ಒಟ್ಟು 13912 ಕಡೆಗಳಲ್ಲಿ , 138 ದಾಸರು , 7210 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಗಂಗೆಯು ಹರಿಯುತಿರಲು ತೀರದಲ್ಲಿ ನಾ ಬಾವಿಯನು ತೋಡುತಲಿ ಬಲು ಬಳಲಿದೆ ಪ ಗೋವು ಕರೆಯುವ ಕ್ಷೀರ ಕೊಡಕೊಡದಿ ತುಂಬಿರಲು ಬೇವಿನೆಣ್ಣೆಯ ಬಯಸಿ ಬಳಲಿ ಬೆಂದೆ ಅ.ಪ ಅರಸುತನದಲಿ ಆಳುತಿರುವ ಸ್ಥಾನವನು ನಾ ಮರೆತು ಕಡು ಹೇಡಿಯಂದದಿ ನಡೆದೆನೊ ದುರಿತರಾಶಿಗಳನ್ನು ತರಿವ ಮಂತ್ರಗಳರಿತು ಕುರುಬ ಹೊದ್ದಿರುವ ಕಂಬಳಿ ಬಯಸಿದೆ 1 ವೇದಾಂತ ಸಾಮ್ರಾಜ್ಯದಧಿಕಾರದಲಿ ಕುಳಿತು ಕಾದ ಮರುಭೂಮಿ ರಾಜ್ಯವ ಬಯಸಿದೆ ಆದರದಿ ಕರೆದು ಬಡಿಸುವರ ಭೋಜನ ತೊರೆದು ಮೂದಲಿಸುವರನು ಬೇಡಿದೆನನ್ನವ 2 ನೀಗಿ ಪುಣ್ಯವು ನಿನ್ನ ದಯವು ತಪ್ಪಿದ ಮೇಲೆ ಕೈಗೊಂಬೆ ಕರಡಿಯಾಗುವುದು ಕ್ಷಣದಿ ರಾಗಗಳ ಕಳೆದು ಮನವಚನ ಕಾಯಗಳನ್ನು ಬೇಗ ನಿನ್ನಡಿಗಳಿಗೆ ಸೆಳೆಯಲೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ದೇವತಾಸ್ತುತಿ ಅಂಜಿಕೆ ಬರುತಾದವ್ವ ನಿನ್ನನು ನೋಡ ಲಂಜಿಕೆ ಬರುತಾದವ್ವ ಪ ಅಂಜಿಕೆ ಬರುತಿದೆ ಮಂಜುಳಾಂಗಿಯೆ ನಿನ್ನ ಮಂಜುಳ್ವಾಕ್ಯಕೆ ತಪಭಂಗವಾದದ್ದು ಕೇಳಿ ಅ.ಪ ಪತಿಗೆ ನೀ ಮೃತ್ಯುವಾದೆವ್ವ ಮತ್ತು ನೀನು ಸುತರಿಗೆ ಕಷ್ಟಕೊಟ್ಟೆವ್ವ ಸತಿಯಾಗಿ ತಮ್ಮಗೆ ಭಾವನ್ನ ಕೊಲ್ಲಿಸಿದಿ ಮತಿಗೇಡಿ ಅಣ್ಣನ ಸತ್ಯನಾಶನ ಗೈದಿ 1 ಶಾಪಕೊಡಿಸಿದೆವ್ವ ಪತಿಯಿಂದ ಶಾಪವ ಪಡಕೊಂಡೆವ್ವ ಶಾಪಕೊಡಿಸಿ ಮುಖ ಕಪ್ಪು ಮಾಡಿಟ್ಟೆವ್ವ ಬಸಿರು ಮಾಡಿಟ್ಟೆವ್ವ 2 ಪತಿಗೆ ವಂದಕಳಾದೆವ್ವ ಮೀರಿದ ತಾಯಿ ಪತಿ ಪ್ರೀತಿ ಕಳಕೊಂಡೆವ್ವ ಸುತನ ಕತ್ತಿಯಿಂದ ಕುತ್ತಿಗೆ ಕೊಯ್ಸಿಕೊಂಡು ಪತಿತಪಾವನಳಾಗಿ ಮತ್ತೆ ಮುಂದಕೆ ಬಂದಿ 3 ಗರಡಿಯ ಮನೆ ಹೊಕ್ಕೆವ್ವ ಪತಿಯಕೈಲೆ ದುರುಳನ್ನ ವಧಿಸಿದವ್ವ ಧುರಕೆ ನಿಲ್ಲನೆ ಮತ್ತೆ ಕುರುಪನ ಕುಲಮೂಲ ತರಿಸಿದಂಥ ಮಹಮರಗಿ ನೀನವ್ವ 4 ಮಾತ್ಯಾಗಿ ಪಡೆದ್ಹಡದವ್ವ ಮತ್ತು ನೀನು ಸತಿಯಾಗಿ ನಡೆದೆ ಅವ್ವ ರೀತಿ ತಿಳಿಯಿತು ನಿನ್ನದ್ಯಾತರ ಭೀತಿನ್ನು ದಾತ ಶ್ರೀರಾಮನ ಪ್ರೀತಿ ದಾಸರಿಗೆ 5
--------------
ರಾಮದಾಸರು
ದೇವತಾಸ್ತುತಿ ಮತ್ತು ಗುರುಸ್ತುತಿ ಅರಸಿನಂತೆ ಬಂಟನೋ ಹನುಮರಾಯ ಪ ಅರಸಿನಂತೆ ಬಂಟನೆಂಬುದ ನೀನುಕುರುಹು ತೋರಿದೆ ಮೂರು ಲೋಕಕೆ ಹನುಮ ಅ ಒಡೆಯನಂಬುಧಿಯೊಳು ಪೊಕ್ಕು ದೈತ್ಯನ ಕೊಂದುತಡೆಯದೆ ಶ್ರುತಿಯನಜಗಿತ್ತನೆಂದುಸಡಗರದಿಂದ ಶರಧಿಯ ದಾಂಟಿ ಮಹಿಜೆ ಪೆ-ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ 1 ಮಂದರಧರ ಗೋವರ್ಧನ ಗಿರಿಯನು ಲೀಲೆ-ಯಿಂದಲಿ ನಿಂದು ನೆಗಹಿದನೆಂದುಸಿಂಧು ಬಂಧನಕೆ ಸಮಸ್ತ ಪರ್ವತಗಳತಂದು ನಳನ ಕೈಯೊಳಗಿತ್ತೆ ಹನುಮ2 ಸಿರಿಧರ ವರ ಕಾಗಿನೆಲೆಯಾದಿಕೇಶವಸುರರಿಗಮೃತವನು ಎರೆದನೆಂದುವರ ಸಂಜೀವನವ ತಂದು ಸೌಮಿತ್ರಿಗಂದುಎರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ 3
--------------
ಕನಕದಾಸ
ದೇವದೇವತಾಸ್ತುತಿ ಅಜಸುರಸನ್ನುತ ಸುಜನವಂದಿತ ಹರೇ ಭುಜಗ ಭೂಷಣ ಪ್ರಿಯ ಪ ಅತಿಶಯ ಕಾಮದಿ ಸತಿಯನಪಹರಿಸಿದ ಪತಿತ ರಾವಣನನು ಖತಿಯಲಿ ಕೊಂದೆ ನೀಂ 1 ಪರಿ ಪರಿಸಲು ವಾಲಿಯ ತರಿದೆಯೊ ಶರದಿಂದ 2 ದಶರಥನುದರದಿ ದಶರಥನಾಗಿಯು ಪಶುಪತಿ ಮಿತ್ರನೆ ಜನಿಸಿದೆ ಕರುಣದಿ 3 ಮಾನವ ಜಿತಾಸುರ ಮಾನವ ರೂಪನೆ ಪೊರೆ 4 ಧೇನುನಗರಪತಿ ದಾನವಖಂಡನ ಧ್ಯಾನ ಸ್ವರೂಪನೆ ಜ್ಞಾನವ ಪಾಲಿಸು 5
--------------
ಬೇಟೆರಾಯ ದೀಕ್ಷಿತರು
ದೇವದೇವತೆಗಳ ಸ್ತುತಿ ಅಂಬುಧಿಶಯನ ಪೀತಾಂಬರಧರ ಕಮಳಾಂಬಕ ಸಿರಿರಮಣ ನಂಬಿದ ಭಕ್ತರ ಬೆಂಬಿಡದಿಹನೆಂಬುದಕೆ ಸಹಜಗುಣ ಪ ಒರಲುತ್ತಾ ಸಭೆಗೆ ಬರಲು ಒತ್ತಿ ಮುದ್ದಿಸುತಿರಲು ಪೊರೆದೆಯೋ ಧ್ರುವನ1 ಹರಿನಾಮವನು ಬರೆಯೆ ವಿರಚಿಸೆ ಕೇಳದಿರೆ ದುರುಳಬಾಧಿಸೆ ಮಗನ ಮೂರ್ತಿ ವರವಿತ್ತು ಪೊರೆದೆಯೋ ಪ್ರಹ್ಲಾದನ 2 ಶಾಪವನೀಯ ಲಗಸ್ತ್ಯನಿಂದ್ರದ್ಯುಮ್ನ ಭೂಪತಿ ಗಜವಾಗಲು ಕೋಪದಿ ನೆಗಲ್ವಿಡಿಯೊ ಗುಪಿತದಿ ಮೊರೆಯಿಡಲು ಸೀಳ್ದು ಪೊರೆದೆಯೋ ಗಜವ 3 ಮರ್ಮವನರಿತು ಬರಲು ಅನ್ನವನೀಯೆನಲು ಪೊರೆದೆಯೋ ಪಾಂಡುವರ 4 ಹರಿವಾಸವರವ ಮಾಡಲು ನರಿಯೆ ಬಂದು ವರವಿತ್ತು ಪೊರೆದೆಯೋ ವೇಣುಗೋಪಾಲ 5
--------------
ಕವಿ ಪರಮದೇವದಾಸರು
ದೇವದೇವತೆಗಳ ಸ್ತುತಿ ವೀರನ ನೋಡಿರೈ ನರಮೃಗಾಕಾರನ ಪಾಡಿರೈ ಪ ಕಾರ್ಪರ ಋಷಿ ತಪಕೊಲಿದು ಅಶ್ವತ್ಥದಿ ಮೆರೆವಾ ಭಕುತರ ಪೊರೆವಾ ಅ.ಪ ದುರಿತ ತಿಮಿರಕೆ ಸವಿತ ವ್ರಾತ ಸೇವಿತ ತ್ವರಿತ ಮಧ್ಬಂಧು ಪೊರೆಯೊನೀನೆಂದು ಪ್ರಾರ್ಥಿಸುವರಿಗಭೀಷ್ಟಿಯಗರಿಯಲು ದೇವ ತರುಸ್ವಭಾವ 1 ಉಗ್ರನಾದರು ಭಕುತಾಗ್ರಣಿಗಳಿಗೆ ಅನುಗ್ರ ಒಲಿವನು ಶೀಘ್ರ ವಾಗ್ಧೇವಿಯರ ಸನಾಜ್ಞದಿ ನಮಿಸಿ ಪ್ರಹ್ಲಾದ ಸ್ತುತಿಸಲು ಒಲಿದ ಉಗ್ರವದನ ಶಾಲಿಗ್ರಾಮಗಳ ರೂಪದಲಿ ವೃ- ಭಾರ್ಗವಿ ಪ್ರಕಟನಾಗಿಹನ 2 ತೋರಿಸುವದಕೆ ಅಸುರನ ಮಥಿಸಿ ನೆಲಸಿಕರುಣದಿ ದಿವಿಜರೊಡೆಯನ3 ಪೋಪುದು ವೃಜಿನ ತಿಳಿವದು ಮುನ್ನ ಭಾನು ಕರ್ಕಾಟಸ್ಥಾನದಿ ಬರುವ ಕಾಲದಲಿ ತೀರ್ಥಗಳಲ್ಲಿ ಹೃದಯದಿ ಪೊಳಿವ 4 ತರುವರ ಸಂಸ್ಥಾ ಚರಿತ ತ್ರಿಗುಣಾತೀತ ಪದಯುಗಲ ಬಿಡದನುಗಾಲ ಸಾರಿ ಭಜಿಪರಿಗಪಾರ ಸೌಖ್ಯಗಳ ಗರಿವ ವಿಘ್ನವ ತರಿವ5
--------------
ಕಾರ್ಪರ ನರಹರಿದಾಸರು
ದೇವದೇವನಾ ಭಜಿಸು ಜಾನಕಿ ಪ್ರೇಮನಾ ಬಿಡದೆ ಇನ್ನು ಪ ಇಂದಿರೇಶನಾ ಸಕಲ ವಿಶ್ವನಾಥನಾ ಸುಂದರ ರೂಪನ ಸುಗುಣ ಸುಜನವಂದ್ಯನಾ ಸಿಂಧು ಶಯನನಾ ಚೆಲುವ ಶ್ರೀನಿವಾಸನಾ ಮಂದರಾದ್ರಿಯನೆ ಪೊತ್ತ ಮಹಿಮಾನಂದನ 1 ವಾರಿಜನಾಬನಾ ಘನ ವಾಸುಕಿಶಯನನಾ ನೀರಜ ನಯನನಾ ಕೃಷ್ಣಾ ನಿಗಮಗೋಚರನಾ ನವನೀತ ಚೋರನಾ ಪಾರಮಾರ್ಥಿಕ ಜ್ಞಾನದಲ್ಲಿ ಪ್ರಬಲವಾಗಿ ಮನವು ನಿಲ್ಲಿಸಿ2 ಪನ್ನಗ ಭೂಷಣನಾದ ಪಾರ್ವತೀಶನಾ ಮನ್ನಿಸಿ ಪೊರೆದನ ಮಹಾಮಹಿಮೆಯುಳ್ಳನಾ ಚಿನ್ಮಯ ರೂಪನಾ ಪರಮ ಚಿದ್ವಿಲಾಸನಾ ಹೆನ್ನ ತೀರನಿಲಯ ಸುಪ್ರಸನ್ನ 'ಹೆನ್ನ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ದೇವದೇವನೆ ಓವುದೆಮ್ಮನು ಶ್ರೀವಧೂವರನೇ ಸಾವಧಾನದಿ ಭಾವಿಸೈ ವಸುದೇವ ಕುವರನೇ ಪ. ನೀಲಮೇಘಶ್ಯಾಮ ರಮಾಲೋಲ ಪಾಲಿಸೈ ಬಾಲಗೋಕುಲಬಾಲ ಶ್ರೀ ವನಮಾಲ ಪಾಲಿಸೈ 1 ಭೋಗಿಶಯನ ಯೋಗಗಮ್ಯ ಸಾಗರಸ್ಥಿತ ಬಾಗಿ ನಮಿಪೆವು ರಾಗದಿಂ ಪೊರೆ ವಾಗಗೋಚರ 2 ಘಳಿಲನೈತಹುದಿಳೆಯ ರಮಣ ತಳುವ ಬೇಡುವೈ ಎಳೆಯರಾವು ಚಲವನರಿಯೆವು ಒಲವನೆರೆವೆವೈ3 ದೇಶದೇಳ್ಗೆಯೊಳಾಸೆಯಿಂದಿಹ ದಾಸರೆಂದು ನೀಂ ಲೇಸ ಪಾಲಿಸು ಆಶೆ ಸಲ್ಲಿಸು ಶೇಷಗಿರೀಶನೇ4
--------------
ನಂಜನಗೂಡು ತಿರುಮಲಾಂಬಾ
ದೇವನಹುದೊ ದೇವಾಧಿದೇವ ಕಾವಕರುಣ ಶ್ರೀ ವಾಸುದೇವ ಭಾವಿಕರಿಗೆ ಜೀವಕೆ ಜೀವ ಧ್ರುವ ಸಾಮಜಪ್ರಿಯ ಸುರಲೋಕಪಾಲ ಕಾಮಪೂರಿತ ನೀ ಸಿರಿಸಖಲೋಲ ಸಾಮಗಾಯನಪ್ರಿಯ ಸದೋದಿತ ಸ್ವಾಮಿನಹುದೊ ನೀನೆವೆ ಗೋಪಾಲ 1 ಅಕ್ಷಯ ಪದ ಅವಿನಾಶ ಪೂರ್ಣ ಪಕ್ಷಿವಾಹನ ಉರಗಶಯನ ಪಕ್ಷಪಾಂಡವಹುದೊ ಪರಿಪೂರ್ಣ ಲಕ್ಷುಮಿಗೆ ನೀ ಜೀವನಪ್ರಾಣ 2 ದಾತನಹುದೊ ದೀನದಯಾಳ ಶಕ್ತಸಮರ್ಥ ನೀನೆ ಕೃಪಾಲ ಭಕ್ತವತ್ಸಲನಹುದೊ ಮಹಿಪತಿ ಸ್ವಾಮಿ ಪತಿತಪಾವನ ನೀನವೆ ಅಚಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವರ ದಿವ್ಯಗುಣಗಳ ಪೊಗಳುವದು ಜೀವರಿಗಿದುವೆ ಪ್ರಯೋಜನವು ಪ ಭಾವದಿ ತೋರುವ ವಿಷಯಗಳೆಲ್ಲವು ಭಕ್ತಿಯೊಳರಿತು ಸಮರ್ಪಿಸುತಂ ಅ.ಪ ನಡೆವದು ನುಡಿವದು ಕೊಡುವದು ಬಿಡುವದು ಒಡೆಯ ಹರಿಯ ಪ್ರೇರಣೆಯೆಂದು ದೃಢಮನದಲಿ ತಿಳಿದಾವಾಗಲು ತಾ ಮೃಢ ಸಖನಡಿ ಧ್ಯಾನಕೆ ತಂದು 1 ಅರಿಯದೆ ಪಾಮರರೊರಲುವ ಬೋಧೆಯ ತರತರದಿ ತಿರಸ್ಕರಿಸುತಲೀ ಭವ ಭಯಗಳನೀಡಾಡುತಲಿ 2 ಜನನ ಮರಣ ದೂರ ಪರಾತ್ಪರ ಪಾ- ವನ ಚರಿತ್ರ ಭಾಸುರ ಗಾತ್ರಾ ವನಜನಯನ ಗುರುರಾಮವಿಠಲ ಎಂ- ದನುದಿನ ಭಜಿಸುವನೆ ಪವಿತ್ರ 3
--------------
ಗುರುರಾಮವಿಠಲ
ದೇವರ ದೇವ ದಯಾಳು ಭಕ್ತ ಸಂಜೀವನೆ ಪರಮದಯಾಳು ವಂದಿತ ಇಂದಿರಾರಮಣ ಪ ಸಜಲ ಜಲದ ನಿಭಾಕಾಂತಿಯ ಮಿಗಿಸಿದೆ ನಿನ್ನ ಸರ್ವಾಂಗ ಭಜಿಸುವ ಭಕುತರಹೃದಯನಿವಾಸ 1 ಆಲಿಯೊಳಗೆ ನೋಡಿ ಭಕ್ತರ ಮೇಲೆ ಕೃಪೆಯಮಾಡಿ ತುಳಸಿವನಮಾಲ ಶ್ರೀ ಲೋಲ 2 ಸರಸಿಜಗದೆ ಶಂಖಾರಿ ಕರದೊಳು ಮೆರೆವ ಪೀತಾಂಬರಧಾರಿ ಮಣಿಮುಕುಟ ಕುಂಡಲನೆ 3 ಗೋಕುಲದೊಳಾಡುವನೇ 4 ತುರು ಬಲಿರುಗು ಕಹಳೆಕೊಂಬುಗಳ ಹೊನ್ನೇ ಸರಹಿನೊಳಗೆ ನಿಂದ ವೇಣುಗೋಪಾಲ ಕೃಷ್ಣ 5
--------------
ಕವಿ ಪರಮದೇವದಾಸರು
ದೇವರ ಪೂಜೆಯ ಮಾಡಿರೋ ಮಾಡಿ ಬಿಟ್ಟರು ಬಿಡಿ ಭೂದೇವರ ಪೂಜೆ ಮಿಗಿಲು ಬಿಡಬೇಡ ಪ ಉಂಬೋ ದೇವರ ನೋಡಿ ಕರೆತಂದೊಯ್ಯನೆ ಶಂಭು ಶ್ರೀಹರಿ ಎಂದು ಮನತಂದು ಕರು ಪಾದ ತೊಳೆದು1 ಮಾತನಾಡುವ ದೇವನಿವನೆಂದು ಸಂಪ್ರೀತಿಯಿಂದಲೆ ಈತ ಶಿವನೆಂದು ಜಾತಿ ಶ್ರೀ ಗಂಧ ಪುಷ್ಪವ ತಂದುಮನ ವೊತು ಪೂಜೆಯನು ಮಾಡಿರೋ ಎಂದು 2 ಎಡೆಮಾಡಿ ಷಡುರಸಾನ್ನವ ನಂದು ಉಣ ಬಡಿಸೆ ನಾರಿಯರಟ್ಟುದನುತಂದು ಕಡುಬು ಕಜ್ಜಾಯ ಘೃತವನಂದು ಜಗ ದೊಡೆಯ ನುಂಡನು ಸಾಕು ಬೇಕೆಂದು 3 ಹಸ್ತವ ತೊಳೆದ ಮೇಲ್ವೀಳ್ಯವ ಕೊಟ್ಟು ಮತ್ತೇನಾ ಪೋಪೆನೆಂದರೆ ಪೊಡಮಟ್ಟು ಚಿತ್ತೈಸಿ ಮರಳಿಬರಬೇಕು ದಯವಿಟ್ಟು ಎಂದು 4 ಪ್ರತಿಮೆಗಿಕ್ಕಿದರಲ್ಲೆ ಇಹುದು ಮತ್ತೆ ಕ್ಷತಿಗೆ ಹಾಕಲುಬೇಕು ಬೇಡೆನ್ನಾದಿಹುದು ಅತಿಥಿಗಿಕ್ಕಲು ಸಾಕು ಬೇಕೆನ್ನುತಿಹನು ಲಕ್ಷ್ಮೀ ಪತಿಗಿದು ಪೂಜೆ ಸಂಪೂರ್ಣವಾಗಿ 5
--------------
ಕವಿ ಪರಮದೇವದಾಸರು
ದೇವಾ ದೇವಾ ಸಾರಂಗ ಪಾಣಿ ದೇವಾ ದೇವಾ ಸಾರಂಗ ಪಾಣೀ ಪ ದೇವ ದೇವ ಘನ ಶ್ರೀ ವಧುವಲ್ಲಭ ಸಾವಿರ ನಾಮದ ಪಾವನ ರೂಪಾ 1 ಭುವನವ ಪಿಡಿದೊಯ್ದನುಜನ ಹರಿ ಪವನಜ ಪ್ರೀಯಾ2 ಕುಂಜರ ಧ್ವಜಜನ ರಂಜಿಪ ಕದಲಿಗೆ ಅಂಜಿಕೆ ಹಾರಿಪ ಕುಂಜದ ಕರನೇ 3 ಸುಮನದಿ ಧರೆಯೊಳು ನಮನ ಕೃತಕ ಭಯ ಗಮನ ಸುರೇಶಾ4 ವಿಧಿ ತ್ರಿಪುರ ವಿನುತ ಪದ ಮಿಥುನದಯಾಳಾ5 ಹರಿಯೆಂದೊದರಲು ಸರಿಯಾದಿಗಳಿಗೆ ಅರಿಯ ದಂದದಿ ಬಂದು ಕರಿಯನು ಕಾಯ್ದೆ6 ನಂದನ ನಂದನ ಮಂದರಗಿರಿಧರಾ ನಂದನೆ ಮಹಿಪತಿ ನಂದನ ಪ್ರೀಯಾ||7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವಾ ನಿನ್ನ ಚರಣವನ್ನು ಮರೆಯಲಾರೆನು ಮರೆಯದಂತೆ ಕರುಣದಿ ಎನ್ನಾ ಸ್ಮರಣೆಯೊಳಿಡು ನೀನು ಪ ಪಂಕಜಾಂಬಕಿ ಲಕ್ಞ್ಮೀರಮಣಾ ರಂಗರಕ್ಷಕಾ ಶಂಕಾನಾಶ ಸರ್ವಾಧಾರ ಶಂಕರಸಖಾ ಶಂಖ ಚಕ್ರಗಳ ಕರದೊಳ್ ಪಿಡಿದ ಪಂಕಜನೇತ್ರನೇ 1 ತನ್ನವರಿಂತೆಂದೆನಿಸಿ ಕೊಂಡು ಅನ್ಯರ ಭಜಿಪುದು ಬನ್ನ ಬಡುವುದು ಮುನ್ನ ಎನ್ನನು ಪೊರೆವರ್ಯಾರೊ ಪನ್ನಗಶಯನನೇ 2 ಅಂತು ಇಂತೆನಲೊಲ್ಲೆ ದೇವಾ ಅನಂತ ಮಹಿಮೆಯಾ ಸಂತಸಾಧು ಸಾಧ್ಯನಾಗಿಹ ಅಂತರಾತ್ಮನಾ ಚಿಂತೆ ಭ್ರಾಂತಿಗಳ ತೊರೆದು ಗುರುವರ ಶಾಂತಿ ಪಾಲಿಪನೇ 3
--------------
ಶಾಂತಿಬಾಯಿ
ದೇವಾ ನಿನ್ನ ಪಾದವನ್ನು ಯಾವಾಗಲೂ ಸ್ಮರಿಸುವೆನೂ ಭಾವ ಭಕ್ತಿ ಪ್ರೇಮವಿತ್ತು ಕಾವುವೆನ್ನ ಹರಿಯೇ ನೀನು ಪ ದೀನನಾಥನೆಂಬ ಬಿರುದಾ ಮಾನಭಕ್ತರಿಂದ ಪೊರೆದಾ ಹೀನ ದೀನನಾದ ಎನ್ನಾ ಜ್ಞಾನವಿತ್ತು ರಕ್ಷಿಪುದು 1 ಇಂದಿರೇಶ ನಾರಾಯಣಾ ಬೃದದಿಂದಾ ಭಜಿಪೆ ನಿನ್ನಾ ಮಂದಮತಿಯ ಕಳೆದು ನಿಜಾನಂದದೊಳಗಿರಿಸೊ ಯನ್ನಾ 2 ಬೇಡಿಕೊಂಬೆನೀಗ ನಿನ್ನಾ ನೋಡುವುದು ಕೃಪೆಯೊಳೆನ್ನಾ] ಬಿಡಬ್ಯಾಡಾ ಬ್ಯಾರೆನಗೆ ಇಡೊ ಇಡೊ ನಿನ್ನೊಳೆನ್ನಾ 3 ಚಿಂತೆಗಳನ್ನೆಲ್ಲಾ ತೊರಿಸೊ ಸಂತ ಸಂಗದೊಳಿರಿಸೊ ಕಂತುಪಿತನೆ ಗುರುವೆ ಎನ್ನಾ ಶಾಂತಿ ಪದವ ಪಾಲಿಸೊ 4
--------------
ಶಾಂತಿಬಾಯಿ