ಒಟ್ಟು 3655 ಕಡೆಗಳಲ್ಲಿ , 119 ದಾಸರು , 2543 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗನಹುದೋ ನೀನು ಕನಕಾಚಲರಂಗನಹುದೋ ನೀನುತುಂಗಮಹಿಮ ಕೃ-ಪಾಂಗ ಚೆಲುವ ಮುದ್ದು ರಂಗಲಕ್ಷ್ಮಿಯ ರಮ-ಣಾಂಗ ಜಪಿತಮೂರ್ತಿಪದುರುಳರಕ್ಕಸನು ವೇದ ಕದ್ದೊಯ್ಯೆಮೀನಾಗಿ ತಂದೆಯದನ ಕೂರ್ಮನಾಗಿಗಿರಿಯ ಪೊತ್ತು ಎರೆದೆ ಸುರರಿಗೆ ಅಮೃತವವರಾಹನಾಗಿ ಧರೆಯ ಕದ್ದವನಶಿರವ ಖಂಡಿಸಿ ನೃಕೇಸರಿಯಾಗಿಯೆಕಂಬವನೊಡೆದು ನಿಶಾಚರನ ಸಂಹ-ರಿಸಿದೆ ರಣಧೀರಮಾಧವ1ಪುಟ್ಟ ಮಾನವನಾಗಿ ಬಲಿಯ ದಾನವ ಬೇಡಿಅಷ್ಟು ಬ್ರಹ್ಮಾಂಡವನೆಲ್ಲಈರಡಿಮಾಡಿತುಟ್ಟ ತುದಿಗೆ ಅವನ ಶಿರದ ಮೇ-ಲಿಟ್ಟು ದ್ವಾರವ ಕಾಯ್ದನಾ ಭೂಸುರರಿಗೆಕೊಟ್ಟ ಮೇದಿನಿಯ ದಾನವ ಭಳಿರೆ ಜಗಜಟ್ಟಿ ಪರಶುರಾಮ ಕ್ಷತ್ರಿಯ ಛೇದನ2ದಶರಥನ ಸುತನಾಗಿ ವಸುಧಜೆಯ ಕಳೆದುಅಸಮ ಕಪಿವೀರರ ನೆರಪಿ ಸೇತುವೆಕಟ್ಟಿಅಸದಳ ರಾಕ್ಷಸರ ಇಂದ್ರಜಿತುದಶಶಿರಅತಿಕಾಯರ ಕುಂಭಕರ್ಣಅಸಹಾಯ ರಣಶೂರರ ಛೇದಿಸಿ ಸೀತಾಶಶಿಮುಖಿಯ ಕರೆತಂದ ರಘುರಾಮಕಂಠೀರವ3ದೇವಕೀಸುತನಾಗಿ ಬಾಣನ ಭಂಗಿಸಿಮಾವ ಕಂಸನ ಶಿಶುಪಾಲ ನರಕಾಸುರ ಕೌ-ರವ ವೀರರನು ಕೊಂದು ಪಾಂಡುರಾಜನ ಪುತ್ರ-ರನು ಪಾಲಿಸಿ ಪೃಥವಿ ಪಾವನರಾದರನು ರಕ್ಷಿಸಿ ಬೌ-ದ್ಧಾವತಾರ ತಾನಾಗಿ ವ್ರತ ಭಂಗಿಸಿದೆ ನೀನು4ತೇಜಿಯನೇರಿ ನೇಣನೆ ಹಿಡಿದು ಪಾಪದಬೀಜವನುರುಪಿ ಪುಣ್ಯದ ಬಿತ್ತನುರುಹಿಯೆಸೋಜಿಗಸಹಸ್ರರ ಕನಕಗಿರಿಮೂಜಗದೊಳು ವಿಸ್ತಾರವಾಗಿಹಘನತೇಜೋ ಮೂರುತಿ ಗಂಭೀರ ಸಿದ್ಧ ಪರ್ವತರಾಜ ಸದ್ಗುರು ಚಿದಾನಂದಾವಧೂತ5
--------------
ಚಿದಾನಂದ ಅವಧೂತರು
ರಂಗನೊಲಿದ ನಮ್ಮ ಕೃಷ್ಣನೊಲಿದ |ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತುಪಕರಿಯಪುರದ ನಗರದಲ್ಲಿ ಕೌರವರು ಪಾಂಡವರು |ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |ಮಾಗಿಯ ಕೋಗಿಲೆಯಂತೆಕಾಯ ಒಲೆಯುತ ||ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |ಕ್ರೂರ ಕೌರವ ದುಃಶಾಸನ ಗುರುಹಿರಿಯರು ||ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |ಮುಂದರಿಯದೆ ಮುಗುಳುನಗೆಯ ಮಾತನಾಡಿದ ||ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು7ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |ಹಲ್ಲುಕೀಳುವರೈವರು ಬೇಡವೆಂದಳು 8ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |ರಟ್ಟೆಕೀಳುವರೈವರು ಬೇಡವೆಂದಳು 9ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |ತೊಡೆಯ ಮೇಲೆ ಒಪ್ಪುವದು ಬೇಡವೆಂದಳು 10ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |ಚುಚ್ಚಿ ಹಾಕುವರೈವರು ಬೇಡವೆಂದಳು 11ಎಷ್ಟುಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||ಉಟ್ಟ ಸೀರೆ ಸೆಳೆಯಿರಿವಳಉಬ್ಬು ಕೊಬ್ಬು ತಗ್ಗಲೆಂದು |ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ 12ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು 13ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು 15ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |ಹೆಚ್ಚಿನ ವಾಮನನೆ ಕಾಯೊಭಾರ್ಗವ ಕಾಯೊ ||ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು16ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು 17ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯಕೇಳಿ |ಅಂದು ಉಟ್ಟ ವಸ್ತ್ರಗಳುಅಕ್ಷಯ ವೆಂದನು||ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |ನೊಂದು ಬೆಂದು ದುಃಶಾಸನು ನಾಚಿಕುಳಿತನು 18ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |ಮಾಡಿದರು ಮಾಧವನ ಮುದ್ದು ಸ್ತೋತ್ರವ ||ಮೂಢ ಕೌರವನ ಕೂಡಮಾನಿನಿ ದ್ರೌಪದಿಯು ಪಂಥ - |ವಾಡಿ ತನ್ನ ಪತಿಗಳೈವರನ್ನು ಗೆಲಿದಳು19ಕೇಶಮುಡಿಗಳನ್ನಕಟ್ಟಿ ಕ್ಯೆಯಕಾಲಮಣ್ಣನೊರಸಿ |ಸಾಸಿರನಾಮದ ಕೃಷ್ಣನು ಸುರರ ಪಾಲಿಪ |ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು 20ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |ಕಂತು ಜನಕ ನಮ್ಮ ಪುರಂದರವಿಠಲನು21
--------------
ಪುರಂದರದಾಸರು
ರಂಗಾ ಬಾರೋ ಪಾಂಡುರಂಗ ಬಾರೋ ಶ್ರೀರಂಗಾ ಬಾರೋ ನರಸಿಂಗ ಬಾರೋ ಪಕಂದ ಬಾರೋ ಎನ್ನ ತಂದೆ ಬಾರೋಇಂದಿರಾ ರಮಣ ಮುಕುಂದ ಬಾರೋ 1ಅಪ್ಪ ಬಾರೋತಿಮ್ಮಪ್ಪಬಾರೋ ಕಂದರ್ಪನೈಯನೇ ಕಂಚಿವರದ ಬಾರೋ 2ವಿಷ್ಟು ಬಾರೋಉಡುಪಿಕೃಷ್ಣ ಬಾರೋ ಎನ್ನಿಷ್ಟ ಮೂರುತಿಪುರಂದರವಿಠಲ ಬಾರೋ3
--------------
ಪುರಂದರದಾಸರು
ರಾಗಿ ತಂದಿರಾ - ಭಿಕ್ಷಕೆ -ರಾಗಿ ತಂದಿರಾ ಪ.ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ಅಪಅನ್ನದಾನವ ಮಾಡುವರಾಗಿ |ಅನ್ನಛತ್ರವನಿಟ್ಟವ ರಾಗಿ ||ಅನ್ಯವಾರ್ತೆಗಳ ಬಿಟ್ಟವರಾಗಿ |ಅನುದಿನಭಜನೆಯ ಮಾಡುವರಾಗಿ..........1ಮಾತಾಪಿತರನು ಸೇವಿಪರಾಗಿ |ಪಾತಕಕಾರ್ಯವ ಬಿಟ್ಟವರಾಗಿ |ಖ್ಯಾತಿಯಲ್ಲಿ ಮಿಗಿಲಾದವರಾಗಿ |ನೀತಿಮಾರ್ಗದಲಿ ಖ್ಯಾತರಾಗಿ 2ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪರಮಪುಣ್ಯವನು ಮಾಡುವರಾಗಿ3ವೇದ ಪುರಾಣವ ತಿಳಿದವರಾಗಿ |ಮೇದಿನಿಯಾಳುವಂಥವರಾಗಿ ||ಸಾಧು ಧರ್ಮವಾಚರಿಸುವರಾಗಿ |ಓದಿ ಗ್ರಂಥಗಳ ಪಂಡಿತರಾಗಿ 4ಆರರ ಮಾರ್ಗವ ಅರಿತವರಾಗಿ |ಮೂರರ ಮಾರ್ಗವ ತಿಳಿದವರಾಗಿ ||ಭೂರಿತತ್ವವನು ಬೆರೆತವರಾಗಿ |ಕ್ರೂರರ ಸಂಗವ ಬಿಟ್ಟವರಾಗಿ 5ಕಾಮಕ್ರೋಧಗಳನಳಿದವರಾಗಿ |ನೇಮನಿಷ್ಠೆಗಳ ಮಾಡುವರಾಗಿ ||ಆ ಮಹಾಪದದಲಿ ಸುಖಿಸುವರಾಗಿ |ಪ್ರೇಮದಿ ಕುಣಿಕುಣಿದಾಡುವರಾಗಿ 6ಸಿರಿರಮಣನ ಸದಾ ಸ್ಮರಿಸುವರಾಗಿ |ಕುರುಹಿಗೆ ಬಾಗುವಂತವರಾಗಿ ||ಕರೆಕರೆಸಂಸಾರ ನೀಗುವರಾಗಿ |ಪುರಂದರವಿಠಲನ ಸೇವಿಪರಾಗಿ 7
--------------
ಪುರಂದರದಾಸರು
ರಾಜ ರಾಜ ಮಹಾರಾಜ ಶ್ರೀಧವಾಗೋವಿಂದರಾಜ ಅಚರಾಚರ ಸಬೀಜಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಆದಿಯುಗದಿಮತ್ಸ್ಯಕೂರ್ಮ- |ನಾದಿವರಾಹನರಸಿಂಹ- |ನಾದಿಹಿರಣ್ಯಕಶ್ಯಪನ |ಛೇದ ಮಾಡಿ ರಕ್ತ ಕುಡಿದಿ1ದ್ವಿತೀಯಯುಗದಿ ವಾಮನದ್ವಿತೀಯಉದರದಲಿ ಬಂದು | ಮಥಿಸಿ ಬಲಿಯ ಕ್ರೋಧದಿಂದ |ಸುತಳಕ್ಕೊತ್ತಿ ಬಿಟ್ಟೆಯಾ2ಪರಶುರಾಮ ರೇಣುಕಿಯ |ವರಸುಪುತ್ರನಾಗಿಜನಿಸಿ | ವೀರಸದಿಂದ ಕ್ಷತ್ರಿ (ಯರ)ನಿರಸ ಮಾಡಿ ಬಿಟ್ಟಿ3ರಾಮಚಂದ್ರ ದಾಶರಥಿಯ |ಶ್ಯಾಮನೀಲಮೇಘವರ್ಣ |ಸ್ತೋಮರಾವಣನ ಉದ್ದಾಮನವರ ವಂಶ ತರಿದಿ4ದ್ವಿತೀಯದ್ವಾಪರದಲ್ಲಿ | ಮಥಿಸಿ ಕಂಸ ಪೂತನೆಯ |ಕಾತರ ಮಾಡಿ ಕೌರವನು |ಪಥಕೆ ಹೊಂದಿಸಿ ಬಿಟ್ಟ ಕೃಷ್ಣ5ಕಲಿಯುಗ ಬರಲು ಬೌದ್ಧನಾಗಿ |ಛಲ ದ್ವೇಷಖಲಜನರ ಕಲಹ ಹೆಚ್ಚಲಾಗುತಿರೆ |ಕಲ್ಕಿ ಹಯಗ್ರೀವನಾದಾ6ಮೂರು ತಾಪದಿಂದ ಬೆಂದ |ಘೋರದುರಿತಭವದಮೂಲ ಬೇರ ಕಿತ್ತಿ ಬಿಸುಟಿದ ಶ್ರೀಶಪಾಲ ಶಂಕರೇಶ7
--------------
ಜಕ್ಕಪ್ಪಯ್ಯನವರು
ರಾಮನ ಮಹಿಮೆ ರಾಮನೆ ಬಲ್ಲಪಾಮರಜನಲುಕು ತೆಲಿಯುಟತಲ್ಲ ಪಸುಗುಣ ನಿರ್ಗುಣವೆಂದು ನಿಗಮಗಳ್ಕೂಗುಅಗಣಿತಕಲ್ಯಾಣಗುಣಮುಲುಬಾಗು1ನಿರತಜನನಸ್ಥಿತಿ ಲಯಗಳಕರ್ತಸಿರಯುರಮುನಗಲ ಧರಣಿಜ ಭರ್ತ 2ಒಳಗೆ ಹೊರಗೆ ವ್ಯಾಪೀ ಪರಿಪೂರ್ಣಮೂರ್ತಿಸುರಮುನಿವರುಲಕು ಧೋರಯನು ಕೀರ್ತಿ 3ಮೂರುನು ಬಿಡಿಸಿ ಮೂರನು ಕೆಡಿಸಿಜೇರುನುನಮ್ಮಿ ಸವಾರಿನಿಕಲಸಿ 4ಸಿರಿಗಿರಿ ಶಿಖರದೊಳ್ ಇರುತಿಹದೇವಧರನು ತುಲಸಿರಾಮದಾಸುನಿ ಬ್ರೋವಾ 5
--------------
ತುಳಸೀರಾಮದಾಸರು
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ |ನಾಮವಿಠಲ ತುಪ್ಪ ಬೆರೆಸಿ ಬಾಯಿ ಚಪ್ಪರಿಸಿರೊ ಪಒಮ್ಮನ ಗೊದಿಯ ತಂದು | ವೈರಾಗ್ಯ ಕಲ್ಲಲಿ ಬೀಸಿ |ಸುಮ್ಮನ ಸಜ್ಜಿಗೆ ತೆಗೆದು | ಸಣ್ಣ ಸೇವಗೆ ಹೊಸೆದು 1ಹೃದಯವೆಂಬ ಪಾತ್ರೆಯೊಳಗೆ | ಮನವೆಂಬ ಎಸರನಿಟ್ಟು |ಬುದ್ದಿಯಿಂದ ಪಾಕ ಮಾಡಿ |ಹರಿವಾಣತುಂಬಿರೋ 2ಆನಂದ ಆನಂದವೆಂಬ ತೇಗು ಬಂದ ಪರಿಯಲಿ |ಆನಂದ ಮೂರುತಿ ನಮ್ಮ ಪುರಂದರವಿಠಲ 3
--------------
ಪುರಂದರದಾಸರು
ರಾಮಸ್ಮರಣೆಯಿಂದ ಸಕಲ ಪಾಪಹರ ರಾಮ ರಾಮ ಎನ್ನಿರೊವ್ಯೊಮಕೇಶನ ದಿವ್ಯತಾರಕ ಮಂತ್ರವು ಪ.ಶತಕೋಟಿ ರಾಮಾಯಣದ ಬೀಜಾಕ್ಷರ ರಾಮ ರಾಮ ಎನ್ನಿರೊಕ್ಷಿತಿಜೆಯ ಪ್ರಾಣದ್ವಲ್ಲಭ ಶ್ರೀದಶರಥರಾಮ ರಾಮ ಎನ್ನಿರೊ 1ಪಾಮರರೆಲ್ಲರು ಪಂಡಿತರಾದರು ರಾಮ ರಾಮ ಎನ್ನಿರೊಆ ಮೋಕ್ಷ ಕರತಳವಾಹುದು ಕೊಂಡಾಡೆ ರಾಮ ರಾಮ ಎನ್ನಿರೊ 2ಮಖಕೋಟಿಗಧಿಕ ಮಹಾಪುಣ್ಯದಾಯಕ ರಾಮ ರಾಮ ಎನ್ನಿರೊಮುಕ್ತಾಮುಕ್ತಾರ್ಚಿತ ಕರುಣವಾರಿನಿಧಿ ರಾಮ ರಾಮ ಎನ್ನಿರೊ 3ಭಕ್ತವತ್ಸಲ ಭಾಗ್ಯಭೂಷಿತಭವಹರರಾಮ ರಾಮ ಎನ್ನಿರೊನಿಖಿಲ ಭುವನಪತಿ ಬ್ರಹ್ಮಾದಿಸುರವಂದ್ಯ ರಾಮ ರಾಮ ಎನ್ನಿರೊ 4ಅಂಜನೆಜಾತಪೂಜಿತ ಪಾದವಾರಿಜ ರಾಮ ರಾಮ ಎನ್ನಿರೊಕಂಜನೇತ್ರಕಂಜಸಖಅನಂತಪ್ರಭ ರಾಮ ರಾಮ ಎನ್ನಿರೊ5ದಶಶಿರಮರ್ದನ ವಿಭೀಷಣ ವರಪ್ರದ ರಾಮ ರಾಮ ಎನ್ನಿರೊಸುಶರಧಿ ಬಂಧನ ಸುಗ್ರೀವ ಸಂಸೇವ್ಯ ರಾಮ ರಾಮ ಎನ್ನಿರೊ 6ಲಕ್ಷ್ಮಣ ಭರತ ಶತ್ರುಘ್ನಾರಾಧಿತ ರಾಮ ರಾಮ ಎನ್ನಿರೊಋಕ್ಷವರಪ್ರದ ರಘುಕುಲಾಂಬುಧಿಚಂದ್ರ ರಾಮ ರಾಮ ಎನ್ನಿರೊ 7ಜ್ಞಾನಾನಂದ ಬಲಾತ್ಮ ಪರಬ್ರಹ್ಮ ರಾಮ ರಾಮ ಎನ್ನಿರೊಮೌನಿನಿಕರಧ್ಯೇಯಪುಣ್ಯಪುರುಷಗೇಹ ರಾಮ ರಾಮ ಎನ್ನಿರೊ8ಪ್ರಸನ್ನಮೂರುತಿ ಪ್ರಸನ್ನಾನನ ಪರಮಾತ್ಮ ರಾಮ ರಾಮ ಎನ್ನಿರೊಪ್ರಸನ್ನನಿಲಯ ನಿತ್ಯಪ್ರಸನ್ನವೆಂಕಟ ರಾಮ ರಾಮ ರಾಮ ಎನ್ನಿರೊ 9
--------------
ಪ್ರಸನ್ನವೆಂಕಟದಾಸರು
ರಾಯನೆಂದರೆಗುರು- ರಾಯ ಸದ್ಗುಣಗಣxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಕಾಯಸುಜನಗೇಯ ಮಹರಾಯಾಪಮಾಯಾಮಯಭವತೋಯ ನಿಧಿಯೊಳುಕಾಯೋ ಎನ್ನನು ಅ.ಪನಿನ್ನಾ ನಂಬಿದ ಮಾನವಾ - ಭವದೀಘನ್ನಾ ಮಹಿಮಾ ಪಾ -ವನ್ನ ತವಪಾದಾಮನ್ನಾದೊಳಗೆ ನಿತ್ಯಾ - ಚನ್ನಾಗಿ ಭಜಿಸುತಧನ್ಯನೆನಿಸುವ - ಹೊನ್ನು ಹಣಗಳೂಘನ್ನ ಮಹಿಮನೇ - ನಿನ್ನ ನಂಬಿದೆಎನ್ನ ಪಾಲಿಸ - ನನ್ಯರಕ್ಷಕ 1ಅನ್ನಾ ವಸನವಿಲ್ಲದೆ - ನಿತ್ಯಾಘನ್ನಾತೆ ನಿನಗಿದ- ನನ್ಯ ಭಕ್ತನಪರ-ರನ್ನಕ್ಕೆ ಗುರಿಮಾಡಿ-ಬನ್ನಬಡಿಸಿದರೆನ್ನನಿನ್ನ ಸೇವಕ - ನಿನ್ನ ಪೂಜಕ -ನಿನ್ನ ಧ್ಯಾನವÀ - ಮನ್ನದಿಂದಾನಿನ್ನ ತ್ಯಜಿಸಿ - ಅನ್ಯ ದೈವರ - ಮನ್ನಿಸೆನೋಪಾ - ವನ್ನ ಮೂರುತಿ 2ಹೊಟ್ಟೆಗೋಸುಗ ದೇಶಾ ತಿರುಗಿ - ದೇಹಾಎಷ್ಟು ಪೇಳಲಿ ಎನ್ನ - ದುಷ್ಟ ಬುದ್ಧಿಲಿ ಜ್ಞಾನನಷ್ಟವಾಗಲಿ ಬಹು - ಭ್ರಷ್ಟಮಾರ್ಗವ ಸೇರಿದುಷ್ಟಮತಿಯಲಿ - ಶಿಷ್ಟದ್ವೇಷವಕಟ್ಟಿ - ಕಾದಿದೆ - ನಷ್ಟ ತಿಳಿಯದೆಕೆಟ್ಟು - ಪೋಗುವೆ ಥಟ್ಟನೆ ನೀ ಪೊರಿಧಿಟ್ಟಾ ಗುರುಜಗನ್ನಾಥ ವಿಠಲದೂತಾ 3
--------------
ಗುರುಜಗನ್ನಾಥದಾಸರು
ರುದ್ರ ಎನ್ನನು ಪಾಲಿಸೋ ವೀರಭದ್ರಾ ಪರುದ್ರ ನೀ ಎನ್ನ ಹೃದ್ರೋಗ ಕಳೆದು ಸ -ಛಿದ್ರವಿಲ್ಲದೆ ನೀಡ್ಯು ಪದ್ರವಳಿದು ಙ್ಞÕ -ನಾದ್ರ್ರಸ್ವಾಂತನ ಮಾಡೊ ಸುಭದ್ರ ಮೂರುತಿಯೆ 1ಕುಧ್ರಜಾಧವ ಕೇಳೋ ಕುಧ್ರಬೆನ್ನಲಿ ತಾಳಿ ಸ -ಯುದ್ರೇಕವನೆ ಪಾಲಿಸಯ್ಯಾ ರುದ್ರಾ 2ಭೂತಿದಾಯಕನೆ ವಿಭೂತಿಭೂಷಣ ವಿ -ಮಾತು ಲಾಲಿಸೊ ಮುಖ್ಯದೂತನಿವÀನೆಂದು 3
--------------
ಗುರುಜಗನ್ನಾಥದಾಸರು
ರುದ್ರದೇವರು157ಪಾಹಿಮಾಂಪಾಹಿಪಾರ್ವತೀಪತೆಪ.ಪಾಹಿಪಾಹಿಗಂಗಾಹಿಮಕರಧರದೇಹಿಕ ಸುರತರೊ ಮೋಹನಮೂರ್ತೆ 1ದರ್ಪಕಮದಹರ ಅರ್ಪಕಮಂದರಸರ್ಪವಿಭೂಷಣ ಕರ್ಪುರಕಾಯ2ಗುಹಗಣಪತಿಪಿತ ಗಜಮಥನವೃಷವಾಹನಪೂಜಕ ವಾಹಿನಿಪಾಲ3ತ್ರ್ಯಂಬಕ ದುರಿತಕದಂಬ ನಿವಾರಕಸಾಂಬಸದಾಶಿವ ಅಂಬರಕೇಶ4ಕಪಟಿ ಜನಾರ್ದಕ ತಪನನಿಚಯಧುತೆತ್ರಿಪುರಾಂತಕ ಭವವಿಪಿನಕೃಶಾನೊ 5ಪ್ರಮಥಜನಾರ್ಥಿತ ಅಮಿತ ದಯಾನಿಧೆಸುಮತಿ ಕುಲೇಶ್ವರ ಕುಮತಿಖಳಾರೆ 6ಕರುಣಾಕರ ಸುಖಕರಣಭುವನನುತಚರಣಯುಗಳ ಖಳವಾರಣ ಪ್ರಹರಣ 7ಶೂಲಡಮರ ಸುಕಪಾಲಧರ ಶಿರೋಮಾಲಾನ್ವಿತ ಗುಣಜಾಲ ಸುಶೀಲ 8ಭಾಸುರಶುಭಕೈಲಾಸನಿಲಯಭೂತೇಶಪ್ರಸನ್ವೆಂಕಟೇಶ ಭಟೇಶ 9
--------------
ಪ್ರಸನ್ನವೆಂಕಟದಾಸರು
ರೂಪತೋರೆನಗೆ ಗುರುವೆರೂಪತೋರೆನಗೆರೂಪನಾಮಕೆ ವಿರಹಿತನಾದ ದೇವನೆರೂಪತೋರೆನಗೆಪಬ್ರಹ್ಮಾಂಡ ತಂಡಗಳೊಳು ಹೊರಗಾವರಸಿಕೊಂಡುಬ್ರಹ್ಮಾಂಡ ಖಂಡಗಳ ಬೆಳಗುವೆ ವಿರೂಪವೆಡೆಗೊಂಡು1ನಿನ್ನ ತೇಜಸ್ಸಿನಿಂದ ತೋರ್ಪುದು ತೋರ್ಪ ಜಗವೆಲ್ಲನಿನ್ನನುಳಿದೇ ಬೇರೆ ತೋರೆನಲವಕಾಶವ ಇಲ್ಲ2ನಾದ ಬಿಂದುಕಳೆ ನೀನೆಂಬೆನೆ ದೃಶ್ಯವು ಇವು ಎಲ್ಲನಾದ ಬಿಂದುಕಳೆ ಸಾಧಕಗಳು ವಸ್ತು ನಿಜವಲ್ಲ3ಬೋಧಾನಂದ ತುರೀಯಗಳೆಂಬೆನೆ ಆ ಅವಸ್ಥೆಗಳೆಲ್ಲಬೋಧಾನಂದ ತುರೀಯದಿ ನೋಡಲು ಎದುರಿದ್ದವು ಎಲ್ಲ4ನಿರ್ವಿಕಾರ ನಿರ್ಗುಣ ನಿರವಯನಿರಂಜನಸ್ಪೂರ್ತಿ ಪರಮಗುರು ಪರಬ್ರಹ್ಮ ಚಿದಾನಂದಮೂರ್ತಿ5
--------------
ಚಿದಾನಂದ ಅವಧೂತರು
ಲಕ್ಷ್ಮೀಕಾಂತ ಬಾರೋಶುಭಲಕ್ಷಣವಂತ ಬಾರೋಪಪಕ್ಷಿವಾಹನಾ ಬಾರೋ ಪಾವನಮೂರ್ತಿಬಾರೋಅ.ಪಆದಿಮೂಲವಿಗ್ರಹ ವಿನೋದಿ ನೀನೆ ಬಾರೋಸಾಧುಸಜ್ಜನ ಸತ್ಯಯೋನಿ - ದಾನಿ ನೀನೆ ಬಾರೋ 1ಗಾಡಿಕಾರಕೃಷ್ಣ ನಿನ್ನ ಬೇಡಿಕೊಂಬೆ ಬಾರೋರೂಢಿಮಾತನಾಡಿ ಸರ್ವ ರೂಢಿಗೊಡೆಯ ಬಾರೋ2ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆನು ಬಾರೋಪನ್ನಂಗ ಶಯನ ಸಿರಿ-ಪುರಂದರ ವಿಠಲ ಬಾರೋ 3
--------------
ಪುರಂದರದಾಸರು
ಲಟಪಟ ನಾ ಸಟೆಯಾಡುವೆನಲ್ಲ |ವಿಠಲನ ನಾಮ ಮರೆತು ಪೋದೆನಲ್ಲ ಪ.ಶೇಷಗಿರಿಯ ಮೇಲೆ ಸವುತೆಯ ಬಿತ್ತಿ |ದೇವಗಿರಿಯ ಮೇಲೆ ಅವತಾರವಿಕ್ಕಿ ||ಹಾಳೂರಿಗೊಬ್ಬ ಕುಂಬಾರ ಸತ್ತ |ಗೋಕರ್ಣದೊಳಗೊಬ್ಬ ಪರದೇಶಿ ಅತ್ತ 1ನಾ ಸಮಯದಿ ಮೂರು ರಾಯರ ಕಂಡೆಕುಪ್ಪುಸ ತೊಟ್ಟ ಕೋಳಿಯ ಕಂಡೆ ||ಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆ |ನರಸೂಳೆಗೆಯ್ವುದ ಕಣ್ಣಾರೆ ಕಂಡೆ 2ನುಸಿಯೊಂದು ರೊಟ್ಟಿಯ ಸುಡುವುದ ಕಂಡೆಆಡೊಂದು ಮದ್ದಳೆ ಬಡಿವುದ ಕಂಡೆ ||ಕಪ್ಪೆ ತತ್ಥೈಯೆಂದು ಕುಣಿವುದ ಕಂಡೆ |ಪುರಂದರವಿಠಲನ ಕಣ್ಣಾರೆ ಕಂಡೆ * 3
--------------
ಪುರಂದರದಾಸರು
ಲಾಲಿಪಂಪಾಂಬಿಕೆಲಾಲಿಭ್ರಮರಾಂಬಿಕೆಲಾಲಿಬಗಳಾಂಬಿಕೆಲಾಲಿಲಾಲಿಎಂದು ಪಾಡಿರಿ ಸಾಧು ಸಜ್ಜನರೆಲ್ಲದೇವಿ ತಾನೇ ಎಂದುಲಾಲಿಪಅದ್ವಯಾಗಮ ದ್ಯುತಿಗೋಚರ ಅನಾದಿಅಚಲಾನಂದವೇಲಾಲಿಶುದ್ಧ ಸಮ್ಯಕ್ ಜ್ಯೋತಿರ್ಮಯ ಸ್ವರೂಪಸುಚರಿತ್ರ ನಿಶ್ಚಲಲಾಲಿಚಿದ್ಬಯಲಿನೊಳು ಹೃದಯ ತೊಟ್ಟಿಲೊಳುಭಾವಹಾಸಿಗೆಯಲ್ಲಿ ಪವಡಿಸಿಹೆಲಾಲಿಸಿದ್ಧರಿ ಮಲಗಿನ್ನು ಜೋಗುಳ ಪಾಡುವೆಶ್ರೀ ಮಹಾಲಕ್ಷ್ಮಿಯೇಲಾಲಿ1ನಿತ್ಯನಿರ್ಗುಣ ನಿಷ್ಕಲಂಕ ನಿರ್ವಿಕಲ್ಪನಿಜನಿತ್ಯ ನಿರ್ಮಳೆಲಾಲಿಸತ್ಯ ವಸ್ತುವೆ ಸನಾಥ ವಿಶೋತ್ಪತ್ತಿಸರ್ವಪರಬ್ರಹ್ಮರೂಪಲಾಲಿಪ್ರತ್ಯಗಾತ್ಮಳೆ ಪೂರ್ಣಪರಮ ಪರತರವಂದ್ಯೆಪಾವನ ಚಾರಿತ್ರೆಲಾಲಿಕರ್ತೃನೀ ಅನಂತ ಬ್ರಹ್ಮಾಂಡಾದಿಗಳಿಗೆಕರುಣಾ ಸಮುದ್ರವೇಲಾಲಿ2ಪೃಥ್ವಿಅಪ್ಪುತೇಜವಾಯುರಾಕಾಶಕ್ಕೆಪೃಥಕಾಗಿ ಹೊಳೆದಿಹಳೆಲಾಲಿಸತ್ವರಜತಮಸು ಮೂರರೊಳಗೆ ನೀಸಾಕ್ಷಿರೂಪದಲಿರುವೆಲಾಲಿವೇದ ವೇದಾಂಗಗಳ ವಾಗ್ರೂಪಿನಲ್ಲಿನೆಲೆಸಿ ರಂಜಿಪಳೆಲಾಲಿತತ್ವವಿಂಶತಿ ಪಂಚಶರೀರಗಳೊಳಗೆ ನೀತೊಳ ತೊಳಗಿ ಬೆಳಗುತಿಹೆಲಾಲಿ3ಜಾಗೃತ ಸ್ವಪ್ನ ಸುಷುಪ್ತಿ ಮೂರವಸ್ಥೆಜನಿತದಿ ಕಾಣಿಸಿಲಾಲಿಪ್ರಾಜÕತೈಜಸವಿಶ್ವಮೂರು ಮೂರುತಿಯಾಗಿಪರಿಣಮಿಸಿ ತೋರುವೆಲಾಲಿಶೀಘ್ರದಲಿ ಸದ್ಭಾವ ಸಚ್ಛಿಷ್ಯರಾದರ್ಗೆಸ್ವಾನಂದ ಸುಖವೀವೆಲಾಲಿರೌದ್ರದಲಿ ಭುಗುಭುಗು ಭುಗಿಲೆಂಬ ಕಳೆಗಳುಅತ್ಯುಗ್ರದಿ ಝಂಗಿಸುವೆಲಾಲಿ4ವಿದ್ಯಾವಿದ್ಯವ ತೋರಿ ದೃಶ್ಯಾದೃಶ್ಯಕೆ ಮೀರಿಅದೃಶ್ಯರೂಪ ಶ್ರೀ ಲಕ್ಷ್ಮೀಲಾಲಿಸಿದ್ಧಿಗಳೆಂಬುವ ಛೇದಿಪ ಹರಿಹರಸರಸಿಜೋದ್ಭವ ಮಾತೆಲಾಲಿಸಿದ್ಧ ಪರ್ವತವಾಸ ಸಾಹಸ್ರದಳ ಮಧ್ಯೆಶ್ರೀ ಬಗಳಾಮುಖಿಲಾಲಿಸದ್ಗುರು ಚಿದಾನಂದಅವಧೂತಬಗಳಾಂಬ ಸಗುಣನಿರ್ಗುಣಮೂರ್ತಿಲಾಲಿ5
--------------
ಚಿದಾನಂದ ಅವಧೂತರು