ಒಟ್ಟು 1110 ಕಡೆಗಳಲ್ಲಿ , 91 ದಾಸರು , 913 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಮಾರ್ಗ ಧನ್ಯಧನ್ಯವೆನ್ನಿ ಕರುಮುಗಿದು ಅನ್ನಿ ಧ್ರುವ ಮರೆವ ಗರ್ವವ ಮುರಿವ ಹರಿವ ಮೂರೆರಡಂಕುರವ ತೋರುವ ದೋರುವ ಯರ್ಹ ಪಜರುವ ಹೊಡೆವ ಮರುವ್ಹ ಅರುವ ಗುರುವಿನ ಕರುವ್ಹ ಬೆರುವ ಪರಾತ್ಪರವ ಇರುವ ಹರುಷದಿ ಸ್ಥಿರುವ ಕರೆವ ಸಾರಾಯ ಸುರೆವ 1 ಕಾಯ ಕಳವಳವ ಅಳೆವ ಚಿತ್ತ ಚಂಚಲವ ಗಳುವ ಭಾವದುಶ್ಚಲವ ಉಳುವ ಉಪಾಯಲಳಿವ ನಲುವ ನೋಡಿ ನಿಶ್ಚಲವ ಬಲಿವ ಭಕ್ತಿ ಅಚಲವ ತಿಳುವ ಸದ್ವಸ್ತುದ ಹೊಳೆವ 2 ಕೆಡುವ ಬುದ್ದಿಯ ಬಿಡುವ ಕಡೆವ ಸಂದೇಹ ದೃಢವ ನುಡಿವ ಶ್ರುತಿಯಂತೆ ನಡುವ ಜಡೆವ ಸದ್ಬಕ್ತಿವಿಡುವ ತುಡುವ ವೈರಾಗ್ಯನೆ ಮುಡುವ ಸದ್ಗತಿ ಸದ್ಗುರುಗತಿಪಡೆವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುರಾಘವೇಂದ್ರ ಶರಣರ ಸುರ ತರುವೆ ಕರುಣಸಾಂದ್ರ ಪ ಧರೆಯೊಳು ನಿನ್ನ ಶ್ರೀ ಚರಣಕಮಲ ಪ್ರಭೆ ಪರಿ ಉದ್ಧರಿಸು ಈ ಶರಣನ್ನ ಅ.ಪ. ಸುಕೃತ ಸ್ವರೂಪ ದರುಶನ ಮಾತ್ರದಿ ಭವ ಶ್ರಮ ಹರಿಸುವ ಪ್ರತಾಪ ರಮೆ ಅರಸನ ಗುಣ ಸಮುದಾಯದೊಳು ಮಗ್ನ ಭ್ರಮೆರಹಿತ ಸ್ಥಿರಚಿತ್ತ ನಮೋ ನಮೋ ನಿನಗೆ ಅಮಿತ ಮತಿಯ ಕರುಣ ಕವಚವ ಅಮಿತಕಾಲದಿ ಕೊಟ್ಟು ಮೆರೆಯುವ ಅಮಿತ ಮಂಗಳದಾಯಿ ತತ್ವದ ಕಮಲ ವೈಭವ ಸಲಹಲೆನ್ನನು 1 ಪಾವನ ಸುಯತಿ ರನ್ನ ಲಾಲಿಸು ವಾಕು ಸಾವಧಾನದಿ ಘನ್ನ ಭವ ಭವಣೆ ದಾವಾಗ್ನಿಯೊಳು ನೊಂದೆ ಶ್ರೀ ವರನ ದಾಸ ಕಾವ ದೃಷ್ಟಿಯಲಿ ನೋಡೊ ನಿತ್ಯ ಮಂಗಳ ಭಾವರೂಪ ಗುಣತ್ರಯಗಳ ಆವ ಕಾಲಕು ಬಿಡದೆ ನೋಡುವ ಭೂವಿ ಬುಧಮಣಿ ಪಾಲಿಸೆನ್ನನು 2 ತುಂಗಾತೀರ ನಿವಾಸ ರಾಘವೇಂದ್ರ ಗುರು ತುಂಗ ಮಹಿಮ ನಿರ್ದೋಷ ಮಂಗಳಾಸಮಹರಿ ಗಂಗಾಪಿತನ ಕೂಡಿ ತುಂಗಪೂಜೆಯ ಕೊಂಡ್ವರಂಗಳ ಬೀರುವ ಪಾದ ತೀರ್ಥದಿ ಭವ ಭಂಗ ಬಗೆಯನು ಬಲ್ಲ ಮಹಾತ್ಮ ರಂಗ ಜಯೇಶವಿಠಲ ದೇವನ ಸಂಗ ನೀಡುವ ಕೃಪೆಯ ಮಾಳ್ಪ 3
--------------
ಜಯೇಶವಿಠಲ
ಗುರುರಾಜ | ನಮಿಪರ ಸುರಭೋಜ ಗುರುರಾಜ ಪ. ವರತಂದೆ ಮುದ್ದುಮೋಹನರೆಂದೆನಿಸುತ ಮೆರೆಯುತ ಜಗದೊಳು ಪೊರೆಯುವ ಕರುಣಿ 1 ಅಜ್ಞತೆ ತೊಲಗಿಸಿ ಸುಜ್ಞತೆ ಕೊಡುತಲಿ ವಿಘ್ನವ ತರಿಯುವ ಪ್ರಾಜ್ಞ ಮೂರುತಿಯೆ 2 ಸರಸಿಜಾಕ್ಷನ ಪದ ಹರುಷದಿ ಭಜಿಸುವ ಪರಮಪ್ರಿಯರು ಎಂದು ಬಿರುದು ಪೊತ್ತಿಹರೆ 3 ನಾಗಶಯನನಿಗೆ ಭೋಗವಪಡಿಸುವ ಆಗಮಜ್ಞರೆ ನಿಮಗೆ ಬಾಗುವೆ ಸತತ 4 ಸಾಸಿರ ಫಣೆಯಿಂದ ಸೂಸುವ ಕಾಂತಿಯೊಳ್ ವಾಸವ ವಿನುತ 5 ದೇವತಾಂಶದ ಗುರು ಪವಮಾನಿಗೆ ಪ್ರಿಯ ಭಾವಿಸಿ ಭಜಿಪರ ಕಾವ ಕರುಣಾಳು 6 ಶಾಂತಚಿತ್ತದಿ ಬಹು ಸಂತೋಷಪಡುತಲಿ ಅಂತರಂಗದಿ ಹರಿಯ ಚಿಂತಿಸುತಿರುವ 7 ಉದ್ಭವಿಸಿ ಜಗದಿ ಅಧ್ಭುತ ಮಹಿಮೆಯ ಒಬ್ಬೊಬ್ಬರಿಗೆ ತೋರಿ ಹಬ್ಬಿಪೆ ಹರುಷ 8 ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನನು ದೃಷ್ಟಿಗೆ ತೋರಿಸಿ ಕಷ್ಟ ಬಿಡಿಸಿರಿ 9
--------------
ಅಂಬಾಬಾಯಿ
ಗುರುರಾಯ ಕಾಯೋ ಪ್ರೇಮಾಂಗ ಶುಭಾಂಗ ಪ ಪಾದ ನಂಬಿದೆ ದೀನಪಾಲಾ ಕರುಣಿಸಿ 1 ಹರಿಪಾದÀ ಕಮಲವಾ ತೋರೋ ಚಿತ್ತದಿ ಧೀರ ಅಪಾರ ಮಹಿಮನೆ 2 ಸಿರಿಮನೋರಮಣ ಶಾಮಸುಂದರ ವಾರಿಜಾಂಷ್ರಿ ಸುಮಧುಪ 3
--------------
ಶಾಮಸುಂದರ ವಿಠಲ
ಗುರುಸೇವೆ ನಿರತರಿಗೆ ನಮೋ ನಮೋ ಪ ಅರಿವು ನಿಲ್ಲಿಸಿ ಪರಸಾಧನದಿರುತಿಹ್ಯ ಪರಮಪಾವನರಿಗೆ ನಮೋ ನಮೋ ಅ.ಪ ತಾಪಸಾರ್ಯರಿಗೆ ನಮೋ ನಮೋ ಮಹ ಪಾಪ ದೂರರಿಗೆ ನಮೋ ನಮೋ ಕೋಪಲೋಪರಿಗೆ ನಮೋ ನಮೋ ಇಹ ವ್ಯಾಪಾರರಿತವರಿಗೆ ನಮೋ ನಮೋ ತಾಪತ್ರಯವ ನೀಗಿ ಶ್ರೀಪತಿ ಚರಣವ ಗೌಪ್ಯದಿ ನೆನೆವರ್ಗೆ ನಮೋ ನಮೋ 1 ವೇದ ಸಂಪನ್ನರಿಗೆ ನಮೋ ನಮೋ ಭವ ಬಾಧೆ ಗೆಲಿದವರಿಗೆ ನಮೋ ನಮೋ ಸಾಧನ ಚತುಷ್ಟರಿಗೆ ನಮೋ ನಮೋ ಮಹ ಸಾಧುಸಂತರಿಗೆ ನಮೋ ನಮೋ ವಾದಿ ಮೂರ್ಖರೊಳು ವಾದಿಸದಂಥ ಸು ಬೋಧ ಗುರುವರಗೆ ನಮೋ ನಮೋ 2 ಭಾಗವತರಿಗೆ ನಮೋ ನಮೋ ಇಹ ಭೋಗನಿರಾಸ್ಯರಿಗೆ ನಮೋ ನಮೋ ಯೋಗಸಾಧಕರಿಗೆ ನಮೋ ನಮೋ ಮಹ ಯೋಗಿ ಮಹಾತ್ಮರಿಗೆ ನಮೋ ನಮೋ ಆಗಯೀಗೆನ್ನದೆ ಸಾಗರನಿಲಯನನ್ನ ಬಾಗಿಭಜಿಪರಿಗೆ ನಮೋ ನಮೋ 3 ಭಕ್ತಜನರಿಗೆ ನಮೋ ನಮೋ ವಿ ರಕ್ತ ಪುರುಷರಿಗೆ ನಮೋ ನಮೋ ಸತ್ಯಶೀಲರಿಗೆ ನಮೋ ನಮೋ ತಮ್ಮ ಗುರ್ತು ಅರ್ತವರಿಗೆ ನಮೋ ನಮೋ ಭಕ್ತಿಯುಕ್ತಿ ವಹಿಸೆತ್ತಗಲದಂಥ ಚಿತ್ತಶುದ್ಧರಿಗೆ ನಮೋ ನಮೋ 4 ನಿತ್ಯ ನಿರ್ಮಲರಿಗೆ ನಮೋ ನಮೋ ಭವ ಮರ್ತ ನಿರ್ತರಿಗೆ ನಮೋ ನಮೋ ತ ತ್ವರ್ಥಿಕರಿಗೆ ನಮೋ ನಮೋ ಮಹ ಮುಕ್ತಿ ಸಾಧ್ಯರಿಗೆ ನಮೋ ನಮೋ ಮೃತ್ಯುವ ಗೆಲಿದು ಕರ್ತ ಶ್ರೀರಾಮನ ಅರ್ತವರಿಗೆ ಬಹು ನಮೋ ನಮೋ 5
--------------
ರಾಮದಾಸರು
ಗೋಕುಲದ ಸತಿಯರೆಲ್ಲ ಶ್ರೀಕೃಷ್ಣನಾಟಗಳದೂರುತಲೆ ಪಾಡುವರು ಪ. ಕಪಟ ಸರ್ವಾಂಗದೊಳಗಿದಕೊಮಣ್ಣ ಮೆಲುವನು ತನ್ನ ತೆರೆಬಾಯಿ ತೆರೆವನಿವಚಿಣ್ಣತನದಾ ತನುವ ತೋರುತಲೆ ವನದೊಳಗೆಪಣ್ಣು ಫಲಗಳ ಸವಿವುತಅಣ್ಣನೊಡನೆ ಕೊಳಲನೂದುತಲಿ ಗೋಕುಲದಹೆಣ್ಣುಗಳ ಮರುಳು ಮಾಡುವ ಗಂಡುಗಲಿಯಿವನಿನ್ನ ಮಗ ಅಮ್ಮಮ್ಮ ಶುಕನ ನುಡಿಗಳ ಗೆಲುವಬಣ್ಣಿಸುವ ಕವಿಯದಾವ1 ಸುರರು ಸೋಲುತಿರೆಆರ್ತಿಯ ಕಳೆವರೆ ಭವರೋಗಕಿವನೆ ಮದ್ದುಇತ್ತಲೀತನ ಚೆಲುವ ಕಾಣುತಲಿ ಕಂದರ್ಪಪೃಥ್ವಿಯಲಿ ಬಿಲ್ಲ ಬಿಸುಟ 2 ಮೂರ್ತಿ ಕೀರ್ತಿಯ ಸೊಬಗುಚಿತ್ರ ಚರಿತ್ರಗಳ ಕಂಡಿರೆ ನಿಮ್ಮ ಕುಮಾರನಾದ ಹತ್ತುಸಾವಿರ ಪೆಸರು ಸಲ್ಲುವುದಮ್ಮ ಸ-ರ್ವತ್ರ ನೋಡುವ ಸುಜನರುಚಿತ್ತದೊಳಗೆಲ್ಲ ಪುರವಿಟ್ಟವರು ಅರಸುತಿರೆವ್ಯಾಪ್ತನೆಂಬುದಕೆ ತಮ್ಮ ತಮ್ಮ ಮನವೇ ಸಾಕ್ಷಿಮುಕ್ತಿ ನಮಗೇಕೆ ಹಯವದನನಂಘ್ರಿü್ರಗಳಾಣೆನಿತ್ಯದಲಿ ಇವನ ನೋಡುತಲಿಹುದು ಸಾಕೆಲೆ ಗೋಪಿ3
--------------
ವಾದಿರಾಜ
ಗೋಪಾಲ ದಾಸರಾಯ ನಿನ್ನಯ ಪಾದ ನಾ ಪೊಂದಿದೆನೊ ನಿಶ್ಚಯ ಪ ಈ ಪೀಡಿಸುವ ತ್ರಯತಾಪಗಳೋಡಿಸಿ ಕೈ ಪಿಡಿದೆÀನ್ನ ಕಾಪಾಡಿದ ಗುರುರಾಯ ಅ.ಪ. ಘೋರ ವ್ಯಾಧಿಯನೆ ನೋಡಿ | ವಿಜಯರಾಯ ಭೂರಿ ಕರುಣವ ಮಾಡಿ ತೋರಿದರಿವರೆ ಉದ್ಧಾರಕರೆಂದಂದಿ ಪಾದ ಸಾರಿದೆ ಸಲಹೆಂದು || ಸೂರಿಜನ ಸಂಪ್ರೀಯ ಸುಗುಣೋದಾರ ದುರುಳನ ದೋಷ ನಿಚಯವ ದೂರಗೈಸಿ ದಯಾಂಬುನಿಧೆ ನಿ ವಾರಿಸದೆ ಕರಪಿಡಿದು ಕರುಣದಿ ಅಪ ಮೃತ್ಯುಯವನು ತಂದೆ ಎನ್ನೊಳಗಿದ್ದ 1 ಅಪರಾಧಗಳ ಮರೆದೆ ಚಪಲ ಚಿತ್ತನಿಗೊಲಿದು ವಿಪುಲ ಮತಿಯನಿತ್ತು ನಿಪುಣನೆಂದೆನಿಸಿದೆ ತಪಸಿಗಳಿಂದಲಿ ಕೃಪಣ ವತ್ಸಲ ನಿನ್ನ ಕರುಣೆಗೆ ಉಪಮೆಗಾಣೆನೊ ಸಂತತವು ಕಾ ಶ್ಯಪಿಯೊಳಗೆ ಬುಧರಿಂದ ಜಗದಾ ಧಿಪನ ಕಿಂಕರನೆನಿಸಿ ಮೆರೆಯುವ 2 ಎನ್ನ ಪಾಲಿಸಿದಂದದಿ ಸಕಲ ಪ್ರ ಪನ್ನರ ಸಲಹೊ ಮೋದಿ ಅನ್ಯರಿಗೀಪರಿ ಬಿನ್ನಪ ಗೈಯೆ ಜ ಗನ್ನಾಥ ವಿಠಲನ ಸನ್ನುತಿಸುವ ಧೀರ || ನಿನ್ನ ನಂಬಿದ ಜನರಿಗೆಲ್ಲಿಯ ಬನ್ನವೋ ಭಕ್ತಾನು ಕಂಪಿಶ ರಣ್ಯ ಬಂದೆನೊ ಈ ಸಮಯದಿಅ ಹರ್ನಿಶಿ ಧ್ಯಾನಿಸುವೆ ನಿನ್ನನು 3
--------------
ಜಗನ್ನಾಥದಾಸರು
ಗೋಪಿ : ವೇಣುಗೋಪಾಲ ನಿನ್ನ ಜಾಣತನವ ಬಿಡು ಬಿಡು ಮಾಡುವೇಜಾಣ ಪ ಕೃಷ್ಣ : ನೀರೆ ಗೋಪಿಯೆ ನಿನ್ನ ದ್ವಾರದೊಳಿರುವೆ ತೋರದೆನ್ನನು ನೀನು ಭಾರಿ ಬಳಲಿರುವೆ ನೀರೆ 1 ಗೋಪಿ : ಹತ್ತಿರದಲ್ಲಿದ್ದು ನೀನು ಇತ್ತೆನಗೆ ತೋರದಂತೆ ನಿನ್ನನು ``ವೇಣು 2 ಕೃಷ್ಣ : ಅಕ್ಷಿಯೊಳಗೆ ನಿನ್ನ ಸಾಕ್ಷಿಯಾಗಿರುವೆ ಕುಕ್ಷಿ ತುಂಬಿರುನೆ | ನೀರೆ 3 ಗೋಪಿ : ಆರು ಬಾಗಿಲು ನೀಗಿ ಜೋರಗಂಡಿಯೊಳ್ ಪೋಗಿ ಮಾಡುವೆ ||ವೇಣು|| 4 ಕೃಷ್ಣ : ಮನುಮುನಿ ಜನರೆಲ್ಲಾ ವಿನಯದಿಂ ಪಿಡಿದು ಘನಸುಖ ಪಡುವರು ಮನದೊಳಗರಿದು ||ನೀರೆ|| 5 ಗೋಪಿ : ಆಗಮ ಸಂಚಿತ್ತ ಭೋಗ ಸಂಸಾರವನ್ನೆಲ್ಲಾ ಜರೆನಿಸಿದೆಲ್ಲಾ ||ವೇಣು || 6 ಕೃಷ್ಣ : ನಿಮಿಷ ಮಾತ್ರದಿ ಸುಖವ ಮನದೇಸ್ಮರಿಸಿ ಅಮಮ ಘನಾನಂದ ರಮಿಸು ಸ್ವಸುಖವಿ ||ನೀರೆ|| 7 ಗೋಪಿ : ಕಣ್ಣ ಸನ್ನೆಯ ಮಾಡಿ ಅನ್ಯರ್ಮನ್ಮನೆಗಳಲ್ಯೋಡಿ ಮಾತುಗಳಾಡುವೆ ||ವೇಣು || 8 ಕೃಷ್ಣ : ಧೊರೆಯಾಗಿರುವೆ ನಾನು ತಿರಿದುಣ್ಣಲರಿಯೆ ಅರಿವಿನಿಂದರಿಯೆ || ನೀರೆ|| 9 ಕಂತು ಪಿತನೆ ನಿನ್ನ ಭ್ರಾಂತಿ ಹತ್ತಿತು ಎನಗೆ ಗುರುವರ ||ವೇಣು || 10
--------------
ಶಾಂತಿಬಾಯಿ
ಗೋವಿಂದ ಈ ವಿಧ ಸಂಭ್ರಮ ನೋಡುವುದಾನಂದ ಪ ನೋಡಿ ಈ ವಿಧ ಚಂದ ನೋಡಬಾರದೊ ಬೇರೊಂದ ಅ.ಪ ಉತ್ತಮ ಕಲ್ಪದ ಮುತ್ತುರತ್ನಗಳು ಹತ್ತಾರೆಡೆಗಳಲಿ ಉತ್ತಮ ತೀರ್ಥರ ಚಿತ್ತದ ಮೂರುತಿ ಪುತ್ಥಲಿ ರೂಪದಿ ಮತ್ತೆಲ್ಲಿರುವುದೊ 1 ಕಾಲ ನಿಯಾಮಕ ಕಾಲದ ಗತಿಯನು ಪಾಲಿಸುವುದೇ ತರವು ಮೂಲೆ ಮೂಲೆ ಕ್ಷೇತ್ರಗಳನೆ ಬಿಟ್ಟು ಈ ಮೂಲ ಮಂದಿರಕೆ ಬಂದಿರುವಂತಿದೆ 2 ಚಂದ್ರನ ಕುಲದಲಿ ಜನಿಸಿದ ದೇವಗೆ ಚಂದ್ರಿಕೆಯಲ್ಲವೆ ಪ್ರಿಯತಮವು ಚಂದ್ರಿಕಾ ಸೊಬಗಿಲಿ ಮೆರೆದು ನಲಿದ ಶ್ರೀ ಚಂದ್ರಿಕಾಚಾರ್ಯ ಪ್ರಸನ್ನನ ವೈಭವ 3
--------------
ವಿದ್ಯಾಪ್ರಸನ್ನತೀರ್ಥರು
ಗೋವಿಂದ ವಿಠಲ ನಿನ್ನ ವಂದಿಸುವೆ ಸ್ವಾಮಿನೀ ಒಲಿದು ರಕ್ಷಿಸುವುದು ಜೀವಿ ಇವ ಬಹುಕಾಲಸಾವ ಸಾವ ನಿನ್ನ ಸೇವೆಯೊಳಗೆ ಇಟ್ಟು ಕಾವುದು ನಿರುತ ಪ. ಆವ ಈ ಯುಗದಲ್ಲಿ ನಿನ್ನ ವಿಷಯರಾಗಿಈವ ಸುಜನರು ಸ್ವಲ್ಪರು ತಾ ವ್ಯಾಪಿಸಿ ಇಹರುಅಸುರರೆ ಬಹುಳಾಗಿ ಆವದವಸ್ಥೆಗಳಲಿನೀ ವರವನು ಕಲಿಗೆ ಇತ್ತ ಕಾರಣ ಉಪಜೀವರ ವ್ಯಾಪಾರಈ ವಿಧದಲಿ ತಳೆದು ನಿನ್ನ ಹುಡುಕುತಲಿನ್ನುಜೀವಿ ಸಾತ್ವಿಕನು ಮೊರೆಯಿಡಲು ಬಿನ್ನಯಿಸಿದೆನೊ 1 ಏನು ಸಾಧನವನು ಖೂಳವನು ಕಂಡಿನ್ನುನೀನು ವಂದಿಸಿವೆಂದರೆ ಜ್ಞಾನಭಕುತಿ ಉಳ್ಳಜ್ಞಾನಿಗಳಲಿವಗೆ ನಾನು ಕಂಡೆನು ಭಕುತಿಯಕ್ಷೋಣಿಯಲಿ ಭಕುತಿ ನಿನ್ನಲಿ ಪುಟ್ಟಲಿಬಹುದುಜ್ಞಾನಿಗಳ ದುರ್ಲಭ ನೀನು ಒಲಿವುವ ಅವಗೆನಾನವರಲಿ ಭಕುತೀವೆ ನಾನಾಸಾಧನ ಫಲವಿದೆ ನೋಡಾ 2 ಪ್ರಾರ್ಥಿಸುವೆ ನಾ ನಿನ್ನ ಪ್ರೇರಣೆಯ ಅನುಸಾರಕೀರ್ತಿ ನಿನ್ನದು ಜಗದೊಳು ಪಾತ್ರ ಇವನೆಂದುನಿನ್ನ ಚಿತ್ತದಲಿ ಇತ್ತೆ ಸಾರ್ಥಕನ ಮಾಡು ಚೆಂ ಸ್ವಾ ?ಕೀರ್ತನೆಯ ಮಾಡಿಸು ನಿನ್ನ ಪರವಾಗಿ ನಿಜಸ್ಫೂರ್ತಿಸಖರಂಗ ಗೋಪಾಲವಿಠಲ ಶ್ರುತಿಶಾಸ್ತ್ರಾರ್ಥವನುಸಾರ ಪ್ರಾಪ್ತಿ ನೀನಾಗಿವಗೆ3
--------------
ಗೋಪಾಲದಾಸರು
ಚದುರಂಗನಾಡುವ ನೋಡಿರೇ | ಮದನಮೋಹನ ಕೃಷ್ಣ ನಿಜ ಶಕ್ತಿಯೊಡನೆ ಪ ಭೂಮಿಯ ಹಲಗಿಲಿ ಕಾಯದ ಮನೆಯೊಳು | ವ್ಯಾಮೊಹಿ ಜೀವನು ಅರಸನಿಲ್ಲಿ | ನೇಮದಿ ಪುಣ್ಯ ಪಾಪದ ಪಲಗಳಿಸುವ | ಈ ಮನೆವೆಂಬ ಪ್ರಧಾನಿಯನಿಟ್ಟು 1 ಪ್ರಾಣಪಾನವೆಂಬ ಎರಡಾನೆ ನಿಲ್ಲಿಸಿ | ನಾನು ನನ್ನದು ಎಂಬ ಒಂಟೆಗಳ | ಜಾಣತನದ ಬುದ್ದಿ ಚಿತ್ತದ ಕುದುರೆ | ನಿ ಧಾನ ದಶೇಂದ್ರಿಯ ಕಾಲಾಳಿನಿಂದ 2 ಕಾಲಸೂತ್ರದಿ ನಡಿಸ್ಯಾಡುತ ಕೃತಕರ್ಮ | ಮೂಲದಿ ಹಾನಿವೃದ್ದಿಗಳಿಹವೋ | ಮೇಲೆ ಯಶಾಪಯಶ ಪಾಲಿಗೆ ತರುವ | ನೃ ಪಾಲಕ ಮಹಿಪತಿನಂದನ ಜೀವನ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚಿಂತೆಯಾತಕೆ ಮನವೆ ಗುರುಗಳ ಪಾದ ಚಿಂತನೆಯನು ಮಾಡದೆಪ ಸಂತತ ಬಿಡದಲೆ ಚಿಂತನೆ ಮಾಳ್ಪರ ಅಂತರಂಗವ ತಿಳಿವರು ಗುರುವರರು ಅ.ಪ ಉದಯ ಕಾಲದಲಿವರ ಧ್ಯಾನವ ಮಾಡೆ ಮದಗರ್ವ ಪರಿಹರವು ಮುದದಿಂದ ಮೂರು ವೇಳೆಗಳಲ್ಲಿ ಸ್ಮರಿಸಲು ಹೃದಯ ತಾಪವ ಕಳೆವರು ಗುರುವರರು1 ದೇಶದೇಶವ ತಿರುಗಿ ತನುಮನಗಳ ಬೇಸರಗೊಳಿಸಲೇಕೆ ಪೋಷಿಪ ಗುರುಗಳಪಾದ ನಂಬಿದ ಮೇಲೆ ವಾಸುದೇವನೆ ನಲಿವ ಮುಂದೊಲಿವ 2 ವೇದವಾದಿಗಳೆಲ್ಲರೂ ವಾದವ ಮಾಡಿ ಮಾಧವನನು ಕಾಣಿರೊ ಮೋದತೀರ್ಥರ ಮತಬೋಧನೆ ಮಾಡುವ ಸಾಧು ಗುರುಗಳನೆ ಕೂಡು ಸಂಶಯಬಿಡು3 ಚಿತ್ತದಿ ಸ್ಮರಿಸುವರು ಹರಿ ಮಹಿಮೆಯ ಭಕ್ತಿಲಿ ನಲಿಯುವರು ಚಿತ್ರಗಾಯನ ನೃತ್ಯಗಾನಗಳಿಂ ಪುರು- ಷೋತ್ತಮನನೊಲಿಸುವರು ಹರುಷಿತರು4 ಕತ್ತಲೆ ಮನೆಗಳಲ್ಲಿ ಅಡಗಿಹ ವಸ್ತು ಲಕ್ಷಪರಿಮಿತಿ ಇದ್ದರು ಹಸ್ತದಿ ಜ್ಯೋತಿಯನೆತ್ತಿ ತೋರುವ ಪರಿ ಭಕ್ತರ ಸಲಹುವರು ಗುರುವರರು 5 ಸರಸೀಜಾಕ್ಷನ ನಾಮವು ಹಗಲಿರುಳು ಬಿಡದೆ ಧ್ಯಾನಿಸುತಿರ್ಪರು ಸಿರಿನಾರಾಯಣನನ್ನು ಸ್ಮರಿಸುತ್ತ ಮನದೊಳು ಪರಮಸಂಭ್ರಮ ಪಡುವರು ಗುರುವರರು 6 ಕರುಣದಿ ಸಲಹುವರು ಶಿಷ್ಯರ ಮನ ವರಿತು ವರಗಳನೀವರು ವರ ಕಮಲನಾಭವಿಠ್ಠಲನ ಧ್ಯಾನಿಪಉರಗಾದ್ರಿವಾಸ ವಿಠ್ಠಲದಾಸರನೆ ನಂಬು7
--------------
ನಿಡಗುರುಕಿ ಜೀವೂಬಾಯಿ
ಚಿಂತೆಯಾತಕೆ ಮನವೆ ನಿನಗಿದು ಸತತ ಸಲ್ಲದು ಕಾಣೊ ಪುರಂದರ ದಾಸರನುದಿನ ಇಂತು ಬಗೆಯಲಿ ಪಾಲಿಸೊ ಪ ಅಗ್ರ ಬುದ್ಧಿಯ ತಾಳು ನಿನಗೆ ಸಾ ಮಗ್ರಿ ಆಲೋಚನಿ ಯಾತಕೆ ಸ ಮಗ್ರ ಸೋಪಸ್ಕರವನು ಅನುಗ್ರಹವನು ಮಾಡುತಾ ಉಗ್ರ ಮನುಜರ ಕೂಡಿಸದೆ ಪಾ ಅಂದು ಪೊಗಳಲು ಶೀಘ್ರದಲಿ ನಿಂದಿಹರೊ 1 ಹರಿಗುರುಗಳ ಸಂಕಲ್ಪ ತಪ್ಪದು ಗಿರಿಗಹ್ವರದೊಳಗಿದ್ದರು ಅದು ಬರಿದೆಯಾಗದು ಕೇಳು ಸ್ಮರಿಸಿ ಬಳಲಿ ನಲಿದಾಡಿ ಪರಿದ ಕಾಲಕೆ ಬಿಡದೆ ಅಹಿಕದ ಚರಿತೆ ಅವರಿಗೆ ಗಣಣೇನೊ2 ತೆತ್ತಗಿನ ಸ್ವಭಾವ ಆವದೊ ಎತ್ತಲಟ್ಟಿದರತ್ತ ತೊಲಗದೆ ಹೊತ್ತುಹೊತ್ತಿಗೆ ಪೋಗಿ ಬಾಗಿ ತೊತ್ತಿನಂದದಿ ಪ್ರಯೋಜನ ಹೊತ್ತು ಮೀರದೆ ಮಾಳ್ಪುದು ಧರ್ಮ ಮೊತ್ತವಲ್ಲದೆ ಇನ್ನೊಂದಿಲ್ಲವೊ ಇತ್ತ ಭಾಗ್ಯವಿತ್ತ ನಿರ್ಮಳ ಚಿತ್ತದಲಿ ಅರ್ಪಿಸುತಿರು3 ನೀನು ಮಾಡಿದ ಪುಣ್ಯಗಳಿಗೆ ತಾ ನಡದು ಬರುವುದೇ ಮರುಳೆ ನಾನಾ ಪರಿಯಲಿ ತಿಳಿದು ನೋಡು ಧ್ಯಾನದಿಂದಲಿ ದಿನಪ್ರತಿ ಜ್ಞಾನನಿಧಿ ನಿಜಗುರು ಶಿರೋಮಣಿ ಅನಂತಾನಂತ ಜನುಮದಲೀಗ ಗಾನಮಾಡಿದ ನಿಷ್ಟ ಪುಣ್ಯವು ತಾನೊಲಿದು ಫಲವಿತ್ತದೋ4 ಕಲ್ಲು ಕರಗಿಸಿ ಬೆಣ್ಣಿ ತೆಗುವಂಥ ಬಲ್ಲಿದರು ನಿನ ಗೊಲಿದಿರಲು ಎಲ ಎಲ್ಲಿ ಇಲ್ಲವೆಂಬೊ ಸೊಲ್ಲುಗಳಲ್ಲದೆ ಇದು ಸಲ್ಲದೊ ಸಕಲ ಮನೋಭೀಷ್ಟಾ ತುಲ್ಯ ವಲ್ಲಭ ಮಲ್ಲದಲ್ಲಣ ನಿಲ್ಲದಲೆ ವೊಲಿದಿಹನೊ 5 ನೂನ್ಯಪೂರ್ಣವು ಅವರನ ಕೂಡಿ ತನ್ನ್ಯೋಪಾಯವು ಯಾಕೆ ನಿನಗೆ ಕಣ್ಣೆವೆ ಇಡುವನಿತರೊಳು ಕಾರುಣ್ಯವರುಷಗರೆದು ಬಿಡುವ ದೈನ್ಯವೃತ್ತಿಯ ಬಿಡಿಸಿ ನಿಷ್ಕಾಮ ಪುಣ್ಯವನಧಿಯೊಳಿಡುವರೊ 6 ಊರ್ವಿಗೀರ್ವಾಣರಿಗೆ ಉಣಿಪುದು ಗರ್ವವನು ತಾಳದಲೆ ಚೆನ್ನಾಗಿ ಸರ್ವಬಗೆಯಲಿ ನಾನು ಎಂಬೊ ದುರ್ವಚನಗಳ ನುಡಿಯದೆ ಪೂರ್ವತನೆ ಬಯಸುತಾರಾಧಿಸು ಶರ್ವಸನ್ನುತ ವಿಜಯವಿಠ್ಠಲ ಪೂರ್ವನೆಂತ ಪ್ರಬಲನೆ7
--------------
ವಿಜಯದಾಸ
ಚಿತ್ತ ಸಖಿ ಬಾಗ | ಗುರುವಿಗೇ ಬಾಗ | ಉತ್ತಮ ಪರುಷ ನಾರಿಯಲಿಕ್ಕೆ ವಿಷಯದಿಂ ಬಾಗ 1 ಸಧ್ಯರೂಪ ಯೌವ್ವನದ ಕುಲಮದಕ ಬಾಗ 2 ನಿಗಟದಿಂದ ಭಜಿಸಲಿಕ್ಕೆ ವಲುವದನು ಜಾರಿ3 ಪಡೆದು ಗುರು ಜ್ಞಾನದಿಂದ ನೋಡೇ ಮುಕ್ತಿ ಕಳಸಾ4 ಧನ್ಯಳಾಗ ತಂದೆ ಮಹಿಪತಿ ಪ್ರಭು ಸ್ಮರಿಸೀ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚಿತ್ತಗೊಟ್ಟು ಸಿರಿಕೃಷ್ಣ ಕಾಯಿ ಕಂಡ್ಯ ಪ ಮತ್ತೊಬ್ಬ ನಾನಲ್ಲ ನಿನ್ನ ಭೃತ್ಯರ ಭೃತ್ಯಅ.ಪ ಕಾಲನವರ ಮುನ್ನ ಮುಂಚೂಣಿ ದಾಳಿಗೆಕೀಳು ಮನಮಂತ್ರಿ ಮೂಲೆಯ ಪೊಗಲುಮೂಲ ಬಲದಾಳಿಗೆ ಮುರಿದು ನಾನೋಡಲುಕಾಲಗೆಟ್ಟು ನಾನಿಹ ಕಾಲದಲ್ಲಿ 1 ಪಿತ್ತವೆಂಬ ಕಿಚ್ಚು ವಾತಕೂಡ್ಹೆಚ್ಚಿತುಹತ್ತಿಕೊಂಡು ದೇಹಪುರ ಸುಡುವಾಗಮತ್ತೆ ಶ್ಲೇಷ್ಮವು ಕೂಡಿ ಸುತ್ತು ಮುತ್ತೆಳೆವಾಗಎತ್ತ ಹೋಗಲೆಂಬ ಸಂಕಟದೊಳಗೆ 2 ತಿಂದೋಡಿ ಬಂಧುಗಳೆಲ್ಲ ಕೈಬಿಟ್ಟರುಮುಂದೆಮದೂತರು ಬಂದು ನಿಂದಾಗಎಂದಿಗಾದರು ಒಮ್ಮೆ ನೆನೆದುದ ಕೈಗೊಂಡುಹಿಂದಿಟ್ಟುಕೊಂಡೆನ್ನ ಕಾಯಿ ಕಂಡ್ಯ ಕೃಷ್ಣ3
--------------
ವ್ಯಾಸರಾಯರು