ಒಟ್ಟು 3549 ಕಡೆಗಳಲ್ಲಿ , 130 ದಾಸರು , 2602 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ನಮ್ಮ ಮನೆಗೆ ಬೇಗನೆ ಗೋಪಾಲಕೃಷ್ಣಬಾರೋ ಶ್ಯಾಮ ಸುಂದರಾಂಗನೆ ಪಬಾರೊ ಭಾಮೆ ರುಕ್ಮಿಣೀಶ ಬಾರೊಯೋಗಿಹೃದಯವಾಸಬಾರೊ ದ್ವಾರಕಾಪುರೀಶ ಬಾರೊ ಭಕ್ತಜನರ ಪೋಷ ಅ.ಪಅಂದಿಗೆ ಕಾಲ್ಗೆಜ್ಜೆ ಸರಪಣಿ ಪಾಡಗರುಳಿಯುಕೆಂದಾವರೆಯು ಪೋಲ್ವಪಾದದಿನಂದಗೋಪತನಯಗೋಪವೃಂದದೊಳಗೆ ಕುಣಿದು ನಲಿದುಇಂದಿರೇಶ ಶ್ರೀಶನೆ ಬಂದೊಂದುಹೆಜ್ಜೆನಿಡುತ ಮುದದಿ 1ಉಟ್ಟದಟ್ಟಿಯು ಪಟ್ಟೆಚಲ್ಲಣ ಹವಳಕಟ್ಟುಗಟ್ಟಿ ಸರಪಣಿ ಕಿರುಗಂಟೆಯುಕಟ್ಟಿದ ಉಡುದಾರಗೆಜ್ಜೆಶ್ರೇಷ್ಠತನದಿ ಮೆರೆಯುತಿರಲುಪುಟ್ಟಬಾಲರೊಡನೆ ಪುಟ್ಟಪುಟ್ಟ ಹೆಜ್ಜೆನಿಡುತ ನಲಿದು 2ದುಂಡು ಕರಕೆ ಗುಂಡು ಬಿಂದಲಿ ಮುಂಗೈಮುರಿಗೆಉಂಗುರಗಳು ಶೋಭಿಸುತಲಿಬಂದಿ ಬಾಪುರಿಗಳು ತೋಳಬಂದಿ ನಾಗಮುರಿಗಿ ಕರದಿಚಂದ್ರನನ್ನು ಪಿಡಿದು ನಲಿದಸುಂದರಾಂಗ ಚೆಲುವ ಕೃಷ್ಣ 3ಪದಕ ಮುತ್ತಿನ ಸರಗಳ್ಹೊಳೆಯುತವೈಜಯಂತಿಮಾಲೆಸರಿಗೆ ಏಕಾವಳಿಗಳೊಲಿಯುತಪದುಮನಾಭ ನಿನಗೆ ದಿವ್ಯಮುದದಿಕೌಸ್ತುಭಮಾಲೆ ಹೊಳೆಯೆಯದುಕುಲೇಶ ಉಡುಪಿವಾಸಉದದಿ ಶ್ರೀಶಉದ್ಧವಸಖನೆ4ಸೋಮಸೂರ್ಯರ ಕಾಂತಿ ಸೋಲಿಪ ಮುಂಗುರುಳು ಮುಖವುಕಾಮಜನಕ ಕಮಲಲೋಚನಹೇಮಮಣಿ ಕಿರೀಟಕುಂಡಲಪ್ರೇಮತೋರ್ವ ಫಣಿಯ ತಿಲಕಶ್ರೀ ಮಹೀಶ ಶ್ರೀಶನೆ ಶ್ರೀ-ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ
ಬಾರೋ ಮಗನೆ ಬಳಲಿದೆಯಾಡಿಬಾರೊ ಮಗನೆ ಪ.ಎಲ್ಲಿಗೆ ಹೋಗಿದ್ಯೊ ಎನ್ನೆದೆಝಲ್ಲು ಝಲ್ಲು ಎನುತಲಿದೆಮೆಲ್ಲೆದೆಗಾರ್ತಿ ಗೊಲ್ಲತೀರು ನಿನ್ನಗಲ್ಲ ಕಚ್ಚಿಹರಲ್ಲೊ ಹಸುಳೆ 1ಬಾಡಿತೊವದನಇಂದಾರೊಳುಮಾಡಿದ್ಯೊಕದನಕಾಡುವ ಬಾಲ ಪ್ರೌಢಿಯರ ತೋರಿಸುನಾಡ ಬಿಟ್ಟವರನೋಡಿಸುವೆ ನಡೆ 2ಕೂಸಿನಾಟವಲ್ಲೊ ಜಟ್ಟಿಗನವಿೂಸಲಂಜಿಕಿಲ್ಲೊಹೇಸದೆ ಬೆಣ್ಣೆಯ ಸವಿದು ನಿರ್ದೋಷ ಕೃಷ್ಣ ನೀ ಘಾಸಿಯಾದೆ 3ಕೋಮಲಾಂಗವಿದು ಕಲ್ಲೆದೆಕಾಮಿನಿಯರೊಯಿದುಕಾಮುಕಿಯರತಿ ಪ್ರೇಮದಲಪ್ಪಪ್ಪಿದಾಮಸಡಿಲ್ಯದೆ ಶ್ರೀಮುರಾರಿ4ಮುದ್ದಿನಾಮೃತೆ ಬಾ ಪೊಂದೊಟ್ಟಿಲೊಳ್ನಿದ್ರೆಗೈಯಲಿಲ್ಲ ಎದೆಗದ್ದಿಗೆಲಿದ್ದು ನಲಿದಾಡೊ ಪೂರ್ಣಶುದ್ಧ ಪ್ರಸನ್ವೆಂಕಟ ಶ್ರೀಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಬಾರೋ ವೆಂಕಟಗಿರಿನಾಥ| ದಯ-ದೋರೈ ಭಕುತರ ಪ್ರೀತ ಪ.ಮಾರಪಿತ ಗುಣಹಾರ ಮಂದರ-ಧಾರ ದೈತ್ಯಸಂಹಾರ ಸುಜನೋದ್ಧಾರ ಮಮಹೃದಯಾರವಿಂದಕೆಬಾರೋ ಕೃಪೆದೋರೋ ವೆಂಕಟ ಅ.ಪ.ವೃಷಭಾಸುರನೊಳು ಕಾದಿ ಸಾ-ಹಸವ ಮೆರೆಸಿದ ವಿನೋದಿವಶಗೈದು ದೈತ್ಯನ ಶಿರವ ಕತ್ತ-ರಿಸುತಲಿ ನೀನಿತ್ತೆ ವರವವಸುಧೆಯೊಳಗಿಹ ಸುಜನರನು ಮ-ನ್ನಿಸುತಲಿಷ್ಟವನಿತ್ತು ಕರುಣಾ-ರಸದಿ ಸಲಹುವ ಬಿಸಜನಾಭ ಶ್ರೀ-ವೃಷಭಾಚಲವೊಡೆಯ ವೆಂಕಟ 1ಅಂಜನೆಯೆಂಬಳ ತಪಕೆ ಭಕ್ತ-ಸಂಜೀವನೆಂಬ ಶಪಥಕೆರಂಜಿಪ ಪದವಿತ್ತೆ ಮುದದಿ ಖಿಲ-ಭಂಜನಮೂರ್ತಿ ಕರುಣದಿ|ಮಂಜುಳಾಂಗ ಶ್ರೀರಂಗ ಸುರವರಕಂಜಭವವಿನುತಾದಿ ಮಾಯಾ-ರಂಜಿತಾಂಘ್ರಿ ಸರೋರುಹದ್ವಯಅಂಜನಾಚಲವೊಡೆಯ ವೆಂಕಟ 2ಶೇಷನ ಮೊರೆಯ ತಾಕೇಳಿಬಲುತೋಷವ ಮನಸಿನೊಳ್ತಾಳಿದೋಷರಹಿತನೆಂದೆನಿಸಿ ಕರು-ಣಾಶರಧಿಯ ತಾನೆ ಧರಿಸಿಶ್ರೀಶಹರಿಸರ್ವೇಶ ನತಜನ-ಪೋಷ ದುರ್ಜನನಾಶ ರವಿಶತ-ಭಾಸ ಕೌಸ್ತುಭಭೂಷವರಶ್ರೀ-ಶೇಷಾಚಲವಾಸ ವೆಂಕಟ 3ಮಾಧವವಿಪ್ರ ವಿರಹದಿ ಭ್ರಷ್ಟಹೊಲತಿಗಳನು ಸೇರ್ದ ಮುದದಿಸಾದರದಲಿ ನಿನ್ನ ಬಳಿಗೆ ಬರೆನೀ ದಯಾನಿಧಿ ಕಂಡು ಅವಗೆಶೋಧಿಸುತ ಪಾಪಗಳೆಲ್ಲವಛೇದಿ ಬಿಸುಡುತನಿಂದುವೆಂಕಟ-ಭೂಧರದ ನೆಲೆಯಾದ ನಾದವಿ-ಭೇದಬಿಂದು ಕಲಾದಿಮೂರುತಿ 4ಧನಪತಿಯೊಳು ತಾನು ಸಾಲಕೊಂಡಘನಕೀರ್ತಿಯಿಂದ ಶ್ರೀಲೋಲವನಿತೆ ಪದ್ಮಾವತಿಪ್ರೀತ ಭಕ್ತ-ಜನಸುರಧೇನು ಶ್ರೀನಾಥವನಧಿಶಯನ ಮುರಾರಿಹರಿಚಿ-ಧ್ವನಿನಿಭಾಂಗ ಸುಶೀಲ ಕೋಮಲವನಜನಾಭನೀಯೆನ್ನ ಕೃಪೆಯೊಳ-ಗನುದಿನದಿ ಕಾಯೊ ಕೃಪಾಕರ 5ಛಪ್ಪನ್ನೈವತ್ತಾರು ದೇಶದಿಂದಕಪ್ಪವಗೊಂಬ ಸರ್ವೇಶಅಪ್ಪ ಹೋಳಿಗೆಯನ್ನುಮಾರಿಹಣ-ಒಪ್ಪಿಸಿಕೊಂಬ ಉದಾರಿಸರ್ಪಶಯನ ಕಂದರ್ಪಪಿತ ಭಜಿ-ಸಿರ್ಪವರ ಸಲಹಿರ್ಪ ಕುಜನರದರ್ಪಹರಿಸುತ ಕಪ್ಪಕಾಣಿಕೆಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6ಚಾರುಚರಣತೀರ್ಥವೀಂಟಿ ನಿನ್ನೊ-ಳ್ಸಾರಿ ಬರುವ ಪುಣ್ಯಕೋಟಿಸೇರಿದೆ ಕೊಡು ಮನೋರಥವ ಲಕ್ಷ್ಮೀ-ನಾರಾಯಣನೆನ್ನೊಳ್ದಯವತೋರುನಿರತಸಮೀರಭವ ವರ-ದಾರವಿಂದದಳಾಕ್ಷ ತಿರುಪತಿವೀರ ವೆಂಕಟರಮಣ ಮದ್ಬಹು-ಭಾರನಿನ್ನದು ಪಾಲಿಸೆನ್ನನು7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾಲನ ನೋಡಿರೆನಿವಾಳಿಸಿಆಡಿರೆಕಾಲಅಂದುಗೆಕೈ ಕುಣಿಸದೆ ಸವಿಮಾತಾಲಿಪನ ನಮ್ಮಪ್ಪನ ಪ.ಬಾಲಕರನ್ನನ ಉಂಗುರುಗುರುಳಿನ ಸುಳಿಯೊಭೃಂಗಾವಳಿಯೊ ಶ್ರೀಲೋಲನ ವಿಸ್ತರ ಬಾಳವು ಕಳೆಗೇಡಿಯೊಪೊಂಗನ್ನಡಿಯೊಪಾಲ್ಗಡಲ ಪ್ರಭುವಿನೀ ಬಟ್ಟಗಲ್ಲಗಳೊಮರಿಯಾವಿಗಳೊಶೂಲಿಯ ಮುತ್ತಿದ ತಿದ್ದಿದ ಹುಬ್ಬಿನ ಹೊಳವೊನಿಂಬ ಸುದಳವೊ 1ಯದುಕುಲ ತಿಲಕನ ಢಾಳಿಪ ಕಂಗಳ ಠಾವೊತಾವರೆ ಹೂವೊಮದನನಯ್ಯನ ಮೀಟಿದ ಮೂಗಿನ ಕೊನೆಯೊಸಂಪಿಗೆ ನನೆಯೊಸದಮಲ ಲೀಲನ ಸೊಬಗಿನ ನಾಸಾಪುಟವೊಮುತ್ತಿನ ಬಟುವೊವಿಧುವಂಶೇಂದ್ರನ ವೃತ್ತ ಮನೋಹರ ವದನೊಮೋಹದ ಸದನೊ 2ಸುರರುಪಕಾರಿಯ ಎಳೆದುಟಿಯ ಕೆಂಬೊಳವೊಬಿಂಬದ ಫಲವೊಗರುಡಾರೂಢನ ಮೊಳೆವಲ್ಲುಗಳ ಬಿಳುಪೊಕುಂದಕುಟ್ಮಳವೊಕರುಣಾಂಬುಧಿಯ ಕಿವಿ ಶುಕ್ತಿಯೊ ಗದ್ದೊಮುದ್ದಿನ ಮುದ್ದೊಶರಣರ ಪ್ರಿಯನ ತ್ರಿರೇಖೆಯ ಕಂದರವೊ ಸುಂದರದರವೊ 3ದೇವಕಿತನಯನ ಪುಷ್ಟಯುಗಳದೋರ್ದಂಡೊಕಲಭದ ಶುಂಡೊದೇವವರೇಣ್ಯನ ಕರತಳದಂಗುಲಿ ಸರಳೊಕೆಮ್ಮಾಂದಳಿಲೊಭಾವಿಕ ಜನಜೀವನ ಪೀನೋನ್ನತ ಉರವೊವಜ್ರದ ಭರವೊಸೇವಕಪಕ್ಷನ ಉದರದವಲ್ಲಿತ್ರಿವಳಿಯೊ ಅಮರರಹೊಳಿಯೊ 4ಅಜನಯ್ಯನ ಅಚ್ಯುತನ ನಾಭಿಯ ಸುಳಿಯೊಅಮೃತದೊಕ್ಕುಳಿಯೊತ್ರಿಜಗದ ಗರ್ಭ ವಿನೋದಿಗಳರಸನ ಮಣಿಯೊಪಚ್ಚದ ಮಣಿಯೊಸುಜನರ ಮಾನಿಯ ಬಟ್ಟದೊಡೆಯ ಸಂರಂಭೋಎಳೆವಾಳೆಯ ಕಂಭೋಗಜವರದನ ಗೋವಿಂದನ ಜಾನುಗಳ ಪೊಗರ್ವೊಹರಿಮಣಿಯ ಪೊಗರ್ವೊ 5ತ್ರಿಗುಣಾತೀತನಂತನ ಜಂಘಗಳಿಳಿಕ್ಯೊ ಶರಬತ್ತಳಿಕ್ಯೊನಿಗಮಾಗಮ್ಯನ ಚರಣಯುಗಂಗಳ ನಿಜವೊಅರುಣಾಂಬುಜವೊಮೃಗನರರೂಪನ ಅನುಪಮ ನಖಗಣ ಮಣಿಯೊಬಾಲಖಮಣಿಯೊಸುಗಮನ ಪದತಳದಂಕುಶ ಧ್ವಜಾಂಬುರೇಖೆÉ್ಯೂೀವಿದ್ಯುರ್ಲೇಖೆÉ್ಯೂ 6ಆಭರಣಗಳಿಗೆ ಆಭರಣವೆ ಎಳೆಗರುವೆ ಕಲ್ಪತರುವೆಸೌಭಾಗ್ಯದ ಶುಭಖಣಿಯೆ ನಂದಾಗ್ರಣಿಯೆ ಚಿಂತಾಮಣಿಯೆ ನಿನ್ನ ಬಿಗಿದಪ್ಪುವ ಭಾಗ್ಯವಿನ್ನೆಂತೊಉಮ್ಮುಕೊಡು ನಮ್ಮಮ್ಮಶ್ರೀಭೃತ ಪ್ರಸನ್ವೆಂಕಟ ಕೃಷ್ಣ ತಮ್ಮ ಬಾ ಪರಬೊಮ್ಮ 7
--------------
ಪ್ರಸನ್ನವೆಂಕಟದಾಸರು
ಬಿದಿಗೆಯ ದಿವಸ(ಹನುಮಂತನನ್ನು ಕುರಿತು)ಸಮನಸನಾಗಿ ತೋರುವನಲ್ಲೆ ನೀರೆ ಪ.ಧನ್ಯನಾಗಿರುವ ದೊರೆಯ ಧರಿಸುತ್ತಚೆನ್ನಿಗನಾಗಿ ತೋರುವನಲ್ಲೆ ಈತ 1ಪಟ್ಟೆಕಂಬಿಯ ನಿರುದುಟ್ಟುಕೊಂಡಿರುವಕಟ್ಟಿದುತ್ತರೀಯ ಭೂಷಣದಿಂದ ಮೆರೆವ 2ಸೋಮಾರ್ಕಶಿಖಿಯಂತಿರುವುದು ತ್ರಿನಾಮರಾಮಣೀಯಕ ಮನೋಹರ ಪೂರ್ಣಕಾಮ 3ವೀರವೈಷ್ಣವ ಮುದ್ದು ಮೋಹನಕಾಯಭೂರಿಭೂಷಣಭುಜಬಲ ಹರಿಪ್ರಿಯ 4ರೂಪನೋಡಲು ಕಾಮರೂಪನಂತಿರುವಚಾಪಲ ಪ್ರೌಢ ಚಿದ್ರೂಪನಂತಿರುವ 5ಬಾಲವ ನೆಗಹಿ ಕಾಲೂರಿ ಶೋಭಿಸುವನೀಲದುಂಗುರದ ಹಸ್ತವ ನೀಡಿ ಮೆರೆವ 6ಗೆಜ್ಜೆ ಕಾಲುಂಗರ ಪದಕಕಟ್ಟಾಣಿಸಜ್ಜನನಾಗಿ ತೋರುವನು ನಿಧಾನಿ 7ಊರ್ವಶಿ :ತರುಣಿ ಕೇಳೀತನೆ ದೊರೆಮುಖ್ಯಪ್ರಾಣವರನಿಗಮಾಗಮ ಶಾಸ್ತ್ರಪ್ರವೀಣ1ಮಾಯವಾದಿಗಳ ಮಾರ್ಗವ ಖಂಡಿಸಿದವಾಯುಕುಮಾರ ವಂದಿತ ಜನವರದರಂಭೆ : ದಿಟವಾಯ್ತು ಪೇಳ್ದ ಮಾತಾದರು ಜಾಣೆಚಟುಳ ಹನುಮನ ಉತ್ಕಟರೂಪ ಕಾಣೆ 1ವಾಮನನಾದ ಕಾರಣವೇನೆ ಪೇಳೆನಾ ಮನಸೋತೆ ಎಂತುಂಟೊ ಹರಿಲೀಲೆ 2ಊರ್ವಶಿ : ನಾಗವೇಣಿ ನೀ ಕೇಳೆ ನಾಗವೈರಿಯೊಳುಸಾಗಿತು ಸೇವೆಯೆಂಬುದು ಮನಸಿನೊಳು 1ವಾದವ ಮಾಡಿ ವಿನೋದದಿ ಹರಿಯಪಾದಸೇವೆಗೆ ಮನನಾದ ಕೇಳಿದೆಯೊ 2ವೀರ ವೇಷವನಿದ ಕಂಡು ಶ್ರೀಹರಿಯದೂರವಾದನೋ ಎಂದು ಮನದೊಳು ನಿಜವು 3ತೋರಲು ಬೇಗದಿ ದೊರೆ ಹನುಮಂತಭೂರಿಭೂಷಣ ಸುಂದರ ರೂಪವಾಂತ 4ಇಂದಿನ ಸೇವೆಯೆನ್ನಿಂದತಿ ದಯದಿಮಂದರಧರಿಸಿಕೊಳ್ವುದು ಎಂದು ಭರದಿ 5ಒಯ್ಯನೆ ಪೇಳುತ್ತ ವಯ್ಯಾರದಿಂದಕೈಯನು ನೀಡಿ ಸಾನಂದದಿ ಬಂದ 6ಕಂತುಪಿತನು ಹನುಮಂತ ಮಾನಸಕೆಸಂತಸ ತಾಳಿ ಆನಂತನು ದಿಟಕೆ 7ಏರುತ ಹನುಮನಭೂರಿವೈಭವದಿಸ್ವಾರಿಯು ಪೊರಟ ಸಾಕಾರವ ಮುದದಿ 8ತೋರಿಸಿ ಭಕ್ತರಘೋರದುರಿತವಸೂರೆಗೊಳ್ಳುವನು ವಿಚಾರಿಸಿ ನಿಜವ 9ಹದನವಿದೀಗೆಲೆ ಬಿದಿಗೆಯ ದಿನದಿಮದನಜನಕನು ಮೈದೋರುವ ಮುದದಿ 10ಪ್ರತಿದಿನದಂತೆ ಶ್ರೀಪತಿ ದಯದಿಂದಅತಿಶಯ ಮಂಟಪದೊಳು ನಲವಿಂದ 11ಎಂತು ನಾ ವರ್ಣಿಪೆ ಕಂತುಜನಕನಅಂತ್ಯರಹಿತ ಗುಣಾನಂಮಹಿಮನ 12ಏಕಾಂತದಿ ಲೋಕೈಕನಾಯಕನುಶ್ರೀಕರವಾಗಿ ನಿಂದನು ನಿತ್ಯಸುಖನು 13* * *ರಂಭೆ : ಇವನತಿಜಾಣನಮ್ಮಾ ಇವನ್ಯಾರಮ್ಮಾ ಪ.ಇವನತಿಜಾಣ ಲಕ್ಷ್ಮೀಧವನಿಗಿಂತಲು ಮುಂದೆತವಕದಿ ಬರುವತ್ತಿತ್ತವರನ್ನು ನೋಡದೆ 1ಅಂದಣವೇರಿ ಮತ್ತೊಂದ ತಾ ನೋಡದೆಒಂದೇ ಮನದಿ ಬೇಗ ಮುಂದೆ ಬರುವನಮ್ಮಾ 2ಬಾಲಬ್ರಹ್ಮಚಾರಿ ಶಿಲೆಯಂತಿರುವನುಅಲೋಚಿಸಲಿವ ಮೂಲಪುರುಷನಮ್ಮಾ 3ಪುಟ್ಟನಾದರು ಜಗಜಟ್ಟಿಯಂತಿರುವನುದಿಟ್ಟನಿವನವನ ಮುಟ್ಟಿ ನೋಡಮ್ಮ 4ಊರ್ವಶಿ :ನಾರೀ ಇವನೀಗಹೊಂತಕಾರಿಲೋಕಕ್ಕಾಧಾರಿಪ.ಕೊಬ್ಬಿದ ದೈತ್ಯರಿಗೀತನೆಕಾಲಹಬ್ಬುವದಾತ್ಮಕ್ಕೀತನೆ ಮೂಲಉಬ್ಬುವ ಹರಿಯೆಂದರೆ ಮೈಯೆಲ್ಲಒಬ್ಬನಿಗಾದರೂ ಬಗ್ಗುವನಲ್ಲ 1ಎಲ್ಲಿರುವನುಹರಿಅಲ್ಲಿಹನೀತಬಲ್ಲಿದನಾರಾಯಣಗಿವ ದೂತಖುಲ್ಲರ ಮನಕತಿ ಝಲ್ಲೆನುವಾತಸುಲ್ಲಭನೆಯಿವ ಮುಂದಿನ ಧಾತ 2ಭೇದವಿಲ್ಲೆಂಬುದವರಿಗೆಯಿವ ತುಂಟಮೇದಿನಿಬಾಧಕರಿಗೆ ಯಿವ ಕಂಟಆದಿ ಮೂರುತಿ ಕೇಶವನಿಗೆಬಂಟಮಾಧವಭಕ್ತರಿಗೀತನೆ ನೆಂಟ 3ದುರಿತಾರಣ್ಯದಹನ ನಿರ್ಲೇಪವರವೆಂಕಟಪತಿಯಿದಿರೊಳಗಿಪ್ಪಪರಮಾತ್ಮನ ಪರತತ್ತ್ವ ಸ್ವರೂಪಮರೆಮಾತೇನಿವ ದೊರೆ ಹನುಮಪ್ಪ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಿಲ್ವೊದೇಶ್ವರ ಶ್ರೀ ಮದುಮಾವಲ್ಲಭಸಂತತ ಪಾಲಯಮಾಂಪ.ನಾಕಪವಂದ್ಯ ಕೃಪಾಕರ ಪಾಪನೇಕ ನಿವಾರಕ ಮೂಕಹರಲೋಕೇಶೇಶ ನಿಶಾಕರ ಶೇಖರಶ್ರೀಕರಕಾಯ ಪಿನಾಕಧರ 1ಭುಜಗಾಭರಣ ಗಜಮದಹರಣಗಜಚರ್ಮಾಂಬರ ಸುಜನವರದ್ವಿಜರವಿ ವೃಷಧ್ವಜಾಸಮಲೋಚನರಜನೀಚರ ತ್ರಿಪುರಜಮಥನ 2ದುರ್ಧರ್ಷಾಂಧಕ ಮದರ್Àಕ ಶಂಭೊನಿರ್ದೋಷ ಶ್ವೇತಾದ್ರಿ ಪ್ರಭೊಸ್ವರ್ಧುನಿಸಹಿತ ಕಪರ್ದಿನ್ ಶಿವಶಿವಊಧ್ರ್ವ ಪಟಾರ್ಚಕವದನಭೋ3ಗರಕಂಧರ ವೃಷಚರ ಅದ್ಭುತ ನಿಕರಪರಿಚರ ಪಾಂಡುರಗಾತ್ರಶಿರಮಾಲಾನ್ವಿತ ಸ್ಫುರತ್ಕಪಾಲಿನ್ಹರಹರಭವಸುಖಕರ ಮೂರ್ತೆ4ಶಂಕರ ಸುಗುಣಾಲಂಕೃತ ಭಕ್ತಾತಂಕವಿದೂರಕ ಶಂಖ ರಥಾಂಗಾಂಕಿತ ಪ್ರಸನ್ವೆಂಕಟನಾಯಕಕಿಂಕರಜನಪ್ರಿಯ ತ್ವಂ ಕೃಪಯಾ5
--------------
ಪ್ರಸನ್ನವೆಂಕಟದಾಸರು
ಬುದ್ಧಿ ಧೃತಿಯೆಂಬ ನಾರೇರು ಶ್ರೀಮುದ್ದು ಕೃಷ್ಣನ ಒಲಿಸಿಕೊಂಡರು ಪ.ಅಕ್ಕ ಬುದ್ಧಿವಂತೆ ತಂಗಿಗೆ ಬಲುನಿಕ್ಕರದಲಿ ಹಿತವಾಡಿದಳುಚಿಕ್ಕವಳೆಂದಂಜದೆÉ ಧೃತಿಯು ತಮ್ಮಕ್ಕನೊಳು ಬಡಿದಾಡಿದಳು 1ಕಟ್ಟಲೆ ಮೀರಿ ಮಾತಾಡದಿರೆ ತಂಗಿಸಿಟ್ಟು ಬರುತಿದೆ ಕಾಡದಿರೆಕಟ್ಟಲೆ ಮೀರಿ ಮೊದಲೆ ನವೆದೆ ನಿನ್ನಕಟ್ಟಿನೊಳಗೆ ಸಿಕ್ಕಿ ಬಲು ದಣಿದೆ 2ಒಗತನ ದಾರದೆ ಸಣ್ಣವಳೆ ನೀಜಗಳಕ್ಕೆ ನಿಂತೆ ದೊಡ್ಡೆದೆಯವಳೆನಗೆಗೇಡು ಮಾಡಿಕೊಂಡೆಲೆಯಕ್ಕ ನಿನಗೊಗತನ ನನ್ನಿಂದ ತಗಲಕ್ಕ 3ಹರಿನಿನಗೆ ದಕ್ಕಿದನೆಂದು ಉಣ್ಣದುರಿಯಬೇಡೆಲೆ ತಂಗಿ ಹೋಗಿಂದುಅರಸ ದಕ್ಕುವನೆ ಇನ್ನಾರಿಗೆ ಅಕ್ಕಕಿರುಕುಳು ಮಾತ್ಯಾಕೆ ಹಿರಿಯಳಿಗೆ 4ನನ್ನ ಹಿರಿಯತನ ಕೆಣಕಿದ್ಯಲ್ಲೆನನ್ನ ಕಣ್ಣ ಮುಂದೆ ನಿನ್ನೆ ಬಂದವಳೆಹುಣ್ಣಿಮೆ ಚಂದ್ರ ದಿನಕೆ ಹಿರಿಯ ಜಗಮನ್ನಣೆಗೆ ಬಾಲಚಂದ್ರನಲ್ಲೆ 5ಪಟ್ಟ ನನ್ನದು ಮೊನ್ನೆ ಬಂದವಳೆ ನಿನ್ನದಿಟ್ಟತನವನೇನ ಹೇಳಲೆಕೃಷ್ಣ ನಿನಗೆ ದೂರನಲ್ಲೆ ಅಕ್ಕ ಹರಿಯಗುಟ್ಟಿನ ಮೋಹವೆ ನನಗೆ ಅಕ್ಕ 6ತಂಗಿ ಮನವ ನೋಯಿಸ್ಯಾಡದಿರೆ ಶ್ರೀರಂಗನೆನಗೆರವು ಮಾಡದಿರೆಮಂಗಳ ಮಹಿಮ ಮುರಾರಿಯ ಅರ್ಧಾಂಗಿಯೆ ನಾ ನಿನಗೆ ಸರಿಯೆ 7ಹಿರಿಯ ಕಿರಿಯಳಲ್ಲ ಸರಿ ಹೇಳೆಹರಿಗೆರವಿನ ಮಾತಿಲ್ಲಖರೆಕೇಳೆಪರಮಪುರುಷ ವಾಸುದೇವನೆ ಕೊಟ್ಟವರಕೆಂದು ತಪ್ಪದೆ ಕಾವನೆ 8ಕನ್ಯೆ ಲಕ್ಷುಮಿಯ ರಮಣನೆ ಸ್ವಾಮಿತನ್ನ ನಂಬಿದವರ ಹೊರೆವನೆಪುಣ್ಯ ಗೋಪೀಜನಜಾರನೆ ಪ್ರಸನ್ನವೆಂಕಟಪತಿ ಧೀರನೆ 9
--------------
ಪ್ರಸನ್ನವೆಂಕಟದಾಸರು
ಭಜಿಸಿ ಬಹು ಭಕುತಿಯಿಂದತ್ಯಜಿಪ ಭವಬಂಧನವ ಹರಿಯ ಪದವ ಪ.ಮನವೈರಿಯಂ ಪಿಡಿದು ಮಿತ್ರನಂ ಮಾಡಿ ಕೊಂಡನುನಯದಿ ವೈರಾಗ್ಯ ಘನಸಿರಿಯೊಳುದಿನದಿನಕೆ ಮುದವೇರಿ ತಾತ್ವಿಕರೊಡನೆ ಮಧ್ವಮುನಿರಾಯನೊರೆದಪರಿಹರಿಯ ಪಾದವ1ತುದಿಮೊದಲೆ ಸರ್ವಕಾಲಕೆ ಚಿಂತನೆಯ ಬಲಿದುಪದುಮಾಕ್ಷನಾಕೃತಿಯ ನೋಡಿ ದೃಢದಿಕದಲಗುಡದಂತಃಕರಣ ಸ್ನೇಹ ಸಾರವನುಹೃದಯ ಮಂಟಪದೊಳಗೆ ಹರಿಯ ಪದವ 2ಹರಿಪರಾತ್ಪರ ಲಕುಮಿ ಅರಸಿ ಅಜಕುವರ ಹರವರಪೌತ್ರ ಸುರಮುನಿಜನರು ದಾಸರುತರತಮದ ತಂತ್ರಸಾರ್ಥದಿಂನೆರೆನಂಬಿಅರಸ ಪ್ರಸನ್ವೆಂಕಟ ಶ್ರೀಹರಿಯ ಪದವ 3
--------------
ಪ್ರಸನ್ನವೆಂಕಟದಾಸರು
ಭಳಿ ಭಳಿರೆ ಬಲಭೀಮ ಭಳಿರೆ ಸದ್ಗುಣಧಾಮಭಳಿರೆ ದ್ರೌಪದಿನಾಥ ಭಳಿರೆ ಶ್ರೀಹರಿದೂತಭಳಿರೆ ಅಪ್ರತಿಚರಿತ ಭಳಿರೆ ಬಲದೇವಸುತಭಳಿರೆ ಭೂಮಿಪಲಲಾಮ ಭೀಮ ಪ.ಯೋಚಿಸಿ ಖಳರು ನೆರೆದು ಭೂಚಕ್ರವಾಕ್ರಮಿಸೆಶ್ರೀ ಚಕ್ರಿ ದಯದಿ ಅಮೃತ ರೋಚಕುಲಜಾತ ಪಾಂಡು ಚಕ್ರವರ್ತಿ ಕಮಲಲೋಚನೆಯ ಪೃಥೋದರಾಬ್ಧಿ ಚಂದ್ರನಂತೆ ಜನಿಸಿಆ ಚಕ್ಷುವಿಹೀನ ಭವಾಬ್ಧಿಚೋರರೆದೆಶೂಲಗೋಚರಿಸುವಂತಿಳೆಗೆ ಸೂಚಿಸಿ ಮುಖೋದಯವಕೀಚಕ ಹಿಡಿಂಬ ಬಕ ನೀಚಮಾಗಧಮುಖರವಾಚಿಸಗುಡದೆ ಬಡಿದೆ ಭೀಮ 1ಕೊಬ್ಬಿದ ಖಳರು ಧಾತ್ರಿಗುಬ್ಬಸವ ತೋರುತಿರೆಅಬ್ಬರದಿ ಕರದ ಗದೆಗ್ಹಬ್ಬದೌತಣವಿಡುತಒಬ್ಬೊಬ್ಬರೊಮ್ಮೆ ಹನ್ನಿಬ್ಬರನ ಕರೆದುಉಬ್ಬುಬ್ಬಿ ರಣದಿ ಕುಣಿದೆಹಬ್ಬಿ ಬಹ ನಾಗರಥನಿಬ್ಬರದ ಬಿಂಕದವರೆಬ್ಬಿಸಿ ನಭಕೆ ಚಿಮ್ಮಿ ಬೊಬ್ಬಿರಿದು ಕೌರವರನಿಬ್ಬಗೆದು ಡಾಕಿನಿಯ ಉಬ್ಬಿಸಿದೆ ನಿನಗೆಪಡಿಹೆಬ್ಬುಲಿಗಳುಂಟೆ ಜಗದಿ ಭೀಮ 2ನಿರ್ಧರ ಪರಾಕ್ರಮ ಧನುರ್ಧರರ ಬೀಳ್ಗೆಡಹಿಸ್ವರ್ಧಾಮಗರು ತುತಿಸೆ ದುರ್ಧಾರ್ತರಾಷ್ಟ್ಟ್ರರಂದುರ್ಧಾಮಕೆಬ್ಬಟ್ಟಿದುರ್ಧರ್ಷಗುರುರಥವನೂಧ್ರ್ವಕ್ಕೊಗೆದುಲಿದು ಚೀರ್ದೆದುರ್ಧರ ಖಳಾನುಜನ ಮೂರ್ಧ ಕಾಲೊಳು ಮೆಟ್ಟಿಶಾರ್ದೂಲನಂದದಿ ಕೆಡದೊಡಲಿನಅರುಣಜಲಪೀರ್ದಂತೆ ತೋರ್ದೆ ಗೋವರ್ಧನಧರನನುಜÕವಾರ್ಧೀಸ್ಯರ್ಪಿಸಿದೆ ಮಝರೆ ಭೀಮ 3ಕಡಲೊಡೆಯನೆಡೆಗೆ ಬಲುಕೆಡುನುಡಿಯ ನುಡಿದವರಪಿಡಿ ಪಿಡಿದು ಖಡುಗದಿಂ ಕಡಿಕಡಿದು ಕಡೆಗಾಲದಮೃಡಕೋಟಿಯಂದದಲಿ ಕಡುರೋಷದಡಿಗಡಿಗೆಘುಡುಘುಡಿಸಿ ಹುಡುಕಿ ತುಡುಕಿಷಡಕ್ಷೋಹಿಣಿ ಪಡೆಯ ಹುಡಿ ಹುಡಿಗುಟ್ಟಿ ಪೊಡವಿ ದಿಗ್ಗಡಣ ಜಯದಂತಿ ಧಿಮ್ಮಿಡಿಸಿ ಕರ್ಮಡು ಪೊಕ್ಕುಕಡುಗಲಿಯ ತೊಡೆಮುರಿಯೆ ನಡುಮುರಿಯೆ ಗದೆಯಿಂದಹೊಡೆದೆಶಸುಪಡೆದೆ ಜಗದಿ ಭೀಮ 4ಅಪ್ಪಳಿಸಿ ಕುರುಪತಿಯ ಚಿಪ್ಪೊಡೆಯೆ ತಲೆದುಳಿದುಬಪ್ಪುವಾರುಷವೆಂಬ ಸುಪ್ತಸೂತ್ರದಿ ಅಜನಬೊಪ್ಪ ಕೃಷ್ಣನ ಕಟ್ಟುವ ಪರಾಕ್ರಮಿಗೆನುತಸುಪ್ರಾಯಶ್ಚಿತ್ತವೆನುತತಪ್ಪುಗಳನೊಂದೊಂದ ನೆಪ್ಪೆತ್ತಿ ತನ್ಮತಿಗೆಹೆಪ್ಪೆನುವ ವಾಗ್ಬಾಣ ಕುಪ್ಪಳಿಸಿ ಕೊಂದು ಶ್ರೇಯಃಪತಿ ಪ್ರಸನ್ವೆಂಕಟಾರ್ಪಣವ ಮಾಡಿ ವೈಷ್ಣವ ಪ್ರತತಿಯನು ಪೊರೆದೆ ಭೀಮ 5
--------------
ಪ್ರಸನ್ನವೆಂಕಟದಾಸರು
ಭಾಗೀರಥಿ ದೇವಿ ನಮೋ ||ಭಾಗೀರಥಿ ದೇವಿ ಭಯ ನಿವಾರಣ ಗಂಗೆ |ಸಾಗರನರ್ಧಂಗೆ ಸುತರಂಗೆ ಪವಾಮನ ವಾಮ ಪಾದಾಂಗುಷ್ಟನಖಸೋಕಿ |ಆ ಮಹ ಬ್ರಹ್ಮಾಂಡ ಸೀಳಾಲೂ | ಭಾಗೀ..... ||ತಾಮರಸಜ ಲೋಕಕ್ಕಿಳಿದು ಮಜ್ಜನವಾಗಿ |ಸ್ವಾಮಿ ಪಾದೋದಕಳೆನಿಸಿದೆ || ಭಾಗೀ... 1ಹರಿಪಾದ ಜಲ ದೊರಕುವದು ದುರ್ಲಭವೆಂದು |ಹರ ಪ್ರಾರ್ಥಿಸಲು ಜಡೆಯೊಳು ನಿಂದೆ | ಭಾಗೀ.... ||ಮೊರೆಯಿಡೆ ದೇವತೆಗಳಿಗೆ ವೊಲಿದು ಬಂದು |ಸುರನದಿಯೆಂದು ಕರೆಸಿಕೊಂಡೇ | ಭಾಗೀ..... 2ಚನ್ನಾಗಿ ಸ್ವರ್ಗದೊಳಗೆ ನಿಂತ ಕಾರಣ |ಸ್ವರ್ನದಿಯೆಂದು ಕರೆಸಿದೆವ್ವ | ಭಾಗೀ.... ||ಉನ್ನತಧೃವಮಂಡಲಕ್ಕೆ ಪೋಗಿ ಮುಟ್ಟಿದೆ |ನಿನ್ನಾಕಾಶ ಗಂಗೆ ಎಂಬೋರೆ | ಭಾಗೀ..... 3ಭಗೀರಥ ಬಹುಕಾಲ ಪ್ರಾರ್ಥಿಸೆ ಕರುಣದಿಂ |ಜಿಗಳಿ ಹೇಮಾದ್ರಿಗೆ ನಡೆತಂದೆ | ಭಾಗೀ.... ||ಸೊಗಸಿಲಿಂ ತ್ರಿಪಥಾಗಿ ದಕ್ಷಿಣದಲಿ ಬಂದು |ಸಗರರಾಯನ ಉದ್ಧರಿಸಿದೇ | ಭಾಗೀ..... 4ತವಕದಿಂದಲ್ಲಿ ಜಹ್ನು ಋಷಿಯಲ್ಲಿ ಜನಿಸಿ ಜಾ |ಹ್ನವಿಯೆಂದು ಸ್ತುತಿಸೋರೆ ಸುರರೆಲ್ಲ | ಭಾಗೀ.... ||ಭುವನದೊಳೆಲ್ಲರು ಪುನೀತರಾಗೋದು ಸಿದ್ಧ |ತವಪಾದಸ್ಮøತಿಮಾತ್ರದಿಂದಲೀ | ಭಾಗೀ...... 5ನಂದಿನಿ ನಳಿನಿ ಸೀತಾ ಮಾಲತೀ ಮಲಹ |ಮಂದರಧರ ಪದಿ ಶ್ರೀಗಂಗೆ | ಭಾಗೀ...... ||ಸುಂದರ ತ್ರಿಪಥ ಭಾಗೀರಥಿ ಭೋಗವತಿ |ವಂದೆಜಾಹ್ನವಿತ್ರಿದಶೇಶ್ವರಿ | ಭಾಗೀ.... 6ವಸುಗಳ ಮಾತು ಲಾಲಿಸಿ ರಾಯನಲಿ ಬಂದು |ಬಸುರಿಂದ ಪಡೆದು ಉದ್ಧರಿಸಿದೆ | ಭಾಗೀ.... |ಅಸಹ್ಯ ಕರ್ಮವ್ಯಾಕೆಂದೆನಲು ಕುಮಾರನ |ಕೊಸರುತ ನಿಜರೂಪವೈದಿದೇ | ಭಾಗೀ.... 7ನಮೊ ನಮೊ ಶುಭಗಾತ್ರೆ ನಮೊ ನಮೋ ಸುಚರಿತ್ರೆ |ನಮೊ ನಮೊ ಶಂತನುವಿನ ಮಿತ್ರೆ | ಭಾಗೀ..... ||ಶಮದಮಾದಿಗಳಿತ್ತುಪೊರೆಅನುದಿನದಲ್ಲಿ |ಅಮರವಿನುತಪಾದಪಂಕಜೆ | ಭಾಗೀ.....8ಕಾಣಲು ಪಾಪಹರವು ಮುಕ್ತಿ ಅಹುದು |ಸ್ನಾನದ ಫಲವು ಬಲ್ಲವರಿಲ್ಲ | ಭಾಗೀ...... ||ಕ್ಷೋಣಿಯ ಮ್ಯಾಲುಳ್ಳ ಸರಿದ್ವರಳೆನಿಸುವೆ |ಪ್ರಾಣೇಶ ವಿಠಲನ್ನ ದಯದಿಂದ | ಭಾಗೀ..... 9
--------------
ಪ್ರಾಣೇಶದಾಸರು
ಭಾಗ್ಯದ ಲಕ್ಷ್ಮೀ ಬಾರಮ್ಮಾ - ನಮ್ಮಮ್ಮಾ ನೀ ಸೌ-ಭಾಗ್ಯದ ಲಕ್ಷ್ಮೀ ಬಾರಮ್ಮಾ ಪಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ |ಗೆಜ್ಜೆಯ ಕಾಲಿನ ಧ್ವನಿಯ ಮಾಡುತ ||ಸಜ್ಜನ ಸಾಧು ಪೂಜೆಯ ವೇಳೆಗೆ |ಮಜ್ಜಿಗೆಯೊಳಗಿನ ಬೆಣ್ಣೆಯಂತೆ 1ಕನಕವೃಷ್ಟಿಯ ಕರೆಯುತ ಬಾರೆ |ಮನಕೆ ಮತಿಯ ಸಿದ್ದಿಯ ತೋರೆ ||ದಿನಕರಕೋಟಿ ತೇಜದಿ ಹೊಳೆಯುತ |ಜನಕರಾಜನ ಕುಮಾರಿ ಸೀತೆ 2ಸಂಖ್ಯೆಯಿಲ್ಲದಾ ಭಾಗ್ಯವ ಕೊಟ್ಟು |ಕಂಕಣ ಕೈಯಾ ತಿರುವುತ ಬಾರೆ ||ಕುಂಕುಮಾಂಕಿತೇ ಪಂಕಜಲೋಚನೆ |ವೆಂಕಟರಾಯನ ಮೋಹದ ರಾಣಿ 3ಅತ್ತಿತ್ತಗಲದೆ ಭಕ್ತರ ಮನೆಯಲಿ |ನಿತ್ಯಮಂಗಲವುನಿತ್ಯಮಹೋತ್ಸವ ||ಸತ್ಯವ ತೋರುವ ಸಜ್ಜನರಿಗೆ ನೀ |ಚಿತ್ತದಿ ಹೊಳೆಯುವ ಪುತ್ಥಳಿಗೊಂಬೆ 4ಸಕ್ಕರೆ ತುಪ್ಪದ ಕಾಲವೆ ಹರಿಸಿ |ಶುಕ್ರವಾರದ ಪೂಜೆಯ ಕೊಂಬೆ ||ಆಕ್ಕರವುಳ್ಳ ಅಳಗಿರಿ ರಂಗನಶಕ್ತಪುರಂದರವಿಠಲನ ರಾಣಿ5
--------------
ಪುರಂದರದಾಸರು
ಭಾಪು ಹರಿಮತನೆ ಪ.ಭಾಪು ಹರಿಮತಸ್ಥಾಪಿತನೆ ಮೂರುರೂಪಿನಲಿ ಬಂದು ಶ್ರೀಪತಿಯು ಮೆಚ್ಚುವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ ಅ.ಪ.ಆದಿಯಲಿ ಅಂಜನಾದೇವಿಯ ಮಂಗಳೋದರದಿ ಪುಟ್ಟಿ ಶ್ರೀದ್ಯುಮಣಿಕುಲಮೇದಿನೀಶನ ಪಾದಕೆರಗಿ ಅಂಬೋಧಿದಾಟ್ಯಾಜÕದಿಆ ದಶಾಸ್ಯನ ಲಂಕಾ ದಹಿಸಿ ಜಾನಕೀದೇವಿಯ ಸುದ್ದಿ ಶ್ರೀಧರಗರುಹಿಯೋಧ ಬಾಧಿತರಾದ ಕಪಿಚೇತನದಾಯಕ ತೇ ನಮೊ 1ತುಂಗಗಿರಿ ಶತಶೃಂಗಕೃತ ಸುವಜ್ರಾಂಗ ಅಗ್ನಿಜಾಸಂಗಮತ್ತನೃಪಂಗಳನು ಭುಜದಿಂ ಗೆಲಿದು ಯಜÕ ಸಂಗ್ರಹವ ಪೂರಿಸಿಸಂಗಡಿಸಿದರಿ ಸಂಗರವ ಪೊಕ್ಕುಸಿಂಗಗರ್ಜನೆಯಿಂ ಗದೆಯ ಕೊಂಡುಭಂಗಿಸಿದೆಯೊ ಯುಗ್ಮಾಂಗ ಕೃಷ್ಣ ಸೇವಾಂಗೀಕೃತ ತೇ ನಮೊ 2ತುಚ್ಛರಿಳೆಯೊಳು ಪೆಚ್ಚಿ ಬಗೆ ಬಗೆಕುಚ್ಛಿತಾರ್ಥ ವಿರಚ್ಚಿಸ್ಯಾತ್ಮಗೆಅಚ್ಚುತೈಕ್ಯವ ಉಚ್ಚರಿಸುತಿರೆ ಸ್ವಚ್ಛ ಯತಿರೂಪದಿಮಚ್ಚರಿಪರನು ಕೊಚ್ಚಿ ತಂತ್ರಸಾರಾರ್ಚನೆಯಭೇದ ನಿಶ್ಚೈಸಿದೆ ಶಿರಿಸಚ್ಚಿದಾತ್ಮ ಶ್ರೀವತ್ಸ ಪ್ರಸನ್ವೆಂಕಟೇಚ್ಛಮತ ತೇ ನಮೊ 3
--------------
ಪ್ರಸನ್ನವೆಂಕಟದಾಸರು
ಭಾರತೀ ದೇವೀ ನಿನ್ನನು ದಿನಾ | ಸಾರುವರ ಕಾಯ್ವೀ ||ಮಾರಮಣನಪಾದವಾರಿಜಯುಗದಲೀ |ಚಾರುಭಕುತಿ ಕೊಡು ನಾರೀ ಶಿರೋಮಣಿ ಪಇಂದ್ರಸೇನಳೆವಿಪ್ರಕನ್ನಿಕೆ | ಚಂದ್ರೇ ಶ್ರೀಕಾಳೆ |ನೊಂದೆನೆ ಬಹಭವ| ಬಂಧನದೊಳು ವೇಗಾ |ದಿಂದ ಕಾಯೆ ಕರುಣಾಸಿಂಧುದ್ರೌಪದಿ ದೇವಿ 1ಮಾತೆ ಕೇಳೆಲೆ ಭವಟವಗೆ | ವೀತಿಹೋತ್ರಳೆ ||ಮಾತು ಮಾತಿಗೆ ಜಲಜಾತನಾಭನ ಸ್ತುತೀ |ಆತುಕೊಂಡಿರಲೆ ಶ್ರೀ | ಮಾತರಿಶ್ವನಾ ರಾಣೀ 2ಪತಿತ ಪಾವನೆ | ಶಿವ ಕನ್ಯಾ ಜಗದ್ವಿತತೆ ಜೀವನೆ ||ನುತಿಸಿಬೇಡಿಕೊಂಬೆನೆ | ಕ್ಷಿತಿಯೊಳೆಲ್ಲರೂ ಸನು |ಮತವನೈದಿ ಈ ಕೃತಿಗೆ ಮಂಗಳವೀಯೆ 3ದೋಷ ದೂರಳೇ | ಹರಿಭಕ್ತಿಯಲ್ಲಿ ಮೋಸ ತೋರಳೆ ||ಕಾಶಿ ನಂದನೆಯನ್ನಾ | ಯಾಸ ಬಡಿಸದಲೀ |ಶ್ರೀಶನ ಕಥಿಗೆ ವಿಶೇಷ ಬುದ್ಧಿಯನೀಯೆ 4ಮಾನನಿನ್ನದೆ | ಸತತ ಪೇಳ್ವದೇನು ಮಾಣದೇ ||ಪ್ರಾಣೇಶ ವಿಠಲನ ಧ್ಯಾನದೊಳಿರುವಂತೆ |ಪೋಣಿಸುವದು ಮತಿ ಬಾಣ ವರದ ನುತೆ5
--------------
ಪ್ರಾಣೇಶದಾಸರು
ಭಾರತೀದೇವಿ ಸ್ತೋತ್ರಗಳು120ಶರಣು ಶ್ರೀ ಮಾರುತನ ರಾಣಿಯೆ |ಶರಣು ಮಂಗಳ ಶ್ರೋಣಿಯೇ ||ಶರಣು ಸ್ಮಿತ ಮುಖ ಉರಗವೇಣಿಯೆ |ಶರಣುಸರಸಿಜಪಾಣಿಯೇ ಪಇಂದ್ರಸೇನೆ ಪುರಂದರಾರ್ಚಿತೆ |ಇಂದಿರಾಪತಿ ಕೃಷ್ಣನಾ ||ನಂದದಲಿ ಸೇವಿಸುವ ಭಕುತಿಯ |ಇಂದುಧರನಿಗೆ ಕೊಡುವಳೇ 1ಗರುಡನುತ ಪದ ಸರಸೀರುಹೆ ವೃಕೋ |ದರನ ಪ್ರೀತಿಗೆ ಯೋಗ್ಯಳೇ ||ತರುಣಿ ಶಿರೋಮಣಿ ದುರ್ಮತಿಯ ಕಳೆದು |ಕರುಣದಲಿಕರಪಿಡಿವುದು 2ವಿದ್ಯುನ್ನಾಮಕೆ ಧಾತಜಾತಳೆ |ಶ್ರದ್ಧೆ ದಾತೆ ನಿರಂತರ ||ತಿದ್ದಿ ಯನ್ನ ವಕ್ರಮತಿಯದ್ರುಹಿಣ|ವಿದ್ಯೆಪಾಲಿಸೆ ಭಾರತೀ 3ಕಾಳೀ ದ್ರೌಪದಿಸ್ಥಾಣುಕನ್ಯಾ |ಶೈಲಜಾದಿ ನಮಸ್ಕøತೇ ||ಕಾಲಿಗೆರಗುವೆ ಯನ್ನಬಿನ್ನಪ|ಕೇಳಿಜ್ಞಾನವ ಪ್ರೇರಿಸೇ 4ಗಜಗಮನೆ ನಳನಂದಿನಿ ಅನಘೆ |ಸುಜನಹೃದಯ ನಿಕೇತನೆ ||ತ್ರಿಜಗಪತಿಪ್ರಾಣೇಶ ವಿಠಲನ |ಭಜನೆಯೊಳು ಮನ ನಿಲ್ಲಿಸೇ 5
--------------
ಪ್ರಾಣೇಶದಾಸರು
ಭಾಳಭಾಳಬಿಂಕರುಕ್ಮಿಣಿನಿನ್ನಕೇಳಿಬಲ್ಲೆನೆ ಸತ್ಯಭಾಮಿನಿಪ.ದೊರೆಯರ ಮಗಳೆಂದು ಗರವಿಲೆÉ ರುಕ್ಮಿಣಿಬರಲಿಲ್ಲ ನಮ್ಮ ಕರೆಯಲುಬರಲಿಲ್ಲ ನಮ್ಮ ಕರೆಯಲು ರುಕ್ಮಿಣಿಸರಿಯವರುನೋಡಿ ನಗತಾರ1ಕೆಂಚಿನಿಮ್ಮಣ್ಣನ ಪಂಚೆಚೂಡನ ಮಾಡಿಕಂಚಿಯ ವರದ ಕಳುಹಿಲ್ಲಕಂಚಿಯ ವರದ ಕಳುಹಿಲ್ಲ ರುಕ್ಮಿಣಿಪಾಂಚಾಲಿಗೆ ನೀನು ಸರಿಯೇನ 2ನಾರಿ ನಿಮ್ಮಣ್ಣನ ಮಾರಿಯ ಬಾಡಿಸಿತೇರಿಗೆಕಟ್ಟಿಮೆರೆಸಿಲ್ಲತೇರಿಗೆ Pಟ್ಟಿ ಮೆರೆಸಿಲ್ಲ ರುಕ್ಮಿಣಿಯಾರ ಮುಂದಿಷ್ಟು ಬಡಿವಾರ 3ಹರದಿನಮ್ಮಣ್ಣಗೆ ¨ರೆದ ಓಲೆಯನೋಡಹಿರಿಯರಿಲ್ಲೇನ ಮನೆಯಾಗಹಿರಿಯರಿಲ್ಲೇನ ಮನೆಯಾಗಅತ್ತಿಗೆಸರಿಯವರುನೋಡಿ ನಗತಾರ4ಹತ್ತು ಮಾರಿಯವನ ಬೆನ್ನತ್ತಿ ಹೋದವಳೆಂದುಕೀರ್ತಿಯ ಪಡೆದೆಯೆಲೆಭಾವೆಕೀರ್ತಿಯ ಪಡೆದೆಯೆಲೆ ಭಾವೆನೀಮಹಾಮೂರ್ತಿಎಂಬೋದು ಹರಿಬಲ್ಲ5ಪಟ್ಟದರಸಿ ಎಂದು ದೃಷ್ಟಿ ತಿರುಗ್ಯಾವ ನಿನ್ನಎಷ್ಟುಬಡಿವಾರಎಲೆಭಾವೆಎಷ್ಟುಬಡಿವಾರಎಲೆಭಾವೆನೀ ನಮ್ಮಪುಟ್ಟ ಸುಭದ್ರೆಯ ಸರಿಯೇನ 6ಪತಿವ್ರತೆ ಅಂದರೆ ಅತಿ ಅತಿ ಗರುವ್ಯಾಕಪತಿಎಲ್ಲ ಬಲ್ಲ ನಿನ್ನಗುಣಪತಿಎಲ್ಲ ಬಲ್ಲ ನಿನ್ನಗುಣವನದೊಳುಸತಿಅಲ್ಲವೆಂದು ಬಿಡಲಿಲ್ಲ7ಗಂಡನಿನ್ನಯಗುಣಕಂಡನೆ ವನದೊಳುಕೆಂಡವು ಎಂದು ಹೊಗಸಿಲ್ಲಕೆಂಡವು ಎಂದು ಹೊಗಸಿಲ್ಲ ಈ ಮಾತುಪಂಡಿತರುಕೇಳಿಹುಸಿಯಲ್ಲ8ಮಂದಗಮನೆ ನಿನ್ನ ತಂದೆ ಹ್ಯಾಂಗೆ ಅಂದ್ಹಾಂಗೆಇಂದಿರಾಪತಿಯೆಗತಿಕೊಟ್ಟಇಂದಿರಾಪತಿಯೆಗತಿಕೊಟ್ಟ ಅದರಿಂದಬಂದಿತ್ಯಾಕಿಷ್ಟುಬಡಿವಾರ9ನಾರಿ ಹಿಂದಕ್ಕೆ ಒಂದು ಪಾರಿಜಾತಕ್ಕಾಗಿನೀರಜನಯ್ಯನ ದಣಿಸಿದೆಯಲ್ಲನೀರಜನಯ್ಯನ ದಣಿಸಿದೆಯಲ್ಲಅತ್ತಿಗೆಯಾರ ಮುಂದಿಷ್ಟೆಬಡಿವಾರ10ನಾರಿ ಹಿಂದಕೆ ಒಂದು ನಾರು ವಸ್ತ್ರವಕಾಣಿಊರು ಇಲ್ಲದಲೆ ವನವನಊರು ಇಲ್ಲದಲೆ ವನವನ ತಿರುಗಿದಿಯಾರ ಮುಂದಿಷ್ಟುಬಡಿವಾರ11ಧಿಟ್ಟೆ ಹಿಂದಕ್ಕೆ ಒಂದು ಉಟ್ಟೆನೆಂದರೆ ಇಲ್ಲಹೊಟ್ಟೆಗಿಲ್ಲದಲೆ ಮುನಿಪನಹೊಟ್ಟೆಗಿಲ್ಲದಲೆ ಮುನಿಪನ ಕುಟೀರದಿಎಷ್ಟು ದಿನಕಾಲಕಳೆದೆಯಲ್ಲ12ಸ್ವಾಮಿ ಶ್ರೀಕೃಷ್ಣರಾಯ ರಾಮನಂಥವನಲ್ಲಭೂಮಿ ಮ್ಯಾಲಿಂಥ ದೊರೆಯಿಲ್ಲಭೂಮಿ ಮ್ಯಾಲಿಂಥ ದೊರೆಯಿಲ್ಲ ಅದರಿಂದಭಾಮೆ ನೀ ಕಂಡೆಒಗೆತನ13ಪಟ್ಟಾಭಿರಾಮನಂತೆ ಸಿಟ್ಟು ಕೃಷ್ಣಯ್ಯಗಿಲ್ಲಎಷ್ಟು ದಯವಂತ ಯದುಪತಿಎಷ್ಟು ದಯವಂತ ಯದುಪತಿ ಅದರಿಂದಶ್ರೇಷ್ಠಳೆ ಕಂಡೆಒಗೆತನ14ಇಷ್ಟು ಜನರೊಳು ಅಷ್ಟೂಗುಣಗಳ ಸ್ಪಷ್ಟ ಮಾಡಿ ಹೊಗಳಲಿಸ್ಪಷ್ಟ ಮಾಡಿ ಹೊಗಳಲಿ ರಮಿ ಅರಸುಬಿಟ್ಟರೆÉ ನಿನ್ನ ತೆgನೆÉೀನಭಾಳಭಾಳಬಿಂಕರುಕ್ಮಿಣಿ15
--------------
ಗಲಗಲಿಅವ್ವನವರು