ಒಟ್ಟು 3371 ಕಡೆಗಳಲ್ಲಿ , 119 ದಾಸರು , 2565 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿರುಪತಿಯ ಶ್ರೀವೆಂಕಟೇಶಗೋವಿಂದಹರಿಗೋವಿಂದಪರತರ ಪರಮಾನಂದ ಪಮಂದರಗಿರಿಧÀರ ಸುಂದರಮೂರುತಿನಂದನಕಂದ ಗೋವಿಂದ ಮುಕ್ಕುಂದ ಅ.ಪದುರಿತರಾಶಿ ನಾಶ ಗೋವಿಂದಪರಮಪದವಿಗೀಶ ಗೋವಿಂದಸುರಮುನಿಸೇವಿತ ಹರಅಜವಿನಮಿತಪರಮಚರಿತ ಸಿರಿಗೋವಿಂದ 1ಹುಟ್ಟುಸಾವಿಲ್ಲದ ಗೋವಿಂದತಟ್ಟು ಮುಟ್ಟಿಲ್ಲದ ಗೋವಿಂದಸೃಷ್ಟಿ ತನ್ನಾಧೀನದಿಟ್ಟು ಆಳುವ ದಿಟಸೃಷ್ಟಿಗೆ ಸಿಲುಕದ ಗೋವಿಂದ 2ಆದಿಅಂತಿಲ್ಲದ ಗೋವಿಂದನಾದಕಲೆಯಿಲ್ಲದ ಗೋವಿಂದಸಾರಿ ಪೊಗಳುವ ವೇದಕೆ ಕಾಣದಆದಿಅನಾದಿ ಬ್ರಹ್ಮ ಗೋವಿಂದ 3ಮುಚ್ಚಲು ಮಾಜದ ಗೋವಿಂದಬಿಚ್ಚಲು ಕಾಣದ ಗೋವಿಂದಅಚ್ಚುತಾನಂತೆಂದು ಬಚ್ಚಿಟ್ಟ್ಹೊಗಳುವರಸಚ್ಚಿತ್ತದ್ಹೊಳೆಯುವ ಗೋವಿಂದ 4ನಶ್ವರವಿಲ್ಲದ ಗೋವಿಂದಶಾಶ್ವತ ಮಹಿಮೆಯ ಗೋವಿಂದವಿಶ್ವವಿಶ್ವರಕ್ಷ ವಿಶ್ವನಾಟಕ ಮಹವಿಶ್ವವಿಶ್ವಾಕರ ಗೋವಿಂದ5ಅಸಮ ಲೀಲಾಜಾಲ ಗೋವಿಂದಅಸುರಕುಲದಕಾಲಗೋವಿಂದದಶವಿಧವತಾರದಿ ವಸುಧೆಯ ಭಾರವಕುಶಲದಿಂದಿಳುಹಿದ ಗೋವಿಂದ 6ತಿಳಿಯಲು ತಿಳಿಯದ ಗೋವಿಂದತಿಳಿವಿಗೆ ಸುಲಭದ ಗೋವಿಂದಬೆಳಕುಕತ್ತಲೆದೆಸೆಸುಳಿವಿಲ್ಲದಸ್ಥಾನದ್ಹೊಳೆಯುವ ಅಕಳಂಕ ಗೋವಿಂದ 7ಭೂಷಣ ಮಣಿಮಾಲ ಗೋವಿಂದಶ್ರೀಶ ಶ್ರೀನಿವಾಸ ಗೋವಿಂದವಾಸುಕಿಶಯನ ಶೇಷಾರಿಗಮನಸಾಸಿರನಾಮದ ಗೋವಿಂದ 8ನಾಮರೂಪಿಲ್ಲದ ಗೋವಿಂದನೇಮನಿತ್ಯಿಲ್ಲದ ಗೋವಿಂದಶಾಮಸುಂದರ ಮುಕ್ತಿ ಸೋಮಭೀಮಸುಖದ್ಧಾಮ ಶ್ರೀರಾಮ ನಿಜಗೋವಿಂದ 9
--------------
ರಾಮದಾಸರು
ತುತಿಸಲಳವೇ ಶ್ರೀ ವರದೇಂದ್ರನಾ ಅಮಿತ ಮಹಿಮ |ಕ್ಷಿತಿಸುರಗುರುಸುಗುಣ ಸಾಂದ್ರನ ಮುನಿಪನ ಪಭಾಗವತರ ಪ್ರಿಯನೆನಿಪನ ಪ್ರಣತ ಜನರ |ರೋಗ ಕಳೆದು ಸುಖ ಕೊಡುವನ ಕುಮತಗಳನು |ಬೇಗ ಗೆಲಿದು ಸುಮತಿ ಕೊಡುವನ ದಯಾ ಸಮುದ್ರ |ಯೋಗಿವರ್ಯರವಿಪ್ರಕಾಶನಾ ಅನಘನ 1ರಾಘವೇಂದ್ರರನುಗ್ರಹ ಪಾತ್ರನ ವೈಷಿಕದ ಕು |ಭೋಗತೊರೆದ ನಿಷ್ಪ್ರಪಂಚನ ದುರ್ಮತಿಗಳ |ಯೋಗಕೊಲಿಯದಿಪ್ಪ ಧೀರನಭವಭಯವನು |ನೀಗಿಹರಿಯ ಸದನವ ತೋರ್ಪನಾ ವರದನ 2ಕಲಿಮಲಾಪಹಾರ ಶಕ್ತನ, ಪ್ರಾಣೇಶ ವಿಠಲ |ನೊಲಿಸಿಕೊಂಡಮಿತ ಸಮರ್ಥನ ಮಾರುತ ಮತ ||ಜಲಧಿಪೆರ್ಚಿಸುತಿಹ ಚಂದ್ರನ ಬೃಹತ್ಸು ತಟ ನೀ |ನಿಲಯಶ್ರೀ ವಸುಧೇಂದ್ರ ಪುತ್ರನ ವಿರಕ್ತನ3
--------------
ಪ್ರಾಣೇಶದಾಸರು
ತುದಿನಾಲಿಗೆ ಬೆಲ್ಲ ಎದೆಗತ್ತರಿಯವರ ಸಂಗಬೇಡಹೃದಯ ದಾಕ್ಷಿಣ್ಯವನರಿಯದ ಮನುಜರ ಪ್ರಸಂಗಬೇಡ ಪ.ಮುಂದೆ ಭಲಾ ಎಂದು ಹಿಂದಾಡಿಕೊಂಬರ ಸಂಗಬೇಡಕುಂದು - ನಿಂದೆಗಳ ಪ್ರಯೋಗ ಮಾಡುವರಪ್ರಸಂಗ ಬೇಡ 1ಆಡಿ ಅಳುಕದ ಅಜಾÕನಿ ಮನುಜರ ಸಂಗಬೇಡಕೂಡಿ ಕುಮಂತ್ರವ ಎಣಿಸುವ ನರರ ಪ್ರಸಂಗ ಬೇಡ 2ವಿನಯ - ವಿವೇಕವಿಲ್ಲದ ವಿದ್ವಾಂಸರ ಸಂಗಬೇಡತನಗಲ್ಲದಬಂಟ- ನಂಟ - ಮಿತ್ರಾಂಗಳ ಸಂಗಬೇಡ3ತಮ್ಮ ಕಾರ್ಯಕ್ಕಾಗಿ ಪರರ ಕೆಡಿಸುವರ ಸಂಗ ಬೇಡನಮ್ಮ ಪುರಂದರವಿಠಲನಿರಲನ್ಯ ಪ್ರಸಂಗ ಬೇಡ 4
--------------
ಪುರಂದರದಾಸರು
ತೇರನು ನೀವು ನೋಡಿಲ್ಲ ತಿಳಿಪುವೆ ಸಡಗರವೆಲ್ಲಚಾರುಯೋಗಿಯು ನೋಡಿಲಿದು ಚಲನೆ ಮನುಜರಿಗೆ ಸಲ್ಲದುಪಆರು ಚಕ್ರದ ಆರುನೆಲೆ ಮೂರು ಅವಸ್ಥೆಗಳ ಮೂರುಗಾಲಿಕುಂಡಲಿಎಂಬುದುಕೀಲುಚದುರಿನ ದಳಪಟ್ಟಿ ಮೇಲು1ಸಹಸ್ರಾರವೇ ಕೊನೆಯ ಸ್ಥಾನ ಸ್ವಾಮಿಯ ಸಿಂಹಾಸನಸೋಹಂ ಎಂದೆನಿಸುವ ಶಿಖರ ಸೊಗಸಿಂದಲಿಹುದು ಸುಪ್ರಕಾರ2ಸ್ಥಾನ ಸ್ಥಾನಕೆ ಒಂದು ಬೊಂಬೆ ಸಡಗರ ಏನೆಂಬೆಅನುರಾಗವೇ ಎಂಬ ಫಲವು ಆಶ್ಚರ್ಯ ತೇರಿನ ನಿಲುವು3ಹೇಷೆ ಎಂಬುವೆ ಕೋಟಿ ಚಂದ್ರ ಹೊಡೆವ ನಾದವೆ ವಾದ್ಯಸಾಂದ್ರಬಲುಹು ಆನಂದ ಸಲ್ಲಲಿ ಭಾಪು ಎನಲಿ ಸುಖದಲಿ4ಇಡಾಪಿಂಗಳ ಮಿಣಿಗಳಿಂದ ಎಳೆವುದು ಗುರುದಯದಿಂದಮೂಡಲಿಂದ ಪಶ್ಚಿಮಕ್ಕೆಗುರುಚಿದಾನಂದನ ಸ್ಥಾನಕ್ಕೆ5
--------------
ಚಿದಾನಂದ ಅವಧೂತರು
ತೋರುತಲೈದಾನೆ ಮುಕ್ತಿಯ ತೋರುತಲೈದಾನೆಸಾರಿ ಶರಣರೆಂದು ಶ್ರೀನಿವಾಸದೇವ ಪ.ಹುಲ್ಲು ಕಲ್ಲಿನ ಪೂಜೆಯ ಮಾಡಿ ಕೆಡದೆಬೆಲ್ಲದಾಸೆಗೆಂಜಲು ತಿನ್ನದೆಸೊಲ್ಲುಸೊಲ್ಲಿಗೆ ಹರಿಸರ್ವೋತ್ತಮನೆಂದುಬಲ್ಲವರು ಭಕ್ತಿಲಿ ಭಜಿಸಿರೆಂದು 1ಭುವಿಯ ವೈಕುಂಠವು ನೋಡಿರಾನತರೆಂದುನವನವ ಉತ್ಸಾಹದೊಳಿಹನುಯುವತಿ ಲಕುಮಿ ಕೂಡ ಸ್ವಾಮಿ ಪುಷ್ಕರಕೂಲಭವನದೊಳಗಿಪ್ಪ ಭಕ್ತ ಚಿಂತಾಮಣಿ 2ನೆಲೆಯೆ ಸಿಕ್ಕದ ಧರ್ಮಕರ್ಮದ ತೊಡರ ಬಿಟ್ಟಲಸದೆ ತನ್ನಂಘ್ರಿಯಾತ್ರೆ ಮಾಡಿಸುಲಭದಿ ಮೋಕ್ಷವ ಗಳಿಸಿಕೊಳ್ಳೆನುತಲಿಕಲಿಯುಗದೊಳಗೆ ಪ್ರಸನ್ನವೆಂಕಟಪತಿ 3
--------------
ಪ್ರಸನ್ನವೆಂಕಟದಾಸರು
ತೋಳೆಂಬೆನು ತೋಳೆ ಲಕುಮಿಯಾಲಂಗಿಪ ತೋಳೆಬಾಲರತ್ನ ತೋಳನ್ನಾಡೈ ಬಾಲಕೃಷ್ಣ ನಾಡೆ ಪ.ಕಂದಿ ಕುಂದ್ಯಾಕ್ರಂದಿದ ನಾಗನಬಂದೆತ್ತಿದ ತೋಳೆನೊಂದ ಕಂದನೆಂದು ತೊಡೆಯಲಿಹೊಂದಿಸಿಕೊಂಡ ತೋಳೆ 1ಹರಧನುಜರಿದುಮುರಿದವಿಕ್ರಮಬಿರುದಾಂಕನ ತೋಳೆಮರೆಯದೆ ಕರೆದರರಿದಂಬರವವರಧಿಸ್ಯುಡಿಸಿದ ತೋಳೆ 2ದಾಸವಂಶ ವಿಪೋಷ ರಿಪುಜನನಾಶಕಾರಣ ತೋಳೆಶೇಷಗಿರೀಶ ಪ್ರಸನ್ವೆಂಕಟವಾಸ ರಂಗನ ತೋಳೆ 3
--------------
ಪ್ರಸನ್ನವೆಂಕಟದಾಸರು
ತ್ವರಿತಾ ಬಾರಯ್ಯ ಹೇ ಶ್ರೀಯರಸ ವೆಂಕಟ ದೀನ |ಸುರತರುವೆ ದೇವೇಶವರಾಹಭೂಧರಧಾಮ|ಕರುಣಾ ಪಯೋದಧೆ ಸರ್ವ ರಕ್ಷಿ ಕಂಧರದೊಳ- |ಗಿರುತಿಹ ನರಗಜ ವದನನೇ ಪಇಳಿಪತಿಗಳ ಕೂಡ ಕಲಹ ಮಾಡಿ ತೋರೆಂದುಅಂಗಲಾಚಲಾ ಕುಂತೀದೇವಿ |ಗೊಲಿದಾಸೆ ಪೂರ್ತಿಸಿ ಅನಿಲಜನಾಗ ನಿನ್ನ ತೇರೊ-ತ್ತಲು ಹಿಂದಕ್ಕೆ ನೀ ನಗು- |ತ್ತಲೆ ಮುಂದಕ್ಕೆ ಬಂದಿ ದೂರಲಾಘವವಾದಿಂದಂದೀಗಹಲವು ಜನರು ಬಹು |ಬಲುವಿಂದ ರಥವನೆಳೆದರೂ ಬಾರದಿದುಖಲು ಸೋಜಿಗವೆಲೆ |ಹಲಧರನನುಜ ಕಡಲ ಮನೆ ಕಾರವಡಲ ರವಿದಶ ಧರಖಳವಿಪಿನದ್ವಿದಲ 1ಬರಬೇಡವೆಲವೊ ನಮ್ಮ ಮಂದಿರಾಕೆಂದು ಬಹಳಾ ಬೈ-ದರೂ ಮುದದಿಂದ ಗೋಪಿ- |ಯರ ಸದ್ಮಕೆ ಪೋಗುವೆಜರಿದುನಿನ್ನನು ತಾನಾತರಳನ ಕಾಯ್ವೆನೆಂದಾ |ನರನ ತಪ್ಪೆಣಿಸದೆ ಕರೆಯದಲೆ ಪೋದೆ ನಿ-ನ್ನರಮನೆಯ ತನಕಲಿ |ಎರಡೇ ಘಳಿಗೆಯೊಳು ಪರಿಪರಿ ಭಕುತ ಜನರುಗಳು ಬಿನ್ನೈ-ಪರು ಬೀದಿಗಳೊಳು |ಮೆರೆಯುತಲೀಗಲೆ ಸರಸರ ಬರುವದುಪರಮಾಯಾಸವೇ 2ಮೀನಾಕ್ಷಿ ಯಶೋದೆ ನಿನ್ನನು ಪೊತಾನೆಂದುನುಣ್ಣನೆ ತೊಟ್ಟಿಲೊಳಿಟ್ಟು |ತಾ ನುಡಿಯಲು ಜೋಗುಳಾನು ಕೇಳ್ವೆ ಕಿವಿಗೊಟ್ಟುನಾನಾಗಮ ಸಮ್ಮತ |ಗಾನ ಮಾಳ್ಪುದು ವಿದ್ವಾಂಸಾನೀಕವೀಗ ನಿನ್ನಧ್ಯಾನಕೆ ಬಾರದೆಯೇನು |ನಿನ್ನ ಬಗೆ ತಾನರಿಯಳು ಶ್ರೀಮಾನಿನಿಖಗವಹಶ್ರೀನಿಧೆ ಮೂರೊಂದು |ಹಾನಿರಹಿತ ಗದಾಪಾಣಿ ಹರಿಯೇ ಶ್ರೀ-ಪ್ರಾಣೇಶ ವಿಠಲನೆ 3
--------------
ಪ್ರಾಣೇಶದಾಸರು
ದಣಿಯ ನೋಡಿದೆನೋ ವೆಂಕಟನ ಮನದಣಿಯೆ ನೋಡಿದೆ ಶಿಖಾಮಣಿಯ ನಿರ್ಮಲನ ಪಕೇಸಕ್ಕಿಅನ್ನ ಉಂಬುವನ ದುಡ್ಡುಕಾಸು ಬಿಡದೆ ಹೊನ್ನುಗಳಿಸಿಕೊಂಬುವನ ||ದೋಸೆ ಅನ್ನವ ಮಾರಿಸುವನತನ್ನ ದಾಸರ ಮೇಳದಿ ಕುಣಿದಾಡುತಿಹನ 1ಗಂಟಿನೊಲ್ಲಿಯ ಹೊದ್ದಿಹನ-ಹೊರಹೊಂಟು ಹೋಗಿ ಬೇಟೆಯಾಡುತಲಿಹನ ||ಗಂಟೆ ನಾದಕೆ ಒಲಿಯುವನ ಭೂವೈ-ಕುಂಠವಿದೆಂದು ಹಸ್ತವ ತೋರಿದವನ 2ಬೆಟ್ಟದೊಳಗೆ ಇದುತಿಹನ ಮನಮುಟ್ಟೆ ಭಜಿಪ ಭಕುತರಿಗೊಲಿದವನ ||ಕೊಟ್ಟ ವರವ ತಪ್ಪದವನ ಈಸೃಷ್ಟಿಗಧಿಕಪುರಂದರವಿಠಲನ3
--------------
ಪುರಂದರದಾಸರು
ದಮ್ಮಯ್ಯ ಸೆರಗ ಬಿಡೊ | ಶ್ರೀಕೃಷ್ಣಯ್ಯ | ಕರಮುಗಿವೆ |ಸಮ್ಮತವಲ್ಲಿದು ನಿನಗೆ | ನಿನ್ನಮ್ಮನೊಳ್ ಪೇಳುವೆ ಹೀಗೆ ||ಧರ್ಮವೆ ಪತಿವ್ರತ ಕರ್ಮಕೆ ಎನ್ನಯ |ಅಮ್ಮನು ಕೇಳಿದರ್ ಸುಮ್ಮನೆ ಇರುವಳೆ 1ಸುಮನಸರು | ತೋಷಿಪರೆ |ನಿನ್ನ ರಮಣಿಯು ತಾನ್ ಕೋಪಿಸಳೇ ||ಸಮವೆಂದೂ ಪೇಳುವನೇ | ಎನ್ನ ರಮಣನಿದ ತಾಳುವನೇ |ಭ್ರಮಿತ ಕೋಪದಿ ಎನ್ನ | ಯಮನೆಡೆಗಟ್ಟನೇ |ಸಮಯವಲ್ಲಿದು ಕೇಳ್ | ಕಮಲದಳಾಕ್ಷನೆ 2ಇಂದೆನ್ನ ಕುಲವೆರಡೂ |ತಾವ್ ಹೊಂದದೆ ದುರ್ಗತಿ ಜರದೂ |ನಿಂದೆಗೆ ನಾ ಗುರಿಯಾಗಿ |ಯಮಬಂಧಕೇ ಸಿಲುಕೆನೆ ಪೋಗಿ |ಇಂದೆನ್ನಯ ವ್ರತ ಕುಂದದ ತೆರದಲೀಚಂದದಿ ಪೊgÉ UÉೂೀವಿಂದದಾಸನ ಪ್ರಿಯಾ3
--------------
ಗೋವಿಂದದಾಸ
ದಯಮಾಡಿ ನಡೆಸೆ ಶಾರದೆ ದಯಮಾಡಿ ನಡೆಸೆ ಪ.ಹೃಯಾಂಗಣದಿ ಸದನವ ಮಾಡುತವಿಧವಿಧ ನವರಸದುದಯದ ತನಕ 1ಭೃಂಗಕುಂತಳೆ ಕೃಪಾಪಾಂಗೆಬ್ರಹ್ಮಾಣಿಕು-ರಂಗನಯನೆ ಶ್ರೀರಂಗಭಕ್ತಳೆ 2ಭೂರಿಶಾಸ್ತ್ರವಿಚಾರವ ಪಾಲಿಸೆಧೀರ ಲಕ್ಷ್ಮೀನಾರಾಯಣನ ಸೊಸೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ದಾರಿ ಯಾವುದಯ್ಯ ವೈಕುಂಠಕೆದಾರಿ ತೋರಿಸಯ್ಯಾ ಪದಾರಿ ಯಾವುದಯ್ಯಾ ದಾರಿ ತೋರಿಸು ಆಧಾರ ಮೂರುತಿ ನಿನ್ನಪಾದಸೇರುವುದಕ್ಕೆಅ.ಪಬಲುಭವದನುಭವದಿ ಕತ್ತಲೆಯೊಳುಬಲು ಅಂಜುತೆ ನಡುಗಿ ||ಬಳಲುತ ತಿರುಗಿದೆ ದಾರಿಯ ಕಾಣದೆಹೊಳೆಯುವ ದಾರಿಯ ತೋರೊ ನಾರಾಯಣ 1ಪಾಪವ ಪೂರ್ವದಲಿ ಮಾಡಿದುದಕೆಲೇಪವಾಗಿರೆಕರ್ಮಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆಶ್ರೀಪತಿ ಸಲಹೆನ್ನ ಭೂಪ ನಾರಾಯಣ 2ಇನ್ನು ನಾ ಜನಿಸಲಾರೆ ಭೂಮಿಯ ಮೇಲೆನಿನ್ನ ದಾಸನಾದೆನೊ||ಪನ್ನಗಶಯನ ಶ್ರೀಪುರಂದರವಿಠಲಇನ್ನು ಪುಟ್ಟಿಸದಿರೊ ಎನ್ನ ನಾರಾಯಣ 3
--------------
ಪುರಂದರದಾಸರು
ದಾರಿಯ ತೋರೊ ಮುಕುಂದ - ಹರಿ-|ನಾರಾಯಣ ಗೋವಿಂದ ಪಬಂದೆನು ಬಹುಜ್ಮನದಲಿ -ನಾ-|ಬಂಧನದೊಳು ಸಿಲುಕುತಲಿ ||ಮುಂದಿನದಾವುದು ಪಯಣ -ತೋರೊ-|ಇಂದುನೀ ಇಂದಿರೆರಮಣ1ಗತಿಯಿಲ್ಲದವರಿಗೆ ನೀನೆ -ಸದ್-|ಗತಿಯೆಂದು ಸ್ತುತಿಮಾಡಿದೆನೊ ||ಗತಿಯೆಂದು ನಂಬಿದೆ ನಿನ್ನ |ಸತುವ ತೋರು ನರಹರಿಯೆ ಗೋವಿಂದ 2ಮಡವಿನೊಳಗೆ ಧಮುಕಿದೆನೆ -ಇನ್ನು-ಕಡಹಾಯಿಸುವರ ನಾ ಕಾಣೆ ||ಹಡೆದ ತಾಯಿ - ತಂದೆ ನೀನೆ -ಕೈ-|ಹಿಡಿದು ಸಲಹೊ ಎನ್ನೊಡೆಯ ಮುರಾರಿ 3ಮಿಕ್ಕಿ ಬರುವ ಹೊಳೆಯೊಳಗೆ -ನಾನು-|ಸಿಕ್ಕಿದೆ ನಡುನೀರೊಳಗೆ ||ಕಕ್ಕುಲಾತಿನಿನಗಿರದೆ |ಭಕ್ತವತ್ಸಲ ನೀ ದಯಮಾಡೋ 4ಕುಕ್ಷಿಯೊಳಗೆ ಇಂಬಿಟ್ಟು -ಎನ್ನ-|ರಕ್ಷಿಸಿ ಸಲಹಬೇಕು ||ಅಕ್ಷಯಅನಂತ ಮಹಿಮನೆ - ನೀನು |ಪಕ್ಷಿವಾಹನನೆಪುರಂದರವಿಠಲ5
--------------
ಪುರಂದರದಾಸರು
ದಾಸರಿಗೆ ದುರಿತದೋರದುಶೇಷಾಧೀಶ ಶ್ರೀ ಶ್ರೀನಿವಾಸನದ್ವೇಷಖಳ ಮೋಳಿಗೆಯ ನಿ:ಶೇಷವೆನಿಸಿ ನಿಜಜನರ ವರ್ಧಿಪನ ಸುರಾಧಿಪನ ಸುಪ್ರತಾಪನ ಪ.ಅವನಿಯ ಕೊಂಡಿಳಿದವನ ಕೊಂದವನಿ ತಂದ ವನಜಭವ ಸನಕಾದ್ಯರಿಗೊಲಿದನಕುವರ ತನ್ನವರಿದ್ದಾಟವಿಯಲಿದ್ದವನ ಭಯವ ನಿವಾರಿಸಿ ಕುವರಗೆ ವರದನ ಪೊರೆದನ ಮೆರೆದನ 1ವಿಧಿಪದಕರ್ತರ ಗುರುಸುಖತೀರ್ಥರಹೃದಯ ಮಂಗಳ ಮಾನಸದ ಮರಾಳನಪದಸೋಂಕಿಸಿ ಪಾರಾಕಿಯನು ತ್ವರಿಯದಿಸುದತಿಯ ಮಾಡಿದುದರಿಯಾಘಹಾರಿಯ ಅರಿದಾರಿಯಮುರಾರಿಯ 2ಕಿರುಗೆಜ್ಜೆ ನೂಪುರ ವರಜಾಂಬೂನದಾಂಬರದಾಮಕೌಸ್ತುಭಸಿರಿವತ್ಸ ಕೇಯೂರಹಾರ ಕರವಲಯಕುಂಡಲಮಣಿಮಕುಟಾಭರಣಭೂಷಿತ ಘನಗಾತ್ರನಬ್ಜನೇತ್ರನ ಮಾಕಳತ್ರನ ಖಗಪತ್ರನ3ಸಿರಿದೊರೆತಿರೆ ಬೆರೆತಿರದೆ ಆ ಹರಿಶರಣರವೆರೆಸಿ ಗರ್ವಜರಿದು ಶ್ರೀಹರಿಯಗುರುನಿರೂಪದಪರಿಅರಿದೆಡರದರಿದುಅರಿಅರುವರಿಗಂಜದಿಹ ಅಳುಕದಿಹ ದೃಢದಲ್ಲಿಹ ಮುಕ್ತನಾಗಿಹ4ಪಂಚಬೇಧ ವಿವರ ತಿಳಿದು ತತ್ವ ಜಪಿಸಿಪಂಚರಾತ್ರಾಗಮ ತಂತ್ರಸಾರಾರ್ಥಗಳಿಂಮಿಂಚುವ ಭಕ್ತಿ ಪಥದಲಿ ನಿಜಾಯುವಹಿಂಚುಮಾಡುವ ಭವಾರ್ಣವವನೀಸಾಡುವ ಕಡೆಗೋಡುವನಲಿದಾಡುವ 5ವೆಂಕಟೇಶನ ನಾಮ ಪಾಡಿಕೊಂಡಾಡುವವೆಂಕಟೇಶನಾಕೃತಿ ನೋಡೊಲೆದಾಡುವವೆಂಕಟೇಶನ ಕಥಾಮೃತಕೇಳಿಬಾಳುವವೆಂಕಟೇಶನ ಚರಣವೆ ಶರಣೆನುವ ಕಾರಣೆನುವ ಪೂರಣೆನುವ 6ಮೊದಲೆ ಸ್ವಾಮಿ ಪುಷ್ಕರಣಿ ಶ್ರೀವರಾಹನಸದಮಲ ಸುವಿಮಾನ ಶ್ರೀನಿವಾಸನಇದೀಗೆ ಭೂವೈಕುಂಠವೆನಿಪಾನತರಾದರ ಪ್ರಸನ್ವೆಂಕಟೇಶನ ಕಾಣುವ ಶಮಮಾಣುವ ಕೊಬ್ಬಿಕುಣಿವ 7
--------------
ಪ್ರಸನ್ನವೆಂಕಟದಾಸರು
ದೇವ ದೇವೇಶ ವೆಂಕಟೇಶಶ್ರೀವಿಧಾತ ವಂದ್ಯ ಭೂವೈಕುಂಠೇಶ ಪ.ಸಾಮಜಾರ್ಚಾರಿ ಶಿಕ್ಷ ಸ್ವಾಮಿಸಾಮಗಾನಪ್ರಿಯ ಸತ್ಪಕ್ಷಶ್ರೀ ಮಾವಧೂ ಮನೋರಮ ತ್ರಿಧಾಮ ಶ್ರೀರಾಮ ಸುಪ್ರೇಮಾಬ್ಧಿ ಕೋಮಲ ಕುಕ್ಷ 1ರಾಕೇಂದುರವಿಕೋಟಿತೇಜ ಸ್ವಾಮಿನಾಕಪಾರ್ಚಿತ ಪದಾಂಬೋಜವ್ಯಾಕೀರ್ಣಾನೇಕಾಜಾಂಡಾಂಕಿತಾವ್ಯಾಕೃತಶ್ರೀಕಾರ ಸಾಕಾರ ಲೋಕೇಶ ಪೂಜ್ಯ 2ಅನಂತಗುಣ ಪರಿಪೂರ್ಣ ಸ್ವಾಮಿಆನತಜನ ಬುಧಭರ್ಣಧೇನುಗಿರಿನಾಥÀ ದಾನಿ ಪ್ರಸನ್ವೆಂಕಟಜ್ಞಾನಾನಂದ ನಿತ್ಯತೇ ನಮೋ ಕರುಣಿ 3
--------------
ಪ್ರಸನ್ನವೆಂಕಟದಾಸರು
ದೇವಕಿನಂದ ಮುಕುಂದ ಪನಿಗಮೋದ್ಧಾರ -ನವನೀತ ಚೋರ |ಖಗಪತಿವಾಹನ ಜಗದೋದ್ಧಾರ1ಶಂಖ -ಚಕ್ರಧರ - ಶ್ರೀ ಗೋವಿಂದ |ಪಂಕಜಲೋಚನ ಪರಮಾನಂದ 2ಮಕರಕುಂಡಲಧರ - ಮೋಹನವೇಷ |ರುಕುಮಿಣಿವಲ್ಲಭ ಪಾಂಡುವಪೋಷ 3ಕಂಸಮರ್ದನ - ಕೌಸ್ತುಭಾಭರಣ |ಹಂಸ -ವಾಹನ ಪೂಜಿತಚರಣ 4ವರವೇಲಾಪುರ ಚೆನ್ನಪ್ರಸನ್ನ |ಪುರಂದರವಿಠಲ ಸಕಲಗುಣ ಪೂರ್ಣ 5
--------------
ಪುರಂದರದಾಸರು