ಒಟ್ಟು 761 ಕಡೆಗಳಲ್ಲಿ , 84 ದಾಸರು , 637 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳಂ ಪ ವೇದಾಂತ ವೇದ್ಯನಿಗೆ ಆದಿನಾರಾಯಣಗೆ ಸಾದು ಸಜ್ಜನರ ಸಂರಕ್ಷಣಗೆ ಯಾದವಾಧಿಪ ಕೃಷ್ಣ ದನುಜರೆದೆ ದಲ್ಲಣಗೆ ಮಾಧವ ಮುಕುಂದ ಮುರಮರ್ಧನನಿಗೆ ನಿತ್ಯ ಶುಭಮಂಗಳಂ 1 ಶ್ರೀ ವತ್ಸಲಾಂಛನಗೆ ಶ್ರೀ ಕೇಶವಾಚ್ಯುತಗೆ ಭವ ಭಂಜನನಿಗೆ ಗೋವರ್ಧನವ ನೆತ್ತಿ ಗೋವುಗಳ ಕಾಯ್ದವಗೆ ಮಾವ ಕಂಸನ ಕೊಂದ ಗೋವಿಂದಗೆ 2 ನೀಲ ಮೇಘಾಂಗನಿಗೆ ನಿಜಶರಣ ಸಂಗನಿಗೆ ಕಾಲ ಭಯ ಶಿಕ್ಷನಿಗೆ ಕಮಲಾಕ್ಷಗೆ ಬಾಲಾರ್ಕ ಚಂದ್ರ ರವಿಕೋಟಿ ತೇಜನಿಗೆ ಮೂಲೋಕ ದೊಡೆಯನಿಗೆ ಮುರವೈರಿಗೆ 3 ಕಾಮಪಿತ ಕೃಷ್ಣನಿಗೆ ಕಡುಚೆಲ್ವಮಾಧವಗೆ ಸಾಮಗಾನ ವಿಲೋಲ ಸರ್ವೇಶಗೆ ವಾಮ ದೇವನ ಮಿತ್ರ ವಸುದೇವ ಪುತ್ರನಿಗೆ ಶ್ರೀ ಮಹಾಗೋವಿಂದ ಗೋಪಾಲಗೆ 4 ದುರಿತ ಸಂಹಾರಗೆ ಪರಮ ಪಾವನನಿಗೆ ಪಾಪವಿನಾಶಗೆ ಘೋರ ದುರಿತಾರಣ್ಯ ದಹನ ದೈತ್ಯಾಂತಕಗೆ ಪಾರ ಮಹಿಮಾನಂದ ಸುರವಂದ್ಯಗೆ 5 ನಾಗೇಂದ್ರ ಶಯನನಿಗೆ ನಿಗಮಾಗಮ ಸ್ತುತಗೆ ನಾಗಭೂಷಣ ನಮಿತಗೆ ಭಾಗೀರಥೀಪಿತಗೆ ಭಾಗವತ ಹಿತಕರಗೆ ಭಾಮೆಯರರಸ ಶ್ರೀ ಗೋಪಾಲಕೃಷ್ಣಗೆ 6 ವರಮತ್ಸ್ಯರೂಪನಿಗೆ ಕೂರ್ಮಾವತಾರನಿಗೆ ವರಹದಾಕೃತಿಯವಗೆ ನರಸಿಂಹಗೆ ವರದ ವಾಮನನಿಗೆ ವರ ಪರಶುರಾಮನಿಗೆ ಬುದ್ಧ ಶ್ರೀ ಕಲ್ಕಿಗೆ 7 ಇಂದಿರಾರಮಣಗೆ ಚಂದ್ರಶೇಖರ ಪ್ರಿಯಗೆ ನಂದಗೋಕುಲದರಸ ಗೋಪಾಲ ಕೃಷ್ಣಗೆ ಮಂದಮಾರುತ ತನಯ ಕೋಣೆ ನಿಜವಾಸಗೆ ಆ ನಂದ ಮೂರುತಿ ಶ್ರೀ ಲಕ್ಷ್ಮೀನಾರಾಯಣಗೆ 8
--------------
ಕವಿ ಪರಮದೇವದಾಸರು
ನಿನಗೇನಾಯಚ್ಚರಿಲ್ಲೋ|ಕೇಳಾತ್ಮಾ| ಪಾದ ಭಕುತಿಯ ತೊರೆದಿಪ ನಾನಾ ಯೋನಿಯಲಿ ತೊಳಲಿ | ಭವದು:ಖ | ಕಾನನದಲಿ ಬಳಲಿ | ಮಾನವ ಜನುಮ ಬಂದು ಹರಿ ಹರಿ1 ವಿಷಯ ಸುಖವ ಬೆರೆದು | ಬೇಕಾದ | ಸ್ವಸುಖವನೆಗಳದು | ಅಶನ ವ್ಯಸನದಲಿ ಪಶುವಿನ ಪರಿಯಲಿ | ನಿಶಿದಿನವನುಗಳೆದೇ ಹರಿ ಹರಿ2 ಸಾಧು ಸಂಗಕತ್ಯಗಳೀ | ಕುಜನರಾ | ಹಾದಿಯಿಂದಲಿ ಮರಳೀ | ಸಾದರ ವಿವೇಕ ದೀಪ ಮನೆಯೊಳಿಟ್ಟು | ಸಾಧಿಸೋ ನಿಜ ಘನವಾ ಹರಿ ಹರಿ3 ಅರಗಳಿಗೆಯ ನೋಡಲು ಶ್ರೀಹರಿ | ಸ್ಮರಿಸದೆ ತಾ ನಿರಲು | ಕರೆದು ವಡಿಯ ನಿನ್ನ ತನು ಲೇಶವ ಕೇಳಲು | ತೆರಗಾಣಿ ನುಡಿಗಳಿಗೇ ಹರಿ ಹರಿ4 ಹಿಂದಾದ ಮತಿಗಳಿಯೋ ಇನ್ನಾರೆ | ಪಥ ವರಿಯೋ | ಭವ | ಬಂದಗೆಲಿದು ಸುಖಿಸೋ ಹರಿ ಹರಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ನೋಡಿ ಧನ್ಯನಾದೆನೋ | ಶ್ರೀವೇದ ವ್ಯಾಸನಿನ್ನ ನೋಡಿ ಧನ್ಯನಾದೆನೋ ಪ ನಿನ್ನ ನೋಡಿ ಧನ್ಯನಾದೆ | ಯಜ್ಞಕುಂಡ ದೇಶದಲ್ಲಿಘನ್ನ ಮಹಿಮ ಪೂರ್ಣ ಸಂ | ಪನ್ನ ಮೂರುತಿ ಬಾದರಾಯಣ ಅ.ಪ. ಪಾದ ಭಜಿಸಿ ಅರ್ಚಿಸಿರುವ 1 ನವಸುಮೂರ್ತಿಗಳಲಿ ನಿನ್ನ | ನವ ಸುಭಕ್ತಿಗಳನು ಬೇಡೆನವ ಸುಮಹಿಮೆ ತೋರೆ ಕರಗ |ಳವಲಂಬನದಿ ದಯವ ತೋರ್ದ 2 ಅಷ್ಟು ಮೂರ್ತಿಗಳಲಿ ತಮ್ಮ | ಇಷ್ಟ ಮೂರ್ತಿಯನ್ನೆ ಇರಿಸಿಅಷ್ಟದಿಗಿಭದಂತೆ ಮೆರೆದ | ಅಷ್ಟ ಶಿಷ್ಟರಿಗಿತ್ತ ಮುನಿಯು 3 ನಿರ್ಜರ ಅಂಘೇರಿ ಮಣೂರ 4 ವಿನುತ | ವಕ್ರ ಮನದ ಜನಕೆ ಅಮಿತ್ರ 5 ಯೋಗ ಪಟ್ಟಕ ವಸನ ಚೆಲ್ವ | ಯೋಗದಾಸನ ಕೂರ್ಮದುಪರಿನಾಗನಂತೆ ಪೋಲ್ವ ಜಟಾ | ಸೋಗಿನಿಂದ ಮೆರೆವ ದೇವ 6 ಮೂರ್ತಿ ಭೋಕ್ತ ತ್ರಯ ಸುಮೂರ್ತಿಯಜ್ಞ ಗುರು ಗೋವಿಂದ ವಿಠಲ | ಭಗ್ನ ಗೈಸೊ ಮಾಯ ಪಟಲ 7
--------------
ಗುರುಗೋವಿಂದವಿಠಲರು
ನೀನೆ ದಯಾನಿಧಿಯು ಶ್ರೀ ಗುರುರಾಯ ನೀನೆ ದಯಾನಿಧಿಯು ಧ್ರುವ ಕರುಣದಿ ಕುಂತಿಯ ಪುತ್ರರಿಗೆ ಒಲಿದು ಕಾಳ ನಿರ್ಮಿಸಿ ಕೌರವರಳಿದು ಉಳಿಯದೆ ಇಳೆಯೊಳು ವಂಶವ ಸವರಿದ ಶೇಷಶಯನ ಶ್ರೀ ಕೇಶವ ನೀನೆ 1 ನರಗೊಲಿದು ನರಕಾಸುರನ ಮರ್ದಿಸಿ ನಾರಗನೆಂದಜಮಿಳನ ನೀ ತಾರಿಸಿ ನಾರದಗೊಲಿದು ನಾಟ್ಯವನಾಡಿದ ನರಹರಿಯು ನಾರಾಯಣ ನೀನೆ 2 ವೇದವ ಕದ್ದೊಯಿದಸುರನ ಸೀಳಿ ಮಚ್ಛವತಾರದ ರೂಪವ ತಾಳಿ ಮಾವನ ಕೊಂದ ಮಾನ್ಯರ ಮಡುಹಿದ ಮಾಧವ ನೀನೆ 3 ಗೋಕುಲದಲಿ ಪುಟ್ಟಿ ಧರೆಯೊಳು ಬೆರಳಲಿ ಗೋವರ್ಧನ ಗಿರಿಯನೆತ್ತಿ ಗೋಕುಲ ಕಾಯ್ದಿ ಗೋಪಿಯರಿಗೊಲಿದ ಗೋಪಾಲಕೃಷ್ಣ ಗೋವಿಂದನು ನೀನೆ4 ಸೃಷ್ಟಿನೆಲ್ಲ ಬೆನ್ನಿಲಿ ತಾಳಿದ ಶೇಷನ ಸಂ ಕಷ್ಟವ ಪರಿಹರಿಸಿದ ಶಿಷ್ಟ ವಿಭೀಷಣಗೊಲಿದು ಪಟ್ಟವಗಟ್ಟವು ವಿಷ್ಣವು ನೀನೆ 5 ಮದನನೊಲಿದು ಕಾಳಿಂಗನ ತುಳಿದು ಕದನದಲಿ ಬಾಣಾಸುರನಳಿದು ಮೇದಿನಿಯೊಳು ಮರೆ ಇಲ್ಲದೆ ದೈತ್ಯರ ಮರ್ದಿಸಿದ ಮಧುಸೂದನನು ನೀನೆ 6 ತ್ರಿಪುರವನಳಿದು ತ್ರಿಗುಣವ ತಾಳಿದ ತೆತ್ತೀಸ ಕೋಟಿ ದೇವರುಗಳಿಗಾಳಿದ ಅಕ್ರೂರಗೊಲಿದು ಚರಿತ್ರವದೋರಿದ ತ್ರಿಜಗಪತಿ ತ್ರಿವಿಕ್ರಮ ನೀನೆ7 ವಾಲಿಯನಳಿದು ವಾಲ್ಮೀಕಿಗೊಲಿದು ಬಲಿಚಕ್ರನ ಮುನಿಮುಂದಲಿ ಸುಳಿದು ಬ್ರಾಹ್ಮಣನಾಗಿ ದಾನವ ಬೇಡಿದ ಮಾನ್ನವಗೊಲಿದ ಶ್ರೀ ವಾಮನ ನೀನೆ 8 ಸೃಷ್ಟಿನೆಲ್ಲ ನಿರ್ಮಿಸಿ ವಕ್ಷ ಸ್ಥಳದಲಿ ಶ್ರೀ ಮಹಾಲಕ್ಷ್ಮಿಯ ಧರಿಸಿದ ಶ್ರೀನಿಧಿ ಶ್ರೀಪತಿ ಶ್ರೀಗುರುಮೂರುತಿ ಶ್ರೀದೇವಿಗೊಲಿದಿಹ ಶ್ರೀಧರ ನೀನೆ 9 ದಾಸರ ಕ್ಲೇಶಕಿಲ್ಮಿಷಗಳ ತೊಳೆದು ಅಂಬರಿಷ ರುಕ್ಮಾಂಗದಗೊಲಿದು ಶುಕ ಶೌನಕ ಪರಾಶರ ಮುನಿಗಳಿಗೆ ಹರುಷನಿತ್ತ ಹೃಷಿಕೇಶನು ನೀನೆ 10 ಕ್ಷಿತಿಯೊಳು ದೃಢ ಪತಿವ್ರತೆಗೊಲಿದು ಯತಿ ಮುನಿಗಳಿಗಿನ್ನು ಗತಿಗಳನಿತ್ತು ಪತಿತರ ತಾರಿಸಿ ಪಾವನಗೈಸಿದ ಪರಂಜ್ಯೋತಿ ಪದ್ಮನಾಭನು ನೀನೆ 11 ದೇವಕಿಗೊಲಿದು ಸ್ಥಾಪಿಸಿ ಧರೆಯೊಳು ದ್ವಾರಕಿಯಲಿ ನಿಜ ಲೀಲೆಯು ತೋರಿದ ದುರಿತ ವಿಧ್ವಂಸನ ದೇವಕಿ ಪುತ್ರ ದಾಮೋದರ ನೀನೆ 12 ಸಿದ್ದ ಶರಣರಿಗೊಲಿದ ಸದ್ಗತಿ ಸುಖಸಾಧನ ಸಹದೇವಗದೋರಿದ ಸಂಭ್ರಮದಿ ಸುಧಾಮಗ ಒಲಿದು ಸಂತೋಷವನಿತ್ತ ಸಂಕರುಷಣ ನೀನೆ 13 ವಸುಧಿಯೊಳು ಭಸ್ಮಾಸುರನ ಮರ್ದಿಸಿ ಭಾಷೆಯನಿತ್ತು ಭಕ್ತರ ಪಾಲಿಸಿ ಋಷಿ ವೇದವ್ಯಾಸಗೊಲಿದಾತನು ವಸುದೇವಸುತ ವಾಸುದೇವನು ನೀನೆ 14 ವಿದುರುದ್ಧವ ಗರುಡಗೊಲಿದು ಭೃಗುಮುನಿ ಕಪಿಲ ಯೋಗೇಂದ್ರನ ಸಲಹಿದ ಸ್ಥಿರಪದವಿತ್ತರೊಂದು ಮಂದಿಗೆ ಪ್ರಸನ್ನವಾದ ಪ್ರದ್ಯುಮ್ನನು ನೀನೆ 15 ಸೀತಾ ಸುದ್ದಿಯ ತಂದವಗೊಲಿದು ಹತ್ತು ತಲೆಗಳ ಇದ್ದವನಳಿದು ಕದ್ದುಬೆಣ್ಣೆಯ ಮುದ್ದೆಯ ಮೆದ್ದು ಉದ್ದವಗೊಲಿದ ಅನಿರುದ್ಧನು ನೀನೆ 16 ಸೋಕಿಸಿ ಪೂತಣಿಯ ಕಾಯವು ಹೀರಿದ ಭಕ್ತ ಪುಂಡಲೀಕನ ಸಲಹಿದ ಭಕ್ತಿಗೆ ಒಲಿದು ಮುಕ್ತಿಯನಿತ್ತ ಪರಮ ಪರುಷ ಪುರುಷೋತ್ತಮನು ನೀನೆ 17 ಅಕ್ಷಯವೆಂದು ರಕ್ಷಿಸಿ ಸಭೆಯೊಳು ದ್ರೌಪದಿ ಕರುಣಕಟಾಕ್ಷದಿ ಸಲಹಿದ ಭಕ್ತವತ್ಸಲನಾಗಿ ಗಜೇಂದ್ರಗೆ ಅಧೋಕ್ಷಜ ನೀನೆ 18 ನರನಾರಿಯು ನಾಂಟೀಶರನಾಗಿ ನಖಮುಖದಲಿ ಹಿರಣ್ಯಕನ ಸೀಳಿ ಭಕ್ತಪ್ರಹ್ಲಾದಗ ಒಲಿದು ಸ್ತಂಭದಿ ಪ್ರಕಟಿಸಿದ ನರಸಿಂಹನು ನೀನೆ 19 ಅನಿಳ ಸ್ನೇಹಿತ ಅಜಗ್ನಾನಗ ಒಲಿದು ಅಹಲ್ಯಾ ಶಾಪ ವಿಮೋಚನ ಮಾಡಿದ ನೆಚ್ಚಿದ ಧ್ರುವನ ನಿಜ ಭಕ್ತಿಗೆ ಒಲಿದು ಅಚಲ ಪದವಿತ್ತುಚ್ಯುತ ನೀನೆ 20 ಜಗದೊಳು ಭಕ್ತಜನರಿಗೆ ಒಲಿದು ಜಾಹ್ನವಿ ನಿರ್ಮಿಸಿ ಜನಕನ ಸಲಹಿದ ಸಾಧು ಸಜ್ಜನ ಮುನಿ ಸಂಜೀವನ ಜಾನಕೀಪತಿ ಜನಾರ್ಧನನು ನೀನೆ 21 ಅಂಗದಗೊಲಿದಾನಂದವನಿತ್ತು ಕುಂದದೆ ಕರೆದುಪಮನ್ಯುನ ಸಲಹಿದ ದಿನಕರ ಚಂದ್ರ ಕಳಿಯಗಳಿತ್ತು ಇಂದ್ರಗೆ ಒಲಿದ ಉಪೇಂದ್ರನು ನೀನೆ 22 ಧರೆಯೊಳು ಭಕ್ತನ ಜನ್ಮವು ಹರಿಸಿ ಹರಿಶ್ಚಂದ್ರನ ಕ್ಲೇಶವು ಪರಿಹರಿಸಿದ ಸುರಮುನಿಗೊಲಿದ ಶ್ರೀ ಹರಿಯು ನೀನೆ 23 ಕಾಳಿ ಮಥನವು ಮಾಡಿ ಕರುಣದಿ ಸುರರಿಗೆ ಅಮೃತವನಿತ್ತು ಸಲಹಿದ ಕಲ್ಕ್ಯಾವತಾರದ ಲೀಲೆಯ ತೋರಿದ ಕಪಟ ನಾಟಕ ಶ್ರೀ ಕೃಷ್ಣನು ನೀನೆ 24 ಸಂಧ್ಯಾನದ ಸಾಹಾಯವನಿತ್ತು ಕಾಯದಿ ಸದ್ಗತಿ ಸಾಧನದೋರಿದ ನರಕೀಟಕ ಮಹಿಪತಿ ತಾರಕ ಗುರುಮೂರ್ತಿಯ ಪರಮ ದಯಾನಿಧಿಯು ನೀನೆ 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ರಕ್ಷಿಸೊ ಎನ್ನ ಪೂರ್ಣ ನೀ ಸ್ವಾನುಭವಸುಖದಾಯಕ ಅನುದಿನಪಾಲಕ ಅನಾಥಜನ ನೀ ರಕ್ಷಕ 1 ನ್ಯೂನಪೂರ್ಣಕಾಗುತಿಹ್ಯ ನಿಜದೀನಬಂಧು ಶಾಶ್ವತ ಘನ ದಯ ಸದೋದಿತ ನೀನೆಮ್ಮ ಸುಸ್ವಹಿತ 2 ತಂದೆತಾಯಿಯು ನೀನೆ ಸದ್ಗುರು ಬಂಧುಬಳಗ ಸನಾತನ ಭೂಷಣ ನೀನೆ ಪಾಲಿಸೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀರಜದಳನಯನಾ ಅನ್ಯನಲ್ಲ ನಾ ನಿನ್ನ ದಾಸನುಯಂದು ಚಿನ್ಮಯ ಮೂರುತಿ ಶ್ರೀನಿವಾಸಹರೆ ಪ ಪಂಕಜೋದ್ಭವನಾ ಪಡೆದಂಥಾ ವೆಂಕಟಗಿರಿನಿಲಯ ವೇಣುನಾದಪ್ರೀಯಾ ಬಿಂಕಾದಿ ಶರಣರ ಪೊರೆದಂಥಾ ಚಕ್ರಧರ ಶೌರಿ ಮಹಾನುಭಾವ ಬಿಂಕದಾನವರಳಿದ ಬಲವಂತಾ ಶಂಕೆಯಿಲ್ಲದೆ ನಿಮ್ಮ ಸ್ಮರಿಸುವ ದಾಸರ ಕಿಂಕರ ಕಿಂಕರ ಕಿಂಕರನೆಂದು ಇನ್ನು 1 ವಾಸುಕಿಶಯನ ಶ್ರೀ ವಸುದೇವನಂದನ ಭೂಸರವಂದ್ಯ ಪುರಾಣ ಪುರುಷ ಈಶ ಜಗತ್ರಯ -----ರಾಜವರದಾ ಭೂಸುತೋನಾಯಕ ಭೂರಮಣಾ ಸಾಸಿರನಾಮದ ಸರ್ವೇಶನೆ ಕೃಷ್ಣಾ ಭೂಸೂರ ಕೀರ್ತಿ ಪ್ರಕಾಶನಾದ ಕೇಶವ ಗೋವಿಂದ ಕರುಣಿಸಿ ಕಾಯೋ ಎನ್ನ ಪಾದ ವೈಕುಂಠಾಧೀಶ 2 ಅಂಡಜಗಮನ ಭೂಮಂಡಲ ನಾಯಕ ಪುಂಡರೀಕಾ ವರದ ಪರಮಾತ್ಮನೆ ಚಂಡ ಪ್ರಚಂಡ ವೇದಾಂತ ರಹಸ್ಯನಾದ ಉದ್ದಂಡ ದೇವಾ ಕೊಂಡಾಡುವರ ನಿಮ್ಮ ಕರುಣಿಸಿ ಕೈಹಿಡಿದು ಕಾಯ್ವ ಭಾರವುಳ್ಳ ಘನನು ನೀನೂ ಪತಿ ` ಹೆನ್ನ ವಿಠ್ಠಲ' ನಿನ್ನಂದು ಸೇರಿದ ಅವರ ಹರುಷದಿ ಸಲಹೋ ಇನ್ನೂ 3
--------------
ಹೆನ್ನೆರಂಗದಾಸರು
ನೀರಿನಿಂದಲೆ ಸರ್ವಫಲ ಬಾಹೋದು ನೀರಜಾಕ್ಷನ ಸೇವೆ ಮಾಳ್ಪ ಸುಜನರಿಗೆ ಪ ನೀರಿಲ್ಲದಲೆ ಯಾವ ಸಾಧನವು ನಡೆಯದು ನೀರಿಲ್ಲದಲÉ ಯಾಗ ತಪಸ್ಸು ನಿಲ್ಲುವದು ನೀರಿಲ್ಲದಲೆ ಸ್ನಾನ ಆಚಾರಹೀನವು ನೀರಿಲ್ಲದಲೆ ದೇವತಾರ್ಚನೆಯು ಇಲ್ಲವು 1 ನೀರೆಂದರೆ ಬರಿಯ ಜಡವಾದ ನೀರಲ್ಲ ನೀರಜಾಕ್ಷನು ಜಲದಿ ವಾಸವಾಗಿಹನು ವಾರಿಜಾಸನ ಮುಖ್ಯ ಸುರರೆಲ್ಲ ಹರುಷದಲಿ ನೀರಮಧ್ಯದೊಳಿರುವ ಹರಿಯಧ್ಯಾನಿಪರೆಲ್ಲ2 ಉದಯಕಾಲದಿ ಮುಖವ ತೊಳೆಯೆ ಜಲವಿರಬೇಕು ಮಧುಸೂದನನ ಮನೆಯ ಸಾರಿಸಲು ಜಲಬೇಕು ಹೃದಯ ಶುದ್ಧದಿ ಸ್ನಾನ ಮಾಡೆ ಜಲವಿರಬೇಕು ಮುದದಿ ಮಡಿಯುಡುವುದಕೆ ಉದಕವಿರಬೇಕು3 ಮೃತ್ತಿಕಾಶೌಚಕ್ಕೆ ಅಗತ್ಯಜಲವಿರಬೇಕು ನಿತ್ಯ ಗೋಸೇವೆಗೆ ಉದಕಬೇಕು ಮತ್ತೆ ಶ್ರೀ ತುಳಸಿಗೆರೆಯಲು ಉದಕವಿರಬೇಕು ಮತ್ತೆ ಹರಿಪೂಜೆಗಗ್ರೋದಕವು ಬೇಕು4 ಸಚ್ಚಿದಾನಂದನ ಅಭಿಷೇಕಕ್ಕೆ ಜಲಬೇಕು ಮತ್ತೆ ಪಾಕವು ಮಾಡೆ ಜಲವುಬೇಕು ನಿತ್ಯ ತೃಪ್ತನ ನೈವೇದ್ಯಕ್ಕೆ ಜಲವು ಬೇಕು ಅರ್ತಿಯಿಂದ ಅತಿಥಿ ಪೂಜೆಗೆ ಉದಕಬೇಕು 5 ಪಾದ ತೊಳಿಬೇಕು ಮತ್ತೆ ಅವರಿಗೆ ಸ್ನಾನಕಣಿ ಮಾಡಬೇಕು ಸುತ್ತ ಬೆಳೆÀಗಳಿಗೆಲ್ಲ ಮತ್ತೆ ನೀರಿರಬೇಕು ಸತ್ಯ ಮೂರುತಿ ಪಾದದಂಗುಷ್ಟದಲಿ ಜನಿಸಿದ6 ನಿತ್ಯ ಎರೆಯೆ ನೀರಿರಬೇಕು ಕುಸುಮ ಪುಷ್ಪದ ಗಿಡಕೆ ನೀರುಬೇಕು ವಸುದೇವಸುತನ ತೆಪ್ಪೋತ್ಸವಕೆ ಜಲಬೇಕು ಎಸೆವ ಕದಲಾರತಿಗೆ ಉದಕಬೇಕು 7 ನೀರಿನೊಳು ಹಾವಿನ ಮೇಲೆ ಮಲಗಿದ ಹರಿಯ ನಾಭಿನಾಳದ ತುದಿಯಲಿರುವ ಕಮಲದಲಿ ನೀರಜಾಸನನ ಪಡೆದಿರುವ ಮಹಿಮೆಯ ಕೇಳಿ ನೀರಿನಲಿ ಹರಿಯ ಅವತಾರ ರೂಪಗಳುಂಟು8 ನೀರಿನೊಳು ವಾರುಣಿಯಪತಿಯ ಶಯ್ಯದೊಳಿಹನು ನೀರಿನೊಳು ಮುಳುಗಿ ವೇದವ ತಂದನು ನೀರಿನೊಳು ಮುಳುಗಿ ಭಾರವ ಪೊತ್ತು ನಿಂತನು ನೀರಜಾಕ್ಷನು ನಾರಬೇರ ಮೆದ್ದಿಹನು 9 ನೀರಜೋದ್ಭವಪಿತನು ಕ್ರೂರರೂಪವ ತಾಳ್ದ ನೀರೆ ಅದಿತಿಯ ಪುತ್ರನಾಗಿ ನಿಂತ ನೀರಜಾಕ್ಷನು ಪರಶುವಿಡಿದು ಸಂಚರಿಸಿದನು ನೀರೆಗೋಸುಗ ಸಾಗರಕÉ ಸೇತುವೆಯ ಕಟ್ಟಿದನು10 ನೀರಿನೊಳು ಗಜದ ಶಾಪವ ಕಳೆದು ಪೊರೆದನು ನೀರೆ ದ್ರೌಪದಿಯ ಅಭಿಮಾನವನು ಕಾಯ್ದ ನೀರ ಮಧ್ಯದಿ ದ್ವಾರಕಾಪುರವ ರಚಿಸಿದನು ನೀರಜಾಕ್ಷಿಯರ ಕೂಡಿ ನೀರೊಳಗೆ ಆಡಿದನು 11 ಕಮಲ ಜಲದಲ್ಲಿಹುದು ಕಮಲನಾಭ ವಿಠ್ಠಲ ಜಲದೊಳೋಲ್ಯಾಡುವ ಶ್ರಮವ ಪರಿಹರಿಪ ಚಂದ್ರನು ಜಲದಿ ಪುಟ್ಟಿಹನು ಕಾಮಧೇನು ಐರಾವತವು ಪುಟ್ಟಿದ ಜಲವಯ್ಯ 12
--------------
ನಿಡಗುರುಕಿ ಜೀವೂಬಾಯಿ
ನೆಚ್ಚದಿರು ಸಂಸಾರ ಕಾಡಗಿಚ್ಚಿನಂದದಿ ದಹಿಸುವದತಿ ಘೋರ ಪ ಕ್ಷುದ್ರ ಜನರ ಸಂಗತ್ಯಜಿಸೊ | ಸದಾ ಮಧ್ವಸುಶಾಸ್ತ್ರ ಕೇಳಿ ನೀ ಗ್ರಹಿಸೊ ಸದ್ಗುರುಗಳ ಪಾದಾಶ್ರೈಸೊ | ನೀನೆ ಉದ್ಧಾರಕನೆಂದು ಹರಿಯನ್ನೆ ಬಯಸೊ 1 ನಾನೆಂಬೊ ಅಹಂಕಾರಸಲ್ಲ | ನಿನ್ನ ಮಾನಿನಿ ಸುತರು ಸಂಗಡ ಬಾಹೋರಿಲ್ಲ ಈ ನುಡಿ ದಿಟ ಸಟಿಯಲ್ಲ | ಹೀಗೆ | ನೀನಾಚರಿಸಲು ಒಲಿವ ಶ್ರೀನಲ್ಲ2 ಆಶಾಕ್ರೋಧಂಗಳ ಕೀಳೊ | ಹರಿ | ದಾಸರ ದಾಸರ ದಾಸನೆಂದ್ಹೇಳೊ || ದೋಷಕ್ಕೆ ಅಂಜಿ ನೀ ಬಾಳೊ | ಎಲ್ಲ | ಈಶನಾಧೀಶವೆಂಬುದೆ ಮುಕ್ತಿ | ಕೇಳೋ 3 ಹರಿವಾಸರುಪವಾಸ ಮಾಡೊ | ಇರುಳು ಜಾಗರ ಮರಿಬ್ಯಾಡೊ ಮರುದಿನ ನಿದ್ರೆಯ ದೂಡೊ | ಇಂತು ಪರಿಯಲ್ಲಿ ನಡೆದರೆ ನಿನಗಿಲ್ಲ | ಕೇಡು 4 ಇಂದ್ರಿಯಗಳ ನಿಗ್ರಹಿಸೊ | ಮನಿಗೆ | ಬಂದ ಭೂಸುರರಿಗೆ ವಂದಿಸಿ | ಉಣಿಸೊ ಕುಂದು ನಿಂದೆಗಳೆಲ್ಲ ಸಹಿಸೊ | ಶಾಮ ಸುಂದರ ವಿಠಲನ್ನ ನೀ ಪೊಂದಿ ಸುಖಿಸೊ 5
--------------
ಶಾಮಸುಂದರ ವಿಠಲ
ನೆನೆ ಕಂಡ್ಯ ಮನವೆ ಸದ್ಗುರು ದಿವ್ಯಪಾದ ಖೂನ ತೋರುವದಿದೆ ನಿಜಬೋಧ ದ್ರುವ ನೆನೆಯಬೇಕೊಂದೆ ಭಾವದಿಂದೆ ತಾನೆತಾನಾಗುವ ಗುರು ತಾಯಿತಂದೆ 1 ಘನ ಸುಖ ಕೊಡುವ ಅನುಭವದಲಿಡುವ ಜನನ ಮರಣದ ಬಾಧಿಯ ಮೂಲಗಡೆವ 2 ಗುರುವಿಂದಧಿಕ ಬ್ಯಾರಿಲ್ಲ ಸುಖ ತಿರುಗಿ ನೋಡಲು ತನ್ನೊಳಾದ ತಾ ಕೌತುಕ 3 ಇದೆ ನಿಜಬೋಧ ಸ್ವಸುಖದ ಭೇದಿಸಿದವರಿಗಿದೆ ಸುಪ್ರಸಾದ 4 ಗುರುತಾ ತೋರುವ ಸುರಿಮಳೆಗರೆವ ಅನುದಿನ ಹೊರೆವ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೈವೇದ್ಯವಿದು ಭುಂಜಿಸಲು ಯೋಗ್ಯವಾಗಿದೆಕೈವಲ್ಯದಾಯಕ ನೀನಾರೋಗಣೆ ಮಾಡು ಪಆದಿತ್ಯ ವಸು ರುದ್ರ ಬ್ರಹ್ಮಾದಿ ಸಕಲ ದೇವರ್ಕಳು ಮಂಡಲದೊಳಗಿಹರುಆದಿಯೊಳ್ ಭೂಮಿಯ ಪ್ರೋಕ್ಷಿಸಿ ಮತ್ತಲ್ಲಿಸಾಧಿಸಿ ಮಂಡಲವದು ರಂಜಿಸುತಲಿದೆ 1ಭೋಗ್ಯ ಭೋಕ್ತøಗಳೆಂದು ಬಗೆಯರಡಾಗಿದೆಭೋಗ್ಯವು ಜಗವಿದು ಭೋಕ್ತø ನೀನುಪ್ರಾಜ್ಞ ರೂಪದಿ ಸುಪ್ತಿ ಸುಖಸಾಕ್ಷಿರೂಪನೆಸಾಘ್ರ್ಯಪಾದ್ಯಗಳಿಂದ ಸತ್ಕರಿಸುವೆನೀಗ 2ಜಡಪ್ರಕೃತಿಯೆ ಪಾದವೆಂಟರ ಪೀಠವುಜಡವಿರಹಿತವಾದ ಪ್ರಕೃತಿ ತಾ ಮಣೆಯುದೃಢ ವಿವೇಕವೆ ದಿವ್ಯ ಹರಿವಾಣವದರಲ್ಲಿಒಡಗೂಡುವನುಭವವೆಂಬನ್ನ ಬಡಿಸಿದೆ 3ಇಪ್ಪತ್ತುನಾಲ್ಕು ತತ್ವಂಗಳೆ ಶಾಕಂಗಳೊಪ್ಪುವ ಬಹು ವಿಷಯಗಳೆ ವ್ಯಂಜನವುತಪ್ಪದೆ ಮಾಡುವ ಭಕ್ತಿ ತಾ ರಸವುತುಪ್ಪವು ಜೀವನ ಬೆರಸುವ ಗುಣವು 4ಪರಮನೊಳೈಕ್ಯವಾದನುಭವ ಕ್ಷೀರವುನೆÀರೆ ಪುಟ್ಟಿದಾನಂದ ತಾನೆ ಸಖ್ಖರೆಯುತಿರುಪತಿ ನಿಲಯ ಶ್ರೀ ವೆಂಕಟರಮಣನೆಕರುಣಕಟಾಕ್ಷದಿಂದಾರೋಗಣೆ ಮಾಡು5ಓಂ ನವನೀತವಿಲಿಪ್ತಾಂಗಾಯ ನಮಃ
--------------
ತಿಮ್ಮಪ್ಪದಾಸರು
ನೋಡಮ್ಮಮ್ಮಾ ಎಂಥವನಿವಾ ಚಿನ್ನನೆ| ಗೋಪಿಯ ಕಂದಾ ಅಂತವ ದೋರಗುಡನೆ ಪ ಸಗಟನ ಮುರಿದೊತ್ತಿದ|ಮೊಲೆಯ ಕೊಟ್ಟ| ಮುಗುದೆಯ ಪ್ರಾಣ ಹೀರಿದಾ 1 ವಿಷಮಡು ಕಲಕಿದನೆ|ಕಾಳಿಂಗನಾ| ವಸುಧೆಗೆ ಎಳೆತಂದನೆ 2 ಪಶುಪಕ್ಷಿ ಮೃಗಾಂಗನೇರು|ಕೊಳಲಧ್ವನಿಗೆ| ನಿಸಿದಿನಿ ಮರುಳಹರು3 ತಿನಬ್ಯಾಡಮಣ್ಣವೆಂದರೆ|ಬಾಯೊಳು ಜಗವ| ದೋರಿದ ಜನ ಬೆದರೆ 4 ತಂದೆ ಮಹಿಪತಿ ಸ್ವಾಮಿಯ|ಹೇಳಲಿ ನಾನು ಒಂದೆರಡೆಂದು ಲೀಲೆಯ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡುವ ಬನ್ನಿ ಸ್ವಾಮಿಯ ಅಂತರ್ಯಾಮಿಯ ಭಕ್ತಿಯ ದೃಢಯುಕ್ತಿಯ 1 ದೇವದೇವನ ಪೂರ್ಣ ನೋಡುವ ಸೇವೆಮಾಡುವ ಸರ್ವದಾ ಕೊಂಡಾಡುವ ನವವಿಧ ಭಕ್ತಿಯ ಮಾಡುವ ಭಾವವಿಡುವ 2 ತನು ಮನಧನ ಅರ್ಪಿಸಿ ಬಿಡುವ ಮನಗೂಡುವ ಪ್ರಾಣಾಯಾಮ ಮಾಡುವ ಅನುದಿನ ಸಾಧಿಸಿ ನೋಡುವ ಘನಗೂಡುವ 3 ಇಡಾಪಿಂಗಳ ಮಧ್ಯ ನೋಡುವ ನಡೆವಿಡುವ ನಡುಹಾದಿಗೂಡುವ ಒಡನೆ ಸ್ವಸುಖ ಪಡೆವ ಗೂಢ ನೋಡುವ 4 ಸವಿಸುಖಸಾರ ಸುರುತದೆ ದ್ರವಿಸುತದೆ ಠವಠವಿಸುತದೆ ರವಿಕೋಟಿಪ್ರಭೆ ಭಾಸುತದೆ ಆವಾಗಲ್ಯದೆ 5 ಏನೆಂದನಬೇಕನುಭವ ಖೂನದೋರುವ ಘನ ಮಳೆಗರೆವ ಸ್ವಾನುಭವದಲಿ ಸೇವಿಸುವ ಅನುಸರಿಸುವ 6 ಜಾಗಿಸುತ್ತದೆ ವಸ್ತುಮಯ ಬಗೆಬಗೆಯ ಯೋಗ ಇದೆ ನಿಶ್ಚಯ ಸುಗಮಸಾಧನ ಮಹಿಪತಿಯ ಸುಜ್ಞಾನೋದಯ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನ್ಯಾಯತಂದಿಹೆನೊ ಹರಿ ನಿನ್ನ ಸಭೆಗೆ ತೀರ್ಪುಮಾಡಿದನು ನ್ಯಾಯತಂದಿಹೆ ಪ ನ್ಯಾಯ ತಂದಿಹೆ ನೋಯದೆ ಉ ಪಾಯದಿಂದ ತೀರ್ಪುಮಾಡುವ ನ್ಯಾಯಾಧೀಶ ದಯಾಳು ಎನ್ನ ನ್ಯಾಯ ತೀರಿಸಿ ಕಾಯ್ವನೆಂದು ಅ.ಪ ಕೊಟ್ಟ ಒಡೆಯರೋ ಬೆನ್ನಟ್ಟಿ ಎನ್ನನು ಕಟ್ಟಿ ಕಾದ್ವರು ಭ್ರಷ್ಟನೆ ಮುಂದಕೆ ಕೊಟ್ಟ್ಹ್ಹೋಗೆನ್ವರು ನಿಷ್ಠುರಾಡ್ವರು ಕೊಟ್ಟು ಮುಕ್ತನಾಗ್ವೆನೆನ್ನಲು ಖೊಟ್ಟಿಕಾಸು ಕೈಯೊಳಿಲ್ಲವು ಭವ ಬೆನ್ನಟ್ಟಿ ಬಿಡದ ಕ ನಿಷ್ಟರಿಣಸೂತಕವ ಕಡಿಯೆಂದು 1 ಅನ್ನ ಕೊಟ್ಟವಗೆ ಅನ್ಯಾಯ ಯೋಚಿಸಿ ಬನ್ನ ಬಡಿಸಿದೆನೊ ಇನ್ನುಳಿಯದೆನೆಂದು ನಿನ್ನ ಸೇರಿದೆನೊ ಪನ್ನಂಗಶಯನ ಮುನ್ನ ಮಾಡಿದ ಎನ್ನ ಅವಗುಣ ಭಿನ್ನವಿಲ್ಲದೆ ನಿನ್ನೊಳ್ಪೇಳುವೆ ಸನ್ನುತಾಂಗನೆ ಮನ್ನಿಸಿ ಇದ ನಿನ್ನು ಎನ್ನಯ ಬನ್ನಬಿಡಿಸಿದೆಂದು 2 ಆಸೆಗೊಳಿಸಿದೆನೋ ಪುಸಿಯನ್ಹೇಳಿನಿ ರಾಸೆಮಾಡಿದೆನೋ ಶಾಶ್ವತದಿ ಕೊಟ್ಟ ಭಾಷೆ ತಪ್ಪಿದೆನೋ ವಸುಧೆಯೊಳು ನಾನು ಈಸುದಿನದಿಂ ಮೋಸಕೃತ್ಯದಿ ಘಾಸಿಯಾದೆನು ಧ್ಯಾಸಮರದು ಶ್ರೀಶ ಶ್ರೀನಿವಾಸ ಶ್ರೀರಾಮ ಪೋಷಿಸೆನ್ನ ಸುಶೀಲ ಗುಣವಿತ್ತು 3
--------------
ರಾಮದಾಸರು
ಪಥ ಸಹಕಾರ ನಿಗಮಗೋಚರ ನಿರ್ಧಾರ ಜಗದ್ಗುರು ಜಗದಾಧಾರ 1 ಘನ ದಯದಲಿ ಸಮರ್ಥ ಅನುಭವಕೆ ಸುತತ್ವಾರ್ಥ 2 ಸಾಹ್ಯಸಾನುಕೂಲದಾಗರ ಮಹಿಮೆ ನಿನ್ನದು ಅಪಾರ ಸ್ವಸುಖದ ಸಾಗರ ಮಹಿಪತಿಯ ಮನೋಹರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪದ್ಯ ಅಥಃ ಪ್ರಥÀಮೋಧ್ಯಾಯ ಪಾದ ವಾರಿಜಕೆರಗುತ ನೀರಜ ಮುಖಿ ಸರಸ್ವತಿಯಾ || ಸಾರ ಭಕ್ತಿಲಿ ಸ್ತುತಿಸಿ ಪೇಳುವೆ ಸತ್ಯ ಚಾರು ಕಥೆಯಾ ಪ ಸುರಮುಖಿವಂದಿತ ಸರಸಿಜ ಭವಪಿತ ಶರಧಿ ಕರಿವರದಾ | ಹರುಷದಿಂದಲಿ ನಿನ್ನ ಚರಿತೆ ಕೊಂಡಾಡಲು ವರವ ಪಾಲಿಸು ದಯದಿಂದ 1 ಶರನಿಧಿ ಸಂಭೂತೆ ಸುರಜೇಷ್ಟ ಸ್ಮರಮಾತೆ ಪುರಹರ ವಂದಿತೆ ಖ್ಯಾತೆ || ಸ್ಮರಿಸಿ ಬೇಡುವೆ ನಿನ್ನ ಧೊರಿಯ ವರ್ಣಿಸಲೀಗ ಗರಿಯೆ ವರವ ಸುಖದಾತೆ 2 ಹರಿಕುಲೋತ್ತುಮ ನಿನ್ನ ಸರಸಿಜ ಪದಯುಗ ನೆರೆನಂಬಿದೆನು ಮುದಿಂದ || ಹರಿಸುಚರಿತ್ರವು ಅರುಹಲು ಎನ್ನಗೆ ಸ್ಥಿರ ಬುದ್ಧಿಕೊಡು ವಾಯುಕಂದ 3 ಗಿರಿಜೇಶ ಶಚಿಪತಿ ಸುರತತಿಗೆರಗುವೆ ಪರಮ ಸುಭಕ್ತಿ ಪೂರ್ವಕದಿ || ಹರಿದಾಸ ವರ್ಗಕೆ ಶುಭನೀಡಲೆನಗೆಂದು ಶಿರಬಾಗಿ ಬೇಡುವೆ ಮನದಿ 4 ಘನತರ ನೈಮಿಷವನದೊಳು ವಾಸಿಪ ಮುನಿ ಸೂತನಲ್ಲಿಗೆ ಬಂದು | ವಿನಯದಲಿ ವಿಜ್ಞಾಪನ ಮಾಡಿಕೊಂಡರು ಶೌನಕಾದಿಗಳೆಲ್ಲ ನಿಂದು 5 ಕ್ಷಿತಿಯೊಳು ಮನದಾಸೆ ಹಿತದಿಂದ ನೀಡುವ | ವ್ರತದಾವದ್ಹೇಳಿರೆನುತ || ಅತಿ ಭಕ್ತಿಯಿಂದ ಕೇಳುವ ಮುನಿಗಳ ಕಂಡು ಕಥಿಸಿದನಾಗೆತಿ ಸೂತಾ 6 ಛಂದದಿ ಕೇಳಿರಿ ಒಂದೆ ಮನದಿ ಈಗಾ | ನಂದದಿ ನಾರದ ತಾನೂ || ಹಿಂದಕ್ಕೆ ಈತೆರ ನಂದನ ಗೋ ವಿಂದನ ಪ್ರಶ್ನೆ ಮಾಡಿದನೂ 7 ಕಾರುಣ್ಯದಿಂದಲಿ ಸಾರಸೋದ್ಭವಕು | ಮಾರ ನಾರದ ಮುನಿವರಗೆ || ಶೌರಿ ಪೇಳಿದ ಕಥೆ ಸಾಧುವೆ ಮೋದದಿ ನಿಮಗೆ 8 ವರಸುರ ಲೋಕಾದಿ ಚರಿಸುತ್ತನಾರದ | ಹರುಷದಿ ಭೂಮಿಗೆ ಬರಲು || ನರರತಿ ಕಷ್ಟದಿ ಮರುಗುವದಂ ನೋಡಿ | ಪೊರೆಟರು ಹರಿಗ್ಹೇಳಿ ಕೊಳಲು 9 ಪದುಮಜ ಸುತ ನಾರದ ಮುನಿ ವೇಗದಿ | ವಿದುಧರ ವಂದಿತನಾದ || ಯದುಪನಲ್ಲಿಗೆ ಬಂದು ಮುದಮನದಿಂದಲಿ | ವಿಧ ವಿಧದಲಿ ಸ್ತುತಿಗೈದಾ 10 ಅಗಣಿತ ಮಹಿಮನೆ ತ್ರಿಗೂಣ ವರ್ಜಿತ ತ್ರಿವಿಕ್ರಮನೆ || ಪೊಗಳುವ ತವ ಪದಯುಗಕೆರಗುತ ನಾನು ಜಗದುತ್ವತ್ತಿ ಕಾರಣನೆ 11 ಮಗಳಲ್ಲಿ ಪುಟ್ಟದಿ ಮಗನನ್ನು ಕುಟ್ಟದಿ | ಮಗನ ಮಗಳ ಮದುವ್ಯಾದಿ || ಮಗನ ಮಗನ ವರಪಡೆದಾತನ ಜೈಸಿ ಮಗನ ಮಗನ ನೀನು ತಂದಿ 12 ಸಿಂಧುಜರಿಪ್ರಸಖ ನಂದನ ಕೊಂದನ | ತಂದೆಯ ತಂದೆಯಾ ಸುತೆಯಾ || ನಂದಿನಿಯಳಿಗಾಗಿ ನೊಂದಿದಿ ನೀ ನರ ರಂದದಿ ಕವಿಗಣಗೇಯಾ 13 ಘನ್ನ ಮಹಿಮ ನಿನ್ನ ಅನಂತ ಚರಿಯವ ಬಣ್ಣಿಸ ಬಲ್ಲೆನೆ ದೇವಾ || ಪನ್ನಗರಾಜಗಾಗಣ್ಯವಾಗಿಪ್ಪುದು ಮನ್ನಿಸು ಎನ್ನ ಬಿನ್ನಪವಾ 14 ಬಾ ಮುದ್ದು ನಾರದನೆ ಬಾ ಮುನಿವರ್ಯನೆ ಬಾ ಮೂರು ಭುವನ ಸಂಚಾರಿ ನೇಮದಿಂದಲಿ ನಿನ್ನ ಕಾಮಿತ ಪೇಳೀಗ ಪ್ರೇಂದಿಂದಲಿ ವೀಣಾಧಾರಿ 15 ಮುರಹರ ನಿನ್ನಗೆ ಅರಿಯದ ವಾರ್ತೆಯು | ಧರಣಿ ತ್ರಯದಿ ಉಂಟೇನೋ || ನರರತಿ ಕಷ್ಟದಿ ಮರುಗುತಲಿಪ್ಪರು ಹರಿಪೇಳಿದಕುಪಾಯವನು 16 ಸತ್ಯಲೋಕೇಶನ ಪುತ್ರನೆ ನಿನ್ನಯ | ಉತ್ತಮ ಪ್ರಶ್ನೆಗೆ ನಾನು || ಚಿತ್ತೈಸು ಮುನಿವರ ನೀನು 17 ನಾರದ ಶ್ರೀ ಸತ್ಯನಾರಾಯಣ ವ್ರತ ಧಾರುಣಿಯೊಳಗಿನ ಜನರು ಆರು ತಮ್ಮ ಪರಿವಾರದಿಂದಲಿ ಗೈಯ್ಯೆ ಭೂರಿ ಸೌಖ್ಯದಿ ಮೆರೆವರೋ 18 ದೇವನೆ ಈ ನಿನ್ನ ಸೇವಕನಿಗೆ ಸತ್ಯ || ದೇವನೆ ವ್ರತದ ವಿಧಾನ || ಸಾವಧಾನದಿ ಪೇಳು ಭಾವ ಜಪಿತ ಏಕೋ ಭಾವದಿ ಕೇಳುವೆ ಮುನ್ನ 19 ಬುಧನುತ ನಾರದ ಘೃತಕ್ಷೀರ ಶರ್ಕರ | ಕದಳಿ ಗೋಧೂ ಮಾದಿಗಳನು || ಪದುಳದಿಂದಲಿ ಸುಪಾಕಗೈದು ಮೇಣ್ ವಿಧ ವಿಧ ಪಕ್ವಾದಿಗಳನು 20 ಪರಮ ಭಕ್ತಿಯಲಿಂದ ಪರಿವಾರ ಸಹಿತದಿ ಧರುಣಿಸುರನ ಪರಿಮುಖದಿ ತುರಧೂಳಿಕಾಲದಿ ಪರಿಪರಿ ಪೂಜಿಸಿ ಹರಿಗರ್ಪಿಸಲಿ ಬೇಕು ಮುದದಿ 21 ಈರೀತಿಗೈವರ ಕೋರಿಕೆಯನು ದಯ | ವಾರಿಧಿ ಶಾಮಸುಂದರನೂ || ನಿತ್ಯ ವಾರಿಜಸಹಿತದಿ ಸೇರಿ ತಾ ನಲಿದಾಡುತಿಹನೂ 22 ಇತಿ ಪ್ರಥಮೋಧ್ಯಾಯ ಸಂಪೂರ್ಣಂ ಅಥಃ ದ್ವಿತೀಯೋಧ್ಯಾಯಃ ಅತಿ ಮೋದದಿಂದಲಿ ಮತಿಯುತರೆ ಈಗ ಪೃಥವಿಯೊಳಗೆ | ಪೂರ್ವದಲಿ || ವ್ರತಗೈದ ಸುಗುಣರ ಇತಿಹಾಸ ನಿಮ್ಮಗೆ ಕಥಿಸುವೆ ಹಿತದಿಂದ ಕೇಳಿ 1 ಕಾಶಿಯೊಳಗೆ ಒಬ್ಬ ಭೂಸುರ ಬಡತನ ಕ್ಲೇಶದಿ ವಾಸಿಸುವದನು || ಶ್ರೀಶ ಅವನ ನೋಡಿ ಪೋಷಿಸಲು ವೃದ್ಧ ವೇಷದಿ ಮಾತನಾಡಿಸಿದನು 2 ಭೂತವಕದಿ ವಿಪ್ರನಾಥನೆ ತವ ಮುಖ ಪಾಥೋಜ ಬಾಡಿದ ಬಗೆಯಾ ಈ ತೆರ ದುಃಖದಿ ನೀ ತಿರಗುವಂಥ ಮಾತು ಪ್ರೀತಿಲಿ ಪೇಳಯ್ಯಾ 3 ಕಥಿಸುವೆ ಹೇವಿಪ್ರ ಹಿತದಿಂದ ನೀಯನ್ನ | ಸ್ಥಿತಿಯಾ ಲಾಲಿಸು ಮನದಿಂದಾ || ಗತಿಗೆಟ್ಟು ಚರಿಸುವೆ ಪೃಥಿವಿಯೊಳಗೆ ಈಗ ಅತಿ ಬಡತನ ದೆಶೆಯಿಂದಾ 4 ಶ್ರೇಷ್ಟನೆ ದಾರಿದ್ರ್ಯ ಕಷ್ಟ ತೊಲಗುವಂಥ | ಥಟ್ಟನೆ ನೀ ಪೇಳುಪಾಯಾ || ಘಟ್ಪ್ಯಾಗಿ ನಿನ್ನ ಉತ್ಕøಷ್ಟ ಪಾದಾಂಬುಜ ಮುಟ್ಟಿ ಸೇವಿಪೆ ಮಹರಾಯಾ 5 ಮಿಡುಕುತ್ತ ವಿಪ್ರನು ನುಡಿದ ಮಾತನುಕೇಳಿ | ಕಡಲಜಪತಿ ಕವಿಗೇಯಾ || ಕಡುದಯದಲಿ ಪೇಳ್ದ ಬಡತನ ಕಳೆಯುವ ಪೊಡೆವಿಯೊಳಿದ್ದ ಉಪಾಯಾ 6 ಸಾರುವೆ ಕೇಳಯ್ಯ ಮಾರಜನಕ ನಿಜ | ನಾರಾಯಣನ ಸು ವ್ರತವಾ ಆರು ಜಗದಿ ಭಕ್ತಿ ಪೂರ್ವಕ ಮಾಳ್ವರು ದಾರಿದ್ರ್ಯ ಹರಿ ದೂರಗೈವಾ 7 ಮುದುಕನ ನುಡಿಕೇಳಿ ಮುದಮನದಿಂದಲಿ ಸದನಕ್ಕೆ ದ್ವಿಜ ಬಂದು ತಾನೂ ಸುದತಿ ಸಹಿತನಾಗಿ ಸತ್ಯನಾಥಾನ ಪೂಜೆ ವಿಧ ವಿಧದಲಿ ಮಾಡಿದನೂ 8 ಹರುಷದಿ ಈ ರೀತಿ ಧರಣಿ ದೇವನು ಮಾಡೆ | ಶಿರಿಸತಿ ಸುತರಿಂದ ತಾನೂ || ಧರೆಯೊಳು ಸುಖಬಿಟ್ಟು ಪರಮ ದುರ್ಲಭವಾದ ಪಥ ಹಿಡಿದನೂ 9 ಸೂತರೆ ಅತ್ಯಂತ ಕೌತುಕವಾಗಿಹ ಧಾತ ಪಿತನ ಈ ವ್ರತವು ಭೂತಳದೊಳಗೆಂತು ಖ್ಯಾತಿಯ ಪೊಂದಿತು ಪ್ರೀತಿಲಿ ಪೇಳಿರಿ ನೀವು 10 ಸತಿಸುತ ಪರಿವಾರ ಸಹಿತಾ ಅತಿ ಹಿತದಲಿ ಮನೋರಥ ಪೂರೈಸುವ ಈ ವ್ರತ ಮಾಡುತಿರಲಾಗತ್ವರಿತಾ 11 ಚರಣನೋರ್ವನು ಶಿರದಿ ಕಾಷ್ಟಭಾರವ ಧರಿಸಿ ಮಾರಲು ಬೀದಿಗಳಲಿ ಬರುತಿರೆ ಮಾರ್ಗದಿ ಧರಣಿದೇವನೆ ಮಂ ದಿರ ಕಂಡ ಪರಮ ಮೋದದಲಿ 12 ಶ್ರೀನಿವಾಸನ ಘನಧ್ಯಾನದಿಂರ್ಚಿಪ ಕ್ಷೋಣಿ ಸುರನ ನೋಡಿ ಜವದಿ ಮಾನವ ಕೇಳಿದ ಏನಿದೆಂದೆನು ತಲಾಕ್ಷಣದಿ 13 ಶೂದ್ರನ ನುಡಿ ಕೇಳಿ ಆ ದ್ವಿಜ ಪೇಳ್ದನು ಶುದ್ಧ ಮನದಿ ಚರಣೋಧ್ಭವ ಗೈದನಿ ಶುದ್ಧನ ಪಾದಾರ್ಚನವಾ 14 ಹರುಷದಿಂದಲಿ ಸತ್ಯ ಹರಿ ಪೂಜಿಸಿದ ಶೂದ್ರ ಪರಮ ಸೌಜನ್ಯದಿ ಇದ್ದು ಕೊನೆಗೆ ಪರಿವಾರಯುತನಾಗಿ ತೆರಳಿದ ಸ್ಥಿರ ಉಳ್ಳ ಶಿರಿಶಾಮಸುಂದರನ ಪುರಿಗೆ 15 ಇತಿ ದ್ವಿತೀಯೋಧ್ಯಾಯ ಸಂಪೂರ್ಣಂ ಅಥಾಃತೃತೀಯೋಧ್ಯಾಯ ಋಷಿ ಜನಗಳೆ ಕೇಳಿ ವಸುಧಿ ತ್ರಯದಿ ಘನ ಪೆಸರಾದ ಇನ್ನೊಂದು ಕಥೆಯಾ ಉಸುರುವೆ ಕೇಳ್ವರ ವ್ಯಸನವು ಪರಿಹಾರ ಪುಸಿಯಲ್ಲಿ ಈ ನುಡಿ ಖರಿಯಾ 1 ವರ ಉಲ್ಕಮುಖನೆಂಬ ಧರಣೀಶನೋರ್ವನು ಹರುಚದಿಂದಲಿ ತನ್ನ ಹಿತದಾ ಶರಧಿ ತೀರದಿ ನಿಜ ಹರಿಯನ್ನು ಪೂಜಿಸುತಿರ್ದ 2 ಕ್ಷೋಣಿಪಾಲಕನಿದ್ದ ಆ ನದಿತೀರದಿ | ವಾಣಿಜ್ಯ ಮಧುನಾಯಕನೂ || ಸಾನುರಾಗದಿ ಬಂದು ಶ್ರೀನಿಧಿ ವ್ರತದ ವಿ ಧಾನವೇನೆಂದು ಕೇಳಿದ 3 ಭೂಮಿಪಾಲಕ ಮಧುನಾಮಕ ವೈಶ್ಯನ ಆ ಮೃದು ನುಡಿಕೇಳಿ ಜವದಿ ಕಾಮಿತದ ಸತ್ಯ ಸ್ವಾಮಿಯ ವ್ರತ್ತದಾ ನೇಮವ ಪೇಳ್ವ ಸಮ್ಮುದದಿ 4 ರಕ್ಕಸಾರಿಯ ಕಥಾ ಭಕ್ತಿಲಿ ಕೇಳುತ ಲಕ್ಕುಮಿಯುತ ಮುದದಿಂದ ಮಕ್ಕಳೆನಗಾಗಲು ಚಕ್ರಿಯ ಸುವೃತ ಅಕ್ಕರದಲಿ ಮಾಳ್ಪೆನೆಂದ 5 ಈ ರೀತಿ ಧೃಡ ಬ್ಯಾಪಾರಿಯು ತಾಗೈದು ಶೌರಿ ಪ್ರಸಾದ ಸ್ವೀಕರಿಸಿ || ಸಾರಿ ಪೇಳಿದ ತನ್ನಾಗಾರಕ್ಕೆ ಬಂದು ತಾ ನಾರಿಯ ಮುಂದೆ ವಿಸ್ತರಿಸಿ 6 ಸತಿ ಶಿರೋಮಣಿ ಲೀಲಾ ವತಿಯು ತನ್ನ ಮಂದಿರದಿ || ಪತಿ ಕರುಣದಿ ಗರ್ಭ ವತಿ ತಾನಾದಳಾಕ್ಷಣದಿ 7 ಹತ್ತನೆ ಮಾಸದ ಉತ್ತಮ ಪುತ್ರಿಯ ಪೆತ್ತಳು ಆ ನಾರಿ ತಾನೂ || ಅತ್ಯಂತ ಸನ್ಮುದ ಚಿತ್ತನಾಗಿ ಸಾಧು ಮರ್ತನು ಹರಿವ್ರತವನ್ನು 8 ಸತಿ ಲೀಲಾವತಿ ತನ್ನ ಪತಿಗಭಿವಂದಿಸಿ ನಿಂದು || ಅತಿ ಭಕ್ತಿಯಿಂದಲಿ ಕಥಿಸಿಕೊಂಡಳಲ ಯದು ಪತಿ ವ್ರತ ಮಾಡಬೇಕೆಂದು 9 ಸುದತಿಯ ನುಡಿಕೇಳಿ ಮಧುನಾಮಕ ಸಾಧು ವಿಧಿಸಿದ ಸುತೆ ಕಲಾವತಿಯಾ || ಮದುವೆಯ ಕಾಲದಿ ಉದುಪನರ್ಚಿಪೆನೆಂದು ಮುದದಿಂದ ಪೇಳ್ದನುಪಾಯಾ 10 ಪರಿಪರಿ ಸೌಖ್ಯದಿಂದಿರುತಿರೆ ವೈಶನ ತರುಳೆಗೆ ಪೂರ್ಣಯೌವನವು | ಬರಲು ಮಾಡಿದ ತಕ್ಕವರ ತಂದು ಲಗ್ನವ ಮರೆತು ಬಿಟ್ಟನು ಹರಿವ್ರತವಾ 11 ಶ್ರೀಮಂತವೈಶ್ಯನು ಪ್ರೇಮದಿಂದಲಿ ತನ್ನ ಜಾಮಾತನೊಡನೆ ವ್ಯಾಪಾರಾ ನೇಮದಿ ಗೈಯಲು ಗ್ರಾಮ ತ್ಯಜಿಸಿ ಪೋದಾ ಆ ಮಹಾಪುರ ರತ್ನಸಾರಾ&ಟಿbs
--------------
ಶಾಮಸುಂದರ ವಿಠಲ