ಒಟ್ಟು 1900 ಕಡೆಗಳಲ್ಲಿ , 109 ದಾಸರು , 1384 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನುಂಟೇನಿಲ್ಲ ಗುರುಕೃಪೆಯಿಂದ ತನುಮನಿಟ್ಟದೇ ಪಡಕೊಂಬುದು ಚಂದ ಧ್ರುವ ಸುಖ ಸುರುತದೆ ನೋಡಿ ಬಲುಬ್ರಹ್ಮಾನಂದ ಪ್ರಕಟಸಲಿಕ್ಕೆ ಬಾರದು ಮುಖದಿಂದ ಸಕಲವೆಲ್ಲಕೆ ಮೇಲು ತಿಳಿಯಬೇಕಿದೊಂದೆ ಶುಕಾದಿ ಮುನಿಗಳದಾರಿದರಿಂದೆ 1 ಸಿದ್ಧ ಬುದ್ಧ್ದರಿಗೆ ಸಾದ್ಯವದೆ ಸಿದ್ಧ ನೋಡಿ ಬುದ್ಧಿವಂತರಿಗೆ ಒಲಿದುಬಾಹುದು ಕೈಗೂಡಿ ಸನ್ಮಾರ್ಗ ಸುಪಥವಿದೆ ಸದ್ಗುರು ಸೇವೆಮಾಡಿ ಸದ್ಭ್ಬಾವದಿಂದಲಿ ಸ್ವಸುಖವೆ ಸೂರ್ಯಾಡಿ 2 ಭಾಸ್ಕರ ಗುರುದಯದವಗಿನ್ನೇನು ಭಾಸುತೀಹ್ಯದಾವಗಿನ್ನು ನಿಜಕಾಮಧೇನು ವಿಶ್ವದೊಳಗವನೊಬ್ಬ ಸಿದ್ಧತಾನು ದಾಸಮಹಿಪತಿಗಿದೇ ಅಭಿನವಧೇನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದು ಸ್ತುತಿಸಲಿ ದೇವ ರಂಗಯ್ಯ ನಿನ್ನ ಜಾಣ- ತನವ ನೀನೆ ಬಲ್ಲೆ ಶ್ರೀ ರಂಗಯ್ಯ ಪ. ಮತ್ಸ್ಯನಾಗಿ ಶ್ರುತಿಯ ತಂದೆ ರಂಗಯ್ಯ ನೀನು ಕುತ್ಸಿತ ತಮನ ಕೊಂದೆ ರಂಗಯ್ಯ ಸ್ವಚ್ಛ ಕೂರುಮನಾದೆ ರಂಗಯ್ಯ ಭಕ್ತ ರಿಚ್ಛೆಯ ಪಾಲಿಸಿದೆ ಶ್ರೀ ರಂಗಯ್ಯ1 ಆದಿವರಾಹ ನೀನಾದೆ ರಂಗಯ್ಯ ನೀನು ಪೋದ ಮೇದಿನಿಯ ತಂದೆ ರಂಗಯ್ಯ ಭೇದಿಸಿ ಕಂಬದಿ ಬಂದೆ ರಂಗಯ್ಯ ಪ್ರ- ಹ್ಲಾದನ ಕಾಯ್ದೆ ಶ್ರೀ ರಂಗಯ್ಯ 2 ಬಲಿಯನ್ನು ವಂಚಿಸಿದಂಥ ರಂಗಯ್ಯ ನೀನು ನೆಲವ ಓರಡಿ ಮಾಡ್ದೆ ರಂಗಯ್ಯ ಬಲವಂತ ಭಾರ್ಗವನಾದೆ ರಂಗಯ್ಯ ನೀನು ಛಲದಿ ಕ್ಷತ್ರಿಯರ ಗೆದ್ದೆ ರಂಗಯ್ಯ 3 ಜಲಧಿಯನು ಕಟ್ಟಿದೆ ರಂಗಯ್ಯ ಹತ್ತು- ತಲೆಯವನ ಕುಟ್ಟಿದೆ ರಂಗಯ್ಯ ಮಲೆತ ಮಾವನ ಕೊಂದೆ ರಂಗಯ್ಯ ಯದು- ಕುಲವನುದ್ಧರಿಸಿದೆ ಶ್ರೀ ರಂಗಯ್ಯ 4 ಸತಿಯರ ಮೋಹಿಸಿದೆ ನೀನು ರಂಗಯ್ಯ ಬಲು ಚತುರ ಬೌದ್ಧನಾದೆ ರಂಗಯ್ಯ ಖತಿಯಿಂದ ಹಯವೇರಿದೆ ರಂಗಯ್ಯ ದು- ರ್ಮತಿಯ ಕಲಿಯ ಕೊಂದೆ ಶ್ರೀ ರಂಗಯ್ಯ 5 ತ್ರಿಭುವನದೊಳಧಿಕÀ ರಂಗಯ್ಯ ನೀನು ವಿಭೀಷಣನಿಗೆ ಪ್ರಸನ್ನ ರಂಗಯ್ಯ ನೀ- ನಭಯವಿತ್ತೆನ್ನ ಕಾಯೊ ಶ್ರೀ ರಂಗಯ್ಯ 6 ವಾದಿರಾಜಗೊಲಿದೆ ರಂಗಯ್ಯ ನೀನು ಮೋದಿ ಹಯವದನನಾದೆ ರಂಗಯ್ಯ ಸಾಧಿಸಿ ಖಳರ ಕೊಂದೆ ರಂಗಯ್ಯ ವಿ- ನೋದÀದಿ ವೇದವ ತಂದೆ ಶ್ರೀ ರಂಗಯ್ಯ 7
--------------
ವಾದಿರಾಜ
ಏಳಮ್ಮ ತಾಯೆ ಮುದದಿಂದೆಮ್ಮನು ಕಾಯೆ ಕೋಳಿ ಕೂಗುತಲಿದೆ ಕೇಳಮ್ಮಯ್ಯಾ ಪ ಕಾಲನಾಮಕ ಸೂರ್ಯದೇವನ ರಥದ ಕೆಂ- ಧೂಳಿಯೇಳುವಂತೆ ಅರುಣೋದಯವಾಯ್ತು ಅ.ಪ. ಮರುತಸುತನೆದ್ದು ಪರಾಕ್ಹೇಳುತಿಹನು ಗರುಡನು ಹೊರಬಾಗಿಲೊಳು ಕಾದಿರುವನು ಪರಿವಾರದವರೆಲ್ಲ ಕರಕಟ್ಟಿ ನಿಂದಿಹರು ಹಿರಿಯ ಸೊಸೆ ವಾಣಿ ವಾರಿ ಕಲಶ ಪೊತ್ತಿಹಳು1 ಸಾರಭಕ್ತರು ಎಲ್ಲ ಸಾಲಾಗಿ ನಿಂದಿಹರು ಭೂರಿ ಕುತೂಹಲದಿ ನಿನ್ನ ದರುಶನಕಾಗಿ ವಾರಿಜಭವ ಮುಖ್ಯ ಸರುವ ದೇವತೆಗಳು ಸಾರಿ ಬರುತಿರುವರು ನೀನೇಳಮ್ಮಯ್ಯಾ 2 ನೀ ಪೋಗಿ ಆತನ ಕರಪಿಡಿದೆಬ್ಬಿಸಾದೊಡೆ ಶ್ರೀಪತಿಯು ಶೇಷತಲ್ಪದಿಂದೇಳನು ಅಪಾರಮಹಿಮ ಶ್ರೀ ರಂಗೇಶವಿಠಲನ ವ್ಯಾಪಾರಂಗಳನರಿತವರಿನ್ನ್ಯಾರಮ್ಮ 3
--------------
ರಂಗೇಶವಿಠಲದಾಸರು
ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ ಪ ಬಾಗಿಲಲಿ ಕೂಗುವರು ಸನಕಾದಿ ಮುನಿವರರು ಜಾಗರವ ಮಾಡಿರ್ಪ ಸುರರೆಲ್ಲ ಬಂದಾಯ್ತು ಯೋಗಿಗಳು ಪೊಗಳುವರು ನಿನ್ನಂಘ್ರಿಯ 1 ಲಂಕೆಯನು ಬಿಟ್ಟು ವಿಭೀಷಣನು ನಿಂತಿರ್ದ ಗಂಗೆಯನು ಬಿಟ್ಟೇಳು ಜಗದೀಶನೆ | ತಂಗಿಯನು ಬೇಡುವರೆ ಭಾವ ಪಾರ್ಥನು ಬಂದ ಮಂಗಳದ ನುಡಿ ನಿನಗೆ ಕೇಳಲಿಲ್ಲವೊ ಹರಿಯೆ 2 ಥಟ್ಟನೆ ಏಳು ಯಾದವರಿಗರಸ | ಸೃಷ್ಟಿಗೊಡೆಯನೆ ಕೇಳು ಭೂಸುರನು ರುಕ್ಮಿಣಿಯ ಪುಟ್ಟ ವಾಲೆಯ ತಂದ ನೀ ನೋಡು ನೋಡು 3 ಕೋಪಿಗಳರಸಾದಿ ದುರ್ವಾಸ ಮುನಿ ಬಂದ | ಇಂಪಾಗಿ ಪಾಡುತಿಹ ಸುರಮುನಿಯು ಬಂದ | ಕೋಪದೊಳೊದೆದ ಮುನಿ ಬಂದ ಬೇಗೇಳು ಪುಷ್ಪಶರ ಮಗ ಬಂದ ಬೇಗೇಳು ರಂಗ 4 ಸಿರಿದೇವಿ ನಿನ್ನಂಘ್ರಿಗಳನೊತ್ತ ಬಿಡಳೇನೊ | ಮಾರುತಿಯ ಜಪವಿನ್ನು ಮುಗಿಯಲಿಲ್ಲೊ | ನರರೆಲ್ಲ ನಗುವಂತೆ ಮಾಡದಿರೊ ರಂಗ 5
--------------
ವಿಶ್ವೇಂದ್ರತೀರ್ಥ
ಏಳಯ್ಯ ಶ್ರೀ ಲಕ್ಷ್ಮೀರಮಣ ಸುರನÀುತ ಚರಣ ಏಳು ಶ್ರೀ ನೀಲಕಂಠನ ಮಿತ್ರ ಸುಚರಿತ್ರ ಏಳು ಶ್ರೀ ಭಾಗೀರಥೀ ಪಿತನೆ ಮತಿಯುತನೆ ಏಳು ಶ್ರೀ ಕೃಷ್ಣರಾಯ ಸ್ವಾಮಿ ಏಳಯ್ಯ ಬೆಳಗಾಯಿತು ಪ ನಸುಗೆಂಪಾಗಿ ತಾರಕಿಗಳಡುಗುತಿದೆ ಬೊಂಪು ಹರಿದೋಡುತಿದೆಕೋ ಸೊಂಪಡಗುತಿದೆ ಕುಮುದ ಕಮಲವರಳುತಿದೆ ನಾಗ ಸಂಪಿಗೆಯ ಬನದಿ ಸ್ವರ ಗೈಯುತಿದೆ ಮರಿದುಂಬಿ ಸಂಪತ್ತು ಬಡವಗೆ ಬರುವಂತೆ ರವಿ ಬಿಂಬ ಸೊಂಪಿ ನಿಂದೆಸೆಯುತಿದೆಕೋ ||ಸ್ವಾಮಿ|| 1 ಹಲವುಮೃಗ ಜಾತಿಗಳು ಹಳುವನಡ ಹಾಯುತಿವೆ ಫಲ ಪುಷ್ಪಚಯವು ಪಲ್ಲವಿಸಿ ಪಸರಿಸುತಲಿವೆ ಗಿಳಿ ವಿಂಡು ನಲಿಯುತಿದೆ ನವಿಲು ಜೇಂಕರಿಸುತಿವೆ ಹೊಲ ಮನೆಗಳೆಲ್ಲ ಹಸನಾಗಿ ಕಾಣಿಸುತಲಿವೆ ಸುಳಿಗಾಳಿ ಸುಳಿಯುತಿದೆ ಜಲಜಾಕ್ಷನುಪ್ಪವಡಿಸಾ ||ಸ್ವಾಮಿ|| 2 ಹಕ್ಕಿಗಳು ಹಾರುತಿದೆ ಕುಕ್ಕುಟವು ಕೂಗುತಿದೆ ನಕ್ಷತ್ರ ಪತಿಯ ಪ್ರಭೆ ಮಾಸುತಿದೆ ಸುರಭಿ ಬಲು ರಕ್ಕಸಾಂತರನೆವಳು ಮನೆಮನೆ ಬಿಡದೆ ಅಮ್ಮಿಯನು ಹುಡುಕುತಿವೆ ಚೊಕ್ಕ ಬೆಳಗಾಯಿತಿದೆ ಕೋ ||ಕೃಷ್ಣ || 3 ಪತಿವ್ರತೆಯರೆದ್ದು ಪುರುಷನ ಚರಣಕ್ಕೆರಗಿ ಚಮ ತ್ಕøತಿಯಿಂದ ಮುಖ ಮಜ್ಜನವಮಾಡಿ ಪಣೆಗಿಟ್ಟು ದಧಿ ಮಥಕನುವಾಗಿ ಕುಳಿತು ಅತಿಶಯ ದೊಳಗೆಲ್ಲ ಮನೆವಾರ್ತೆಯನು ಮುಗಿಸಿ ನಿಜ ಮತ ವಿಡದು ಭಕ್ತಿಯಲಿ ಗಿಂಡಿಲುದಕವ ತುಂಬಿ ನೀನು ಉಪ್ಪವಡಿಸ 4 ಮದ್ದು ಮಂತ್ರವು ಸಿದ್ದಿಸುವ ಕಳವಿನೊಳಗಿರ್ದ ಚೋರರಿ ಗೆದೆಯ ಧೈರ್ಯಗುಂದುವ ಸಮಯ ಉದ್ಯೋಗವಂತರಿಗೆ ಎಚ್ಚರಿಕೆ ಸಮಯ ದರಿದ್ರರಿಗೆ ನಿದ್ದೆ ಸಮಯ ಬುದ್ದಿಯುತರಾದ ಬುಧಬಾಲರಿಗರ್ಥಗ್ರಂಥ ದ್ಯಾನ ಶಾಸ್ತ್ರ ಪುರಾಣಗಳ ಬಹುವಿದ್ಯೆ ಪಠಿಸುವ ಮುದ್ದು ಗೋಪಾಲಕೃಷ್ಣ 5 ವ್ಯಾಸ ವಾಲ್ಮೀಕಿ ಶುಕನಾರದನು ಶೌನಕ ಪರಾಶರ ವಶಿಷ್ಟ ವೈಶಂಪಾಯ ಕಣ್ವ ವಿಶ್ವಾಮಿತ್ರ ಗೌತಮ ಭರದ್ವಾಜ ಸನಕ ದೂರ್ವಾಸ ಕೌಶಿಕ ಕಪಿಲರು ಕೌಶ್ಯಪ ದಧೀಚಿ ಭಾರ್ಗವರಗಸ್ತ್ಯ ಋಷಿ ಈ ಸಮಸ್ತಾದಿ ಹರಿಯೇ || ಸ್ವಾಮಿ || 6 ಜಾಂಬವ ವಿಭೀಷಣಾಶ್ವತ್ಥಾಮ ಹನುಮಂತ ಜಂಭಾರಿಸುತ ಧನಂಜಯ ಬಲಿಷ್ಠಹಲಾದರೆಂಬಸದ್ಭಕ್ತರುಗಳು ಅಂಬುಜೋದ್ಭವ ಮುಖ್ಯರಮರ ಗಂಧರ್ವಾದಿ ತುಂಬುರ ಭುಜಂಗ ಭೂಸುರರೆಲ್ಲರೊಂದಾಗಿ ಬಿಡದ ಹಂಬಲಿಸುತೈದಾರೆ ಹರಿಯೆ || ಸ್ವಾಮಿ || 7 ಗಂಗೆ ಗೋದಾವರಿಯ ಭೀಮರತಿವರದೆ ವರ ತುಂಗ ಭದ್ರೆಯು ಯಮುನೆ ಕಾವೇರಿ ಸಿಂಧು ಅಂಗನೆಯರೆಲ್ಲರೂ ಕೂಡಿ ರಂಗು ಮಾಣಿಕದ ಆಭರಣಗಳಲಂಕರಿಸಿ ಹಿಂಗದೆಲ್ಲರು ನೆರೆದು ಹರಿ ನಿಮ್ಮ ಬಾಗಿಲೋಳು ಮಂಗಳಭಿಷೇಕಕೆಂದು ಸ್ವಾಮಿ 8 ಕರುಗಳನು ಕಾಯ್ದ ಕಾರುಣ್ಯ ಮೂರುತಿ ಏಳು ವರ ಪಾಂಡುರಂಗ ವಿಠಲ ಹರಿಸುತನ ಹಯವರೂಥವ ಹರಿಸಿದವನೆ ಏಳು ಹರಿಸುತನ ಸುತನ ಸುತನ ಕಾಯ್ದವನೆ ಏಳು ಹರಿಸುತನ ಕೋಣೆ ಲಕ್ಷ್ಮೀರಮಣನೆ ಏಳು ಶ್ರೀ ಹರಿಯೆ ನೀನು ಉಪ್ಪವಡಿಸಾ ||ಕೃಷ್ಣ || 9
--------------
ಕವಿ ಪರಮದೇವದಾಸರು
ಏಳು ಏಳು ಏಳು ಲೋಕದ ಒಡಿಯನೆ | ಏಳು ಗೋವಳರಾಯ ಗೋಪೇರಿಗತಿ ಪ್ರಿಯಾ | ಅಪ್ರಾಕೃತ ಕಾಯಾ ಸುರಮುನಿ ಗೇಯಾ | ಏಳು ಗೋಪಾಲಕೃಷ್ಣ ಪ ಪುರಂದರನ ದಿಶೆಯಲ್ಲಿ ಗರುಡಾಗ್ರಜನು ಬರಲು | ಶರಧಿ ತೆರೆ ತಗ್ಗಿದವು ಉರಗ ಪೆಡೆ ಪಸರಿಸಿದಾ | ಹರಿದು ಪೋಯಿತು | ಕಾಳ | ಸುರ ವೈರಿಗಳು ಅಡಗಲು | ಅರಳಿದವು ಅರವಿಂದ | ಝಂಕರಿಸಿ ಶುಕಪಿಕ ಮೃಗಾದಿ ಯೆ-| ಕರುಣಾಳುಗಳ ದೇವನೆ 1 ಮೇರೆ ತಪ್ಪಿ ಬಂದಾ ರಥಸಹಿತ ಭಾಸ್ಕರನು ದಿಶದಿಶೆಗೆ ಕಿರಣಗಳ | ಹರಹಿಕೊಳುತಾ | ಹರಿ ಗುರುವೆ ಪೇಳಲಳವೆ | ಕಲಿಸಿ ಮಂದಿರದೊಳಗೆ ಎಳೆಬಾಳೆ | ಶೃಂಗರಿಸಿದರು ಅರವಿಂದನಾಭ ಚೆಲುವ 2 ಪರಮ ಮಂಗಳವಾದ ದ್ವಾರ ದ್ವಾರಗಳಿಗೆ | ವಿರಚಿಸಿತು ಕಳಿತೆ ತೋರಣ ಕನ್ನಡಿ ಮಲಕು | ಭರದಿಂದಲಿ ಬಿಗಿದು ಮೇಲ್ಕಟ್ಟು ಚಿತ್ತರದ ಗೊಂಬೆ | ಪರಿಚಾರವು ವಪ್ಪಲು | ಹಿರಿದು ಹೂವಿನ ಮಾಲೆ ಕಟ್ಟಿದವು | ಮಕರವು ತುರ ತೊ ಗರು ಪೊಗಳು ಕಾದೋದಕವು ತಂದಿರೆ | ಅರಸಾದ ಆದಿದೈವ3 ಪರಮ ಭಾಗವತರು ಬತ್ತೀಸರಾಗದಲಿ | ಸ್ವರಮಂಡಲಾ ತಾಳ ತಂಬೂರಿ ಕಿನ್ನುರಿಗ ಸರವೇಣಿ ನಾನಾ ಗೀತ | ಪರಿ ಪರಿ ಕೊಂಡಾಡುತಿರಲು | ಕುಣಿಯುತಿದೆ ಸುರನಿಕರ ಪರಿಪಾಲಿಕ 4 ಸುರ ನರೋರಗ ಯಕ್ಷಗರುಡ ಸಿದ್ಧ ವಿದ್ಯಾ | ಕಿನ್ನರ ಸಾಮ | ಪರಮೇಷ್ಟಿ ವಾಲಗಕೆ ಬಂದು ಎ- ದುರು ನಿಂದು ತುತಿಪನಾಹಕೊ ಭರಿತಾಭರಣವಿಟ್ಟು | ಸರಸ್ವತಿ ಭಾರತಿ ಗಿರಿಜೆ ಸುರನಾರಿಯರು ತಮ್ಮ | ಹರಿವಾಣ | ದಾರುತಿಯ ಪಿಡಿದು ನಿಂದೈಧಾರೆ ಶರಣಾಗತ ವತ್ಸಲಾ 5 ಕರಿ ತುರಗ ರಥಪಾಯದಳವು ದಟ್ಟಡಿಯಾಗಿ | ನೆರದಿದೆ ಸಭೆಯಲಿ ಸಪ್ತಾಂಗದವರುಂಟು | ಅರಿ ಶಂಖಗದಾ ಪದುಮಖೇಟ ನಂದನ ಮುಸಲಾ | ಪರಶು ನೇಗಲ ಸುಶಕ್ತಿ ಪರಿಪರಿಯ ದಿವ್ಯಾಯುಧವ ತಮತಮಗೆ | ಧರಿಸಿ ಸಂತೋಷದಲಿ ದಾತಾರ ನಿನ್ನಯ ಬರುವ ಹಾರೈಸಿ | ವೈರಿಗಳು ನೋಡುತಲಿ ಹಾರೆ ಕುರುವಂಶ ವಿನಾಶಕಾ 6 ಸುರಿಗೆ ಪಾರಿಜಾತದ ಮಲ್ಲಿಗೆ | ಸುರವನ್ನೆ ಬಕುಳ ಪಾರಿ ಭದ್ರ ಸಂಪಿಗೆ | ಮರುಗ ಮಲ್ಲಿ ಜಾಜಿ ಕಾಂಜಿ ಶಾವಂತಿಗೆ ಕರವೀರ ನಂದಾವರ್ತ | ಅರಗುಂದ ಕುಂತಾತಸಿದವನ ಮುಡಿವಾಳ | ಈರವಂತಿಕೆ ಕೇತಿಕಾ ಸರ್ವ ಕುಸುಮಗಳಿಗೆ | ಶಿರೋರತನವಾದ ಎಳದುಳಸಿ ಹಾರಗಳಿಗೆ | ಅರಿಗಳ ಮಸ್ತಕಾಂಕುಶಾ7 ಚರಣದಂದಿಗೆ ಪೆಂಡೆ ಪೊಂಗೆಜ್ಜಿ ಮಣಿಮಯದ | ಸರಪಳಿಯು ತೊಡೆದು ಬಿರುದಾವಳಿಗಳು ಪೀತಾಂ | ಕಾಂಚಿ ದಾಮಾ | ಸರಿಗೆ ನ್ಯಾವಳಹಾರ ತುಳಸಿ ಕೌಸ್ತಭ ಪದÀಕ | ಸಿರಿವತ್ಸ ಕನಕಕುಂಡಲ ನೊಸಲ ಮೃಗನಾಭಿ | ಕರದಾಭೂಷ ಫಣಿಮಕುಟ ಧರಿಪಾ ದೇವಿ ನಿನ್ನ | ದರುಶನ ಭಕ್ತರಿಗೆ ಲಾಭಾ 8 ಸಿರಿ ಏಳಲೀಸಳೊ ಹತ್ತವತಾರವನು ಧರಿಸಿದ ದಣವಿಕಿಯ | ಕರಿ ಕಾಯಲಿ ಬಂದ ಭರದ ಉನ್ನತವು | ರಣದೊಳಗೆ ಪಾರ್ಥನ್ನ ರಥದ ತುರುಗವ ನಡಿಸಿದ ಲಜ್ಜೆಯ | ಸುರತ ಕ್ರೀಡೆಯಲಿ ಸ್ತ್ರೀಯರೋಳಾದಂಜಿಕಿಯೊ | ವರವ ಕೊಡು ಎಂದು ಬಂದು ಮಮ ಭಕ್ತರ ಭಯವೊ | ಸಿರಿ ವಿಜಯವಿಠ್ಠಲ ಉಡುಪಿಯ ಕೃಷ್ಣ ನಿನಗೆ | ದರಿಲ್ಲವೆಂಬೊ ಘನವೊ9
--------------
ವಿಜಯದಾಸ
ಏಳು ನಾರಾಯಣನೆ - ಏಳು ವಾಸುದೇವಏಳು ಕೃಷ್ಣಾಚ್ಯುತನೆ _ ಏಳು ಹೇ ಮಾಧವಾ ಪ ಏಳು ವೈಕುಂಠನೇ - ಏಳು ಕಾರುಣ್ಯನೇಏಳು ಲಕ್ಷ್ಮೀಶನೇ - ಏಳು ಭಗವಂತ ನಮಿಪೇ 1 ಏಳು ಮಧ್ವೇಶನೇ _ ಏಳು ಪ್ರಾಣೇಶನೇಏಳು ರುದ್ರೇಶನೇ - ಏಳಾಂಬಿಕೇಶಾ 2 ಏಳು ಇಂದ್ರೇಶನೇ - ಏಳು ಶಚಿಗೀಶನೇಏಳು ವಿಪ್ರೇಕ ಭ - ಕೇಶನೆ ಗೋಪತೇ 3 ಕಾರುಣಿಕ ಮೂರ್ತೇ4 ಏಳು ಸಾಮ ಪ್ರಿಯನೆ - ಸರ್ವ ಕಾರಣ ಮೂರ್ತೆಏಳು ವೇದಾರ್ಥ ಪ್ರಿಯ - ಸರ್ವದಾ ಇಹನೇ 5 ಏಳು ಗದ್ಯ ಪ್ರಿಯನೆ - ಪುರಾಣ ಪುರುಷನೇಏಳು ಸ್ತೋತ್ರ ಪ್ರಿಯನೆ - ಸರ್ವದಾ ವಿಶ್ವಮೂರ್ತಿ 6 ಏಳು ಗುರು ಹೃದಯನೇ - ಪವನಾಂತರಾತ್ಮನೇಏಳು ಗುರು ಗೋವಿಂದ - ವಿಠಲ ಹಯವದನ 7
--------------
ಗುರುಗೋವಿಂದವಿಠಲರು
ಏಳು ಬೆಳಗಾಯಿತು ಯದುಕುಲೋತ್ತಮ | ಪರಮೇಷ್ಠಿ ಹರ ಸುರಪಾಲಕರು ಪ ಆಳುಸಹಿತದಲಿ ರಂಗಾಅ.ಪ. ವೇದವನು ತಮ ಕದ್ದು ಒಯ್ದನು | ಆಧಾರಾಗದೆ ಅದ್ರಿ ಮುಣಗಿತು || ಮೇದಿನಿಯ ಬಳಕೊಂಡು ಹೋದನು | ಅದಿತಿಯ ಸುತನು ಭಾದಿಗಾಗದಲೆ ಬಂದು ಸಕಲರು || ಆದರಣೆಯಿಂದ ಕೈಯ ಮುಗಿದು ನೀ | ದಯಾನಿಧಿ ಎಂದು ಹೊರಗೆ ಕಾದು ಐದಾರೆ ರಂಗ 1 ಅಟ್ಟುಳಿ ಹೆಚ್ಚಿತು ವೆ ಗ್ಗಳಿಸಿದರು ಛತ್ರಿಯರು ಈರೈದು ತಲೆಯವನು || ಬಲವಂತನಾದನು ಆರಿಗೊಶವಿಲ್ಲ | ಇಳೆಗೆ ಭಾರವು ತೂಕವಾಯಿತು ಕಳ-| ವಳಗೊಳಲಾರೆವೆನುತಲಿ ಅಳುಕಿ ಭಯದಲಿ | ನಿಮ್ಮ ಬಾಗಿಲ ಬಳಿಯ ಸಾರಿದರೊ ರಂಗಾ2 ಮೂರು ಪುರದವರೀಗ ನಮ್ಮನ್ನ ಮೀರಿದರು | ಕಲಿಪುರುಷ ಸುಜನರ ಮೇರೆದಪ್ಪಿಸಿ ನಡೆಸಿ || ಬಲು ವಿಕಾರ ಮಾಡಿದನು ಈ ರೀತಿ ಶ್ರಮವೆಂದು | ಸಿರಿ ವಿಜಯ- || ವಿಠ್ಠಲ ಕಾರಣಾರ್ಧವ ಕಳೆದು | ಮುಂದೆ ಉದ್ಧಾರ ಮಾಡಿದನು 3
--------------
ವಿಜಯದಾಸ
ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ ಕೊಡು ಎನಗೆ ದೃಢ ಪದವಿ ಕಡಲಶಯನಾ ಪ ಪಿತನ ತೊಡಿಯ ಮೇಲೆ ಕುಳಿತಿರಲು ಮಲತಾಯಿ ಅತಿ ರೋಷದಿಂದವನ ಹೊಯಿದೆಬ್ಬಿಸೆ ಖತಿಯಿಂದ ವನಕೆ ಪೋಗಿ ನಿನ್ನ ಪೂಜಿಸಲು ಮತಿವಂತನ ಮಾಡಿ ಧ್ರುವಪದವಿ ಕೊಡಲಿಲ್ಲವೆ 1 ತಂದೆ ಬಾಧಿಸೆ ಧೃತಿಗೆಡದೆ ನರಹರಿ ಗೋ ವಿಂದ ನಾರಾಯಣ ಕೃಷ್ಣ ವಿಷ್ಣು ಇಂದಿರಾರಮಣ ಇನಕುಲತಿಲಕ ಎಂದೆನಲು ಕಂದನಿಗೆ ಕೈವಲ್ಯಪದವಿ ಕೊಡಲಿಲ್ಲವೇ2 ಜಾತಿಧರ್ಮವ ಬಿಟ್ಟು ಅಜಮಿಳನು ಚಂಡಾಲ ಜಾತಿ ವಧುವಿಗೆ ಸೋತು ಕೆಟ್ಟು ಯಮನ ದೂತರನ ನೋಡಿ ಕಂಗೆಟ್ಟು ಮಗನನು ಕರಿಯೆ ಪ್ರೀತಿಯಲಿ ವೈಕುಂಠ ಪದವಿ ಕೊಡಲಿಲ್ಲವೇ 3 ವನಿತೆ ಪತಿವ್ರತವಾನಂತನನುಚರಿಸಿ ಬಂದಿರಲು ಮನದ ಖೇದವ ತಾಳಿ ಹರಿದು ಬಿಸುಟೆ ಮುನಿಪುಂಗ ಅಡವಿಯನು ತೊಳಲಿ ನೆಂದು ಬಿದ್ದಿರಲು ಪುನರ್ವಸು ಸ್ಥಾನವು ಕೊಡಲಿಲ್ಲವೆ4 ಶೌರ್ಯದಲಿ ಅಬ್ಧಿಯನು ಹಾರಿ ಲಂಕೆಯ ಸುಟ್ಟು ಧೂರ್ಯದಲಿ ರಕ್ಕಸರನೊರಿಸಿ ಬಿಸುಟೂ ಕಾರ್ಯದಲಿ ಹನುಮಂತ ನಿನ್ನ ಮೆಟ್ಟಿಸೆ ಒಲಿದು ಸೂರ್ಯಭಾಂದವಗೆ ಜನಪದವಿ ಕೊಡಲಿಲ್ಲವೆ 5 ಸೋದರಗೆ ಬುದ್ದಿಯನು ಪೇಳೆ ಕೇಳದೆಯಿರಲು ಪಾಧಾರಿ ದಾಟಿ ನಿಮ್ಮ ಸೇವಿಸಿ ಕಾದಿ ರಾವಣನ ಛೇದಿಸಿ ಲಂಕಾಪುರ ಪದವಿ ಪರಿಯಂತ ಕೊಡಲಿಲ್ಲವೆ 6 ಚಿತ್ತದೊಳು ಆವಾಗ ನಿನ್ನ ಧ್ಯಾನವ ಮಾಡಿ ವಿತ್ತಾದಿ ದಾನಗಳು ಮಿತಿಯಿಲ್ಲದೇ ಅತ್ಯಂತ ಕೊಡುವವನ ಮೂರು ಪಾದವ ಬೇಡಿ ಭಕ್ತಗೆ ನಲಿದು ಸುರಪದವಿ ಕೊಡಲಿಲ್ಲವೆ 7 ಮಾನಿನಿಯ ಸೀರಿಯನು ಸಭೆಯೊಳಗೆ ದುರುಳರು ಅಭಿ ಮಾನ ಭಂಗವ ಮಾಡಿ ಸುಲಿವುತಿರಲು ಶ್ರೀನಾಥ ಕೇಶವ ಮುಕುಂದನೆಂದು ಮೊರೆ ಇಡೆ ನೀನರಿತು ಅಕ್ಷಯಾಂಬರ ಕೊಡಲಿಲ್ಲವೆ8 ಬಡತನ ಉಳ್ಳವನಾಗಿ ಕ್ಲೇಶದಲಿ ಸುಧಾಮ ನಡುಗುತಲಿ ನಿನ್ನ ಪಟ್ಟಣಕೆ ಬರಲು ಹಿಡಿತುಂಬಿ ಅವಲಕ್ಕಿಗೆ ಸಂತೃಪ್ತನಾಗಿ ಕಡೆಯಿಲ್ಲದೈಶ್ವರ್ಯ ಪದವಿ ಕೊಡಲಿಲ್ಲವೆ 9 ಸರಸಿಯೊಳು ಬಾಲಕನ ನೆಗಳಿ ಪಿಡಿದು ನುಂಗೆ ಗುರುದಕ್ಷಿಣವ ಬೇಡೆ ಸಾಂದೀಪನು ಭರದಿಂದ ಪೋಗಿ ಕೃತಾಂತನೊಳು ಭೂ ಸುರಗೆ ಸುಪುತ್ರ ಪದವಿ ಕೊಡಲಿಲ್ಲವೆ 10 ಭುಜಕರೆಲ್ಲರು ನಿನಗೆ ಭಾಗ್ಯವನು ಕೊಡಲಿಲ್ಲ ಭಜಿಸಿದರವರು ತಮ್ಮ ತಕ್ಕ ತೆರದಿ ಭಜಿಸುವೆನು ನಿನ್ನ ತಕ್ಕಂತೆ ದೃಢ ಪದವಿಕೊಡು ಸಿರಿ ವಿಜಯವಿಠ್ಠಲನೆ11
--------------
ವಿಜಯದಾಸ
ಒಲಿಸಿದ್ಹ್ಯಾಗೆ ಪೇಳೆ ಜನನಿ ತುಲಸಿ ಹರಿಯ ಮೋಹಮಾನಿನಿ ಪ ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆ ಒಲ್ಲ ಸೇವಂತಿಗಿರವಂತಿಗೆ ಎಲ್ಲ ಕುಸುಮಗಳನು ನೀ ನಿಲ್ಲದೆ ತನಗೆ ಸಲ್ಲದೆನುವ 1 ಗಂಧ ಕಸ್ತೂರಿ ಪುನುಗು ಕೇಸರಿ ಅಂದಮಾದ ಸುಗಂಧ ಭಾರಿ ಚಂದದಿ ಪೂಸಲಿದರೊಳ್ನೀ ನೊಂದಿಲ್ಲದಿನಿತು ಧಿಕ್ಕಾರೆನುವ 2 ಮಿಗಿಲಾದ ಮಣಿಮಾಲೆಯ ಬಗೆಯದಿದನು ನಿನ್ನ ಬೇಡುವ ನಿಗಮಾತೀತ ಶ್ರೀರಾಮ ನಿ ನ್ನಗಲದಿರೆನೆಂಬ ಸಂತತ 3
--------------
ರಾಮದಾಸರು
ಓ ಎನ್ನಬಾರದೇ ಹರಿಯೆ | ಶ್ರೀಯರಸನೇ ನೀನೇ ಗತಿಯೆಂದು ಅನ್ಯ ಉ| ಪಾಯವನರಿಯದ ಬಾಲಕ ಕರೆದರೆ ಪ ಹಾಲವ ಬೇಡುವ ಮೊರೆಯಿಡಲುಪಮನ್ಯು ಆ | ಬಾಲಗ ಧ್ವನಿ ದೋರಿದಂತೆ | ಚಾಲವರಿದು ಸರೋವರದಲಿ ಕರೆದ ಶುಂ| ಡಾಲಗೆ ಧ್ವನಿ ದೋರದಂತೆ | ವ್ಯಾಳ್ಯೆಕ್ಕ ಒದಗೆಂದು ರಾತ್ರಿಲಿ ಕರೆದ ಪಾಂ| ಚಾಲಿಗೆ ಧ್ವನಿ ದೋರಿದಂತೆ | ಕಾಲಕಾಲಕ ಬಂದು ಮೊರೆಯಿಡೆ ಸುರಮುನಿ | ಜಾಲಕ ಮೈದೋರಿ ಧ್ವನಿ ದೋರಿದಂತೀಗ 1 ಆವಾಗ ಧ್ವನಿದೋರಿದಂತೆ | ಗೋವ ಮೇಯಿಸಿ ತೆರಳಲು ಗೊಲ್ಲರೊದರುವ ಭಾವಕ ಧ್ವನಿದೋರಿದಂತೆ | ದೇವ ನೀಮರಿಯಾಗೆ ಹುಂಕರಿಸ್ಸೊದರಲು | ಆವಿಗೆ ಧನಿ ದೋರಿದಂತೆ | ಕಾವನೈಯ್ಯನೆ ನಿನ್ನ ನೆನೆದ ಗೊಲ್ಲತೆರಾ | ಜೀವನ ಹಿತವಾಗಿ ಧನಿದೋರಿದಂತೀಗ 2 ಬಂದೂಳಗಕ ನಿನ್ನ ಪಾಂಡವರೊದಲು | ನಿಂದು ನೀ ಧನಿದೋರಿದಂತೆ | ಇಂದಾದಾ ಕಲಿಯುಗದ ದಾಸರ ಮಾತಿಗೆ | ಬಂದು ನೀ ಧನಿ ದೋರಿದಂತೆ | ಕಂದನಳುವ ಧ್ವನಿ ಕೇಳುತ ಜನನಿ ಅ | ನಂದದಿ ಧನಿದೋರುವಂತೆ | ತಂದೆ ಮಹಿಪತಿ - ನಂದನ ಪ್ರಭು ಗೋ | ವಿಂದ ಮುಕುಂದೆನ್ನ ಸಲಹೆಂಬ ಮೂಢನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಂಡದ್ದು ಬಯಸಿ ಕಂಗೆಡು ಬೇಡಾ ಪಾದ ಬಿಡಬೇಡಾ ಪ ಕಾಲನಿನ್ನದಲ್ಲ ಕಡುಮೂರ್ಖ ಆ ಕಾಲ ಪುರುಷ ಮಾಡಿದನೇಕಾ ಪರಿಗಳಿಂದ ಇನ್ನು ಯಾಲೋಕಾದಲಿ ನಡುವುದಲ್ಲಾ ಸುಖದು:ಖ ಪಾಲಿಗೆ ಬಂದದ್ದು ಬಿಡದನಕಾ ಪ್ರಾಪ್ತಿ ಇದ್ದಷ್ಟೇ ಇಲ್ಲಧಿಕಾ ಶ್ರೀಲೋಲನ ನೀನಿರುವತನಕಾ ಸ್ಮರಿಸದೆ ಇರಬೇಡ ಅವಿವೇಕಾ 1 ಘಣಿಯಲ್ಲಿ ಬರದದ್ದು ತಪ್ಪದಲ್ಲೆ ಜಗ ಭಗವಂತ ನೀ ಮಾಡಿದಲ್ಲೆ--- -------- ನಿನ್ನದಲ್ಲೆ ಅನುಗ್ರಹ ಮಾಡುವ ಭರದಲ್ಲೆ ನಗಧರನಾ ನಾಮ ಬಲದಲ್ಲೆ ಅಘಗಳ ಕಳಿ ನೀ ತೀವ್ರದಲ್ಲೆ 2 ಇಷ್ಟಾರ್ಥ ನೀ ಮಾಡಬೇಕಂದಿ ಸಂಚಿತ ಎಲ್ಲೆಂದಿ ಕಷ್ಟವ ಪಡಕೊಂಡು ನೀ ಬಂದಿ ಕಾಮಕೆ ಸುಖವು ಇಲ್ಲೆಂದಿ ಇಷ್ಟದಿ ಶ್ರೀ ಹರಿ ಪದಹೊಂದಿ ಇರದೆ ನೀ ಇರಬೇಡಾ ಇಬ್ಬಂದಿ ಸ್ಪಷ್ಟದಿ 'ಹೊನ್ನಯ್ಯ ವಿಠ್ಠಲಂದಿ’ ಸಾರ್ವದಿ ಮುಂದಕ ನೀ ಬಂದಿ3
--------------
ಹೆನ್ನೆರಂಗದಾಸರು
ಕಂಡೆ ಕಂಡೆ ಕೃಷ್ಣನ ಕಂಡೆ ಕಂಡೆ ಪ ಕಮಲ ಪುಂಡರೀಕ ಭವಾದಿ ಪೂಜ್ಯನ ದಂಡ ಪಾಶಾನ್ವಿತನ ಕೋಟಿ ಮಾರ್ತಾಂಡಸಮ ಸಂಕಾಶದೇವನ ಅ ಅರುಣ ಪಂಕಜದಿರವ ಸೋಲಿಪ ಚರಣತಳಿನಖ ಬೆರಳ ಪಂಕ್ತಿಯು ಪರಡು ಬಣ್ಣದ ಪಿರಡಿಜಂಘೆಯು ಉರದಿ ಜಾನುಗಳೆರಡು ದರ್ಪಣ ತೆರದಿ ಶೋಭಿಸೆ ಕರಿಕರೋರುಗಳು ತರು ನಿತಂಬದಿ ಮೆರೆವ ಪೀತಾಂ ಬರದ ನಿರಿ ಸಡಗರದಿ ದೈತ್ಯರ ಮರುಳುಗೊಳಿಸಿದ ಪರಮ ಪುರುಷನ 1 ನಳಿನನಿಭ ಪೊಕ್ಕಳು ತನೂದರ ವಳಿಗಳತ್ರಯ ಚೆಲುವ ವಕ್ಷ ಸ್ಥ್ಥಳದಿ ಪದ್ಮಾಲಲನ ಕಾಂಚನ ಗಳದ ರೋಮದ ಕಲಿತ ಭುಜಯುಗ ಕುಲಿಶ ಪಲ್ದುಟಿಗಳು ಪ್ರವಾಳ ವರ್ತುಳ ಕ ಪೋಲ ಪರಿಮಳ ಚಂಪಕದಳದ ನಾಸಿಕ ಜಲಜಲೋಚನ ವಿಲಸಿತ ಭ್ರೂ ತಿಲಕ ಫಣಿಯನು 2 ಮಕರ ಕುಂ ಡಲವು ಮೂಗುತಿ ಎಳೆನಗೆಯ ಮೊಗ ಹುಲಿಯುಗುರು ಥಳಥಳಿಪ ಕೌಸ್ತುಭ ಬಲವು ಪದಕಾವಳಿ ಸರಿಗೆ ಶ್ರೀ ತುಲಸಿ ವನಮಾಲ ಸಗ್ವಲಯ ರುಳಿ ಬಿಂ ದಲಿ ರಸಾದ್ಯೆಳದಳ ಯುಗಳ ಕರ ತಳನಾಗೋ ಮಕ್ಕಳೊಡನೆ ಗೋ ಕುಲದಿ ಚರಿಸಿದೆ ಲಲಿತಾಂಗನೆ 3 ನೇಣು ಕಡಗೋಲು ಪಾಣಿಪೃಥಗಳ ಶ್ರೇಣಿಯಲಿ ಒಡ್ಯಾಣ ನೂಪುರ ಪ್ರಾಣಮುಖ್ಯರು ಕಾಣದತಿ ಕ ಲ್ಯಾಣಗುಣಗಣ ಶ್ರೇಣಿವಂತನ ಮಾಣದನುದಿನ ಸಾನುರಾಗದಿ ಧೇನಿಸುವರ ಮನೋನುಕೂಲನ ಬಾಣಗುರುವಿನ ಕಾಣೆನೆನಿಸಿದ ಜಾಣ ಪರಮ ಪುರಾಣ ಪುರುಷನ 4 ಭೂತಕೃತ್ಯದ್ಭೂತಿದಾಯಕ ವೀತ ಶೋಕ ವಿಧಾತಮರ ಪುರು ಹೂತ ಮುಖವಧ್ಯಾತ ಖರಮುರ ಸೂತಗತಸಂಕೇತ ತ್ರಿಗುಣಾ ತೀತ ನಂದನೀಕೇತನದಿ ನವ ನೀತ ಸವಿದ ಪುರಾತನ ಜಗ ನ್ನಾಥ ವಿಠಲನ 5
--------------
ಜಗನ್ನಾಥದಾಸರು
ಕಂಡೆ ನಾ ಕಣ್ಣೆದುರಲಿ ಕೃಷ್ಣನಾ ಪ ಕಂಡೆ ನಾನೀಗ ಬ್ರಹ್ಮಾಂಡದೊಡೆಯ ತಾ ತಾಂಡವಾಡಿ ಭೂಖಂಡದಿ ಮೆರೆದನ ಅ.ಪ ಜಯಮುನಿಹೃತ್ಕುಮುದಾಲಯದಿ ಸುಲೀ- ಲೆಯಾಡುತಿಹ ವಾಯ್ವಂತರ್ಗತ ಕೃಷ್ಣ ಜಯಜಯಜಯ ಶ್ರೀ ವಿಜಯಸಾರಥಿ ಭವ- ಭಯಹಾರಿ ಭಕ್ತರಭಯಪ್ರದಾಯಕ ದಯವನಧಿಯೆ ಮನದಾಮಯ ಕಳೆದು ನಿ- ರ್ಭಯ ದೊಳು ಕಾಯುವ ಜಗದೊಡೆಯಾ ಧೇಯವು ನಿನಗಿದು ಸದ್ಭಕುತರಾಶ್ರಯ ತಟಿತಕೋಟಿ ನಿಭಕಾಯ ಶ್ರೀಭೂಕಾಂತ ದೈತ್ಯಕೃತಾಂತ ಜಗದಾದ್ಯಂತ ನಿಂತು ಜೀವರಾದ್ಯಂತ ಕೃತ್ಯಗಳ್ ಸಂತತನಡೆಸುವ ಕಂತುಪಿತನ ನಾ 1 ಶ್ರೀಕಳತ್ರ ಪರಲೋಕೈಕನಾಥ ಜಗ- ದೇಕವಂದ್ಯನೆ ನರಲೋಕದ ಕ್ರೀಡೆಯೊಳ್ ಭೀಕರಿಲ್ಲದೆ ಬಕಶಕಟಾಕಂಸಾದಿಗಳ ಏಕಘಳಿಗೆ ಯೊಳು ನೀ ಕೊಂದು ನಲಿದು ನಿಂದೆ ಪಾಕಶಾಸನ ದಿವೌಕಸವಂದ್ಯನೆ ಪ್ರಕಟನಹುದೊ ನಿಪ್ಕುಟಿಲರಿಗೆ ದಿಟ್ಟತನದಿ ಹೃತ್ತಟದಲಿ ಧೇನಿಸೆ ತಟಿತದಂದದಲಿ ಒಳಗೇ ಭಟಜನರುಗಳಾ ಕಂಟಕದೆಡರಾಕಟಕಪರಿಹರ ವಿಟ್ಟು ಕರುಣಾಕಟಾಕ್ಷದಿಂದ ಸಂತ ವಿಟ್ಟು ನಟಿಸುವಾ ಸೃಷ್ಟಿಕರ್ತನ ನಾ 2 ರಂಗಾ ನಿನ್ನವರುಗಳಿಂಗಿತದಂತೆ ಮಾ- ತಂಗವರನ ನಿನ್ಹಾಂಗೆನಡೆಸಿ ಶುಭಾಂಗ ಸದ್ಭಕ್ತಕೃ- ಪಾಂಗ ಮಂಗಳಾಂಗ ತುಂಗಮಹಿಮ ಸ- ಪ್ತಾಂಗ ಏಕೋನವಿಂಶತಿ ಮಂಗಳವಿಶ್ವನೆ ಕಂಗಳಲಿದ್ದು ಜಗಂಗಳ ಕಾರ್ಯಂಗಳಿಗೀವೆ ಹಿಂಗಿಸಿ ಅಂಗದ ಕಾರ್ಯವ ನೀ ಮನ ಕಂಗಳಿಗಿತ್ತು ಎಂದಿಗು ಪೊರೆವಾ ಮಂಗಳ ಪ್ರಾಜ್ಞಭೋಗಂಗಳ ಪ್ರಜ್ಞ ಆಗದುಸೂಜ್ಞ ರಂಗನಾಥ ಹೃದ್ರಂಗದಿ ನಲಿಯುತ ಹಾಂಗೆ ನಿಂದಿಹ ಈ ಶ್ರೀವೇಂಕಟೇಶನ ನಾ 3
--------------
ಉರಗಾದ್ರಿವಾಸವಿಠಲದಾಸರು
ಕಂಡೆ ನಾಕಂಡೆ ನಾಕಂಡೆ ಕಾಳಿಂಗನ ಮಂಡೆಯಮೇಲೆ ಕುಣಿವ ಕೃಷ್ಣನ್ನ ಪ ತಕ ತಕ ಧಿಮಿ ಧಿಮ್ಮಿ ಧಿಮ್ಮಿ ಧಿ- ಮ್ಮಿಕೆಂದು ಕುಣಿವ ಕೃಷ್ಣನ್ನ ನಾಕಂಡೆ ಅ.ಪ ಹೆಡೆಯ ಮೇಲೆ ತಾ ಎಡಗಾಲಿರಿಸಿ ಎಡಗೈಯಲಿ ಬಾಲ ಹಿಡಿದವನ ಬಿಡದೆ ಅಭಯಹಸ್ತವ ತೋರೊ ಒಡೆಯ ಕೃಷ್ಣಮೂರುತಿಯ ನಾಕಂಡೆ ಸ್ವಪ್ನದಲಿ ನಾಕಂಡೆ ಕಂಡೇನೊ ಸಂಪನ್ನಮೂರ್ತಿಯ ಕಂಡೇನೊ 1 ಗೋವಲರ ಮನೆಯ ಪಾಲುಂಡವನ ಗೋವುಗಳ ಕಾಯ್ದ ಗೋಪಾಲನ್ನ ಗೋವಿಂದನೆಂಬ ದೇವರದೇವನ್ನ ಓವಂತೆ ನಾನು ಕಂಡೇನು ಕಂಡೇನು ಕುಣಿಯುತ ಬಂದ ಕೃಷ್ಣನ್ನ ತಣಿಯುವ ಹಾಗೆ ನೋಡಿದೆನು 2 ಗೋವಿಂದನಾಗಿ ತಲೆಕಾಯ್ವವನ ಗೋವರ್ಧನವನೆ ಕೊಡೆಯಾದವನ ಗೋವನಿತೆಯರ ಮಾಮಾಯನನ್ನ ಅವ್ವಯ್ಯ ಚೆನ್ನಾಗಿ ಕಣ್ತುಂಬ ಕಂಡೆ ಆ ಮುದ್ದು ಬಾಲಕೃಷ್ಣನ್ನ ಕಂಡೆ ಸಾಮುದ್ರಿಕಾ ಸಿರಿಯನ್ನಕಂಡೆ 3 ಅಸುರ ಕಂಸನ ಅಸುವನ್ನು ನೀಗಿದನ ಬೆಸೆದ ಕುಬ್ಜೆಯ ಡೊಂಕ ತಿದ್ದಿದವನ ಅಸುತೆಗೆಯ ಬಂದವಳ ಅಸುವನೆ ಹೀರಿದನ ಮಿಸುಕದಂತೆ ಕಂಡೆ ನಾಕಂಡೆ ನಾಕಂಡೆ ಜಾಜಿಪುರೀಶನ ಕಂಡು ಧನ್ಯನಾದೆ ಸಾಜದಿ ದಾಸಾನುದಾಸನಾದೆ 4 ಪಾಪಿನಾ ಕರುಣೆಯ ತೋರಿ ಸಲಹೊ ಭಾಪುರೆ ಗಟ್ಟಿಸುವ ಪುಟ್ಟಪಾದವಿಟ್ಟು ಮೋಪಾಗಿ ಮೆರೆವ ದುಷ್ಟರ ಮೆಟ್ಟೊ ಪುಂಡರ ಪುಂಡರಿಗೆ ಪುಂಡನಾದವನೆ ಪುಂಡರೀಕಾಕ್ಷ ಚನ್ನಕೇಶವನೆ 5
--------------
ನಾರಾಯಣಶರ್ಮರು