ಒಟ್ಟು 4519 ಕಡೆಗಳಲ್ಲಿ , 115 ದಾಸರು , 2642 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಕೃಪೆಯಿರೆ ಬಲುಸುಖ ಈ ಸಂಸಾರನಿನ್ನ ಕೃಪೆಯಗಲಿದರೆ ಘನಗೋಳು ಹರಿಯೆ ಪಅಲ್ಲ ಅಹುದಾಗುವುದು ಸುಳ್ಳೆ ಖರೆಯಾಗುವುದುಎಲ್ಲಸಿರಿ ಒದಗುವುದು ಒಲ್ಲೆನಲು ಬಿಡದೆಪುಲ್ಲನಾಭನ ಒಲುಮೆವುಳ್ಳ ಮಾನವರಿಗೆಕಲ್ಲಿನೊಳು ಜಲಪುಟ್ಟಿ ಹೊಳೆಯಾಗಿ ಹರಿಯುವುದು 1ಹೀನನಾದರು ಬಹುಮಾನ ಸಿಗುವುದು ಗೊಡ್ಡುಧೇನುಗಳೆಲ್ಲ ಬಿಡದೆ ಹೈನಗರೆಯುವುವುದೀನನಾಥನು ಒಲಿಯೆ ನಾನಾ ಸಿರಿಸೌಭಾಗ್ಯತಾನೆ ಬರುವುದು ತೆಂಗಿನೊಳುದಕದಂತೆ 2ವಿಷವೆ ಅಮೃತವಹುದು ಕಸವೆ ಕರ್ಪುರವಹುದುವಿಷಮ ವಿಷಯದ ಎಡರು ಹಸನಹುದು ನಿಖಿಲವಸುದೆಗಧಿಕ ನಮ್ಮ ಬಿಸಜಾಕ್ಷ ಶ್ರೀರಾಮನೊಶವಾದ ಬಳಿಕ ನಿಜ ಅಸಮ ಮುಕ್ತಿಹುದು 3
--------------
ರಾಮದಾಸರು
ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿಧನ್ಯನಾದೆನು ಧರೆಯೊಳು ||ಇನ್ನು ಈಭವಭಯಕೆ ಅಂಜಲೇತಕೆ ದೇವಚೆನ್ನ ಶ್ರೀ ವೆಂಕಟೇಶಾ ಈಶಾ ಪಏಸುಜನುಮದಸುಕೃತಫಲವು ಬಂದೊದಗಿತೋಈ ಸ್ವಾಮಿ ಪುಷ್ಕರಣಿಯೊಳ್ನಾ ಸ್ನಾನವನು ಮಾಡಿವರಾಹದೇವರ ನೋಡಿಶ್ರೀ ಸ್ವಾಮಿ ಮಹಾದ್ವಾರಕೆಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿಲೇಸಿನಿಂದಲಿ ಪೊಗಳುತಆ ಸುವರ್ಣದ ಗರುಡ ಗಂಬವನು ಸುತ್ತಿ ಸಂತೋಷದಿಂ ಕೊಂಡಾಡಿದೆ ಬಿಡದೆ 1ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲುದಟ್ಟಣೆಯ ಮಹಾಜನದೊಳುಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂಗೆಟ್ಟು ಹರಿಹರಿಯೆನುತಲಿಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿಕಟ್ಟಂಜನಕೆ ಪೋಗುತಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆಸುಟ್ಟೆ ಎನ್ನಯ ದುರಿತವಾ-ದೇವಾ 2ಶಿರದಲಿ ರವಿಕೋಟಿ ತೇಜದಿಂದೆಸೆಯುವಕಿರೀಟವರಕುಂಡಲಗಳಕೊರಳಲ್ಲಿ ಸರವೈಜಯಂತಿವನಮಾಲೆಯನುಪರಿಪರಿಯ ಹಾರಗಳನುಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳವರನಾಭಿಮಾಣಿಕವನುನಿರುಪ ಮಣಿಖಚಿತಕಟಿಸೂತ್ರಪೀತಾಂಬರವಚರಣಯುಗದಂದುಗೆಯನು - ಇನ್ನು 3ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆಲಕ್ಷ್ಮೀಪತಿ ಕಮಲಾಕ್ಷನೆಅಕ್ಷತ್ರಯಅಜಸುರೇಂದ್ರಾದಿವಂದಿತನೆಸಾಕ್ಷಾಜ್ಜಗನ್ನಾಥನೇರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು ನಿರಪೇಕ್ಷ ನಿತ್ಯತೃಪ್ತನೇಕುಕ್ಷಿಯೊಳಗಿರೇಳು ಭುವನವನು ಪಾಲಿಪನೆರಕ್ಷಿಸುವುದೊಳಿತು ದಯದಿ -ಮುದದಿ 4ಉರಗಗಿರಿಯರಸ ನಿನ್ನಚರಣನೋಡಿದ ಮೇಲೆಉರಗಕರಿವ್ಯಾಘ್ರ ಸಿಂಹಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದಪರಿಪರಿಯ ಭಯಗಳುಂಟೇಪರಮವಿಷಯಗಳ ಲಂಪಟದೊಳಗೆ ಸಿಲುಕಿಸದೆಕರುಣಿಸುವುದೊಳಿತು ದಯವಾಸ್ಮರಗಧಿಕ ಲಾವಣ್ಯಪುರಂದರವಿಠಲನೇಶರಣಜನ ಕರುಣಾರ್ಣವಾ ದೇವಾ 5
--------------
ಪುರಂದರದಾಸರು
ನಿನ್ನ ಬೆನ್ನುಬಿದ್ದು ಧನ್ಯನಾದೆನು ಪನ್ನಂಗಶಯನನಿನ್ನ ಬೆನ್ನುಬಿದ್ದು ಧನ್ಯನಾದೆನು ಪಇನ್ನು ಭವದೊಳು ಅನ್ಯರಂಜಿಕೆಯನ್ನು ತಪ್ಪಿಸಿನಿನ್ನ ಕರುಣವನು ತೋರಿದಿ ಸನ್ನುತಾಂಗರೂಢಿಯೊಳು ನಾನು ಮೂಢನಾದೆನು ಧೃಢದಿ ನಿನ್ನಗಾಢಮಹಿಮೆಯ ಅರಿಯದಲೆ ಇನ್ನು ಬಡಬಡಿಸಿಕೊಂಡುಕೇಡಿಗೊಳಗಾಗಿ ಕೆಡುತಲಿರ್ದೆನು ಬಿಡದೆ ಪರರನುಬೇಡಿ ಆಸೆಯಿಂ ಭಂಗಮಾಡುತ ಖೋಡಿಯಪ್ಪುದ ಕಂಡು ನೀನೆಮೂಢನೊಳು ದಯಮಾಡಿ ಕರುಣವನೀಡಿ ಕುರುಹನು ತೋರ್ದಿ ದೇವ 1ಹೊಂದಿಕೊಂಡೀ ಮಾಯಾಜಾಲವನು ಒಂದನರಿಯದೆಮಂದಮತಿಯಾಗಿ ಕೆಡುತಲಿ ನಾನುಬಂಧನದ ಭವದ ಸಿಂಧುವಿನೊಳಗಾಡುತಿರ್ದೆನುನೊಂದು ಬೆಂದೆನುಮಂದಭಾಗ್ಯನ ಮಂದಮತಿಗಳುಒಂದು ಉಳಿಯದಂತೆ ಮಾಡೆನ್ನ್ಹøದಯ ಮಂದಿರದೊಳುನಿಂದುನೀನೆ ಮುಂದಕ್ಹಾಕಿದಿ ಮಂದರೋದ್ಧಾರ2ಮರುಳತನವನು ದೂರಮಾಡಿದಿ ಹರಿಯೆ ಎನ್ನಸರುವ ದುರ್ಗುಣ ತರಿದು ಹಾಕಿದಿ ಕರುಣದೆನ್ನದುರಿತಪರ್ವತಮೂಲ ಕಿತ್ತಿದಿ ಮರೆವು ಹರಿಸಿದಿಪರಮಕರುಣಾಕರನೆ ನಿನ್ನುಪಕಾರ ಮರಿಯೆನಾವಕಾಲದಿಪರರ ಬೇಡದಪದವಿನೀಡಿದಿಶರಣಜನಪ್ರಿಯ ಸಿರಿಯರಾಮ 3
--------------
ರಾಮದಾಸರು
ನಿನ್ನ ಮಹಿಮೆಯನಾರು ಬಲ್ಲರುಚಿನ್ಮಯಾತ್ಮಕನಂತರೂಪನೆಮುನ್ನೆ ಕಮಲಜ ನಿನ್ನ ನಾಭಿಯೊಳುನ್ನತೋನ್ನತದಿಘನ್ನ ತಪವಂಗೈದು ಕಾಣನುಇನ್ನು ಶ್ರುತಿಸ್ಮøತಿ ಅರಸಿ ಅರಿಯವುಪನ್ನಗೇಂದ್ರನು ಪೊಗಳಲರಿಯ ಪ್ರಸನ್ವೆಂಕಟನೆ 1ಹರಿಯೆ ತ್ರಿದಶರ ದೊರೆಯೆ ಭಕುತರಸಿರಿಯೆ ದಿತಿಜರರಿಯೆಅನವರತಮರೆಯದಿಹ ಅಜಹರಯತೀಶ್ವರರರಿಯರಿನ್ನುಳಿದಇರವು ಮನುಜ ನಾನರಿಯಲಾಪೆನೆಪೊರೆಯೊ ಬಿಡದೆ ಪ್ರಸನ್ವೆಂಕಟಗಿರಿಯರಸ ಜಗದೆರೆಯ ಸುರವರವರಿಯ ಮಾಸಹನೆ 2ನಾಗರಿಪುಗಮನಾಗಭೃತಶುಭನಾಗಪಾಕ್ಷಘನಾಗಮನಿಗಮನಾಗಪತಿ ವದನೈಕಸ್ತುತ ಸುಗುಣ ಗುಣಾರ್ಣವನೆನಾಗಹರಸಖ ನಾಗಘನಮಣಿನಾಗಗ್ರಸಿತಭಾ ನಾಗದ್ವಿಟಮುಖನಾಗಧರನುತ ನಾಗಮದಹ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ನಿನ್ನರಮನೆ ಕಾಯ್ವ ಪಶುದೇಹಧಾರಿಯಮಾಡುಕಂಡ್ಯ ಕೃಷ್ಣನಿನ್ನವನಲ್ಲದಮಾನವಜನುಮೆಂದು ಬ್ಯಾಡ ಕಂಡ್ಯಪ.ಅಚ್ಯುತಚಿತ್‍ಸ್ವರೂಪೋಚ್ಚಾರಿಪ ಗಿಣಿಮಾಡುಕಂಡ್ಯ ಕೃಷ್ಣನಿಚ್ಚಾರಿ ನಿಶಾಚರಹರನೆಂಬ ಜಾಣ್ವಕ್ಕಿಮಾಡುಕಂಡ್ಯ1ಅಹೋ ಮಾಉಮೇಶವಿಧಿಪನೆಂಬ ನವಿಲುಮಾಡುಕಂಡ್ಯ ಕೃಷ್ಣಕುಹಕಕುವ್ರತವೈರಿಅವರಿಗೆಂಬ ಪಿಕನಮಾಡುಕಂಡ್ಯ2ಹರಿಯವಯವಗಳೆಂಬ ಪುಷ್ಪದಿ ಚರಿಪಾಳಿಯಮಾಡುಕಂಡ್ಯ ಕೃಷ್ಣಪರಮಮುಕ್ತಾಹಾರದ ಪರಮಹಂಸನಮಾಡುಕಂಡ್ಯ3ಭುಲ್ಲಿಪ ವೈಕುಂಠ ಸಿರಿಯ ನಿಟ್ಟಿಪಹುಲ್ಲೆಮಾಡುಕಂಡ್ಯ ಕೃಷ್ಣಎಲ್ಲ ಪ್ರಕಾರದ ಸಾರಿ ಕೂಗುವ ನರಿಯಮಾಡುಕಂಡ್ಯ4ಸ್ವರೂಪ ಬಿಂಬವ ನೋಡಿ ನರ್ತಿಪ ಕುದುರೆಯಮಾಡುಕಂಡ್ಯ ಕೃಷ್ಣವರಮುಕ್ತರರಮನೆಭಾರ ಹೊರುವ ಗೂಳಿಮಾಡುಕಂಡ್ಯ5ನವೀನ ಮುಕ್ತರಿಗೊದಗುವ ಬಾಗಿಲ ಕುನ್ನಿಮಾಡುಕಂಡ್ಯ ಕೃಷ್ಣಗೋವಿಂದ ಗೋವಿಂದೆಂದು ಬೀದಿಲೊದರುವ ಕತ್ತೆಮಾಡುಕಂಡ್ಯ6ಹರಿನಿರ್ಮಾಲ್ಯ ಕಸ್ತೂರಿ ಕರ್ದಮದ ಪತ್ರಿಮಾಡುಕಂಡ್ಯ ಕೃಷ್ಣಸ್ವರ್ಗಾಮೃತ ತಟವಾಪಿಯ ಮೀನವಮಾಡುಕಂಡ್ಯ7ಬಾಡಿ ಕೆಡದ ಪುಷ್ಪಲತೆ ತರುಗುಲ್ಮವಮಾಡುಕಂಡ್ಯ ಕೃಷ್ಣನೋಡಿ ಸ್ವಾನಂದದಿ ಜಿಗಿದಾಡುವ ಕಪಿಯಮಾಡುಕಂಡ್ಯ8ನಾಕಕೈವರ ಸಂಗತಿ ಬಿಟ್ಟಗಲದಂತೆಮಾಡುಕಂಡ್ಯ ಕೃಷ್ಣಆಕಾಂಕ್ಷವಿಲ್ಲದುಗ್ಗಡಿಪ ಭಟನನ್ನೆಮಾಡುಕಂಡ್ಯ9ಮಣಿಮಯ ಭಿತ್ತಿ ಸೋಪಾನ ವಿತಾನವಮಾಡುಕಂಡ್ಯ ಕೃಷ್ಣತೃಣ ಮುಕ್ತಾದವರೊಳಗೊಂದಾರೆ ಜಾತಿಯಮಾಡುಕಂಡ್ಯ10ಜ್ಞಾನಾನಂದಗಳ ಯೋಗ್ಯತೆ ನೋಡಿ ಕೂಡುವಂತೆಮಾಡುಕಂಡ್ಯ ನೀದಾನಕ್ಕೆ ಮೊಗದೋರಿಕೈವಲ್ಯಪುರಾಗಾರಮಾಡುಕಂಡ್ಯ11ಈಪರಿಬಿನ್ನಹವಾಲಿಸಿ ಭವದೂರಮಾಡುಕಂಡ್ಯ ಕೃಷ್ಣಶ್ರೀ ಪ್ರಸನ್ವೆಂಕಟಪತಿ ಬಿಂಬಾತ್ಮಕ ಕೃಪೆಮಾಡುಕಂಡ್ಯ12
--------------
ಪ್ರಸನ್ನವೆಂಕಟದಾಸರು
ನಿಲ್ಲಿಸಬೇಕೊ ಯಾದವರ ಹೊಲ್ಲಗುಣದವರನಿಲ್ಲಿಸಬೇಕೊ ಇವರ ಬಿಲ್ಲಿಗೆ ಅಂಜದವರಗೊಲ್ಲರು ನಮ್ಮ ಸರಿ ಅಲ್ಲವೊ ಧರ್ಮರಾಯ ಪ.ಒಡೆಯ ಧರ್ಮನು ಹರಿಯ ಅಡಿಗೆರಗುವೆÉನೆಂದನಡೆದು ಹೋಗಲುರಾಯ ತಡೆಯಬೇಕೆಂದ ಭೀಮ 1ಕಂಜನಾಭನ ಮನೆಯ ಎಂಜಲು ಬಳೆವವನರಂಜಿಸಿ ಕರೆಯಬ್ಯಾಡ ಅಂಜಿಕೆ ಏನು ಅವನ 2ಪಾರ್ಧನು ರಾಯಗೆ ಪಾರ್ಥಿಸಿ ಹೇಳಿಕೊಂಡಸಾರಥಿಯ ಕರೆಯೋದು ಕೀರ್ತಿ ಅಲ್ಲವೊರಾಯ 3ನಕುಲನುರಾಯಗೆ ಯುಕ್ತಿಲೆ ಹೇಳಿಕೊಂಡಸಖನಯ್ಯನ ಕುಶಲವು ಮುಖವ ಮಾಡಿದವನಲ್ಲೊ 4ಕೇಳಯ್ಯ ರಮಿ ಅರಸು ಗಾಳಿಸಿ ಬಯಸಿಕೊಂಡಬಹಳ ಮನ್ನಿಸ ಬ್ಯಾಡ ಹೇಳಿಕೊಂಡ ಸಹದೇವ 5
--------------
ಗಲಗಲಿಅವ್ವನವರು
ನೀ ಕಾಯ್ದರೆ ಕಾಯ್ದಾ ಬಗೆಯಲ್ಲದೆ ಬೇರೆಏಕಮತಿ ಎನ್ನೊಳಿಲ್ಲಶ್ರೀಕಾಂತ ಕರುಣಿ ನೀನಕ್ಲಿಷ್ಟ ಕಾಣಯ್ಯಬೇಕೆಂದು ಸಾಕುತಿಹೆ ಹರಿಯೆ ಪ.ವೇದ ಶಾಸ್ತ್ರ ಪುರಾಣ ಸಾರಾರ್ಥ ತಿಳಿದರಿಯೆಸಾಧನ ಸುಮಾರ್ಗವರಿಯೆಆದರದಿ ಭಕುತಿ ಬಲಿದೊಮ್ಮೆ ಪೂಜಿಸಲರಿಯೆಮಾಧವಮುರಾರಿ ಕೃಷ್ಣಾ ತುಷ್ಟಾ1ಮನ ಮರ್ಕಟವು ತನ್ನ ಮತಿಯಲ್ಲಿ ವಿಷಯ್ಯೆಂಬವನಕೆ ಮೆಚ್ಚಿದೆ ನೋಡಯ್ಯವನಚರತ್ವವನೀಗಿಕ್ಷಣವಾರೆ ತವಚರಣವನಜರಸವುಣ್ಣದಲ್ಲೈ ರಂಗಯ್ಯ 2ಜನುಮ ಜನುಮದ ತಾಯಿ ತಂದೆಗುರುಬಂಧುನನ್ನನು ಗತಿಗಾಣಿಪ ದಾತನೆಎನ್ನಭವತಪ್ಪುಗಳನರಸದಿರು ಅರಸಿದರೆನಿನಗುಚಿತೆ ಪ್ರಸನ್ವೆಂಕಟೇಶ ಶ್ರೀಶ 3
--------------
ಪ್ರಸನ್ನವೆಂಕಟದಾಸರು
ನೀನೆ ಪಾಲಿಸು ಕರುಣಾವಾರಿಧಿದೀನಜನರಾಧಾರ ಹರಿಯೆ ಪನಿನ್ನಾಧೀನವು ತೋರ್ಪುದೆಲ್ಲಮಾನವನ ಸ್ವಾಧೀನವೇನಿದೆನಿನ್ನ ನೆರಳಲಿ ಮೂರು ಜಗವುಭಿನ್ನವಿಲ್ಲದೆ ಬದುಕಿ ಬಾಳ್ವುದು 1ನಿನ್ನ ಸಹಾಯವಿಲ್ಲದೀಭವವನ್ನು ಗೆಲಿಯುವ ಸಾಧ್ಯದಾರಿಗೆನಿನ್ನ ಕೃಪಾಕಟಾಕ್ಷದಿಂದಲೆಮುನ್ನ ಹಿರಿಯರು ಧನ್ಯರಾದರು 2ಮತ್ರ್ಯಲೋಕಕ್ಕೆಳೆದು ತಂದೆನ್ನಮರ್ತುಬಿಡುವುದುಚಿತವೇನಯ್ಯನಿರ್ತಸುಖವಿತ್ತು ರಕ್ಷಿಸಭವಕರ್ತುಶ್ರೀಗುರು ರಾಮ ಪ್ರಭುವೆ3
--------------
ರಾಮದಾಸರು
ನೀನೆ ರಕ್ಷಿಸೋ ಎನ್ನ ಓ ಶ್ರೀನಿವಾಸದಾನವಾಂತಕ ದೀನಪಾಲ ಲಕ್ಷ್ಮೀಶಾ ಪಮೌನಿ ಹೃದಯಾ ಸುಮವಾಸಾ ಸರ್ವೇಶಾಮೌನದಿಂದಿರಲೇನೋ ಕಾಣೆ ವಿಶೇಷಾಮೌನ ಮಂತ್ರವು ಸ್ನಾನಾ ಧ್ಯಾನಾವನರಿಯೆದೈನ್ಯ ಭಕ್ತಿಯೊಳ್ ಬೇಡಿಕೊಂಬೆ ಶ್ರೀಹರಿಯೆ 1ಲೋಕನಾಥನೆಜವಶೋಕವಿಹಾರಾಏಕರೂಪನೆ ಸರ್ವ ಲೋಕ ಸಂಚಾರಾನಾಕಸುಖವ ನಾನು ಬಯಸುವನಲ್ಲಬೇಕಾದ ಸೌಭಾಗ್ಯವೆನಗಿತ್ತೆ ಎಲ್ಲಾ 2ಮಂದರೋದ್ಧರ ಅರವಿಂದ ಲೋಚನನೇಇಂದಿರೆಯರಸ ಮುಕುಂದ ಮಾಧವನೇವಂದಿಸೂವೆನು ದಂದಶೂಕ ಶಯನನೇಸುಂದರಮೂರ್ತಿ ಗೋವಿಂದದಾಸನನೇ 3
--------------
ಗೋವಿಂದದಾಸ
ನೀನೆಗತಿನೀನೆ ಮತಿ ನೀನೆ ಸ್ವಾಮಿನೀನಲ್ಲದನ್ಯತ್ರ ದೈವಗಳ ನಾನರಿಯೆ ಪನಿನ್ನ ಪಾದಾರವಿಂದದ ಸೇವೆಯನು ಮಾಡಿನಿನ್ನ ಧ್ಯಾನದಲಿರುವ ಹಾಗೆಮಾಡು||ನಿನ್ನ ದಾಸರ ಸಂಗದಿಂದ ದೂರಿಡದೆನಗೆಸನ್ಮಾರ್ಗವಿಡಿಸೊ ಜಗದೀಶ ಅಘನಾಶ 1ಕಮಲನಾಭಿಯೊಳು ಬೊಮ್ಮರ ಪುಟ್ಟಿಸಿದೆ ಹರಿಯೆಕಮಲಸಖಕೋಟಿ ಪ್ರಕಾಶ ಈಶಕಮಲಕರ ತಳದಿ ಅಭಯವನಿತ್ತು ಭಕುತರಿಗೆಕಮಲಾಕ್ಷನೆನಿಸಿದೆಯೊ ಕಮಲಾರಮಣನೆ 2ಶಿಶುಪಾಲ ದಂತವಕ್ತ್ರರ ಶಿರವ ಭೇದಿಸಿದೆಪಶುಪತಿಯ ಆಭರಣ ವೈರಿವಾಹನನೆ ||ಅಸುರಕುಲ ಸಂಹರಿಸಿ ಭಕ್ತಜನರನು ಪೊರೆದೆವಸುಧೇಶಸಿರಿಪುರಂದರವಿಠಲರಾಯಾ3
--------------
ಪುರಂದರದಾಸರು
ನೀನೇಯೆಂದು ಮರೆ ಹೊಕ್ಕೆನೋ ರಂಗ |ದೀನ ಜನರ ಪಾಲಿಪ ದಯಾಸಾಗರ ಪಉತ್ತಮ ದ್ವಿಜರು ಮನೆಗೆ ಬರಲು |ಪ್ರತ್ಯುತ್ಥಾನವ ಕೊಡದಲೆ ಉ ||ನ್ಮತ್ತತನದಿ ಬಹು ಪಾಪವ ಗಳಿಸಿದೆ |ಚಿತ್ತಜಜನಕನೆ ದೋಷನಗ ಕುಲಿಶ 1ಪಾತ್ರರ ಸಂಗಡ ಕ್ಷೇತ್ರಗಳ |ಯಾತ್ರೆ ಚರಿಸದೆ ನಿರರ್ಥಕದಿ ||ಗಾತ್ರವ ಬೆಳಸಿದೆ ರುಕ್ಮಿಣೀವರನೆ ವಿ- |ಧಾತೃ ಕರಾರ್ಚಿತ ಕುಂದನೆಣಿಸದಿರು 2ಸ್ನಾನ ಸಂಧ್ಯಾವಂದನೆ ಬಿಟ್ಟು |ಜ್ಞಾನಿಗಳಾದವರನು ಹಳಿವೆನು ||ಧ್ಯಾನಿಪೆ ಸರ್ವದಾ ಪರರ ಕೇಡನು |ಏನೆಂಧೇಳಲಿ ಯನ್ನಯ ಅವಗುಣ 3ಮರೆತಾದರೂ ಹರಿಯೆಂದೊಮ್ಮೆ |ಸ್ಮರಿಸಿದವರ ದುರ್ಗುಣಗಳನು ||ಪೊರೆವನೆಂಬ ನಿನ ಬಿರುದುಕೇಳಿಪದ |ಸರಸಿಜಕೆರಗಿದೆ ಕರುಣಿಸೋ ಮಾಧವ 4ಪುಸಿಯಲ್ಲವೋ ಇದು ಅಜಾಮಿಳ |ಪೆಸರಾಗಿಹ ಪಾಪಿಷ್ಠರೊಳು ||ವಶ ಮೀರಿ ಸುತನ ಕರೆಯಲಾಕ್ಷಣ |ಪೋಷಿಸಿದೆ ತ್ವರದಿ ಶ್ರೀ ಪ್ರಾಣೇಶ ವಿಠ್ಠಲಾ 5
--------------
ಪ್ರಾಣೇಶದಾಸರು
ನೀನೊಲಿದರೇನಾಹುದು - ಶ್ರೀಹರಿಯೆ - |ಮುನಿಯೆ ನೀನೆಂತಾಹುದು ಪವಾಲಿಬಲ್ಲಿದ ವಾನರರಿಗೆ - ಶ್ರೀಹರಿಯೆನೀ ಮುನಿದು ಎಚ್ಚವನ ಕೊಂದೆ |ಮೇಲೆ ಕಿಷ್ಕಿಂಧೆಯ ಪುರದ ಸುಗ್ರೀವನವಾಲಿಯ ಪದದಲ್ಲಿಟ್ಟೆ 1ಮೂರು ಲೋಕವನಾಳುವ - ರಾವಣನಊರ ಬೂದಿಯ ಮಾಡಿದೆ |ವಾರಿಧಿಯ ಒಳಗಿಪ್ಪ ಲಂಕೆಯ ವಿಭೀಷಣಗೆಸ್ಥಿರಪಟ್ಟವನು ಕಟ್ಟಿದೆ 2ಪನ್ನಗವನುದ್ಧರಿಸಿದೆ - ಕೌರವರ -ಹನ್ನೊಂದಕ್ಷೋಣಿ ಬಲವ |ಛಿನ್ನಛಿದ್ರವ ಮಾಡಿ ಅವರನ್ನು ಮಡುಹಿದೆಪಾಂಡವರ ಪದವಿಯಲಿಟ್ಟೆ 3ಹಿರಣ್ಯಕನು ಸುತನ ಕೊಲಲು - ಆಗ ನೀಕರುಣದಿಂದೋಡಿ ಬಂದೆ |ಮರಣವೈದಿಸಿ ಪಿತನತರಳ ಪ್ರಹ್ಲಾದನನುಶರಣರೊಳು ಸರಿಮಾಡಿದೆ 4ಭಾಷೆ ಪಾಲಿಪನೆನುತಲಿ - ನಾ ಬಹಳಆಸೆ ಮಾಡುತಲಿ ಬಂದೆ |ಶೇಷಗಿರಿವಾಸ ಪುರಂದರವಿಠಲ ದಾರಿದ್ರ್ಯನಾಶಮಾಡೆನ್ನ ಸಲಹೊ 5
--------------
ಪುರಂದರದಾಸರು
ನೆಲೆಸೆನ್ನ ಹೃದಯ ಮಂದಿರದಿ - ಶ್ರೀ ಹರಿಯೆ ನೀ |ಸಲಿಸೆಮ್ಮ ಮನದಿಷ್ಟಅನುದಿನ ದಯದಿಪಸಿರಿಮಿಂಚಿ ಮರುತ್ಯುಪರ್ಣ ಪು - |ರಾರಿವಂದಿತಚರಣಸರಸಿಜ ||ಪರಮಭಕ್ತ ಪ್ರಹ್ಲಾದ ನಾರದ |ವರಪರಾಶರ ಮುಖಸುಸನ್ನುತ ಅ.ಪನಾರುವಿ ಭಾರವ ಪೊರುವಿ - ಬಲು - |ಬೇರುಗಳನೆ ಕಿತ್ತು ಮೇಲುವಿ -ಕರಿ - |ವೈರಿ ರೂಪಗೊಂಡ ಗರುವಿ - ಬ್ರಹ್ಮ - |ಚಾರಿ ಖಳರ ಕತ್ತರಿಸುವಿ |ವೀರದಶರಥಸುತ ಸುರಾರ್ಚಿತ |ಜಾರತನದಲಿ ವ್ರತವ ಕೆಡಿಸುತ |ತೋರಿ ಮೆರೆವನೆತರಳ ಬಲು ಗಂ - |ಭೀರ ಕುದುರೆಯನೇರಿ ಮೆರೆವನೆ 1ಅನಿಮಿಷ ಮಂದರೋದ್ಧರಣ - ನೀನಾ - |ವನಗಪಂಚಾನನವದನ - ವಾ - |ಮನ ದಾನವರ ಕೊಯ್ವಕದನ - ಹೀನ - |ದನುಜರಾವಣ ಸಂಹರಣ ||ಧೇನುಕಾಸುರ ಶಕಟಮರ್ದನ |ಜಾÕನದಾನ ವಿಡಂಬನಾನಕ |ಭಾನುಮಸ್ತಕ ನೀಲವರಕರ |ದೀನಜನಸಂತ್ರಾಣ ನಿಪುಣನೆ 2ಮಚ್ಛಕಚ್ಛಪ ಸ್ವಚ್ಛಕಿರನೆ - ಬಲು - |ಅಚ್ಚ ಶಿಶುಮೊರೆ ಕೇಳಿದವನೆ ||ಸ್ವೇಚ್ಛೆಯವಟು ಪರಶುಕರನೆ - ರಾಮ - |ವತ್ಸಾಸುರನ ವಧಿಸಿದವನೆ ||ತುಚ್ಛ ಜನರಿಗೆ ಕಪಟಕಾರಣ |ಹೆಚ್ಚಿನಶ್ವದ ಮೇಲೆ ಹೊಳೆವನೆ |ಮೆಚ್ಚಿಪುರಂದರ ವಿಠಲನಪರ - |ಮಾಚ್ಯುತದ ಪದವೀವ ದೇವನೆ 3
--------------
ಪುರಂದರದಾಸರು
ನೋಡಬಾರದೆ ಕೃಷ್ಣಾ ಕರುಣದಿನೋಡಬಾರದೆ ಕೃಷ್ಣಹಾಡಿ ಹರಸಿ ನಿನ್ನನೆ ಹೊಗಳುವಪರಿಮಾಡಬಾರದೆ ಹರಿಯೆ ಪ.ಹಾನಿ ಹಿತಗಳನರಿಯೆ ಸುಜ್ಞಾನ ಭಕುತಿಗಳರಿಯೆದೀನ ದೇಶಿಗನುದ್ಧರಿಸೆಲೆ ದೇವಸಾನುರಾಗದಿ ದೇವ 1ಏಸುಜನ್ಮದಿ ಬಂದೆ ನಾಘಾಸಿಯಾದೆನೊ ತಂದೆದಾಸರೊಳು ಆವಕಾಲಭಿಲಾಷೆಯುಳ್ಳ ಶ್ರೀಲೋಲ 2ಏನು ಹೇಳಲಿ ಮನವು ನಿನ್ನಧ್ಯಾನಕೊದಗದು ಕ್ಷಣವುತಾನೆ ಹರಿದಡೆ ಕೇಡು ಅದರಿಂದಪ್ರಾಣನಾಥ ಮುಕುಂದ 3ಕುಂಬಳವು ಕೈಗತ್ತಿ ಕರಾಂಬುಜಕೆ ನಿನಗಿತ್ತೆನಂಬಿದವಗಿನ್ನೇನಾರೆ ಮಾಡಯ್ಯಅಂಬುಜಜ ಸ್ಮರರಯ್ಯ 4ಕಿಂಕರೌಘದೊಳಿಡೊ ನಿಶ್ಶಂಕನೆ ದಯಮಾಡೊಪಂಕಜಾಕ್ಷ ಮುರಾರಿ ಪ್ರಸನ್ನವೆಂಕಟಾದ್ರಿಪಾವನ್ನ5
--------------
ಪ್ರಸನ್ನವೆಂಕಟದಾಸರು
ನೋಡಿದೆ ಮನದಣಿಯೆ ಶ್ರೀನಿವಾಸನನೋಡಿದೆ ಮನದಣಿಯೆ ಪ.ನೋಡಿದೆನು ಶೇಷಾದ್ರಿಯಿಂದೊಡ-ಗೂಡಿ ಭಕ್ತರ ಬೀಡಿನೊಳು ನಲಿದಾಡಿ ಮೆರೆವ ಸಗಾಢ ದೈತ್ಯವಿಭಾಡ ಶ್ರೀಹರಿ ರೂಢಿಗೊಡೆಯನ ಅ.ಪ.ಶರಣರಪೇಕ್ಷೆಯನು ಕೊಟ್ಟುಳುಹಲುಕರುಣಾಳು ನಿಜದಿ ತಾನುಸ್ಥಿರತೆಯೊಳು ಸ್ವಪ್ನದಲಿ ತಾ ಗೋಚರಿಸಿ ಭರವಸೆಯಿತ್ತು ವೆಂಕಟಗಿರಿಯವೋಲ್ ಸಾನ್ನಿಧ್ಯ ವದನಾಂ-ಬುರುಹದಲಿ ಮೆರೆದಿಹನ ಚರಣವ 1ಲಲನೆಲಕ್ಷ್ಮಿಯು ಬಲದಿ ಶೋಭಿಪ ವಾಮದೊಳಗೆ ಗಣಪ ಮುದದಿಒಲವಿನಿಂ ಗರುಡಾಂಕ ಮೃದುಪದನಳಿನದಾಶ್ರಯದಿಂದ ವಾಯುಜಬಳಗ ಚಾತುರ್ದೇವತೆಯರಿಂ-ದೊಳಗೆ ಪೂಜೆಯಗೊಂಬ ದೇವನ 2ಕುಂಡಿಲಕೊಳದೊಳಿಹ ಪ್ರಾಣೇಶ ಮುಂ-ಕೊಂಡು ಪಟ್ಟಣಕೆ ಬಹಕೆಂಡದಂದದೊಳುರಿವ ಶತಮಾ-ರ್ತಾಂಡದೀಪ್ತಾ ಮುಖಂಡ ಭೃತ್ಯನಕೊಂಡುಯಿದಿರಲಿ ಮಂಡಿಸಿದನಖಿಳಾಂಡಕೋಟಿ ಬ್ರಹ್ಮಾಂಡನಾಥನ 3ನೀಲಮೇಘಶ್ಯಾಮಲ ಕೌಸ್ತುಭವನಮಾಲಕಂಧರಶೋಭನನೀಲಮಾಣಿಕವಜ್ರಮುತ್ತಿಸಾಲ ಸರ ಪೂಮಾಲೆಗಳ ಸುಖಲೀಲೆಯಿಂದೊಪ್ಪಿರುವ ಭಕ್ತರಕೇಳಿಯಲಿ ನಲಿದಾಡುತಿಹನನು 4ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ-ಕ್ಷ್ಮೀನಾರಾಯಣ ಹರಿಯಕಾಣಿಕೆಯ ಕಪ್ಪಗಳ ತರಿಸುತಮಾನಿಸುತ ಭಕ್ತಾಭಿಮತವನುತಾನೆ ಪಾಲಿಸಿ ಮೆರೆವ ಕಾರ್ಕಳಶ್ರೀನಿವಾಸ ಮಹಾನುಭಾವನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ