ಒಟ್ಟು 4652 ಕಡೆಗಳಲ್ಲಿ , 111 ದಾಸರು , 2660 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಸು ಕಂಡೆವಮ್ಮ-ಅಮ್ಮ ನಿಮ್ಮ-ಕೂಸು ಕಂಡೆವಮ್ಮ ಪಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು |ಶೇಷಗಿರಿಯ ಮೇಲೆ ವಾಸವಾಗಿಪ್ಪನೆ 1ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು |ಕಂಚಿ ಪಟ್ಟಣದಿ ಮಿಂಚಾಗಿಪ್ಪನೆ 2ಗುಡ್ಡ ಬೆರಳಲ್ಲೆತ್ತಿ ದೊಡ್ಡಿ ಗೋಗಳ ಕಾಯ್ದ |ಒಡ್ಡಿಜಗನ್ನಾಥ ಗಿಡ್ಡಾಗಿಪ್ಪನೆ3ದುಡುಕು ಮಾಡಿ ಹಾಲು ಮಡಕೆಗಳನ್ನೊಡೆದು |ಹಡಗನೇರಿ ಬಂದು ಉಡುಪಿಯಲಿಪ್ಪನೆ 4ಮಂಗಳರೇಖೆ ಪದಂಗಳುಳ್ಳ ನಿಮ್ಮ |ರಂಗ ಪುರಂದರವಿಠಲ ಶ್ರೀ ಕೃಷ್ಣ 5
--------------
ಪುರಂದರದಾಸರು
ಕೃಷ್ಣ ಇನ್ಯಾತರ ಶ್ರೇಷ್ಠನೆಸ್ತನ ಕೊಟ್ಟ ನಾರಿಯ ಕೊಂದು ಬಿಟ್ಟಾನೆ ಪ.ಅರ್ಜುನ ಯಾತರ ಭಂಟನೆನಿರ್ಲಜ್ಯದಿ ಧನುಷ್ಯ ಕೆಳಗಿಟ್ಟಾನೆÉ ಅ.ಪ.ಏನೇನೂ ಧೈರ್ಯವಿಲ್ಲವೊ ಕೃಷ್ಣಗೆಬಲು ಮೀನಿನಂತ ಚಂಚಲವೊ 1ಇಷ್ಟು ಎದೆಗಾರನಲ್ಲವೊ ಪಾರ್ಥಯುದ್ಧ ಬಿಟ್ಟರೆ ನಗುವರಲ್ಲವೊ 2ಸೊಲ್ಲುಸಾಲವ ಕೊಡುವೊನಲ್ಲವೊದೊಡ್ಡ ಕಲ್ಲು ಹೊರಿಸಲು ನಾಚಿಕೆ ಇಲ್ಲವೊ 3ಹೆಣ್ಣು ಬಾಳ್ವೆ ಬಲು ಹೊಲ್ಲೊಹರಡು ಸಣ್ಣವಲ್ಲವೊ ನಿನಗಲ್ಲವೊ 4ತಲೆದೂಗೊ ಲಕ್ಷಣ ಹೊಲ್ಲವೊಅತಿ ಮಲೆತು ನಡೆವ ಬುದ್ದಿ ಅಲ್ಲವೊ 5ವೇಷಗಾರಿಕೆ ಬಲು ಹೊಲ್ಲವೊವಿಶೇಷ ಪರಾಕ್ರಮ ಅಲ್ಲವೊಅರ್ಜುನ6ಬಿರಿಗಣ್ಣು ಲಕ್ಷಣ ಹೊಲ್ಲವೊದೊಡ್ಡ ಉರಿಮಾರಿಪುರುಷನಲ್ಲವೊ7ಮರುಳುತನ ಬಲು ಹೊಲ್ಲವೊಮಕ್ಕಳ ಕೊರಳು ಕೊಯ್ದರೆ ನಾಚಿಕೆ ಇಲ್ಲವೊ ಅರ್ಜುನ 8ತಿರುಕತನ ಬಲು ಹೊಲ್ಲವೊಅತಿ ಹರಕ ನೀ ಪುರುಷನಲ್ಲವೊ ಕೃಷ್ಣ 9ಚೋರತನದಿಂದ ಬಲು ಕೆಟ್ಯೊನಿನ್ನ ಧೀರತನವ ತೋರಿಸಿ ಬಿಟ್ಯೊ 10ಕೊಡಲಿಗಡುಕತನ ಹೊಲ್ಲವೊಛಲ ಹಿಡಿದರೆ ಬಿಡುವನಲ್ಲವೊ ಕೃಷ್ಣ 11ಅಹಲ್ಯದೇವಿಯ ಕೆಡಿಸಿದನೆಂದುಬಹು ಭೋಳೆ ಬುದ್ದಿಹೇಳಲೊನಿಂದುಅರ್ಜುನ12ನಾರಿಯ ಒಬ್ಬಗೆ ಒಪ್ಪಿಸಿಕೊಟ್ಯೊನೀ ಊರು ಕೇರಿ ಹಂಬಲ ಬಿಟ್ಯೊ ಕೃಷ್ಣ 13ವೈರಾಗ್ಯವ ತೋರಿಕೊಂಡೆಲ್ಲೊನಾಗನಾರಿಯ ಕೂಡಿಕೊಂಡೆಲ್ಲೊ ಪಾರ್ಥ 14ಪೋರತನವು ಬಲು ಅಲ್ಲವೊ ಕೃಷ್ಣನಿನ್ನ ಜಾರತನವ ಬಿಡಲ್ಲಿವೊ 15ದಾರಿದ್ರ್ಯತನ ಬಲು ಹೊಲ್ಲವೊದೊಡ್ಡ ವೀರನೆಂಬೊ ಗರವು ಅಲ್ಲವೊ ಅರ್ಜುನ 16ಅನ್ನವಸ್ತ್ರವು ನಿನಗಿಲ್ಲವೊಬಹು ಮಾನ್ಯನೆಂಬೊ ಗರವು ಅಲ್ಲವೊ ಕೃಷ್ಣ 17ರಾಜ ಲಕ್ಷಣ ನಿನಗಿಲ್ಲವೊರೂಪಮಾಜುಕೊಂಡ ಬುದ್ಧಿ ಅಲ್ಲವೊ ಅರ್ಜುನ18ದ್ವಂದ್ವ ಯುದ್ಧವÀ ಮಾಡಿದವನಲ್ಲವೊಕುದುರೆ ಚಂದಾಗಿ ಏರಿ ಓಡಲು ಬಲ್ಯೊ ಕೃಷ್ಣ 19ಕರೆದರೆ ಯುದ್ಧಕ್ಕೆ ಹ್ಯಾಗೆಂದುನೀನುತಿರುಗಿದಿ ತೀರ್ಥಯಾತ್ರೆಗಳೆಂದು ಅರ್ಜುನ 20ಕೃಷ್ಣ ಅರ್ಜುನರ ಈ ಸಂವಾದಸಂತುಷ್ಟ ರಾಮೇಶ ಕೊಡುವಮೋದ21
--------------
ಗಲಗಲಿಅವ್ವನವರು
ಕೃಷ್ಣ ತನ್ನರೂಪಇಟ್ಟಉತ್ಕøಷ್ಟ ಭಕ್ತರ ಮನೆ ಬಿಟ್ಟು ಹೋಗಲಾರದೆ ಪ.ಮಿತಿಯಿಲ್ಲದೆ ರೂಪದಿಂದ ಕುಂತಿ ಸುತರಭಕ್ತಿಗೆ ಲಕ್ಷ್ಮೀಪತಿ ಅಲ್ಲೆ ನಿಂತಮಿತರೂಪ ದ್ವಾರಕೆಗೆ ಬಂದಇಂಥ ಅತಿಶಯ ಶಕ್ತಿ ನೋಡುವದೆಂಥ ಚಂದ 1ಚೆಲ್ವನ ನೋಡುವರು ಜನರುಮನೆ ಒಲ್ಲದೆ ಜರಿದಾತನಲ್ಲೆ ಇದ್ದರುಫುಲ್ಲನಾಭನರೂಪಚಾರುಇದಕೆಲ್ಲರೂ ನಗಲುಹೃದಯದಂಬರದಲ್ಲಿ ತುಂಬಿದರು 2ಧಿಟ್ಟ ಬೊಮ್ಮಾದಿಗಳೆ ಸಾಕ್ಷಿಇದನಷ್ಟು ಬಲ್ಲಂಥ ಶಿವನೊಬ್ಬ ಸಾಕ್ಷಿಅಷ್ಟ ದಿಕ್‍ಪಾಲಕರೆ ಸಾಕ್ಷಿಮತ್ತಷ್ಟು ವೈಭವದ ಸುರರೆಲ್ಲ ಸಾಕ್ಷಿ 3ಭಕ್ತ ಪ್ರಲ್ಹಾದನೆ ಸಾಕ್ಷಿಇಂಥ ಉತ್ತುಮನೆನಿಸುವ ಧ್ರುವನೊಬ್ಬ ಸಾಕ್ಷಿಸತ್ಯ ಅಜಮಿಳನೊಬ್ಬ ಸಾಕ್ಷಿನಮ್ಮ ಮಿತ್ರಿ ದ್ರೌಪತಾದೇವಿ ಅತ್ಯಂತ ಸಾಕ್ಷಿ 4ಪಂಡಿತಬಲಿಯೊಬ್ಬ ಸಾಕ್ಷಿಜಲದಿ ಕಂಡ ಅಕ್ರೂರ ಅವನೊಬ್ಬ ಸಾಕ್ಷಿಪುಂಡರೀಕನೊಬ್ಬ ಸಾಕ್ಷಿರಮಿಗಂಡ ಭಕ್ತರ ಕಾದು ಕೊಂಡಿಹ ನಿಜ 5
--------------
ಗಲಗಲಿಅವ್ವನವರು
ಕೃಷ್ಣ ನಿನ್ನಂಥ ಕೂಸೆಲ್ಲಿ ಕಾಣೆ ಜಗದಿ ಹೊರಗೆದೃಷ್ಟಿ ತಾಕೀತು ಹೋಗಬೇಡೆಂದು ಎಷ್ಟು ಹೇಳಲಿ ಮಗನೆ ಪ.ಗೊಲ್ಲತೀರೆಳೆ ಮಕ್ಕಳ ಗುಣವ ನೋಡಬಾರದೊಹೊಲ್ಲತನ ಬೇಡ ಮನೆ ಹೊಂದಿರೊ ಅಯ್ಯಫುಲ್ಲಲೋಚನ ನೀಯೆನ್ನ ಪ್ರಾಣದ ಪದಕವಯ್ಯಪಳ್ಳಿಯ ಗೋಪರೈದಾರೆ ಪುಟ್ಟ ನಿನ್ನ್ಯೆತ್ತ ನೋಡಲೊ 1ತರಳರಂಗಿ ಕುಲಾಯವ ತೊಟ್ಟು ನಿಂತಿಹರು ಕಂಡ್ಯಹಿರಿಯ ಗುಮ್ಮಗಂಜುವೆ ಹೆದರಿ ಕಂಡ್ಯಬರಿಮೈಯಾ ಬಿಸಿಲೊಳು ಬಾಡಿತೊ ಮಂಗಳ ಮುಖಬರಿದೆ ಬೊವ್ವ ಕಚ್ಚದೇನೊ ಬೆಟ್ಟದ ಭಾಗ್ಯನಿಧಿಯ 2ಕಂದ ಬರಲೆಂದುಣದೆ ಕುಳಿತಿಹನೊ ನಿಮ್ಮಯ್ಯಹೊಂದಳಿಗೆ ಪಾಯಸ ಹಸನಾಗಿದೆಅಂದದಿ ಸಕ್ಕರೆ ತುಪ್ಪ ಅನುಗೂಡಿಸುಣಿಸುವೆತಂದೆ ಪ್ರಸನ್ನವೆಂಕಟ ನಿನಗೆ ಹಸಿವೆ ಮರೆದೆಯೊ 3
--------------
ಪ್ರಸನ್ನವೆಂಕಟದಾಸರು
ಕೃಷ್ಣ ನಿಮ್ಮೆಲ್ಲರ ಬಿಟ್ಟನೆಒಬ್ಬ ಶ್ರೇಷ್ಠ ನಾರಿಯಮೇಲೆ ಮನಸಿಟ್ಟನೆ ಪ.ಸತ್ಯ ಸುಶೀಲಳು ಅವಳಮ್ಮಜನಕೆ ತತ್ವ ಬೋಧಿಸುವಳು ಇವಳಮ್ಮ 1ಕಾಂತೆ ಕೋಮಲ ಹೃದಯದವಳಮ್ಮಬುದ್ಧಿ ಭ್ರಾಂತಿ ಗೈಸುವವಳಿವಳಮ್ಮ 2ತಪ್ಪದೆ ಸಲಹುವಳವಳಮ್ಮಜನಕೆ ಒಪ್ಪುವ ಗುಣವ ತೋರುವಳಿವಳಮ್ಮ 3ಶ್ರೀಶನ ಬಿಡದಿಹಳವಳಮ್ಮಅತಿ ಮೋಸಗಾರುತಿಯು ಇವಳಮ್ಮ 4ಉತ್ತಮಳು ರಮಾ ಅವಳಮ್ಮಅತಿ ಕೀರ್ತಿಯ ಪಡೆದಿಹಳಿವಳಮ್ಮ 5
--------------
ಗಲಗಲಿಅವ್ವನವರು
ಕೃಷ್ಣ ನೀನೆ ರಕ್ಷಿಸೆನ್ನ |ಪಕ್ಷಿಗಮನ | ಲಕ್ಷ್ಮೀರಮಣ ||ಸೃಷ್ಟಿಗೊಡೆಯಾ ಜಿಷ್ಣುಪ್ರೀಯ |ದುಷ್ಟ ಹನನಾ ಶಿಷ್ಟ ಸ್ಮರಣಾ 1ಯಮಿಕುಲಾಳಿ | ಹೃದಯನಿಲಯಾಕಮಲನಯನಾ ವಿಮಲಚರಣಾ ||ಸುಮನಸಾದೀ | ನಮಿತ ಪಾದಂಕುಮುದಸಖನಾ ಸಮಸುವದನಾ 2ತಂದೆ ತಾಯೀ | ಯಂದ ಸಲಹೋಇಂದಿರೇಶಾ ಸುಂದರಾಸ್ಯ ||ವಂದಿಸುವೆ ಗೋವಿಂದ ನಿನಗೆ |ಸಿಂಧುವಾಸಾ ಬಂಧನಾಶಾ ||ಕೃಷ್ಣ||
--------------
ಗೋವಿಂದದಾಸ
ಕೃಷ್ಣ ಮಂತ್ರವ ಜಪಿಸೊ - ಏ ಮನುಜ |ಕೃಷ್ಣ ಮಂತ್ರವ ಜಪಿಸೊ ಪ.ವೈಷ್ಣವೋತ್ತಮನಾಗಿ ವಿಷ್ಣುವೆ ಗತಿಯೆಂದು ಅಪಜಪತಪಾನುಷ್ಟಾನ ಸ್ನಾನಕ್ಕೆ ಈ ಮಂತ್ರ |ಕಪಟಬುದ್ದಿಗಳನ್ನು ಕಟ್ಟುವ ಮಂತ್ರ ||ಉಪದೇಶದಲಿ ಜ್ಞಾನಕೊಟ್ಟು ಸಲಹುವ ಮಂತ್ರ |ಸುಪವಿತ್ರ ಮಾಡಿ ಸ್ವರ್ಗ ಸೂರೆಗೊಡುವ ಮಂತ್ರ 1ಸಕಲ ಸಾಧನೆಗಳಿಗೆ ಸಾರಭೂತದ ಮಂತ್ರ |ನಿಖಿಳ ದೇವರಿಗೆಲ್ಲ ಸಾಕ್ಷಿ ಭೂತದ ಮಂತ್ರ ||ಭಕುತಿಯಲಿ ದ್ರೌಪದಿಯ ಭಜಿಸಿದ ಈ ಮಂತ್ರ |ಮುಕುತಿಯ ಕೊಟ್ಟು ಜನರ ಪೋಷಿಸುವ ಮಂತ್ರ 2ಭಾವಿಸಲಣುರೇಣು ಪರಿಪೂರ್ಣವಾದ ಮಂತ್ರ |ಜೀವಗಳಿಗೆಲ್ಲ ಸಂಜೀವ ಮಂತ್ರ ||ಪಾವನ ಮಾಡಿ ಪಾಲಿಪುದೀ ಮಂತ್ರ |ದೇವ ಪುರಂದರವಿಠಲ ಮಹಾ ಮಂತ್ರ 3
--------------
ಪುರಂದರದಾಸರು
ಕೃಷ್ಣ ರಕ್ಷಿಸೆನ್ನ ಜಯ ಜಯಪಕ್ಷಿರಾಜಗಮನಾದುಷ್ಟಹನನ ಜಲಜಾಕ್ಷ ಜನಾರ್ದನಶಿಷ್ಟ ಜನರ ಮನದಿಷ್ಟ ಪ್ರದಾಯಕ ಪಗೋಕುಲದೊಳು ನೆಲಸಿ ದೈತ್ಯರ-ನೇಕರನು ಮಥಿಸಿಲೋಕದ ಜನರಿಗೆ ರೀತಿಯ ತೋರುತ-ನೇಕರ ಮನೆ ಮನೆ ಬೆಣ್ಣೆಯ ಭುಜಿಸಿದ 1ದ್ವಾರಕೆಯೊಳು ನಿಂತೆ ಕೌರವವೀರಗಾಯುಧವಿತ್ತೆಸಾರಥಿಯಾಗುತೆ ಧಾರುಣಿ ಗೆಲಿಸಿದೆಧೀರ£Àುನೀ ಗೋವಿಂದನೆ ದಾಸನೆ 2
--------------
ಗೋವಿಂದದಾಸ
ಕೃಷ್ಣ ಲೀಲಾನಂದ ನೋಡಿರೈಕೃಷ್ಣಾಕೃತಿಯ ಚಂದ ನೋಡಿರೈಕೃಷ್ಣ ಗೋಪಿಗಮ್ಮೆಂದ ನೋಡಿರೈಕೃಷ್ಣ ಬಾಲಮುಕುಂದನ ನೋಡಿರೈ ಪ.ಬಾಲರ ವಿಭು ಬೆಣ್ಣೆ ಮೊಸರ ಸವಿದು ಗೋಪಬಾಲೇರ ವಿಭಾಡಿಸಿ ಮೆಲುವಬಾಲರವಿಭಾ ನಖತೇಜನೊಳಾಡುವಬಾಲರ ವಿಭವವ ನೋಡಿರೈ 1ಸಮವಾಯಿ ಕಾರಣನಲ್ಲಾ ಜಗಕೆ ತಾನುಸಮವಯ ಗೋವರ್ಗೆಳೆಯನಾದನುಸಮವೆ ಇಲ್ಲೆಶೋದೆನಂದರ ಭಾಗ್ಯ ಮಗನಾದಶಾಮಮೈಯವನ ಮುದ್ದು ನೋಡಿರೈ 2ಕಣ್ಣಲ್ಲಲಸದೆ ವಿಶ್ವವ ಹೊರೆದಕಣ್ಣಿಲ್ಲೊಲಿದು ಕಟ್ಟಿಸಿಕೊಂಡನುಕಣ್ಣಲ್ಲಾಲಯವುಳ್ಳ ಪ್ರಸನ್ವೆಂಕಟೇಶನಕಣ್ಣಲಿ ಲಯವಿಟ್ಟು ನೋಡಿರೈ 3
--------------
ಪ್ರಸನ್ನವೆಂಕಟದಾಸರು
ಕೃಷ್ಣನ ತಂಗಿಯರೆಂಬೊ ಗರವಿಲೆಇಷ್ಟು ನುಡಿದಾರೆ ಇವರುನಮ್ಮನೆಗೆ ಬಂದಿನ್ನೆಷ್ಟುನುಡಿದಾರೆ ಪ.ಕೃಷ್ಣನ ಮನದಿ ನೆನಸಿಮುಯ್ಯದ ಸುದ್ದಿ ಅಷ್ಟು ಲೋಕಕ್ಕ ಮೆರೆಸಿಅಷ್ಟದಿಕ್ಕಿನ ಶ್ರೇಷ್ಠರಾಯರ ಕರೆಸಿಇಟ್ಟಮುದ್ರಿಕೆತೆಗಿಸಿಧಿಟ್ಟೆಯರು ಮುಯ್ಯವಿರಸಿನ್ನೆಷ್ಟು ನುಡಿದಾರೆ ಇವರು 1ಹರಿಯ ತಂಗಿಯರೆಂದು ದ್ರೌಪತಿಭದ್ರ ಗರವಿಲೆ ಮುಯ್ಯ ತಂದುರಾತ್ರಿಲೆ ತಮ್ಮ ಕರೆಯ ಬರಲಿಲ್ಲವೆಂದುಭರದಿ ಕೋಪಿಸಿ ಬಂದುಸರಿಯವರುನಗತಾರೆಇನ್ನೆಷ್ಟು ನುಡಿದಾರೆ ಇವರು 2ಬೇಗನೆ ಮುಯ್ಯಾ ತಂದುರಂಗನ ಯಾವಾಗ ನೋಡೆವೆಂದುಸೋಗುಮಾಡುತಬಾಗಿಲೊಳುನಿಂದುಬೀಗವ ತೆಗೆಸಿರೆಂದು ಕೂಗಾಡಿದರಿನ್ನೆಷ್ಟು ನುಡಿದಾರೆ ಇವರು 3ಸುಳ್ಳು ಮುಯ್ಯವ ತಂದುಹರಿಯಲ್ಲೆ ಸ್ನೇಹ ಬಳ್ಳಿಯ ಸುತ್ತಿಕೊಂಡುಜನರೊಳು ಬಹಳ ಒಳ್ಳೆಯವರೆನಿಸಿಕೊಂಡುತಳ್ಳಿಮಾತಾಡಿಕೊಂಡುತಳಮಳತಾವೆಗೊಂಡುಇನ್ನೆಷ್ಟು ನುಡಿದಾರೆ ಇವರು 4ರಮ್ಮಿ ಅರಸನ ಎದುರುದ್ರೌಪತಿ ಭದ್ರೆ ಹೆಮ್ಮಿಲೆ ದೂರಿದರುಎಲ್ಲರು ನಗಲು ಜಮ್ಮನೆ ನಾಚಿಹರುನಮ್ಮನ ಕರೆಯದೆ ಒಳಗೆಗುಮ್ಮನಂತೆ ಅಡಗಿದೆರಿನ್ನೆಷ್ಟು ನುಡಿದಾರೆ ಇವರು 5
--------------
ಗಲಗಲಿಅವ್ವನವರು
ಕೃಷ್ಣನ ನೆನೆವನೆ ಅಜ್ಞಾನಿ | ಸ್ವಾಮಿ |ಕೃಷ್ಣನ ಮರೆವನೆ ಸುಜ್ಞಾನೀ ಪಕೃಷ್ಣನಅನುದಿನಸ್ಮರಣೆಗೈವನೆ | ದುಷ್ಟ |ಕೃಷ್ಣನ ಪರಿಪರಿ ಜರೆವನೆ ಶ್ರೇಷ್ಠ ಅ.ಪಕೃಷ್ಣನ ಸ್ಮರಿಸೀಗ ಬದುಕಿದರುಂಟೇ |ಕೃಷ್ಣನ ನಂಬೀಗ ಜನಿಸಿದರುಂಟೇ ||ಕೃಷ್ಣ ಸೇವೆಯನಿತ್ಯಮಾಡುವನೆ ತುಂಟ |ಕೃಷ್ಣನಾಜೆÕಗೆ ತಪ್ಪಿ ನಡೆವನೆ ಬಂಟ 1ದುರುಳರ ಕಂಡು ತಾ ಪೊರೆವನೆ | ಕೃಷ್ಣ |ಶರಣರ ನೋಡೀಗ ಮುರಿವನೇ ಕೃಷ್ಣ ||ಮೊರೆಯಿಟ್ಟು ಕರೆದರೆ ಬಾರನೆ ಕೃಷ್ಣ |ಕರುಣದಿ ಇಷ್ಟಾರ್ಥ ಕೊಡನೇ ಶ್ರೀಕೃಷ್ಣ 2ಧನ್ಯನೆ ಕೃಷ್ಣನ ನೆನೆವನೆ ಪಾಪಿ |ಮೌನದಿ ಕೃಷ್ಣ ಎಂಬನೇ ಮೂಗ ಕೋಪಿ ||ಮಾನ್ಯನೇ ಕೃಷ್ಣನ ನೋಡದ ಕುರೂಪಿ |ಮುನ್ನ ಗೋವಿಂದದಾಸರಿಗೆಲ್ಲ ಗೋಪಿ 3
--------------
ಗೋವಿಂದದಾಸ
ಕೃಷ್ಣನಾಮಾಮೃತ ರುಚಿಕರವೆಲ್ಲವುಶ್ರೇಷ್ಠ ಭಕ್ತರಿಗಲ್ಲದೇದುಷ್ಟಮಾನವಮತಿಹೀನಗೆಪೇಳಲು ಇಷ್ಟವಾಗಲು ಬಲ್ಲುದೇ ಪಗುಡಶೈಲದಲಿ ಲಿಂಬೆ ಬೀಜ ಪ್ರತಿಷ್ಠಿಸೆಫಲವು ಮಧುರವಹುದೆ ಗುಡುಗುಮೋಡಕೆ ಮಯೂರವು ಕುಣಿದಂತೆಕುಕ್ಕುಟ ನೋಡಿ ಕುಣಿವುದೆ ಸುಡುವಗ್ನಿಯಲಿಬೀಜಬಿತ್ತಿ ನೀರೆರೆದರೇ ಗಿಡವಾಗಿ ಶೋಭಿಪುದೇಪೊಡವಿಯೊಳಗೆ ಲಕ್ಷ್ಮೀಯೊಡೆಯನಚರಿತೆಯ ಮೂಢಮಾನವಬಲ್ಲನೇ 1ವೀಣೆಯ ನುಡಿಸುತ್ತ ಗಾಯನ ಹಾಡಲುಕೋಣಗೆ ಹಿತವಹುದೆ ಸಾಣೆಕಲ್ಲನುಬಿಸಿನೀರಿನೊಳಿಟ್ಟರೆ ಮೇಣದಂತಾಗುವುದೇಜಾಣತನದಿ ವೇದ ಓದಿದ ಹೊಲೆಯನುಬ್ರಾಹ್ಮಣನೆನಿಸುವನೆ ಕ್ಷೋಣಿಯೊಳಗೆವಾಸುದೇವನ ಚರಿತೆಯ ಹೀನಮತಿಯು ಬಲ್ಲನೆ 2ಕೋಗಿಲೆ ಸಾಕಿದ ಕಾಗೆಯ ಮರಿ ತನ್ನ ರಾಗದಿಮೋಹಿಪುದೇ ನಾಗರಹಾವಿಗೆ ಹಾಲೆರೆದರೆನಿತ್ಯವಿಷವ ನೀಗಿಸಿಕೊಂಬುದೇ ಭೋಗದಾಸೆಯಸ್ತ್ರೀಗೆ ವಿಟನ ಮೇಲಲ್ಲದೇ ಯೋಗಿಯೊಳ್ಹಿತವಹುದೇ ಸಾಗರಶಯನ ಗೋವಿಂದನಮಹಿಮೆಯಭೋಗಾಸಕ್ತನು ಬಲ್ಲನೇ 3
--------------
ಗೋವಿಂದದಾಸ
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿರೆ ಪಮಸ್ತಕದಲಿ ಮಾಣಿಕದ ಕಿರೀಟಕಸ್ತುರಿ ತಿಲಕವು ಹೊಳೆವಲಲಾಟ||ಹಸ್ತದಿ ಕೊಳಲನೂದುವ ನರೆ ನೋಟಕೌಸ್ತುಭದೆಡ ಬಲದೊಳು ಲೋಲಾಟ 1ಮಘಮಘಿಸುವ ಸೊಬಗಿನ ಸುಳಿಗುರುಳುಚಿಗುರು ತುಳಸಿವನ ಮಾಲೆಯಿಟ್ಟ ಕೊರಳುಉಗುರಿಗೆ ಹೊನ್ನ ಮುದ್ರಿಕೆಯಿಟ್ಟ ಬೆರಳುಸೊಗಸಿನ ನಾಭಿಯು ತಾವರೆಅರಳು2ಉಡುದಾರಒಡ್ಯಾಣಸಕಲಾಭರಣಬೆಡಗಿನ ಪೀತಾಂಬರ ರವಿಕಿರಣ ||ಕಡಗಗಗ್ಗರಗೆಜ್ಜೆ ಇಕ್ಕಿದಚರಣಒಡೆಯಪುರಂದರವಿಠಲನ ಕರುಣ3
--------------
ಪುರಂದರದಾಸರು
ಕೃಷ್ಣಲೀಲೆಅಕ್ಕ ನಂದಗೋಪನ ಅರಮನೆಯೊಳಗೊಬ್ಬ |ಅಕ್ರೂರ ಬಂದನಂತೆ ಪಹೊಕ್ಕು ಬಳಕೆಯಿಲ್ಲ ಹೊಸಬನು ಇವನಂತೆ |ಇಕ್ಕೋ ಬಾಗಿಲ ಮುಂದೆ ಈಗ ರಥವ ಕಂಡೆ ಅ.ಪಮಧುರಾ ಪಟ್ಟಣವಂತೆ ಮಾವನ ಮನೆಯಂತೆ |ನದಿಯ ದಾಟಲುಬೇಕಂತೆ ||ಎದುರು ಅರಿವಿಲ್ಲದಂತೆ ಏನೆಂಬೆ ಏಣಾಕ್ಷಿ |ಉದಯದಿ ಪಯಣವಂತೆ 1ಒಳ್ಳೆ ವೇಳೆಗಳಂತೆ ಬಿಲ್ಲುಹಬ್ಬಗಳಂತೆ |ಎಲ್ಲಾ ಬೀದಿ ಸಿಂಗರವಂತೆ ||ಮಲ್ಲರ ಕೂಟವಂತೆ ಮತ್ತೆ ಕಾಳಗವಂತೆ |ಅಲ್ಲೆ ತಾಯ್ತಂದೆಗಳ ಕಾಲಿಗೆ ನಿಗಳವಂತೆ 2ಮತ್ತೆ ಪಾಂಡವರಂತೆ ಮೋಹದ ಸೋದರರಂತೆ |ಅತ್ತೆಯ ಮಕ್ಕಳಂತೆ ||ಸುತ್ತ ಶತ್ರುಗಳಂತೆ ಸಕಲ ಕಾರ್ಯಗಳಂತೆ |ಚಿತ್ತಜನಯ್ಯನ ಚಿತ್ತ ಎರಡಾಯ್ತಂತೆ 3ಅಲ್ಲಿ ಪುಟ್ಟಿದನಂತೆ ಅರಸನಳಿಯನಂತೆ |ಇಲ್ಲಿಗೆ ಬಂದನಂತೆ ||ಕಳ್ಳಕಪಟನಂತೆ ಎಂದಿಗೂ ಹೀಗಂತೆ |ನಿಲ್ಲದೆ ಯಶೋದೆಗೆ ಕಣ್ಣ ನೀರಂತೆ 4ತಾಳಲಾರೆವು ನಾವು ಪುರಂದರವಿಠಲನ |ಕಾಣದೆ ನಿಲಲಾರೆವೆ ||ಕಾಲದಲೊಂದಾಗಿ ಕಾಮಿನಿಯರು ಕೂಡಿ |ಆಲಸ್ಯವಿಲ್ಲದೆ ಆಣೆಯಿಡುವ ಬನ್ನಿ
--------------
ಪುರಂದರದಾಸರು
ಕೃಷ್ಣವೇಣಿ164ನಮೋ ನಮೋ ಕೃಷ್ಣವೇಣಿನಮೋ ನಮೋ ಕೃಷ್ಣವೇಣಿ ಕಲ್ಯಾಣಿ ಪ.ಈ ಜನ್ಮದಘವು ನಾನಾ ಜನ್ಮಕೃತದೋಷಆರ್ಜಿತವಾದ ಪಂಚ ಮಹಾಪಾಪವುತ್ರಿಜಗತ್ಪಾವನಿಯೆ ನಿನ್ನ ಕಂಡು ನಾ ಕಳೆದೆರಾಜಿಸುವ ದಿವ್ಯಗತಿಯೀಯೆ ಎನ್ನತಾಯೆ 1ವಿಪ್ರಮುನಿ ಸುರನರರು ಕನ್ಯಕ್ಕೆಗುರುಬರಲುಕ್ಷಿಪ್ರನೆರೆದರು ಉಭಯತೀರವಿಡಿದುಸುಪ್ರಾರ್ಥನೆಯ ಮಾಡಿ ಆನಂದದಿ ಹರಿಯನೆ ಪ್ರಸನ್ನೀಕರಿಸಿಕೊಳ್ಳುವರಮ್ಮ 2ನಿರ್ಮಳಾತ್ಮಕÉ ಗಂಗೆ ಸಂಗೆ ಗುಣೋತ್ತುಂಗೆಹಿಂಗಿಸು ಭವವ ಪಾವನತರಂಗೆಜಂಗಮ ಜಡಾತ್ಮರನುದ್ಧರಿಸುತಿಹೆ ಸದಾಮಂಗಳ ಶ್ರೀಪ್ರಸನ್ವೆಂಕಟನೊಲುಮೆಯಲ್ಲಿ 3
--------------
ಪ್ರಸನ್ನವೆಂಕಟದಾಸರು