ಒಟ್ಟು 12527 ಕಡೆಗಳಲ್ಲಿ , 133 ದಾಸರು , 6731 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ರುದ್ರದೇವರು) ಬಾರೋ ಬ್ಯಾಗನೆ ಗಿರಿಜಾರಮಣನೆ ಪ ನಾರದನುತ ಪಾದಾರವಿಂದ ತೋರಲು ಅ.ಪ ಭಕುತರ ವೃಂದಕೆ ಭಕುತಿ ಮುಕುತಿಯಿತ್ತು ಯುಕುತಿಲೆÉ ಪೊರೆಯುವ ಶಕುತಿಯ ತೋರಲು 1 ಭೂಮಿಯೊಳಿಹ ಸರ್ವ ಪಾಮರ ಜನರಿಗೆ ಕಾಮಿತಫಲವೆಲ್ಲ ಪ್ರೇಮದಿ ಈಯಲು 2 ಮಡದಿಯ ನುಡಿಗೆ ನಿನ್ನಡಿಗೆ ಬಂದಂಥ ಬಡವನ ಪೋದಂತೆ ತಡವ ಮಾಡದೆ ಈಗ 3 ಶಿರಿವತ್ಸಾಂಕಿತನೆಂದು ವರಶ್ರುತಿಗಳು ನಿನ್ನ ಕರೆದು ತ್ರಿಜಗದ ನರಪನೆ ಈಗಲೆ 4
--------------
ಸಿರಿವತ್ಸಾಂಕಿತರು
(ಲಾಲಿ ಹಾಡು) ಲಾಲಿ ರಘುಕುಲವೀರ ರಾಕ್ಷಸಗಣಾರಿ ಲಾಲಿ ಜಗದೇಕ ಸುಂದರ ಸೇತುಕಾರಿ ಲಾಲಿ ನಗಚಾಪ ಹೃತ್ಕಮಲ ಸಂಚಾರಿ ಲಾಲಿ ಸುಗುಣಾಂಬುನಿಧಿ ಸುಜನಾರ್ತಿ ಹಾರಿ ಪ. ಧರಣಿ ಭಾರವನು ಬೇಗಿಳುಹಬೇಕೆಂದು ಸುರರು ನಡೆತಂದು ಸಿರಿವರನೆ ನಿನ್ನ ಪ್ರಾರ್ಥನೆ ಮಾಡಲಂದು ಧರೆಯೊಳವತರಿಸಿ ರಾಜಿಸಿದೆ ಗುಣಸಿಂಧು 1 ದರಚಕ್ರ ಶೇಷರನು ಸರಿಯಾಗಿ ತನ್ನಾ ವರಜಪದವೈದುತವತರಿಸಿರಲು ಮುನ್ನ ಭರತ ಶತ್ರುಘ್ನ ಲಕ್ಷ್ಮಣರೆಂಬರನ್ನ ಚರಣ ಸೇವಕರೆನಿಸಿ ಪೊರದಿ ಗುಣರನ್ನ 2 ಶ್ರೀ ರಾಮ ಸೀತಾವರಾಶ್ರಿತ ಪ್ರೇಮ ಮಾರುತಿಗೆ ವಿಧಿಪದವನಿತ್ತ ಗುಣಧಾಮ ಘೋರ ರಾವಣ ಮುಖ್ಯ ದಿತಿಜ ನರ್ದೂಮ ಭೂರಮಣ ಶೇಷಗಿರಿವರ ಪೂರ್ಣಕಾಮ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಲಾವಣಿ ಧಾಟಿ) ಇಲ್ಲೆನುತಾ ಉದರ ಝಣತಾ ಅಕ್ಕಪ್ಪ ವಕ್ಕಪ್ಪ ಪ ಇಕ್ಕಲ್ಯಾಂಗ ಸ್ವಾಮಿ ನಿನಗೆ ಮಕ್ಕಳ ಮನೆ ಇದು ಚಕ್ಕಲಿ ಸಜ್ಜಿಗೆ ಗಂಜಿ ಮುತ್ಸೋರಿ ಪಾಯಸಾ ದಕ್ಕದೀರೆ ತರಲ್ಹ್ಯಾಂಗ ಮುಕ್ಕೋ ಬೇಕು ಇದ್ಧಾಂಗ ಪರಿ ಭಕುತಿ ಇಕ್ಕುವೆ ಸಮರ್ಪಣ ಮಾಡಿ 1 ಭವವೆಂಬ ಕಿಚ್ಚನ್ಹಾರೆ ಸವಿತ ಭಕ್ತಿ ಭಾಂಡವಿಕ್ಕಿ ಪವನಸೂನು ಹನುಮಮಧ್ವಧ್ಯಾನದಿ ಜವದಿ ಎನ್ನ ಮನವ ಕುದಿಸಿ ಸವಿಯ ಖಾದ್ಯ ಮಾಡಿಯದನು ಭವದೂರ ಮಂತ್ರವ ಜಪಿಸಿ ಸವಿಯಬೇಕು ಸಂತತ ಮುದದಿ 2 ಎಲ್ಲರಂತೆ ಅಲ್ಲ ನೀನು ಇಲ್ಲದ್ದನ್ನು ಬೇಡ್ವೋನಲ್ಲ ಸಲ್ಲಿಸಿಹನ್ನುವೀನೊಲ್ಲೆ ನಂಬುವಲ್ಲಾ[?] ಬಲ್ಲಿದ ನರಸಿಂಹವಿಠಲ ಒಲ್ಲೆಂಬುದೀಗುಚಿತವೇ ಸಲ್ಲಿಸಿದ್ದು ಒಪ್ಪಿಕೊಂಡು ನಿಲ್ಲಿಸೆನ್ನ ಮನದಿಯಂಘ್ರಿ 3
--------------
ನರಸಿಂಹವಿಠಲರು
(ಲಾವಣಿ ಧಾಟಿ) ಕರುಣಾಳು ಕರುಣಾಳು ನಾನಿನಗೆ ಶರಣ್ಯನಾಗಿರೆ ದುರಿತದ ಭಯವ್ಯಾಕೆ ಬಲು ಜೋಕೆ ಪ. ಬಲು ಜೋಕೆಯಿಂದ ನೀ ಸ್ವೀಕರಿಸೆನ್ನ ದ- ಯಾಕರ ತ್ವರೆಯಿಂದ ಸುರವಂದ್ಯ 1 ಪಾದ ಮನ್ಮಂದಿರದ ಲಾ- ನಂದ ಬೀಜಬಿತ್ತು ಫಲವಿತ್ತು 2 ಫಲವಿತ್ತು ಸಲಹು ಪುರುಷೋತ್ತಮ ಸುಲಲಿತ ವರ್ತುಳ ಶುಭನಾಭ ಕರಶೋಭ 3 ಚಕ್ರಧರ ವಾರಿತದಾನವ ವೀರ ವಿದ್ಯಾಧೀರ ಜಲಧಾರಾ 4 ಜಲಧಾರಾಕರ ನಿಭ ಭೂರಮೇಶ ದು- ರ್ವಾರ ದುರಿತನಾಶ ಸರ್ಪೇಶ 5 ಸರ್ಪೇಶ ಗಿರೀಂದ್ರ ಸಮರ್ಪಿತ ವಿಗ್ರಹ ನಿತ್ಯದಿ ಕಾಪಾಡೊ ದಯಮಾಡು 6 ದಯಮಾಡು ದುರ್ಮತಿಯ ದೂಡು ಕಟಾಕ್ಷದಿ ನೋಡುತ ನಲಿದಾಡು 7
--------------
ತುಪಾಕಿ ವೆಂಕಟರಮಣಾಚಾರ್ಯ
(ಲಿಂಗಸುಗೂರಿನ ಹತ್ತಿರ ಚಿಲಕರಾಗಿ ಗ್ರಾಮದಲ್ಲಿರುವ ಗೇಣರಾಯನೆಂಬ ಪ್ರಾಣದೇವರು) ಗೇಣುರಾಯ ನಿನ್ನಾಮಹಿಮಿಯ |ಸ್ಥಾಣು ಅರಿಯ ಮುನ್ನಾ |ದೀನ ರಕ್ಷಕನೆಂಬೋ ಬಿರುದು ಕೇಳಿತವ |ಧ್ಯಾನವ ಕೊಡು ಎಂದೇ, ತಂದೇ ಪ ರವಿಜನ ಭಯದಿಂದ ಕಪಿಗಳು |ಲಯ ಚಿಂತೆಗಳಿಂದಾ ||ಪವನ ಕುವರ ಕಂಡಾಕ್ಷಣ ಈ ಭಯ |ತವಕನಚ್ಚಿ ಪೊರದೀ, ಮೆರದೇ 1 ಭೂಸುರ ಚಿಂತಿಸೆ ಬರಿದೀ ಈ |ಮೊರಿ ಕೇಳಿ ಆ ಶಿಶುವಿನ ಉಳಾಹಿದೇ ||ಘಾಸಿಗೊಳಿಸುವ ಘಳಬಕನೊರಸಿ |ಭಾಸುರ ಕೀರ್ತನೆಯ ಪೊರದಿ ಇಷ್ಟಾರ್ಥವ ಕರದೀ 2 ಪರಿಯೊಳು ಚಿಲಕರಾಗಿ ಗ್ರಾಮದೊಳು |ಮೆರೆಯುವ ಯತಿಯೋಗೀ ||ಗುರುಶ್ರೀಶ ಪ್ರಾಣೇಶ ವಿಠಲನ |ಚರಣ ಪೊಕ್ಕವರ ಸಲಹುವ ಕರುಣೀ | ಯೇಧಣಿ 3
--------------
ಶ್ರೀಶಪ್ರಾಣೇಶವಿಠಲರು
(ವಿಜಯದಶಮಿ) ಜಯಜಯ ದೇವ ಹರೆ ಜಯಜಯದೇವ ವಿ- ಜಯರಥ ಭೂಷ ಭಯಹರ ಭಕ್ತ ಜನಾಶ್ರಯ ಶ್ರೀಶ ಪ. ಕೀಟಕ ಶಕುನಿಯ ಕೂಟಭಾವನದ ಕಾ- ದಾಟದಿ ಸೋತು ಮಹಾಟವಿಯ ದಾಟಿ ಧರ್ಮಲಿ ವಿರಾಟನಲ್ಲಿ ಸೇರಲು ಕಿ- ರೀಟಿಗೆ ಜಯವಿತ್ತ ಖೇಟಗಮನ ಕೃಷ್ಣ 1 ಸಮಯಬಂಧವ ದಾಟಿ ಶಮಿಯ ಪೂಜಿಸುತ ಸಂ- ಭ್ರಮದೊಳಾಸನವೇರ್ದ ಯಮಸುತನ ನಮಿಸಿದ ನೃಪತಿಯ ಭಯ ಪರಿಹರಿಸಿದ ಸುಮನಸ ಗಣವಂದ್ಯ ಸರ್ವಾಂತರಾತ್ಮಕ 2 ಸಾರಥಿ ತಾನೆಂದು ಸೇರಿ ಪಾಂಡವರಿಗೆ ಕೌರವರನ್ನು ಸಂಹಾರ ಗೈಸಿ ಭಾರತೀಶಗೆ ಭೂಮಿ ಸೇರಿಸಿ ಸಲಹಿದ ವಾರುಧಿಶಯನ ವೆಂಕಟಗಿರಿ ನಾಯಕ 3
--------------
ತುಪಾಕಿ ವೆಂಕಟರಮಣಾಚಾರ್ಯ
(ವಿನಾಯಕ ಚತುರ್ಥಿಯಂದು ಶರ್ವಿನ ಗಣಪತಿಯನ್ನು ನೆನೆದು) ಗಣಪತೀ ಕೊಡು ನಮಗೆ ಶ್ರೀಶನಲಿ ಮತಿ ಪ. ತನು ಮನದಲಿ ಶ್ರೀವಿನಿಯನ ಸ್ಮರಿಸಲು ವುಣಿಸುವ ಸುಖ ಸಂದಣಿಗಣ ನಿರವಧಿ 1 ವಿಘ್ನ ಸಮೂಹವ ವೋಡಿಸಿ ಭವಭಯ ಭಗ್ನಗೈಸಿ ನಿರ್ವಿಘ್ನದಿ ಕರುಣಿಸು 2 ಪರಶು ಪಾಶಾಂಕುಶಧರ ಕರುಣಾಕರ ಸಿರಿವರ ವೆಂಕಟವರ ವಲಿವಂದದಿ 3 ಶ್ರೀಹರಿ ಸಂಕೀರ್ತನ ; ನಾಮ ಮಹಾತ್ಮೆ
--------------
ತುಪಾಕಿ ವೆಂಕಟರಮಣಾಚಾರ್ಯ
(ಶುಕಾಚಾರ್ಯರ ಸ್ತೋತ್ರ) ಆಚಾರ್ಯನ ನೋಡಿ ಸುಮ್ಮನೆ ಪೇಚಾಡಲು ಬ್ಯಾಡಿ ಪಡದ ಮೃಡಾತ್ಮನ ಪಾಡಿ ಪ. ಬಾಲಕರಂತಿರುವ ಧೂಸರ ಧೂಳಿಯ ಧರಿಸಿರುವಾ ಕೇಳಿದವರಿಗೊರೆವಾ ಭಗವನ್ಮೂಲ ತತ್ವದಿರವಾ ಪರೀಕ್ಷಿತ ಲಾಲಿಸುವಂತೆರ- ಮಾಲಯ ಗುಣವರುಣಾಲಯ ತಿಳಿಸಿದ 1 ವ್ಯಾಪಿಸಿ ಕೊಂಡಿರುವಾ ಸಂಸೃತಿ ತಾಪತ್ರಯ ಭರವಾ ತಾಪಕ ಮತ್ಸರವಾ ಮೋಹ ಮಹಾಪರಾಧದಿರವಾ ದೀಪವು ತಿಮಿರವ ಕಳವಂದದಿ ನಿ- ಲೋಪಗೊಳಿಸುವ ಪರೋಪಕಾರಿಯನು 2 ಭಾಗವತಾಮೃತವಾ ಮುಖದಿ ಸರಾಗದಿ ಧರಿಸಿದನಾ ವಾಗೀಶಾಂಶಕನಾ ಹೊಂದಿರೊ ಗುರುಮುನಿ ಶುಕನಾ ತಾಗುಬಾಗುವೊಳಗಾಗದ ತೆರದಲಿ ನಾಗ ಗಿರೀಂದ್ರನು ನಲಿವನು ಮನದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶೇಷದೇವರ ಪ್ರಾರ್ಥನೆ) ಸುಕೃತ ಭಾಗ್ಯವಂತನೋ ಗುರುಶೇಷ ಯಂತು ಬಣ್ಣಿಸುವುದಿನ್ನು ಮಾಂತರಂಗದಿ ಪ್ರೇಮ ಪಾತ್ರನಾಗಿರುವದೀ ಪ. ಶ್ರೀನಿವಾಸಗೆ ಮೂರು ಸ್ಥಾನದಿ ಸರಿಯಾಗಿ ತಾನೆ ಶಯನ ಪೀಠ ಛತ್ರನಾಗಿ ಜ್ಞಾನಾನಂದನ ಪರಮಾನುರಾಗದಿ ನೋಡಿ ಮಾನವ ಪಡೆದು 1 ರಾಮರೂಪದಿ ನಿಂದ ಸ್ವಾಮಿಗೆ ನಿರವಧಿ ಪ್ರೇಮದನುಜನಾಗಿ ಪರಿಚಿರಿಸಿ ಸೋಮವಂಶದಿ ಬಲರಾಮನೆನಿಸಿ ಸತ್ಯ- ಭಾಮಾವರನ ಜೇಷ್ಠ ನಾಮವ ಪಡೆದು 2 ಹಲವು ವಿಧದ ಪುಣ್ಯ ಫಲವ ನೀಡಲು ಲಕ್ಷ್ಮಿ ಲಲನೆ ಪದ್ಮಜೆಯರ ಬಲಗೊಳ್ಳುತಾ ಕಲಿಯುಗದಲಿ ಬಂದು ನೆಲೆಯಗೊಳ್ಳಲು ಶೇಷಾ- ಚಲನೆಂದು ಹರಿಗೆ ನಿಶ್ಚಲವಾದ ನಿಲಯಾಗಿ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶೇಷಶಾಯಿಯ ವರ್ಣನೆ) ಸ್ವರಮಣನೆನುತಲಿ ಮೊರೆಯಲು ಶ್ರುತಿಗಳು ಹೊರಳುವದೇನುಚಿತ ಅರೆ ನಿಮಿಷವು ನಿನ್ನುರವ ಬಿಟ್ಟಗಲದೆ ಇರುವಳು ರಮೆ ನಿರತ ಪ. ಕವಿಗಳು ಗುಣರಸ ಸವಿದು ಸುಖಭರದಿ ದಿವಿಜರ ಲೆಕ್ಕಿಸರೂ ಪವಿಧರ ಪಾಲಕ ರವಿ ಉದಿಸಿದ ಬಳಿ ಕವಿಕುಲ ಮಲಗುವರೆ 1 ಇಂದಿರೆ ನಿನ್ನನು ಹೊಂದುತ ಪರಮಾ- ನಂದದಿ ಮುಳುಗಿರಲು ಎಂದಿಗು ಮಲಗದ ಸುಂದರ ವಿಗ್ರಹ ಇಂದು ನೀ ಮಲಗುವರೆ 2 ದೋಷವಿದೂರ ಅಶೇಷ ಸುರಾರ್ಚಿತ ದಾಸ ಜನಾನಂದ ಶೇಷಗಿರಿ ವಿಶೇಷಾಸನ ಯಿ- ನ್ನೇಸು ಶಯನ ಚಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ಜಯತೀರ್ಥರು) ಜಯತೀರ್ಥರೇ ನಮ್ಮ ಸುಮತೋದ್ಧಾರಕರು ಮಳಖೇಡ ನಿಲಯರು ಪ ಪೂರ್ಣಪ್ರಜ್ಞರಲಿ ಪಶುರೂಪ ತಾಳಿ ಭಾಷ್ಯಗಳ ಪೇಳಿ ಜೀರ್ಣಮಲಿನ ಮೂಢಮತಗಳಿಗೆ ದಾಳಿ ಈ ಗ್ರಂಥಗಳ್ಹೇಳಿ ಪೂರ್ಣಬೋಧ ಗುರುಮತವಾರ್ವವ ಪೇಳಿ ಸುಜ್ಞರಾದರು ಮುದ ತಾಳಿ 1 ಇದೇ ದೇಶಪಾಂಡೆರೊಳುದ್ಭವಿಸೆ ನರಜನ್ಮ ವಹಿಸಿ ಪದಪಿನಿಂದ ಗೃಹಸ್ಥಾಶ್ರಮವನುಸರಿಸಿ ಸಂಸಾರದಿ ಬೆರಸಿ ಕುದರಿ ಏರಿ ಪೊಳೆ ನೀರಿಗೆ ಬಾಯಿ ಸರಿಸಿ ಬಹು ನೀರಡಿಸಿ ಸದಮಲಕ್ಷೋಭ್ಯರು ಪಶುವೆಂದುಚ್ಚರಿಸಿ ಪೂರ್ವ ಜನ್ಮ ಸ್ಮರಿಸಿ 2 ಕ್ಷಿಪ್ರದಿ ಯತ್ಯಾಶ್ರಮವೆ ತಾಳಿದರು ಟೀಕವ ಕೈಗೊಂಡರು ಸುಪ್ರಸಿದ್ಧ ಹರಿಮತವನುದ್ಧರಿಸಿದರು ವ್ರತಗಳ ಪೇಳಿದರು ವಿಪ್ರವರ್ಗಕೆ ಹರಿಮಾರ್ಗವ ತೋರಿದರು ಹರಿಮತ ತತ್ವಜ್ಞರು ಸುಪ್ರಸಿದ್ಧ ನರಸಿಂಹವಿಠಲತರು ಶತಪತ್ರ ಶೇಷಾಲಂಕೃತರು 3
--------------
ನರಸಿಂಹವಿಠಲರು
(ಶ್ರೀ ರಮಣನೆಲ್ಲಿಹ ಕರೆತಾರೆ ಸಖಿಯಳೆ ) * ಪ ಮನು ಕಮಂಡಲ ಕೂಪದಲ್ಲಿ ಹಿಡಿಯದಂತೆ ಬೆಳೆದು ಅವರ ಶರಧಿ ಒಳಗೆ ಹರಿದಾಡುತಿರುವ ಕೇಳ್ ಸಖಿಯಳೆ ಶರಧಿ ಒಳಗೆ ಹರಿದಾಡುತಲೆ ವೇದತಂದು ತೋರಿದ್ಹೊಳೆವ ಮಚ್ಛನ್ನ ಬಲಗೊಂಬೆ ಕೇಳ್ ಸತಿಯಳೆ 1 ಸೃಷ್ಟಿಗೆ ಅಧಿಕ ಸ್ತ್ರೀಯಳ ದೈತ್ಯರು ಮೋಹಿಸಲು ಕಂಡು ಹುಟ್ಟಿಸಿದ ಸುಧೆಯ ಸುರರಿಗೆರೆದ ಕೇಳ್ ಸಖಿಯಳೆ ಹುಟ್ಟಿಸಿದ ಸುಧೆಯ ಸುರರಿಗೆರೆದು ಬೆಟ್ಟವನು ಬೆನ್ನ- ಲಿಟ್ಟ ಕೂರ್ಮನ ಬಲಗೊಂಬೆ ಕೇಳ್ ಸತಿಯಳೆ 2 ವಾಸುದೇವ ಕ್ರೋಡರೂಪಿಲಿಂದ ಹಿರಣ್ಯಾಕ್ಷನ ನಾಶವ ಮಾಡಿ ಕೋರೆಯಿಂದ ಕೇಳ್ ಸಖಿಯಳೆ ನಾಶವ ಮಾಡಿ ಕೋರೆಯಿಂದ ಧರಣಿ ತಂದು ಹರ್ವಿ (ರವಿ?)ದ ಭೂಪತಿವರ್ಹ(ರಾಹ?)ನ್ನ ಬಲಗೊಂಬೆ ಕೇಳ್ ಸತಿಯಳೆ 3 ಒಡೆದು ಕಂಬ ಕಡೆಗೆ ಕಿತ್ತು ಬಿಡದೆ ಅರಿಯ ತೊಡೆಯಲಿಟ್ಟು ಒಡಲ ತಾ ಬಗೆದ ಭಕ್ತರೊಡೆಯ ಕೇಳ್ ಸಖಿಯಳೆ ಒಡಲ ತಾ ಬಗೆದ ಭಕ್ತರೊಡೆಯನಾಗಿದ್ದ ಲಕ್ಷ್ಮೀ- ನಾರಸಿಂಹನ್ನ ಬಲಗೊಂಬೆ ಕೇಳ್ ಸತಿಯಳೆ 4 ಪಾದ ದಾನ ಬೇಡಿ ಪೃಥ್ವಿ ಆಕ್ರಮಿಸಿದ ಪರಮಾತ್ಮ ಕೇಳ್ ಸಖಿಯಳೆ ಪೃಥ್ವಿ ಆಕ್ರಮಿಸಿದ ಪರಮಾತ್ಮನಾದ ನಮ್ಮ ಕಶ್ಯಪರ ಸುತ ವಾಮನನ ಬಲಗೊಂಬೆ ಕೇಳ್ ಸಖಿಯಳೆ 5 ಋಷಿಗಳಲ್ಲಿ ಜನಿಸಿ ಕರದಿ ಧರಿಸಿ ಕುಠಾರವನ್ನು ಅರಸು ಕ್ಷತ್ರಿಯರಿಗಂತಕನ ಕೇಳ್ ಸಖಿಯಳೆ ಅರಸು ಕ್ಷತ್ರಿಯರ ಕುಲಕೆ ಅಂತಕನಾಗಿದ್ದ ನಮ್ಮ ಪರÀಶುರಾಮನ್ನ ಬಲಗೊಂಬೆ ಕೇಳ್ ಸಖಿಯಳೆ 6 ಮುದ್ರೆ ಕಳುವಿ(ಹಿ?) ಲಂಕಾಪುರದಲ್ಲಿದ್ದ ವಾರ್ತೆ ಕೇಳಿ ಸ- ಮುದ್ರ ಸೇತುಗಟ್ಟಿ ಜಾನಕಿಯ ಕೇಳ್ ಸಖಿಯಳೆ ಸ- ಮುದ್ರ ಸೇತುಗಟ್ಟಿ ಜಾನಕಿಯ ಕೂಡಿ ಬಂದ ಅ- ಯೋಧ್ಯಾರಾಮನ್ನ ಬಲಗೊಂಬೆ ಕೇಳ್ ಸಖಿಯಳೆ7 ಎಲ್ಲ ಜಗವ ತನ್ನ ಉದರದಲ್ಲೇ ಇಟ್ಟು ಗೋಕುಲದ ಗೊಲ್ಲತಿಯರ ಮನೆಯ ಪಾಲ್ಬೆಣ್ಣೆ ಕೇಳ್ ಸಖಿಯಳೆ ಗೊಲ್ಲತಿಯರ ಮನೆಯ ಪಾಲ್ಬೆಣ್ಣೆ ಕದ್ದು ಮೆಲ್ಲುವಂಥ ಚೆಲ್ವ ಕೃಷ್ಣನ್ನ ಬಲಗೊಂಬೆ ಕೇಳ್ ಸುಖಿಯಳೆ 8 ಮಾಯಾಶಿಶುರೂಪ ತಾನಾಗಿ ವೇದನಿಂದ್ಯವನ್ನು ಮಾಡಿ ಬೋಧಿಸಿದ ದುರ್ಮತವ ಕೇಳ್ ಸಖಿಯಳೆ ಮಾಡಿ ಬೋಧಿಸಿದ ದುರ್ಮತವ ತ್ರಿಪುರಜನರಿಗೆಲ್ಲ ಬೋಧಿಸಿದ ಬೌದ್ಧನ್ನ ಬಲಗೊಂಬೆ ಕೇಳ್ ಸಖಿಯಳೆ 9 ಕಲಿಸಮಾಪ್ತಿ ಕಾಲದಲ್ಲಿ ಚೆಲುವ ಅಶ್ವಾರೂಢನಾಗಿ ಬಿಡದೆ ಪಾಲಿಸಿದ ಶರಣಜನರ ಕೇಳ್ ಸಖಿಯಳೆ ಬಿಡದೆ ಪಾಲಿಸಿದ ಶರಣಜನರನು ಭೀಮೇಶಕೃಷ್ಣನ ಚರಣಕಮಲಕೆರಗಿ ಬಲಗೊಂಬೆ ಕೇಳ್ ಸಖಿಯಳೆ 10
--------------
ಹರಪನಹಳ್ಳಿಭೀಮವ್ವ
(ಶ್ರೀ ವಾದಿರಾಜರ ಪ್ರಾರ್ಥನೆ) ಭಾವಿಭಾರತಿವರನೆ ದಾಸನ ಬೇಗ ಕಾವ ಕಲುಷಹರನೆ ದೇವ ಋಜು ಗಣನಾಥನೀಪರಿ ಸಾವಕಾಶಕೆ ಸಮಯವಲ್ಲಿದು ಪ. ಅರಿಷಡ್ವರ್ಗದಿ ಸಿಲುಕಿ ಕ್ಷಣಕ್ಷಣ ಕರಗಿ ಕುಂದುತ ಬಂದೆನು ನಾನಾ ಪರಿಯ ಕ್ಲೇಶದಿ ನೊಂದೆನು ಮುಂದೇನು ದುರಿತಾರಾಶಿಗಳನ್ನು ಬೇಗದಿ ತರಿದು ಸಜ್ಜನಗುಣವ ಸುಲಭದಿ ಪೊರೆದನೆಂಬೈತಿಹ್ಯ ವಚನದಿ ಭರವಸದಿ ನಂಬಿರುವೆ ನಿನ್ನನು 1 ತುರಗ ವದನ ದೇವನ ವಲಿಸಿ ದೇವ ನರವರ ಸಂಘವನು ಕರದು ತಂಪೇರಿಸಿ ಸರಿಯೆನಿಸಿದನೆ ಹರಿಯೆ ತಾನೆಂದೊದರಿಕೊಂಡಿಹ ನರಕಭಾಜಿಗಳಾದ ಮೈಗಳ- ನರಿದು ವಾದದಿ ಮುರಿದು ಹಲ್ಲನು ಸಿರಿವರನ ಸತ್ಕರಿಸಿ ಪೂಜಿಪ2 ವನಜಾಕ್ಷ ರಾಮಭಕ್ತನಾಗಿಹ ವಿಭೀಷಣಗೆ ಮಾರುತಿಯಿಂದುತ್ತ- ಮುಂದಿನ ಫಲ ನೀಡೆಂದು ಮಣಿದು ಬೇಡುವೆ ನಿನ್ನ ಪದಯುಗ ವನರುಹಗಳನುವಶ್ಯದಾಯಕ ನಿತ್ಯ ಕರುಣಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ವಾದಿರಾಜರು) ದಿಟ್ಟದಿ ನಿನ್ನಯ ಪದಪದ್ಮವನ್ನು ಮನಮುಟ್ಟಿ ಭಜಿಸುವೆ ಕೃಷ್ಣರಾಯ ಪ ಸೃಷ್ಟಿ ನಿನ್ನಂಥ ಇಷ್ಟ ಪುಷ್ಟನ ಕಾಣೆ ಶ್ರೀ ಕೃಷ್ಣರಾಯ ಅ.ಪ ಇಷ್ಟನು ದುಷ್ಟ ಪಾಪಿಷ್ಠನಾಗುವುದುಚಿತವೇ ಕೃಷ್ಣರಾಯಾ ನಿನ್ನ ದೃಷ್ಟೀಲಿ ನೋಡೆನ್ನ ಶ್ರೇಷ್ಠ ಶ್ರೀಷ್ಮಿಪನಿಷ್ಟ ಕೃಷ್ಣರಾಯಾ 1 ಪಾಲನ ಪಾಲಿಪನನಿಲ್ಲಿಸಿದೇ ಕೃಷ್ಣರಾಯಾ 2 ಗರಳ ಸೇವಿಸಲು ಕಂಡುತ್ಯಜಿಸಿದೆ ಕೃಷ್ಣರಾಯಾತರಳೆಗೆ ನೀ ನಿನ್ನ ಸುಧಿಮಳೆಗರೆಯುತ ಅರಳಿಸೊ ಕೃಷ್ಣರಾಯಾ3 ವಡವುಟ್ಟಿದವರಂತೆ ದುಷ್ಟ ಪಾಪಿಷ್ಟ ಬೆನ್ನಟ್ಟುವನೋ ಕೃಷ್ಣರಾಯಾಗುಟ್ಟದಿ ನಿನ್ನಯ ದೃಷ್ಟಿಲಿ ನೋಡಿ ಆ ದುಷ್ಟನ ಸುಟ್ಟು ಹಾಕೊ ಕೃಷ್ಣರಾಯಾ4 ಮಧ್ಯಾನ್ಹ ಸಮಯದಿ ಮಧ್ವದಾಸನ ಭೂಷಿಪ ಶೇಷನ ವೈರಿಯ ಕೃಷ್ಣರಾಯಾದಾನವ ಗೈದು ದೂತಿಯ ಕರದಿಂದ ದೋಷಿಯೆಂದೆನಿಸಾದೆಸಲಹಿದೊ ಕೃಷ್ಣರಾಯಾ 5 ಅರಿಯದೆ ಪೋಗಿ ನಾಥಾ ತ್ರಿನಾಮನ ಕೂಡ ಭುಂಜಿಸಿದೆ ಕೃಷ್ಣರಾಯಾಅರಿಯು ನೀನಲ್ಲದೆ ಅನ್ಯರ ನಾಕಾಣೆ ಮೈಗಣ್ಣ ಕೃಷ್ಣರಾಯಾ 6 ಎನ್ನ ತನುಮನ ಧನಧಾನ್ಯ ಮನೆಯ ಮಕ್ಕಳೆಲ್ಲಾ ನಿನ್ನ ಚರಣಾಲಯವೋ ಕೃಷ್ಣರಾಯಾನಿನ್ನ ಗುಣಗಣಗಳೆಲ್ಲಾ ಅಗಣಿತವೋ ಅನ್ನಪೂರ್ಣೆಗೆಕೃಷ್ಣರಾಯಾ7 ಆದಿ ಅನಾದಿ ಅನೇಕನಾದಿ ಜನುಮದಿ ಎನ್ನಲ್ಲಿದ್ಯೋ ಕೃಷ್ಣರಾಯಾ ದೇವ ದೇವೇಶ ನೀನೆಂದು ದಯದಿಂದ ತೋರೋಕೃಷ್ಣರಾಯಾ 8 ಚರಣದ ಚರ್ಮಲ ಚಂದಸುವಸನ ತೋದ್ರ್ಯೋ ಕೃಷ್ಣರಾಯಾ ಆಲಸ್ಯ ಮಾಡುತ ತಾಳದೆ ನಿನ್ನ ಬಲಿನ ತೋದ್ರ್ಯೋಕೃಷ್ಣರಾಯಾ 9 ನಾರಂಗಿ ಫಲವನ್ನು ತಿಂದು ನೀ ನವರಸ ಭರಿತದಿ ನಿಂತ್ಯೋ ಕೃಷ್ಣರಾಯಾ ನಾರಿಯ ಮನವ ನೀನರಿತು ನಿನ್ನ ಮನವನಿತ್ತೆ ಕೃಷ್ಣರಾಯಾ 10 ಮೂರಾರು ಎರಡೊಂದು ನಿಂದಿಪ ಮತವನ್ನು ಛಂದದಿಖಂಡಿಸಿದೊ ಕೃಷ್ಣರಾಯಾಗಂಗಾದಿ ಕ್ಷೇತ್ರವು ಹಾಗದೇ ಚರಿಸಿ ತುಂಗದಿ ಬಂದು ಮೈಗಂಧ ತೋದ್ರ್ಯೋ ಕೃಷ್ಣರಾಯಾ 11 ಅಂಗದಿದ್ದುಕೊಂಡು ಪಂಚಭೇದವ ನರುಹಿದೆ ಕೃಷ್ಣರಾಯಾ ತಾರತಮ್ಯವನಿತ್ತು ನಿರುತದಿ ಸ್ಮರಿಸೆಂದು ತರುಳರಿಗುಪದೇಶಿಸಿದೆ ಕೃಷ್ಣರಾಯಾ 12 ಅರ್ಥಿಯಿಂದಲಿ ವೇದ ವೇದ್ಯತೀರ್ಥರ ಪ್ರಬಂಧ ತೀರ್ಥವ ತೋರಿ ನೀ ಕೃತಾರ್ಥನ ಮಾಡಿದೋ ಕೃಷ್ಣರಾಯಾಸತಿಸುತ ಜನನಿ ವಡಗೂಡಿ ವಿರೋಧಿಸೆ ಶಾಪವನಿತ್ತೆಕೃಷ್ಣರಾಯಾ 13 ಸತಿಜಾರನರಿತು ಮನದಲ್ಲಿ ಯೋಚಿಸಿ ಚೋರನಂದದಿ ಜರಿದು ಚರಿಸಿದಿ ಕೃಷ್ಣರಾಯಾಚರಿಸುತ ಧರೆಯೊಳು ಚೋರ ಜಾರನ ಪೊರೆದೆ ಕೃಷ್ಣರಾಯಾ14 ಅಂಗದಿ ಅಂಗಿತೊಟ್ಟು ಭಂಗವಿಲ್ಲದೆ ಕೂಡಲಗಿರಿಯಲಿ ಭುಂಜಿಸಿದೆ ಕೃಷ್ಣರಾಯಾತೀರ್ಥಗಿಂಡಿಯ ಮುಟ್ಟೆಂದು ಅಂಧಕರಾಯನು ಪೇಳಲು ಮುಟ್ಟಲಂಜದೆ ಗಾಡಿ ಧರಿಸಿದೆ ಕೃಷ್ಣರಾಯಾ 15 ತಂಡುಲವಿಲ್ಲದೆ ಪವಾಡತನದಿ ಕೂತುದ್ದಂಡ ಭೀಮನ ಸ್ಮರಿಸಿದೊ ಕೃಷ್ಣರಾಯಾ ತೊಂಡನ ಸತಿಯ ಕೈಗೊಂಡು ಪುಂಡ ಕಂಸಾರಿಯ ಸ್ಮರಿಸಿದೊ ಕೃಷ್ಣರಾಯಾ16 ಸ್ವಾದಿ ಕ್ಷೇತ್ರದಿ ಪೋಗಿ ಛತ್ರದಿ ಅರ್ಚಿಸಿಕೊಂಡ್ಯೋ ಕೃಷ್ಣರಾಯಾ ಮನವನ ಚರಿಸುತ ತಪವನೆಗೈಯುತ ಕಪಿಯನ್ನೇ ಪುಡುಕಿದ್ಯೊ ಕೃಷ್ಣರಾಯಾ 17 ಚಿಕ್ಕ ಬದಿರಲಿ ಪೋಗಿ ಬಲು ಅಕ್ಕರದಿ ನಿನ್ನ ಪಡೆದನ ಕಪ್ಪುಗೊರಳನ ರೂಪದಿ ಕಂಡ್ಯೋ ಕೃಷ್ಣರಾಯಾ ಸ್ವಪ್ನದಿ ಸರ್ವರ ಕಾಣುತ ಸ್ವಪದವಿಯನೇರಿದ್ಯೋಕೃಷ್ಣರಾಯಾ 18 ತಾಮಸ ಜೀವನು ಜವನಂತೆ ಜೂಜಿಸೆ ಜೀವನವರಿಸಿದ್ಯೋ ಕೃಷ್ಣರಾಯಾಲೇಖವು ಬರೆಯಲು ಲೋಕಾವಧರಿಸಿದ ವಾರುಣೀಶನಂತೆ ಪೌರುಷ ತೋರಿ ಫಣಿರೋಗ ನಿತ್ಯೋ ಕೃಷ್ಣರಾಯಾ 19 ಎನ್ನ ಜನ್ಮವಾದ ದಿನದಲ್ಲಿ ಜೀವೇಶರಾಯನ ಪೂಜಿಸಿದ್ಯೋ ಕೃಷ್ಣರಾಯಾಪೂಜಾದಿ ಪೂಜಿಸಿ ಪೂರ್ಣ ಆಯುವಿತ್ತು ಜೀವನುದ್ಧರಿಸಿ ಜೋಕೆಯೋ ಕೃಷ್ಣರಾಯಾ 20 ಅಕ್ಕನ ಕೈಯಲ್ಲಿ ದಿಕ್ಕಿಲ್ಲದವರಂತೆ ಸಿಕ್ಕು ಸುಖಬಟ್ಯೋ ಕೃಷ್ಣರಾಯಾ ದಿಟ್ಟದಿ ನಿನ್ನಯ ಗುಟ್ಟು ತಿಳಿಸಿ ಬೆಟ್ಟದೊಡೆಯ ತಂದೆವರದಗೋಪಾಲವಿಠಲನಪದಪದ್ಮಗಳನ್ನೆ ಮುಟ್ಟಿ ಭಜಿಸುವಂತೆ ದಿಟ್ಟನ ಮಾಡುಶ್ರೀ ಗುರು ಕೃಷ್ಣರಾಯಾ 21
--------------
ತಂದೆವರದಗೋಪಾಲವಿಠಲರು
(ಶ್ರೀ ವಿಷ್ಣುತೀರ್ಥರು) ಮೋದ ಬೀರುತ ತಾ ಮೋದಪುರಕೆ ಬಂದವನ್ಯಾರೆಪೇಳಮ್ಮಯ್ಯಾ ಪ ಶುಕಮುನಿ ಪೇಳಿದ ಶಾಸ್ತ್ರದ ಸಾರವ ಸುರಿಸಿದ ಧೀರ ಶ್ರೀ ವಿಷ್ಣುತೀರ್ಥಾರ್ಯ ಕಾಣಮ್ಮಾಅ.ಪ. ಶುದ್ಧವೃತ್ತಿಗಳಿಂದನುಭೋಗಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಜೀವರತಾ ಬುದ್ಧಿ ಭೇದಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಶೂನ್ಯರುಪದ್ರವ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಶುದ್ಧ ಶೃತಿ ಸ್ಮøತಿ ಪದ್ಧತಿ ತಪ್ಪದೆ ಇರುವೋ ಯತೀಶ್ವರರೇ 1 ಮರೆಪೊಕ್ಕವರನು ಮರೆಯದೆ ಪೊರೆವನದಾರೆ ಪೇಳಮ್ಮಯ್ಯಾ ಮೋರೆಯ ತೋರೆಂದು ಮಾರನಯ್ಯ ಮುರಾರಿಗೆ ಪೇಳ್ವವನಾರೆ ಪೇಳಮ್ಮಯ್ಯಾ ಮೋರೆ ಮೋಹಿಸಿ ಮೂಲೋಕವ ಸುತ್ತಿದನ್ಯಾರೆ ಪೇಳಮ್ಮಯ್ಯಾ ಮೋರೆ ಒಂದು ಮೂರು ಕಣ್ಣುಳ್ಳ ಬೊಮ್ಮನ ಪ್ರೀತಿಯ ಮಗನಮ್ಮ 2 ಬಂದು ಸೇವಿಸೆ ಘನ ಬಂಧನ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಹಿಂದು ಮುಂದು ತನ್ನ ನಂಬಿದವರ ಮನಮಂದಿರ ದಿಪ್ಪುವನ್ಯಾರೆ ಪೇಳಮ್ಮಯ್ಯಾ ಇಂದುಧರ ಖಳವೃಂದ ಮೋಹನ ಗುರು ನಂದಿವಾಹನನೇ ಪೇಳಮ್ಮಯ್ಯಾ ಇಂದಿರೇಶ ತಂದೆವರದಗೋಪಾಲವಿಠಲನ ಸೇವಿಪ ನೀಲಕಂಠ ಕಾಣಮ್ಮಾ 3
--------------
ತಂದೆವರದಗೋಪಾಲವಿಠಲರು