ಒಟ್ಟು 299 ಕಡೆಗಳಲ್ಲಿ , 62 ದಾಸರು , 271 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜಲೇತಕೆ ಮನವೆ ಅನುಗಾಲವುಕಂಜನಾಭನ ಭಕುತಿ ಕೈಕೊಂಡ ಬಳಿಕ ಪನಾರಾಯಣನೆಂಬ ನಾಲ್ಕು ಅಕ್ಷರದಿಂದಘೋರಪಾಪವನೆಲ್ಲ ಕಳೆಯಬಹುದು ||ಶ್ರೀ ರಾಮನಾಮವೆಂಬ ಸಿಂಗಾಡಿ ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು 1ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದಕಾಕುಕರ್ಮಗಳನ್ನು ಕಳೆಯಬಹುದು ||ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡುನೂಕಿ ಯಮಬಂಟರನು ನುಗ್ಗು ಮಾಡಲುಬಹುದು 2ಹರಿವಾಸುದೇವನೆಂಬ ಅಮೃತಪಾನಗಳಿಂದಮರಣ ಜನನಗಳೆರಡ ಜಯಿಸಬಹುದು ||ಅರಿತರೆ ಮನದೊಳಗೆ ಪುರಂದರವಿಠಲನಸರಸ ಸದ್ಗತಿಯನ್ನು ಸವಿಗಾಣಬಹುದು 3
--------------
ಪುರಂದರದಾಸರು
ಅರ್ಚನೆ ಮಾಡಿರಯ್ಯ ಶ್ರೀ ಭಗವದರ್ಚನೆ ಮಾಡಿರಯ್ಯಅರ್ಚನೆ ಮಾಡುವ ಅರ್ಚಕ ಬುಧರಿಗೆಅರ್ಚಿಪ ಪದದಲ್ಲಿಅಚ್ಯುತದೊರೆವನೆಂದುಪ.ಅಂತರಂಗದ ಶುದ್ಧಿಲಿ ತನ್ನ ಬಾಹ್ಯಂತರ ಪರಿಪೂರ್ಣನಚಿಂತಿಸಿ ಸರ್ವಸ್ವತಂತ್ರ ಶ್ರೀ ಹರಿವೇದತಂತ್ರೋಕ್ತ ಪಥದಿ ನಿರಂತರ ಮರೆಯದೆ 1ಪೃಥುಧ್ರುವ ಅಂಬರೀಶ ಸುಧರ್ಮಜ ದಿತಿಜೋದ್ಭವ ಅಕ್ರೂರಕೃತವರ್ಮ ಸಾತ್ಯಕಿ ಯದುಕುಲ ಸುರಖಷಿಯತಿತತಿ ಅರ್ಚಿಸಿ ಅತಿಧನ್ಯರಾದರೆಂದು 2ಅನಂತಮೂರ್ತಿಯೊಳು ತನಗೊಂದು ಧ್ಯಾನಕ್ಕೆ ತಂದುಕೊಂಡುಆನಂದತೀರ್ಥರ ಸಂತತಿಗಳಿಂದತಾನು ಇಷ್ಟನಾಗಿ ನಾರಾಯಣನಾತ್ಮನೆಂದು 3ಬ್ರಹ್ಮಸ್ತೋತ್ರದಿ ಸಹಸ್ರ ಸನ್ನಾಮಪೂರ್ವಕ ಸ್ತೋತ್ರದಿಶ್ರೀಮತ್ಪಂಚಸೂಕ್ತ ಪಂಚಾಮೃತ ಸ್ನಾನರಮ್ಯಾಯುಧ ಕೌಸ್ತುಭಮಣಿ ಮಾಲೆಯಿಂದ 4ಧ್ಯಾನಾವಾಹನ ಸ್ನಾನ ಸುಪಾದ್ಯಾಚಮನಾಘ್ರ್ಯ ಧೂಪದೀಪ ಪ್ರಸೂನ ತುಳಸಿ ಗಂಧಮೋಘ ನೈವೇದ್ಯದಿಂಮಾನಸಾರ್ಚನೆ ಪ್ರತ್ಯಕ್ಷಾಗಲಿ ಎಂತೆಂದು 5ವೀರಾವರ್ಣದ ಮಧ್ಯದಿ ಶ್ರೀ ಮಧುಕೈಟಭಾಂತಕ ಕೃಷ್ಣನಕೋಟಿಕಾಂಚನ ರತ್ನಾಭರಣವೈಜಯಂತಿಕಿರೀಟಕುಂಡಲದಾಮಹಾರ ನೂಪುರಗಳಿಂದ6ದಿವ್ಯಾಂಬರ ಭೂಷಣ ನವರತುನ ಭವ್ಯ ಮಂಟಪವಸನಅವ್ಯಾಕೃತಾಧ್ಯಕ್ಷ ಶ್ರೀಭೂಮುಕ್ತಾಮುಕ್ತಸೇವ್ಯಮಾನನಾಪಾದ ಮೌಳ್ಯಾಂತ ವೀಕ್ಷಿಸಿ7ಬಹು ನೀರಾಂಜನಗಳಿಂದ ಸದ್ವೇದೋಕ್ತ ಗಹಗಹನ ಸೂತ್ರಂಗಳಿಂದಅಹಿವರಶಯನಜ ಭವಾಹಿಪ ವಿಪ್ರವಂದ್ಯಮಹಿಮನನಂತನೆಂತೆಂದು ಪರವಶದಿಂದ 8ತಾಳದಂಡಿಗೆ ಜಾಗಟೆ ಶಂಖ ಮದ್ದಳೆ ಕಂಸಾಳೆಭೇರಿಆಲಾಬುತಂಬೂರಿಭಾಗವತಗಾನಮೇಳೈಸಿ ತುತೂರಿ ವಾಜಂತ್ರಿ ಘೋಷದಿಂದ 9ಅಲವಬೋಧರು ಪೇಳಿದ ಪೂಜಾವಿಧಿಗಳ ಪ್ರದಕ್ಷಿಣೆ ಪ್ರಮಾಣಲಲಿತ ಗೀತ ನೃತ್ಯ ಬಲು ಪ್ರೇಮದಲಿ ಮಾಡಿಹೊಳೆವ ಬಿಂಬಾತ್ಮನ ಕಾಂಬ ಲವಲವಿಕೆಯಿಂದ 10ಆತ್ಮ ಕರ್ತೃತ್ವನೀಗಿಸರ್ವಾಂತರಾತ್ಮ ಪರಮಾತ್ಮನೆಂದುಆತ್ಮ ಮತ್ತೆ ಜಾÕನಾತ್ಮ ಪ್ರೇರಕ ಪ್ರೇರ್ಯಾತ್ಮ ನಿವೇದನ ಭಕ್ತಿ ನವಕಗಳಿಂದ 11ಸರ್ವೇಂದ್ರಿಯ ಮನಸ್ಥ ಮುಖ್ಯಪ್ರಾಣನೋರ್ವ ನಿಯಂತ್ರಹರಿಸರ್ವ ಪ್ರೇರಕನೆಂಬೊ ವಿಜ್ಞಾನಮಾರ್ಗದಿಸರ್ವಕಾಲದಲಿ ಸರ್ವಸಮರ್ಪಣೆಯೆಂದು 12ಮಂದಜನರು ಭಕ್ತಿಲಿ ದೂರ್ವನೀರಿಂದೆ ಪೂಜೆಯ ಮಾಡಲುತಂದೆ ಪ್ರಸನ್ವೆಂಕಟಕೃಷ್ಣ ಕಾರುಣ್ಯಸಿಂಧುಪ್ರಸನ್ನಾತ್ಮಬಂಧು ಮುಕ್ತಿಯನೀವ13
--------------
ಪ್ರಸನ್ನವೆಂಕಟದಾಸರು
ಅವನೆ ಜೀವಾಂಕಿತ ಪ್ರೇತ ನೋಡಿಭುವಿಗೆ ಭಾರನು ಅವನುಹರಿಹಗೆಯನುಪ.ಹರಿಕಥೆಗೆ ಬೇಸತ್ತು ಹರಟೆಯನೆ ಕೇಳುವವಹರಿಯಗುಣ ಹೊಗಳದೊಣಪಂಟ ಬಡಿವವಹರಿಮರೆದು ಮಲಭಾಂಡವನು ತುಂಬಿಕೊಳುವವಹರಿಭಟರ ನಡೆನುಡಿಗೆ ಸೈರಿಸದವ 1ಹರಿಪ್ರಿಯರ ನೆರೆಗಾರದತ್ತತ್ತ ಜಾರುವವಹರಿಯವರಿಗುಣಿಸದೆ ಧನ ಕಳೆವವಹರಿಯಾತ್ರೆಗಂಜಿ ಬಲವನೆ ಕೊಳುವವಹರಿವ್ರತವ ಬಿಟ್ಟಿತರ ವ್ರತ ಕೊಳುವವ 2ಹರಿಪದಾಂಬುಜವಜರಿದುಹಲವು ನೀರ್ಕುಡಿವವಹರಿಲಾಂಛನಿಲ್ಲದ ಚೆಲುವಿಕೆಯವಹರಿಪ್ರಸನ್ವೆಂಕಟೇಶನ ಪಾದಾಬ್ಜವ ಭಜಿಸಿಹರಿಪರದೈವವೆನ್ನದ್ಹೊಲೆಮನದವ3
--------------
ಪ್ರಸನ್ನವೆಂಕಟದಾಸರು
ಆರೋಗಣೆಯ ಮಾಡೇಳಯ್ಯ ಶ್ರೀಮನ್ನಾರಾಯಣಭೋಗ ಸ್ವೀಕರಿಸಯ್ಯಪ.ಸರಸಿಜಭವಾಂಡದ ಮೇರು ಮಂಟಪದಿ ದಿನಕರಕರ ದೀಪ್ತ ಜ್ಯೋತಿಶ್ಚಕ್ರವು ||ತರಣಿ ಮಂಡಲ ಪೋಲುವ ರತುನದ ಹೊನ್ನಹರಿವಾಣದಲಿ ದೇವಿ ಬಿಡಿಸಿಹಳಯ್ಯ 1ಅಲ್ಲ ಹೇರಳೆ ಲಿಂಬೆ ಯಾಲಕ್ಕಿ ಮೆಣಸು ಕಾಯ್ನೆಲ್ಲೆ ಅಂಬಟೆಕಾಯಿ ಚೆಲ್ವ ಮಾಂಗಾಯಿ ||ಬೇಲ ಮಂಗರೋಳಿ ಹುಣಸೆ ಪಾಪಟೆಕಾಯಿಎಲ್ಲ ಧರಾದೇವಿ ಅಣಿಗೊಳಿಸಿಹಳಯ್ಯ 2ಹಪ್ಪಳ ಸಂಡಿಗೆ ವಿವಿಧ ಶಾಕಂಗಳುತುಪ್ಪ ಸಕ್ಕರೆ ಹಣ್ಣು-ಹಂಪಲವು ||ಕರ್ಪೂರ ಕಸ್ತೂರಿ ಬೆರಸಿದ ಸಿಖರಿಣಿಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ 3ಎಣ್ಣೂರಿಗತಿರಸ ಚೆನ್ನಾದ ಮಂಡಿಗೆಅನ್ನಕ್ಷೀರಾನ್ನ ಪರಮಾನ್ನಗಳು ||ಸಣ್ಣ ಸೇವೆಗೆ ಶಾಲ್ಯನ್ನವ ನಿಮಿಷದಿಚೆನ್ನೆ ದುರ್ಗಾದೇವಿ ಬಡಿಸಿಹಳಯ್ಯ 4ನೀ ನಿತ್ಯತೃಪ್ತನಹುದು ನಿನ್ನ ಉದರದೊಳುನಾನಾ ಜನರು ಬಂದು ಉಣ್ಣಬೇಕೋ ||ಶ್ರೀನಾಥ ಗದುಗಿನ ವೀರನಾರಾಯಣಅನಾಥ ಬಂಧು ಶ್ರೀ ಪುರಂದರವಿಠಲ 5
--------------
ಪುರಂದರದಾಸರು
ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ |ಗುಣನಿಧಿಯೆ ನೀ ಎನ್ನ ಕಡಹಾಯಿಸಯ್ಯ ಪಒಡಲಿನಾಸಗೆ ಪರರ ಕಡೆಯಿಂದ ಧನವನ್ನು |ತಡೆಯದಲೆ ತಂದು ಸಂತೋಷ ಪಡುವೆ ||ಕೊಡುವ ವೇಳೆಗೆಅವರಬಿರುನುಡಿಗಳನು ಕೇಳ್ವ |ಕಡು ಪಾಪವನ್ನು ನೀ ಕಡೆಹಾಯಿಸಯ್ಯ 1ಕೊಟ್ಟ ದೊರೆಗಳು ಬಂದು ನಿಷ್ಠುರದ ಮಾತಾಡಿ |ಎಷ್ಟು ಬೈಯ್ವರೊ ತಮ್ಮ ಮನದಣಿಯಲು ||ದಿಟ್ಟತನವಿಲ್ಲದಲೆ ಕಳೆಯಗುಂದಿದೆನಯ್ಯ |ಸೃಷ್ಟಿಗೊಡೆಯನೆ ಎನ್ನ ಕಷ್ಟ ಪರಿಹರಿಸೊ 2ಆಳಿದೊಡೆಯನ ಮಾತಕೇಳಿನಡೆಯಲು ಬಹುದು |ಉಳಿಗವ ಮಾಡಿ ಮನದಣಿಯ ಬಹುದು ||ಕಾಳೆಗವ ಪೊಕ್ಕು ಕಡಿದಾಡಿ ಜಯಿಸಲು ಬಹುದು |ಪೇಳಲಳವಲ್ಲ ಋಣದವಗೊಂದು ಸೊಲ್ಲ 3ಹರಿವ ಹಾವನು ಹಿಡಿದು ತಲೆಗೆ ಸುತ್ತಲು ಬಹುದು |ಮುರಿವ ಮಾಳಿಗೆಯ ಕೈಯೊಳು ನಿಲಿಸ ಬಹುದು ||ಉರಿವ ಉರಿಯೊಳು ಹೊಕ್ಕು ಹೊರ ಹೊರಟು ಬರಬಹುದು |(ಬೆರೆದು) ಸೇರಲು ಬಹುದು ವೈರಿಗಳ ಮನೆಯ 4ಹೆತ್ತಸೂತಕಹತ್ತುದಿನಕೆ ಪರಿಹಾರವು |ಮೃತ್ಯು ಸೂತಕವು ಹನ್ನೆರಡು ದಿನವು ||ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ |ಹತ್ತಿಕೊಂಡಿಹುದು ಎತ್ತಲು ಹೋಗಗೊಡದೆ 5ಅವರದ್ರವ್ಯವ ದಾನ-ಧರ್ಮವನು ಮಾಡಿದರೆ |ಅವರಿಗಲ್ಲದೆ ಪುಣ್ಯ ಇವರಿಗುಂಟೆ ||ಅವರದ್ರವ್ಯದಿ ತೀರ್ಥ-ಯಾತ್ರೆಯನು ಮಾಡಿದರೆ |ಅವರಮನೆಬಾಡಿಗೆಯ ಎತ್ತಿನಂದದಲಿ6ಬಂಧುಗಳ ಮುಂದೆನ್ನ ಬಹುಮಾನಗಳು ಹೋಗಿ |ಕಂದಿ ಕುಂದಿದೆನಯ್ಯ ಕರುಣಾನಿಧೆ ||ಇಂದಿರಾರಮಣ ಶ್ರೀ ಪುರಂದರವಿಠಲನೆ |ಇಂದೆನ್ನ ಋಣದಿಂದ ಕಡೆ ಹಾಯಿಸಯ್ಯ 7
--------------
ಪುರಂದರದಾಸರು
ಎಲ್ಲೆಲ್ಲಿ ಭಾಗವತಾಂಶ ಮತ್ತೆಲ್ಲೆಲ್ಲಿ ಹರಿಸನ್ನಿವಾಸಎಲ್ಲೆಲ್ಲಿ ಕರೆದರೆ ದಾಸರಲ್ಲಲ್ಲಿಗೆಬಾಹರಮೇಶಪ.ಆವೆಡೆ ಲಕ್ಷವಂದನೆಯು ಆವಾವೆಡೆಗೆ ಭಕ್ತ ನರ್ತನೆಯುಆವೆಡೆ ಸುಪ್ರದಕ್ಷಿಣೆಯು ಆವಾವೆಡೆ ರಂಗನಾರಾಧನೆಯು 1ಎಂತು ದಂಡಿಗೆ ತಾಳ ಘೋಷ ಎಂತೆಂತು ಕಥಾಮೃತ ವರುಷಎಂತು ತತ್ವಾರ್ಥ ಜಿಜ್ಞಾಸ ಅಂತಂತೆ ಶ್ರೀಕಾಂತನ ಹರುಷ 2ಎಷ್ಟು ತಂತ್ರಸಾರಾರ್ಚನೆಯು ಎಷ್ಟೆಷ್ಟುಶ್ರುತಿಸೂತ್ರಗಳ ಧ್ವನಿಯುಎಷ್ಟು ತಾತ್ಪರ್ಯ ವರ್ಣನೆಯು ಅಷ್ಟಷ್ಟು ಕೃಷ್ಣನಕಂಠ ಮಣಿಯು 3ಏಸುಶ್ರೀಹರಿವ್ರತ ಮೌನ ಏಸೇಸು ಶ್ರೀ ಹರಿರೂಪಧ್ಯಾನಏಸುಸದ್ವ್ಯಾಖ್ಯಾನ ದಾನ ಆಸನ್ನ ಕೈವಲ್ಯನಿದಾನ4ಎನಿತು ಗುರುಪಾದಗಳ ಸ್ಮರಣೆ ಎನಿತೆನಿತು ಮಧ್ವಯತಿಗಳ ಸ್ಮರಣೆಎನಿತೇಕಾದಶಿಯ ಜಾಗರಣೆ ಅನಿತನಿತು ಸುಲಭ ಹರಿಸ್ಮರಣೆ 5ಆರು ಆರೂರು ಮೆಟ್ಟಿಹರು ಮತ್ತಾರೂರರಸರ ಕಟ್ಟಿಹರುಆರೀರ್ವರ ಪೊರಮಟ್ಟಿಹರು ಆರಾರಾಗಲಿ ಕೃಷ್ಣನವರು 6ಹೇಗೆ ಸಜ್ಜನರ ಉಲ್ಲಾಸ ಹಾಗ್ಹಾಗೆ ಮಹಾಮಹಿಮರಭಿಲಾಷಹೇಗೆ ಬುಧರ ಪರಿತೋಷ ಹಾಗಾಗುವುದು ಪ್ರಸನ್ವೆಂಕಟೇಶ 7
--------------
ಪ್ರಸನ್ನವೆಂಕಟದಾಸರು
ಗೋಪಿಯ ಭಾಗ್ಯವಿದು |ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಪಅಂಬೆಗಾಲಿಡು ಹರಿಕುಣಿದಾಡೈ ತೋ-|ಳಂಬಲಿ ತಾ ಹೊಂಗುಬ್ಬಿಯನು ||ಅಂಬುಜನಾಭ ನೀನಾನೆಯನಾಡೆಂದು |ಸಂಭ್ರಮದಿಂದ ಮುದ್ದಾಡುವಳೊ 1ನಿತ್ಯನಿರ್ಮಲನಿಗೆ ನೀರನೆರೆದು ತಂದು |ಎತ್ತಿ ತೊಡೆಯೊಳಿಟ್ಟು ಮುದ್ದಿಸುತಾ ||ಸತ್ಯಲೋಕವನಾಳುವ ವಿಧಿಜನಕನ |ಪುತ್ರನೆಂದರಿತು ತಕ್ಕೈಸುವಳೊ 2ಪಾಲುಗಡಲು ಮನೆಯಾಗಿ ಮೂಲೋಕವ |ಪಾಲಿಸುತಿಪ್ಪ ನಾರಾಯಣನ ||ಕಾಲಮೇಲೆ ಮಲಗಿಸಿ ಬಟ್ಟಲ ತುಂಬ |ಹಾಲು ಕುಡಿಸಿ ಸಂತೈಸುವಳೊ 3ಹರಿನಿತ್ಯತೃಪ್ತನೆಂದರಿಯದೆ ಹೊನ್ನಿನ |ಹರಿವಾಣದೊಳಗೆ ಮೃಷ್ಟಾನ್ನವನು ||ನೊರೆಹಾಲು ಘೃತ-ಸಕ್ಕರೆ ಕೂಡಿಸಿ ಕರೆ-|ಕರೆದು ಉಣಿಸಿ ತೃಪ್ತಿ ಬಡಿಸುವಳೊ 4ಅಂಗಜಪಿತನಿಗೆ ಮೋಹದಿಂದ ಹೊಸ |ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ||ಬಂಗಾರದರಳೆಲೆ ಬಿಂದುಲಿಗಳನಿಟ್ಟು |ಸಿಂಗರವನು ಮಾಡಿ ನೋಡುವಳೊ 5
--------------
ಪುರಂದರದಾಸರು
ಚಿತ್ರ ವಿಚಿತ್ರವುಹರಿವ್ಯಾಪಾರಚಿತ್ತದಿ ಚಿಂತಿಪರಿಗೆ ಪಸತ್ಯಭಾಮೆಯ ರಮಣನ ಕ್ರಿಯೆಗಳುಉತ್ತಮ ಋಷಿವರರರಿಯರೆನಲು ಬಹು ಅ.ಪಮಿತ್ರೆ ರುಕ್ಮಿಣಿ ಕೂಡುತಹರಿಇರಲು ಪಾರಿಜಾತದ ಹೂಮತ್ತೆ ಮಾಧವಗೀಯಲು ನಾರದರು ಕೌತುಕವನೆ ಕೇಳುತಸತ್ಯಭಾಮೆಯು ಕೋಪವ ತಾಳುತಲಿ ಶಚಿಪತಿಯೊಳು ಕಲಹಉತ್ತಮ ಶ್ರೀಹರಿ ಸಮರದಿ ಸೋಲಲುಮತ್ತೆ ಇಂದ್ರ ಜಯಭೇರಿಯ ಹೊಡಿಸಲುಸತ್ಯಭಾಮೆ ಸಮರದಿ ಗೆಲ್ಲುತ ಪುಷ್ಪವೃಕ್ಷಸಹಿತ ದ್ವಾರಕಿಗೈತರೆ ಬಹು 1ದುರುಳದೈತ್ಯರು ಕೂಡುತ ಗುಂಪಾಗಿ ಶ್ರೀಹರಿಯನು ಪಿಡಿಯಲುಭರದಿಂದೋಡುತ ಬರುತಿರಲದ ನೋಡಿ ಶ್ರೀಹರಿ ತಾ ತಿಳಿದುತ್ವರದಿಂದೋಡುತ ಬರುತಲಿ ಗುಹೆ ಸೇರಿ ಮುಚುಕುಂದರಾಯನಿಗೆಜರದವಲ್ಲಿ ಹೊದಿಸುತ ಮಾಯವಾಗಲುಖಳರು ಬಂದೊದ್ದರು ಮಚುಕುಂದಗೆತೆರೆದು ಕಣ್ಣ ನೋಡಲು ಖಳರೆಲ್ಲರುಉರಿದು ಭಸ್ಮವಾದರು ಕೇಳಿರಿ ಬಹು 2ಮತ್ತೊಮ್ಮೆ ಖಳರೆಲ್ಲರು ಸೇರುತಲಿ ಸತ್ಯೇಶನ ಪಿಡಿಯಲುಸುತ್ತಮುತ್ತ ಚೀರುತ ಬರುತಿರಲು ಹರಿಬೆದರಿದಪರಿಮತ್ತೋಡೂತ ಹಿಂದಕೆ ನೋಡುತ ಓಡುತಲಿ ಪರ್ವತವನೆ ಏರಲುಸುತ್ತಲು ನಿಂತರು ಖಳರೆಲ್ಲರುಹರಿಒತ್ತಿ ತುಳಿಯೆ ಪರ್ವತ ಕುಸಿಯಲು ಜಲಎತ್ತಿ ಮುಖಕೆರಚಲು ಖಳರೋಡಲುಮೆತ್ತನಿಳಿದುದ್ವಾರಕಿ ಸೇರಿದ ಬಹು 3ಚಕ್ರವ್ಯೂಹದಿ ಸಿಕ್ಕಿದ ಅಭಿಮನ್ಯು ಷಡುರಥದೊಳು ಕಾದಿದಿಕ್ಕು ದಿಕ್ಕಿಲಿ ಬಾಣದ ಮಳೆಸುರಿಸಿ ರಥಿಕ ಮಹರಥರÉೂಳುಉಕ್ಕಿ ಬರುತಿಹ ರೋಷದಿ ಹೊಯ್ದಾಡಿ ದುರುಳರ ವಶವಾಗಲುಅಕ್ಕರದಲಿ ದೇವಕಿತನಯ ತನ್ನಮಿತ್ರನ ಸುತನ ವಿಯೋಗ ದು:ಖದತಕ್ಕ ಉಪಾಯದಿ ಪರಿಹರಿಸಲು ಸಾ-ಮಥ್ರ್ಯನಾಗಿರಲು ನರನಂತೆ ನಟಿಸಿದ 4ಹತ್ತು ಹನ್ನೊಂದನೆ ಸಲ ಸಮರದಲಿ ಸರ್ವೇಶನ ಜಯಿಸಲುದೈತ್ಯದಾನವಜರೆಸುತ ಬರುತಿರಲು ಶ್ರೀಹರಿತಾ ತಿಳಿದುಉತ್ತಮ ದ್ವಾರಕಾಪುರ ರಚಿಸುತಲಿ ಜಲಮಧ್ಯದೊಳಿರಲುಪಟ್ಟದರಿಸಿ ಅಷ್ಟ ಸತಿಯರು ಸೌಳಸಾಸಿರ ಸತಿಯರ ಕೂಡುವ ಹರುಷದಿಕರ್ತೃಕಮಲನಾಭ ವಿಠ್ಠಲ ಭಕುತರಇಚ್ಛಿಸಲಿಸಲೀಪರಿ ನಟಿಸಿದ ಬಹು 5
--------------
ನಿಡಗುರುಕಿ ಜೀವೂಬಾಯಿ
ಜಯಮಂಗಳಂನಿತ್ಯಶುಭಮಂಗಳಂಪ.ದುರುಳತಮ ವೇದವನು ಕದ್ದು ವಾತಾಳದಲಿಇರಲವನ ಕೊಂದು ವೇದಾವಳಿಗಳಸರಸಿಜೋದ್ಭವಗಿತ್ತು ಸುರಮುನಿಗಳನ್ನೆಲ್ಲಪೊರೆದ ಶ್ರೀ ವತ್ಸಾವತಾರಿ ಹರಿಗೆ 1ಸುರರು ದೈತ್ಯರಕೂಡಿ ಸಿಂಧುವನು ಮಧಿಸುತಿರೆಗಿರಿಮುಳಗಿ ಪಾತಳಕಿಳಿದು ಪೋಗೆಭರದಿಂದ ತಾ ಬಂದು ಗಿರಿಯ ಬೆನ್ನಳಗಾಂತುಸುರರ ಸಂರಕ್ಷಿಸಿದ ಶ್ರೀಕೂರ್ಮಹರಿಗೆ2ಭೂಮಿಯನು ಹಿರಣ್ಯಕ್ಷನೆಂಬ ದೈತ್ಯನು ಸುತ್ತಿಭೀಮ ವಿಕ್ರಮನು ಪಾತಾಳಕೊಯ್ಯುತಾಮರಸ ಸಂಭವನು ಬಿನ್ನೈಸಲವನಳಿದುಭೂಮಿಯನು ತಂದು ಶ್ರೀ ಭೂ ವರಾಹನಿಗೆ 3ಪರಮಭಾಗವತ ಪ್ರಲ್ಹಾದನ ಹಿರಣ್ಯಕನುಪರಿಪರಿಯ ಭಾದೆಯಿಂದಲಿ ಪೀಡಿಸಿಕರುಣಾಳು ಕೋಪದಲಿ ದೈತ್ಯನುದರವ ಬಗೆದಶರಣ ರಕ್ಷಕನಾದ ಶ್ರೀ ನರಸಿಂಹಗೆ 4ಬಲಿಚಕ್ರವರ್ತಿ ಭೂಮಿಯ ಧಾರೆಯರೆಯಲುಇಳೆಯನಳೆದವನ ಸುತಳಕೆ ಕಳುಹಿಸಿದಸಿಲುಕಿಭಕುತಿಗೆ ಮೆಚ್ಚಿ ಬಾಗಿಲವಕಾಯ್ದ ಶ್ರೀಬಲವಂಥಹರಿವಾಮಾನಾವತಾರನಿಗೆ5ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದಕೀರ್ತಿಯನು ಲೋಕದೊಳು ವಿಸ್ತರಿಸಿದಪ್ರಾರ್ಥಿವಾಂತಕ ಬಾಹುಬಲದಿ ಪರಿಪೂರ್ಣಗೆಆರ್ತಬಾಂಧವಗೆಭಾರ್ಗವರಾಮಗೆ6ದಶರಥನ ಮನೆಯುದ್ಭವಿಸಿ ಆ ರಾವಣನದಶಶಿರವ ನೀಡಾಡಿ ಅವನನುಜಗೆವಸುಧಾಧಿಪತ್ಯವನು ಲಂಕೆಯೊಳಗವಗಿತ್ತಅಸಮವಿಕ್ರಮ ರಾಮಚಂದ್ರ ಹರಿಗೆ 7ಯದುಕುಲದಿ ತಾ ಬಂದು ಕೊಂದು ಕಂಸನನಂದುಮುದದಿಂದ ಪಾಂಡವರನುದ್ಧರಿಸಿದಒದೆಗೆ ಕೌರವ ಬಲವ ಸಂಹರಿಸಿ ಪದವಿತ್ತುಮುದದಿ ಮನ್ನಿಸಿದ ಶ್ರೀ ಕೃಷ್ಣ ಹರಿಗೆ 8ತ್ರಿಪುರದ ಮುರಾರಿಗಳ ಸತಿಯರ ಪತಿವ್ರತವಅಪಹರಿಸಿ ದಿವ್ಯ ಮೋಹಕರೂಪದಿತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತಅಪರಮಿತ ಬುದ್ಧಾವತಾರ ಹರಿಗೆ 9ಕರಿಯುಗದ ಕಡಯಲಿ ಖಲನೃಪರನೆಲ್ಲರನುತುಳಸಿ ಕುದುರೆಯ ಖುರದ ಪುಟಗಳಿಂದಸುಲಭದಿಂ ನಡೆಸುತೀ ಕೃತಯುಗದ ಧರ್ಮವನುಒಲಿದಂಥ ಕಲ್ಕಿಯವತಾರ ಹರಿಗೆ 10ಮಂಗಳ ಪದಂಗಳನು ಭಕ್ತಿಯಲಿ ಮೋಹನತರಾಂಗನೆಯರೆಲ್ಲ ರಾಗದಿ ಪಾಡುತಮಂಗಳಾತ್ಮಕಗೆಸಿರಿ ಪುರಂದರವಿಠಲಗೆಅಂಗನೆಯರೆಲ್ಲ ಆರತಿಯೆತ್ತಿರೆ 11
--------------
ಪುರಂದರದಾಸರು
ಜಯಮಂಗಳಂನಿತ್ಯಶುಭಮಂಗಳಂಪ.ದುರುಳತಮ ವೇದವನು ಕದ್ದು ವಾತಾಳದಲಿಇರಲವನ ಕೊಂದು ವೇದಾವಳಿಗಳಸರಸಿಜೋದ್ಭವಗಿತ್ತು ಸುರಮುನಿಗಳನ್ನೆಲ್ಲಪೊರೆದ ಶ್ರೀ ವತ್ಸಾವತಾರಿ ಹರಿಗೆ 1ಸುರರು ದೈತ್ಯರಕೂಡಿ ಸಿಂಧುವನು ಮಧಿಸುತಿರೆಗಿರಿಮುಳಗಿ ಪಾತಳಕಿಳಿದು ಪೋಗೆಭರದಿಂದ ತಾ ಬಂದು ಗಿರಿಯ ಬೆನ್ನಳಗಾಂತುಸುರರ ಸಂರಕ್ಷಿಸಿದ ಶ್ರೀಕೂರ್ಮಹರಿಗೆ2ಭೂಮಿಯನು ಹಿರಣ್ಯಕ್ಷನೆಂಬ ದೈತ್ಯನು ಸುತ್ತಿಭೀಮ ವಿಕ್ರಮನು ಪಾತಾಳಕೊಯ್ಯುತಾಮರಸ ಸಂಭವನು ಬಿನ್ನೈಸಲವನಳಿದುಭೂಮಿಯನು ತಂದು ಶ್ರೀ ಭೂ ವರಾಹನಿಗೆ 3ಪರಮಭಾಗವತ ಪ್ರಲ್ಹಾದನ ಹಿರಣ್ಯಕನುಪರಿಪರಿಯ ಭಾದೆಯಿಂದಲಿ ಪೀಡಿಸಿಕರುಣಾಳು ಕೋಪದಲಿ ದೈತ್ಯನುದರವ ಬಗೆದಶರಣ ರಕ್ಷಕನಾದ ಶ್ರೀ ನರಸಿಂಹಗೆ 4ಬಲಿಚಕ್ರವರ್ತಿ ಭೂಮಿಯ ಧಾರೆಯರೆಯಲುಇಳೆಯನಳೆದವನ ಸುತಳಕೆ ಕಳುಹಿಸಿದಸಿಲುಕಿಭಕುತಿಗೆ ಮೆಚ್ಚಿ ಬಾಗಿಲವಕಾಯ್ದ ಶ್ರೀಬಲವಂಥಹರಿವಾಮಾನಾವತಾರನಿಗೆ5ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದಕೀರ್ತಿಯನು ಲೋಕದೊಳು ವಿಸ್ತರಿಸಿದಪ್ರಾರ್ಥಿವಾಂತಕ ಬಾಹುಬಲದಿ ಪರಿಪೂರ್ಣಗೆಆರ್ತಬಾಂಧವಗೆಭಾರ್ಗವರಾಮಗೆ6ದಶರಥನ ಮನೆಯುದ್ಭವಿಸಿ ಆ ರಾವಣನದಶಶಿರವ ನೀಡಾಡಿ ಅವನನುಜಗೆವಸುಧಾಧಿಪತ್ಯವನು ಲಂಕೆಯೊಳಗವಗಿತ್ತಅಸಮವಿಕ್ರಮ ರಾಮಚಂದ್ರ ಹರಿಗೆ 7ಯದುಕುಲದಿ ತಾ ಬಂದು ಕೊಂದು ಕಂಸನನಂದುಮುದದಿಂದ ಪಾಂಡವರನುದ್ಧರಿಸಿದಒದೆಗೆ ಕೌರವ ಬಲವ ಸಂಹರಿಸಿ ಪದವಿತ್ತುಮುದದಿ ಮನ್ನಿಸಿದ ಶ್ರೀ ಕೃಷ್ಣ ಹರಿಗೆ 8ತ್ರಿಪುರದ ಮುರಾರಿಗಳ ಸತಿಯರ ಪತಿವ್ರತವಅಪಹರಿಸಿ ದಿವ್ಯ ಮೋಹಕರೂಪದಿತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತಅಪರಮಿತ ಬುದ್ಧಾವತಾರ ಹರಿಗೆ 9ಕರಿಯುಗದ ಕಡಯಲಿ ಖಲನೃಪರನೆಲ್ಲರನುತುಳಸಿ ಕುದುರೆಯ ಖುರದ ಪುಟಗಳಿಂದಸುಲಭದಿಂ ನಡೆಸುತೀ ಕೃತಯುಗದ ಧರ್ಮವನುಒಲಿದಂಥ ಕಲ್ಕಿಯವತಾರ ಹರಿಗೆ 10ಮಂಗಳ ಪದಂಗಳನು ಭಕ್ತಿಯಲಿ ಮೋಹನತರಾಂಗನೆಯರೆಲ್ಲ ರಾಗದಿ ಪಾಡುತಮಂಗಳಾತ್ಮಕಗೆಸಿರಿ ಪುರಂದರವಿಠಲಗೆಅಂಗನೆಯರೆಲ್ಲ ಆರತಿಯೆತ್ತಿರೆ 11
--------------
ಪುರಂದರದಾಸರು
ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ -ರಂಗದೊಳಗೆಲ್ಲ ಪಾಂಡುರಂಗ ಪರದೈವವೆಂದು ಪ.ಹರಿಯು ಮುಡಿದ ಹೂವ ಹರಿವಾಣದೊಳಗಿಟ್ಟುಕೊಂಡುಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಳಿಕ್ಕುತ 1ಒಡಲ ಜಾಗಟೆಯ ಮಾಡಿ ಮಿಡಿವಗುಣಿ ನಾಲಗೆಯ ಮಾಡಿಒಡನೆ ಢಣ ಢಣ ಢಣ ಢಣ ಎಂದುಕುಣಿದು ಚಪ್ಪಳಿಕ್ಕುತ 2ಇಂತು ಸಕಲ ಜಗಕೆ ಲಕ್ಷ್ಮೀಕಾಂತನೆ ಪರದೈವವೆಂದುಕಂತುಪಿತ ಪುರಂದರವಿಠಲ ಪರದೈವವೆಂದು 3
--------------
ಪುರಂದರದಾಸರು
ತನುವ ನೀರೊಳಗದ್ದಿ ಫಲವೇನುಮನದಲ್ಲಿ ದೃಢಭಕುತಿ ಇಲ್ಲದ ಮನುಜನು ಪ.ಧಾನ - ಧರ್ಮಗಳನು ಮಾಡುವುದೇ ಸ್ನಾನಜಾÕನ - ತತ್ತ್ವಂಗಳ ತಿಳಿಯುವುದೇ ಸ್ನಾನಹೀನಪಾಪಂಗಳ ಬಿಡುವುದೆ ಸ್ನಾನಧ್ಯಾನದಿ ಮಾಧವನ ನಂಬುವುದೆ ಸ್ನಾನ 1ಗುರುಗಳ ಶ್ರೀಪಾದತೀರ್ಥವೆ ಸ್ನಾನಹಿರಿಯರ ದರುಶನ ಮಾಡುವುದೆ ಸ್ನಾನಕರೆದು ಅನ್ನವನು ಇಕ್ಕುವುದೊಂದು ಸ್ನಾನಸಿರಿಹರಿತರಣ ನಂಬುವುದೊಂದು ಸ್ನಾನ 2ದುಷ್ಟರ ಸಂಗವ ಬಿಡುವುದೊಂದು ಸ್ನಾನಕಷ್ಟಪಾಪಂಗಳನು ಹರಿವುದೆ ಸ್ನಾನಸೃಷ್ಟಿಯೊಳಗೆ ಸಿರಿಪುರಂದರವಿಠಲನಮುಟ್ಟಿ ಭಜಿಸಿ ಪುಣ್ಯ ಪಡೆವುದೇ ಸ್ನಾನ 3
--------------
ಪುರಂದರದಾಸರು
ತಾಳಿಯ ಹರಿದು ಬಿಸಾಡೆ ನೀಹೇಳಿದವರ ಮಾತ ಕೇಳೇ ಗೈಯ್ಯಾಳಿ ಪ.ಎಲ್ಲಮ್ಮ ಎಕಲಾತಿ ಉರಿಮಾರಿ ಉಡತಮ್ಮಬುಲ್ಲ ಮಹಿಸಾಸುರ ದೈವವೆಂದೆಎಲ್ಲ ದೈವಗಳು ನಾಯಾಗಿ ಹರಿವಾಗಕಳ್ಳದೇವರ ನೆಚ್ಚಿ ಕೆಡಬೇಡ ಮೂಳಿ 1ಕೊರಳೊಳು ಕವಡಿಯ ಶಿರದಲಿ ಹಡಲಿಗೆಕರದಲಿ ದೀವಟಿಗೆ ಉರಿಸುತಲಿಉರಿವ ಪಂಜನೆ ಪಿಡಿದು ಉಧೋ ಉಧೋ ಎನುತಲಿತಿರುಗಿದ ಕೇರಿಗುಂಟ ಮೂಳಿ 2ಸೀಡಿಯ ಮುಳ್ಳನೆ ತಂದು ನಡುಬೆನ್ನಲೂರಿಕೊಂಡುಒಡೆಯ ಮಲ್ಲಣನೆಂದು ಜೋಲಾಡುಕಡುಹರಿ ಯಮದೂತರು ಬಂದು ಎಳೆವಾಗಒಡೆಯ ಮೆಲ್ಲುಣ್ಣೆತ್ತು ಹೋದನೆ ಮೂಳಿ 3ಗುಂಡಿಗೆ ಎಣ್ಣೆಯ ಎಡಗೈಯಲಿಟ್ಟು ಕೊಂಡುಗುಂಡಿಗೆ ತುಪ್ಪವ ಮುಂದಿಟ್ಟು ಕೊಂಡುಮಿಂಡೆ ಮೈಲಾರಿಯ ಖಂಡೆರಾಯನೆಂದುಕೆಂಡದ ಮೇಲೆ ರೊಟ್ಟಿಯ ಸುಟ್ಟು ಮೂಳಿ 4ಹೊನ್ನುನಾಗರ ಮಾಡಿ ಬಣ್ಣಿಸಿ ಕಿವಿಗಿಟ್ಟುನನ್ನಯ್ಯ ನಾಗಪ್ಪ ಸಲುಹೆನ್ನುತಚಿನ್ನನಾಗರ ಬಂದು ಓಡಾಡಿ ಕಡಿವಾಗಹೊನ್ನನಾಗರ ಎತ್ತ ಹೋದನೆ ಮೂಳಿ 5
--------------
ಪುರಂದರದಾಸರು
ನಗೆಯು ಬರುತಿದೆ - ಎನಗೆನಗೆಯು ಬರುತಿದೆ ಪ.ಜಗದೊಳಿದ್ದ ಮನುಜರೆಲ್ಲಹಗರಣಮಾಡುವುದ ನೋಡಿಅಪಪರಸತಿಯರ ಒಲುಮೆಗೊಲಿದುಹರುಷದಿಂದಅವರ ಬೆರೆದುಹರಿವ ನೀರಿನೊಳಗೆ ಮುಳುಗಿಬೆರೆಳನೆಣಿಸುವರ ಕಂಡು 1ಪತಿಯ ಸೇವೆ ಬಿಟ್ಟು,ಪರಸತಿಯ ಕೂಡೆ ಸರಸವಾಡಿಸತತ ಮೈಯ ತೊಳೆದು ಹಲವುವ್ರತವ ಮಾಡುವರ ಕಂಡು 2ಹೀನಗುಣವ ಮನದೊಳಿಟ್ಟುತಾನು ವಿಷದ ಪುಂಜನಾಗಿಮಾನಿ ಪುರಂದರವಿಠಲನಧ್ಯಾನ ಮಾಡುವವರ ಕಂಡು 3
--------------
ಪುರಂದರದಾಸರು
ನಂಬಿ ಚೊಕ್ಕಟಿಂಬು ಪಡೆಯಿರೈ ಪ.ಇಂಬುಪಡೆದು ಹರಿಯಚರಣಅಂಬುಜಬಂಡುಂಡು ಮಿಕ್ಕಹಂಬಲವ ಉಳಿದುಭೂರಿಸಂಭ್ರ್ರಮಿಸುವವರಕೇಳಿಅ.ಪ.ಹರಿವ ಮನವಕಟ್ಟಿವಿೂರಿಬರುವ ದುರಿತಕಂಜದೆ ಸುತ್ತಿರುವ ಮಾಯಾಪಾಶ ಹರಿವ ಹರುವನಾಲಿಸಿಗುರುವಿನಾಜ್ಞಾದಂತೆ ಪುಣ್ಯದುರುಹು ಬಲ್ಲ ಪ್ರೇಕ್ಷಕಲ್ಪತರುವ ಪಿಡಿದು ನಷ್ಟ ಕಳೇವರವು ತನ್ನದಲ್ಲವೆಂದು 1ಆವಾಗೆ ಸಚ್ಛಾಸ್ತ್ರ ಶ್ರವಣಭಾವಗುಟ್ಟುಕೇಳಿಭಕುತಿಠಾವುಗಂಡು ಹಸಿವು ತೃಷೆಯಕಾವಘಸಣೆಯಸಾವಿಗ್ಹೊಂದದಂತೆ ಸಾಧುಸೇವ್ಯಗರುಡಗಮನನಂಘ್ರಿಸೇವೆಗಧ್ಯಕ್ಷಿತರಾಗಿ ನೀವೀಗ ವೈರಾಗ್ಯ ಬಲಿದು 2ಕ್ಷುದ್ರಭೋಗಬಯಸದೆ ದಾರಿದ್ರ ಭೀತನಾಗದೆ ಸಮುದ್ರಭವನನೆಂದು ಶ್ರೀಮುದ್ರಾಭರಣದಭದ್ರ ಭಾಗವತನು ಆಭದ್ರ ಬುದ್ಧಿಯಲ್ಲಿ ಕೂಡಿಚಿದ್ರೂಪ ಪ್ರಸನ್ನವೆಂಕಟಾದ್ರಿ ಭೋಗಶಯನನೆಂದು 3
--------------
ಪ್ರಸನ್ನವೆಂಕಟದಾಸರು