ಒಟ್ಟು 4326 ಕಡೆಗಳಲ್ಲಿ , 124 ದಾಸರು , 2605 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ದಯಮಾಡಲೊಲ್ಲೆ - ಎಲೊ ಹರಿಯೆ |ಮೂಕನಾಗುವರೆ ಹೀಗೆ ಪಲೋಕವನು ರಕ್ಷಿಪ ಲಕ್ಷ್ಮೀಕಾಂತನು ನೀನೇ |ವಾಕುಮೊರೆಗಳಕೇಳಿಒಲಿದು ದಯಮಾಡಯ್ಯಅ.ಪಅರ್ಥವಿಲ್ಲದ ಬಾಳ್ವೆಯು - ಇರುವುದಿದು|ವ್ಯರ್ಥವಾಗಿದೆ ಶ್ರೀಪತಿ ||ಕರ್ತುನಿನ್ನೊಳು ನಾನು ಕಾಡಿ ಬೇಡುವನಲ್ಲ|ಸತ್ವರದಿ ದಯಮಾಡೊ ತುಳಸೀದಳಪ್ರಿಯ 1ಮನದೊಳಗಿನ ಬಯಕೆ - ಎಲೈಸ್ವಾಮಿ |ನಿನಗೆ ಪೇಳುವೆನು ನಾನು ||ಬಿನುಗುದೇವತೆಗಳಿಗೆ ಪೇಳಲಾರೆವೊ ಹರಿಯೆ|ತನುಮನ ನಿನ್ನ ಕೂಡ ಇಹವು ದಯಮಾಡೊ 2ಮೂರು ಲೋಕವ ಪಾಲಿಪ - ಎನ್ನಯ ಸ್ವಾಮಿ |ಭಾರವೆ ನಿನಗೆ ನಾನು ||ಕಾರುಣ್ಯನಿಧಿ ನಮ್ಮ ಪುರಂದರವಿಠಲ ಶ್ರೀ - |ದಾರಾಮನೋಹರ ಸಾಕಾರ ದಯವಾಗೊ3
--------------
ಪುರಂದರದಾಸರು
ಏನಮಾಡಿದರೆನ್ನ ಭವಹಿಂಗದು |ದಾನವಾಂತಕ ನಿನ್ನ ದಯವಾಗದನಕ ಪಅರುಣೋದಯಲೆದ್ದು ಅತಿಸ್ನಾನಗಳ ಮಾಡಿ |ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ ||ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ |ಹರಿನಿನ್ನ ಕರುಣಾ ಕಟಾಕ್ಷವಿರದನಕ1ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ |ಅತಿ ಶೀಲಗಳನೆಲ್ಲ ಮಾಡಿ ದಣಿದೆ ||ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು |ರತಿಪತಿಯ ಪಿತ ನಿನ್ನ ದಯವಾಗದನಕ 2ದಾನವನು ಮಾಡಿದೆನು ಮೌನವನು ತಾಳಿದೆನು |ಙ್ಞÕನ ಪುರುಷಾರ್ಥಕ್ಕೆ ಮನವೀಯದೆ ||ಶ್ರೀನಾಥ ದಯಪೂರ್ಣ ಪುರಂದರವಿಠಲನ |ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ 3
--------------
ಪುರಂದರದಾಸರು
ಏನಾದರೂ ಒಂದಾಗಲಿ - ನಮ್ಮ -ಮನೆತುಂಬ ದೇವರು ಮರತುಂಡು ಕಲ್ಲು ಪಅತ್ತೆಯ ಕಣ್ಣೊಂದು ಹರಿಯಲಿ |ಮತ್ತೆ ಮಾವನ ಕಾಲು ಮುರಿಯಲಿ ||ಹಿತ್ತಲಗೋಡೆಯು ಬಿರಿಯಲಿ - ಕಾ -ಳ್ಗತ್ತಲೆಯಾದರೂ ಕವಿಯಲಿ ಹರಿಯೆ 1ಮನೆಯಗಂಡ ಮಾಯವಾಗಲಿ |ಉಣಬಂದ ಮೈದುನ ಒರಗಲಿ -ಸಿರಿ -ಮನೆಯು ಹಾಳು ಹಾಳಾಗಲಿ - ನಾ -ದಿನಿ ಅತ್ತಿಗೆಯರು ಸಾಯಲಿ ಹರಿಯೆ........... 2ಕಂದನ ಕಣ್ಣೊಂದು ಮುಚ್ಚಲಿ | ಆಚಂದ್ರಂಗೆ ಹಾವು ಕಚ್ಚಲಿ ||ದ್ವಂದ್ವಾರ್ಥವನು ಬಿಚ್ಚಲಿ ಪು -ರಂದರವಿಠಲ ಮೆಚ್ಚಲಿ ಹರಿಯೆ............ 3
--------------
ಪುರಂದರದಾಸರು
ಏನು ಧನ್ಯಳೊ ಗಿರಿಜೆ ಎಂಥ ಮಾನ್ಯಳೋ ಪಸ್ಥಾಣುವಮೂರ್ತಿಪಾದಸೇವೆತಾನೆನಿರತಮಾಡುತಿಹಳೊ ಅ.ಪಭೂತಗಣದ ಯೂಥವಿರಲುಸೂತಗಣನಾಥಾದ್ಯರಿರಲುಭೂತಪತಿಯಚರಣತೊಳೆದುತೀರ್ಥಕೊಡುತ ಬರುವಳ್ ಸಭೆಗೆ 1ನಾರದರು ದಿಕ್ಪಾಲರಿರಲುವಾರಿಜಾಸನ ವಿಷ್ಣುವಿರಲುಮಾರಹರನಿಗಾರತಿ ಎತ್ತಿತಾನೆ ಸಭೆಗೆ ತೋರಿಸುವಳು 2ವಸುಗಳ್ ಸಪ್ತ ಋಷಿಗಳಿರಲುಅಸುರ ಶಿಕ್ಷರು ನುತಿಸುತಿರಲುಪಶುಪತಿಯ ಲೇಪಿಸಿದ ಭಸ್ಮಗೋವಿಂದಾದ್ಯರಿಗೆ ಪ್ರಸಾದ ಕೊಡುವಳ್ 3
--------------
ಗೋವಿಂದದಾಸ
ಏನು ಮಾಡಿದರೇನು ಏನು ನೋಡಿದರೇನುದಾನವಾಂತಕ ನಿನ್ನನರಿಯದ ಪಾಪಿ ಪನಾನಾದೇಶವ ತಿರುಗಿ ಯಾತ್ರೆ ಮಾಡಿದರೇನುನಾನಾತೀರ್ಥವ ಮುಳುಗಿ ಸ್ನಾನ ಮಾಡಿದರೇನುನಾನಾಕ್ಷೇತ್ರದಿನಿಂದುದಾನ ಮಾಡಿದರೇನುದೀನರಕ್ಷಕ ನಿನ್ನ ಒಲುಮಿಲ್ಲದವರು 1ನಾನಾಗುಹೆಗಳ ಪೊಕ್ಕು ತಪವ ಮಾಡಿದರೇನುಮೌನದಿಂ ಕುರಿತು ಬಲುಜಪ ಮಾಡಿದರೇನುನಾನಾಶಾಸ್ತ್ರವ ಅರ್ಥಮಾಡಿದರೇನುಜಾನಕೀಶನೆ ನಿನ್ನ ದಯವಿಲ್ಲದವರು 2ನಾನಾಗುಡಿಗಳ ಪೊಕ್ಕು ಪ್ರತಿಮೆ ನೋಡಿದರೇನುನಾನಾಸತ್ಯರ ಮುಖವನಿತ್ಯನೋಡಿದರೇನುಧ್ಯಾನಿಕರಸುಲಭ ಶ್ರೀರಾಮ ನಿನ್ನಡಿಕುಸುಮಕಾಣದಧಮರು ಈ ಜಗದೊಳಗೆ ಪುಟ್ಟಿ 3
--------------
ರಾಮದಾಸರು
ಏನೇನ ದಾನವ ಮಾಡಲು - ಹರಿಯ |ಧ್ಯಾನಕೆ ಸಮವಾದ ದಾನಂಗಳುಂಟೆ ? ಪ.ದಿನಕೊಂದು ಲಕ್ಷ ಗೋದಾನವ ಮಾಡಲು |ಅನುದಿನ ಉದಕದಾನವ ಮಾಡಲು ||ಮನಶುದ್ಧವಾದ ಭೂದಾನವ ಮಾಡಲು |ವನಜನಾಭನ ಧ್ಯಾನಕೆ ಸಮವುಂಟೆ ? 1ಉತ್ತಮವಾದ ವಸ್ತ್ರವ ದಾನಮಾಡಲು |ಮುತ್ತು ಮಾಣಿಕವ ದಾನವ ಮಾಡಲು ||ಅತ್ಯಂತ ವಿದ್ಯಾ ಪ್ರದಾನವ ಮಾಡಲು |ಚಿತ್ತಜಪಿತನ ಧ್ಯಾನಕೆ ಸಮವುಂಟೆ ? 2ಶತಕೋಟಿ ಕನ್ಯಾಪ್ರದಾನವ ಮಾಡಲು |ಶತಶತ ಸುವರ್ಣ ದಾನವ ಮಾಡಲು ||ಮಿತಿಯಿಲ್ಲದೆ ಅನ್ನದಾನವ ಮಾಡಲು |ಕ್ಷಿತಿಪತಿಯ ಪಾದಧ್ಯಾನಕೆ ಸಮವುಂಟೆ ? 3ನಾನಾ ತೀರ್ಥದಲಿ ಸ್ನಾನವ ಮಾಡಲು |ಕಾನನದೊಳಗೆ ತಪವ ಮಾಡಲು |ಜಾÕನಿಯಾಗಿ ಕಾಶೀಯಾತ್ರೆಯ ಮಾಡಲು |ಜಾನಕೀಪತಿಯ ಧ್ಯಾನಕೆ ಸಮವುಂಟೆ ? 4ಧಾರಣಿ ಪಾರಣಿ ಭೀಷ್ಮಪಂಚಕ ಮಾಡಿ |ಹರುಷದಿ ವಿಷ್ಣುಪಂಚಕ ಮಾಡಲು ||ಪರಮ ಕಠಿಣ ಚಾಂದ್ರಾಯಣ ಮಾಡಲು |ಪುರಂದರವಿಠಲನ ಧ್ಯಾನಕೆ ಸಮವುಂಟೆ ? 5
--------------
ಪುರಂದರದಾಸರು
ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದನುಎಲ್ಲವನುಂಡು ತೀರಿಸಬೇಕು ಹರಿಯೆಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ತಂದೆತಾಯಿ ಬಸಿರಿಂದ ಬಂದ ದಿನ ಮೊದಲಾಗಿಒಂದಿಷ್ಟು ಸುಖವನೆ ಕಾಣೆ ನಾ ಹರಿಯೆಬಂದುದನೆಲ್ಲವನುಂಡು ತೀರಿಸದೆ ಭ್ರಮೆಗೊಂಡ ಮೇಲೇನುಂಟು ಹಗೆಯ ಜೀವನವೆ1ಎಮ್ಮರ್ಥ ಎಮ್ಮ ಮನೆ ಎಮ್ಮ ಮಕ್ಕಳು ಎಂಬಹೆಮ್ಮೆ ನಿನಗೇತಕೊ ವ್ಯರ್ಥ ಜೀವನವೆಬ್ರಹ್ಮ ಪಣೆಯೊಳು ಬರೆದ ವಿಧಿಯು ತಪ್ಪುವುದುಂಟೆಸುಮ್ಮನೆ ಇರು ಕಂಡ್ಯ ಹಗೆಯ ಜೀವನವೆ2ಅಂತರಂಗದಲೊಂದು ಅರ್ಥ ದೇಹದಲೊಂದುಚಿಂತೆಯಾತಕೆ ನಿನಗೆ ಪಂಚರೆದುರುಕಂತುಪಿತ ಕಾಗಿನೆಲೆಯಾದಿಕೇಶವರಾಯಅಂತರಂಗದಿ ನೆಲೆಗೊಳುವ ತನಕ3
--------------
ಕನಕದಾಸ
ಒಳ್ಳೆವೀರನೆಂಬೊ ಮಾತು ಸುಳ್ಳು ಕೃಷ್ಣರಾಯಮೈಗಳ್ಳನೆಂದು ಕರೆಯೋರಲ್ಲೊ ಅಜರ್ಂುನರಾಯ ಪ.ವೀರಮಾಗಧಯುದ್ಧಕ್ಕೆ ಬಾರೆಂದು ಕರೆಯಲು ಅಂಜಿನೀರೊಳಗೆ ಹೋಗಿ ಅಡಗಿದೆಯಲ್ಲೊ ಶ್ರೀಕೃಷ್ಣರಾಯ 1ಯುದ್ಧ ಮಾಡುವೆನೆಂದು ಸನ್ನದ್ದನಾಗಿ ಬಂದು ಅಂಜಿಗುದ್ದುಹೊಕ್ಕೆಯಲ್ಲೊ ನೀನು ಅರ್ಜುನರಾಯ2ಜರಿಯ ಸುತನು ಯುದ್ದದಲ್ಲಿ ಕರಿಯೆ ಅಂಜಿಕೊಂಡು ನೀನುಗಿರಿಯಮರೆಯಲ್ಲಡಗಿದೆಲ್ಲೊ ಶ್ರೀ ಕೃಷ್ಣರಾಯ 3ಬಿಂಕದಿಂದ ಬಾಣ ಧರಿಸಿ ಶಂಕಿಸದೆ ಅಂಜಿ ಬಂದುಮಂಕು ಮನುಜರಂತೆ ನಿಂತ್ಯೊ ಅರ್ಜುನರಾಯ 4ದೊರೆಯು ಮಾಗದ ಯುದ್ದಕ್ಕೆ ಬಾರÉಂದು ಕರೆದರೆ ಅಂಜಿವರಾಹನಾಗಿ ಓಡಿದೆಲ್ಲೊ ಶ್ರೀ ಕೃಷ್ಣರಾಯ 5ಪೊಡವಿರಾಯರೆಲ್ಲ ಒಂದಾಗಿ ಬಿಡದೆ ಯುದ್ಧಮಾಡೆನೆಂಬೊಬಡಿವಾರವು ಎಷ್ಟು ನಿನಗೆ ಅರ್ಜುನರಾಯ 6ಬಿಲ್ಲು ಧರಿಸಿ ಮಾಗಧನು ಬಿಲ್ಲಿಗೆ ಬಾ ಎಂದು ಕರಿಯೆಹಲ್ಲು ತೆರೆದು ಹೆದರಿಕೊಂಡ್ಯೊ ಶ್ರೀಕೃಷ್ಣರಾಯ 7ಸಿಟ್ಟಿನಿಂದಕರ್ಣಬಾಣ ಬಿಟ್ಟನಯ್ಯ ನಿನ್ನ ಮ್ಯಾಲೆಕೊಟ್ಟಿಯಲ್ಲೊ ಮುಕುಟವನ್ನು ಅರ್ಜುನರಾಯ 8ಹಲವುರಾಯರೆಲ್ಲ ನಿನ್ನ ನೆಲಿಯುಗಾಣದಂತೆÀ ಮಾಡೆಬಲಿಯ ಹೋಗಿ ಬೇಡಿದೆಲ್ಲೊ ಶ್ರೀ ಕೃಷ್ಣರಾಯ 9ಕರ್ಣನ ಬಾಣವು ನಿನ್ನಹರಣಮಾಡಲೆಂದು ಬರಲುಮರಣ ತಪ್ಪಿಸಿದೆನಲ್ಲೊ ನಾನು ಅರ್ಜುನರಾಯ 10ನಡವಕಟ್ಟಿ ವೈರಿಗಳ ಹೊಡೆಯಲಿಕ್ಕೆ ಅರಿವೊ ಕೃಷ್ಣಕಡಿಯಲಿಕ್ಕೆ ಜಾಣನಯ್ಯ ಶ್ರೀ ಕೃಷ್ಣರಾಯ 11ಎಷ್ಟು ಗರ್ವದಿಂದ ದ್ವಿಜಗೆಕೊಟ್ಟೊ ಭಾಷೆ ಶಪಥ ಮಾಡಿನಷ್ಟವಾಯಿತಲ್ಲೊ ವಚನ ಅರ್ಜುನರಾಯ 12ಎಲ್ಲ ವ್ಯಾಪ್ತಿ ಎಂಬೊ ಮಾತು ಎಲ್ಲಿದೆಯೊ ಈಗನಿನ್ನವಲ್ಲಭೆಯ ಒಯ್ದನ್ಹ್ಯಾಂಗೊ ಶ್ರೀಕೃಷ್ಣರಾಯ 13ಧೀರಾಧೀರರೆಲ್ಲ ಕೂಡಿ ವೀರನೆಂದು ಪೊಗಳಲುನಾರಿಯ ಸೀರೆಯ ಹ್ಯಾಂಗ ಸೆಳಿದಾನಯ್ಯ ಅರ್ಜುನರಾಯ 14ಶಂಭರಾರಿ ಪಿತನೆ ನಿನ್ನಜಂಬವೆಷ್ಟು ಕದ್ದುಕೊಂಡುತಿಂಬೋದಕ್ಕೆ ಜಾಣನಯ್ಯ ಶ್ರೀಕೃಷ್ಣರಾಯ 15ಎಷ್ಟುಗರುವ ನಿಮ್ಮೆಲ್ಲರ ಅಷ್ಟಗುಣವ ನಾನ ಬಲ್ಲೆಹೊಟ್ಟೆಬಾಕ ಭೀಮನಯ್ಯ ಅರ್ಜುನರಾಯ 16ಬತ್ತಲೆಂದು ನಗಲು ಜನರು ಮತ್ತೆನಾಚಿ ಕುದುರೆಯನ್ನುಹತ್ತಿಕೊಂಡು ಓಡಿದೆಲ್ಲೊ ಶ್ರೀ ಕೃಷ್ಣರಾಯ 17ವ್ಯರ್ಥಕೈಪ ಧರಿಸಿ ಕನ್ಯೆ ಎತ್ತಿಕೊಂಡು ಒಯ್ದಮ್ಯಾಲೆಹತ್ತು ಜನರು ನಕ್ಕರಲ್ಲೊ ಅರ್ಜುನರಾಯ 18ಕೃಷ್ಣಾರ್ಜುನರ ಈ ಸಂವಾದ ಸಂತುಷ್ಟನಾಗಿ ರಮಿ ಅರಸುಇಷ್ಟಾರ್ಥವ ಕೊಡಲಿ ನಮಗೆ ಶ್ರೀ ಕೃಷ್ಣರಾಯ 19
--------------
ಗಲಗಲಿಅವ್ವನವರು
ಓಡಿ ಹೋಗುವರೇನೋ ಜಾಣ ಪಾರ್ಥನೋಡಿ ಬಲ್ಲೆವೊ ನಿಮ್ಮತ್ರಾಣಪ.ಹೆಣ್ಣುತನದಿ ಒಳಗೆ ಸೇರಿದಿನಮ್ಮ ಕಣ್ಣಿಗೆ ಬೀಳದೆ ಹಾರಿದಿಬಣ್ಣವ ಬಹಳ ಬಹಳ ತೋರಿದಿನಮ್ಮಣ್ಣ ಬಲರಾಮನ ಇದುರಿಗೆ ಬಾರದೆ 1ಹೊಳೆವು ಎಷ್ಟು ಹೇಳಲೊ ನಿನ್ನಶೌರ್ಯ ತಿಳಿದೀತುಘನಮಹಿಮನಘನಬಳೆಯ ನಿಟ್ಟಿದ್ದು ಮುನ್ನಇಂಥ ಅಳಿಯ ದೊರೆತೆಲ್ಲೊರನ್ನ 2ಗಂಡಸಲ್ಲವೊ ಇಂಥ ಬಾಳು ನಿನಗೆಗಾಂಡೀವಿಯಾತಕೆ ಹೇಳೊಷÀಂಡನೆಂದರೆ ಇಂಥ ಬಾಳುವೆನಾಚಿಕೊಂಡು ಬರಲಿಲ್ಲೇನೊ ಹೇಳೊ 3ಬಿಲ್ಲು ಕಂಡರೆ ನಿನಗೆ ಭೀತಿಯೆಒಳ್ಳೆ ಚಲುವೆಯರ ಮ್ಯಾಲೆ ಅತಿ ಪ್ರೀತಿಯೊನಲ್ಲ ಹೀನಳ ಬೆರೆದ ಖ್ಯಾತಿಯೊಅದಕೆ ಇಲ್ಲೆ ಬರಲಿಲ್ಲಿಯೋ ಸೋತು 4ಏನು ಹೇಳಲಿ ಇಂಥ ನಿಂದ್ಯವನಿನಗೆಮಾನಿನಿಹೆರಳೇನು ಚಂದಧೇನಿಸಿ ನೋಡಲುಕುಂದಹಾಗೆ ತಾನು ರಾಮೇಶ ಅಂದ 5
--------------
ಗಲಗಲಿಅವ್ವನವರು
ಔತುಕೊಂಡಿ ಯಾಕೊ ನರಹರಿಪ್ರಾರ್ಥನೆಯನ್ನು ಕೇಳೊ ಸ್ವಾಮಿ ಪವೇದ ತಂದುಭಾರಪೊತ್ತುಕೋರೆ ತೋರಿ ಕರುಳ ಬಗೆದುಬೇಡಿ ಭೂಮಿ ದೂಡಿನೃಪರಸಾಗರವ ಬಂಧಿಸಿದ ಭಯವೋ 1ಕದ್ದು ಬೆಣ್ಣೆ ಕಳ್ಳನೆನಿಸಿವದ್ದು ತ್ರಿಪುರಾಸುರರ ಸದೆದುಹದ್ದನೇರುವುದನೆ ಬಿಟ್ಟುಹಯವನೇರಿದ ಭಯವೋ ಸ್ವಾಮಿ 2ತರಳಗೊಲಿದು ಬರಲು ನಿನ್ನಇರಿಸಿ ಸ್ನಾನಕೆನುತ ಪೋಗಿತ್ವರದಿ ಬಂದು ನೋಡಲು ಅದ್ಭುತದಿ ಬೆಳೆದ ಭಯವೋ ದೇವ 3ನಿಲುಕದಿರಲು ನಿನ್ನವದನಯುವಕ ನೋಡಿ ಮೊರೆಯನಿಡಲುತವಕಿಸುವಿ ಬಾಲಕನೆ ನಿನ್ನಸಮಕೆ ಎನ್ನ ಮಾಡಿಕೊ ಎಂದು 4ಸಿರದಿ ಕರವನಿಡುತ ತನ್ನಸಮಕೆ ಬರುವ ತೆರದಿ ನಿನ್ನಸಿರವ ಪಿಡಿದು ಬಿತ್ತಿ ಸ್ತುತಿಸೆಕುಳಿತೆ ಕೂಡಲಿಯ ತೀರದಲಿ 5ಭಕ್ತರೆಲ್ಲ ನೆರೆದು ನಿನ್ನಭಕ್ತಿಪಾಶದಿಂದ ಬಿಗಿದುಇಚ್ಛೆ ಬಂದ ತೆರದಿ ಕುಣಿಸೆಮೆಚ್ಚಿಅವರಪೊರೆವೆÀ ದೇವ6ಬಂದ ಜನರು ಛಂದದಿಂದತುಂಗಭದ್ರೆ ಸಂಗಮದಲಿಮಿಂದು ನಿನ್ನ ವಂದಿಸುವರೊತಂದೆ ಕಮಲನಾಭವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ಕಂಡೆ ತಿರುಪತಿ ವೆಂಕಟೇಶನಕಾರಣಾತ್ಮಕಸಾರ್ವಭೌಮನಕಾಮಿತಾರ್ಥವನೀವ ದೇವನ ಕರುಣನಿಧಿಯೆಂದೆನಿಸಿ ಮೆರೆವನ ಪಕೋಟಿ ಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನುನೋಟಕ್ಕಚ್ಚರಿಯೆನಿಪ ನಗೆಮೊಗನೊಸಲೊಳಗೆ ತಿರುಮಣಿಯ ಕಂಡೆನುಸಾಟಿಯಿಲ್ಲದ ಶಂಖ-ಚಕ್ರವ ಚತುರ ಹಸ್ತದಲೀಗ ಕಂಡೆನುಬೂಟಕದ ಮಾತಲ್ಲ ಕೇಳಿ-ಭೂರಿದೈವದ ಗಂಡನಂಘ್ರಿಯ 1ತಪ್ಪುಗಾಣಿಕೆ ಕಪ್ಪುಗಳನು ಸಪ್ತಲೋಕಗಳಿಂದ ತರಿಸುವಉಪ್ಪು ವೋಗರವನ್ನು ಮಾರಿಸಿಉಚಿತದಿಂದಲಿ ಹಣವ ಗಳಿಸುವ ||ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ ಒಪ್ಪದಿಂದಕ್ರಯ ಮಾಡಿ ಕೊಡಿಸುವಸರ್ಪಶಯನನ ಸಾರ್ವಭೌಮನ ಅಪ್ಪವೆಂಕಟರಮಣನಂಘ್ರಿಯ 2ಉರದಿ ಶ್ರೀದೇವಿ ಇರಲು ಕಂಡೆನುಉನ್ನತದ ಕೌಸ್ತುಭವ ಕಂಡೆನುಗರುಡಕಿನ್ನರನಾರದಾದಿಗಳಿರಲು ಎಡಬಲದಲ್ಲಿ ಕಂಡೆನು ||ತರತರದಿ ಭಕ್ತರಿಗೆ ವರಗಳ ಕರೆದುಕೊಡುವುದ ನಾನು ಕಂಡೆನುಶರಧಿಶಯನನ ಶೇಷಗಿರಿವರಸಿರಿಪುರಂದರವಿಠಲನಂಘ್ರಿಯ3
--------------
ಪುರಂದರದಾಸರು
ಕಣ್ಣು ಮುಚ್ಚೆನ್ನಾ ಆಡಿಸೆಸಣ್ಣವರನ್ನು ಹೊರಗಡಗಿಸೆ ಪಗಟ್ಟಿ ಹುಡುಗರು ಅವರೆಲ್ಲಮಟ್ಟ ಮಾಯಾಗಿ ಹೋದರು ||ಥಟ್ಟನೆದ್ದು ಯನ್ನ ಕೈಯವರಮುಟ್ಟಿಸದಿರೆ ಬಿಡೆ ನಿನ್ನ 1ಪಾಯಿಸ ಹೋಳಿಗೆ ಮಾಡಿಬಾಯಿಗೆ ಕೈದೋರೆಗೋಪಿ||ನಾಯೆರುವಿನೆ ನಿನ್ನ ತಲೆಗೆನೀ ಯೆರಕೊಳ್ಳ ಒಲ್ಲೆನೆನ್ನೆ 2ಅಣ್ಣನ ರಂಬಿಸಿ ಕರೆದುಹಣ್ಣುಗಳವಗೆ ಕೊಡಬೇಡೆ ||ಚಿನ್ನದ ಗೊಂಬೆ ಬಾ ಎಂದುಬಣ್ಣ ಬಣ್ಣದಲೆನ್ನ ಕರೆಯ 3ನೀ ಹಾರ ಮಗನೆಂದುಕೇಳಿಮೇದಿನಿಯೊಳು ನಾ ಹೆಚ್ಚೆನ್ನೆ ||ಹೋದಬಾರಿಹೊಟ್ಟಿಗೆಮಾರಿಹೋದಳೂ ನಿಮ್ಮಮ್ಮನೆನೆ 4ಯನಗೆ ಪಾಪ ನೀನಾಗಿತಿನಲಿಕ್ಕಪ್ಪಚ್ಚಿ ಬೇಡೇ ||ಮಣಿಗುಂಡೆನಗೆ ಕೊಡುಯೆಂದುಮುನಸುಗುಟ್ಟೆನ್ನನು ಕಾಡೇ 5ದೃಷ್ಟಿ ತಾಕಿತು ಮಗಗೆಂದುಕಟ್ಟಿಸೆ ಯಂತ್ರ ಇನ್ನೊಮ್ಮೆ ||ಕೊಟ್ಟು ಅಮ್ಮಿಯ ರಂಬಿಸಿತೊಟ್ಟಿಲೊಳಗಿಟ್ಟು ತೂಗೇ 6ಏನು ಪುಣ್ಯ ಮಾಡಿದೆನೋಕ್ಷೋಣಿಗೆ ಹತಾರ್ಥವಾಗಿ ||ಪ್ರಾಣೇಶ ವಿಠಲನು ನಿನ್ನತಾನೇ ಕೊಟ್ಟನು ಯನಗೆನ್ನ 7
--------------
ಪ್ರಾಣೇಶದಾಸರು
ಕದ್ದು ಕಳ್ಳಿಯ್ಹಾಂಗ ಮುಯ್ಯಮಧ್ಯರಾತ್ರಿಲೆ ತಂದ ಮ್ಯಾಲೆ ಬುದ್ಧಿವಂತಳೆಸುಭದ್ರಾ ಬುದ್ದಿವಂತಳ ಪ.ಮೂರುಸಂಜಿಯಲಿ ತರುವ ಮುಯ್ಯಘೋರರಾತ್ರಿಯಲೆ ತಂದಮ್ಯಾಲೆಚೋರಳೆಂದು ನಿನಗೆ ನಮ್ಮಊರ ಜನರು ನಗತಾರಲ್ಲ 1ಒಳ್ಳೆ ಮಾನವಂತಿ ಆದ ನೀನುಕಳ್ಳರ ಕಾಲದಿ ಬಾಹೋರೇನತಳ್ಳಿಕೋರಳೆಂದು ನಮ್ಮಪಳ್ಳಿ ಜನರು ನಗತಾರಲ್ಲ 2ಬಹಳೆ ಜಾಣಳು ಆದರೆ ನೀನುಕಾಳರಾತ್ರಿಲಿ ಬಾಹೋರೇನತಾಳ ತಾಳನಿನ್ನ ಕುಶಲಹೇಳಲಿನ್ನ ಹುರುಳು ಇಲ್ಲ 3ಕತ್ತಲಲಿ ಒಬ್ಬ ದೈತ್ಯಎತ್ತಿ ಒಯ್ದರೇನು ಮಾಡುವಿಪಾರ್ಥ ರಾಯನ ಧರ್ಮದಿಂದಮಿತ್ರಿಮಾನವಉಳಿಸಿಕೊಂಡಿ4ಗಾಢ ರಾತ್ರಿಲೆ ಒಬ್ಬ ದೈತ್ಯ ಓಡಿಸಿಒಯ್ದರೇನು ಮಾಡುವಿಮಾಡೋರೇನ ಮೂರ್ಖತನವಮೂಢಳೆಂದು ಜನರು ನಗರೆ 5ಸಂಧ್ಯಾಕಾಲದಿ ಮುಯ್ಯತಂದುನಿಂತೇವ ನಿನ್ನ ದ್ವಾರದಲ್ಲಿಬಂದುನಮ್ಮನ ಕರೆಯಲಿಲ್ಲಸಂದಿ ಹೋಗಿ ಸೇರುªರೇನ 6ನೀಲವರ್ಣನ ತಂಗಿಯರಿಗೆಚಾಲವರಿದು ಕರೆದೆವಲ್ಲಮೇಲುದಯದಿ ಬಂದರೆ ನೀನುಮೂಲೆಗ್ಹೋಗಿ ಸೇರೋರೇನ 7ಭಾಮೆ ರುಕ್ಮಿಣಿ ದೇವಿಯರಿಗೆಕಾಲಿಗೆರಗಿ ಕಲೆಯೋರೆಲ್ಲಆಲಯಕೆ ಬಂದರೆ ನೀನುವ್ಯಾಲನಂತೆ ಅಡಗೋರೇನ 8ಕೃಷ್ಣರಾಯನ ತಂಗಿಯರೆಂಬೋದೆಷ್ಟಗರುವಬಿಡಿಸಲುಬಂದೆವುಪಟ್ಟು ಮಾಡಿ ಬಿಡತೇವೀಗಧಿಟ್ಟ ರಾಮೇಶ ನೋಡುವಿಯಂತೆ 9
--------------
ಗಲಗಲಿಅವ್ವನವರು
ಕಾಸು ಕನಕದಾಸೆಯಾದುದೇ | ಹರಿಗೆ |ದಾಸ ಜನರನೆಲ್ಲ ಮರೆತನೇ ಕಡೆಗೆಪವಾಸುದೇವನು ಶ್ರೀನಿವಾಸನೆನಿಸಿಕೊಂಡು |ಶೇಷಗಿರಿಯ ಮೇಲೆ ವಾಸವಾಗಿರುವವಗೆಅ.ಪಛಪ್ಪನ್ನದೇಶದ ಕಪ್ಪವ ತರಿಸುವ | ಒಪ್ಪಿ ಜನರಸರ್ವ ತಪ್ಪಪಾಲಿಸುವ |ಸರ್ಪಶಯನ ನಮ್ಮ ತಾಪತ್ರೆ ಘನವೆನಲು |ಅರ್ಪಿತವಹುದೇತಿಮ್ಮಪ್ಪ| ವೆಂಕಟ ಪತಿಗೆ ||ಕಾಸು||1ಶನಿವಾರ ಶನಿವಾರ ಮನೆ ಮನೆ ಭಿಕ್ಷೆಗೈದು |ಮಿನುಗುವ ಡಬ್ಬಿಯೊಳಿಟ್ಟು ಜನರು ಪೂಜಿಸೆ ನಲಿದು |ವನಜಾಕ್ಷ ನಿನಗೆಂದು ಕಣಜಕ್ಕೆ ಸುರಿಯೆ ತಂದು |ಮನುಮಥ ಪಿತಗೆ ನಮ್ಮ ನೆನಪು ಎಂತಹುದೋ ||ಕಾಸು||2ಗಂಧಚಂದನನಾಮತೀರ್ಥ ಪ್ರಸಾದ |ಸುಂದರವಾಹನಹರಕೆ ವಿನೋದ |ಚಂದದಿ ನೋಡಲ್ ಹರಿಯ ಧನವಿಲ್ಲದಾಗದ |ಸುಂದರಾಮೂರ್ತಿಗೋವಿಂದಗೆ ಸಾರ್ವದಾ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಕಾಳಬೆಳದಿಂಗಳು - ಈ ಸಂಸಾರ -ಕತ್ತಲೆ ಬೆಳುದಿಂಗಳು ಪ.ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |ವ್ಯರ್ಥ ಭಂಢಾರವೆಲ್ಲವನು ಸೋತು ||ಬತ್ತಲೆ ಪೋಗಿ ವಿರಾಟನ ಮನೆಯೊಳು |ತೊತ್ತಾದಳು ದ್ರೌಪದಿ ಒಂದು ವರುಷ 1ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |ಬೆಂಬತ್ತಿ ತಿರುಗುತಲಿಪ್ಪರು ||ಎಂಬಾತಗೆ ನೋಡಿ ಬಡತನ ಬಂದರೆ |ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |ಬಂಟರಂತೆ ಬಾಗಿಲ ಕಾಯ್ವರು |ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |ಹೆಂಟೆಯಾಗಿ ತಿರುಗುತಿಪ್ಪರಯ್ಯ 3ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |ಕೊಂಡು ಸಾರಥಿಯಾದ ಫಲ್ಗುಣನ ||ಮಂಡಲವಾಳವ ಹರಿಶ್ಚಂದ್ರರಾಯನು ||ಕೊಂಡು ಕಾಯ್ದ ಚಂಡಾಲನ ಮನೆಯ 4ನೊಂದಿತು ಕಾಯವು ಬೆಂದಿತುಒಡಲು |ಬೆಂದ ಒಡಲಿಗಾಗಿ ಹಾಸ್ಯಮಾಡಿ ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |ತೊಂಡನಾಗಿ ನೀ ಸುಖವಾಗಿ ಬಾಳು 5
--------------
ಪುರಂದರದಾಸರು