ಒಟ್ಟು 2677 ಕಡೆಗಳಲ್ಲಿ , 120 ದಾಸರು , 1860 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಪುಣ್ಯ ಎಂಥಾ ಭಾಗ್ಯ ಪ ಕಂತು ಜನಕ ಶ್ರೀಕಾಂತನ ದರುಶನ ಅ.ಪ ಜಗಜಗಿಸುವ ದಿವ್ಯಾಭರಣಂಗಳ ಸೊಗಸಿಲಿ ಧರಿಸುತ ನಗುವನ ದರುಶನ 1 ಹೇರು ಫಲಗಳನು ಸೂರೆಯ ಮಾಡುವ ಚಾರುವದನ ನಮ್ಮ ಶೌರಿಯ ದರುಶನ 2 ದೇಶ ತಿರುಗಿ ಆಯಾಸವೇತಕೆ ಶ್ರೀಶ ಪ್ರಸನ್ನ ಶ್ರೀ ಕೃಷ್ಣನ ದರುಶನ 3
--------------
ವಿದ್ಯಾಪ್ರಸನ್ನತೀರ್ಥರು
ಎಂಥಾ ಬಾಲಕನಿವನು ಎಷ್ಟೆಂದ್ಹೇಳಲಿ ನಾನು ಪಂಥಗಾರಿಕೆಯಂಗ ಪರಮ ಪುರುಷರಂಗ ಅಂತವ ತಿಳಿಗುಡನು ಗೋಪೆಮ್ಮಾ ಪ ನೋಟಾವೇಟದಿ ನಲುವಾ ನಡೆಯಾಲೊಲ್ಲದೆ ನಿಲುವಾ ಸ್ಫೋಟ ಹೃದಯವಾಗುವ ಪರಿಯಂಜಿಸುವ ಮಗು ನೀಟ ಘಾತಪಾತಕನಮ್ಮಾಗೋಪೆಮ್ಮ ನಿತ್ಯ ಬೆಣ್ಣೆಯ ಸವಿದು ಕಾಟಕಾರವೆ ಭಂಡಾ ತುರುಗಾವರೋಳು ಪುಂಡಾ ಆಟಕೆ ಗುಣವೇನ ಗೋಪೆಮ್ಮಾ 1 ನಯ ಮಾತಿಲಿ ಬರುವಾ ನೋಡಲು ಕಠಿಣಿರುವಾ ತಾಯಡಬಲ ನೋಡಾ ತರುಣಿಯರನ ಬಿಡಾ ಬಾಯಾದೆರೆದು ಬೇಡವಾ ಗೋಪೆಮ್ಮಾ ತಾಯಿಂಗಂಜನು ನಿನಗೆ ತಡೆದುರೋಗವ ಹೊರಗೆ ಮಾಯಾಗಾರನೆ ಗೋವಾ ಮತಿಯ ಕಡುವನಿವ ಸಾಯಸ ಕಲಿಯಮ್ಮ ಗೋಪೆಮ್ಮಾ 2 ಇದರೇರಿ ಚಿನ್ನವರಾ ಇಕ್ಕಿ ಅಂಗವ ತೋರಾ ಕಾಲ ಕೆದರಿ ಪೊರೆವ ಬಾಲಾ ಅದ್ಭುತ ವಿಕ್ರಮನೆ ಗೋಪೆಮ್ಮಾ ಉದ ಧಿಗಂಜನು ಧುಮುಕಿ ಉಲುವಾ ಬುದ್ದಿಯ ಸೊಕಿ ಮುದದಿ ವಾಜಿರಿಸೇ ಮಹಿಪತಿಸುತ ಪ್ರಭು ಬುಧ ಜನರೊಲುವಂತೆ ಗೋಪೆಮ್ಮಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂದಿಗಾಹುದೋ ನಿನ್ನ ದರುಶನ | ಇಂದಿರೇಶ ಮುಕುಂದ ಕೇಶವ ಪ ಗಾನಲೋಲನೆ ದೀನವತ್ಸಲ | ಮಾನದಿಂದಲಿ ನೀನೆ ಪಾಲಿಸೋ 1 ಯಾರಿಗೆ ಮೊರೆ ಇಡುವೆ ಶ್ರೀ ಹರಿ | ಸಾರಿ ಬಂದು ನೀ ಈಗಲೆ ಪೊರಿ 2 ಗಜವ ಪಾಲಿಸೊ ಗರುವದಿಂದಲಿ | ಭುಜಗಶಯನ ಶ್ರೀ ವಿಜಯವಿಠಲಾ 3
--------------
ವಿಜಯದಾಸ
ಎಂದಿಗೂ ಮರುಳಾಗೆನೋ ಸಂಸಾರಕ್ಕೆ ಎಂದಿಗೂ ಮರುಳಾಗೆನೋ ಪ ಬಂಧವ ತರಿವ ಕೇಶವನ ದಾಸನಾಗಿ ಪಾದ ಸೇರುವೆನಯ್ಯ ಅ.ಪ ನಾರಿಯರನು ನೆಚ್ಚಿಸೀ ಧರ್ಮವ ಬಿಡಿಸಿ ಮಾರಿಯರ ಸಾಕಿಸೀ ಆರರ ವಶಮಾಡಿ ರತಿಕ್ರೀಡೆ ನಂಬಿಸಿ ಮಾರಿಯ ಗೃಹಕೆನ್ನ ಗುರಿಮಾಡ್ವ ಭವಕೇ 1 ಹÉೂನ್ನುಗಳಿಗೆ ಮೆಚ್ಚಿಸೀ ಸತ್ಯವ ಬಿಡಿಸಿ ಮಣ್ಣುಗಳಿಗೆ ಸೊಕ್ಕಿಸೀ ಬಣ್ಗೆಣ್ಣಿಸಲಾಗದ ಪಾಪವ ಮಾಡಿಸಿ ಚಿನ್ನನ ಮರೆಸುವ ಪುಸಿಯಾದ ಭವಕೇ 2 ಸ್ಮರಣೆಗಳನ್ನೇ ಮಾಡಿ ಸರಸದಿ ಪಾಲಿಪ ಭಕ್ತರ ಪರಿಯನ್ನು ಭರದಿ ಸೇರಿಸಿ ಚನ್ನಕೇಶವಾ ಗತಿಯೆಂಬೇ 3
--------------
ಕರ್ಕಿ ಕೇಶವದಾಸ
ಎಂದಿಗೆ ಕಾಂಬುವೆ ಇಂದಿರೇಶನೆ ನಿನ್ನ ಪಾದ ಕೃಪೆಯ ಪ ಒಂದರಲವ ನಿಂದು ಒಂದೇ ಮನದಿ ನಿನ್ನ ಮಂದ ಭಾಗ್ಯನು ನಾನು ಅ.ಪ ಎನ್ನ ಮನಸಿನ ಚೇಷ್ಟೆ ವರ್ಣಿಸಲಳವಲ್ಲ ಕ್ಷಣಕೊಂದು ಪರಿಯಪ್ಪುದು ಘನದೃಢ ಹರಿಪಾದ ನೆನೆಯುವುದು ನಿಮಿಷದಿ ಎಣಿಯಿಲ್ಲದೈಶ್ವರ್ಯವನು ಭೋಗಿಸುವುದು 1 ಗಳಿಗೆಯೊಳ್ದಶಲಕ್ಷ ಸುಲಭದಿಂ ಗಳಿಸರ್ಥ ಬಲವಾಗಿ ನಿಲಯದಿಟ್ಟು ಲಲನೆಯೊಳೊಡಗೂಡಿ ಬಲುಸೌಖ್ಯ ಬಡುಕೊಂಡು ಗಳಿಗೆಯೊಳ್ ದೇಶಾಂತರಕೆಳಸುವುದಭವ 2 ಅರಿಗಳಂ ಬಂಧಿಸಿ ಸೆರೆಯೊಳಿಟ್ಟರಲವದಿ ಶಿರವರಿಪೆನೆನುತಿಹ್ಯದು ಪರಮ ವೈರಾಗ್ಯದಿಂ ಚರಿಸುವುದರಲವದಿ ಪರಲೋಕ ಸಾಧನದಿರುತಿಹ್ಯದಕಟ3 ದೃಢದಿ ನಡೆವುದು ನಿಮಿಷ ಪೊಡವಿಜನಕೆ ಸತ್ಯ ನುಡಿಯು ಬೋಧಿಸುತಿಹ್ಯದು ದೃಢತರಬಲದಿ ತಾ ಕಡುಗಲಿಯೆನಿಸೊಂದೇ ಕೊಡೆಯಿಂದಲಾಳುವುದು ಪೊಡವಿಯಂ ಸಕಲ 4 ಕಾಮಿಸುತೀಪರಿ ಕಾಮಕೊಳಪಡಿಸೆನ್ನ ಪಾಮರನೆನಿಸುವುದು ಸ್ವಾಮಿ ಶ್ರೀರಾಮ ಎನ್ನ ಪಾಮರಮನಸಿನ ಕಾಮಿತವಳುಕಿಸಿ ಪ್ರೇಮದಿಂ ಸಲಹಯ್ಯ 5
--------------
ರಾಮದಾಸರು
ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ಪ ಮುಂದರಿತು ಶ್ರೀಹರಿಯ ಭಜಿಸುವುದು ಲೇಸುಅ ಎಲುವುಗಳು ತೊಲೆಜಂತೆ ನರಗಳವು ಬಿಗಿದಂತೆಬಲಿದ ಚರ್ಮವು ಮೇಲು ಹೊದಿಕೆಯಂತೆಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆಕೆಲಕಾಲಕೀ ಕೊಂಪೆ ಕಡೆಗಾಹುದಂತೆ 1 ಕಂಡಿಗಳು ಒಂಬತ್ತು ಕಳಬಂಟರೈವರುಅಂಡಲೆವುದೊತ್ತಿನಲಿ ಷಡುವರ್ಗವುಮಂಡಲಕೆ ಹೊಸಪರಿಯ ಮನ್ಮಥನ ಠಾಣ್ಯವಿದುಮಂಡೆ ಹೋಗುವುದನ್ನು ಅರಿಯದೀ ಕೊಂಪೆ2 ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲಕೆಂಪು ಬಣ್ಣಗಳಿಂದ ಚೆನ್ನಾಯಿತುಇಂಪಿನಲಿ ಕಾಗಿನೆಲೆಯಾದಿಕೇಶವನನ್ನುಸೊಂಪಿನಲಿ ನೆನೆನೆನೆದು ಸುಖಿಯಾಗು ಮನುಜಾ 3
--------------
ಕನಕದಾಸ
ಎಂದು ಕಾಂಬೆನು ನಾನುಗೋ- ವಿಂದ ನಿನ್ನಯ ಪಾವನ್ನ ಪಾದವನ್ನು ನಾ ಪೊಂದಿಸೇವಿಸಿ ಆನಂದಪಡುವುದಕಿನ್ನು ಕರುಣಿಸೈ ಮುನ್ನ ಪ ಪೊಂದಿ ಮಹದಾನಂದ ಪಡೆಯಲು ಕಂದಿಕುಂದಿತು ತನುಮನೇಂದ್ರಿಯ ಇಂದೆ ತೋರಿಸೊ ಪಾದಕಮಲವ ಅ.ಪ ಬಾಲತನದಲಿ ನಾನು ಶ್ರೀಲೋಲ ನಿನ್ನಿಂದ ಪಾಲಿತನಾದೆನೊ ಬೆಲೆಯುಳ್ಳ ಆಯುವನೆಲ್ಲ ಕಳೆದು ಬಿಟ್ಟೆನು ನಾನು ಕೆಲಕಾಲದಲಿ ನಾ ಕಲುಶಕ್ರಿಯೆಗಳನ್ನು ಫಲವಿಲ್ಲದೆಸಗಿದೆನು ಎಲ್ಲರೊಳು ನೀ ನೆಲಸಿ ಜೀವರ ಎಲ್ಲಕರ್ಮವ ಮಾಡಿಸಿ ಫಲವೆಲ್ಲ ಅವರಿಗೆ ಇತ್ತು ನೀ ನಿರ್ಲಿಪ್ತನೆಂದು ತಿಳಿಯದಲೆ ಖುಲ್ಲಮಾನವರೊಡನೆ ಬೆರೆತು ಪುಲ್ಲಲೋಚನ ನಿನ್ನ ಮರೆದು ಇಲ್ಲ ಎನಗೆ ಎಣೆಯೆನುತ ನಾ ಬಲುಹೆಮ್ಮೆಯಿಂದಲಿ ದಿನಗಳ ಕಳೆದೇ ಇಲ್ಲನಿನಗೆಸರಿಯಿಲ್ಲ ನೀ ನಿಲ್ಲದಾಸ್ಥಳವಿಲ್ಲ ಜಗದಾ ಎಲ್ಲ ಕಾಲಗಳಲ್ಲಿ ಇಹ ಶ್ರೀನಲ್ಲ ನೀನೆಲ್ಲ ಬಲ್ಲೆಯೊ 1 ಬರಿದೇ ಕಾಲವ ಕಳೆದೇ ಶ್ರೀಹರಿಯೆ ನಿನ್ನಯ ಸ್ಮರಣೆಯನ್ನು ಮಾಡದೇ ಪರಿಪರಿಯ ತನುಮನ ಕ್ಲೇಶಗಳಿಗೊಳಗಾದೆ ನಾಮಸ್ಮರಣೆಯೊಂದಲ್ಲದೇ ಇನ್ನೆಲ್ಲಾ ಬರಿದೇ ಪರಮಕರುಣಾಶರಧಿ ಎಂಬುವ ಕರಿಧ್ರುವಬಲಿಮುಖ್ಯರೆಲ್ಲರ ಪೊರೆದ ಕೀರುತಿ ಕೇಳಿ ನಂಬಿದೆ ಶರಣಜನಮಂದಾರನೆಂದು ಅರಿಯೆ ನಾನವರಂತೆ ಸಾಧನ ಅರಿತು ಮಾಡುವ ಪರಿಯು ತಿಳಿಯದು ಬಿರುದು ಭಕ್ತಾಧೀನನೆಂದು ಹರಿಯೆ ನಿನ್ನಯ ಮರೆಯಹೊಕ್ಕೆನು ದುರಿತಶರಧಿಯೊಳಾಡುತಿರುವನ ಉ- ತ್ತರಿಸಲೊಂದೇ ನಾವೆಯಂತಿಹ ಚರಣಸ್ಮರಣೆಯಕೊಟ್ಟು ರಕ್ಷಿಸು ಪುರುಷಸೂಕ್ತಸುಮೆಯ ಜೀಯಾ2 ಶೇಷಗಿರಿಯವಾಸ ಶ್ರೀ ಶ್ರೀನಿವಾಸ ದೋಷರಹಿತ ಸರ್ವೇಶ ಮನೋ- ಕಾಶದಲಿ ಅನವರತ ನಿಲ್ಲೊ ಶ್ರೀಶಾ ಬಿಡಿಸೆನ್ನ ಭವಬಂಧ ಗ್ರಂಥಿಯ ಪಾಶಾ ಹರಿಸುವುದು ಕ್ಲೇಶಾ ಶ್ರೀಶ ನಿಗಗತಿಶಯವೆ ಎನ್ನಯ ವಿಷಯದಭಿಲಾಷೆಗಳ ಬಿಡಿಸೀ ದೋಷರಹಿತನ ಮಾಡಿಸೀ ಎನ್ನ ಪೋಷಿಸೋ ನಿನ್ನಸ್ಮರಣೆಯಿತ್ತು ದ್ವಾಸುಪ- ರ್ಣ ಶ್ರುತಿಗಳಿಂದಲಿ ಈಶ ದಾಸರ ಭಾವ ತಿಳಿಯದೆ ಮೋಸಹೋದೆನೊ ಬೋಧೆ ಇಲ್ಲದೆ ವಾಸುದೇವನೆ ರಕ್ಷಿಸೆನ್ನನು ಏಸುಕಾಲಕು ನೀನೆ ಗತಿ ಎಂದು ಆಸೆ ಮಾಡುವೆ ನಿನ್ನ ಕರುಣಕೆ ಬೇಸರದಲೆ ಮೊರೆಯ ಲಾಲಿಸಿ ಶ್ರೀಶ ಶ್ರೀ ವೆಂಕಟೇಶನೆ 3
--------------
ಉರಗಾದ್ರಿವಾಸವಿಠಲದಾಸರು
ಎಂದೂ ಹಿಡಿಯದಿರು ಗರ್ವಾ | ಗೋ ವಿಂದನಲೀಲೆಯ ಕಾಣೊ ಸರ್ವಾ ಪ ಕ್ಷಿತಿಯೊಳಧಿಕವೆನ್ನ ಕುಲವು | ಗುಣ | ವತಿ ಸುಲಕ್ಷಣೆಯಾದಾ | ಸತಿಯಳ ವಲವು | ಸುತನಲ್ಲಿ ಗುಣ ನಿಶ್ಚಲಿಪು | ಯನ | ಗತಿಶಯ ಭಾಗ್ಯದ ಧನ ಧಾನ್ಯ ಒಲವು 1 ಎಲ್ಲರೊಳಗ ಅಭಿಮಾನಿ | ಶಾಸ್ತ್ರ | ಬಲ್ಲಿದ ಯೌವ್ವನ ತ್ರಾಣಿ | ಯನ್ನು | ಸೊಲ್ಲು ಸೊಲ್ಲಿಗ್ಹೇಳುವ ಕವಿತೆಯ ವಾಣಿ 2 ಸುಂದರವಾದ ಮಂದಿರವು | ಯನ | ಗೊಂದು ಕೊರತೆಯಿಲ್ಲಾವೆಂಬುದೀ ಮರವು ಹೊಂದದೆ ಬಾಗಿರೆಚ್ಚವು | ಗುರು | ತಂದೆ ಮಹಿಪತಿ ಬೋಧಿಸಿದರಹು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನಗೆ ನೀನೇ ಬಂಧು ಎಲೆಲೆ ಕರುಣಾಸಿಂಧುಎನ್ನ ಮನವೇ ನಿನ್ನ ಮನೆಯೆಂದು ನೆನೆದು ಬಾರೊ ತಂದೆ ಪ. ಮಕ್ಕಳ ಕೊಡುವೆ ಕಂಡ ಸುಜನರ್ಗೆ ಮಗ ನಾನುಅಕ್ಕರಿಂದ ಬೇಡುವವರ ರಕ್ಷಿಸಿಕೊಂಡು ತಂದೆಅಕ್ಷಿಹೀನರಿಗೆ ಪೊಸಚಕ್ಷುವನೀವೆ ಎನಗಿರ್ದಅಕ್ಷಿದೋಷವ ಕಳೆದು ರಕ್ಷಿಸಿಕೊಡು ತಂದೆ 1 ಪೋದ ಗಂಟ ತರಿಸಿಕೊಡುವುದು ನಿನ್ನ ಬಿರುದು ನಿನ್ನಬೋಧನೆಂಬ ಧನದ ಗಂಟು ನಾನು ನನ್ನ ರಕ್ಷಿಸಿಕೊಈ ಧರೆಯ ಕುಂಟರ ಬಲುಬಂಟರ ಮಾಡಿ ನಡೆಸಿದೆಮೋದನಿಧಿ ನಿನ್ನ ಭಕ್ತನ ಕುಂಟುತನವ ಬಿಡಿಸೊ 2 ಸಿರಿಹಯವದನ ತಿಮ್ಮ ನೀ ನಿಧರ್Àನರ್ಗೆ ಧನವಿತ್ತುಕರುಣಿ ಎನ್ನ ಧೈರ್ಯಧÀನವನು ಕೊಡೆಯದೇಕೆಧರೆಯೊಳೆನ್ನಾಜ್ಞೆಯನು ನಿಲಿಸಿಕೊಳಬೇಕಾದರೆಧುರದಿ ಅನನ್ಯಾಶ್ಚಿಂತಯೆಂತೋ ಎಂದ ಮಾತ ಸಲಿಸೋ 3
--------------
ವಾದಿರಾಜ
ಎನ್ನ ಮನ ಅನ್ಯಕ್ಕೆರಗುತ್ತಿದೆ ಪ ಪತಿ ಅಂಗ ಸಂಗದೊಳಿರುತಿದ್ದು ಇದ್ದುಸತಿ ಉಪಪತಿಯನ್ನು ಬಯಸುವಂತೆಶ್ರುತಿ ತತ್ವ ಶಾಸ್ತ್ರಗಳರಿತಿದ್ದು ಇದ್ದು ದು-ರ್ಮತಿ ದುಷ್ಟ ಚರಿತೆಗೆ ಎಳೆಯುತಿದೆ ಎನ್ನ1 ನಿತ್ಯ ಉಣುತಿದ್ದು ಇದ್ದುಸುರೆಯ ಚಿಂತಿಸಿ ರುಚಿಗೊಳ್ಳುವಂತೆಕರಿ-ಸುರನದಿಯಲ್ಲಿ ಮೀಯುತಿದ್ದು ಇದ್ದುಪರಮ ಹರುಷದಿ ಕೆಸರ ಚೆಲ್ಲಿಕೊಂಬಂತೆ 2 ಪರಮ ಪಾವನ ಗುಣಪೂರ್ಣನೆ ನಿನ್ನಚರಣಯುಗಳವನ್ನು ಧ್ಯಾನಿಸುತನೆರೆಹೊರೆಯಲಿ ಮನ ಹೋಗದಂದದಲಿಕರುಣಿಸಿ ನಿಲ್ಲಿಸೊ ಸಿರಿಕೃಷ್ಣರಾಯ 3
--------------
ವ್ಯಾಸರಾಯರು
ಎನ್ನ ಮನದ ಡೊಂಕ ತಿದ್ದಯ್ಯಾ ಗೋಪಾಲಕೃಷ್ಣ ಪ ಎನ್ನ ಮನದ ಡೊಂಕ ತಿದ್ದಿ ಮುನ್ನ ಮನ್ನಿಸದಿ[ರೆ]ತಿದ್ದಿಬನ್ನ ಪಡಲಾರೆ ಭವಾಬ್ಧಿಯನ್ನೆ ದಾಟಿಸೊ ಅಪಾರಮಹಿಮ ಅ.ಪ. ಉದಯವಾದರೆ ಊಟದ ಚಿಂತೆ ಉಂಡಮೇಲೆ ಭೋಗದ ಚಿಂತೆದರಮೇಲೆ ಹದಿನಾಲ್ಕು ಲೋಕಂಗಳನೆ ಆಳ್ವ ಚಿಂತೆ 1 ಸುಖವು ಬಂದರೆ ನಾನೆ ಸಮರ್ಥ ದುಃಖವು ಬಂದರೆ ಹರಿಯುಮಾಡ್ದರೊಕ್ಕ ಬಂದರೆ ನಾನೆ ಧನಿಕ ಸಿಕ್ಕಿಬಿದ್ದರೆ ಹರಿಯ ವ್ಯಾಪಾರ 2 ತಿಳಿದು ತಿಳಿದು ಪತಂಗದ್ಹುಳವು ಕಿಚ್ಚಿನಲ್ಲಿ ಬೀಳೋಹಾಂಗೆಕಾಲಕಳೆದೆ ಮೂಕನಂತೆ ಮುದ್ದು ಹಯವದನನೆ 3
--------------
ವಾದಿರಾಜ
ಎನ್ನನ್ನು ನೀ ಮರೆವರೆ | ಮೋಹನ್ನ ದೈವತರನ್ನ ವಿಠಲರಾಯಾ ಪ ಚಿನ್ನದಾಸೆಗೆ ತಿರುಗುವೆ | ನಿರಂತರ ನಿನ್ನ ಚರಣಕೆರಗುವೆಮನ್ನಿಸೆನ್ನಯ ಬಿನ್ನಹವನ್ನು ದೇವಾ 1 ಬಲ್ಲವರಿಗೆ ನಾನರಿಯೆನು ಪ್ರಭುವೆ | ನೀನಲ್ಲದನ್ಯರಿಗೆಕರೆಯೆನು | ಇಲ್ಲಿದೆಲ್ಲ ಒಲ್ಲೆನಿಸೋ ದೇವಾ 2 ತಂದೆ ತಾಯೆಂದು ನಂಬಿದೆ ರುಕ್ಮೇಶನ ಹೊಂದಿ ಮುದದಿಂದತುಂಬಿದೆ | ಕಂದನೆಂದು ಬಂದು ಬಿಡಿಸೊ ದೇವಾ 3
--------------
ರುಕ್ಮಾಂಗದರು
ಎಂಬ ನಾಮವನು ಉಚ್ಚರಿಸೆ ಸಾರುವರು ಭಕುತರಾದವರು ವೈಕುಂಠವನು ಆರಾದರೇನು ಮರೆಯದೆ ಹರಿಯಧ್ಯಾನಿಸಲು ಸಿರಿಯರಸ ಕಾಯ್ದು ಕೊಂಬ ಪ ಅರಸಕೇಳೈ ಬಳೀಕ ಪಾಂಡ್ಯದೇಶದೊಳೋರ್ವ ಪತಿ ಪೆಸರು ಇಂದ್ರ ದ್ಯುಮ್ನಧರಾತ್ಮ ಹರಿ ಪರಾಯಣನೆನಿಸಿ ನಿರುತಸತ್ಯ ಸುಶೀಲ ಕರಿತುರಗದಾಸೇಯ ತೊರೆದು ವಿರತನಾಗಿಯೆ ಪುರವ ಪೊರಟು ಸುಸ್ಥಿರನಾಗಿ ಬರವಾಯ್ತ ಗಸ್ತ ಶಿಷ್ಯವೆರಸಿ 1 ಸದಮಳಾತ್ಮರನ ಚಿಂತೆಯಿಂದ ಭೂಪೇಳದಿರೆ ಮದಮುಖನ ತಪವ ನೋಡುವೆನೆನುತ ಮುನಿ ಮುನಿದು ತದುಬಿಗರ್ಜಿಸಿ ಶಾಪವೀಯಗಜವಾಗೆನುತ ಸದು ಹೃದಯನೆದ್ದು ಬಳಿಕ ಪಾದಕ್ಕೆ ವಂದಿಸಿ ಶಾಪ ವೆಂದು ಬಿಗುಗಡೆಯೆನಲು ಸಾದರದಿಂ ಮುನಿಪನೆಲ ನೆಗಳು ಪಿಡಿಯೆಗತಿನಿನ ಗೆಂದು ಹೋದ ಮುನಿಪತಿ ಇತ್ತಲು 2 ಇಂತು ಭೂಮೀಶ ಶಾಪವ ತಾಳ್ದು ಬಿಸುಸುಯ್ದು ಕಂತು ಜನಕನೆ ಬಲ್ಲನೆಂತು ಗೆಲಿದಪೆನ್‍ನುತ ದಂತಿ ಮುಖವಾಗಿ ಭೂಕಾಂತೆಯೊಳು ಜನಿಸಿ ಸುರ ಸಂತತಿಗಳಲ್ಲು ಮಾ ಇಂತೆಸೆದನು 3 ತರುನಿಕರ ಚೂತಾಮಲಕ ಸುರಹೊನ್ನೆ ಪುನ್ನಾಗ ಮೆರೆವಬಿಲ್ವಶ್ವತ್ಥಮಾ ಕಿರುಗಿಡುವಿನೊಳಗೆ ಚರಿಸುವ ಕರಡಿ ಸೀಳ್ನಾಯಿ ಭೇರುಂಡ ಮುಂತಿರುತಿರಲು ಗರುಡ ಗಂಧರ್ವ ಚಾರಣರು ಸುರಕಿನ್ನರರು ಇರುತಿಹರು ಕಿಂಪುರುಷರು 4 ತ್ರಿಜಗದೊಳಗೆಣೆ ಗಾಣೆ ಭುಜಗಶಯನನೆ ಬಲ್ಲ ಗಜರಾಜ ಬೆಳೆದು ಕುಜನರ ಮಾರ್ಗವಂ ಪಿಡಿದು ಅಜಸೃಷ್ಟಿ ಬಿರಿಯೆ ಒದರಿ ನಿಜಪುತ್ರ ಮಿತ್ರಸ್ತ್ರೀಜನ ಸಹಿತಲೊಡಗೊಂಡು ಬುಜ್ಜಸತ್ವದಿಂದ ವನವನು ಮುರಿದು ಸಂಹರಿಸಿ ಭೂಜಲವ ನರಸಿ ಬಂದ 5 ಗಂಡು ಹೆಣ್ಣಾನೆಗಳ ತಂಡ ಸಹಿತಲೆ ಬಂದು ಕಂಡು ಜಲವನು ಈಂಟಿಗುಂಡಿ ಮಡುವನುಸಾರಿ ಚಂಡಿಗೊಳಿಸುತ ಧರಣಿಯ ಅಂಡೆಲೆವ ಮದದ ಸ್ತ್ರೀಯರ ಕೂಡಿ ನೆಗಳು ಖತಿಗೊಂಡು ಮಡುವಿನೊಳಗೆಳೆಯಲು 6 ನೆಗಳು ಸುತ್ತಲಿಹ ಕರಿಘಟೆಗಳೇನಿದದ್ಬುತವೆಂದು ಮತ್ತೆ ಸತ್ವದಲೆಳೆಯೆ ತೆತ್ತಿಗನು ಬಾರದಿರೆ ತಮ್ಮಗುತ್ತಿಗುಳಿದಿಹ ಹಸ್ತಿ ಇತ್ತ ಗಜರಾಜ ಕಾದುತಿರಲು ಹಲಕಾಲ ಬತ್ತಿ ಅಸುಗುಂದಿ ಚಿತ್ತದಿ ತಿಳಿದು ಧ್ಯಾನಿಸುತ ಮತ್ತಾರು ಕಾಯ್ವರೆನುತ 7 ಇಕ್ಕರ್ತರಿಂತು ಕಾದುತ್ತಿರಲು ಕರಿವರನ ಸೊಕ್ಕು ಮುರಿದುದು ತಮವುಚೊಕ್ಕಿ ಮುಖವನು ನಭಕೆ ಸೊಕ್ಕಿದುದುನೆಗಳು ಬಳಿಕ ಮುಕ್ಕುರು ದಿವ್ಯಸಾಗರ ವರುಷ ಪರಿಯಂತ ಸಿಕ್ಕಿ ನಗಳೊಳು ಕಾದಿ ಕುಕ್ಕುರಿಸಿ ನೀರಿನೊಳು ದಿಕ್ಕನೊಡುತ್ತ ಕಕ್ಕನೆ ಕರಗಿ ಜ್ಞಾನದಲಿ ಭಕ್ತವತ್ಸಲನ ನೆನೆದ 8 ರಕ್ಷಿಸೆನ್ನನು ಬಿಡದೆ ಪಕ್ಷಿವಾಹನಗಮನ ಸೇವ್ಯ ಕುಕ್ಷಿಯೊಳಗಿಂಬಿಟ್ಟು ರಕ್ಷಿಸುವೆ ಭಜಕರನು ಮೋಕ್ಷದಾಯಕನೆ ಕಾಯೋ ಲಕ್ಷ್ಮೀಶ ಕೇಶವ ಉಪೇಕ್ಷಿಸದೆ ನೀ ಬಂದು ಭಕ್ಷಿಸುವ ನೆಗಳನೀ ಶಿಕ್ಷಿಸಲು ಬೇಕು ಅಕ್ಷಿಯನು ಇಟ್ಟುಬಂದು 9 ಸರಸಿರುಹದಳನಯನ ಮೂರ್ತಿ ಪರಿ ಹರಿಸೋ ಕ್ಷೀರಾಬ್ಧಿ ಶಯನನೆಂದು ಪರಿ ಪರಿಯ ಸ್ತುತಿಸಲಾಕ್ಷಣ ಮಹಿಮ ಧ್ವನಿಗೇಳ್ದು ನಾಗಿಕರದಿ ಚಕ್ರವ ಕೊಂಡು ಭರದಿ ಭಕುತನ ಕಂಡು ಕರಿರಾಜಗಭಯವಿತ್ತ 10 ಸಿರಿ ಮೊಗದ ನಳಿನಾಯತೇಕ್ಷಣದ ತೊಳಪ ಕದಪಿನ ಮಿಸುಪ ನವರತ್ನ ಕುಂಡಲದ ಕೌಸ್ತುಭ ಹಾರದುರಸ್ಥಳದ ಹೊಳೆವ ಮಣಿಮಕುಟ ನೇಳಿವದಂತಪಂಕ್ತಿಯ ಚಾರು ಕೋರವಿಸೆ ಕಂಡ 11 ಮೇಲೆ ಕೈವಾರಿಸುವ ಸುರರ ದುಂದುಭಿ ಮೊಳಗೆ ಹೊಳೆಯ ಎತ್ತಿದ ತೋರ ಸತ್ತಿಗೆಯ ತೋರಣದ ಸಾಲುಗಳ ಸಂದಣಿಯ ಸಂಭ್ರಮದ ಜಾಲವನು ಕಂಡುಗಜವು ಪಾಲಿಸೈ ಗೋವಿಂದನಾಥ ಬಂಧು ತ್ರಾಹಿ ಭವಾಬ್ಧಿಸಾರ ತ್ರಾಹಿ ಪಾಲಿಸೈ ತ್ರಾಹಿ ಎನುತ 12 ಗಡಗಡನೆ ನಡುಗತಿರೆ ಕಡಲಶಯನನು ಕಂಡು ಕಡುಕೃಪೆಯೊಳೈ ತಂದು ಮಡುವ ಧುಮುಕಿಯ ಗಜವ ಪಿಡಿದಾಗ ವಾಮಕರದಿಂದಳೆಯನೆಗಳು ಸಹತಡಿಗೆ ಬರಲಾಗಕಂಡು ಘುಡು ಘುಡಿಸಿ ಕೋಪದಿಂ ತುಡುಕಿ ಚಕ್ರವತೆಗೆದು ಪಿಡಿದು ನೆಗಳನು ಕಡಿಯೆ ಒಡನಾಗ ನಿಜರೂಪ ಬಿಡುಗಡೆಯಾಯಿತೆಂದು ನಡೆದು 13 ಹರಿ ಬಳಿಕ ಕರಿವರಗೆ ವಿಶ್ವರೂಪವತೋರಿ ತರಣಿಕೋಟಿ ಸಹಸ್ರತೇಜದಿಲ ರಂಜಿಸಿಯೆ ಪರಿದುಹರಿವೋಲೆಸೆದನು ಬಳಲಿದೆಯಾ ಎಂದು ಕರುಣಾಕಟಾಕ್ಷದಿಂ ಕರಿವರನ ಸಹಿತ ವಾಸ ದೆಡೆಗೆ 14 ಅವನುದಯ ಕಾಲದೊಳೆದ್ದು ಪೇಳುವನು ಆವರಿದ ಭಕ್ತಿ ಭಾವದಲಿದನು ಕೇಳುವರು ಪಾವನರು ಪುಣ್ಯಾತ್ಮರು ಕೋವಿದರು ಧರಗೆ ಗಜರಾಜೇಂದ್ರ ಮೋಕ್ಷವನು ಸಾವದಾನ ದಲಿದನು ನೇಮದಲಿ ಕೇಳ್ವವರ ನೆನೆದವರ ಕಾಯ್ವನೆಂದು 15
--------------
ಕವಿ ಪರಮದೇವದಾಸರು
ಎರಡನೆಯ ಸಂಧಿ ಶ್ರೀಕಾಂತನ ಕರುಣವುಳ್ಳವಗೆ ಕುಂತಳಪುರಕೆ ಕಳುಹಿದನು 1 ಗಂಧಾಕ್ಷತೆ ಫಲಪುಷ್ಪದಿಂದ ಸಾಕ್ಷಾತು ಗಣಪತಿಗರ್ಪಿಸಿ ತರಳನ ಶಿಕ್ಷಾಗುರುವಿಗೆ ಒಪ್ಪಿಸಿದ2 ಮಣ್ಣ ಹರಹಿ ಅಕ್ಷರವ ಬರೆದು ಎನ್ನಣ್ಣನೀ ತಿದ್ದು ಬಾ ಎನಲು ಎನ್ನೊಡೆಯ ಶರಣೆಂದು ಬರೆದ 3 ನಿನ್ನ ಜ್ಞಾನ ಬೇರೆ ಚಿತ್ತ ಬೇರೆ 4 ಎಂದು ಧಿಕ್ಕರಿಸಿ ಹೇಳಿದನು 5 ಚಾತುರ್ಯದ ಬುದ್ಧಿ ಬೇರೆ ತೊಡರು ತಾತಗೆ ಒಯ್ದು ಒಪ್ಪಿಸಿದ 6 ಮುಕುಂದನ ಭಜಕನೆಂದೆನದೆ ಬಂದ ಹಾಂಗಿರಲೆಂದು ಸುತನ 7 ಧ್ರುವ ಪ್ರಹ್ಲಾದ ಅಕ್ರೂರಾಂಬರೀಷ ಮಾಧವ ಮುರಾರಿಯನ್ನು ಭಜಿಸಿ ಭವ ಭಯಾದಿಗಳಿಲ್ಲ ನಮಗೆ 8 ಕಟ್ಟಿಕೊಟ್ಟರು ಕರಲೇಸು ಎನುತ ಕಟ್ಟೆದರ್ ವೇದೋಕ್ತದಲಿ 9 ಓದಿಸಿದರು ಗುರುಮುಖದಿ ಮಾಧವನಲ್ಲದೆ ಅನ್ಯತ್ರರಿಲ್ಲವೆಂದು ಭೇದಾಭೇದವನೆಲ್ಲ ತಿಳಿದು 10 ಹೊಳೆವ ಶ್ರೀ ಮುದ್ರಿಕೆಯಿಟ್ಟು ಗೆಳೆಯರೆಲ್ಲರಿಗೆ ಬೋಧಿಸಿದ 11 ಪತಿತರಾದಪಗತಿ ಕುಮಾರರಿಗೆಲ್ಲ ಸದ್ಗತಿಯಾಗಬೇಕೆಂದೆನುತ ಮಾಡಿಸಿದನಾಜೆÉ್ಞಯಲಿ 12 ದ್ವಾದಶ ನಾಮವ ಹಚ್ಚಿ ಸಾದಿ ಸಾಧಿಸಿರಿ ಏಕಾದಶಿ ವ್ರತವೆಂದು ಬೋಧಿಸಿದನು ಎಲ್ಲರಿಗೆ13 ಜಾಗರ ಮಾಡಿ ಫುಲ್ಲನಾಭನ ಭಜಿಸುವರು ಪರಗೋಷ್ಠಿಯಿಲ್ಲ 14 ಬೆಳೆಸುವ ಹÀರಿಭಕ್ತರೊಡನೆ ಪರಾಕ್ರಮಿಯೆನಿಸಿದನು 15 ಇಮ್ಮಡಿಯನು ಗೆದ್ದು ಹೇರಿಸಿದನು ತನ್ನ ಪುರಕೆ 16 ತಂದು ಆರತಿಗಳನೆತ್ತಿ ಚರಣಕ್ಕೆರಗಿದನು 17 ಜಗದಧಿಪತಿಯಾಗು ಎಂದು ಹರುಷವನೆ ತಾಳಿದಳು 18 ಲೇಸಾದ ಶುಭಲಗ್ನವ ಕಟ್ಟಿ ಸುತನ ಸಿಂಹಾಸನದಲ್ಲಿ ಕುಳ್ಳಿರಿಸಿ ಭೂಸುರ ಬಂಧುಗಳೆಲ್ಲರು ನೆರೆದಿಂದುಹಾಸಗೆ ಪಟ್ಟಗಟ್ಟಿದರು19 ಪರಿ ಪಾಲಿಸುತ್ತ ರಾಜ್ಯನೀತಿಯಿಂದಾಳುತಲಿಹನು 20 ಲಾಲಿಸು ಕುಂತಳೇಶ್ವರಗೆ ಕಾಲಕಾಲಕೆ ಕಪ್ಪವ ಕೊಟ್ಟು ಬಹೆವು ಆಲಸ್ಯವಾಯಿತು ಎಂದ21 ಉದಾರಬುದ್ಧಿಯಲಿಂದುಹಾಸ ವಿಚಾರಿಸಿದನು ತನ್ನಪಿತನ 22 ಜೋಯಿಸ ಪುರೋಹಿತಗೆ ಕಾಂತಿಗೊಡದ ಕನಕಾಭರಣವೆಲ್ಲವ ಅಂತಸ್ಥದಿಂದ ಕಟ್ಟಿದನು23 ಜ್ಞಾನವುಳ್ಳ ಭೃತ್ಯರೊಡನೆ ದಾನವಾಂತಕನ ಕಿಂಕರನು 24 ತೆರಳಿದರಲ್ಲಿಂದ ಮುಂದೆ ಹೆಬ್ಬಾಗಿಲ ಮುಂದೆ 25 ದಿಟ್ಟರಾರೆಂದು ಕೇಳಿದನು ಅಟ್ಟಿದೆನ್ನೊಡೆಯ ಪುಳಿಂದ 26 ಮಂದಿರಕಾಗಿ ಕರೆಸಿದ ಕರವ ಮುಗಿದರು 27 ಕಡೆಗಣ್ಣಲಿ ನೋಡಲಿಲ್ಲವರೊಳು ಮಾತನುಡಿಯದೆ ಸನ್ಮಾನಿಸದೆ ಝೇಂಕರಿಸಿ ಕೇಳಿದನು 28 ಜೀಯ ಹಸಾದ ನಿಮ್ಮಡಿಗೆ ಇಂದಿನ ವಾಯಿದ ಕಟ್ಟಿದ ಧನವು ದೇವರು ಕೈಕೊಂಬುದೆನಲು 29 ನಗ ನಾಣ್ಯ ದೇವಾಂಗವನು ನಗ ನಾಣ್ಯ ದೇವಾಂಗವನು 30 ಸೊಗಸಾಗಿ ಮಾಡಿಸು ಎಂದ ನಗೆಮುಖದಿಂದ ಹೇಳಿದನು 31 ಸಣ್ಣ ರಾಜಾನ್ನದಕ್ಕಿಯನ್ನ ಶಾಕವು ಅಣ್ಣೆವಾಲೆರೆದ ಪಾಯಸವು ಉಣ್ಣೇಳಿರೆಂದು ಕರೆದರು 32 ನಿರಾಹಾರವು ನಮಗೆ ಎಂದು ಕೇಳಿದನು 33 ಎಮ್ಮೊಡೆಯನ ಸುಕುಮಾರ ತಮ್ಮ ರಾಜ್ಯದಲ್ಲಿ ಏಕಾದಶಿವ್ರತ ನಿರ್ಮಾಣವನ್ನೆ ಮಾಡಿದನು34 ಸತಿ ಎಂದೆಲ್ಲರು ಹೇಳುತಲಿಹರು ಎಲ್ಲಿದ್ದ ಆತಗೆ ಸುತನು 35 ಹಿಂದಟ್ಟಿ ಹೋದನು ಪುಳಿಂದ ಅಟ್ಟಡವಿಯೊಳಗಿರಲು 36 ಪೋಷಣೆಯನು ಮಾಡಿದರು ಭೂಸುರರನೆ ಪಾಲಿಸುವನು 37 ನಟ್ಟಂದದಿ ಮನದೊಳು ಮರುಗಿ ಎಂದು ತಾ ಮನದೊಳು ತಿಳಿದ 38 ಅನುಕೂಲವಾದ ಕಾರ್ಯವು ಮನದಲ್ಲಿ ಚಿಂತೆ ಮಾಡಿದನು 39
--------------
ಹೆಳವನಕಟ್ಟೆ ಗಿರಿಯಮ್ಮ
ಎಲೆ ಎಲೆ ಎಲೆ ಮುದಿಮೂಳಿ ನಿನ್ನ ಕಲ್ಮಷ ಇನ್ನು ತೊಳಿವಲ್ಲಿ ಪ ತಿಳಿಯದೆ ಸುಮ್ಮನೆ ಕಳಕೊಂಡಿ ವಯವೆಲ್ಲ ಸುಳ್ಳೆ ಸುಳ್ಳಿಗಾಗಿ ಹೋಗಿ ಮೃತ್ಯುಕೈಲಿ ಅ.ಪ ಹಿಡಿದಿದ್ದಿ ಸುಡುಗಾಡ ಪಥವ ಇನ್ನು ಬಿಡವಲ್ಲಿ ಮಾಯಮತವ ಹೆಡತಲೆಮೃತ್ಯು ನಾಳೆ ಅಡರಿ ಪಿಡಿದು ನಿನ್ನ ಕೆಡ ಕೆಡವಿ ಒದೆವಾಗ ಬಿಡಿಸೊರಾರವ್ವ 1 ಇನತು ನಾಚಿಕಿಲ್ಲ ರೋಗಿ ನೀನು ತಿಣಿತಿಣಿಕಾದಿ ಮುದಿಗೂಗಿ ಕನಿಕರಿಲ್ಲದೆ ಯಮನ ಠೊಣಪರ್ಹಿಡಿದು ನಿನ್ನ ಹೊಗೆರ್ಹೊಣಿಕಿಲ್ಹೇರುವಾಗ ನಿನಗ್ಯಾರೆ ಕಾಗಿ 2 ಹಣವೆಷ್ಟಿರಲು ನಿನ್ನದಲ್ಲ ನಾಳೆ ಮನೆಮಾರು ಬರದು ಹಿಂಬಲ ಮಣಿಕಟ್ಟೆಲವು ಮುರಿದ್ಹಣಿಯುವಾಗ ನಿನ್ನ ತನುಜನುಜರು ಯಾರು ಹಣಿಕ್ಹಾಕುವರಿಲ್ಲ 3 ಎಷ್ಟು ನಿನ್ನಗೆ ಬಡೆದಿದಮ್ಮಾ ನಿನ್ನ ಖೊಟ್ಟಿ ಕಡೆಯಿಲ್ಲಮ್ಮ ಉಟ್ಟ ಸೀರೆಯ ಬಿಡಿಸಿ ಕೊಂಡೊಯ್ದು ನಿನ್ನ ಸುಟ್ಟು ಸುರೆಹೊಯ್ವಾಗ ಆಟ ನೋಡಮ್ಮ 4 ಭಿನ್ನ ಭೇದಗಳನ್ನು ಕಡಿ ನಿನ್ನ ಒಡಲೊಳು ತಿಳಕೊಂಡುನೋಡಿ ಧನ್ಯ ಶ್ರೀರಾಮನ ಉನ್ನತ ಚರಣ ಇನ್ನಾದರು ಮನಮುಟ್ಟಿ ನೆನೆಕಂಡ್ಯ ಖೋಡಿ 5
--------------
ರಾಮದಾಸರು