ಒಟ್ಟು 5051 ಕಡೆಗಳಲ್ಲಿ , 129 ದಾಸರು , 3317 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವೆಂಕಟಾಚಲಪತಿ ನಿನ್ನ ಪಾದವೆ ಎನಗೆ ಗತಿ ಪ. ಧರ್ಮ ತತ್ವವನರಿಯೆ ಬಹು ದುಷ್ಕರ್ಮವ ನಾ ತೊರೆಯೆ ಭರ್ಮದಾಸೆ ಮರೆಯೆ ಆ ದೇವ ಶರ್ಮವ ನಿಜ ದೊರೆಯೆ 1 ಅಮಿತ ಪಾಪಿ ನಾನು ಸಂಸೃತಿ ದುರಿತ ನೀನು ನಮಿಪೆ ನಿನ್ನಡಿಗಳನು ಕಮಲಾ- ರ್ಕ ಮಿತ್ರನೆ ಸಲಹೆನ್ನು 2 ಸುತರ ಕುಚರಿತಗಳ ಮಾತಾ ಪಿತರುಗಳೆಣಿಸುವರೆ ಯೋನ: ಪಿತರು ಎಂಬ ಸಂಶ್ರುತಿ ಗೀತಾರ್ಥವ ವಿತತವ ಮಾಡುವರೆ 3 ಎನ್ನಪರಾಧಗಳನೆಣಿಸಲು ಷಣ್ಮುಖಗಳ ವಡದು ಬಿನ್ನಹ ಮಾಡುವೆ ನಿನ್ನ ದಾಸನೆಂ- ದೆನ್ನ ಪೊರೆಯೊ ದೊರೆಯೆ 4 ಪನ್ನಗಾಚಲವಾಸ ಬಹು ಕಾ- ರುಣ್ಯ ಸಾಗರೇಶ ಇನ್ನುಪೇಕ್ಷಿಸದೆ ಎನ್ನ ಪಾಲಿಸು ಪ್ರ- ಸನ್ನ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ವೆಂಕಟೇಶ ಎನ್ನ ಸಲಹಲ್ಯಾಕೆ ಬಳಲುವೆ ಪ ದುರಿತ ಪರಿಹರಿಸೊ ಬಂದು ತಾಪವನ್ನು ಬಿಡಿಸೊ ಮಂದ ಬುದ್ದಿಯನ್ನೆ ಕೆಡಿಸೊ ಮದನನಯ್ಯ ಮಮತೆ - ಇಂದು ಎನ್ನ ಮಾತ ಲಾಲಿಸೊ ತಂದೆ ಕುಂದು ಎಣಿಸದೆನ್ನ ಪಾಲಿಸೊ 1 ನಕ್ರನ ಬಾಧೆಯೊಳಗೆ ಸಿಳುಕಿ ಗಜವು ನರಳುತಿರಲು ತ್ರಿ- ವಿಕ್ರಮನೆ ಸಲಹೊಯೆಂದು ಕರೆಯಲಾಗ ನಕ್ರನ ಚಕ್ರದಿಂದ ಹೊಡೆದು ಕೆಡಹಿದೆ ಆ ಗಜಕೆ ಬಂದ ವಕ್ರವನ್ನು ಬಿಡಿಸಿ ಸಲಹಿದೆ ಎನ್ನ ಮನದ ವಕ್ರವನ್ನು ಬಿಡಿಸಲಾಗದೆ 2 ತರಳ ಧ್ರುವನು ತನ್ನ ಪಿತನ ತೊಡೆಯ ಮ್ಯಾಲೆ ಬಂದು ಕುಳ್ಳಿರೆ ತರವೆ ನಿನಗೆ ಎಂದು ಸುರುಚಿ ತವಕದಿಂದ ಎಳೆಯಲವನ ಸ್ಥಿರಪದವಿಯಿತ್ತೆ ಕರುಣದಿ ನಾನು ನಿನ್ನ ಸ್ಮರಣೆಗೈವೆದಿವ್ಯನಾಮವ 3 ಆರು ಸಲಹುವರು ಎನ್ನ ಪಾರುಗಾಣಿಸುವರ ಕಾಣೆ ಸೇರಿದೆನೊ ಶೇಷಶಯನ ಶ್ರೀನಿವಾಸ ಎನ್ನನು ಸೇರಿತಲ್ಲವೆ ಬೇರೆ ವಿಚಾರವಿಲ್ಲದೆ ನಿನ್ನ ನಂಬಿದೆ 4 ದುಷ್ಟ ದನುಜರನ್ನು ಮುರಿದು ಧಾರುಣಿಯೊಳು ಇರುವೆ ಎನ್ನ ಕಷ್ಟವ ಬಿಡಿಸಿ ಕಾಯೊ ಕಮಲನಾಭ ಹೆಳವನ ಕಟ್ಟೆವಾಸ ವೆಂಕಟೇಶನೆ ಸಕಲ ಭಾರ ಸುಜನಪಾಲನೆ 5
--------------
ಹೆಳವನಕಟ್ಟೆ ಗಿರಿಯಮ್ಮ
ಶ್ರೀ ವೆಂಕಟೇಶಮಾಂ ಪಾಲಯ ಸುಗುಣಾಲಯ ಪ ಶಿಖಾಮಣಿ ಸೇವಕ ಸುಚಿಂತಾಮಣಿ ಅ.ಪ. ಕಮಲಲೋಚನ ಭಕ್ತ ಶಮಲ ಲೋಚನ ಶಕ್ತ ವಿಮಲ ಚರಿತಪೂರ ಕಮನೀಯಶರೀರ 1 ಧೀರ ದಶರಥಕುಮಾರಾ ಬುಧಜನವಿಹಾರ ವೀರಹರಿ ಪರಿವಾರ ಕ್ರೂರಾಸುರವಿದಾರ 2 ಸರಸಿಜಾಸನನುತ ಸುರಮುನಿಸೇವಿತ ಹರಿಣಾರಿಧರಾಗಾರ ವರದ ವಿಠಲಾಕಾರ 3
--------------
ಸರಗೂರು ವೆಂಕಟವರದಾರ್ಯರು
ಶ್ರೀ ವ್ಯಾಘ್ರಗಿರಿವಾಸ ಶ್ರೀ ಶ್ರೀನಿವಾಸ ಸೇವ್ಯ ಪಾದಾಜ್ಜ ಪ ಕಮಲಸಂಭವಜನಕ ಕಮಲಾಪ್ತ ಕುಲತಿಲಕ ಕಮಲ ಸನ್ನಿಭಚರಣ ಕಲುಷಗಣಹರಣ ಕಮನೀಯ ಗುಣಹಾರ ಕಲ್ಯಾಣಗುಣ ಪೂರ ಕಮಲಾ ಮನೋಹರ ಕಲಿತ ಶೃಂಗಾರ 1 ಲೋಕಮೋಹನರೂಪ ಲೋಕರಕ್ಷಣ ಚಾಪ ಸುಕೃತಿ ಪರಿವಾರ ನಾಕನಿಲಯ ಸಮಾಜ ನಮಿತ ಪಾದಾಂ ಭೋಜ ಪಾಕರಿಪು ಮಣಿನೀಲ ಪದ್ಮಾನುಕೂಲ2 ಮಾಂಡವ್ಯ ಮುನಿಸೇವ್ಯ ಮಾನಸಾಂಬುಜಭವ್ಯ ಪಾಂಡುಸುತ ಪರಿಪಾಲ ಪಾವನ ಸುಶೀಲ ಭಾಗವತ ಸನ್ಮೋದ ಗಾಂಡೀವಿ ಸುಶ್ಯಾಲ ಗಾನರಸಲೋಲ 3 ತವಚರಣ ಪಂಕಜಂ ತೃಪ್ತಜನ ಸುರಕುಜಂ ಭವಜಲಧಿಕಾರಣಂ ಭವತು ಮಮ ಶರಣಂ ತವನಾಮಕೀರ್ತನಂ ತಾಪಪರಿಮೋಚನಂ ಶ್ರವಣಯೋರ್ದೇಹಿಮಮ ಶಮಿತಾಘಮಹಿಮಾ 4 ಸಕಲಲೋಕ ಶರಣ್ಯ ಸರ್ವದೇವವರೇಣ್ಯ ನಿಖಿಲಭೂತವಾದ ನಿರ್ಮಲ ಸುವೇಷ ಅಕಲಂಕ ಚರಿತ ನಿತ್ಯಾನಂದ ಗುಣಭರಿತ ಶಿಖಿರಿಷ ವಿಹರಣ ಕುಶಲ ಶ್ರೀವರದ ವಿಠಲ 5
--------------
ವೆಂಕಟವರದಾರ್ಯರು
ಶ್ರೀ ವ್ಯಾಘ್ರಗಿರಿವಾಸ-ಶ್ರೀ ಶ್ರೀನಿವಾಸ ಸೂರಿ ಸೇವ್ಯ ಪಾದಾಬ್ಜ ಪ ಕಮಲಸಂಭವ ಜನಕ ಕಮಲಾಪ್ತಕುಲತಿಲಕ ಕಮಲ ಸನ್ನಿಭಚರಣ ಕಲುಷಗಣ ಹರಣ ಕಮನೀಯ ಗುಣಹಾರ-ಕಲ್ಯಾಣಗುಣ ಪೂರ ಕಮಲಾ ಮನೋಹರ ಕಲಿತಶೃಂಗಾರ 1 ಲೋಕ ಮೋಹನ ರೂಪ ಲೋಕರಕ್ಷಣ ಚಾಪ ಶೋಕಮೋಹವಿದೂರ ಸುಕೃತಿಪರಿವಾರ ನಾಕನಿಳಯ ಸಮಾಜ ನಮಿತ ಪಾದಾಂಭೋಜ ಪಾಕರಿಪು ಮಣಿನೀಲ ಪದ್ಮಾನುಕೂಲ 2 ಮಾಂಡವ್ಯ ಮುನಿಸೇವ್ಯ ಮಾನಸಾಂಬುಜ ಭವ್ಯ ಪಾಂಡುಸುತ ಪರಿಪಾಲ ಪಾವನ ಸುಶೀಲ ಭಾಗವತ ಸನ್ಮೋದ ಗಾಂಡೀವಿ ಸುಶ್ಯಾಲ-ಗಾನರಸಲೋಲ 3 ತವಚರಣ ಪಂಕಜಂ-ತೃಪ್ತಜನ ಸುರಕುಜಂ ಭವಜಲಧಿತಾರಣಂ ಭವತುಮಮ ಶರಣಂ ತವನಾಮ ಕೀರ್ತನಂ ತಾಪಪರಿಮೋಚನಂ ಶ್ರವಣಯೋರ್ದೇಹಿಮಮ-ಶಮಿತಾಘಮಹಿಮಾ4 ಸಕಲ ಲೋಕ ಶರಣ್ಯ ಸರ್ವದೇವ ವರೇಣ್ಯ ನಿಖಿಲ ಭೂತವಾಸ-ನಿರ್ಮಲಸುವೇಷ ಅಕಲಂಕ ಚರಿತ-ನಿತ್ಯಾನಂದ ಗುಣ ಭರಿತ ಶಿಖರಿಷವಿಹರಣ ಕುಶಲ-ಶ್ರೀವರದವಿಠಲ5
--------------
ಸರಗೂರು ವೆಂಕಟವರದಾರ್ಯರು
ಶ್ರೀ ವ್ಯಾಸರಾಜರು ಏಸು ಮಹಿಮ ನೋಡೋ | ಶ್ರೀ ವ್ಯಾಸಮುನಿಯು ತಾನೂ ಪ ದಾಸಜನರ ಹೃದ್ದೊದ್ದೋಷ ಕಳೆದು ಸಂ | ತೋಷ ಕೊಡುವ ದೊರೆ ಅ.ಪ. ರಾಮಾಚಾರ್ಯರ ಗೃಹದಿ | ಭೂಮಿ ಸೋಕದೆ ಪುಟ್ಟಿಪ್ರೇಮದಿಂದಲಿ ಪುರು | ಷೋತ್ಮ ತೀರ್ಥರ ಗುಹದಿಯಾಮ ಯಾಮಕೆ ಪಾಲು | ಆಮಹಾಮುನಿ ಕೂಡೆಸೀಮೆ ಮೀರಿದ ತೇಜ | ಕೋಮಲ ಕಾಯನು 1 ಪೂರ್ಣ ಬೋಧರ ಪೀಠ | ಬ್ರಹ್ಮಣ್ಯರಿಂಗೊಂಡುಭವಾರ್ಣ ತಾರಿಸುವಂಥ | ನ್ಯಾಯ ಗ್ರಂಥವ ಮಾಡಿಕರ್ಣ ರಹಿತನ ಸುಶಯ್ಯನ ಮಾಡಿಕೊಂಡಅರ್ಣ ಸಂಪ್ರತಿಪಾದ್ಯ | ಕೃಷ್ಣನ್ನ ಮೆರೆಸೀದ 2 ಸುಜನ ಕುಮುದ ಚಂದ್ರ | ನಿಜಭಕ್ತ ಪರಿಪಾಲ ಪರಿವ್ರಾಜಾಕಾಚಾರ್ಯ | ವಿಜಯ ನಗರಿಲಿ ನೆಲೆಸೀಅಜನನಯ್ಯನ ನಾಮ | ಭಜನೆ ಪ್ರಾಕೃತದೊಳುನಿಜಜನ ಕೊರೆಯುತ | ಅಜೇಯನೆನಿಸಿದಂಥ 3 ಮಿಥ್ಯಾಮತವಗೆದ್ದು | ತಥ್ಯಾವು ಜಗವೆಂದುಸ್ತುತ ಶ್ರೀಹರಿಯ ಸರ್ವೋತ್ತುಮನೆನುತಸತ್ಯವು ಪಂಚ ಭೇದ | ನಿತ್ಯವು ತಾರತಮ್ಯಭೃತ್ಯರು ಬ್ರಹ್ಮ ದೇವತೆಗಳೆಂದೊರೆದ 4 ಪುರಂದರ | ದಾಸರೆಂದೆನಿಸೀದ 5 ಅಹಿಪರ್ವತಾಧೀಶ | ಅಹಿತಲ್ಪನ್ನಾಸೇವೆವಿಹಿತದಿ ದ್ವಿಷಡಾಬ್ದ | ಬಹುಗೈದು ಅರಸಿನಕುಹುಯೋಗವಾರಿಸಿ | ಮಹಿಯ ಸುರರಿಗೆಲ್ಲಸಹಸ್ರಾರು ಗ್ರಾಮಗಳ್ | ಜಹಗೀರುಗಳನಿತ್ತ 6 ಛಂದದಿಂದಲಿ ನವ | ವೃಂದಾವನಕೆ ಬಂದುವೃಂದಾವನದಿ ನಿಂದು | ಇಂದೀವರಾಕ್ಷನುನಂದ ಕಂದ ಗುರು ಗೋ | ವಿಂದ ವಿಠಲನ ಹೃನ್‍ಮಂದಿರದಲಿ ನೋಡಿ | ನಂದವ ಪಡುತಿರ್ಪ7
--------------
ಗುರುಗೋವಿಂದವಿಠಲರು
ಶ್ರೀ ವ್ಯಾಸರಾಯರು ನೋಡಿದೇ ನಾ ನೋಡಿದೆ ಪ ನೋಡಿದೆನೊ ಗುರು ವ್ಯಾಸರಾಯರ ನೋಡಿದೆನೊ ಶುಭಕಾಯರಾ ಮಾಡಿದೆ ಶಿರಬಾಗಿ ನಮನವ ಬೇಡಿದರ್ಥವ ಕೊಡುವ ವಡೆಯರ ಅ.ಪ ಭಿದುರಮಯವಾದ ವೇದಿಕಾಗ್ರದಿ ಚದುರದಿಕ್ಕಿಲಿ ಶೋಭಿಸುವ ಶುಭ ತ್ರಿದಿಶವರ ಮುಖ ದಿವಿಜರೈವರು ಮುದದಿ ಇರುತಿಹರಿವರ ಮಧ್ಯದಿ ಪದುಮನಾಭನ ಚತುರರೂಪವÀ ಹೃದಯ ಮಂದಿರದಲ್ಲಿ ಭಜಿಸುವ ಪದುಮನಾಭನ ಪ್ರೀತಿಪಾತ್ರರ ಸದಮಲಾಗುರು ವ್ಯಾಸರಾಯರ 1 ಶ್ರೀನಿವಾಸನು ಶಿರಸಿನೊಳಗಿಹ ಆನನಾಗ್ರದಿ ಬಾದರಾಯಣ ಙÁ್ಞನಮಯ ಶಿರಿ ಹಂಸ ಅಚ್ಯುತ ಮೌನಿ ಕಪಿಲಾನಂತ ಭಾರ್ಗವ ಮಾನನಿಧಿ ಹಯಗ್ರೀವ ಹಂಸನು ದಾನವಾಂತಕ ರಾಮಚಂದ್ರ ಸ - ದಾನುರಾಗದಿ ತೆನೆಗಳಲ್ಲಿ ಭಾನುನಂದದಿ ಪೊಳೆವ ಬಗೆಯನು 2 ಮಧ್ಯಭಾಗದಿ ಕೃಷ್ಣದೇವನು ಇದ್ದು ಇವರನು ಸೇವೆ ಮಾಳ್ಪರ ಶುದ್ಧ ಮಾಡÀ್ಯವರರ್ಥ ಸರ್ವದ ಶಿದ್ಧಿಮಾಡಿ ಇವರನತಿ ಪ್ರ ಶಿದ್ಧಮಾಡಿವರಲ್ಲಿ ಪ್ರತ್ಯಕ್ಷ ಸಿದ್ಧನಾಗಿರುತಿಹನು ನಮ್ಮ ಗುರು ಮಧ್ವಗುರುಜಗನ್ನಾಥವಿಠಲನ ಮಧ್ಯಹೃದಯದಿ ಭಜಿಪ ಗುರುಗಳ 3
--------------
ಗುರುಜಗನ್ನಾಥದಾಸರು
ಶ್ರೀ ಶವಿಠ್ಠಲ ನೀನೆ ಸಂತೈಪುದು ಕ್ಲೇಶನಾಶನ ನಿನ್ನದಾಸರವನೆಂದರಿತು ಪ ಭೂದೇವ ಜನ್ಮವಿತ್ತವಗೆ ನೀ ದಯದಿಂದ ಸಾಧು ಜನಸಂಗ ಸುಜ್ಞಾನ ಭಕುತಿ ಸಾದರದಿ ನಿನ್ನ ತುತಿಸುವ ಭಾಗ್ಯ ಕರುಣಿಸಿದೆ ಕೃ ಪೋದಧಿಯೆ ನಿನಗೆ ನಾ ನಮಿಪೆ ಬಹು ಬಗೆಯಿಂದ 1 ಯೋಗ್ಯತೆಗಳನು ಬಲ್ಲೆ ಬಹು ಜೀವರೊಳಗಿದ್ದು ಅಜ್ಞಾನಿ ನೀನಲ್ಲ ಸರ್ವಜ್ಞನೆಂದು ವಿಜ್ಞಾಪಿಸುವೆ ನಿರುತ ವಿನಯದಿಂದಲಿ ಪರಮ ಭಾಗ್ಯವಂತನೆ ನಿನ್ನ ಪಾದಕಮಲಕೆ ಬಿಡದೆ 2 ಸಕಲ ಲೋಕಗಳ ನಾಯಕ ಇವಗೆ ಹೇಯ ಲೌ ಕಿಕ ಮಾರ್ಗವನೆ ಬಿಡಿಸಿ ಸತ್ಯದಲ್ಲಿ ಪ್ರಕಟವನೆ ಗೈಸು ಸದ್ಧರ್ಮ ಕರ್ಮಗಳ ದೇ ವಕಿತನಯ ಶ್ರೀ ಜಗನ್ನಾಥವಿಠ್ಠಲ ಒಲಿದು 3
--------------
ಜಗನ್ನಾಥದಾಸರು
ಶ್ರೀ ಶ್ರೀನಿವಾಸ ಕಲ್ಯಾಣ ಲಾವಣಿ ಮಾಧವ ಪ ಮುದಮೋದ ಘನ ಸುಖ ಭಕ್ತರಿಗೀಯಲು ಅ.ಪ. ದೇವ ದೇವೇಶನು ಯಾರೆಂತೆಂದು ಕೋವಿದ ಭೃಗುಮುನಿ ಹುಡುಕುತ ಬಂದು ಪಾರ್ವತಿ ಪತಿಹರ ವಿಧಿಗಳ ಜರಿದು ಧಾವಿಸಿ ಹರಿಯೆಡೆ ಬರ್ಪುದ ಕಂಡು ಭಾವಜ ಪಿತರತಿ ಸೋಗನು ಹಾಕೆ ದೇವನ ಮಾಯೆಯು ಮುಸುಕಲು ಮುನಿಗೆ ಈ ವಿಧ ಸಲ್ಲದು ಹರಿಗೆಂತೆಂದು ಪಾವನ ನೆದೆಯನು ವದ್ದನು ದುಡುಕಿ1 ಮಾಧವ ಚರಣವ ತೊಳೆದು ಹರಿಸುತ ದುಗುಡವ ಭಕ್ತನಿಗಂದು ಕರದಿಂ ದೊತ್ತುತ ಚರಣದ ಕಣ್ಣು ತರಿಯಲು ಹೆಚ್ಚಿನ ಸಾಧನೆ ಮುನಿಗೆ ಹರುಷದಿ ತೆರಳಿದ ಋಷಿವರ ತಾನು ಅರಿಯುತ ಕಾಂತನ ಮನವಂ ಸಿರಿಯು ಸರಸರ ಕೋಪವ ನಟಿಸುತ ತಾನು ಬಿರುಸಿನ ನುಡಿಗಳ ಆಡಿದಳಂದು 2 ಏನಿದು ಮುನಿ ವಿಪರೀತವು ಥರವೆ ನಾನಿಹ ಸ್ಥಳವನು ವದೆಯುವದೆಂದು ಮಾನಿನಿ ಗೌರವ ಕಾಯದೆ ಕ್ಷಮಿಸಿಹೆ ನಾನಿಹೆ ಬರಿಸತಿ ಭಕ್ತರೆ ಹೆಚ್ಚು ಕಾನನ ಸೇರುವೆ ನನಗೇಕೀ ಮನೆ ಮಾನವು ಹೊಯಿತು ಯನ್ನಲು ಸತಿಯು ಮೌನವ ಧರಿಸಲು ಗಂಡನು ನಗುತ ದೀನರ ಪೊರೆಯಲು ಬಂದಳು ಭುವಿಗೆ 3 ಗಂಡನ ಬಿಡುವಳೆ ಲಕ್ಷ್ಮೀದೇವಿ ಪುಂಡರ ಮಾತಿದು ನಂಬಿಲುಬೇಡಿ ಗಂಡನ ಮನತೆರ ನಟಿಸಿದಳಷ್ಟೆ ಗಂಡನು ಹಾಗೆಯೆ ತೊರೆಯುತ ಧಾಮ ಕುಂಡಿಲಿ ಗಿಳಿಯುತ ಅಲೆಯುತ ಹೊರಟ ಕಂಡಲ ಗಿರಿಯೆಡೆ ನಡೆತಾತಂದ ಕಂಡನು ಹುತ್ತವ ಒಂದೆಡೆ ತಾನು ಕುಂಡಲಿಗೊಡೆಯನು ನೆಲಸಿದನಲ್ಲಿ 4 ಪಾವನ ಗಿರಿಯದು ಕೇಳಿರಿ ಎಲ್ಲ ದೇವನ ಖಗಮೃಗ ಬಳ್ಳಿಗಳಾಗಿ ದೇವ ಸಮೂಹವು ಸೇವಿಪರಲ್ಲಿ ಕೋವಿದ ಋಷಿಗಳು ಧ್ಯಾನಿಪರೈಯ ಭಾವಸು ಭಕ್ತಿಲಿ ನೋಡಲು ಗಿರಿಯ ಜೀವರ ಪಾಪಗಲೆಲ್ಲಾ ನಾಶ ನೋವನು ಕಾಣರು ಹರಿಕೃಪೆ ಮುಂದೆ ದೇವನು ಇರೆ ಇದೆ ಭೂವೈಕುಂಠ 5 ಕೃತಯುಗದಲ್ಲಿದು ವೃಷಭಾಚಲವು ಗತಿಸಿದ ರಕ್ಕಸ ಹರಿಯಿಂತೆಂದು ಸುತನಂ ಪಡೆಯಲು ಅಂಜಿಲಿದೇವಿ ಅತಿ ತಪಗೈದಳು ತ್ರೇತೆಯಲೆಂದು ಉತ್ತಮ ನೆಂಬುವ ಗರ್ವವ ನೀಗಿ ಸ್ತುತಿಸಿದ ಶ್ವಾಸನ ಶೇಷನು ಎಂದು ಇತ್ತರು ಮೂರಲಿ ಶೇಷನ ನಾಮ 6 ವೆಂಕಟ ಗಿರಿಯಿದು ಕಲಿಯುಗದಲ್ಲಿ ಸಂಕಟ ನೀಗಿದ ಮಾಧವನಿಲ್ಲಿ ಸಂಕಟ ನೀಡುವ ಪಾಪಗಳನ್ನು ಶಂಕರ ಹರಿತಾ ಕಡಿಯುವನೆಂದು ವೆಂಕಟ ನೆನಿಸುತ ಮೆರೆಯುವ ನಿಲ್ಲಿ ಶಂಕೆಯ ಮಾಡದೆ ಶರಣೆಂದಲ್ಲಿ ಪಂಕಜ ನೇತ್ರನು ಪೊರೆಯುವನಿಲ್ಲಿ ಮಂಕುಗಳಾಗದೆ ಭಜಿಸಿರಿ ಬೇಗ 7 ಇಂದಿರೆ ಕೆರಳೆ ತಂದೆಯು ತೊರೆದನೆ ನಿಜ ವೈಕುಂಠ ಪೊಂದಿಹ ಹುತ್ತವ ಏನಿದು ಛಂದ ಕಂದನು ನಾನಿಹೆಎನ್ನುತ ಬೊಮ್ಮ ತಂದೆಗೆ ಕ್ಷೀರವ ಕರೆಯಲುನಿತ್ಯ ಛಂದದ ಗೋತನು ಧರಿಸುತ ಶಿವನ ಕಂದನ ಗೈಯುತ ಮಾತೆಯ ಸಹಿತ ಬಂದನು ಚೋಳನ ಅರಮನೆಯೆಡೆಗೆ 8 ಕೊಳ್ಳಲು ರಾಣಿಯು ಸೇರುತ ಗೋಷ್ಠಿ ನಲ್ಲಗೆ ಪ್ರತಿದಿನ ಕ್ಷೀರವ ಸುರಿಸೆ ಇಲ್ಲವೆ ಆಗಲು ರಾಣಿಗೆ ಹಾಲು ಗೊಲ್ಲನ ಶಿಕ್ಷಿಸಿ ಬೈಯಲು ಬಹಳ ಗೊಲ್ಲನು ಪತ್ತೆಯ ಹಚ್ಚುತ ಚರ್ಯೆ ಕೊಲ್ಲಲು ಗೋವನು ಕೊಡಲಿಯನೆತ್ತೆ ಬಲ್ಲಿದ ತಡೆಯಲು ಶಿರವನು ಒಡ್ಡೆ ನಿಲ್ಲದೆ ಗಗನದಿ ಚಿಮ್ಮಿತು ರಕ್ತ 9 ನೋಡುತ ಮಡಿಯಲು ಗೊಲ್ಲನು ಅಲ್ಲೆ ಓಡುತ ಗೋಗಣ ಹಟ್ಟಿಯ ಸೇರೆ ಜಾಡನು ಪಿಡಿಯುತ ಚೋಳನು ಬರಲು ಕೇಡಿಗ ನೃಪನೆ ಪಿಚಾಚಿಯು ಆಗೆನೆ ಬೇಡಲು ಕ್ಷಮೆಯನು ಬಹುಪರಿಹರಿಯ ನೀಡಿವಿಶಾಪವ ವೆಂಕಟ ಕರುಣಿ ಆಡಲು ತೊಡಗಿದ ಈ ವಿಧ ಮುಂದೆ 10 ಆದುದು ಆಯಿತು ಚೋಳನೆ ಕೇಳು ಭುಂಜಿಸು ಕರ್ಮ ಪದ್ಮಾವತಿ ಯೆಂಬಾಕೆಯ ಮುಂದೆ ಮೋದದಿ ಮುದುವೆಯ ನಾಗುವೆ ಆಗ ಭೂಧವ ಮಾವನು ನೀಡುತ ಮಕುಟ ಕವಿ ವಾರ ನಾಧರಿಸುವಾಗಿಲ್ಲದೆ ಬಾಧೆ ಪೊಂದುವಿ ಕಲಿಕೊನೆ ಪೂರ್ವಾವಸ್ಥೆ 11 ಪೇಳತ ಲೀಪರಿ ಚೋಳಗೆ ದೇವ ಲೀಲೆಯ ತೊರಲು ಘಾಯವ ಪಿಡಿದು ಕೇಳಲು ಔಷಧ ಗುರುವನು ಸ್ಮರಿಸಿ ಆಲಸ್ಯಗೈಯದೆ ಬಂದವ ನುಡಿಯೆ ಮೂಲಿಕೆ ಹುಡುಕುತ ಗಿರಿಯಲಿ ಅಲೆಯೆ ಶೈಲದ ಸ್ವಾಮಿ ವರಾಹನು ಸಿಗುತ ಕೇಳಲು ವೆಂಕಟ ಕಥೆ ವಿಸ್ತಾರ ಪೇಳಲು ತಬ್ಬಿದ ಕ್ರೋಡನ ಚತುರ 12 ಏನಿದು ಬಹು ವಿಪರೀತವು ಪೇಳಿ ಸತಿ ಬಿಟ್ಟಲೆಯುವುದೆಂತು ಪೂರ್ಣಾನಂದಗೆ ಗೊಲ್ಲನ ಪೆಟ್ಟೆ ಚಿನ್ಮಯ ನೆತ್ತರು ಚಿಮ್ಮುವದುಂಟೆ ಕ್ಷುಧೆ ತೃಷೆ ದೂರಗೆ ಹಾಲು ಅನ್ಯರು ವೈದ್ಯರೆ ಧನ್ವಂತ್ರೀಗೆ ಕಾಣನೆ ಔಷಧಿ ಪೂರ್ಣಪ್ರಜ್ಞ ತಾನಿರೆ ವೆಂಕಟ ತಿಳಿಯನೆ ಕ್ರೋಡ 13 ಲೀಲೆ ಇದೆಲ್ಲವು ಕೊಡುವದವಗೆ ಬೀಳಿಸಿ ಮೋಹದಿ ಕುಜನರ ತರಿವ ಪಾಲಿಪ ಸುಜನರ ಬೀರುತ ಜ್ಞಾನ ಲೀಲಾಮಯನವ ಸರಿಯೆಂತೆನ್ನಿ ಕೇಳಲು ಕ್ರೋಡನ ವಾಸಿಸೆ ಜಾಗ ಕೇಳುವರಾರೈ ನೀನಿರೆ ಯನ್ನ ಬೀಳುವರೆಲ್ಲರು ನಿನ್ನಡಿಭರದಿ ಧಾಳಿಯೆ ನನ್ನಯ ಪ್ರಭುತನವೆಂದ 14 ಮುಂದೆಯೆ ನೀನಿರು ನಾಹಿಂದಿರುವೆ ಬಂದವರೆಲ್ಲರು ನಿನಗೊಂದಿಸುತ ವಂದಿಸಲೆನ್ನದು ವಲಿಯುವೆನಾಗ ಮುಂದಿಹ ನಿನಗೇ ಮೊದಲಲಿ ಪೂಜೆ ಛಂದದಿ ಶಾಸನ ಹೀಗೇ ಬರದು ಮಂದಿರ ಕೆಡೆ ಕೊಡು ಎನ್ನಲು ನಗುತ ನಂದದಿ ನೀಡುತ ಹಾಗೆಯೆ ಎಲ್ಲ ಕಂದನ ಸೇವಿಸೆ ಬಕುಳೆಯ ಕೊಟ್ಟ 15 ತಗ್ಗಿರೆ ಸಾಧನ ವೆಗ್ಗಳಗೈವ ವೆಗ್ಗಳ ಸಾಧನೆ ತಗ್ಗಿಪ ದೈವ ಹಗ್ಗವು ಸರಿಇವ ನಿಚ್ಚೆಯು ಕೇಳಿ ಅಗ್ಗದ ಪ್ರಭುವರ ಇವತಾನಲ್ಲ ತಗ್ಗಿಸಿ ವಿಷಯ ಬಗ್ಗಿಸಿ ಮನವನು ಹಿಗ್ಗುತ ಭಜಿಸಲು ಚರಣ ಸರೋಜವ ತಗ್ಗದ ಸೌಖ್ಯವ ನೀಡುತ ಕಾವ ಮುಗ್ಗದೆ ಭವದಲಿ ಭಜಿಸಿರಿ ಬೇಗ 16 ಬಕುಳೆ ಯಶೋದೆಯು ಪೂರ್ವದಿ ಕೇಳಿ ರುಕ್ಮಿಣಿ ಮುದುವೆಯ ನೋಡದಲಾಕೆ ಉಕ್ಕಿದ ಮೋಹದಿ ಬಯಸಲು ನೋಡೆ ಭಕ್ತಳ ಬಯಕೆಯ ಸಿದ್ಧಿಸೆ ದೇವ ಬಕುಳೆಯ ಜನ್ಮದಿ ನಿಂದಿಹಳೆಂದು ಅಕ್ಕರೆಯಿಂದಲಿ ತಾ ಕರತಂದು ಚೊಕ್ಕಸುಕಂದನ ತೆರದಲಿ ನಿಂದ ಭಕ್ತಿಲಿ ಸೇವೆಯ ಗೈದಳು ಬಕುಳೆ 17 ನಾರಾಯಣ ಪುರ ನಾಮದ ನಗರಕೆ ದೊರೆಯೆನಿಸಿದ್ದನು ಆಕಾಶರಾಯ ಕೊರಗುತ ಬಹುದಿನ ಸುತರಿಲ್ಲೆಂದು ಧರಣಿಯ ಶೋಧಿಸೆ ಯಾಗಕ್ಕೆಂದು ದೊರಕಲು ಕಮಲವು ದೊಡ್ಡದು ಒಂದು ತೆರೆಯುತ ನೋಡಲು ಶಿಶು ತಾನೊಂದು ಬೀರುತ ಕಾಂತಿಯ ಕಾಣಿಸಲಂದು ದೊರಕಿತು ಕನ್ಯಾಮಣಿಯೆಂತೆಂದು 18 ಅರಮನೆ ಗಾ ಶಿಶು ಹರುಷದಿ ತಂದು ಸರಸಿಜಮುಖಿ ಪದ್ಮಾವತಿಯೆಂದು ಕರೆಯುತ ರಾಣಿಯು ಸಾಕುತ ಬಂದು ವರುಷಗಳುರುಳಲು ಕಾಲದಿ ಕನ್ಯೆ ಸಿರಿತೆರ ಲಕ್ಷಣ ಗಣದಿಂ ಬೆಳೆಯೆ ವರಿಸಲು ಈಕೆಯ ನರರಿಂದಾಗದು ಹರಿಯೇ ಸರಿವರವೆನ್ನುತ ಮನದಿ ಅರಸುತ ವರನಂ ಬಳಲಿದ ಧೊರೆಯು 19 ವೇದವತೀ ಈಕೆಯು ತ್ರೇತೆಯಲೆನ್ನಿ ಮಾಧವ ಮನತೆರ ತೆರಳುವ ಸೀತೆ ಮೋದದಿ ಸೇರಲ್ ಗಿರಿ ಕೈಲಾಸ ಖÉೀದಗಳುಣ್ಣುತ ಲಂಕೆಯಲಿದ್ದು ಸಾಧಿಸಿ ಖಳರವಿನಾಶವನಲ್ಲಿ ಮೇದಿನಿ ಸುತೆಯಳ ಸೇವಿಸಿ ಬಹಳ ಮೋದದಲಾಗಲಿಯಂದಳು ಸೀತೆ 20 ಶಕ್ರನು ಶಿಖಿಸಹ ಇದ್ದಹಾಗೆ ಲೋಕಕೆ ತೋರಲು ಸೀತೆಯ ರಾಮ ಚೊಕ್ಕ ಪರೀಕ್ಷೆಯ ನಡಿಸಲು ಶಿಖಿಯಲಿ ತಕ್ಕಣ ಬಂದರು ಸೀತೆಯರಿಬ್ಬರು ಅಕ್ಕರೆಯಿಂದಲಿ ನುಡಿಯುತ ಕಥೆಯು ಸಕ್ಕದಿ ನಿಂತಿಹ ಈಕೆಯ ನೀನು ಈಕ್ಷಿಸಿ ಪಿಡಿಕೈಯೆನ್ನಲು ಸೀತೆ ರಕ್ಕಸ ವೈರಿಯು ಮಡದಿಗೆ ನುಡಿದ 21 ಒಂದೇ ಬಾಣವು ಒಂದೇ ವಚನವು ಒಂದೇ ನಡತೆಯು ಒಬ್ಬಳುಮಡದಿ ಇಂದೆನಗೆಂಬುದು ತಿಳಿಯದೆ ನಿನಗೆ ಛಂದದಿ ಕಲಿಯಲಿ ನಡಿಸುವೆ ಬಯಕೆ ಇಂದ್ರನು ಅಗ್ನಿಯ ಪುಟ್ಟಲಿ ವಡಲಲಿ ಇಂದಿನ ಯುಗದಲಿಯನ್ನಲು ರಾಮ ವಂದಿಸಿ ನಡೆದರು ಎಲ್ಲರು ಆಗ ಹಿಂದಿನ ವರತೆರ ಬಂದಿಹಳೀಗ 22 ಭೂಸುರ ಪೊಟ್ಟಿಲಿ ಪುಟ್ಟುತ ಹಿಂದೆ ಶ್ರೀಶನ ಮಡದಿಯ ತಪದಿಂ ಮೆಚ್ಚಿಸಿ ಭಾಷೆಯ ಪಡದಿರೆ ಸವತಿಯ ಪಟ್ಟಕೆ ಘಾಸಿಯ ನೀಡುತ ರಾವಣ ಬಂದು ಆಶಿಸಿ ಸಂಗವ ದುಡುಕುತ ನುಡಿಯೆ ರೋಷದಿ ಶಾಪವ ನೀಡಿದಳೀಕೆ ನಾಶಕೆ ಕಾರಣಳಾಗುವೆ ನಾನೆ ಭ್ರಷ್ಟನೆಯೆನ್ನುತ ಶಿಖಿ ಸೇರಿದಳು 23 ಲಕ್ಷ್ಮೀ ವಿಭೂತಿಯೆ ಇವಳೆಂತೆನ್ನಿ ಲಕ್ಷಣ ನಿಭಿಡಿತಳಾಗಿಹ ಕನ್ಯೆ ಕುಕ್ಷಿಯು ತೆಳ್ಳಗೆ ಸಿಂಹಸುಮಧ್ಯಮೆ ಪಂಕಜ ನೇತ್ರೆಯು ಪಂಕಜವದನೆಯು ಪಂಕಜ ಗಂಧಿ ಭುಜಂಗ ಸುವೇಣಿ ಶಂಕರ ನಗೆನುಡಿ ಗುರುಲಾವಣ್ಯ ಶಂಖ ಸುಪದ್ಮಾರೇಖೆಗಳಿಂದ ಲಂಕೃತ ಅಂಗೈ ಪಾದಗಳ್ಹಾಗೆ 24 ಕಾಮನ ಬಿಲ್ಲನು ಹಳಿಯುವ ಹುಬ್ಬು ಸೋಮನ ಮೀರಿಪ ಯುಗಯುಗ ಕಾಂತಿ ಸಾಮಜಗಮನೆ ರಂಭೋರುಗಳು ಕೋಮಲ ಚಂಪಕ ನಾಶಿಕ ತುಟಿಗಳು ಕಾಮದ ಪೀವರ ಕುಚಯುಗಹಾಗೆ ಸು ನೇಮದಿ ಬೆಳದಿಹ ಪಲ್ಗಳ ರಾಜಿ ವಾಮನಿತಂಬಜಘನದ್ವಯವ ಭಾಮೆ ಸಫಾಲದಿ ಮೆರೆದಳು ತಾನು 25 ಈಕೆಯು ಕಮಲೆಯ ತೆರೆದಿಂ ಬೆಳೆದು ಸಾಕಲು ಕರೆದಳು ಕನಕಸುವೃಷ್ಟಿ ಕಾಕನು ಕಾಣದೆ ರಾಜನು ಮೆರೆದ ನಾಕವೆ ಎನಿಸಿತು ರಾಜನಮನೆಯು ಜೋಕೆಯಲೊಂದಿನ ಸಖಿಯರ ಕೂಡಿ ಈಕ್ಷಿಸೆ ಪುರವುದ್ಯಾನವ ಕುವರಿ ಸೌಖ್ಯದಿ ತೆರಳುತೆಯಿರುತಿರುವಲ್ಲಿ ನಾಕದ ನಾರದ ವದಗಿದನಲ್ಲಿ 26 ಹರಿಕಾರ್ಯಾಂಗನು ಬಂದನು ಎನ್ನುತ ಗುರು ಸತ್ಕಾರಂಗಳಗೈದು-ಆ ತುರ ತೋರಲು ತಿಳಿಯೆ ಭವಿಷ್ಯ ಕರಗಳ ನೋಡುತ ತೂಗುತ ತಲೆಯು ಸಿರಿತೆರ ಲಕ್ಷಣ ಕಾಣುವೆನಮ್ಮ ಹರಿಯೇ ಸರಿ ವರಿಸಲ್ ನಿನ್ನ ಅರಸುತ ಬರುವನು ತಾನೆ ನಿನ್ನ ಬರಿ ಮಾತಲ್ಲವು ನೋಡೆಂತೆಂದ 27 ಪರಿ ಹೊರಡಲ್ ಮುನಿಯು ಲಾಲಿಸಿ ª
--------------
ಕೃಷ್ಣವಿಠಲದಾಸರು
ಶ್ರೀ ಶ್ರೀನಿವಾಸ-ಶ್ರೀ ಭೂವಿಲಾಸ-ಶ್ರೀತಜನಪೋಷ -ಪಾಹಿಸುವೇಷ ಪ ಅಚ್ಯುತಮಾನ ಮದಚ್ಯುತವಿ ಪಚ್ಚಿನ್ಮನೋರಥ ನಿಚ್ವಿತ ಪಾಹಿ 1 ದುರಂತವಿಕ್ರಮ ದನುಜಾಂತಕ ಪಾಹಿ 2 ಗೋವಿಂದ ನತಸುಮ ನೋವೃಂದ ದಳಿತ ತಮೋವೃಂದ ಪೋಷಿತ ಗೋಬೃಂದ ಪಾಹಿ 3 ಕೊಶಮಾಂಪಾಹಿ 4 ಸುರವಾರಮಾಂಪಾಹಿ 5 ಸದನ ಗೋವಿಂದಮಾಂಪಾಹಿ6 ವಿಷ್ಣೋಸುಜನವರ್ಧಿಷ್ಣೋಸಂತೋಷಿತಜಿಷ್ಣು ಸುರಜೀಷ್ಣೋಮಾಂಪಾಹಿ 7 ನುತ ಬುಧಜನಪಾಹಿ 8 ಆಕ್ರಮನುಪಿತ ನಿಜಕ್ರಮ ಜಿತವಿಶ್ವಶಕ್ರಸಹಜ ತ್ರಿವಿಕ್ರಮ ಪಾಹಿ 9 ಸುರಕಾಮನ ಮುನಿಜನಪ್ರೇಮಮಾಂಪಾಹಿ 10 ಕೌಸ್ತುಭಕಂದರ ಪಾಹಿ 11 ಗೋಚರರಾಕೆಂದು ಪಾಹಿ 12 ಪದಪದ್ಮಮಾಂಪಾಹಿಂ 13 ಜಿತಕಾಮಮಾಂಪಾಹಿ 14 ದೊಷರಹಿತಗುಣ ಭೂಷಣ ನತಜನಪೋಷ- ಸಂತೋಷಿತ ಶೇಷಮಾಂಪಾಹಿ 15 ವಾಸುಕಿ ಶಯನ ವಿಕಾಶ ಕಮಲನಯ- ನಾಸುರದಮನ ಶರಾಸನ ಪಾಹಿ 16 ಪರಿತುಷ್ಟಮಾಂಪಾಹಿ 17 ವಿಹರಣ ಸಕಲ ಗುಣಾಭರಣಮಾಂಪಾಹಿ 18
--------------
ಸರಗೂರು ವೆಂಕಟವರದಾರ್ಯರು
ಶ್ರೀ ಸತ್ಯ ವಿಜಯತೀರ್ಥ ಚರಿತ್ರೆ ನಮೋ ಸತ್ಯ ವಿಜಯಾರ್ಯ ತೀರ್ಥರೇ ಸುಮಹ ಕಾರುಣ್ಯದಿಂ ಎನ್ನ ಪಾಪಗಳ ಮನ್ನಿಸಿ ವಿಮಲ ವಾಙ್ಮನೋಕಾಯದಲಿ ಶ್ರೀ ರಾಮ ಯದುಪತಿ ಸ್ಮರಣೆ ಇತ್ತು ಪಾಲಿಪುದು ಪ ಅಶೇಷ ಗುಣಗಣಾಧಾರ ವಿಭು ನಿರ್ದೋಷ ಹಂಸ ಶ್ರೀಪತಿಯಿಂದುದಿತ ಗುರುಪರಂಪರೆಗೆ ಬಿಸಜಭವ ಸನಕಾದಿ ದೂರ್ವಾಸ ಮೊದಲಾದ ವಂಶಜರು ಸರ್ವರಿಗೂ ಶರಣು ಶರಣೆಂಬೆ 1 ಅಚ್ಯುತ ಪ್ರೇಕ್ಷರಿಗೂ ಪರವಾಯು ಅವತಾರಾನಂದ ತೀರ್ಥರಿಗೂ ಉತ್ಕøಷ್ಠ ಗುರುತಮ ಮಧ್ವ ಆನಂದ ಮುನಿಗಳ ಕರಕಂಜಭವ ಸರ್ವ ಯತಿಗಳಿಗು ಶರಣು 2 ಮಾಧವ ಅಕ್ಷೋಭ್ಯ ಅದ್ವಿತೀಯ ಸುಸ್ಪಷ್ಟ ಟೀಕಾಗಳಿತ್ತ ಮೇಧಾಪ್ರವೀಣ ಜಯತೀರ್ಥಾರ್ಯರಿಗೂ ವಿದ್ಯಾಧಿರಾಜರಿಗೂ ನಮೋ ನಮೋ ಶರಣು 3 ವಿದ್ಯಾಧಿರಾಜರ ಶಿಷ್ಯರು ಈರ್ವರಲಿ ಮೊದಲನೆಯವರು ರಾಜೇಂದ್ರ ತೀರ್ಥರಿಗು ನಂತರ ಕೋವಿದೋತ್ತಮ ಕವೀಂದ್ರರಿಗೂ ತತ್ವಜ್ಞ ಶಿಷ್ಯವಾಗೀಶ ತೀರ್ಥರಿಗು ಶರಣು 4 ವಾಗೀಶ ತೀರ್ಥರು ಕವೀಂದ್ರ ಕರಜರು ವಾಗೀಶ ಕರಜರು ರಾಮಚಂದ್ರಾರಾರ್ಯರು ಈ ಗುರುಗಳಿಗೆ ಈರ್ವರು ಶಿಪ್ಯರು ಇಹರು ಬಾಗಿ ಶರಣಾದೆ ಈ ಈರ್ವರಿಗೂ 5 ಮೊದಲನೆಯವರು ವಿಭುದೇಂದ್ರತೀರ್ಥಾರ್ಯರು ವಿದ್ಯಾನಿಧಿ ತೀರ್ಥಾರ್ಯರ ಅನಂತರವು ವಿದ್ಯಾನಿಧಿ ಸುತರು ರಘುನಾಥತೀರ್ಥರು ವಂದಿಸಿ ಶರಣೆಂಬೆ ಇವರಿಗು ಇವರ ವಂಶಕ್ಕು 6 ರಘುನಾಥ ಕರಕಮಲಜಾತರಘುವರ್ಯರಿಗೆ ರಘೂತ್ತಮ ವೇದವ್ಯಾಸ ವಿದ್ಯಾಧೀಶ ವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯನಾಥ ಸತ್ಯಭಿನವ ಸತ್ಯಪೂರ್ಣರಿಗೆ ನಮಿಪೆ 7 ಸತ್ಯಾಭಿನವತೀರ್ಥರ ಮಹಿಮೆ ಬಹುಬಹುವು ಸುತಪೋನಿಧಿಯು ಶ್ರೀನಿವಾಸನ್ನೊಲಿಸಿಕೊಂಡಿಹರು ಸತ್ಯಪೂರ್ಣರಿಗೆ ಶಿಷ್ಯರು ಈರ್ವರು ಸತ್ಯವರ್ಯರು ಸತ್ಯವಿಜಯರು ಎಂದು 8 ಸತ್ಯ ಪೂರ್ಣಾರ್ಯರು ತಮ್ಮ ಗುರು ಸತ್ಯಾಭಿನವರ ಪದ್ಧತಿ ಅನುಸರಿಸಿ ಶ್ರೀಮಠ ಆಳುತ್ತ ಸತ್ಯವರ್ಯರನ್ನು ಗೋದಾವರಿ ಕ್ಷೇತ್ರ ವಿಜಯ ಮಾಡೆಂದು ಸತ್ಯವಿಜಯರನ್ನ ಕಳುಹಿದರು ಪೂರ್ವದಿಸೆಗೆ 9 ಸತ್ಯವರ್ಯರು ಗೋದಾವರಿ ಪಂಚವಟಿ ನಾಸಿಕ ತ್ರಿಯಂಬಕಾದಿ ಕ್ಷೇತ್ರ ಸಮೀಪ ವಿಜಯಮಾಡೆ ಸತ್ಯವಿಜಯರು ತೋಂಡದೇಶ ಚÉೂೀಳ ಪಾಂಡ್ಯಾದಿ ನಾಡಲ್ಲಿ ವಿಜಯ ಮಾಡಿದರು 10 ಜಯಶೀಲರಾಗಿ ದಿಗ್ವಿಜಯಮಾಡಿ ತೋಯಜಾಕ್ಷನಪಾದಐದಿದರು ನಿಯಮೇನ ಸತ್ಯವಿಜಯರು ಅಲಂಕರಿಸಿದರು ಪೀಠ 11 ಸತ್ಯಾಭಿನವ ಆರ್ಯರ ಸತ್ಯಪೂರ್ಣ ಗುರುಗಳ ಪದ್ಧತಿಯಲಿ ಸತ್ಯವಿಜಯಾರ್ಯರು ವೇದಾಂತವಾಖ್ಯಾರ್ಥ ದುರ್ವಾದ ಖಂಡನ ಅಧಿಕಾರಿಗಳಿಗು ಉಪದೇಶ ಮಾಡಿದರು 12 ಸೇತುಯಾತ್ರೆ ಮಾಡಲು ದಿಗ್ವಿಜಯ ಕ್ರಮದಲಿ ಬಂದರು ಆರಣಿಗೆ ತೋಂಡದೇಶದಲಿ ವಿಪ್ರ ಆರಣಿ ರಾಜನು ಸಂತಾನ ವೃದ್ಧಿಗೆ ಕೊರಗುತ್ತಿದ್ದ 13 ಯುಕ್ತಮರ್ಯಾದೆಗಳ ವೈಭವದಿಂದಲಿ ಸತ್ಯವಿಜಯರಿಗೆ ಮಾಡಿ ದೇವಾರ್ಚನೆ ಭೂದೇವರಿಗೆ ಭೋಜನಮಾಡಿಸಿದ ರಾಜನು ವೇದ್ಯವಾಯಿತು ಗುರುಗಳಿಗೆ ರಾಜನ ಕೊರತೆ 14 ಸತ್ಯವಿಜಯತೀರ್ಥಾರ್ಯರ ಗುರುವರ್ಯರು ಸಪ್ತದಶ ಅಕ್ಷರ ಮಂತ್ರ ಪ್ರತಿಪಾದ್ಯಹರಿದಯೆಯಿಂದ ಒದಗಿಸುವ ವಂಶವೃದ್ಧಿ ಎಂದು ಅನುಗ್ರಹಿಸಿ ಪೋದರು ದಿಗ್ವಿಜಯಕೆ ವರವು ಪೂರ್ಣವಾಯಿತು 15 ಸೇತುಯಾತ್ರೆ ದಿಗ್ವಿಜಯ ಪೂರಯಿಸಿ ಆ ಗುರುಗಳು ಮತ್ತು ಬಂದರು ಆರಣಿ ಕ್ಷೇತ್ರಕ್ಕೆ ಕೃತಜ್ಞ ಆ ರಾಜನು ಎದುರುಗೊಂಡು ಗುರುಗಳ ಪಾದದಲಿ ಶಿರವಿಟ್ಟು ಸ್ವಾಗತವನಿತ್ತ 16 ಸಂಸ್ಥಾನ ಮೂರ್ತಿಸ್ಥ ಹರಿಪೂಜಾ ವೈಭವವು ನಿತ್ಯ ಪ್ರವಚನ ಪಾಠಕೀರ್ತನೆ ಏನೆಂಬೆ ಸತ್ಯವಿಜಯರನ್ನ ರಾಜ ಅಲ್ಲಿಯೇ ಇರಬೇಕು ಎಂದು ಕೋರಿ ಒದಗಿಸಿದ ತಕ್ಕ ಸೌಕರ್ಯ 17 ಸತ್ಯವಿಜಯಾರ್ಯರಿಗೆ ದೇಹ ಅಧಾರೂಢ್ಯ ವೇದ್ಯವಾಯಿತು ಆರಣಿರಾಜನಿಗೆ ಭಕ್ತಿಶ್ರದ್ಧೆಯಿಂದಲಿ ಉಪಚಾರ ಮಾಡಿದನು ಮಾಧವಗೆ ಅರ್ಪಿಸುತಕೊಂಡರು ಗುರುಗಳು 18 ಶ್ರೀ ಸತ್ಯವಿಜಯತೀರ್ಥರ ಮಹಿಮೆ ಬಹು ಉಂಟು ಒಂದು ಮಾತ್ರ ಸ್ಥಾಲಿಪುಲಿಕನ್ಯಾಯದಲಿ ಈ ದಿವ್ಯ ಸಣ್ಣ ನುಡಿಗಳಲಿ ಪೇಳಿಹುದು ಮಾಧ್ವಯತಿ ಹರಿದಾಸ ಮಹಿಮೆಗಳಿಗೆ ಅಳವುಂಟೆ 19 ತಮ್ಮ ತರುವಾಯ ಸಂಸ್ಥಾನ ಆಡಳಿತವ ಶ್ರೀ ಮನೋಹರ ಹರಿ ಪ್ರಿಯರು ಸತ್ಯವರ್ಯ ಸುಮನೋಹರ ಸತ್ಯಪ್ರಿಯ ತೀರ್ಥನಾಮದಲಿ ರಮಾರಮಣಸೇವೆಗೆ ವಹಿಸಬೇಕೆಂದು 20 ಭಕ್ತಿಮಾನ್ ಆರಣಿ ರಾಜನಿಗೆ ಹೇಳಿ ಹಿತದಿ ಅನುಗ್ರಹಿಸಿ ಗುರುವರ್ಯ ಸತ್ಯವಿಜಯರು ಧ್ಯಾನದಿಂ ಐದಿದರು ಹರಿಪುರ ಚೈತ್ರ ಕೃಷ್ಣಪುಣ್ಯದಿನ ಏಕಾದಶಿ ದ್ವಾದಶಿಲಿ 21 ಮತ್ತೊಂದು ಅಂಶದಲಿ ಸತ್ಯವಿಜಯ ನಗರಾಖ್ಯ ಕ್ಷೇತ್ರ ಆರಣಿ ಸಮೀಪ ವೃಂದಾವನದೀ ಇದ್ದು ಸೇವಿಸುವ ಸುಜನರಿಗೆ ವಾಂಛಿತ ಒದಗಿಸುತ ಕುಳಿತಿಹರು ಹರಿಧ್ಯಾನ ಪರರು 22 ಸತ್ಯಲೋಕೇಶಪಿತ ಶ್ರೀಪ್ರಸನ್ನ ಶ್ರೀನಿವಾಸ ಪ್ರಿಯ ಸತ್ಯಾಭಿನವತೀರ್ಥ ಕರಕಂಜ ಜಾತ ಕರ ಕಾಯವಾಙ್ಮನದಿ ನಮೋ ಶರಣು ಮಾಂಪಾಹಿ 23
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸಾಯಿ ಸ್ತುತಿಗಳು ಪಾತಕ ಪರಿಹರ ನಿತ್ಯನಿರ್ಮಲ ನಾಮ ಭಾವುಕಪ್ರೇಮ ಪ ನುತ್ಯು ದಯಾಕರ ಶಂಕರ ಸುಖಂಕರ ಭೃತ್ಯ ಮನೋರಮ ನಿರ್ಜಿತಕಾಮ ಅ.ಪ ಶಾಂತಸ್ವಭಾವ ಪರಮಪ್ರಭಾವ ದಾಂತ ಕೃಪಾಕರ ಭವಪರಿಹಾರ ಮಂತ್ರಸುಧಾರ್ಣವ ಶೀತಳಭಾವ ಭ್ರಾಂತಿವಿದೂರ ಪುಣ್ಯಶರೀರ 1 ಅಗಣಿತ ಗುಣಗಣ ಸತ್ವ ನಿರೂಪಣ ಜಗದಾನಂದದಾ ವೂದಿ ಪ್ರಸಾದ ನಿಗಮಾಗಮಗಣ ವಿನಮಿತ ಚರಣ ನಗಜಾನಂದದ ಮಾಂಗಿರಿವರದ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಸುಬ್ರಹ್ಮಣ್ಯಸ್ತುತಿ ಮಾಮವ ಸುಬ್ರಹ್ಮಣ್ಯ ಹೈವiವತಿಸುತ ಘನಕಾರುಣ್ಯ ಪ ಕಾಮಿತದಾಯಕ ಭೀಮಪರಾಕ್ರಮ ಸಾಮಗಾನಪ್ರಿಯ ಕೋಮಲಕಾಯ ಅ.ಪ ವೇಲಾಯುಧ ಸಂಭ್ರಾಜಿತ ವರದಾ ನೀಲಕಂಠವಾಹನ ಚಿರಸುಖದಾ ಶ್ರೀಲಲಿತಾ ಮನಾಕರ್ಷಿತ ನಾದ [ಬಾಲ]ಕೇರಳಪುರವಾಸ ವಿನೋದ 1 ಭವಭಯನಾಶನ ಪವನ ಷಡಾನನ ರವಿಸಮಲೋಚನ ನವಮಣಿಸದನಾ ಭುವನಮನೋಹರ ಸಾಸಿರವದನಾ ಶಿವಪ್ರಿಯನಂದನ ತಾರಕದಮನಾ 2 ಸಂತನಾನತ ಶಾಂತವಿನೀತ ಸಂತತ ಮಾತಾ ಲಲಿತಾ ಸಹಿತಾ ಚಿಂತಿತಾರ್ಥದಾತಾರಾ ಕೃಪಾಯುತ ಅಂತರಾತ್ಮ ಮಾಂಗಿರಿಪತಿ ಶೋಭಿತ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಸುಮಧ್ವ ವಿಜಯಸ್ಥ ಅಷ್ಟೋತ್ತರ ಶತನಾಮಾವಳಿ ನಮಿಸುವೆ ಜಗದ್ಗುರುಗಳೇ ಪ ಅಮಿತ ಮಹಿಮನ ವಿಮಲ ಪದಪದ್ಮ ತೋರ್ವುದೆಮಗೇ ಅ.ಪ. ಭೂರಿ ವಿಶ್ವ ಭೂಷಣರೇ ಪಾಹಿಮಾಂ ಪಾಹಿ 1 ಪರಿಪೂರ್ಣ ಪ್ರಮತಿಯೇ | ಪುರುಸಂಖ್ಯ ಪೂರ್ಣೇಕ್ಷ ಅರವಿಂದ ಲೋಚನರೆ | ಗುರುಮತ್ಯಮಿತ ಬುದ್ಧಿ ಮರುದಂಶ ಪ್ರಚುರಧೀ | ಪುರು ಕರುಣ ಆಂಬುಧಿಯ ಮೇರೆಯನು ಮೀರಿದವರೆ || ಸರುವಿತ್ ಪೂರ್ಣದೃಕ್ | ಉರುಮತಿಯೆ ಸಕಲಜ್ಞ ಸರುಧೀ ಪೃಥು ಹೃದಾ | ಪುರುಧೀ ಪ್ರಭೂತಧೀಃ ಪರಮ ಆನಂದ ಸತ್ತೀರ್ಥ ಸೂರಿರಾಜಾಧಿ ರಾಜರೆ ಪಾಹಿ ಪಾಹಿ 2 ಫುಲ್ಲ ಬೋಧ ಬಹುಲ ಪ್ರಬೋಧರೇ | ಮಹೀಷ್ಟ ಸುಹೃದಯರೇ ಬಹುಲ ಬೋಧಾಖ್ಯರೇ | ಮಹಾ ಪುರುಷೋತ್ತಮನ ದಾಸರೊಳಧಿಕನೆ ಪಾಹಿ 3 ನಮೊ ನಮೋ ಧೀರಮತಿ | ನಮೊ ಪೃಥೂ ದರ್ಶನರೆನಮೊ ನಮೋ ಸುಖ ತೀರ್ಥ | ನಮೊ ಪೃಥುಲ ಚೇತಾತ್ಮನಮೊ ನಮೋ ಪೃಥುಮತಿಯೆ | ನಮೊ ನಮೊ ಸಮಗ್ರ ಧೀರ್ಸುಸ್ಮಿತೇಂದುಗಳೆ ಪಾಹಿ || ನಮೊ ವಿಪುಲ ಹೃದಯರೇ | ಅಮಂದಧಿಯೆ ಶುದ್ಧಧೀಃ ನಮೊ ನಮೋ ಸುವಿಚಾರ | ನಮೊ ದಾನವರ್ಭೀಮ ನಮೊ ಪುಷ್ಟ ಬುದ್ಧಿಯೇ | ನಮೊ ಪೃಥುಲ ಹರಿ ನಿಗೂಢ ಮೂರ್ತಿಯೆ ಪಾಹಿ ಪಾಹಿ4 ಆನಂತ ಬೋಧಾಖ್ಯ | ಅನೂನ ಬೋಧರು ಎನಿಪಆನಂದ ತೀರ್ಥಾಖ್ಯ | ಅನುಮಾನ ತೀರ್ಥರೇಸ್ವರ್ಣವರ್ಣಾಭಿಧರೆ | ಧನ್ಯ ಪ್ರವರರು ಎನಿಪ ಆದೀನ ಸತುವಾಭಿಧರೆ ||ಅನಂತಧಿಯ ಮಧ್ವ ಸು | ಪೂರ್ಣ ಸಂಖ್ಯ ಧೀರದಿಹನುಮಂತ ಕೃಷ್ಣೇಷ್ಟ | ಪ್ರಾಣೇತ ಪ್ರಾಜ್ಯೇಕ್ಷಆನಮಿಸಿ ಬೇಡ್ವೆ ಸಂ | ಪೂರ್ಣ ಪ್ರಮತಿಯೆ ತವ ಚರಣ ತೋರಿಸಿ ಸಲಹುವುದೂ 5 ಪಾಹ್ಯದ ಭ್ರಮನೀಷ | ಪಾಹಿ ಪ್ರಚುರ ಪ್ರಜ್ಞಪಾಹಿ ವಿಪುಲ ಪ್ರಮತಿ | ಪಾಹಿ ಆಯುತ ಚೇತಪಾಹಿ ಪೃಥು ಪ್ರಬೋಧಾ | ಪಾಹಿ ಪ್ರಬರ್ಹ ಬೋಧಾಖ್ಯರೇ ಪಾಹಿ ಪಾಹಿ ||ಪಾಹ್ಯ ಮಂದಮನೀಷ | ಪಾಹ್ಯದ ಭ್ರಸುಸಂಖ್ಯಪಾಹಿ ಬೃಹತು ಪ್ರಬೋಧ | ಪಾಹ್ಯತಿ ಭದ್ರ ಭಾಷಣಪಾಹ್ಯ ಪೂರ್ವ ಪುರುಷ | ಪಾಹಿ ದಶಧಿಷಣಾರ್ಯಾ ವರ್ಯ ಚರ್ಯರೇ ಪಾಹಿ 6 ಸಿರಿ ಮಾಧವನ | ಗುಣ ಸಾಧಕಾಗ್ರಣಿಯೆ ಪಾಹಿಮಾಂ ಪಾಹಿ ಪಾಹಿ 7 ವಾಸುದೇವ ಪರಿ | ಶಿಕ್ಷಣದಿ ದಕ್ಷನೆನಿಸುವನಿಗೇ ಜಯವಾಗಲಿ ||ಜಯ ಹರಿಗಧಿಷ್ಠಾನ | ಜಯ ಮುಖ್ಯ ಪ್ರತಿ ಬಿಂಬಜಯ ಜಯತುದಾರಮತಿ | ಜಯ ಹರಿದಯಿತ ವರನೆಜಯ ಶ್ರೀ ಮದಾನಂದ | ತೀರ್ಥಾರ್ಯವರ್ಯ ಜಯ ಜಯತು ನಿಮ್ಮ ಪದಗಳಿಗೇ 8 ಮಧ್ವಾಖ್ಯ ಶೃತಿಪ್ರತೀ | ಪಾದ್ಯರೆಂದೆನಿಸುತಲಿಮಧ್ವ ವಿಜಯಾಖ್ಯ ಪ್ರ | ಸಿದ್ಧ ಗ್ರಂಥದಿ ಪೊಳೆವಮಧ್ವಗುರು ತವನಾಮ | ಶಬ್ದಾಖ್ಯ ಮಣಿಗಳಷ್ಟೋತ್ತರದ ಮಾಲೆಯನ್ನೂ ||ಮುದ್ದು ಮೋಹಜ ತಂದೆ | ಮುದ್ದು ಮೋಹರಲಿರುವಮಧ್ವಗುರುವೇ ನಿಮ್ಮ | ಹೃದ್ಗುಹದಲಿರುವಂಥಮುದ್ದು ಗುರುಗೋವಿಂದ | ವಿಠ್ಠಲನಿಗರ್ಪಿಸುವೆ ಉದ್ಧರಿಪುದೆಮ್ಮ ಸತತ 9
--------------
ಗುರುಗೋವಿಂದವಿಠಲರು
ಶ್ರೀ ಹಯಗ್ರೀವ ಮಂತ್ರಸ್ತೋತ್ರ ಜ್ಞಾನ ಬಲಾನಂದಾದಿ ಸರ್ವಗುಣ ವಾರಿನಿಧಿ ಅನಿಷ್ಟಹರ ಇಷ್ಟಪ್ರದ ಹಯಗ್ರೀವ ಅನಘ ಸನ್ನುತ ಸೇವ್ಯ ಘನ ದಯಾಂಬುಧೇ ನಮೋ ಗುರುಗ ಲಕ್ಷ್ಮೀಶ ಪ ಕಮಲಾಸನ ಋಷಿಯು ಗಾಯತ್ರಿಛಂದಸ್ಸು ಅಮಲಾಷ್ಟಾಕ್ಷರ ಮಂತ್ರ ದೇವತೆ ಹಯಾಸ್ಯ ಸೋಮ ಮಂಡಲ ಸ್ಥಿತನು ಅಕಳಂಕ ಕಾಂತಿಮಾನ್ ಅಮೃತ ತನ್ನಯ ಸ್ವರೂಪ ಕಿರಣ ಸುರಿಸುವನು 1 ನಾಶರಹಿತನು ಅವ್ಯಯ ನಿತ್ಯೋ ನಿತ್ಯಾನಾಮ ಅಂಡ ಬಹಿರಂತರದಿ ಎಲ್ಲೂ ಪುಸ್ತಕ ಚಿನ್ಮುದ್ರೆಯು ಶಂಖಾಕ್ಷ ಮಾಲಾಧರ ಕಾಶಿಸುತಿಹ ತುರಗ ವದನ ಸರ್ವಜ್ಞ2 ಪೂರ್ಣ ಜ್ಞಾನಾತ್ಮನು ಪೂರ್ಣ ಐಶ್ವರ್ಯಾತ್ಮ ಪೂರ್ಣ ಪ್ರಭಾತ್ಮನು ಪೂರ್ಣ ತೇಜಾತ್ಮಾ ಪೂರ್ಣಾನಾನಂದಾತ್ಮನು ಪೂರ್ಣ ಶಕ್ತ್ಯಾತ್ಮನು ಪೂರ್ಣ ಗುಣನಿಧಿ ಸದಾ ನಿರ್ದೋಷ ಈಶ 3 ಪ್ರತಿವಾದಿ ಜಯಪ್ರದನು ಸರ್ವ ವಿದ್ಯಾದಾತ ಬುದ್ದಿ ಸ್ಥೈರ್ಯ ಸತ್ಜ್ಞಾನ ವರ್ಚಸ್ಸು ಈವ ಮುಕ್ತ್ತಿಸಾಧನೆ ಅಪರೋಕ್ಷಜ್ಞಾನವನಿತ್ತು ಸಾಧು ಅಧಿಕಾರಿಗಳ ಯೋಗಕ್ಷೇಮ ವಹಿಪ 4 ಏಕದಶÀ ಶತÀ ಸಹಸ್ರಾನಂತ ರೂಪನೇ ಸ್ವಗತ ಭೇದ ವಿಲ್ಲದ ಸುಪೂರ್ಣ ಸ್ವತಂತ್ರ ಶ್ರೀಕದಶ ವಿಧಿಪಿತ ಪ್ರಸನ್ನ ಶ್ರೀನಿವಾಸ ನಮೋ ವ್ಯಾಂ ಕಪಿಲದತ್ತÀ ವರಾಹಹಯಗ್ರೀವ 5 ಶ್ರೀ ಮಧ್ವಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು
--------------
ಪ್ರಸನ್ನ ಶ್ರೀನಿವಾಸದಾಸರು