ಒಟ್ಟು 390 ಕಡೆಗಳಲ್ಲಿ , 78 ದಾಸರು , 358 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ದೇವರ ಸ್ತೋತ್ರ ಪಾಹಿ ಪಂಢರಿರಾಯಾ | ಮಾಂ |ಪಾಹಿ ಪಾಂಡವ ಪ್ರೀಯಾ ಪ ಹಿಂದೆ ನಾನು ನಿನ್ನಾ | ದರುಶನ |ಕೆಂದು ಬಂದು ಘನ್ನಾ ||ನಂದದಿ ನಿಂದವನಾ | ರಕ್ಕಿಸಿಮುಂದೆ ನಲಿದೆ ಚೆನ್ನಾ 1 ಅಷ್ಟೆ ಮಾತ್ರ ಸಾಕು | ದುರಿತಗ |ಳಟ್ಟಿ ಕಾಯಬೇಕು ||ಮಟ್ಟು ಮಾಡಬೇಕು | ವಿಷಯಗ |ಳಟ್ಟಿ ಹಾಕಿ- ನೂಕು 2 ಮರುತ ಮತದೊಳಿಟ್ಟು | ನಿನ್ನನು |ಸ್ಮರಿಪ ಭಾಗ್ಯಕೊಟ್ಟು ||ಗುರು ಪ್ರಾಣೇಶ ವಿಠಲ | ನಿನ್ನವನೆಂದುಕರ ಪಿಡಿದು ಕರೆಯೋ 3
--------------
ಗುರುಪ್ರಾಣೇಶವಿಠಲರು
ಶ್ರೀ ಧನ್ವಂತ್ರಿ ಸ್ತೋತ್ರ(ನಾರಾಯಣಾಚ್ಯುತ ವಿಠಲ ದಾಸಿಗಾಗಿ) ಕಾರುಣ್ಯ ನಿಧಿ ತವಾ | ಪಾರ ಮಹಿಮೆಯ ಕೇಳಿಸಾರಿದೆನೊ ಪಾದಾಬ್ಜ ಶರಣೆಂದು | ಶರಣೆಂದೆಶ್ರುನಾಥಪಾರು ಮಾಡಾಕೆಯ ವೃಜಿನವ 1 ಆಂತ್ರಕೆಟ್ಟಿಹುದೆಂದು | ತಾಂತ್ರಿಕರು ಪೇಳುವರುಆಂತ್ರ ಸರಿಮಾಡುವ ಕಾರ್ಯವ | ಕಾರ್ಯನಿರ್ವಹಿಸಿ ಸ್ವಾ-ತಂತ್ರ ಪುರುಷಾ ದಯತೋರೋ 2 ಪಾದ ಭಜಿಸೂವ | ಭಜಿಸೂವ ದಾಸಿಗೆಈ ರೀತಿ ಭವಣ್ಯಾಕೊ ಧನ್ವಂತ್ರಿ 3 ಆರೋಗ್ಯ ಆಯುಷ್ಯ | ಆರಾಧಕರ್ಗೀವೆಈರನುತ ಧನ್ವಂತ್ರಿ ಕರುಣಾಳು | ಕರುಣಾಳು ಸರ್ವಜ್ಞಆರೋಗ್ಯ ದಾಸಿಗೆ ಕೊಡು ಎಂಬೆ4 ಧಂ ಎಂದು ಉಚ್ಛರಿಸೆ | ಧ್ವಂಸ ಮಾಡುವೆ ರೋಗಧನಂತ್ರಿಯೆನ್ನೆ ಭವರೋಗ | ಭವರೋಗ ವಾರಿಸುವಧನ್ವಂತ್ರಿ ರೂಪಿ ನಮೊ ಎಂಬೆ 5 ಕರದಲ್ಲಿ ಸುಧೆ ಕಲಶ | ಧರಿಸಿರುವ ಬಗೆಯೇನೊಶರಣರ್ಗೆ ಸುಧೆಯಾನುಣಿಸುತ್ತ | ಉಣಿಸುತ್ತಲಮರತ್ವಕರುಣಿಸುವಿ ಎಂದೂ ಶ್ರುತಿ ಸಿದ್ಧ 6 ಇಂತಿರಲು ದಾಸಿಸ | ತ್ಪಂಥಗಳನ್ನುದ್ದರಿಸೊಅಂತು ತವ ಚರಣಾಬ್ಜ ಬೇಡುವೆ | ಬೇಡುವೆನೋಪಾದಾಕ್ರಾಂತಳಿಗೆ ಸುಧೆಯಾ ನೂಣೀಸೊ7 ಚಂದ್ರ ನಿವಹದ ಕಾಂತಿ | ಯಿಂದಮೃತ ಕಿರಣದಿಂಹೊಂದ್ಯಮಿತ ಸುಖರೂಪಿ ಉಲ್ಲಾಸವೀವುತ್ತಚಂದುಳ್ಳ ಸುಧೆ ಕಲಶ ಪಿಡಿಯುತ್ತ 8 ಆತು ಜ್ಞಾನಾಂಕವನು | ಆತ್ಮಸ್ಥಶೀತಾಂಶುಧೌತ ಮಂಡಲಗ ಲಕ್ಷ್ಮೀಶ | ಲಕ್ಷ್ಮೀಶ ಹರಿಯನ್ನುಮಾತು ಮಾತಿಗೆ ನಾನು ಸ್ಮರಿಸೂವೆ 9 ಉತ್ತಮಾಂಗದಲಿರುವ | ಹತ್ತೆರಡು ದಳ ಕಮಲಪ್ರಸ್ಥಿತನು ಧನ್ವಂತ್ರಿ ಮಕರಂದ | ಮಕರಂದ ಸ್ರವಿಸುವನಭಕ್ತಿಯಲಿ ಸ್ಮರಿಸೋದು ರೋಗಾರ್ತೆ 10 ಕಮಲ ಹೃದಯಸ್ಥ 11 ಸದನ ಷಟ್ದಳ ಕಮಲಗುದವು ಮೂಲಾಧಾರಾನಾಲ್ದಳವುನಾಲ್ದಳ ಕಮಲಸ್ಥಬದಿಗನು ಧನ್ವಂತ್ರಿ ರೂಪೀಯು 12 ರೂಪೀ ಈ ದೇಹವನು | ವ್ಯಾಪಿಸುತ ತಾನಿದ್ದುಕಾಪಾಡಲೋಸುಕದಿ ಮಕರಂದ | ಮಕರಂದ ಸುರಿಸುವವ್ಯಾಪಾರದಿಂ ಜೀವರುದ್ಧಾರ 13 ಹತ್ತಿರುವ ಅಜ್ಞಾನ | ವತ್ತಿಬಹ ಭಯದುಃಖಮತ್ತೆ ಮಹವಿಷವು ಇದರಿಂದ | ಇದರಿಂದ ಪರಿಹಾರ ಭಕ್ತಿಯಿಂ ಭಜಿಸೇ - ಸುಖ ಸೌಖ್ಯ 14 ಶರಣರ್ಗೆ ತಪ್ಪದೆಲೆ | ಗೆರೆವೆ ಸೌಖ್ಯಂಗಳನುಗುರು ಗೋವಿಂದ ವಿಠಲಾ | ವಿಠ್ಠಲ ಧನ್ವಂತ್ರಿಮರುತಾಂತರಾತ್ಮಾ ಸಲಹಯ್ಯ15
--------------
ಗುರುಗೋವಿಂದವಿಠಲರು
ಶ್ರೀ ಪಾರ್ವತಿದೇವಿಯ ಸ್ತೋತ್ರ ಮಾನಿನಿ ರನ್ನೆಪಾರ್ವತಿ ಪಾಲಿಸೆನ್ನ ಪ ಸಾರಥಿ ಮನದಭಿಮಾನಿಯೆ ನೆನೆವೆನು ನಿನ್ನನುಅನುಕರಿಸೆನ್ನನು ಅಂಬುಜಪಾಣಿ 1 ಮಂಗಳೆ ಮೃಡನಂತರಂಗಳೆ ಹರಿಪದಭೃಂಗಳೆ ತುಂಗಳೆ ಪನ್ನಗವೇಣಿ 2 ಗುಣಪೂರ್ಣ ವೇಣುಗೋಪಾಲ ವಿಠಲನ್ನಕಾಣಿಸಿ ಕೊಡುವಂಥ ಶೂಲಿಯ ರಾಣಿ 3
--------------
ವೇಣುಗೋಪಾಲದಾಸರು
ಶ್ರೀ ಪಾರ್ವತೀ ಸ್ತೋತ್ರ ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ ಅಂಬುಜ ಅಡಿಗಳಿಗೆ ಎರಗಿದೆ ಅಮ್ಮ ಪ ಕಾರ್ತಿಕೇಯನ ಮಾತೆ ಕಾತ್ಯಾಯಿನೀ ದೇವಿ ಕಲುಷ ಪರಿಹರಿಸೇ 1 ಗಜಮುಖನತಾಯೆ ನೀ ಗಿರಿರಾಜ ಆತ್ಮಜೆ ವಜ್ರಿ ಮನ್ಮಥನುತೆ ಭಜಕಗೇ ಶುಭದೆ 2 ಉದಕಜಾಸನ ಪಿತ ಪ್ರಸನ್ನ ಶ್ರೀನಿವಾಸನ ಭಕ್ತಾಗ್ರಣೀ ಸದಾಶಿವನ ಅರ್ಧಾಂಗಿ ನಮೋ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪುರಂದರದಾಸರ ಸ್ತೋತ್ರ ಪದ ವಂದಿಪೆ ಪುರಂದರದಾಸರ ಪಾದದ್ವಂದ್ವಕೆ ನಾನು ನಿರಂತರ ಪಮಂದರೋದ್ಧರ ಗೋವಿಂದ ಮುಕುಂದನಎಂದಿಗೂ ವಂದಿಸುತಿರ್ಪರ ಅ.ಪ ಒದಗಿದ ಜ್ಞಾನವನೋಡಿಸಿ ಮತ್ತೆಸದಮಲ ಜ್ಞಾನವ ಪಾಲಿಸಿಪದುಮನಾಭನ ಕಥೆ ಕೇಳಿಸಿ ಸನ್‍ಮುದದಿ ಪಾಲಿಪರ ಧ್ಯಾನಿಸಿ 1 ಮೊರೆ ಹೊಕ್ಕ ಸುಜನಗಿಹಪರದ ಸುಖತರಗಳನೊದಗಿಸಿ ಹರಿಪದದಪರಮಭಕ್ತಿಯ ನೀವರೆಂದರೆ ದಾವಾಗಸ್ಮರಿಸುವೆನವರಿಗೆ ಕರಮುಗಿದು 2 ಪಥ ತೋರಿಸಿ ಕಾಯ್ವಜ್ಞಾನಿಗಳರಸನ ತುತಿಸಿ ತುತಿಸಿ 3
--------------
ವೇಣುಗೋಪಾಲದಾಸರು
ಶ್ರೀ ಪ್ರಾಣದೇವರ ಸ್ತೋತ್ರಗಳು ಆನಮಿಸುವೆ ನಿನಗೆ ಶ್ರೀ ಪವಮಾನ ಪಾಲಿಸೆನಗೆ ಜ್ಞಾನ ಪೂರ್ವಕದಿ ಶ್ರೀನಿವಾಸನಗುಣ ಗಾನ ಮಾಡುವಮತಿ ಸಾನುರಾಗದಿ ಕೊಡು ಪ ಶರಧಿಯ ಲಂಘಿಸಿಧರಿಜೆ ದೇವಿಪದ - ಕ್ಕೆರಗಿ ಮುದ್ರಿಕೆ ಕೊಟ್ಟಹರುಷದಿ ಹನುಮನೆ 1 ಹೇಮನಗರ ದಹಿಸಿ ಸತ್ವರ ರಾಮ ಪದಕೆ ನಮಿಸಿ ಪ್ರೇಮದಿ ಜಾನಕಿ ಕ್ಷೇಮವ ತಿಳುಹಿಸಿ ತಾಮರಸಜಪದ ನೇಮದಿ ಐದಿದ 2 ಕುಂತಿಗರ್ಭದಿ ಜನಿಸಿ ರುಕ್ಮಿಣಿಕಾಂತನಣುಗನೆನಿಸಿ ಅಂತಕಾತ್ಮಜನ ಸಂತತ ಸಲಹಿದೆ ಹಂತಧಾರ್ತೃರಾಷ್ಟ್ರಾಂತಕ ಭೀಮನೆ 3 ದೇಶಿಕಪತಿಯನಿಸಿ ಬದರಿನಿವಾಸನ ಪದ ಭಜಿಸೆ ವಾಸುದೇವಸರ್ವೇಶನೆಂದರುಹಿದೆ ದೂಷಿತ ಮತ ತಮ ನೇಸರಮಧ್ವನೆ 4 ಕಾಮಕ್ರೋಧದಿ ಬೆಂದೆ ನಾ ಬಲು ತಾಮಸದಲಿ ನೊಂದೆ ಶ್ರೀ ಮನೋಹರ ವರದೇಶ ವಿಠಲನ ನಾಮ ಬರೆದೆ ಕುಪ್ಪೀ ಭೀಮನೆ ಪಾಲಿಸು 5
--------------
ವರದೇಶವಿಠಲ
ಶ್ರೀ ಪ್ರಾಣೇಶ ದಾಸರಾಯರ ಸ್ತೋತ್ರ ಸಾನುರಾಗದಲಿ ಸ್ಮರಿಸುವರ ಭಕುತಿಯನ್ನು ಕೊಡುತಿಹರು ಪ ವರಕಾಶ್ಯೊಪಸದ್ಗೋತ್ರದಿ ಲಿಂಗಸು - ಗುರು ಕರಣಿಕರಲಿ ಸಂಜನಿಸಿ ತಿರುಕಾರ್ಯರ ಪರತನುಭವಯೋಗೀಂ - ದ್ರರು ಯಂಬ ಸುನಾಮದಿ ಕರಿಸಿ 1 ಕೆಲವುಕಾಲ ಲೌಕಿಕವನುಸರಿಸುತ ಲಲನೆ ತರಳರಿಂದೊಡಗೂಡಿ ಬಲು ವಿನಯದಿ ಸಾಧುಗಳರ್ಚಿಸಿ ನಿ - ರ್ಮಲ ವೈರಾಗ್ಯ ಮನದಿ ಕೂಡಿ2 ಮೂಜಗದೊಳು ಪ್ರಖ್ಯಾತರೆನಿಸಿದ ಶ್ರೀ ಜಗನ್ನಾಥಾರ್ಯರ ಪಾದಾಂ - ಭೋಜ ಭಜಿಸಿ ಪ್ರಾಣೇಶಾಂಕಿತವನು ತಾಜವದಿಂದವರಲಿಪಡೆದ 3 ಶ್ರೀಶಪಾದಯುಗ್ಮಗಳಲಿ ಸದ್ರತಿ ದಾಸಜನಗಳಲಿ ಸದ್ಭಕುತಿ ಹೇಸಿಭವದ ಸುಖದಾಸೆ ಜರಿದು ಸಂ - ತೋಷದಿ ಧರಿಸಿಹ ಸುವಿರಕುತಿ 4 ನೇಮದಿ ಯಮನಿಯಮವ ವಹಿಸಿ ತಾ ಮುದದಲಿ ನಲಿಯುತ ಕೀರ್ತಿಸುತಿಹ ಶ್ರೀ ಮನೋಹರನ ಸುಗುಣರಾಶಿ 5 ಪರಿಪರಿ ಹರಿಕಥೆವರ ಪ್ರಮೇಯಗಳ ಸರ್ವಜ್ಞ್ಞರ ಉಕ್ತ್ಯನುಸರಿಸಿ ವಿರಚಿಸಿ ಹರಿಮಂದಿರದ ಸುಪಥ ಪಾ - ಮರರಿಗೆ ಸೌಕರ್ಯವಗೈಸಿ 6 ವರದೆಂದ್ರರ ಪದಸರಸಿಜ ಸೇವಿಸಿ ಹರುಷದಲವರ ಕರುಣ ಪಡೆದ ವರವೃಂದಾವನ ಸಂಸ್ಥಾಪಿಸಿ ಪರಿಪರಿಯಿಂದಲಿಯಾರಾಧಿಸಿದ7 ಜ್ಞಾನದಿಲಯವನು ಚಿಂತಿಸುತಾ ಚಿತ್ರ ಬಾನುಸಪ್ತಮಿ ಯಾಶ್ವಿಜಶುದ್ಧ ಜಾನಕಿ ಪತಿಪದ ಧೇನಿಸಿಹರಿಪುರ ಕೀನರ ದೇಹ ಜರಿದು ಸಾರ್ದ 8 ಪರಮಭಾಗವತರೆನಿಸುವರಿವರನ ವರ ತನದ ಸುಮಾಲಿಕೆ ಸತತ ಸ್ಮರಿಸುವ ಭಕುತರ ಪುರುಷಾರ್ಥಗಳನು ವರದೇಶವಿಠಲನ ಕೊಡುವ ತ್ವರಿತ 9
--------------
ವರದೇಶವಿಠಲ
ಶ್ರೀ ಭಾರತೀ ದೇವಿಯ ಸ್ತೋತ್ರ ಪಾಲಿಸೆನ್ನನು ಪವಮಾನನ ರಾಣಿ ಪಾಲಿಸೆನ್ನ ಸುಗುಣಾಲಯ ಶ್ರೀಹರಿ ಲೀಲೆ ತಿಳಿಸಿ ಭವಜಾಲವ ಹರಿಸೆ ಪ ಮಾತರಿಶ್ವÀ ಸತಿ, ಪ್ರೀತಿಲಿ ಹರಿಪದ ದೂತನೆನಿಸಿ, ಅನಾಥನ ಪೊರಿಯೆ 1 ವಿದ್ಯುನ್ನಾಮಕೆ ವಿದ್ವಜ್ಜನಪಾ - ದದ್ವಯ ಸೇವಿತ ಬುದ್ಧಿಯ ನೀಡೆ 2 ಲಿಂಗನಿವಾಸಿ ವಿಲಿಂಗಗೈಸಿ ಯನ್ನ ರಂಗನ ಪದದಲಿ ಭೃಂಗನ ಮಾಡಿ3 ಜನನಿಯೆ ನಿನ್ನಯ ತನಯಗೆ ಙÁ್ಞನದ ಸ್ತನವನಿತ್ತು ಪೊರೆ ಹನುಮನರಸಿಯೆ 4 ಶರಣಾಗತಜನ ಪೊರೆಯುವ ಕರುಣಿಯ ವರದೇಶ ವಿಠಲನ ಚರಣವ ತೋರೆ 5
--------------
ವರದೇಶವಿಠಲ
ಶ್ರೀ ಮಧ್ವಾಚಾರ್ಯರ ಸ್ತೋತ್ರ ಪದ ನಮೋ ನಮೋ ಹರಿಪ್ರೀಯ ನಮೋ ನಮೋ ಸುರಗೇಯನಮೋ ನಮೋ ಗುರುರಾಯ ಮಧ್ವ ಮುನಿ ಜೀಯಾ ಪ ಧರೆಗೆ ಭಾರವಾಗಿ ಚರಿಸುತಿರೆ ಮಾಯಿಗಳುಧರಿಸಲಾರದೆ ಧರಣಿ ಸರಸಿಜೋದ್ಭವಗೆಮೊರೆಯಿಡಲು ಅಜನಾಗ ಹರಸುರರ ಸಹವಾಗಿಹರಿಯ ಸದನವ ಸಾರಿ ಅರುಹಿದನು ಇದನೆಲ್ಲ 1 ಕಾವನಯ್ಯನು ವಸುಧೆ ಭಾವವನು ತಿಳಿದನಿಲದೇವನೇ ನಿನಗೆ ಆಜ್ಞೆಯನೀಯಲುದೇವ ನೀ ನವತರಿಸಿ ಪಾವನವ ಮಾಡಿ ಸ-ಜ್ಜೀವಿಗಳ ಪೊರೆದರ ದುರ್ಜೀವಿಗಳ ನೀ ಮುರಿದೆ 2 ಕಾಮವನು ಕಡಿದು ಸನ್ನೇಮವನೆ ಹಿಡಿದು ಬಹುಸೀಮೆಯೊಳು ವಾದಿಗಳ ಸ್ತೋಮ ತರಿದುಹೇಮಕಚ್ಚುಲ ವೇಣುಗೋಪಾಲ ವಿಠಲನನಾಮಸುಧೆ ಸುಜನರಿಗೆ ಪ್ರೇಮದಲಿ ಸಮಿಯಿತ್ತೆ 3
--------------
ವೇಣುಗೋಪಾಲದಾಸರು
ಶ್ರೀ ಮಹಾದೇವರ ಸ್ತೋತ್ರ ಗಿರಿಜಾಪತಿ ತವ ಚರಣಕೆ ಎರಗುವೆ ಕರುಣದಿಂದೆನ್ನನು ಪೊರೆ ಮಹಾದೇವ ಪ ನಂದಿವಾಹನ ಸುರವೃಂದ ಸುಪೂಜಿತ ಇಂದ್ರವಿನುತ ಭಕ್ತಾನಂದದಾಯಕನೇ 1 ಶುಂಡಾಲ ಮದಹರ ಚಂಡವಿಕ್ರಮ ಮೃಕಂಡಜ ವರದ 2 ಭೂಜಗ ವಿಭೂಷ ವಿಜಯ ಸುಪೋಷ ಅಜಿನಾಂಬರಧರ ತ್ರಿಜಗವಂದಿತನೆ 3 ಗರಕಂಧರ ಹರ ಸುರಗಂಗಾಧರ ಸ್ಮರಸಂಹರ ನಿಜ ಶರಣರಪಾಲ 4 ವರದೇಶ ವಿಠಲನನಿರುತದಿ ಸ್ಮರಿಸುವ ಕರುಣಾಕರಭವಹರ ಶಂಕರ ಶಿವ 5
--------------
ವರದೇಶವಿಠಲ
ಶ್ರೀ ಮುಖ್ಯ ಪ್ರಾಣದೇವರ ಸ್ತೋತ್ರ ಪಾಲಿಸಯ್ಯಾ ಶ್ರೀ | ಪ್ರಾಣರಾಯ | ಪಾಲಿಸಯ್ಯಾ ||ಪಾಲಿಸಯ್ಯಾ ಶ್ರೀ ಲೋಲನ ಭೃತ್ಸನೆ |ವಾಲಯದಲಿ, ಮಹದುರಿತವ ತರಿದು ಪ ಶರಣು ಪೊಕ್ಕವರ ಸಲಹುವನೆಂದು |ವರವೇದಂಗಳು ಸಾರುತಲಿಹವೊ 1 ಶಿಶುವಿನ ತಪ್ಪೆಣಿಸದೆ ಆ ಜನನಿಯು |ಬಿಸುಟದೆ ತ್ಪರದಿಂ ಕರುಣ ಮಾಳ್ಪವೋಲ್ 2 ಶ್ರೀಶ ಪ್ರಾಣೇಶ ವಿಠಲನ ದಾಸಾಗ್ರಣಿ |ನೀ ಸದಾ ಕರುಣ್ಯುಪೇಕ್ಷ ಮಾಡದೇ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ಯುವನಾಮ ಸಂವತ್ಸರ ಸ್ತೋತ್ರ 152 ಉಗ್ರಂ ವೀರಂ ಮಹಾ ವಿಷ್ಣು ಅನುಪಮ ಮಹಾಜಾಜ್ವಲ್ಯ ಸರ್ವತೋಮುಖ ಭೀಷಣ ಭದ್ರ ಮೃತ್ಯು ನರಸಿಂಹ ದೇವ ದೇವ ದೇವೋತ್ತಮನಲಿ ಶರಣಾದೆ ಯುವನಾಮ ಸಂವತ್ಸರ ಅಸಮ ನಿಯಾಮಕನಲ್ಲಿ ಪ. ಬಾಲಿಶತನ ಕಳಿದು ಪ್ರೌಢಿಮೆಯಲಿ ಬರುವ ಯುವಕ ಯುವತಿಯರು ಸಾರ ಅಸಾರ ವಿವೇಕದಿ ಇಹಪರ ಸಾರ್ಥಕ ಆಗುವ ಜೀವನ ಕ್ರಮದಿ ಚರಿಸಲು ಯೋಗ್ಯವಾಗಿರುವದು ಈ ಯುವನಾಮ ವರ್ಷ 1 ಹರಿರೇವ ಪರೋ ಹರಿರೇವ ಗುರುರ್ ಹರಿರೇವ ಜಗತ್ಪಿತೃ ಮಾತೃಗತಿಃಯೆಂಬ ಪರಮೋತ್ತಮ ಬಲು ಆಪ್ತ ವಾಕ್ಯವ ಪ್ರತಿಕ್ಷಣ ಸಂಸ್ಮರಿಸಿದರೆ ಇಷ್ಟ ಸಿದ್ಧಿ ಅನಿಷ್ಟ ನಿವಾರಣ ದಿನ ದಿನ ವಿಹಿತ ಸಾಧು ಕರ್ಮ ಆಚರಿಪರಿಗೆ 2 ವಿಷ್ಣು ಪುರಾಣದಿ ಪರಾಶರ ಮಹರ್ಷಿ ಉಪದೇಶಿಸಿದಂತೆ ಪಾಷಂಡಿಗಳಲ್ಲಿ ಪಾಷಂಡ ಮತ ಪ್ರವರ್ತಕರಲಿ ಮೋಹ ಕೂಡದು ಸಾತ್ವಿಕ ಪುರಾಣಧಿಕ್ಕರಿಸುವ ಸ್ತ್ರೀ ಪುರುಷರ ಕ್ರೌರ್ಯಕ್ಕೆ ಬಾಗಿ ಸ್ನೇಹಿಸುವ ಜನರು ವಿಪತ್ತಿಗೆ ಗುರಿ ಜನ್ಮ ಜನ್ಮಕ್ಕೂ 3 ಯುವ ವರ್ಷ ರಾಜನು ಸಾಧು ಸಜ್ಜನಪ್ರಿಯ ಶನಿಮಹಾರಾಜನು ಹರಿಭಕ್ತರು ಸಜ್ಜನರುಗಳಿಗೆ ಸಹಾಯಕನು ಗೋಚಾರದಿ ಸ್ವಕ್ಷೇತ್ರಿ ಮೂಲ ತ್ರಿಕೋಣದೆ ಚಾರ ಶ್ರೀಹರಿ ನಿಯಮನದಿ ಮಂತ್ರಿ ಶುಕ್ರಚಾರ್ಯರು ಗೋಜನ ಪ್ರಿಯರು ಲೋಕ ಹಿತಕರರು 4 ಶನೈಶ್ಚರ ಕೃತ ಲಕ್ಷ್ಮಿ ಭೋಮ ನರಸಿಂಹ ಸ್ತೋತ್ರ ಅವಶ್ಯಪಠನೀಯ ಧಶರಥ ಕೃತ ಮತ್ತು ಪ್ರಸನ್ನ ಶ್ರೀನಿವಾಸೀಯ ಶನಿ ಸ್ತೋತ್ರ ಈ ನುಡಿಗಳು ಸಂವತ್ಸರ ಸ್ತೋತ್ರ ಯತಿವರ್ಯರು ಪಂಡಿತರು ಮತ್ತೆಲ್ಲರಿಂಪಠನೀಯ ಭಕ್ತಿ ಪೂರ್ವದಿ ಪಠಿಸಿ ಮನನ ಮಾಳ್ಪರಿಗೆ ವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ ರಕ್ಷಿಸುವ ಪ್ರತಿಕ್ಷಣದಿ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ರಘುಕಾಂತ ತೀರ್ಥರ ಸ್ತೋತ್ರ ಪದಕಂಜಸಾರಿಭಜಿಪ ಭಕ್ತರ ದೂರವೋಡಿಸುವ ಶಕ್ತ ವಿರಕ್ತ ಪ ದಿನಕರ ಕುಲಜಾತ ವನಜಾರಾಧ್ಯಸು - ಮನಸವ್ರಾತ ಸನ್ನುತ ಇನಕೋಟಿಪ್ರಭೆಗಾತ್ರ ಮನಸಿಜ ಪಿತಸ - ನ್ಮುನಿಗಣನುತ ರಾಮಚಂದ್ರ ಪಾದಭೃಂಗ 1 ಯತಿಕುಲ ರತುನ ಭಕುತಸುರತರುವೆ ಸ - ದ್ಗತಿ ದಾತಾ ಜಿತಮದನ ಪತಿತಪಾವನ ಮುನಿ ಯತಿ ರಘುದಾಂತತೀ ಪಾದ ಪಂಕೇಜ 2 ಕಾಮಿತಫಲದ ನಿಸ್ಸೀಮ ಮಹಿಮ ಭಕ್ತ ಪ್ರೇಮ ಪಾವನ ಚರಿತ ಸಾಮಜವರದ ಶ್ರೀ ವರದೇಶವಿಠಲನ ಪ್ರೇಮ ಪಾತ್ರ ಮಹಾ ಮಹಿಮ ನಿಷ್ಕಾಮ3
--------------
ವರದೇಶವಿಠಲ
ಶ್ರೀ ರಘುದಾಂತತೀರ್ಥರ ಸ್ತೋತ್ರ ನಮೋ ನಮೋ ಶ್ರೀ ರಘುದಾಂತ ತೀರ್ಥ ಮುನಿಯ ಮತಮಹಮಸಿರಿಯೆ ಭ್ರಮರನೆನಿಪಗುರುವೆ ಪ ಮಾರಮಣನಪದ ಸಾರಸಷಟ್ಟದ ಸೂರಿಸುಗುಣ ಭರಿತ ಮಾರುತಮತ ಪಯವಾರಿಧಿ ಶಶಿ ಗಂಭೀರ ವಿಮಲ ಚರಿತ ನೀರಜ ಶರವಿಜಿತ ಶ್ರೀ ರಘುಪತಿ ತೀರ್ಥಾರ್ಯರ ಕರಸರಸೀರುಹಸಂಜನಿತ 1 ಆರ್ತಬಂಧು ಸತ್ಕೀರ್ತಿವಂತ ಸರ್ವೋತ್ತಮ ಹರಿಯನಿಪ ಸೂತ್ರನಾಮಕ ಶಿಖಿನೇತ್ರ ಪ್ರಮುಖ ದೇವೋತ್ತಮನೆಂದೆನಿಪ ಸ್ತೋತ್ರಗೈಯ್ಯುತಿಪ್ಪ ಗಾತ್ರ ಮರೆದು ಶ್ರೀ ಪಾರ್ಥಸಖನಗುಣಕೀರ್ತಿಸಿ ಸುರಿಪ 2 ಪರಮತುರಗನಭಚರ ಪತಿಯೆನಿಸುವ ಕರುಣಿ ಕೋಪರಹಿತ ಶರಧಿ ಕುಂಭಜಾತ ಭಾಗವತ ಸಿರಿಮುಖ ಕುಮುದಕೆ ಶರನಿಧಿ ಸಂಜಾತ ಪರತತ್ವದಿ ಪರತರನೆನಿಸುವ ಮುನಿವರ ನಿರ್ಗತದುರಿತ 3 ಅನಘನಿನ್ನಪದವನಜÀಜದರಜವನು ವಿನಯದಿರಿಸಿ ಶಿರದಿ ಜನುಮಜನುಮದಘತೃಣರಾಶಿಯ ಮಧ್ಯಗಳ ಪೊಕ್ಕತೆರದಿ ಕ್ಷಣದಲಿ ದಹಿಸದೆ ಸನುಮತೆಂದೆನಲು ಅನುಗೃಹಿಸಿ ತ್ವರದಿ ಸನುಮಾರ್ಗಪ್ರದ, ದರುಶÀನದು ಪ್ರಕೃತಿನೆನೆವೆನು ಇಹಪÀರದಿ 4 ಮಾಮನೋರಮಪದ ತಾಮರಸಂಗಳನೇಮದಿ ಪೂಜಿಪನೆ ಪತಿ ಧೀಮಂತಪ್ರಿಯನೆ ನಿಮ್ಮ ಪ್ರೇಮದಿನಂಬಿಹೆನೆ ರಾಮನಾಮರತಿ ನೇಮದಿಕೂಡು ವರದೇಶ ವಿಠಲಪ್ರೀಯನೆ 5
--------------
ವರದೇಶವಿಠಲ
ಶ್ರೀ ರಘೂತ್ತಮ ಗುರು ಸ್ತೋತ್ರ ಗುರುರಾಜ ರಘೂತ್ತಮ ಗುರುರಾಜ ಗುರುರಾಜ ನಮೋ ನಮೋ ನಿನ್ನ ಪಾದ ಸರಸಿಜಯುಗಳದಿ ನಾ ಶರಣು ಅಹ ಧರಣಿಜಾಪತಿ ರಾಮ ಭದ್ರಗೆ ಪ್ರಿಯ ನೀನು ಕರುಣದಿ ಸಲಹೆನ್ನ ದುರಿತಗಳಳಿದು ಪ ನಿವ್ರ್ಯಾಜ ಕರುಣಿ ರಘುವರ್ಯ ಗುರು ವರ್ಯ ಸುಮೇಧರ ದಿವ್ಯ ಚಾರು ತೋಯಜ ಕರದಿಂದ ಉದಯನಾಗಿ ನಿಗಮ ಸಾಮ್ರಾಜ್ಯ ಅಹ ಮಾಯೇಶ ಕಾಳೀಶ ಗುರುಗಳ ಪ್ರಿಯ ಬಾಲ ವಯಸ್ಸಲ್ಲೇ ಉದ್ದಾಮ ಪಂಡಿತನಾದಿಯೋ 1 ಬದರೀಶ ನಿರ್ಣೀತತತ್ವ ಅರ್ಥ ವಿಸ್ತಾರ ಮಾಡಿದ ಮಧ್ವ ಟೀಕೆ ಜಯತೀರ್ಥ ಬರೆದ ತದ್ಭಾವ ಪೇಳಿ ಒದಗಿಸಿದೆಯೊ ಜ್ಞಾನ ಸುಖವ ಅಹ ಮುದ ಜ್ಞಾನ ಸೌಭಾಗ್ಯ ಸಾಧು ವೈಷ್ಣವತನ ಇತ್ತು ಪಾಲಿಪುದೆನ್ನ ಕುಂದುಗಳೆಣಿಸದೆ 2 ಧರೆಯಲ್ಲಿ ದಕ್ಷಿಣಕಾಶಿ ಸ್ವರ್ಗ ಧರೆಯಳದವನ ಸೇವಿಸಿ ಗಂಗಾ ಧರಷಡಾನನ ಇಲ್ಲಿ ವಾಸಿಸುವ ಈ ಕ್ಷೇತ್ರ ವೃಂದಾವನ ವಾಸಿ ಅಹ ಪರಮೇಶ ಕೇಶವ ಪ್ರಿಯಾ ಪಿನಾಕಿನಿಯಿಂದ್ರಾ ತೀರ ಮಧ್ಯದಿ ತಪಗೈದು ಭಕ್ತರ ಕಾಯ್ವಿ 3 ಸುರವೃಂದ ಶ್ರೇಷ್ಠ ನೀನಹುದು ಎನ್ನ ಪರಿ ಬಾಧೆಯ ತರಿದು ಸರ್ವ ಸಿರಿ ಇತ್ತು ಹರಿ ಗುರು ಭಕ್ತಿ ಬೆಳೆಸಿ ಪಾಲಿಪುದು ಅಹ ಹರ ಸಮೀಪಕೆ ಒಳ್ಳೆ ಸಾಧನ ಸರ್ವದಾ ಕಾರುಣ್ಯದಲಿ ಎನ್ನೊಳ್ ನಿಂತು ಮಾಡಿಸೋ ಗುರೋ 4 ರಾಮನೃಕೇಸರಿ ವ್ಯಾಸ ಸತ್ಯ ಭಾಮ ರುಕ್ಮೀಣಿ ದೇವಿ ಅರಸ ಭೂಮ ಶ್ರೀಮಂತ ಕ್ಷೀರಾಬ್ಧಿವಾಸ ಮಧ್ವ ಭೀಮಹನುಮ ವಂದ್ಯ ಶ್ರೀಶ ಅಹ ಹೇಮಗರ್ಭನ ತಾತ `ಪ್ರಸನ್ನ ಶ್ರೀನಿವಾಸ' ರಮೆಯರಸನ ಪ್ರಿಯತಮ ಜೀಯ 5 || ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು