 3 ಅಜನಾಗಿ ಮುಂದೆ ಪಸರಿಸಿ ಬೆಳೆದು ಹರುಷದಲಿ ತ್ರಿಜಗವನು ನಿರ್ಮಾಣವನು ಮಾಡಿ ಒಂದೊಂದು ಸೃಜಿಸುವನು ಚಿತ್ರವಿಚಿತ್ರ ಗುಣಗಣವುಳ್ಳ ಇವನೆಂದು ವೇದಗಳು ಸಾರುತಿವೆ ಕುಜನಮತವನೆ ಪಿಡಿದು ಪುಸಿಯಿದು ಎಂದೆನ್ನದೆ ಭಜಿಸಿ ಗುರುಪಥವಿಡಿದು ಸಂದೇಹವನೆ ತೊರೆದು ಸುಜನರ ಶಿರೋಮಣಿಯಯ್ಯ | ಅಯ್ಯಾಯ್ಯಾ4 ಜಾತಿ ಸಂಕರವಾಗಿ ಜಾತಿ ಧರ್ಮವ ತೊರೆದು ಜಾತವೇದ ಸಯಜ್ಞ ಇಲ್ಲದಿದರೆ ವನಜ ಸಂ ಮೌಕ್ತಿದಮಣಿ ನುಡಿದ ಕರುಣದಲಿ ದ್ವಿ ಜಾತರನ ಉದ್ಧರಿಸ ಪೋಗೆನಲು ಜಯ ತನೋ ಜಾತ ಪುಟ್ಟಿದನು ಇಳಿಯೊಳಗೆ ಮಧ್ಯಗೇಹರ ಜಾತನಂ ಭಜಿಸಿರಯ್ಯ | ಅಯ್ಯಯ್ಯಾ | 5 ಇಳಿಯೊಳಗೆ ಬಲವಂತನಾದ ಮತ ಮಧ್ವಮತ ಸುಲಭವಾಗಿಹುದು ಸುಲಭರಿಗೆ ಕಮಲಕೇತಪನ ಹೊಳಪು ಹೊಳೆದಂತೆ ವಿಕಸಿತಾ ಮಾಡಿ ಸುಜ್ಞಾನ ಜಲಧಿಯೊಳಗಾಡಿಸುವುದು ಮಲತು ನಿಂತಿರ್ದ ಹರಿನಾಮ ದಂಡವಾ ಗುರುಕುಲತಿಲಕನಂ ಭಜಿಸಿರಯ್ಯಾ | ಅಯ್ಯಯ್ಯಾ |6 ದುರವಾದಿಗಳ ಗಂಡ ಗಜದಭೇರುಂಡ ಸಂ ಕರಣ ಪ್ರಾಣವನರದು ದುರ್ಮಾಯಿ ಮಿಥ್ಯದ ಕುಹಕ ಮುರಿದು ಉರಹಿ ಅರಿಗಳಂಗದ ಚರ್ಮ ಸುಲಿದು ಭೇರಿಗೆ ಹಾಕಿ ಹರಿಸೆ ಓಂಕಾರ ಮಣಿಯಂ ಭಜಿಸಿಯ್ಯಾ | ಅಯ್ಯಯ್ಯಾ 7 ಗುರುಕರುಣ ಪಡೆದ ಮಾನವನೆ ಸರ್ವಕೃತಾರ್ಥ ಗುರುಕರುಣ ಪಡೆಯದಿದ್ದವನ ಜನ್ಮವೇ ವ್ಯರ್ಥ ಉರಗ ಉಪವಾಸ ತಂತ್ರ ಕರಿ ಕರುಣತಿಪ್ಪುವದು ಗುರು ದಯಾಕರನಾಗೆ ಹರಿವೊಲಿದು ಸಲಹುವನು ಪಾದವ ನಂಬಿರೈಯ್ಯ | ಅಯ್ಯಯ್ಯಾ 8 ಪದ್ಧತಿಯ ಕೇಳಿ ಶುದ್ಧಾತ್ಮರಿದು ವರಗುರು ಮಧ್ವ ದುಗ್ಧಾಬ್ಧಿಯನು ಕಟಿದ ನವ ನವನೀತ ಮುದ್ದೆಯನು ತೆಗೆದು ನವವಿಧ ಭಕುತಿರಸದಿಂದ ಮೆದ್ದು ಸದ್ಭಾವದಲಿ ಸದ್ವೇಷ್ಣವರಾಗಿ ಮೃತ್ಯುವಿನ ಗೋನಾಳಿ ಒದ್ದು ಕಾಲನ ಮೀರಿ ವೈಕುಂಠಪುರ ಸಾರಿ ಸಿರಿ ಪಾದದ್ವಯವ ಭಜಿಸಿರಯ್ಯಾ ಅಯ್ಯಯ್ಯ 9
--------------
ವಿಜಯದಾಸ
ಶ್ರೀ ಮಾರುತಾತ್ಮ ಸಂಭೂತ ಹನುಮ ಭೀಮ ಮಧ್ವಾಖ್ಯ ಯತಿನಾಥ | ಮೂಲ ರಾಮಕೃಷ್ಣಾರ್ಪಿತ ಸುಚೇತಾ | ಮಮ ಸ್ವಾಮಿ ಚಿತ್ತೈಸೆನ್ನ ಮಾತಾ 1 ಅಂಜನಾದೇವಿ ಸುಕುಮಾರ |ಎಮ್ಮ ನಂಜಿಸುವ ಘೋರ ಸಂಸಾರ |ಹೇ ಪ್ರ ನಿಗಮ ಸಂಚಾರ | ಕ್ಲೇಶ ಭಂಜಿಸಿ ಸಲಹೋ ಗುಣೋದಾರ 2 ಕುಂತಿ ಜಠರದಲುದಿಸೆ ಬಂದೆ | ಮಾ ಹೊಂತ ಕೌರವರ ನೀ ಕೊಂದೆ | ಅನಾ ದ್ಯಂತ ಕಾಲದಿ ಎಮ್ಮ ತಂದೆ | ನೀನೆ ಸಂತೈಸಬೇಕೆಂದು ನಿಂದೆ 3 ಮಧ್ಯ ಗೇಹಾಖ್ಯ ದ್ವಿಜಸದನ | ದೊಳಗೆ ಉದ್ಭವಿಸಿ ಮೆರೆದೆ ಜಿತಮದನ | ಧರ್ಮ ಪದ್ಧತಿಗಳ ಪ್ರಸನ್ನವದನಾ | ತಿಳಿಸಿ ಉದ್ಧರಿಸೋ ದನುಜಕುಲ ನಿಧನ4 ಶ್ರೀ ಪೂರ್ಣಬೋಧ ಯತಿರಾಯ | ಎಮ್ಮ ತಾಪತ್ರಯಗಳಿಂದ ನೋಯ | ಗೊಡದೆ ನಿಕಾಯ | ಕೃಷ್ಣ ದ್ವೈಪಾಯನಗೆ ನೀನೆ ಪ್ರೀಯ 5 ಬದರಿಕಾಶ್ರಮಕೆ ನೀ ಪೋಗಿ | ಲಕ್ಷ್ಮೀ ಹೃದಯ ವಾಸನ ಪದಕೆ ಬಾಗಿ | ಭಾಷ್ಯ ಮುದದಿಂದ ಪೇಳ್ದೆ ಚೆನ್ನಾಗಿ | ಎನಗೆ ಅದರ ಭಾವವ ತಿಳಿಸೋ ಯೋಗಿ6 ತಾಪ ಭಾರ ತೀರಮಣ ಮಹಪಾಪ ವೆಣಿಸಿ ದೂರ ನೋಳ್ಪರೆ ಸುಪ್ರತಾಪ ಪರಮ ಕಾರುಣಿಕ ತೋರೋ ತವರೂಪ 7 ಭಕ್ತರಿಗೊಲಿದು ಭವದಿಂದ ನೀ ಮುಕ್ತರನÀ ಮಾಡು ದಯದಿಂದ ನೀನೆ ಶಕ್ತನಹುದೆಂದು ವೇದವೃಂದದೊಳಗೆ ಉಕ್ತವಾಗಿದೆ ನಿಮ್ಮಾನಂದಾ8 ಜೀವಕೋಟಿಯೊಳು ನೀನೆ ಪಿರಿಯ ಎಮ್ಮ ನೋವು ಸುಖಗಳನು ನೀನೆ ಅರಿಯ ಈಗ ನೀವೊಲಿಯದಿರೆ ಹರಿ ನಮ್ಮ ಪೊರೆಯಾ ಜಗವ ಕಾಯ್ವ ಗುರುವರ ನೀನೆ ಖರೆಯ 9 ಶ್ರೀ ಜಗನ್ನಾಥ ವಿಠ್ಠಲಯ್ಯ ನಂಘ್ರಿ ಪೂಜಿಸುವ ಸಜ್ಜನರ ಕೈಯಾ ಪಿಡಿದು ನೀ ಜೋಕೆ ಮಾಡುವುದು ಜೀಯಾ ನೀನೆ ಈ ಜಗತ್ರಯ [ಕೆ] ಗುರುವರ್ಯಾ 10
--------------
ಜಗನ್ನಾಥದಾಸರು
ಶ್ರೀ ಮೂಕಾಂಬ ದೇವಿ ಶ್ರೀ ಮೂಕಾಂಬ ಪ ನರಿವರೆ ಶ್ರೀ ಮೂಕಾಂಬ ಶ್ರೀ ಮೂಕಾಂಬ 1 ವಾರಾಹಿ ನಿಜವೇಣಿ ಶ್ರೀ ಮೂಕಾಂಬ ಸಾರ ಗೋಪಮವಾಣಿ ಶ್ರೀ ಮೂಕಾಂಬ ರೂಪಿಣಿ ಮೂಕಾಂಬ 2 ಸ್ಥಿರವಾಸಿ ಶ್ರೀ ಮೂಕಾಂಬ ಪರಿಪರಿ ಭಕ್ತಗೆ ಬೇಡಿದ ವರವೀವ ಶ್ರೀ ಮೂಕಾಂಬ 3
--------------
ಕವಿ ಪರಮದೇವದಾಸರು
ಶ್ರೀ ಮೊದಲಗಿತ್ತಿ ಕೃಷ್ಣಣ್ಣನವರಿಗೆ ಅಂಕಿತಪದ ಕ |ಳಂಕ ರಹಿತನ ಮಾಡೋ ನೀ ಮಾಡೋ ಅ.ಪ. ಸಂತತ ನಿನ್ನಯ ಚರಿತೆಯ ಕೇಳಲಿ |ಅಂತರಾಗದಿ ಪಾಡಲಿ |ಸಂತರ ಸಹವಾಸವನು ಕೊಟ್ಟು ಸತತ ನಿ |ಶ್ಚಿಂತ ಪುರುಷನ ಮಾಡೋ ಕಾಪಾಡೋ 1 ಪಂಚಭೇದ ಮತಿಯನಿತು |ಮರುತ ಮತವನ್ನು ಪೊಂದಿ |ಸಿರಿಯರಸನೆ ತವಗುಣ ಕರ್ಮನಾಮವ |ವರ ಜಿಂಹ್ವಯೊಳಿರಿಸೋ, ಉದ್ಧರಿಸೋ 2 ಶ್ರೀಶ ಪ್ರಾಣೇಶ ವಿಠಲರೇಯ ನೀನ್ನನು |ಲೇಸಾಗಿ ಪ್ರಾರ್ಥಿಸುವೆ |ಆಶಿಯ ಬಿಡಿಸಿನ್ನು ಮೀಸಲ ಮನಮಾಡಿ |ನೀ ಸುಜ್ಞಾನವನೆ ಪಾಲಿಸೋ, ಲಾಲಿಸೋ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ಯುವನಾಮ ಸಂವತ್ಸರ ಸ್ತೋತ್ರ 152 ಉಗ್ರಂ ವೀರಂ ಮಹಾ ವಿಷ್ಣು ಅನುಪಮ ಮಹಾಜಾಜ್ವಲ್ಯ ಸರ್ವತೋಮುಖ ಭೀಷಣ ಭದ್ರ ಮೃತ್ಯು ನರಸಿಂಹ ದೇವ ದೇವ ದೇವೋತ್ತಮನಲಿ ಶರಣಾದೆ ಯುವನಾಮ ಸಂವತ್ಸರ ಅಸಮ ನಿಯಾಮಕನಲ್ಲಿ ಪ. ಬಾಲಿಶತನ ಕಳಿದು ಪ್ರೌಢಿಮೆಯಲಿ ಬರುವ ಯುವಕ ಯುವತಿಯರು ಸಾರ ಅಸಾರ ವಿವೇಕದಿ ಇಹಪರ ಸಾರ್ಥಕ ಆಗುವ ಜೀವನ ಕ್ರಮದಿ ಚರಿಸಲು ಯೋಗ್ಯವಾಗಿರುವದು ಈ ಯುವನಾಮ ವರ್ಷ 1 ಹರಿರೇವ ಪರೋ ಹರಿರೇವ ಗುರುರ್ ಹರಿರೇವ ಜಗತ್ಪಿತೃ ಮಾತೃಗತಿಃಯೆಂಬ ಪರಮೋತ್ತಮ ಬಲು ಆಪ್ತ ವಾಕ್ಯವ ಪ್ರತಿಕ್ಷಣ ಸಂಸ್ಮರಿಸಿದರೆ ಇಷ್ಟ ಸಿದ್ಧಿ ಅನಿಷ್ಟ ನಿವಾರಣ ದಿನ ದಿನ ವಿಹಿತ ಸಾಧು ಕರ್ಮ ಆಚರಿಪರಿಗೆ 2 ವಿಷ್ಣು ಪುರಾಣದಿ ಪರಾಶರ ಮಹರ್ಷಿ ಉಪದೇಶಿಸಿದಂತೆ ಪಾಷಂಡಿಗಳಲ್ಲಿ ಪಾಷಂಡ ಮತ ಪ್ರವರ್ತಕರಲಿ ಮೋಹ ಕೂಡದು ಸಾತ್ವಿಕ ಪುರಾಣಧಿಕ್ಕರಿಸುವ ಸ್ತ್ರೀ ಪುರುಷರ ಕ್ರೌರ್ಯಕ್ಕೆ ಬಾಗಿ ಸ್ನೇಹಿಸುವ ಜನರು ವಿಪತ್ತಿಗೆ ಗುರಿ ಜನ್ಮ ಜನ್ಮಕ್ಕೂ 3 ಯುವ ವರ್ಷ ರಾಜನು ಸಾಧು ಸಜ್ಜನಪ್ರಿಯ ಶನಿಮಹಾರಾಜನು ಹರಿಭಕ್ತರು ಸಜ್ಜನರುಗಳಿಗೆ ಸಹಾಯಕನು ಗೋಚಾರದಿ ಸ್ವಕ್ಷೇತ್ರಿ ಮೂಲ ತ್ರಿಕೋಣದೆ ಚಾರ ಶ್ರೀಹರಿ ನಿಯಮನದಿ ಮಂತ್ರಿ ಶುಕ್ರಚಾರ್ಯರು ಗೋಜನ ಪ್ರಿಯರು ಲೋಕ ಹಿತಕರರು 4 ಶನೈಶ್ಚರ ಕೃತ ಲಕ್ಷ್ಮಿ ಭೋಮ ನರಸಿಂಹ ಸ್ತೋತ್ರ ಅವಶ್ಯಪಠನೀಯ ಧಶರಥ ಕೃತ ಮತ್ತು ಪ್ರಸನ್ನ ಶ್ರೀನಿವಾಸೀಯ ಶನಿ ಸ್ತೋತ್ರ ಈ ನುಡಿಗಳು ಸಂವತ್ಸರ ಸ್ತೋತ್ರ ಯತಿವರ್ಯರು ಪಂಡಿತರು ಮತ್ತೆಲ್ಲರಿಂಪಠನೀಯ ಭಕ್ತಿ ಪೂರ್ವದಿ ಪಠಿಸಿ ಮನನ ಮಾಳ್ಪರಿಗೆ ವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ ರಕ್ಷಿಸುವ ಪ್ರತಿಕ್ಷಣದಿ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ರಘೂತ್ತಮ ಗುರು ಸ್ತೋತ್ರ ಗುರುರಾಜ ರಘೂತ್ತಮ ಗುರುರಾಜ ಗುರುರಾಜ ನಮೋ ನಮೋ ನಿನ್ನ ಪಾದ ಸರಸಿಜಯುಗಳದಿ ನಾ ಶರಣು ಅಹ ಧರಣಿಜಾಪತಿ ರಾಮ ಭದ್ರಗೆ ಪ್ರಿಯ ನೀನು ಕರುಣದಿ ಸಲಹೆನ್ನ ದುರಿತಗಳಳಿದು ಪ ನಿವ್ರ್ಯಾಜ ಕರುಣಿ ರಘುವರ್ಯ ಗುರು ವರ್ಯ ಸುಮೇಧರ ದಿವ್ಯ ಚಾರು ತೋಯಜ ಕರದಿಂದ ಉದಯನಾಗಿ ನಿಗಮ ಸಾಮ್ರಾಜ್ಯ ಅಹ ಮಾಯೇಶ ಕಾಳೀಶ ಗುರುಗಳ ಪ್ರಿಯ ಬಾಲ ವಯಸ್ಸಲ್ಲೇ ಉದ್ದಾಮ ಪಂಡಿತನಾದಿಯೋ 1 ಬದರೀಶ ನಿರ್ಣೀತತತ್ವ ಅರ್ಥ ವಿಸ್ತಾರ ಮಾಡಿದ ಮಧ್ವ ಟೀಕೆ ಜಯತೀರ್ಥ ಬರೆದ ತದ್ಭಾವ ಪೇಳಿ ಒದಗಿಸಿದೆಯೊ ಜ್ಞಾನ ಸುಖವ ಅಹ ಮುದ ಜ್ಞಾನ ಸೌಭಾಗ್ಯ ಸಾಧು ವೈಷ್ಣವತನ ಇತ್ತು ಪಾಲಿಪುದೆನ್ನ ಕುಂದುಗಳೆಣಿಸದೆ 2 ಧರೆಯಲ್ಲಿ ದಕ್ಷಿಣಕಾಶಿ ಸ್ವರ್ಗ ಧರೆಯಳದವನ ಸೇವಿಸಿ ಗಂಗಾ ಧರಷಡಾನನ ಇಲ್ಲಿ ವಾಸಿಸುವ ಈ ಕ್ಷೇತ್ರ ವೃಂದಾವನ ವಾಸಿ ಅಹ ಪರಮೇಶ ಕೇಶವ ಪ್ರಿಯಾ ಪಿನಾಕಿನಿಯಿಂದ್ರಾ ತೀರ ಮಧ್ಯದಿ ತಪಗೈದು ಭಕ್ತರ ಕಾಯ್ವಿ 3 ಸುರವೃಂದ ಶ್ರೇಷ್ಠ ನೀನಹುದು ಎನ್ನ ಪರಿ ಬಾಧೆಯ ತರಿದು ಸರ್ವ ಸಿರಿ ಇತ್ತು ಹರಿ ಗುರು ಭಕ್ತಿ ಬೆಳೆಸಿ ಪಾಲಿಪುದು ಅಹ ಹರ ಸಮೀಪಕೆ ಒಳ್ಳೆ ಸಾಧನ ಸರ್ವದಾ ಕಾರುಣ್ಯದಲಿ ಎನ್ನೊಳ್ ನಿಂತು ಮಾಡಿಸೋ ಗುರೋ 4 ರಾಮನೃಕೇಸರಿ ವ್ಯಾಸ ಸತ್ಯ ಭಾಮ ರುಕ್ಮೀಣಿ ದೇವಿ ಅರಸ ಭೂಮ ಶ್ರೀಮಂತ ಕ್ಷೀರಾಬ್ಧಿವಾಸ ಮಧ್ವ ಭೀಮಹನುಮ ವಂದ್ಯ ಶ್ರೀಶ ಅಹ ಹೇಮಗರ್ಭನ ತಾತ `ಪ್ರಸನ್ನ ಶ್ರೀನಿವಾಸ' ರಮೆಯರಸನ ಪ್ರಿಯತಮ ಜೀಯ 5 || ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ರಮಣ ಸರ್ವೇಶ ತ್ವಚ್ಚರ- ಣಾರವಿಂದವ ನಂಬಿರುವನಲಿ ಘೋರ ಭಾವವ ತಾಳ್ದ ಹೂಣನ ದೂರ ಓಡಿಸುವ ಭಾರ ನಿನ್ನದು ಪರಮ ಕರುಣಾ ವಾರುಧಿಯೆ ನೀನಲ್ಲದೆನಗೆ- ಸಾರಥಿ 1 ಸುಗುಣ ಸಜ್ಜನ ಶಿರೋಮಣಿ ಮಗುವು ಪ್ರಹ್ಲಾದನ ಪದಾಂಬುಜ ಯುಗವ ನೆನೆವುದನರಿತು ತತ್ಪಿತನೆಂದು ರೋಷದಲಿ ನೆಗೆದು ಬಂಡೆಯ ಝಳಪಿಸುತ ಬರೆ ಧಗಧಗಿಸಿ ಕಂಬದಲಿ ತೋರುತ ಬಗೆದಿ ದೈತ್ಯನ ಕರುಳ ಜಯ ಜಯ ವಿಜಯಸಾರಥಿ 2 ದೋಷಿ ದೈತ್ಯಾವೇಷದಿಂದಲಿ ವಾಸವಾದಿ ಸಮಸ್ತ ದಿವಿಜರ ಘಾಸಿಗೊಳಿಸಿದ ದಶಶಿರನ ತದ್ವಂಶಜರ ಸಹಿತ ನಾಶಗೈದು ನಿರಾಪರಾಧಿ ವಿ- ಭೀಷಣಗೆ ಸಾಮ್ರಾಜ್ಯವಿತ್ತ ಪ- ರೇಶ ಸೀತಾಕಾಂತ ಜಯ ಜಯ ವಿಜಯಸಾರಥಿ 3 ಪೂತನಾ ಬಕ ಶಕಟ ಧೇನುಕ ಪಾತಕಿ ಶಾರಿಷ್ಠ ಕೇಶಿಕಿ- ರಾತ ಕಂಸಾಂಬಷ್ಟ ಮುಷ್ಟಿಕ ಮಲ್ಲ ಚಾಣೂರ ಕಾತರದ ಶಿಶುಪಾಲ ಮುಖ್ಯರ ಘಾತಿಸಿದ ಗರುಡಧ್ವಜನೆ ಪುರು- ಹೂತ ಸುತನನು ಕಾಯ್ದೆ ಜಯ ಜಯ ವಿಜಯಸಾರಥಿ 4 ಅತ್ಯಧಿಕ ಕೋಪದಲಿ ಪ್ರಜ್ವಲಿ ಕಮಲ ಜೌಸ್ತ್ರವ ನುತ್ತರೆಯ ಗರ್ಭದಲಿ ಬಿಡದೆ ಸುತ್ತಿಕೊಂಡಿರಲು ಸತ್ಯಭಾಮಾಕಾಂತ ಕರುಣದಿ ತೆತ್ತಿಯನು ಕಾಪಾಡಿದಖಿಳೋ- ತ್ಪತ್ತಿರಕ್ಷಣಕಾರಿ ಜಯ ಜಯ ವಿಜಯಸಾರಥಿ 5 ಇರುವೆ ಮೊದಲು ಬ್ರಹ್ಮಾಂತರಾಗಿಹ ಸುರನರಾಸುರ ಮುಖ ಪ್ರಪಂಚ ದೊ- ಳಿರುವೆ ಸರ್ವೇಂದ್ರ್ರಿಯ ನಿಯಾಮಕ ಸರಿವ ಕೃತ್ಯವನು ಅರಿತು ಮಾಡಿಸಿ ನೋಡಿ ನಗುತಿಹ ಪರಮ ಮಂಗಳ ಚರಿತ ನೀ ಯನ- ಗಿರಲು ಭಯವ್ಯಾಕಿನ್ನು ಜಯ ಜಯ ವಿಜಯಸಾರಥಿ 6 ಆದರೀ ತೆರದಿಂದ ನಿನ್ನಯ ಪಾದ ಪಂಕಜಗಳನು ಪೊಗಳಿದ- ರಾದುದೊಂದಾಶ್ಚರ್ಯ ನೋಡಲಿ ಸುಜನರಾದವರು ಮೋದ ಭೋದಿ ದಯಾಬ್ಧಿ ವೆಂಕಟ ಭೂಧರೇಶನೆ ಸತತ ನಮ್ಮನು ಕಾದಿರುವೆ ಕಮಲೇಶ ಜಯ ಜಯ ವಿಜಯಸಾರಥಿ7
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ರಮಣಪತಿ ವಿಠಲ ನೀ ಕರುಣಿಸೋ |ಮಾರಪಿತ ಮರುತ ಮನೆಮಂದಿರ ನಿವಾಸಾ ಪ ಉದಯದಲಿ ಎದ್ದು ಹರಿಧ್ಯಾನವನು |ಮುದದಿಂದ ಬ್ಯಾಸರದೆ ನಿರುತ ಮಾಡಿ |ಸದಮಲ ಶ್ರೀ ಮುದ್ರಿಊಧ್ರ್ವಪುಂಡ್ರವ |ಪದುಮಾಕ್ಷಿ ಶ್ರೀತುಲಸಿಸರಗಳಿಂದಾ 1 ಸಿರಿ ಬೊಮ್ಮ ಪಂಚಭೇದ ಜ್ಞಾನದ, ತತ್ವವಿಚಾರ |ಹರಿದಾಸ ಸಹವಾಸ ಸರ್ವದಾ ಕೊಟ್ಟು 2 ಶ್ರೀಶ ಪ್ರಾಣೇಶ ವಿಠ್ಠಲರಾಯನೇ ನಿನ್ನ |ದಾಸತ್ವವನೆ ಕೊಟ್ಟು ಉದ್ಧರಿಪದೋ ||ಲೇಸಾಗಿ ಪ್ರಾರ್ಥಿಸದೆ ಎನ್ನ ಭಿನ್ನಪವು ಉ |ದಾಸಿಸದೆ ನೀ ಕರುಣಿಸೆಂದು ದಿನದೇ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ರಮಾದೇವಿ ಅಂಬೋನಿಧಿ ಹೃದಂಬರ ವಾಸಿನಿ ಅಂಬಾ ಬಾ ಬಾ ಅಂಬುಧಿಜಾ ನಮೋ ಪ ಅಂಬುಜನಾಭನ ನಿಜಸತಿ ಶ್ರೀ ಭೂ ರಥಾಂಗ ಪೂ ಕಂಬು ಮಾಲಾದಿ ಸುರೂಪದಿ ಹರಿಗೆ ನೀ ಸಮ್ಮುದದಿಂದೆ ಸುಸೇವೆಯ ಮಾಳ್ಪಳೆ ಅ ಪ ಮಂದರಗಿರಿಯಿಂದ ಸಿಂಧುವ ಮಥಿಸಲು ನಿಂದು ಪ್ರಕಟವಾದೆ ಇಂದಿರಾದೇವಿಯೆ ಕುಂದೇನಿಲ್ಲದ ಸುಂದರಗುಣನಿಧಿ ಬಂಧಮೋಚಕ ಆನಂದಸುಪೂರ್ಣ ಗೋ ವಿಂದ ಶ್ರೀ ಅಜಿತಭೂಮನನ್ನೆ ವರಿಸಿದೆ ಮಂದಜಭವ ಶಿವ ವೃಂದಾರಕನುತ 1 ಹರನ ಚಾಪವ ಶ್ರೀರಾಮನು ಮುರಿಯಲು ವರ ವನಮಾಲೆಯ ಅರ್ಪಿಸಿ ನಿಂದೆ ಸುರಮುನಿರಾಜರು ಪುರಜನರೆಲ್ಲರು ಸುರಿಯಲು ಪೂಮಳೆ ಸಂಭ್ರಮದಿಂದಲಿ ಸರಿಪರರಿಲ್ಲದ ಶ್ರೀ ರಘುರಾಮನು ಸಿರಿಜನಕಜೆ ನಿನ್ನ ಕರವನು ಗ್ರಹಿಸಿದ 2 ಭೈಷ್ಮಿ ರುಕ್ಮಿಣಿ ಸತ್ಯಭಾಮಾ ಶ್ರೀ ಭೂದೇವಿ ವಾಮಚಿನ್ಮಯೆ ಶ್ರೀ ಸ್ವಾಮಿ ಕೃಷ್ಣನ ರಾಣಿ ಹೇಮಗರ್ಭಾದಿ ಸಮಸ್ತ ಸುಜನರಿಗೆ ರಮೆ ನಿನ್ನಯ ಸುಮಂದ ಕಟಾಕ್ಷವು ಕಾಮಿತ ಫಲದವು ಮೋಕ್ಷಹೇತುವೆ ದೇವಿ ಸತಿ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ರಾಘವೇಂದ್ರರು ದಿನಕರನುದಿಸಿದನು ಧರೆಯೊಳಗೆದಿನಕರನುದಿಸಿದನು ದಾನವ ಕುಲದಲಿ ಕ್ಷೋಣಿಯೊಳಗೆ ಪ ಪ್ರಥಮ ಪ್ರಲ್ಹಾದನಾಗಿ ಅವತಾರ ಮಾಡಿಸತತ ಹರಿಯ ನುತಿಸಿಮತಿ ಹೀನನಾದ ತಂದೆಗೆ ನರಹರಿರೂಪರತಿಯಿಂದ ತೋರಿದ ಪ್ರಲ್ಹಾದರಾಯರೆಂಬ 1 ವ್ಯಾಸಮುನಿಯ ಎನಿಸಿ ಸೋಸಿಲಿಂಗವಾಸವನುತನ ಭಜಿಸಿದಾಸನೆಂದು ಮೆರೆದಿ ನವ ವೃಂದಾವನದಿಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ 2 ತುಂಗಭದ್ರೆಯ ತೀರದಿ ಮಂಗಳಮರ ಮಂತ್ರಾಲಯ ಸ್ಥಳದಿಅಂಗಜ ಪಿತ ನಮ್ಮ ಐಹೊಳೆವೆಂಕಟನಕಂಗಳಿಂದ ಕಂಡೆ ಗುರು ರಾಘವೇಂದ್ರನೆಂಬ 3
--------------
ಐಹೊಳೆ ವೆಂಕಟೇಶ
ಶ್ರೀ ರಾಘವೇಂದ್ರರು ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ಪ ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ಅ.ಪ. ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ 1 ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ 2 ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು 3
--------------
ಶ್ರೀದವಿಠಲರು