ಒಟ್ಟು 6252 ಕಡೆಗಳಲ್ಲಿ , 125 ದಾಸರು , 4339 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿದ್ದೆ ನಿಮ್ಮಯ ಪಾದದಲ್ಲಿ ನಾ ಪ ಮಧ್ವರಾಯರ ಮನದಲ್ಲಿ ಇದ್ದು ವಲಿವ ವೇದವ್ಯಾಸ ಅ.ಪ. ವೇದ ಓದದ ಶುದ್ಧ ಕಳ್ಳನಾ ಮೆದ್ದು ಮೆಲ್ಲುತ ವೃದ್ಧನಾದೆ ಭಲ್ ಗದ್ದ ದಾಸಗೆ ಕರುಣದಿ ತೋರಿ ಉದ್ಧರಿಸುವ ಬಗೆ ಬಲ್ಲೀ 1 ಅನ್ಯದೇವರ ನಾ ನೊಲ್ಲೆ ನಿನ್ನ ಪಾದವ ಬಿಡಲೊಲ್ಲೆ ಘನ್ನಕರುಣಿ ನೀನು ಬಲ್ಲೆ ನಿನ್ನ ಬಿಡಲು ಜಗಕಲ್ಲೇ 2 ಉತ್ತಮೋತ್ತಮ ದೇವ ಸತ್ಯ ಭೃತ್ಯಜೀವನು ಎಂಬೆನಿತ್ಯ ಭಕ್ತ ಪ್ರಥಮ ಪ್ರಾಣನೀನೇ ಮುಕ್ತಿನಿನ್ನಾಧೀನವೇನೇ 3 ವಿಧಿ ಪರಿವಾರ ಎಂದೆಂದಿಗೂ ಭಿನ್ನರೇನೇ ಎಂದೆಂದು ಅಧೀನರೇನೇ 4 ಶ್ರೀಕೃಷ್ಣವಿಠಲ ಏಕ ಸಕಲ ದೋಷ ವಿದೂರ ಪೊರೆಯೋ ಎಂದು ಕೂಗಿ 5
--------------
ಕೃಷ್ಣವಿಠಲದಾಸರು
ಬಿನ್ನಹ ಮಾಡುವೆನು ಅತ್ತಿಗೆಯರ ಚನ್ನಾಗಿ ಗೆಲಿಸೆಂದುಚದುರ ಮುದ್ಗಲವಾಸನೆದುರಿಗೆಮಧುರ ವಾಕ್ಯಗಳ ನುಡಿಸೆಂದು ಪ. ಗೋಕರ್ಣ ಹಿಮವಂತ ಕೇದಾರಿ ದೇಶಗೋಕುಲ ವೃಂದಾವನ ಮಥುರೆಯಗೋಕುಲ ವೃಂದಾವನ ಮಥುರೆಯ ಒಡೆಯನಸಾಕಲ್ಯದಿಂದ ಬಲಗೊಂಬೆ 1 ಕರವೀರ ಪುರವಾಸ ದೊರೆಯುಪಂಢರಿನಾಥವರವಡ್ಡಿಒಡೆಯ ಬದರಿಯವರವಡ್ಡಿಒಡೆಯ ಬದರಿ ನಾರಾಯಣಗೆಕರವ ಜೋಡಿಸುವೆ ಕರುಣಿಸು2 ಅಯೋಧ್ಯ ಪುರವಾಸ ಗಯಾ ಗದಾಧರಕೈವಲ್ಯ ನೀವ ಜಗದೊಡೆಯಕೈವಲ್ಯ ನೀವ ಜಗದೊಡೆಯನ ಪಾದಕೈಮುಗಿದು ಮೊದಲೆ ಬಲಗೊಂಬೆ3 ದೇಶ ದೇಶದ ಜನಕೆ ಲೇಸಾಗಿ ಸಲಹುವೆಶ್ರೀ ಸತಿದೇವಿ ಅರಸನೆಶ್ರೀ ಸತಿದೇವಿ ಅರಸನೆ ಕಾಶಿವಿಶ್ವೇಶ್ವರನ ಮೊದಲೆ ಬಲಗೊಂಬೆ4 ಹರಿಹರವಾಸಗೆ ಕರಗಳ ಜೋಡಿಸಿಸರ್ವರಿಗೆ ವರವ ಸುಲಭದಿಸರ್ವರಿಗೆ ವರವ ಸುಲಭದಿ ಕೊಡುವಹರದೆಯರ ಪಂಥವ ಗೆಲಿಸೆಂದು5 ಲಕ್ಷ್ಮಿರಮಣನೆ ಪಕ್ಷಿವಾಹನ ಸ್ವಾಮಿಕುಕ್ಷಿಲೆ ಜಗವ ಸಲಹುವೆಕುಕ್ಷಿಲೆ ಜಗವ ಸಲಹುವೆ ಶೂರ್ಪಾಲಿವೃಕ್ಷರಾಜನ ಬಲಗೊಂಬೆ6 ಗಲಗಲಿ ನರಸಿಂಹ ಬಲು ದಯವಂತಸುಲಭದಿ ವರವ ಕೊಡುವವನುಸುಲಭದಿ ವರವ ಕೊಡುವ ರಾಮೇಶನ ಚಲ್ವ ಮೂರ್ತಿಯ ಬಲಗೊಂಬೆ 7
--------------
ಗಲಗಲಿಅವ್ವನವರು
ಬಿಸಜ ಕುಸುಮಾಸ್ತ್ರನÀ ಜನನಿ ಬೇಗ ನೀ ಪ ಎಸೆವ ಪೀಠಕೆ ನಸುನಗುತಲಿ ದಶರಥ ನೃಪನ ಸೊಸೆಯೆ ಕರುಣದಿ ಅ.ಪ ಕಮಲ ಪತಿ ಸಹಿತವಾಗಿ ಆನಳಿನಜಾದಿ ಪರಿವಾರದೊಡನೆ ಆನಂದಾಮೃತ ವೃಷ್ಟಿಯ ಕರೆಸುತೆ 1 ಕಾಲಲಂದಿಗೆ ಗೆಜ್ಜೆಗಳ್ ಮೆರೆಯೆ ಸುರರು ತಾ ಹೊಮಳೆಯ ಸುರಿಯೆ ಕಾಲ ಕಾಲದಿ ನಿನ್ನೋಲಗವಿತ್ತು ಪಾಲಿಸಲ್ಕೆ ಭಕ್ತ ಜನರನು 2 ಕೃತಿ ಶಾಂತಿ ರಮೆ ನಿರ | ಕಾಯುವಳು ನೀನೆಂದು ಶೃತಿ ನಿ | ಕಾಯ ಮುತ್ತೈದೆಯರ್ ಕರೆವರು 3 ತಟ್ಟೆಯೊಳಗರಿಸಿನ ಕುಂಕುಮಾಕ್ಷತೆಗ ಕೃಷ್ಣರಾಯನ ಪಟ್ಟದ ರಾಣಿಯೆ 4 ಹತ್ತುವಿಧದ ವಾದ್ಯಗಳು ಮೊರೆಯೆ ಚಿತ್ಪ್ರಕಾಶ ಜ್ಯೋತಿಗಳು ಹೊಳೆಯೆ ಚಿತ್ತೈಸಮ್ಮ ಚಿತ್ರಮಂಟಪದಲಿ 5
--------------
ಗುರುರಾಮವಿಠಲ
ಬುದ್ಧಿಮಾನಿಯೆ ಎನ್ನ ಉದ್ಧರಿಸು ತಾಯೆ ಪ ಶ್ರದ್ಧಾದೇವಿ ನಿನ್ನ ಕೃಪೆಯಾಗೆ ಹರಿ ನಲಿವ ಅ.ಪ. ಮಧ್ವಮುನಿ ಮನದೈವನತಿ ಮುದ್ದು ಪರಿಸರಳೆ ವಿದ್ಯಾ ಅಸಾದ್ಯ ಕರುಣಾಬ್ಧಿ ದೇವಿ ಪ್ರಧ್ವಂಸ ಮಾಡು ಮಮ ಹೃದ್ರೋಗ ಮೂಲ ಪ್ರ ಬುದ್ಧರಲಿ ಪದವಿತ್ತು ಉದ್ಧಾರ ನೀ ವಹಿಸು 1 ನಿನ್ನ ಕೃಪೆಯಮೃತ ರಸವಿನ್ನು ದೊರೆಯಲು ನಾವು ಧನ್ಯ ಧನ್ಯರು ಮಾತೆ ಭಕ್ತಿಮೂರ್ತೆ ವಿಧಿ ರುದ್ರಸೇವ್ಯ ಪದ ಪುಷ್ಕರಳೆ ಪುಣ್ಯ ಪುರುಷ ಸಮೀರ ಸಂತ ಸಂಸ್ತುತೆ ಪಾಹಿ 2 ನೀನೊಲಿಯದ ಜೀವ ಏನು ಸಾಧನೆ ಮಾಡೆ ಪ್ರಾಣವಿಲ್ಲದ ದೇಹ ಶೃಂಗರಿಸಿದಂತೆ ವಾನರ ಪ್ರತಿಬಿಂಬ ಜಯೇಶವಿಠಲ ತಾನೊಲಿಯ ಅವಗೆಂದು ನಿನ್ನವರ ಕರವಶನು 3
--------------
ಜಯೇಶವಿಠಲ
ಬೃಂದಾವನವಿದೆಕೊ ಯತಿವರ ಪ ನಂದ ನಂದನ ಗೋವಿಂದನ ಪಾದಾರ ವಿಂದವ ಪೂಜಿಪ ಶ್ರೀರಾಘವೇಂದ್ರನ ಅ.ಪ ಮಂತ್ರಾಲಯದಿ ಸ್ವತಂತ್ರ ಭೂಮಿಕೆಯಲ್ಲಿ ಯಂತ್ರ ಸ್ಥಾಪನೆಗೈದು ಸಂತೃಪ್ತಿಯಾಂತು ಮಂತ್ರಾರ್ಥ ತತ್ವಗಳನುಪದೇಶ ಗೈಯುವ ಮಂತ್ರ ಸ್ವರೂಪನು ಸೇವಿಪ್ಪ ಪುಣ್ಯದ1 ಗುರುರಾಜರಾಜನು ಕರುಣಾಪಯೋಧಿಯು ನಿರುತ ಭಕ್ತರಿಗೆಲ್ಲ ವರವೀವ ದೊರೆಯು ಸರಸೀರುಹಾಕ್ಷ ಮಾಂಗಿರಿವಾಸ ರಂಗನ ಚರಣವ ತೋರುವ ಕೃಪೆಮಾಡುವಾತನ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೆಟ್ಟವಿಳಿದು ಬೇಗಬಾರೊ ಜಗ- ಜಟ್ಟಿ ಹನುಮನೆ ನಿನಗೆ ಸರಿಯಾರೊ ಕರುಣವ ಬೀರೊ ಚರಣವ ತೋರೊ ಪ ದುಷ್ಟದಶಕಂಠನ ಪಟ್ಟಣದಿ ರಾಮನ ತಿಳುಹಿ ಕುಶಲವ ಪಡಿಸಿದೆ ಮುದವ 1 ವನವ ಭಂಗಿಸಿ ಬಂದು ದನುಜರ ಶಿಕ್ಷಿಸಿ ತಾಳಿ ಚಿಂತೆಯನು ಕಂಡೆ ಸೀತೆಯನು 2 ಸೀತೆ ಕುರುಹ ರಘುನಾಥಗೆವೊಪ್ಪಿಸಿ ಕೀರ್ತಿಯಂ ಮೆರೆದೆ ಸೇವೆಯಗೈದೆ 3 ಕ್ಷಣದಿ ಲಕ್ಷಣಗೆ ಪ್ರಾಣವನಿತ್ತೆ ಧೀರಾ ವಜ್ರ ಶರೀರ 4 ಭರತಗೆ ತಿಳುಹಿಸಿ ಹರುಷ ಪೊಂದಿಸಿದೆ ಹಾರ ಕೈಕೊಂಡೆ ಘಟಿಕಾದ್ರಿಯೊಳ್ನಿಂದೆ5
--------------
ಗುರುರಾಮವಿಠಲ
ಬೆಂಬಿಡದಲೆ ಪೊರೆ | ಅಂಬಿಕಾತನಯನೆ ಪ ವಾಸುಕಿ ಭೂಷಣ 1 ನಾಕೇಶವಂದಿತ | ಆಖುವಾಹನ ಎನ್ನ |ಕಾಕುಮತಿ ಕಳೆದು ನೀಕಾಯೊ ಕರುಣದಿ 2 ಶ್ರೀಮನೋಹರ ಸ್ವಾಮಿ | ಶಾಮಸುಂದರ ಸಖಕಾಮಹರಸುತ | ಸಾಮಜವದನನೆ 3
--------------
ಶಾಮಸುಂದರ ವಿಠಲ
ಬೆಳಕಾ ತೋರಿಸೊ ಯೋಗಿಂದ್ರರ ಜನಕಾ |ಮಂತ್ರಾಲಯ ಪುರ ಪಾಲಕ ಪ ಫಾಲನಯನ ಪ್ರಿಯ | ಪಾಲಾಬ್ಭಿ ಶಾಯಿಯಶೀಲ ಮೂರುತಿ ತೋರೊ | ಮೇಲು ಕರುಣದಿ ಅ.ಪ. ಪತಿ ಭ್ರಾತೃ | ಪೇರ್ಮೆಯಿಂದಲಿ ನಿನ್ನನಿರ್ಮಮತಗೆ ಮೆಚ್ಚಿ | ಪರ್ಮನ ಮಾಡಿದ 1 ಕ್ಷಿತಿ ದೇಶವು 2 ಸಿರಿಗುರು ಗೋವಿಂದ ವಿಠ್ಠಲನಾ | ಭವ್ಯ ಸುಚರಣಾಸರಸಿಜ ಹೃದ್ವಾರಿಜದಲಿ ಪವನಾ | ನಲಿ ಸ್ಥಿತನಾಗಿಹನಾ |ತೋರಿ ಪೊರೆಯೊ | ಕರುಣಾಕರ ಗುರು ಸಾರಿ ಭಜಿಪೆ ತವ | ಚರಣಾಂಬುರುಹವ 3
--------------
ಗುರುಗೋವಿಂದವಿಠಲರು
ಬೆಳಗಾಗಲೆದ್ದೆ ನಾನೀಗ ಜಾಗ್ರದಲಿಮಲಗಿದ್ದು ನಿದ್ರೆ ತಿಳಿವನಕ ರಾತ್ರೆಯಲಿ ಪಬ್ರಹ್ಮ ತಾನೆಂದೆಂಬ ಭಾನು ಬಳಿಕಸ್ತ'ುಸೆಹಮ್ಮೆಂಬ ಸಂಜೆಗತ್ತಲೆಯಡರಲುಉಮ್ಮಳಿಪ 'ಷಯ ರೂಪದ ಮಾಯೆ ನಡು'ರುಳುಜುಮ್ಮೆನುತ ಮೈಮರೆದ 'ದ್ಯೆಯಲಿ ಮುಳುಗಿ 1ಕೃಷ್ಣಪಕ್ಷದ ಕಡೆಯ ದಿವಸ ನಡುರಾತ್ರಿಯಲಿದಟ್ಟ'ಪ ಮೇಘಮಂಡಲದ ತೆರದಿಇಟ್ಟೆಡೆಯ ಕಾಮದಲಿ ಮನಮುಳುಗಿ ಮತ್ತಲ್ಲಿಮುಟ್ಟಿ ಕರ್ಮವ ಮಾಡಲದು ಕಣ್ಣುಮುಚ್ಚಿರಲು2ಸತ್ಯ ಜಗವೆಂದೆಂಬ ವರುಷ ಋತು ದಾಟಿದುದುನಿತ್ಯವಲ್ಲದ ಮಾಯೆ ನಿಶಿ ತೆಗೆದುದುಪ್ರತ್ಯಗಾತ್ಮಜ್ಯೋತಿ ಸೂರ್ಯತಾನುದಿಸಿದನುಮುತ್ತೆರದಹಂಕಾರ ನಿದ್ರೆ ಲಯವಾಯ್ತು 3ಗುರು'ನಂಘ್ರಿಗೆ ನ'ುಸಿದರುಣ ತಾನುದಿಸುತಿರೆಗುರುತರದ ಮೋಹಾಂಧಕಾರ ಬಳಿಕಹರಿದು ಬೆಳಕಾವರಿಸಿ ಗುರು'ನುಪದೇಶರ'ಸ್ಫುರಿಸಿ ಸರ್ವತ್ರ ತಾ ನಿಬಿಡವಾಗಿರಲು 4ತಿರುಪತಿಯ ವೆಂಕಟನ ಚರಣಕಮಲವನೊಮ್ಮೆಕರಣದೊಳಗಪ್ಪಿ ಕನಸಿನ ಕಡೆಯಲಿಹರಿದುಹೋುತು ಕನಸು ಸ್ಥಿರತೆನಿಂತಿತು ನಿಜವುಮರಳಿ ಕನಸನು ಕಾಣದಂತಾುತೀಗ 5
--------------
ತಿಮ್ಮಪ್ಪದಾಸರು
ಬೆಳಗಾಗಲೆದ್ದೆ ನಾನೀಗ ಜಾಗ್ರದಲಿಮಲಗಿದ್ದು ನಿದ್ರೆ ತಿಳಿವನಕ ರಾತ್ರೆಯಲಿಪಬ್ರಹ್ಮ ತಾನೆಂದೆಂಬ ಭಾನು ಬಳಿಕಸ್ತ'ುಸೆಹಮ್ಮೆಂಬ ಸಂಜೆಗತ್ತಲೆಯಡರಲುಉಮ್ಮಳಿಪ 'ಷಯ ರೂಪದ ಮಾಯೆ ನಡು'ರುಳುಜುಮ್ಮೆನುತ ಮೈಮರೆದ 'ದ್ಯೆಯಲಿ ಮುಳುಗಿ1ಕೃಷ್ಣಪಕ್ಷದ ಕಡೆಯ ದಿವಸ ನಡುರಾತ್ರಿಯಲಿದಟ್ಟ'ಪ ಮೇಘಮಂಡಲದ ತೆರದಿಇಟ್ಟೆಡೆಯ ಕಾಮದಲಿ ಮನಮುಳುಗಿ ಮತ್ತಲ್ಲಿಮುಟ್ಟಿ ಕರ್ಮವ ಮಾಡಲದು ಕಣ್ಣುಮುಚ್ಚಿರಲು2ಸತ್ಯ ಜಗವೆಂದೆಂಬ ವರುಷ ಋತು ದಾಟಿದುದುನಿತ್ಯವಲ್ಲದ ಮಾಯೆ ನಿಶಿ ತೆಗೆದುದುಪ್ರತ್ಯಗಾತ್ಮಜ್ಯೋತಿ ಸೂರ್ಯತಾನುದಿಸಿದನುಮುತ್ತೆರದಹಂಕಾರ ನಿದ್ರೆ ಲಯವಾಯ್ತು3ಗುರು'ನಂಘ್ರಿಗೆ ನ'ುಸಿದರುಣ ತಾನುದಿಸುತಿರೆಗುರುತರದ ಮೋಹಾಂಧಕಾರ ಬಳಿಕಹರಿದು ಬೆಳಕಾವರಿಸಿ ಗುರು'ನುಪದೇಶರ'ಸ್ಫುರಿಸಿ ಸರ್ವತ್ರ ತಾ ನಿಬಿಡವಾಗಿರಲು4ತಿರುಪತಿಯ ವೆಂಕಟನ ಚರಣಕಮಲವನೊಮ್ಮೆಕರಣದೊಳಗಪ್ಪಿ ಕನಸಿನ ಕಡೆಯಲಿಹರಿದುಹೋುತು ಕನಸು ಸ್ಥಿರತೆನಿಂತಿತು ನಿಜವುಮರಳಿ ಕನಸನು ಕಾಣದಂತಾುತೀಗ5
--------------
ತಿಮ್ಮಪ್ಪದಾಸರು
ಬೆಳಗಾಯಿ ತೇಳಿರಯ್ಯಾ ಪ ಕರ ಪುಷ್ಕರದ ನೆಲೆಯ ಲೊಗದು | ಬಲಿದ ವೈರಾಗ್ಯ ವೈರಾಗ್ಯ ಮುಂಬೆಳಗ ಸುಖ ತಂಗಾಳಿ | ರವಿ ಉದಯಿಸಿದ 1 ನ್ಮತ್ತದುರ್ವಾದಿ ನಕ್ಷತ್ರದೆಡೆಗೆ | ಭವ ದ್ವಿಜ ರಿಂದ ಸುತ್ತುಗಟ್ಟಿ ಭಜಿಸುತಿದೆ 2 ನೆರೆಭಾವ ಭಕುತಿ ರಥ ಚಕ್ರನೆರೆಯೆ | ದುರಿತೌಘ ಮಂಜು ಮುಸುಕು ದೆರಿಯೇ | ಸಂಚಿತ ಮೊದಲ | ಹಂಸನು ಮೆರಿಯೆ 3 ಸಾಲ ಸ-ಚ್ಚಾಸ್ತ್ರಾ ದೇಳಿಗೆಗೆವಿದ್ವಜ್ಜ | ನಾಳಿ ಝೇಂಕರಿಸುತಲಿ ಮ್ಯಾಲನಲಿಯಿ | ಮೂಲ ರಘು ಪತಿಯ ದೇವಾಲಯದ ವಾದ್ಯಗಳು | ಘೇಳೆನಿಪ ನಿಜ ವೇದ ಘೋಷ ಕೇಳ ಬರುತಿದೆ ಜನಕೆ4 ಘನ ಪುಣ್ಯ ಪೂರ್ವಾದ್ರಿ ಕೊನಿಗೆ ಅರುಣಾಂಬರದಿ | ವಿನುತ ಜ್ಞಾನದ ಕಿರಣವನೆ ಪಸರಿಸಿ | ಜನದ ವಿದ್ಯದ ನಿದ್ರೆಯನೇ - ಜಾರಿಸಿ ಹೋದ | ಮಹಿಪತಿ ನಂದನ ನುಭಿವದಿ ಕೀರ್ತಿ ಪಾಡಿದನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೆಳಗಿ ಆರತಿಯನೀಗ ಭಾಗ್ಯದಂಬಗೆ ಮುಂದೆಸುಳಿದು ಆರತಿಯನೆತ್ತಿ ಶೂರೆ ಅಂಬಗೆ ಪ ಮುತ್ತಿನೋಲೆ ಮೂಗುತಿಯ ಧರಿಸಿದಂಬಗೆಕತ್ತಿಯನ್ನು ಹಿಡಿದಿರುವ ಶೂರೆ ಅಂಬಗೆ 1 ಪದಕ ಕುಂಡಲಧಾರಿ ಪೂರ್ಣೆ ಅಂಬಗೆಬೆದರದಲೆ ಶತ್ರುಗಳನು ಕೊಂದ ಅಂಬಗೆ2 ಶರಣರ ದ್ವಾರ ಕಾಯುತಲಿಹ ವೀರೆ ಅಂಬಗೆಶರಧಿ ಕರುಣಿ ಚಿದಾನಂದ ಬಗಳಾಮುಖಿ ಅಂಬಗೆ 3
--------------
ಚಿದಾನಂದ ಅವಧೂತರು
ಬೆಳಗಿರೆ ಆರುತಿಯ ಶ್ರೀ ತುಳಸಿಗೆ ಪ ಬೆಳಗಿರೆ ಆರುತಿ ತುಳಸಿದೇವಿಗೆ ನಿತ್ಯ ಲಲನೆಯರೆಲ್ಲ ಮಂಗಳವೆಂದು ಪಾಡುತ ಅ.ಪ ಸುಧೆಯ ಕಲಶದೊಳು ಮಧುವೈರಿನಯನದ ಮುದ ಜಲಬೀಳಲು ಉದುಭವಿಸಿದಳೆಂದು 1 ದರುಶನ ಮಾತ್ರದಿ ದುರಿತಗಳೋಡಿಸಿ ಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು 2 ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ ಒಲುಮೆಯ ಪಡೆದ ಶ್ರೀ ತುಳಸಿದೇವಿಗೆ ಬೇಗ3
--------------
ಕಾರ್ಪರ ನರಹರಿದಾಸರು
ಬೆಳಗಿರೇ ಆರತಿಯ ಮುತ್ತೈದೆರೆಲ್ಲರೂ ಕೂಡಿಬೆಳಗಿರೇಆರತಿಯ ಪ ಶ್ರೀ ಗುರು ಗಣಪತಿ ಚರಣಾರವಿಂದಕೆ ಬಾಗಿ ಮಣಿದು ಶಾರದಾಂಬಿಕೆ ಅಮ್ಮನ ಆಗಮೋಕ್ತದಿ ಪೂಜಿಸುವೆ ಚರಿತವನೀಗಳು ಕರುಣಿಸುತಿಹ ವಿಘ್ನರಾಜಗೆ ಮೊದಲ ಆರತಿಯ ಬೆಳಗಿರೆ 1 ಸರಸಿಜೋದ್ಭವನ ರಾಣಿ ಕಲ್ಯಾಣಿ ವಿದ್ಯೆಗಧಿಕಾರಿ ಸುರವಂದ್ಯೆ ಸುಪ್ರದಾಯಕಿ ಶಾರದಾಂಬಿಕೆಗೆ 2 ಶಾರದಾಂಬಿಕೆಗೆ ಹರಳಿನಾರತಿಯ ಬೆಳಗಿರೆ 3 ಬಿರು ಮುಗುಳಿನ ಚಂಪಕದಂತೆ ನಾಸಿಕ ಕದಪು ಕನ್ನಡಿಯವೇಲ್ ಲೋಕಮಾತೆಗೆ ಪರಿಮಳ ದಾರತಿ ಬೆಳಗಿರೆ 4 ಮರೆಯಲು ಗರಳಸ್ವರವು ಕೋಗಿಲೆಯಂತೆ ನಳಿದೋಳೆರಡು ಬೆರಳು ಸಂಪಿಗೆಯ ಸರಳಿರುವಂತೆ ಮೆರೆವ ಈ ಶಾರದಾಂಬಿಕೆಗೆ ಹವಳದಾರತಿ ಬೆಳಗಿರೆ 5 ಕಿರುಬಸುರಿನ ಸುಳಿನಾಭಿ ಇಟ್ಟ ವೋಲೆ ತ್ರಿವಳಿಯ ಹರಿಮಧ್ಯ ನಡುವಿಗೆ ಉಟ್ಟ ಪೀತಾಂಬರದ ಶ್ರೀ ಶಾರದಾಂಬಿಕೆಗೆ ಬಟ್ಟಲಾರತಿ ಬೆಳಗಿರೆ 6 ಮಂದಗಮನೆ ಜಗದ್ವಂದ್ಯೆಗೆರಗಿ ನಾ ಮುಂದೆ ಪೇಳುವ ಪರಿಪರಿ ವಸ್ತ್ರ ಭೂಷಣದಿಂದ ಮೆರೆವ ಮಣಿ ಮಕುಟ ಫಣಿಗೆ ಶ್ರೀಗಂಧ ಕುಂಕುಮವಿಟ್ಟ ಶಾರದಾಂಬಿಕೆಗೆ ಕುಂದಣ ದಾರತಿ ಬೆಳಗಿರೆ 7 ಪುತ್ಥಳಿ ಹಾರಹೀರಾವಳಿ ಮುತ್ತಿನಸರ ಚಿನ್ನದಸರ ಚಕ್ರಸರ ಜ್ವಲಿಸುತ್ತಲಿರುವ ಮೆರೆವ ಶ್ರೀ ಶಾರದಾಂಬಿಕೆಗೆ ಮುತ್ತಿನಾರತಿ ಬೆಳಗಿರೆ 8 ರತ್ನದಸರ ಪದಕದಸರವು ಏಕಾವಳಿಸರ ಕೊರಳೊಳಗಳ ನಳಿನ ದಾರತಿ ಬೆಳಗಿರೆ 9 ಹರಳು ಮೌಕ್ತಿಕದಿಂದ ಮೆರೆವ ಮೂಗುತಿ ಚಂದ್ರನ ಹರಳು ಚೌಲಿಯ ತುಂಬುಪರಿಮಳಿಸುವ ಪೂವು ಕರಿ ಮಣಿ ಹರಳಿನಾರತಿ ಬೆಳಗಿರೆ 10 ಮೆರೆವಚೂಡವು ಕೈ ಚಳಕಿಗೆ ಕೆತ್ತಿದ ಹರಳಿನ ವಡ್ಯಾಣ ನಡುವಿಗೆ ಅಳವಟ್ಟು ರೂಢಿಸಿ ಬಕುತರ ಪಾಲಿಪ ಶಾರದಾ ದೇವಿಗೆ ಆರತಿ ಬೆಳಗಿರೆ 11 ಥರಥರ ನವರತ್ನ ಖಚಿತದಿಂದೊಪ್ಪುವ ಕರವೆರಡರ ಭುಜ ಕೀರ್ತಿ ವಜ್ರದೊಳ್ ಬಿರಿದ ತೋಳ್ ಬಳೆವಾಲೆ ಶಾರದಾದೇವಿಗಾರತಿ ಬೆಳಗಿರೆ 12 ಚಿನ್ನದ ಕಿರುಗೆಜ್ಜೆ ಅಂದಿಗೆ ಗಿಲಿಗಿಲಿರೆನ್ನಲು ಹಾರ ಹೊಯ್ದೊಡರು ಬಿರಿಚೊಕ್ಕ ಚಿನ್ನದ ಸರಪಳಿ ಭಾರಿಗಳ ನೆಳೆವ ಸುಪ್ರಸಂಗನೆಗಾರತಿಯ ಬೆಳಗಿರೆ 13 ಪಿಲ್ಲಿಯುಕಿರು ಬೆರಳಲಿ ಮಿಂಚಿನಂತಿಹುದಿಲ್ಲಹರಳು ಮಂಚಿಕೆ ಕೊಡೆ ಹೊಳೆಯುವ ಚೆಲುವ ಕಾಲುಂಗರ ವರ ವೀರ ಮುದ್ರಿಕೆಯಲಿ ಒಪ್ಪುತಲಿಹ ಶಾರದಾಂಬಿಕೆಗೆ ಮಲ್ಲಿಗೆ ಯಾರತಿಯ ಬೆಳಗಿರೆ 14 ಭಾರಕೆ ಶಾರದೆ ಒಲಿಯುತ ದೇಹದ ಕಾಂತಿ ಯಿಂದ ದಿಕ್ಕನು ಮುತ್ತೀನಾರತಿಯ ಬೆಳಗಿರೆ 15 ಕರುಣಾಂಬೆ ಕಾಶ್ಮೀರ ಪುರವರಧೀಶ್ವರಿ ಪರಮಹಂಸವರ್ಯ ಪರಿ ಪರಿ ರುದ್ರನ ಪೋಲ್ವ ನಿಶದದುತಿ ಮೂರ್ತಿ ಪರಿಪರಿ ಆರತಿಯ ಬೆಳಗಿರೆ 16 ಪುಷ್ಪ ಧೂಪ ದೀಪಗಳಿಂದ ಸಡಗgದಿಂದಲಿ ಸಮರ್ಪಿಸಿ ಜಯ ಜಗದರೂಪೆ ರಕ್ಷಿಸು ಮಾತಾಯೆ ಕರುಣಿಸು ಎಂದು ಕಡು ಬೆಡಗಿನ ಆರತಿಯ ಬೆಳಗಿರೆ 17 ಕಡುಬು ಕಜ್ಜಾಯ ಪಾಯಸಕ್ಷೀರ ದಧಿಘೃತತಡೆಯಿಲ್ಲ ತುಂಬಿ ದೇವಿಗೆ ಕರಿಯ ಕಬ್ಬಿನ ಕೋಲು ಆರತಿಯ ಬೆಳಗಿರೆ 18 ಹರಿವಾಣ ನೇವೇದ್ಯಜಗನ್ಮಾತೆ ತಾಬೂಲವನಿತ್ತು ಶರಣೆಂದು ನೂತರದಾರತಿಯ ಬೆಳಗಿರೆ 19 ತಮ್ಮಟೆ ಭೇರಿ ಬುರುಗು ಶಂಖ ಮೃದಂಗವು ನೀಲದಾರತಿಯ ಬೆಳಗಿರೆ 20 ಭೋರಿಡುವವಾದ್ಯವು ಉಡುಕು ಕೊಳಲು ತಂಬೂರಿ ತಾಳಗಳಿಂದ ಸ್ವರವೆತ್ತಿಪಾಡಿ ಆರತಿಯ ಎತ್ತಿರೆ 21 ಬೇಡುತ ಪೂಮಳೆಗರೆಯುತ ಹೊಡೆದು ಕೊಂಡಾಡಿ ವಂದಿಸಿದರು ಶಾರದಾಂಬಿಕೆಗೆ ಹೂವಿನಾರತಿಯ ಎತ್ತಿರೆ 22 ವರದಾಂಬೆ ಶಾರದಾಂಬಿಕೆಯನು ಪೂಜಿಸಿದವರಿಗೆ ಪರಿಪರಿ ವಿದ್ಯವ ಕರುಣಿಸೆ ನರರಿಗೆ ಇಷ್ಟಾರ್ಥದ ವರವಿತ್ತು ಕೊಡುವಳು ಮರಕತದಾರತಿ ಬೆಳಗಿರೆ 23 ಹಿರಿಯಮಗನ ರಾಣಿ ಶಾರದಾಂಬಿಕೆಯ ಸುರಮುನಿ ಜನರಿಗಿಷ್ಟಾರ್ಥವ ವರವಿತ್ತು ಮಂಗಳಾರತಿಯ ಬೆಳಗಿರೆ 24
--------------
ಕವಿ ಪರಮದೇವದಾಸರು
ಬೆಳಗೋಣು ಹರಿಗೆ ಆರುತಿಯ | ಸಂಗೀತಹಾಡಿ ಪಾಡಿ ನಲುವಿಂದ ಬೇಗ ಬಾರೆ ನಳಿನಾಕ್ಷಿ ಬಾ ಪ ಬಾಲೆ ಶೀಲೆ ದ್ರೌಪದಿ ಭಕುತಿಲಿ ಧ್ಯಾನಿಸಿ ಧೇನಿಸಿ ಕೇಳಿ ಅಕ್ಷಯಶಾಲಿ ಗರೆದ ದೇವ ದೇವಗೆ || ಶೈಲವನೆತ್ತಿದಾತಗೆ | ಗೋಪಗೆ | ಬಹುರೂಪನಿಗೆ | ಶೃಂಗಾರ ಸುಗುಣಾಂಬುಧಿಗೆ ಜಯಶುಭ ಮಂಗಳೆಂದು 1 ದೀನೋದ್ಧಾರಿ ಧೇನುಕ ಮಾತುವೈರಿಗೆ | ಶೌರಿಗೆ | ವೇಣುನೂದುತ ಗೋವ್ಗಳ ಸಲುಹಿದಾತಗೆ ನಾಥಗೆ | ಮಂದರ ಕರುಣಾತರಗೆ 2 ಭಾಸುರ ಶಾಮಸುಂದರವಿಠಲ ಸ್ವಾಮಿಗೆ | ಪ್ರೇಮಿಗೆ | ವಾಸವಾತ್ಮಜಗೆ ಒಲಿದು ಧುರದೊಳು ಕಾಯ್ದಗೆ ಶ್ರೀದಗೆ || ವಾಸುಕಿತಲ್ವಶಾಯಿಗೆ | ಗೋಪಗೆ | ಬಹುರೂಪನಿಗೆ | ದಾಸರ ಒಡನಾಡುವಗೆ | ಜಯಶುಭ ಮಂಗಳೆಂದು 3
--------------
ಶಾಮಸುಂದರ ವಿಠಲ