ಒಟ್ಟು 1497 ಕಡೆಗಳಲ್ಲಿ , 112 ದಾಸರು , 1202 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲಯಾಮಿ ಶ್ರೀನಿವಾಸಂ-ಕಲಭಾಷ ಮಿಂದುಹಾಸಂ ಪ ಕಮನೀಯಹೇಮ ಚೇಲಂ-ಕಮಲಾಲಯಾನುಕೂಲಂ ಕಮಲಾಭಿರಾಮ ಮಾಲಂ 1 ಸುಮಬಾಣ ಸುಂದರಾಂಗಂ-ಸುಮನನಾರ್ಪಿತಾಂತರಂಗಂ ನಮದಾರ್ತಿ ಸಂಗ ಭಂಗಂ 2 ಜಲಜಾಪ್ತ ಪತ್ರನೇತ್ರಂ-ಜಲದೋಪಮಾನ ಗಾತ್ರಂ ಜಲಜಾಪ್ತ ಪುತ್ರ ಮಿತ್ರಂ 3 ಕುಂದೋಪಮಾನ ರದನಂ-ಚಂದ್ರೋಪಮಾನ ವದನಂ ಬೃಂದಾರಕಾರಿ ದಮನಂ 4 ಅಜವಂದ್ಯ ಚರಣಕಮಲಂ-ನಿಜ ಸೌಖ್ಯ ಕರಣ ಕುಶಲಂ ಭಜನೀಯ ವರದ ವಿಠಲ-ಕಲಯಾಮಿ ಶ್ರೀನಿವಾಸ 5
--------------
ಸರಗೂರು ವೆಂಕಟವರದಾರ್ಯರು
ಕಲಯೇಹಂ ಶ್ರೀ ಕನಕಾದ್ರೀಶಂ ಜಲದೋಪಮ ಭಾಸಂ ಪ ಸುಲಲಿತ ಕರಧೃತ ಧರರಥಚರಣಂ ಕಲಿಕಲಹಾಪಹ ಕಮನೀಯ ಚರಣಂ ಅ.ಪ ಮಸ್ತಕ ನಿಹಿತ ಮಹಾರ್ಹ ಕಿರೀಟಂ ಕಸ್ತೂರೀ ತಿಲಕಿತ ದಿವ್ಯಲಲಾಟಂ ನಿಸ್ತುಲ ಮದಮಾಂಚಿತ ಜೂಟಂ ಕೌಸ್ತುಭ ಶೋಭಿತ ಮಣಿಸರ ಕೂಟಂ 1 ಸುಮಶರಕೋಟಿ ಮನೋಹರ ವೇಷಂ ಕಮಲಾಸಖ ಭಾ ಭರಣ ವಿಭೂಷಂ ಸುಮಹಿತಭಣಿತ ಸದೃಶ ಮಂಜುಭಾಷಂ ವಿಮಲಹೃದಯ ಸೇವಕ ಪೋಷಂ 2 ಶ್ರೀರಮಣೀಪರಿಶೋಭಿತಗಾತ್ರಂ ವಾರಿಜಭವಕೃತ ವಿವಿಧ ಸ್ತೋತ್ರಂ ಸಾರಸದಳ ವಿಸ್ತಾರ ಸುನೇತ್ರಂ ನಾರದಮುನಿಕೃತ ಪೂಜಾಪಾತ್ರಂ 3 ಶರದಿಂದುಮಂಡಲ ಸುಂದರವದನಂ ವರಕುಂದಕುಟ್ಮಲ ಸನ್ನಿಭ ರದನಂ ಕರಸಂದರ್ಶಿತ ವೈಕುಂಠಸದನಂ ತರಣಿ ಘೃಣಿ ರುಚಿದಂತ ಹಸನಂ 4 ತುರುಣ ಶ್ರೀತುಳಸೀ ಶೋಭಿತಮಾಲಂ ಸರಸಿಜಗರ್ಭರುಚಿರ ದಿವ್ಯಚೇಲಂ ವರವ್ಯಾಘ್ರಭೂಧರ ವಿಹರಣಶೀಲಂ ವರವಿಠಲಮಖಿಲಾಗಮ ಪಾಲಂ 5
--------------
ವೆಂಕಟವರದಾರ್ಯರು
ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ ಮೂರು ಯುಗದೊಳು ತಾನು ಸೇರಿಕೊಂಡನು ವನವ ಚೋರರಾಯರ ಸಂಗ ಬೇಡವೆನುತ ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು 1 ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ ಕದನಕರ್ಕಶರನ್ನು ಕಾಮಿಸುವನು ಒದಗಿದನ್ಯಾಯಗಳನೊಲಿಸಿಕೊಂಬನು ತಾನು ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ 2 ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ 3 ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ ಮುಪ್ಪು ಬಂದುದು ವೇದ ಕಪ್ಪಾದನಗ್ನಿ ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ 4 ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು ಮೌನ ಜಪಗಳನೆಲ್ಲ ಕೃಷಿಕೊಂಡನು ಹಾನಿಯಾದರು ಯಜ್ಞಹೀನರಾದರು ಪಿತೃಗ ಳೇನ ಮಾಡುವರಿವರು ಅನುಮಾನ ಬೇಡೆನುತ 5 ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ 6 ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ ಬವಣೆಬಡುವನು ಕಮಲಭವನು ತನ್ನೊಳಗೆ ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ ಕವಲು ಮನ ಬೇಡಿರಲು ಬಹುದು ಇವನೊಳಗೆ 7 ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು ಯತಿ ಸತತ ಮನದೊಳಗೆ ಖತಿಗೊಂಬನು ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ ಮತಿಯುತನು ದೃಢವೆಂದು ಕಾಯವನುಸರಿಸಿ8 ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ ಬಾಯ ಹೊಯ್ದರು ಕೇಳ ಬಡವರನ್ನು ಮಾಯವಾದಿಯ ಮಾತು ಕೂಡಿಸುವ ಜೀವವನು ರಾಯರಾಯರ ಮುಂದೆ ನಡೆಸುತ್ತಲಿಹರು 9 ಆಡಿಗಾರರ ತಂದು ನಾಡ ಊಳಿಗಕಿಡುವ ನೋಡಿದನ್ಯಾಯ ಮಾತುಗಳ ಹಿಡಿತರುವನು ಕೂಡಿಸುವ ಜೀವವನು ಎಳೆನೀರು ಸಕ್ಕರೆಯು ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು 10 ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು 11 ಕಾಲದರಸಿನ ನೋಡಿ ಮೂಲ ಪಡಕೊಂಬುವರು ಆಲಸ್ಯವನು ಬಿಟ್ಟು ಸೇವಿಸುವುದು ಶಾಲು ಸಕಲಾಭರಣ ತೋಲಾಗಿ ಬರುತಿಹುದು ಜಾಲರೂಪವದಾಗಿ ಮನಕೆ ತೋರುವುದು 12 ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ ಬಾಯಹೊಯಿಯೆಂದೆನುತ ನೋಯನುಡಿ ಪೇಳ ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು ಕಾಯವನು ಬಳಸುವನು ಮೋಹವನು ತೋರಿ13 ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು ಅಗಲೇ ಎದ್ದು ಇದಿರಾಗಿ ಪರಿಜನವು ಬೇಗದೊಳಗನುಸರಿಸಿ ಭೋಗವನು ಕೈಕೊಂಡು ರಾಗದೊಳಗಿದ್ದರಾ ಭವಜಲದ ನಡುವೆ 14 ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ ಕಾಡಫಲವನು ಮೆದ್ದು ಕೋಡಗಲ್ಲಿನೊಳು ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು 15
--------------
ವರಹತಿಮ್ಮಪ್ಪ
ಕಷ್ಟಪಡಲಾರೆನೋ ಸೃಷ್ಟೀಶ ಶ್ರೀಶಾ ದುಷ್ಟದಮನ ದೀನವತ್ಸಲ ನಾರಾಯಣ ಪ ಒಡಲು ಕ್ಷಣಗಳು ಬಿಡದೆ ಬಾಧಿಸೆ ನಿನ್ನ ಅಡಿಯಕಾಣಿಸದಿವೆ ಕೆಡಿಪ ದುರಾಶೆಯ ಸುಡುತಲಿ ನೂಕು ದುಡುಕುವ ಮನವಂ ಸಡಲಿಸಬೇಕು ಕಡುಮುದದಿಂದಲಿ ಕಾಯುತ ಸಾಕು ಪರಾಕು 1 ಲೋಕಿಗರೊಳು ನಾನನೇಕದುಶ್ಚರ್ಯೆಯ ವಿ- ವೇಕವಿಲ್ಲದೆ ಮಾಡಿ ಕಾಕುಮನುಜನಾದೆ ಘೂಕದ ಪರಿಯೀ ಭವಸಂಸಾರ ನಾಕವಾದರೂ ಬಹು ನಿಸ್ಸಾರ ಜೋಕೆಯೊಳಿದಬಿಟ್ಟು ಒಟ್ಟು ಬಂದನೆ ತೋರಾ ಶೋಕಸಾಗರವಾ ಶೋಷಿಪಶೂರ 2 ಇಷ್ಟ ಮೂರುತಿ ನಿನ್ನ ನಿಷ್ಠೆಯಿಂ ಕಾಣುವೆ ಎಷ್ಟು ಮೊರೆಯಿಟ್ಟರೂ ದೃಷ್ಟಿಸದಿರುವೇ ಅಷ್ಟಮದಗಳನಿತಿಷ್ಟೂ ನಿಲ್ಲವೋ ಭ್ರಷ್ಟಗುಣಗಳ ನಿಷ್ಠುರಗೈವುದೋ ವಿಷ್ಣು ಶ್ರೇಷ್ಠಪದ ಕೊಟ್ಟು ಕರುಣಿಸೋ ಕೃಷ್ಣ ಕೃಪಾಳು ಹೆಜ್ಜಾಜೀಶಾ 3
--------------
ಶಾಮಶರ್ಮರು
ಕಂಸಾರಿ ಪ. ಶೌರಿ ಸುರ ನರವಂದಿತ ಚರಣವ ಕೋರಿ ಪರಿಪರಿ ಬೇಡುವೆ ನಿನ್ನೆಡೆ ಸಾರಿ ಅರಿಯದ ಕಂದನ ಪೊರೆ ದಯೆತೋರಿ ಅರಿಯೆನದಾರನು ಮರೆಯೆನು ನಿನ್ನನು ಕರುಣಾಕರನೆಂಬೀ ಬಿರುದುಳಿಸಿನ್ನು 1 ಮನ್ಮಥಪಿತ ಬಾ ಸುಂದರಕಾಯ ಮನ್ನಿಸು ಎನ್ನಪರಾಧವ ಜೀಯ ಚಿನ್ಮಯರೂಪನೆ ಚೆನ್ನಿಗರಾಯ ಅನ್ಯರ ನೆರೆಯೆನು ನೀ ಕೇಳಯ್ಯ ಎನ್ನೊಳಗೀಪರಿ ಛಲವೇಕಯ್ಯ ಇನ್ನಾದರು ಕೈಪಿಡಿ ದಮ್ಮಯ್ಯ 2 ಮಂದರಗಿರಿಧರ ಗೋವಿಂದನೆ ಬಾ ನಂದಕುಮಾರನೆ ತಡೆಯದೆ ನೀ ಬಾ ನಂದಿನಿಗೊಲಿದಾನಂದವ ಕೊಡು ಬಾ ವೃಂದಾವನ ವಿಹಾರನೇ ಬಾ ಬಾ ಇಂದಿರೆಯರಸನೆ ಶೇಷಗಿರೀಶನೆ ಇಂದೆನಗೊಲಿದೈ ತಂದೆಯೆ ಭಳಿರೆನೆ 3
--------------
ನಂಜನಗೂಡು ತಿರುಮಲಾಂಬಾ
ಕಂಸಾರಿನಿಜಪಾದ ಮರೆಯದಿರೆಲೆ ಮನವೆ ಸಂಸಾರಸುಖ ನೆಚ್ಚಿ ಭ್ರಮೆಯೊಳಗೆ ಬಿದ್ದು ಪ ಜನನಿಜನಕರುವನಿತೆತನುಜನುಜರಿವರೆಲ್ಲ ನಿನಗ್ಹಿತದಶತ್ರೆಂದು ನೆನೆಸಿಕೊಳ್ಳದಲೆ ಅನುದಿನವು ದುಡಿದುಡಿದು ತನುಮನಧನವನಿತು ಬಿನುಗರಿಗೆ ಸಲಿಸಿ ನರಕಕುಣಿಯೊಳಗೆ ಬಿದ್ದು 1 ಹೊಲಸುಕಿಲ್ಬಿಷಮಾಂಸ ಮೇಲೆ ಚರ್ಮದ ಹೊದಿಕೆ ಬಲವಾಗಿ ಬಿಗಿದ ನರ ಎಲುವಿನ್ಹಂದರವು ತೊಳೆಯದಿರ್ದರೆ ನಿಮಿಷ ಹೊಲಸುನಾರುವ ಮಹ ಮಲಭಾಂಡಕ್ಕೊಲಿದು ಬಲು ಸಿಲುಕಿ ಬಂಧದೊಳು 2 ಜಡದಮೇಲಣ ಲಿಪಿಯು ಒಡನೆ ಮಾಯಪ್ಪಂತೆ ಪೊಡವಿಯ ಸುಖ ನಿಮಿಷದಡಗಿ ಪೋಗುವುದು ಅಡಿಗಡಿಗೆ ಎಡೆಬಿಡದೆ ಒಡೆಯ ಶ್ರೀರಾಮನಲಿ ದೃಢವಾಗಿ ನೆರೆನಂಬಿ ಪಡಕೋ ನಿಜಸುಖವ 3
--------------
ರಾಮದಾಸರು
ಕಾಡುತಲಿಹ್ಯದು ಬೆಡಗಿನ ಕೋಡಗ ಬಡವರಿಗಳವಲ್ಲ ಪೊಡವಿಯಲಿ ಧ್ರುವ ಮಾಯದ ಮುಖವದು ಮೋಹದ ನಾಸಿಕ ಮಾಯಮಕರ ಕಿವಿಕಣ್ಣುಗಳು ಹ್ಯಾವ ಹೆಮ್ಮೆಯ ಹುಬ್ಬು ಕಪಿಕಣ್ಣಯೆವೆಗಳು ಬಾಯಿ ನಾಲಿಗೆ ಹಲ್ಲು ಬಯಕಿಗಳು 1 ಗಾತ್ರ ಸರ್ವಾಂಗವು ದುರುಳ ದುರ್ಬುದ್ಧಿಯ ಬೆರಳುಗಳು ಎರಡು ತುಟಿಗಳೆಂಬ ನಿಂದೆ ದೂಷಣಗಳು ಕೊರಳು ಕುತ್ತಿಗೆ ದುಷ್ಕರ್ಮಗಳು 2 ಹಣಿಯು ದಾಡಿಯು ಗಲ್ಲ ಪ್ರಪಂಚ ಶೋಭಿತ ಕಣ್ಣಭಾವಗಳಿವು ಚಂಚಲವು ಬಣ್ಣಬಣ್ಣದಿ ಕುಣಿದಾಡುವ ಕಪಿ ಗುಣ ಏನೆಂದ್ಹೇಳಲಿ ಕಪಿ ವಿವರಣ£ 3 ಉದರಬೆನ್ನುಗಳಿವು ಸ್ವಾರ್ಥಬುದ್ಧಿಗಳು ಮದಮತ್ಸರಗಳೆಂಬ ಕೈಗಳು ಪಾದ ಕಾಲುಗಳಿವು ಕಾಮಕ್ರೋಧಗಳು ಮೇದಿನಿಯೊಳು ಕುಣಿದಾಡುವದು 4 ಆಶಿಯೇ ಪಂಜವು ವಾಸನೆ ಬಾಲವು ಮೋಸಮೂಕರ ಗುಣಕೇಶಗಳು ಏಸು ಮಂದಿಯ ಕಪಿ ಘಾಸಿಯ ಮಾಡಿತು ಮೋಸಗೈಸಿತು ಭವಪಾಶದಲಿ 5 ಅಶನ ವ್ಯವಸನ ತೃಷಿ ಕಪಿಗಿದು ಭೂಷಣ ಮೀಸಲಾಗಿಡಿಸಿತು ಸುವಾಸದ ಹಸಗೆಡಿಸುದು ಯತಿ ಮುನಿಗಳ ತಪಸವು ಮುಸುಕಿತು ಮೋಸವು ಕಪಿಯಿಂದಲಿ 6 ಕಂಡದ್ದು ಬೇಡುತಾ ಅಂಡಲಿಯುತಿಹುದು ಮಂಡಲದೊಳು ತಾ ಕಾಡುತಲಿ ಪಿಂಡ ಬ್ರಹ್ಮಾಂಡದಿ ಲಂಭಿಸುತಿಹದು ಹಿಡದು ಬಿಡದು ಮುಷ್ಟಿಬಿರುದುಗಳು 7 ಪಂಡತನದಿ ಬಲು ಪುಂಡನಾಗಿಹದು ಹಂಡೀಗತನದಲಿ ಬಾಳುವದು ಭಂಡಿನಾ ಅಟಿಗೆ ಗಂಡಾಗಿಹುದು ಕಂಡಕಡಿಗೆ ಹರಿಡಾಡುತಲಿ 8 ಮೂಢಮಹಿಪತಿಯ ಕಾಡುವ ಕಪಿಗಿನ್ನು ಜಡಸೀದ ಗುರುಜ್ಞಾನ ಸಂಕೋಲಿಯು ಕಾಡುವ ಕಪಿಕೈಯ ಬಿಡಿಸಿದ ಗುರು ಎನ್ನ ಕಡೆಯ ಮಾಡಿದ ಬ್ರಾಹ್ಮಣ ಜನ್ಮಲಿ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಣದೆ ನಿಲ್ಲಲಾರೆ, ಕಮನೀಯ ಮೂರುತಿಯಪ್ರಾಣೇಶನ ತೋರೆ ಗಿಣಿಯೆ ಪ ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆಜಾಣೆ ಕೃಷ್ಣನ ತೋರೆ ಗಿಣಿಯೆ ಅ.ಪ. ಮಕರಕುಂಡಲಧರನ ಮಕರಧ್ವಜನ ಪಿತನಮಕುಟ ಭೂಷಣನ ತೋರೆ ಗಿಣಿಯೆಮಕರಾಕ್ಷ ಸಂಹರನ ಮಕರಾರಿ ರಕ್ಷಕನಮಕರ ಶಿಕ್ಷಕನ ತೋರೆ ಗಿಣಿಯೆ 1 ಇಂದು ರವಿಲೋಚನನಇಂದು ನೀ ಕರೆತಾರೆ ಗಿಣಿಯೆಇಂದುಶೇಖರನುತನ ಇಂದಿರೆಯರಸನತಂದು ತೋರೆ ಮುದ್ದುಗಿಣಿಯೆ2 ಒಂದು ನಿಮಿಷವೊಂದು ಯುಗವಾಗಿ ತೋರಿತೆಸೌಂದರ್ಯನ ತೋರೆ ಗಿಣಿಯೆಮಂದಮಾರುತ ಸೋಕೆ ಮರುಳುಗೊಂಡೆನೆ ಎನ್ನಮಂದಿರಕೆ ಕರೆತಾರೆ ಗಿಣಿಯೆ 3 ಕಾಯಜನ ಬಾಣದಲಿ ಕಾಯವೆಲ್ಲವು ಬಹಳಘಾಯವಾಯಿತು ನೋಡೆ ಗಿಣಿಯೆಮಾಯೆಗಳ ಮಾಡದೆ ಮಮತೆಯಿಂದಲಿ ಎನ್ನನಾಯಕನ ಕರೆತಾರೆ ಗಿಣಿಯೆ 4 ಪಂಕಜೋದ್ಭವ ಪಿತನ ಪಂಕಜನಯನನಪಂಕಜನಾಭನ ತೋರೆ ಗಿಣಿಯೆಪಂಕಜಾಕ್ಷ ಸಿರಿಕೃಷ್ಣನ ಪದಪದ್ಮಶಂಕೆಯಿಲ್ಲದೆ ತೋರೆ ಗಿಣಿಯೆ 5
--------------
ವ್ಯಾಸರಾಯರು
ಕಾಣದೆ ಸುಳ್ಳೆ ಬಡಿದಾಡ್ವಿರ್ಯಾಕಣ್ಣ ನಾನ್ಹೋಗತನ ನಿಮಗೆ ಮುಕ್ತಿಯಿಲ್ಲಣ್ಣ ಪ ಪ್ರಾಚೀನ ಹಿರಿಯರ ಸಾಕ್ಷಿಕೊಡುವೆ ನಿಮಗೆ ಜ್ಞಾನದಿಂ ಕೇಳಿ ತಿಳೀಬಹುದಣ್ಣ ಅ.ಪ ಘನವಂತ ಸತ್ಯವ್ರತ ಭೃಗು ಗಾರ್ಗೆಯರು ಇನಿಸುತಿಳಿಯದೆ ವಿಶ್ವಾಮಿತ್ರನು ಘನಶ್ರಮಬಟ್ಟರು ಮುನಿ ವರದನಾರದರು ದಿನದಿನ ತ್ರಿಣಿಯರು ದರ್ಶನಿದ್ದವರು ಜನಕ ರಾಜರ್ಷಿಯು ಮುನಿ ಅತ್ರಿಮಹಿಮರು ನಾನ್ಹೋಗತನ ಮುಕ್ತಿ ಸಿಗದೆ ಬಳಲಿದರು 1 ಸನಕಾದಿ ಸಾನಂದ ಮಹರ್ಷಿಗಳು ಮುನಿಶ್ರೇಷ್ಠ ಬಲ್ಲಿದ ವಾಲ್ಮೀಕಾದಿಗಳು ಶೌನಕಶುಕಭರದ್ವಾಜಮುನಿಗಳು ಗಣನೆಯಿಲ್ಲದ ಮಿಕ್ಕ ಪತಿತಮೋಕ್ಷಿಗಳು ಪುರಂದರ ಜ್ಞಾನಿಗಳಿವರ್ಗೆಲ್ಲ ನಾನ್ಹೋಗತನ ಮುಕ್ತಿ ಆಗಿಲ್ಲ ಕೇಳೋ 2 ನಾನ್ಹೋಗದದಕಜ ಕಳಕೊಂಡ ಶಿರವ ನಾನು ಹೋಗಿದ್ದರೆ ಅಳಿತಿದ್ದಿಲ್ಲೆಲವೋ ಖೂನವಿಲ್ಲದೆ ಕೂಗಿ ಕೆಡಬೇಡಿ ನೀವು ಭವ ಹೊಂದಿರಿ ಗೆಲವು ನಾನ್ಹೋದಮೇಲೆ ಜಾನಕಿ ಶ್ರೀರಾಮ ಮಾಣದೆ ಕೊಡುವನು ಮುಕ್ತಿ ಸಂಪದವ 3
--------------
ರಾಮದಾಸರು
ಕಾಣಲಿಲ್ಲವೆಂದೆನಬೇಡಿ ಪ ಜಾಣನವನು ನಿಮ್ಮ ಕೋಣೆಯೊಳಗಿರುವಾ ಗು ಡಾಣವ ತುಡುಕುವ ನೆರೆನೋಡಿ ಅ.ಪ ಸುಲಭನು ನಿಮಗವನೊಲಿವನು ನಿಮ್ಮೆಡೆ ನಿಲುವನು ನಲಿವನು ಕೈನೀಡೀ ಸಲಿಸಿರಿ ಬೆಣ್ಣೆಯ ಮೆಲುವನು ಕಿಲಕಿಲ ನುಲಿವನು ಚಲಿಸಲು ಬಿಡಬೇಡಿ 1 ಅಳುಕುತ ಬಳುಕತ ಬಳಲುತ ಸುಳಿಯುತೆ ಘಳಿಲನೆ ಪೋಪನೆಚ್ಚರವಿರಲಿ ಎಳನಗೆಯಿಂದ ಪಾಲೆರೆಯಿರಿ ಮನ ದೊಳಚ್ಚಳಿಯದ ಮೋದವು ನೆಲೆಸಿರಲಿ 2 ಮನವೆಂಬುವುದೇ ವನರುಹವಮ್ಮಾ ಕನಸುನೆನಸಿನೊಳಾ ವನಜವನರ್ಪಿಸೆ ನೀನೆಂಬುದನೇ ಮರೆಯುವಿರಮ್ಮಾ [ತನುಮನ ಅವನಡಿ ಸೇರುವುದಮ್ಮಾ] 3 ಪಡಸಾಲೆಯೊಳಿವ ನಿಲ್ಲುವನಲ್ಲಾ ಅಡಿಗೆಯ ಕೋಣೆಯ ಬಿಡುವನಲ್ಲ ಒಡೆಯ ಶ್ರೀಮಾಂಗಿರಿಪತಿಯನು ನೋಡದ ಮಡದಿಯಿಲ್ಲವೆಂಬುದು ಸಟೆಯಲ್ಲ 4 ನೀವಿರುವಾಯೆಡೆ ಪಾಲ್ಗಡಲಮ್ಮಾ ನೀವಡಿಯಿಡುವುದೇ ಕಡೆಗೋಲಮ್ಮಾ ದಧಿ ನವನೀತವು ನೀವಿರೆ ಮಾಂಗಿರಿರಂಗನುಂಟಮ್ಮಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಯ ಪ ದಾನವಾರಣ್ಯಪಾವಕ ವೀತಶೋಕ ಅ.ಪ. ಆನತೇಷ್ಟ ಪ್ರದಾಯಕ ನಮಿಸುವೆನು ಸದಾ ಮೈನಾಕಿಧರ ಬಿಂಬ ಸುರಮುನಿಕದಂಬ ಧ್ಯಾನಗಮ್ಯನೆ ಭಕ್ತರಾಪತ್ತು ಕಳೆ ಶಕ್ತಾ ನೀನೆ ಗತಿಯೆಂಬೆ ಮುನಿಮನ ವನಜ ತುಂಬೆ 1 ಶ್ರವಣ ಮಂಗಳನಾಮಧೇಯ ನಿರ್ಜಿತಕಾಮ ಸವನ ದ್ವಿತಿಯರೂಪ ವಿಗತಕೋಪ ಸ್ವವಶ ಸ್ವಾತಂತ್ರ್ಯ ವಿಖನಸ ಪೂಜ್ಯವಜ್ರನಖ ಪವಿ ದಂಷ್ಟ್ರದರ್ಶ ಭಾರ್ಗವಿರಮಣಗಶನಾ 2 ಆದಿದೇವಾನಂತ ಮಹಿಮನೇ ನಿಶ್ಚಿಂತಾ ಕಾದುಕೋ ನಿನ್ನವರ ವಿಬುಧ ಪ್ರವರಾ ಮೋದಮಯ ಶ್ರೀ ಜಗನ್ನಾಥವಿಠಲರೇಯ ವೈದಿಕವ ನುಡಿಸು ಲೌಕಿಕ ಮಾರ್ಗವ ಬಿಡಿಸು 3
--------------
ಜಗನ್ನಾಥದಾಸರು
ಕಾಯ ರಾಘವೇಂದ್ರ ರಾಘವೇಂದ್ರ ದುರಿತೌಫ ಪರಿಹರಿಸಿ ರಾಘವೇಷನ ಪಾದಮೌಘ ನುತಿಪ ಗುರು ಪ ಇಂದು ಕಿರಣಪೊಲುವ ಪಾದ ಇಂದು 1 ಸಾಕುವುದು ಎನ್ನನೇಕ ಮಹಿಮ ಗುರು2 ಸಿರಿವಿಜಯವಿಠ್ಠಲ ಪರದೈವವೆ ಯೆಂದು ಸ್ಥಿರವಾಗಿ ಸ್ಥಾಪಿಸಿ ಮೆರೆದ ನಿರ್ಮಳಕಾಯ 3
--------------
ವಿಜಯದಾಸ
ಕಾಯ ಇಂದಿರೆ ರಮಣ ಆಗಲೂ ನೀ ಕಾಯಬೇಕೋ ಅರವಿಂದ ನಯನ ಪ. ಈಗ ಈ ಜನ್ಮದಲ್ಲಿ ಭವ ದಾಟುವಲ್ಲಿ ಅ.ಪ. ಮಾನವ ನಾನಾಗಿ ಪುಟ್ಟಿ ಕಾಲ ಕಳೆದು ದೀನನಾಗೀಗ ಇನ್ನು ನೀನೆ ಗತಿಯೋ ಎನಲು ಶ್ರೀನಾಥ ನಿನ್ನ ನಾಮ ಎನ್ನ ನಾಲಗೆಯಲಿ ನುಡಿಸಿ 1 ಮಾಯಾಪತಿಯೆ ಕೇಳೋ ಆ ಯಮಭಟರು ಎಳೆದು ನೋಯಿಸುತ್ತಿರಲು ಎನ್ನ ಬಾಯಬಿಡುತಲಿ ತೋಯಜಾಂಬಕನೆ ಎನ್ನ ಕಾಯೋ ಎಂದೆನುತ ಒದರೆ ಆ ಯಮಬಾಧೆ ಬಿಡಿಸಿ ಸಾಯದಾ ಸೌಖ್ಯವನಿತ್ತು 2 ವೈಷ್ಣವ ಜನ್ಮವ ನೀನು ಇತ್ತುದು ಪಿರಿಯದಲ್ಲೊ ವೈಷ್ಣವ ಜ್ಞಾನವ ನೀಡೊ ಸುಭಕ್ತಿ ಸಹಿತ ಕೃಷ್ಣಮೂರುತಿಯೆ ನೀನು ಅಷ್ಟದಳÀ ಪದ್ಮದಲಿ ನಿಂತು ಉಷ್ಣ ಶೀತ ದ್ವಂದ್ವ ಸಹಿಷ್ಣುತೆ ವಿರಕ್ತಿಯೊಡನೆ 3 ತ್ರಿಗುಣದಿಂದ ಬದ್ಧವಾದ ವಿಗಡದೇಹ ತೊಲಗುವಂತೆ ಬಗೆಬಗೆಯ ನಿನ್ನ ಲೀಲೆ ಅಂತರದಿ ತಿಳಿಸಿ ಜಗದಾವರಣ ತೊಲಗುವಾಗ ಬಗೆಬಗೆಯ ಲಯದ ಚಿಂತೆ ತಗಲಿ ಮನಕೆ ನಿನ್ನ ಮಹಿಮೆ ಆನಂದವಾಗುವಂತೆ 4 ಗೋಪಾಲಕೃಷ್ಣವಿಠಲ ನೀ ಪರದೈವನೆನಿಸಿ ಆಪಾದಮೌಳಿ ನಿನ್ನ ರೂಪವ ತೋರಿ ಅಪವರ್ಗದಲಿ ಎನಗೆ ಶ್ರೀಪಾದಾಸ್ಥಾನವಿತ್ತು ಈ ಪರಿಯಿಂದ ಉಭಯ ವ್ಯಾಪಾರದಲ್ಲಿ ಹರಿಯೆ 5
--------------
ಅಂಬಾಬಾಯಿ
ಕಾಯಬೇಕೆನ್ನ ಕರುಣದಲಿ ಧನ್ವಂತ್ರಿ ಶ್ರೀಯರಸ ನರಹರಿಯೆ ಪ್ರಾರ್ಥಿಸುವೆ ನಿನ್ನ ಪ. ಸುರರಿಗೆ ಮರಣ ಕಾಲವು ಪ್ರಾಪ್ತವಾಗಲು ಗಿರಿಯಿಂದ ಶರಧಿಯನು ಮಥಿಸೆ ಪೇಳಿ ಕರುಣದಿಂದಮೃತ ಕರದಿಂದ ಸುರರಿಗೆ ಎರೆದು ಜರೆ ಮೃತ್ಯು ಬಿಡಿಸಿದಗೆ ಇದು ಒಂದು ಘನವೆ 1 ಸಕಲ ನಾಡಿಗಳಲ್ಲಿ ಚೇಷ್ಟಪ್ರದ ನೀನಾಗಿ ಸಕಲ ವ್ಯಾಪಾರಗಳ ನಡೆಸುತಿರಲು ಯುಕುತಿಯಿಂದಲಿ ನಾಡಿ ನೋಡಿ ತಿಳಿಯುವನ್ಯಾರೊ ಮುಕುತಿದಾಯಕ ನಿನಗೆ ಇದು ಒಂದು ಘನವೆ 2 ಅನಾದಿಯಿಂದ ಅಪಥ್ಯದಲಿ ನರಳುವೆನೊ ಈಗ ಪಥ್ಯವ ಮಾಳ್ಪ ಬಗೆ ಯಾವುದೊ ಶ್ರೀನಿವಾಸನೆ ನಿನ್ನ ಧ್ಯಾನವೆ ಔಷಧವೊ ಶ್ರೀ ಗುರುಗಳಾಜ್ಞೆಯೆ ಪಥ್ಯವೆನಗಿನ್ನು 3 ಭಕ್ತಪ್ರಹ್ಲಾದನನು ಯುಕ್ತಿ ಶಕ್ತಿಗಳಿಂದ ಮುಕ್ತಿಮಾರ್ಗವ ತೋರಿ ಸಲಹಲಿಲ್ಲೇ ಭಕ್ತಿಹೀನರನೆ ಕಂಡು ಎನ್ನ ರಕ್ಷಿಸದಿರಲು ಯುಕ್ತವೇ ನಿನಗಿನ್ನು ಭಕ್ತಪಾಲಕನೆ 4 ನಿನ್ನ ದಾಸತ್ವದಲಿ ನೆಲಸಬೇಕಾದರೆ ಬಿನ್ನಣದ ರೋಗಗಳ ಪರಿಹರಿಸಿ ಸಲಹೊ ನಿನ್ನವರಾದ ಮೇಲಿನ್ನು ಕಾಯದೆ ಇಹರೆ ಘನ್ನ ಶ್ರೀ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಕಾಯಬೇಕೆಲೋ ರಂಗಾ ಎನ್ನಾ | ನೀ ಕಾಯಬೇಕೆಲೋ ರಂಗಾ | ತೋಯಜಾಕ್ಷ ದಯಾನಿಧಿ ತರಣೋ | ಪಾಯದೋರೋ ಶುಭಾಂಗಾ ಪ ದುರಿತ ಸಮೂಹವ ಬಂದು | ಶಣಸುತ | ಹರಿದಂಜಿಸುತಿವೆಯಿಂದು | ನರಹರಿ ನಿನ್ನ ನಾಮದ ಘನಗರ್ಜನೆಯ |ಕೊಡು | ಮರಳು ಮಾನವನಿವನೆಂದು 1 ಕುಂದನಾರಿಸಿಯೆಲ್ಲಾ ನೋಡಲು | ಒಂದೆರಡೆನಲಿಕ್ಕಿಲ್ಲಾ | ಮಂದಮತಿ ಅವಗುಣ ರಾಶಿ ಪತಿತರ | ವೃಂದದೊಳೆನ್ನಧಿಕಲಾ2 ಕೊಂಬು ನೀಚನವಾದರೆ ಬಿರದಾ | ಡಂಬರ ನೀಚನಲ್ಲಾ | ಇಂಬುದೋರೆಲೆ ನಿನ್ನ ದಾಸರ ದಾಸ | ಎಂಬದೆನ್ನಧಿಕಾರವಿಲ್ಲಾ 3 ಬಿನ್ನಹವೆನ್ನ ಮುರಾರಿ | ಪಾಲಿಸಿ | ನಿನ್ನ ಚರಣವ ದೋರಿ | ಧನ್ಯಗೈಸೆಲೋ ಗುರುವರ ಮಹಿಪತಿ ಚಿನ್ನನೊಡಿಯ ಸಹಕಾರಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು