ಒಟ್ಟು 3451 ಕಡೆಗಳಲ್ಲಿ , 117 ದಾಸರು , 2322 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾರಸಾರಸಾರಹರಿಯಪಾರ ಮಹಿಮ ನಾಮಘೋರಸಂಸಾರಾಬ್ಧಿಶೀಘ್ರೋತ್ತಾರನೌಕಾಧಾಮ 1ವಿಧಿಭವಾದ್ಯಮರೌಘ ಧ್ಯಾನಾಸ್ಪದ ಕಲ್ವದ್ರುಮಪರಮಾಖಿಲ ಭಕ್ತಭವಯಕುಧರವಜ್ರೋಪಮ 2ಭಕ್ತಿ ಜ್ಞಾನ ವೈರಾಗ್ಯ ಭಾಗ್ಯ ನಿವೃತ್ತಿ ಸುಖ ನಿಸ್ಸೀಮಕರ್ತಲಕ್ಷ್ಮೀನಾರಾಯಣನ ಭೃತ್ಯವರ್ಗಕ್ಷೇಮ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಿರಿಗೋವಿಂದಶ್ರೀ ಪುರಂದರದಾಸರ ಸ್ತ್ರೋತ್ರಇದೇ ಪೇಳಿ ಪೋದರುವಿಧುವದನೆನಮ್ಮ ಬುಧನುತ ಪದದ ನಾರದರು ಈ ಜಗದಿ ಬಂದು ಪಸಿರಿಅರಸನೆ ಈ ಧರೆಯೊಳಗುತ್ತಮಮರುತ ದೇವರೆ ಜಗದ್ಗುರುಗಳೆಂದುತರತಮಪಂಚಭೇದಜ್ಞಾನ ಶೀಲನೆಸುರಲೋಕವಾಸಿ ಶ್ರಿಹರಿ ಪ್ರೇಮ ಪಾತ್ರನೆಂಬೊದೆ ಪೇಳಿ 1ಜರದೂರನರಹರಿ ಧರೆಯೊಳು ವ್ಯಾಪಿಸಿಇರಲು ತ್ರಿಗುಣ ಕಾರ್ಯವಾಹವೆನ್ನುತಾಪರತಂತ್ರ ಜೀವವೆಂದರಿದು ಪಾಪ ಪುಣ್ಯಸರಸಿಜನಾಭನಿಗರ್ಪಿಸಿರೆಲೋಯಂದು 2ಶಿರಿಗೋವಿಂದ ವಿಠಲ ವಿಶ್ವವ್ಯಾಪಕಗಿರುವವುಎರಡು ಪ್ರತಿಮೆಜಗದಿಚರಅಚರಗಳನ್ನು ಅರಿತು ಮಾನಸದಲ್ಲಿಹರಿಪೂಜೆ ಮಾಡಿ ಸೇರಿರಿ ವೈಕುಂಠವೆಂಬೊದೆಪೇಳಿ ಪೋದರು 3
--------------
ಸಿರಿಗೋವಿಂದವಿಠಲ
ಸಿರಿಸೊಕ್ಕಿ ಮರೆಯದೆ ಮುರವೈರಿಯಮರೆಹೋಗು ಮೊರೆಯಿಡು ಮರೆಯದೆ ಮನವೆ ಪ.ಶರೀರವು ಸೆರೆಮನೆ ಸರಿಕಾಣ ಜೀವಕ್ಕೆಸಿರಿಪಂಚಶರನವಸರಕೆ ಮೆಚ್ಚಿಸಿರಿಪತಿ ಶರಣಾನುಸರಣೆ ಭಕುತಿಜ್ಞಾನಸರಕಿಲ್ಲ ಸರಿಯಿತಾಯುಷ್ಯಿರವು ವ್ಯರ್ಥಾಯಿತು 1ಸತಿಸ್ನೇಹ ಸುತಮೋಹಾಶ್ರಿತ ಜನರನು ಬೇಡಿಸ್ಯಾತನೆಯ ಸುತ್ತಿಕೊಂಡು ಶಿಥಿಲಿಪಾಗಸತಿಇಲ್ಲ ಸುತರಿಲ್ಲಾಶ್ರಿತ ಸಹಾಯವಿಲ್ಲವೈವಸ್ವತ ಭೃತ್ಯಶತಕೆ ಈಷತ್ತೂ ಕೃಪೆಯಿಲ್ಲ 2ಪುಸಿನುಡಿ ಪಿಸುಣರ ಪೆಸರಿಸದಲೆನಿತ್ಯಪ್ರಸಾದರ ಪ್ರಸಾದವ ಪ್ರಸನ್ನೀಕರಿಸೆಪೊಸತಾಪೋಪಶಮನ ಪ್ರಸನ್ನವೆಂಕಟಪತಿಯಪ್ರಸಿದ್ಧರ ಪ್ರಸರದ ಪ್ರಸಂಗದೆ ಮುಕುತಿ 3
--------------
ಪ್ರಸನ್ನವೆಂಕಟದಾಸರು
ಸೀತೆ ಸದ್ಗುಣ ಗಣ | ವ್ರಾತೆ ಈರೇಳು ಲೋಕ |ಮಾತೆ ಪ್ರಣತ ಜನ | ಪ್ರೀತೆ ಸಾಗರ ಜಾತೆ ||ಮಾತು ಮಾತಿಗೆ ರಘು | ನಾಥನ ಸ್ಮರಣೆಯ |ಆತುರದಲಿ ಕೊಡು | ಸಿತಾಂಶು ವದನೆ ||ಪಲ್ಲ||ಶ್ರೀ ಭೂ ದುರ್ಗಾಂಭ್ರಣೀ ಸ್ವ | ರ್ಣಾಭೆ ರಾಮನ ರಾಣೀ |ಸಾಭಿಮಾನ ನಿನ್ನದ | ಮ್ಮಾ ಬಾಲಕನ ಕರ- ||ವ ಬಿಡದಲೆ ಸರ್ವ | ದಾ ಬಾದರಾಯಣನಂ- |ಘ್ರಿಬಿಸಜದ್ವಯವ | ನೇ ಭಜಿಸಲು ಜ್ಞಾನ- ||ವ ಒಲಿಸುವದತಿ | ಶೋಭನ ವಿಗ್ರಹೆ |ಹೇ ಬಡವನು ಗೈ | ಯ್ವಾ ಬಿನ್ನಪವನು |ನೀ ಬಿಸುಟದೆ ಬಹ | ಳಾ ಭಯ ಪರಿಹರಿ |ಸೀ ಭಕುತ ಜನರೊ | ಳು ಬೆರಸುವದೇ 1ಮಾಕಂಜದಳನೇತ್ರೆ | ಶ್ರೀ ಕುಂಭಿಣೀಜೆ ದಾತೆ |ನೀ ಕರುಣದಿ ನೋ | ಡೀಕಕುಲಾತಿಹಿಂಗಿಸೆ |ಬೇಕು ಸತ್ಸಾಧನವು | ಸಾಕು ದುರ್ವಿಷಯಗಳು |ಲೌಕಿಕಗಳೆಲ್ಲಾ ವೈ | ದಿಕವಾಗಲೆನಗೆ ||ನಾಕು ಮೊಗನ ಜನ | ನೀ ಕರಿಗಮನೆ ಪ- |ರಾಕುದಿವಿಜನುತೆ | ಶೋಕರಹಿತೆ ದನು- |ಜಾ ಕುಲ ಸಂಹರೆ | ಈ ಕಠಿಣ ಭವದೊ- |ಳೇಕೆ ದಣಿಸುತಿಹೆ | ನೀ ಕಡೆಗೆತ್ತಲೆ 2ದಾತಪ್ರಾಣೇಶ ವಿಠಲ | ಸೋತೆನೆಂದು ನಗಲು ನೀ- |ನಾತನ ದಾಯದಿಂ ಪುರು | ಹೂತನ ಸೋಲಿಸಿ ಪ್ರ- |ಖ್ಯಾತೆಯಾದೆ ಉದರೌ | ಜಾತ ಸದನೆ |ಸತ್ರಾಜಿತೆ ಲಕ್ಷ್ಮೀಯಾದಿ ದೇ | ವತೆಭಾಸ್ಕರಕಾಂತೆ ||ಭೂತಳದೊಳಗೆ ಅ | ನಾಥರಿಗೆವರಪ್ರ- |ದಾತೆ ಕೃಪಾ ನಿಧಿ | ಯೇ ತಡೆ ದುರ್ಮತಿ |ಧೌತ ವ್ರಜನಿ ಧರಿ | ಪೋತನಕನಲದೆ |ವಾತಪೂಜಿತೆ ರಮೆ | ಪಾತು ಪ್ರತಿಕ್ಷಣದಿ 3
--------------
ಪ್ರಾಣೇಶದಾಸರು
ಸುಕಾಲಕೆ ಧರ್ಮವ ಮಾಡುವುದೆ ಲೇಸುದುಷ್ಕಾಲಕೆ ಮಾಡಗೊಡದಲ್ಪಾಯು ಪ.ಯೌವನವೆಂಬ ಸುಕಾಲಕೆ ಸುರಮುನಿಸೇವ್ಯನ ಭಾಗವತರ ಮೆಚ್ಚಿಪದಿವ್ಯಜ್ಞಾನ ಭಕ್ತಿ ವೈರಾಗ್ಯವಿರಬೇಕುಹವ್ಯಾಸ ನಡೆಯದು ಮುಪ್ಪು ದುಷ್ಕಾಲ 1ಧನದಾಗಮದ ಸುಕಾಲಕೆಸತ್ಪಾತ್ರರನು ಕರೆದರ್ಚಿಸಿ ಉಣಿಸಿ ಕೃಷ್ಣಾರ್ಪಣ ಬುದ್ಧಿಯಿಂದ ಸರ್ವಸ್ವನೊಪ್ಪಿಸಬೇಕುತನಗಿಲ್ಲದಾಗೆ ದಾರಿದ್ರ್ಯ ದುಷ್ಕಾಲ 2ವೃತ್ತಿಕ್ಷೇತ್ರಿದ್ದ ಸುಕಾಲಕೆ ಶ್ರೀ ಮಧ್ವಶಾಸ್ತ್ರ ವ್ಯಾಖ್ಯಾತರಿಗಿತ್ತು ಜನ್ಮಸಾರ್ಥಕ ಮಾಡಿ ಸಂತೋಷದಲ್ಲಿರಬೇಕುತಾ ಸ್ಥಾನ ಭ್ರಷ್ಟನಾಗಿಹುದೆ ದುಷ್ಕಾಲ 3ಸಂಸಾರಾವಸ್ಥೆಯವರಿಗೀ ಸುಕಾಲಕೆಹಂಸವಾಹನಪಿತನಂಘ್ರಿ ಪದುಮಪಾಂಸುಲಭ್ಯವು ಕೇಚಿತ್ಕಾಲಕೆ ಹರಿಯಲಿಸಂಶಯ ಭಕ್ತಿಯವನಿಗೆ ದುಷ್ಕಾಲ 4ಮುಕ್ತಮಹಿಮಗೆ ಜ್ಞಾನವೆ ದ್ರವ್ಯ ವಿಷಯವಿರಕ್ತಿಯೆ ಭಾಗ್ಯವಿಜಯಭಕ್ತವತ್ಸಲ ಪ್ರಸನ್ವೆಂಕಟೇಶನ ಸೇವಾಸಕ್ತಿಲ್ಲದವಗಾವಕಾಲ ದುಷ್ಕಾಲ 5
--------------
ಪ್ರಸನ್ನವೆಂಕಟದಾಸರು
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆನಿರ್ಭಯವ ಪಾಲಿಸು ಪ್ರೇಮಿ ಪ.ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ-ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕ ಅ.ಪ.ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದಸೇವೆಗಾಲಸ್ಯವ ಮಾಳ್ಪರುಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು-ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ 1ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ-ರಿಂದ ಪೂಜೆಗೊಳೈ ಷಣ್ಮುಖವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ 2ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶಕೇವಲ ವಿಜ್ಞಾನಪ್ರಕಾಶಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ-ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸುಬ್ರಹ್ಮಣ್ಯ163ಸಂತತಂ ತೋಷಂ ದೇಹಿ ತ್ವಂ ದೇಹಿಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ಪ.ದೇಹಿ ದೇಹಿ ತವ ಸ್ನೇಹ ಸುಖ ವಚಂಬ್ರೂಹಿ ಸುವಚನಂ ಗಹನ ಜ್ಞಾನಂ 1ಅಭ್ರೋಡುಪ ನಿಭ ಶುಭ್ರಶರೀರಾದಭ್ರ ದಯಾನಿಧೆ ವಿಭ್ರಾಜಿತಶಂ 2ವಾಸವಸೇನಾಧೀಶ ಖಳಾನ್ವಯನಾಶ ಸ್ವಜನ ಪರಿಪೋಷ ಸುತೋಷಂ 3ಭೂರಿಫಲದ ಭಯದೂರ ಕುಮಾರ ಕುಮಾರಸುಧಾರಾತೀರಗ ಸುಮತಿಂ4ಪನ್ನಗನೃಪಸುಪನ್ನಗನಗಪ ಪ್ರಸನ್ನವೆಂಕಟಪತಿ ಚಿನ್ಮಯ ಭಕ್ತಿಂ 5
--------------
ಪ್ರಸನ್ನವೆಂಕಟದಾಸರು
ಸುಮ್ಮನೆ ಬರುವುದೆ ಮುಕ್ತಿ ಗುರುಧರ್ಮಭಿಕ್ಷವ ಬೇಡಿದವಗೆ ಸುಕೀರ್ತಿಮನದಲ್ಲಿ ದೃಢವಿರಬೇಕು ದುಷ್ಟಜನಸಂಸರ್ಗಗಳನು ಬಿಡಲಿಬೇಕುಕಾಮಕ್ರೋಧವ ಬಿಡಬೇಕು ಹರಿನಾಮ ಸಂಕೀರ್ತನೆಯನು ಮಾಡಬೇಕುವ್ಯಾಪಾರ ವರ್ಜಿಸಬೇಕು ಜ್ಞಾನದೀಪದ ಕಾಂತಿಯಲ್ಯೋಲಾಡಬೇಕು
--------------
ಗೋಪಾಲದಾಸರು
ಸುಮ್ಮನೆ ಬಾಹೂದೆ ಮುಕುತಿ - ನಮ್ಮ |ಚೆನ್ನಾದಿ ಕೇಶವನ ದಯವಾಗದನಕ ಪ.ಮನದಲ್ಲಿ ದೃಢವಿರಬೇಕು - ದುರ್ |ಜನರ ಸಂಗತಿಯನು ನೀಗಲುಬೇಕು ||ಅನಮಾನಂಗಳ ಬಿಡಬೇಕು - ತನ್ನ |ತನು - ಮನ ಹರಿಗೆ ಒಪ್ಪಿಸಿ ಕೊಡಬೇಕು 1ಕಾಮ - ಕ್ರೋಧವ ಬಿಡಬೇಕು -ಹರಿ |ನಾಮಸಂಕೀರ್ತನೆ ಮಾಡಲುಬೇಕು ||ಹೇಮದಾಸೆಯ ಸುಡಬೇಕು - ತ |ನ್ನಾ ಮನ ಹರಿಯ ಪಾದದಲಿಡಬೇಕು 2ಪಾಪಗಳನೆ ಕಳೆಯಬೇಕು - ಜ್ಞಾನ |ದೀಪ ಬೆಳಕಿನಲಿ ಲೋಲಾಡ ಬೇಕು ||ತಾಪ ರಹಿತಗೈಯಬೇಕು - ನಮ್ಮಓಪ ಪುರಂದರವಿಠಲನೊಲೆಯ ಬೇಕು 300
--------------
ಪುರಂದರದಾಸರು
ಸುಮ್ಮನೆ ವಿಷ್ಣುವ ಜರಿದೀರಿ ಯಾಕೆಸುಮ್ಮನೆ ಶಿವನಿಂದ್ಯ ಗೈವಿರಿಪಬ್ರಹ್ಮ ಸುಜ್ಞಾನದಿ ಹರಿಹರರಾರೆಂಬಮರ್ಮವರಿತು ಧರ್ಮಾಧರ್ಮ ಯೋಚಿಸದೀಗಾಅ.ಪಗರುಡವಾಹನನು ಶ್ರೀವರನು ನೋಡಿಉರಗಭೂಷಣನು ಗೌರೀಶ್ವರಗೂಗರುಡೋರಗರ ದ್ವೇಷ ಹರಿಹರರೊಳಗುಂಟೆಎರಡು ಮೂರ್ತಿಗಳೇಕ ರೂಪವೆಂದರಿಯಾದೆ1ಸ್ಮರನ ತಾತನು ನಾರಾಯಣನುಕೇಳಿಸ್ಮರನ ವೈರಿಯು ತ್ರಿಗಣೇಶ್ವರನುಹರಿನಿಂದನೆ ಶಿವ ಶಿರದಿ ತಾನ್ ಧರಿಸಿದಹರನ ಲಿಂಗವನಿತ್ಯಪೂಜಿಸಿ ನಮಿಸುವಾ2ಕ್ಷೀರಾಬ್ಧಿ ವಿಷ್ಣುಗೆಸತಿಗೃಹವೊ ಶಿವನನಾರೀ ಮಂದಿರ ಹಿಮಾಲಯವೂನಾರೀ ರಮೆಯ ಹೃದಯದಿ ಧರಿಸಿದವಿಷ್ಣುಮಾರನಂತಕ ಉಮೆಗಿತ್ತನರ್ಧಾಂಗವ3ಬಲಿಯೊಳ್ ಬಾಗಿಲ ಕಾಯ್ದ ಹರಿಯೂ ಬಾಣಗೊಲಿದು ದ್ವಾರದಿ ನಿಂತ ಹರನೂಗೆಲಿದು ತಾ ಅಜಾಮಿಳನ ಸಲಹಿದ ವಿಷ್ಣುಒಲಿದು ಮಾರ್ಕಾಂಡೆಗಂತಕನ ಮರ್ದಿಸೆ ಶಿವ4ಚೋರನೆನ್ನುವಿರಿ ಕೇಶವನ ಬಲೋ-ತ್ಕಾರಿ ಎಂಬಿರಿ ಪರಮೇಶ್ವರನಾನಿರ್ವಾಣಿಬೌದ್ಧನುಶರ್ವದಿಗಂಬರಹರಿಯು ಜಾರನು ಜಗಪೀಠ ಶಂಕರಗೆಂದು5ರುದ್ರಾಕ್ಷಿ ಭಸ್ಮಲೇಪನವು ಶಿವಗೆಮುದ್ರೆಯು ತುಳಸಿಮಣಿ ಸರವುಊಧ್ರ್ವ ಪೌಂಡ್ರಕಗೋಪಿಕೃಷ್ಣಾಜಿನಾಸನರುದ್ರ ಜಡೆಯ ಪಠಿಸು ವ್ಯಾಘ್ರ ಚರ್ಮದಿ ಕುಳಿತು6ಸ್ಮಾರ್ತರ್ ವೈಷ್ಣವರು ಮತ್ಸರದೆ ದ್ವಯಮೂರ್ತಿಯೊಳ್ ಸಮದೆ ಯೋಚಿಸದೇವ್ಯರ್ಥ ಕೆಡುವಿರಿ ಗೋವಿಂದನ ದಾಸರುಸ್ವಾರ್ಥವಾಗದು ಕಾರ್ಯ ಹರನ ಭಕ್ತರುಕೇಳಿ7
--------------
ಗೋವಿಂದದಾಸ
ಸುಮ್ಮನೆ ವೈಷ್ಣವನೆಂದಿರಿ -ಪರ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬ್ರಹ್ಮ ಸುಜ್ಞಾನವನರಿಯದ ಮನುಜನ ಪ.ಮುಖವ ತೊಳೆದು ನಾಮವಿಟ್ಟವನಲ್ಲದೆ |ಮಿಕ್ಕ ಶಾಸ್ತ್ರಂಗಳ ನೋಡಿದನೆ ? ||ಸುಖ ಶೃಂಗಾರಕೆ ಮಾಲೆ ಧರಿಸಿದನಲ್ಲದೆ |ಭಕುತಿಯ ರಸದೊಳು ಮುಳುಗಿದನೇನಯ್ಯ 1ಊರ ಮಾತುಗಳೆಲ್ಲನಾಡಿದನಲ್ಲದೆ |ನಾರಾಯಣ ಕೃಷ್ಣ ಶರಣೆಂದನೆ ? |ನಾರಿಯರಿಗೆ ಮೆಚ್ಚಿ ಮರುಳಾದನಲ್ಲದೆ |ಗುರುಹಿರಿಯರಿಗೆಲ್ಲ ಎರಗಿದನೇನಯ್ಯ 2ಗಂಗೆಯಲಿ ಮಣ್ಣು ತೊಳವವನಲ್ಲದೆ |ಹಿಂಗದೆ ಸ್ನಾನವ ಮಾಡಿದನೆ ? |ರಂಗ ಶ್ರೀ ಪುರಂದರವಿಠಲನ ದಾಸರ |ಸಂಗಡ ಕೂಡಾಡಿ ತಿರುಗಿದನೇನಯ್ಯ 3
--------------
ಪುರಂದರದಾಸರು
ಸುರರಾಜಪೂಜಿತರಾಜ ಪಂಕೇಜಸಖ ಶತತೇಜಪ.ಶ್ರೀನುತ ಶ್ರೀನಿಧಿ ದೀನ ದಯಾನಿಧಿಜ್ಞಾನವಿಹೀನನ ನೀನೆಪೊರೆ1ಜೀಮೂತಶಾಮಲ ರಾಮ ಶುಭಾಮಲನಾಮನೆ ಸಾಮಜಸ್ವಾಮಿ ಸಲಹು 2ದೋಷವಿನಾಶ ಪರೇಶಾಮರೇಶನೆಶೇಷವರಾಸನ ಕೇಶವನೆ ನಮೊ 3ದೂಷಕ ಭೀಷಣ ದಾಸ ವಿಪೋಷಕತೋಷ ವಿಕಾಸ ವಿಹಾಸ ಜಯತು 4ಪಶುಪತಿವಿಷಹರ ಶಶಿನಿಭದಶನಪ್ರಸನ್ನವೆಂಕಟೇಶ ಕರುಣಾಶರಧಿಹರಿ5
--------------
ಪ್ರಸನ್ನವೆಂಕಟದಾಸರು
ಸುಲಭಲ್ಲ ಹರಿಭಕುತಿ ಗುರುಕೃಪೆ ಇಲ್ಲದಿಲ್ಲ ಪ.ಸಿದ್ಧಿ ಸೊಲ್ಲುವ ಗುರುಗಳುಂಟು ಧರೆಯೊಳಲ್ಲಿಗಲ್ಲಿ ಅವರೆಲ್ಲ ಹಿತಕಾರಿಗಳೆಂದಿಗಲ್ಲಸಲ್ಲ ಕೈವಲ್ಯದ ಮಾರ್ಗವ ಬಲ್ಲಬಲ್ಲಿದಭಾರತಿನಲ್ಲಗೆ ಸಲ್ಲಲಿಬಲ್ಮತದಲ್ಲಿರಿರ್ಯೆಲ್ಲ 1ಭವಸಾಗರ ವೈರಾಗ್ಯದ ನಾವೆಲಿನೀಗಿಸಾಗಿ ಜ್ಞಾನಾಗರದಾಗಮವಕೇಳಿವೇಗದೀಗ ನಿರಯಾಗಾರ ತಪ್ಪಿಸದೆ ಶ್ರೀರಂಗ ಬ್ಯಾಗೊದಗ ಸುಜÕನಾಗಿರದೆಮಗೆ ಮ್ಯಾಗೆ ಲೋಗರೋಗರಕಾಗಿ ರಹಿತಧರ್ಮರಾಗಿರೆ ತಾಗೂದು ರೋಗ 2ನಾ ನನ್ನದು ಸಂಪದೆಂಬಭಿಮಾನಿ ನೀಚನುನೀ ನಿನ್ನದು ಕೃಷ್ಣನೆಂಬ ಮತಿವಂತನೆ ಧನ್ಯ ಬಹುಪುಣ್ಯಶ್ಲೋಕರ ವೈಭವವಾಯಿತನ್ಯೋನ್ಯ ನನಗಿನ್ನ್ಯಾತರ ನೆಚ್ಚಿಕ್ಯಣ್ಣ ಪ್ರಸನ್ವೆಂಕಟರನ್ನನಪುಣ್ಯದ್ವಾರನ್ನಾಂತ ಸನ್ನುಮತಿಗನ್ಯದೆ ಏನಣ್ಣ 3
--------------
ಪ್ರಸನ್ನವೆಂಕಟದಾಸರು
ಸುವ್ವಿ ಎಂದು ಪಾಡಿರೆ ಸುಜ್ಞಾನ ದೇವರಭವಹರಿವುದು ಭಯವಿಲ್ಲ ಸುವ್ವಿಪಂಚ ಶಕ್ತಿಗಳೆಂಬಪರಮಮುತ್ತೈದೆಯರುವಂಚನೆಗೆ ದೂರಾಗಿ ವರ್ತಿಸುತ ಸುವ್ವಿವಂಚನೆಗೆ ದೂರಾಗಿ ವರ್ತಿಪಐದೆಯರುಮುಂಚೆ ಬೇಗದಲಿ ಮಡಿಯಾಗಿ ಸುವ್ವಿ1ಕ್ಷೇತ್ರದ ಒರಳಲ್ಲಿ ಕ್ಷರನೆಂಬ ಅಕ್ಕಿಯುಕ್ಷೇತ್ರಜÕನೆಂಬ ಒನಕೆಯ ಸುವ್ವಿಕ್ಷೇತ್ರಜÕನೆಂಬ ಒನಕೆಯ ಪಿಡಿದುಪಾತ್ರನಾಗೆಂದು ಹರಸುತ ಸುವ್ವಿ2ಆರು ಮೂರಾದವನ ಐದು ಎಂಟಾದವನಬೇರೇಳು ನಾಲ್ಕೆರಡು ಬಗೆಯಾದವನ ಸುವ್ವಿಬೇರೇಳು ನಾಲ್ಕೆರಡು ಬಗೆಯಾದನೆಲ್ಲನುವಾರಣದಿ ನೀವೆಲ್ಲ ತಳಿಸಿರೆ ಸುವ್ವಿ3ವಾಸನೆಯ ಮೆರುಗನು ಒಳಿತಾಗಿ ತಳಿಸುತ್ತಸೂಸದಂತೆಲ್ಲವ ಮಗುಚುತ್ತ ಸುವ್ವಿಸೂಸದಂತೆಲ್ಲವ ಮಗಚುತ್ತ ಅಕ್ಕಿಯರಾಶಿಯನು ಮಾಡಿ ಬಿಡಿರವ್ವ ಸುವ್ವಿ4ಪರವಸ್ತುವಾದವನ ಪರಬ್ರಹ್ಮವಾದವನಪರಮಾತ್ಮನೆಂಬ ಪುರುಷನ ಸುವ್ವಿಪರಮಾತ್ಮನೆಂಬ ಪುರುಷ ಚಿದಾನಂದನಪರಮನೈವೇದ್ಯದ ಪಾಕಕ್ಕೆ ಸುವ್ವಿ5
--------------
ಚಿದಾನಂದ ಅವಧೂತರು
ಸುಳಾದಿಧ್ರುವತಾಳಏನೋ ನಿನ್ನ ಮಹಿಮೆ ಆನೇನು ಕೊಂಡಾಡುವೆಮಠ್ಯತಾಳಎಲ್ಲಿ ನೋಡಲು ನೀನು ಅಲ್ಲಲ್ಲಿ ವ್ಯಾಪ್ತನುತ್ರಿಪುಟತಾಳನಿನ್ನ ಜ್ಞಾನವಂತನೆಂದು ಇನ್ನು ಜ್ಞಾನ ಸಂಪಾದಿಸುವೆಅಟ್ಟತಾಳಹೀನರ ಒಳಗೆಲ್ಲ ಹೀನನು ನಾ ಬಲುಆದಿತಾಳಜನರಲ್ಲಿ ಮನ ಹೋಗೆ ನಿನಗೆ ಹೋಯಿತು ಇನ್ನುಜತೆನೀನು ಅನಾದಿಸ್ವಾಮಿ ನಾನು ಅನಾದಿಭೃತ್ಯ
--------------
ಗೋಪಾಲದಾಸರು