ಒಟ್ಟು 327 ಕಡೆಗಳಲ್ಲಿ , 71 ದಾಸರು , 268 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೋತುಹೋದೆ ನಾನು ಶ್ರೀಹರಿ ಸೋತುಹೋದೆ ನಾನು ಪ ಪತಿತ ಪಾವನ ಮೂರ್ತಿಯ ಪ್ರೀತಿಯ ಸತತ ಪಡೆಯಲು ಕೆಲಸವ ಮಾಡಿ ಅ.ಪ. ನಿತ್ಯದಿ ಭಜಿಸುತ ಹರಿನಾಮವನು ಸತ್ಯಧರ್ಮದಿ ನಡೆಯುತಲೀ ಭ್ಯತ್ಯರಂದದಿ ಸೇವೆಯ ಮಾಡುತ ನಿತ್ಯನೆನಾ ಧನ್ಯಾತ್ಮನಾಗದೆ 1 ಪರಮಾತ್ಮನ ಕೀರ್ತನೆಯನು ಮಾಡುತ ಹರುಷದಿ ದಾಸನಾಗುತಲೀ ಹರಿಯ ಸಾಸಿರ ನಾಮವ ಸ್ಮರಿಸುತ ಶರಣಾಗತ ಪರಿಪಾಲನ ನೋಡಿದೆ 2 ಹೊನ್ನು ಹÉಣ್ಣು ಮಣ್ಣಿಗೋಸುಗ ಜನ್ಮವ ಮೋಹದಿ ನವಿಸದಲೇ ಚಿನ್ಮಯ ರೂಪನ ಪೂಜೆಯ ಮಾಡುತ ಚನ್ನಕೇಶವ ಪಾದವ ಸೇರದೆ 3
--------------
ಕರ್ಕಿ ಕೇಶವದಾಸ
ಹರಿ ಕುಣಿದ ನಮ್ಮ ಹರಿ ಕುಣಿದ ಹರಿ ಕುಣಿದ ನಮ್ಮ ಹರಿ ಕುಣಿದ ಹರಿ ಕುಣಿದ ನಮ್ಮ ಕೃಷ್ಣ ಕುಣಿದ ಪ. ಹರಿದಾಸುರಗಳ ನೆರೆದಿಹ ಸಭೆಯಲಿ ಭಜನೆಯ ಸಮಯದಿ ಹರಿ ಕುಣಿದ ಅ.ಪ. ಅತಿಭಕ್ತಿಯಿಂದ ಪತಿತ ಪಾವನನ ಪೂಜೆ ಅತಿ ಸಂತೋಷದಿ ಮಾಡುವ ಸಮಯದಿ 1 ವೇದಮಂತ್ರದಿಂದಾ ವೇದಘೋಷದಲ್ಲಿ ವೇದ ವ್ಯಾಸರೆಂಬೋ ನಾಮದಿಂದಿರುವ 2 ಅಂದಿಗೆ ಕಿರುಗೆಜ್ಜೆ ಚಂದದಿ ಪೊಳೆಯುತಾ ಗೋವಿಂದ ದಾಸರ ಮಂದಿರದೊಳಗೆ 3 ಪುರಂದರ ದಾಸರ ಆರಾಧನೆ ದಿನ ಪುರದೊಳಗೆಲ್ಲಾ ಮೆರವಣಿಗೆ ದಿನ ಯತಿಗಳೀರ್ವರು ಪೂಜಿಸಿ 4 ವರದ ಅತಿ ಸಂಭ್ರಮದಿ ಗತಿ ಕೊಡುವವ ಬಂದ ರಮಾವಲ್ಲಭವಿಠಲನ ಪೂಜೆಯ ಸಮಯದಿ 5
--------------
ಸರಸಾಬಾಯಿ
ಹರಿಚರಣವ ನೋಡಬರಲಿ ಕೃಷ್ಣಶರಣಜನರು ಸುಕೃತವ ಸೊರೆಗೊಳಲಿ ಪ. ಬ್ರಹ್ಮರುದ್ರಾದಿಗಳೆಲ್ಲ ತಮ್ಮತಮ್ಮ ಮನದಿ ನೆನೆವುದು ಪುಸಿಯಲ್ಲನಮ್ಮ ದೃಷ್ಟಿಗೆ ತೋರಿತಲ್ಲ ಇನ್ನುಜನ್ಮ ಸಫಲವಪ್ಪುದಲಸಿಕೆ ಸಲ್ಲ 1 ಶ್ರುತಿಸ್ಮøತಿ ಕೊಂಡಾಡುತಿ[ದಿ]ಕೋ ನಾನಾಮತದಲ್ಲಿ ಮಾಡುವ ವಹಮಾನ ಸಾಕುಪತಿತಪಾವನೆಗಂಗೆ ಇದಕೋ ಇನ್ನುಮತಿಯುಳ್ಳ ನಿಪುಣರು ನಿಶ್ಚೈಸಬೇಕು 2 ವೇದೇ ರಾಮಾಯಣೇ ಎಂಬಆಧ್ಯೇಯಂ ಸದಾಯೆಂಬ ವಚನವನೆಂಬಮೋದಿ ಹಯವದನ ಡಂಬವಿಲ್ಲ-ದಾದರಮಾತ್ರ ಪೂಜೆಯನೆ ಕೈಕೊಂಬ3
--------------
ವಾದಿರಾಜ
ಹರಿಯಾ ಪೂಜೆಯಾ ಮಾಡಿ ಗತಿಗಳ ಬೇಡಿ ಹರುಷದಿ ಕೂಡಿ ನಲಿ ನಲಿದಾಡಿ ಪ ಎಲ್ಲರೊಳು ಬಾಗಿ ನಡಿಬೇಕು ಸಾಗಿ ಖುಳ್ಳತನ ಹೋಗಿ ಏಕೋ ನಿಷ್ಟಾಗಿ ನಿಲ್ಲದೇ ವದಗಿ ಸಮದೃಷ್ಟಿ ತೂಗಿ 1 ನಿತ್ಯ ತಿಳಿದು ವಿಚಾರ ಬಲಿದು ಕುತ್ತಾಪಗಳದು ಸತ್ಯಗದಲ್ಲಿದ್ದು ಸತ್ಯಜ್ಞಾನ ಪಡೆದು ಸದ್ಬಾವ ಜಡಿದು ಚಿತ್ತ ಚಂದಲ ಜರಿದು ಮದ ಮತ್ಸರ ಜರೆದು 2 ತನ್ನದಿದಲ್ಲಾ ಸಿರಸೌಖ್ಯವೆಲ್ಲಾ ಇನ್ನು ತಿಳಿಲಿಲ್ಲಾ ಈ ಮರಹು ಸಲ್ಲಾ ಸನ್ನು ತನೆಬಲ್ಲಾ ಈ ಸಾಕಾಯ ವೆಲ್ಲಾ ಮನ್ನಿಸಿ ನೀವೆಲ್ಲಾ ಮಹಿಪತಿ ಜನಸೊಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೇ ನಿನ್ನಯ ಸಿರಿಯನು ಬಣ್ಣಿಸೆ ನರನಾದೆನಗಳವೇ ಪ ಕರುಣಾಳುವೆ ನಾಂ ಕರಗಳ ಮುಗಿವೆ ಪÀರವಾಸುದೇವ ಪರಮಾತ್ಮಾ ಅ.ಪ ಸತಿಶ್ರೀದೇವಿಯು ನುತಚತುರಾನನ ಪತಿತೋದ್ಧರೆ ಗಂಗೆಯು ಮಗಳು ಸ್ತುತಿಗೈಯುವವೇದ ತತಿಯಿಂ ನಿತ್ಯ ಭೃತ್ಯರು ಸುರಗಣ ಸರ್ವೇಶಾ 1 ಸಾಗರ ಮಧ್ಯದಿ ಭೋಗಿಯನೊರಗಿ ಯೋಗೀಜನರ ಹೃದಯದಿ ನೆಲಸಿ ಆಗಮ ಪೂಜೆಯ ರಾಗದಿ ಪಡೆವ 2 ಶಂಖಸುದರ್ಶನ ಪಂಕಜಧರಶ್ರೀ ವೆಂಕಟವರದ ಶೀರಂಗ ಕಿಂಕರ ಪಾಲಕ ಜಾಜೀಶಾ 3
--------------
ಶಾಮಶರ್ಮರು
ಹರಿಸೇವೆ ಕೈಂಕರ್ಯ ಪರಮ ನಿಷಾತೆ |ಪರಿಹರಿಸು ಭವತಾಪ ಜಾಂಬುವತಿ ಮಾತೇ |5 ಭೃತ್ಯ ಜಾಂಬುವಂತನ ತನುಜೆಶ್ರೀ ಮಹಿಳೆಯಂದದಲಿ ಕೃಷ್ಣ ಪ್ರಿಯಳಾದೇ 1 ಮಿಕ್ಕ ಮಹಿಳೆಯರಿಂದ ಲಕ್ಕುಮಿಯ ಆವೇಶಪೊಕ್ಕು ನಿನ್ನಲಿ ಅಧಿಕ ಸರ್ವಕಾಲದಲೀ |ಅಕ್ಕರದಿ ಇದಕೆ ಮಿಗೆ ಲಕ್ಕುಮಿಯು ಇರಲಾಗಚೊಕ್ಕ ಮಾತೆಯು ನೀನು ಶೇಷ ಸಮಳೆನಿಪೇ 2 ಆವೇಶ ನಿನ್ನಲ್ಲಿ ಇಲ್ಲದಿಹ ಸಮಯದಲಿದೇವಿಯರು ಮಿಕ್ಕೈದು ಮಂದಿ ಸಮ ನೀನು |ದೇವಿ ಶಿರಿ ಆವೇಶ ಅಲ್ಪವಿಹ ಸಮಯದಲಿದೇವ ಕಾಮಾದಿಗಳಿಗಧಿಕ ವಿಂಶತಿ ಗುಣದೀ 3 ನಿರ್ಮಲೈ ಕಾಂತಿತ್ವ ವಿಮಲ ಭಕ್ತ್ಯಾದಿಗುಣಅಮಮ ನಿನ್ನಲಿ ಇಹುದು ನೈಜರೂಪಾ |ವಿಮಲ ಸಚ್ಚಾರಿತ್ರೆ ಈ ಮಹಿಯ ಸಂಚಾರನಿರ್ಮಮದಿ ಗೈದಿರ್ಪೆ ಬಧಿರಾಂಧರಂತೇ 4 ದೇಹ ಮಮತೆಯಲಿಂದ ಮನಸೋತು ಕಷ್ಟಕ್ಕೆವಾಹನಾದಿಗಳೇರಿ ತೀರ್ಥಯಾತ್ರೆಗಳಾ |ಬಹುವಾಗಿ ಗೈದಾಗ್ಯು ಪುಣ್ಯ ಹೀನವು ಎಂದುಮಹಿಳೆ ನೀ ವರ್ಣಿಸಿಹೆ ಭಕುತರುಪಕಾರೀ 5 ಪಾದ ದರ್ಶನವೆಂದುಸಾರ್ವಕಾಲದಿ ನೀನು ಚಿಂತಿಸುತಲಿರಲೂ 6 ಕಂಡು ಶ್ರೀಹರಿಯನ್ನು ಅಪರೋಕ್ಷದಲಿ ನೀನುಬಂಡುಣಿಯು ಹರಿಪಾದ ಕಮಲಕ್ಕೆ ಆಗೀ |ಹಿಂಡು ದೈವರ ಗಂಡ ಪಾಂಡುರಂಗನೆ ಎಂದುಮಂಡಿಸಿದೆ ಪರತತ್ವ ತೊಂಡರುಪಕಾರೀ 7 ಕರದಲ್ಲಿ ಧನ್ವಂತ್ರಿ ಪಿಡಿದಮೃತ ಕಲಶದಲಿಹರಿನಯನ ಆನಂದ ಜಲಬಿಂದು ಉದರೇ |ತುರರೂಪಿಯಾದ ಶ್ರೀ ತುಳಸಿಯಲಿ ನೀನರಲುಹರಿ ನಿನ್ನ ಅಗಲದಿಹ ಸರ್ವ ಪೂಜೆಯಲೀ 8 ಶಾಂಭವಿಯುನುತೆ ದೇವಿ ಜಾಂಬುವತಿ ಶ್ರೀ ಹರಿಯಕಾಂಭಂಥ ಸುಜ್ಞಾನ ಭಕುತಿ ವೈರಾಗ್ಯ |ಹಂಬಲದಿ ನಿನ್ನಂಘ್ರಿ ನಮಿಪೆ ತೋರ್ವುದು ಹೃದಯಅಂಬರದಲಿಹ ಗುರು ಗೋವಿಂದ ವಿಠ್ಠಲನ 9
--------------
ಗುರುಗೋವಿಂದವಿಠಲರು
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಹೆಡಗುಡಿ ಕಟ್ಟಿ ಹೊಡೆಯಿರಿ ಇವನ | ಬಡತನ ಸಂತರಿಗ್ಹೇಳುವನ ಪ ಸೆಡಗರದಲಿ ಸಂಸಾರವ ಮಾಡುತ ಬಿಡದಾಶೆಯಲೀ ಮರಗುವನ ಅ. ಪ ಅನ್ನವ ಬೇಡುವ ಅತಿಥಿಯು ಬಂದರೆ | ನಿನ್ನೆ ನಾ ಉಪವಾಸೆಂಬುವನ | ಅನ್ಯಾಯದಲಿ ಪಾಪವ ಗಳಿಸಿ |ನಾಯ್ ಕುನ್ನಿಯಂತೆ ಎಲ್ಲರ ಬೊಗಳುವನ 1 ವಸ್ತ್ರವ ಕೊಡು ಎಂದವರಿಗೆ ಹರಕೊಂ- | ದೊಸ್ತ್ರವ ತೆರೆದು ತೋರುವನ | ವೇಶ್ಯಾ ಸ್ತ್ರೀಯರ ಕಂಡರೆ ಕರೆದು | ಉತ್ತಮ ವಸ್ತ್ರವನೀಯುವನ 2 ಮಂತ್ರವ ಅರಿಯದೆ | ತಂತ್ರವ ಮಾಡುತ | ಅಂತರ ಪೂಜೆಯ ಅರಿಯದವನ | ಅಂತರಂಗದಿ ಭವತಾರಕನಂಘ್ರಿಯ | ಶಾಂತದಿಂದಲಿ ಧ್ಯಾನಿಸದವನ 3
--------------
ಭಾವತರಕರು
(ಒರಳುಕಲ್ಲು ಪೂಜೆಯ ಪದ)ಜಯ ಹನುಮಂತ ಭೀಮ | ಜಯ ಸರ್ವಜ್ಞಾಚಾರ್ಯ |ಜಯ ಭಾರತೀಶಾ ನಿರ್ದೋಷಾ || ನಿರ್ದೋಷ ಶ್ರೀ ವ್ಯಾಸಲಯನೆ ನಿನ್ನಂಘ್ರೀಗೆರಗೂವೆ | ಸುವ್ವಿ ಸುವ್ವೀ ಸುವ್ವಾಲಾಲೆ ಪಮುದದಿಂದಾ ಶ್ರೀ ಹರಿಯಾ | ಮದಿವಿ ಹಮ್ಮೀಕೊಂಡು |ಪದುಮಾಕ್ಷಿಯರೆಲ್ಲಾ ಒರಳೀಗೇ || ಒರಳಿಗಕ್ಕಿ ಹಾಕಿಪದ ಪಾಡಿದದನೂ ಬಣ್ಣೀಪೇ1ದೇವಕಿ ಯಶೋದೆ ಶ್ರೀ | ದೇವಭೂತೇ ಕೌಸಲ್ಯ ಸ- |ತ್ಯವತಿ ನೀವೆಂಥ ಧನ್ಯರೇ || ಧನ್ಯಾರೆ ಪಡದು ಶ್ರೀ |ದೇವೇಶಗೆ ಮೊಲಿಯಾ ಕೊಡುವೀರಿ 2ಅಕ್ಷರಳೆ ಪರಮಾತ್ಮನ | ವಕ್ಷ ಸ್ಥಳ ಮಂದಿರೆ |ಲಕ್ಷೂಮಿದೇವಿ ಜಯಶೀಲೆ || ಜಯಶೀಲೆ ಎಮ್ಮನು |ಪೇಕ್ಷಿಸಿದೆ ಕಾಯೇ ವರವೀಯೇ 3ಅಚ್ಛಿನ್ನ ಭಕ್ತರು ನೀವಚ್ಯುತಗೆ ಮುಕ್ತಿಯಾ |ತುಚ್ಛವೆಂಬುವಿರೆ ಸರಸ್ವತೀ || ಸರಸ್ವತಿಭಾರತಿ|ನಿಶ್ಚೈಸಿ ಒರಳೀಗೊದಗೀರೆ 4ಅಕ್ಕಿ ಥಳಿಸಲಿ ಬಾರೆ | ಅಕ್ಕ ಸೌಪರಣಿ ಶ್ರೀ |ರಕ್ಕಸಾ ವೈರೀ ಮದುವೀಗೇ || ಮದುವೀಗೆವಾರುಣಿತಕ್ಕೊಳ್ಳೆ ಕೈಲಿ ಒನಕೀಯಾ 5ಕೂಸಾಗಿ ಇದ್ದಾಗ ಆ ಶಿವನೆ ಬರಲೆಂದು |ಪೋಷಿಸಿದೆ ದೇಹಾ ತಪಸೀದೆ || ತಪಸೀದೆ ಪಾರ್ವತಿನೀ ಶೀಘ್ರ ಬಾರೇ ಒರಳೀಗೆ6ಇಂದ್ರ ಕಾಮನಸತಿಯಾರಿಂದು ಬನ್ನಿರಿ ನಮ್ಮ |ಮಂದರೋದ್ಧರನಾ ಮದಿವೀಗೇ || ಮದುವೀಗೆ ಒರಳಕ್ಕಿ |ಛಂದದಿಂದಲಿ ಪಾಡಿ ಥಳಿಸೀರೇ 7ಶತರೂಪಿ ನೀ ಪ್ರೀಯ ವ್ರತ ಮೊದಲಾದವರನ್ನ |ಪತಿಯಿಂದ ಪಡದೂ ಅವನೀಯಾ || ಅವನೀಯ ಪಾಲಿಸಿದಪತಿವ್ರತೀ ಒನಕೀ ಕೈಕೊಳ್ಳೇ8ದೇವರಂಗನಿಯರಿಗೆ ಸಾವಧಾನದಿ ಜ್ಞಾನ |ನೀ ವರದೇ ಎಂಥಾ ಗುಣವಂತೇ || ಗುಣವಂತೆ ಕರುಣಾಳೆಪ್ರಾವಹೀ ಪಿಡಿಯೇ ಒನಕೀಯಾ 9ಅರುವತ್ತು ಮಕ್ಕಳನಾ ಹರುಷದಿಂದಲಿ ಪಡದು |ವರನೋಡಿ ಕೊಟ್ಟೀ ಪ್ರಸೂತೀ || ಪ್ರಸೂತಿ ನೀನುಹಂದರದ ಮನಿಯೊಳೂ ಇರಬೇಕೂ 10ಗಂಗಾದೇವಿ ಯಂಥ ಇಂಗಿತಜÕಳೆ ನೀನು |ಹಿಂಗಿಸಿದೆ ವಸುಗಳಪವಾದಾ || ಅಪವಾದ ತ್ರಯ ಜಗ-ನ್ಮಂಗಳೇ ಪಿಡಿಯೇ ಒನಕೀಯಾ 11ಅನಿರುದ್ಧಾಶ್ವಿನಿ ಚಂದ್ರ ಇನಕಾಲಾ ಸುರಗುರು |ವನತಿಯರೆ ಉಳಿದಾ ನವಕೋಟೀ || ನವಕೋಟಿ ಸುರರಮಾನಿನಿಯೇರು ಬಂದೂ ಥಳಿಸೀರೇ 12ಅನ್ಯರನ ಪಾಡಿದರೆಬನ್ನಬಡಿಸುವ ಯಮನು |ವನ್ನಜಾಂಬಕನಾಶುಭನಾಮಾ || ಶುಭನಾಮ ಪಾಡಿದರೆಧನ್ಯರಿವರೆಂದೂ ಪೊಗಳೂವಾ13ಈ ವ್ಯಾಳ್ಯದಲಿ ನೋಡಿ ನಾವು ಥಳಿಸೀದಕ್ಕಿ |ಪಾಪನ್ನವಾಗೀ ತ್ವರದಿಂದಾ || ತ್ವರದಿಂದ ನಮ್ಮ ಶ್ರೀಗೋವಿಂದನ ಶಾಸೀಗೊದಗಲೀ 14ಹೆಚ್ಚಿನಂಬರ ಉಟ್ಟು ಅಚ್ಚಿನ ಕುಪ್ಪುಸ ತೊಟ್ಟು |ಪಚ್ಚಾದಿ ರತ್ನಾಭರಣಿಟ್ಟೂ || ಇಟ್ಟು ಸುಸ್ವರಗೈದುಅಚ್ಯುತನ ಪಾಡೋರಿನಿತೆಂದೂ 15ಲಕ್ಕೂಮಿ ಪತಿಯಾಗಿ ಬಹು ಮಕ್ಕಳನ ಪಡದಿದ್ದಿ |ಇಕ್ಕೊಳ್ಳಿ ಈಗಾ ಮದುವ್ಯಾಕೇ || ಯಾಕೊನತರಾನಂದಉಕ್ಕೀಸುವದಕೆ ರಚಿಸೀದ್ಯಾ16ಎಂಂದಾಗೆದೊ ಶ್ರೀ ಮುಕುಂದ ನಿನ್ನಾ ಮದುವಿ |ಹಿಂದಿನಾ ಬ್ರಹ್ಮರರಿತಿಲ್ಲಾ || ರರಿತಿಲ್ಲಅವಿಯೋಗಿಎಂದು ಕರಸುವಳು ಶೃತಿಯೋಳೂ 17ಶೀಲಿ ಸುಂದರಿ ನಿನ್ನ ಆಳಾಗಿ ಇರುವಳು |ಶ್ರೀ ಲಕ್ಷ್ಮೀ ನೀನು ಸ್ವರಮಣಾ || ಸ್ವರಮಣನಾಗೆವಳಮ್ಯಾಲೆ ಮದುಪ್ಯಾಕೊ ಭಗವಂತಾ18ಆರು ಮಹಿಷಿಯರು ಹದಿನಾರು ಸಾವಿರ ಮ್ಯಾಲೆ |ನೂರು ನಾರಿಯರೂ ಬಹುಕಾಲಾ || ಬಹುಕಾಲ ಬಯಸಿದ್ದುಪೂರೈಸಿ ಕೊಟ್ಯೋ ದಯಸಿಂಧು 19ವೇದನೆಂಥಾ ಪುತ್ರ ವೇದನಂತಾ ಬಲ್ಲ |ವೋದುವಾ ನಿರುತಾ ನಿನ ಪೌತ್ರಾ || ಪೌತ್ರೌ ನಿಮ್ಮಣ್ಣ ಸ್ವ-ರ್ಗಾಧಿಪತಿ ಎಂದೂ ಕರಸೂವ 20ಜಗವ ಪಾವನ ಮಾಳ್ಪ ಮಗಳೆಂಥ ಗುಣವಂತಿ |ಅಗಣಿತಜ್ಞಾನವಂತಾರೊ || ಜ್ಞಾನವಂತರೊ ನಿನ್ನಯುಗಳಸೊಸಿಯರೂ ಪರಮಾತ್ಮಾ21ಈ ವಸುಧಿಯೊಳಗೆಲ್ಲಾ ಆವಶುಭಕಾರ್ಯಕ್ಕೂ |ದೇವೇಶ ನಿನ್ನಾ ಸ್ಮರಿಸೋರೋ || ಸ್ಮರಿಸುವರೊ ನಿನ ಮದುವಿ-ಗಾಂವೀಗ ನಿನ್ನೇ ನೆನೆವೇವೊ 22ಅಕ್ಲೇಶಾ ಅಸಮಂಧಾ ಶುಕ್ಲಶೋಣಿತದೂರಾ |ಹಕ್ಲಾಸುರಾರೀ ದುರಿತಾರೀ || ದುರಿತಾರಿ ಅಸಮ ನಿ-ನ್ನೊಕ್ಲಾದವರಗಲೀ ಇರಲಾರೀ 23ವೇದವೆಂಬದು ಬಿಟ್ಟು ಭೂ ದಿವಿಜಾರಮರಾರು |ಮಾಧವನ ಗುಣವಾ ಪೊಗಳೂವಾ || ಪೊಗಳುವಾ ಸುಸ್ವರವಾಶೋಧಿಸೀ ಕೇಳೂತಿರುವಾರೂ 24ಕಾಮಾದಿಗಳ ಬಿಟ್ಟು ಸೋಮಪರ ರಾಣಿಯರು |ಸ್ವಾಮಿಯ ವಿವಾಹಾ ನಾಳೆಂದೂ || ನಾಳೆಂದರಿಷಿಣದಕ್ಕೀಹೇಮಾಧರಿವಾಣಕ್ಕಿರಿಸೋರೂ25ಜಯ ಮತ್ಸ್ಯಾ ಕೂರ್ಮಾಕಿಟಿಜಯ ನರಸಿಂಹಾ ಋಷಿಜ |ಜಯ ರಾಮಕೃಷ್ಣಾ ಶ್ರೀ ಬುದ್ಧಾ || ಶ್ರೀಬುದ್ಧಕಲ್ಕಿ ಜಯಜಯ ದತ್ತಾತ್ರಯಶುಭಕಾಯಾ 26ಆನಂದಾದಿಂದಾ ಸುರ ಮಾನಿನಿಯಾರಾಡೀದ |ಈ ನುಡಿಯಾ ಪಾಡೀದವರೀಗೆ || ಅವರಿಗಿಹಪರದಲ್ಲಿಪ್ರಾಣೇಶ ವಿಠಲಾ ಒಲಿವೋನೂ 27
--------------
ಪ್ರಾಣೇಶದಾಸರು
124-1ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರಿಯರುಗೋದಾವರಿಯಿಂದ ರಾಯಚೂರು ಪೋಗಿಆ ದೇಶ ಅಧಿಪತಿ ಪೀತಾಸಿಂಗನಿಗೆಒದಗಿ ಅನುಗ್ರಹಿಸಿ ಬಂದರು ಮೇಲುಕೋಟೆ 1ಮೇಲುಕೋಟೆ ರಾಜನು ಸ್ವಾಮಿಗಳಲಿ ಬಹುಭಕ್ತಿಯಿಂದಲಿ ಪೂಜೆ ಮಾಡಿದನು ಆಗ್ಗೆಮೇಲುಕೋಟೆ ಗಿರಿ ಮೇಲೆ ನರಸಿಂಹನ ಗುಡಿಬೀಗ ಹಾಕಿತ್ತು ಸ್ವಾಮಿಗಳು ಹೋದಾಗ 2ಶ್ರೀ ಸ್ವಾಮಿಗಳು ಬಾಗಿಲ ಸ್ಪರ್ಶ ಮಾಡಿದರುಸ್ಪರ್ಶಮಾತ್ರದಿ ಬಾಗಿಲು ತೆರೆಯಿತು ಆಗಶ್ರೀಸ್ವಾಮಿ ನರಸಿಂಹನ ಮುದದಿ ಪೂಜಿಸಲುಶ್ರೀ ಸ್ವಾಮಿಗಳ ಅರಸ ಪೂಜಿಸಿದನು 3ತರುವಾಯ ಶ್ರೀರಂಗಪಟ್ಟಣಕೆ ಬಂದುಶ್ರೀರಂಗನಾಥನ್ನ ಸೇವಿಸಲು ಮುದದಿಶ್ರೀರಂಗಪಟ್ಟಣದ ಅರಸನು ಭಕ್ತಿಯಿಂಪರಿಪರಿವಿಧದಿ ಕಾಣಿಕೆಗಳ ಅರ್ಪಿಸಿದ 4ರತ್ನ ಖಚಿತ ಪೂಜಾ ಸಾಧನಗಳು ಸ್ವರ್ಣರಜತ ದಂಡಗಳುಶ್ವೇತಛತ್ರಇಂಥಾವು ಸಂಸ್ಥಾನ ಚಿಹ್ನೆಗಳ ರಾಜನುಇತ್ತನು ಶ್ರೀಗಳಿಗೆ ಭಕ್ತಿಪೂರ್ವಕದಿ 5ನಂತರ ಸ್ವಾಮಿಗಳು ಶ್ರೀತುಂಗಭದ್ರಾದಿತೀರ್ಥಾಟನ ಮಾಡಿ ಗದ್ವಾಲು ಸೇರಿಮತ್ತೆತೋಂಡದೇಶದ ಆರ್ಕಾಟಿಗೆ ಹೋಗಿಆದೇಶ ಮಂತ್ರಿಯಿಂದ ಕೊಂಡರು ಸೇವ 6ಈ ಸಮಯ ಶ್ರೀ ಸತ್ಯವಿಜಯ ತೀರ್ಥಾರ್ಯರುಸಂಸ್ಥಾನ ಸಹ ಹತ್ತಿರ ಪ್ರಾಂತದಲ್ಲಿಶಿಷ್ಯೋದ್ಧಾರಕ್ಕೆವಿಜಯಮಾಡುತ್ತಿರಲುಶ್ರೀ ಸತ್ಯವರ್ಯರು ಬಂದರು ಆರಣಿಗೆ 7ಆರಣೀರಾಯನು ವೇಂಕಟನು ಸ್ವಾಮಿಗಳಚರಣಕ್ಕೆ ಎರಗಿ ಪೂಜೆಯನ್ನು ಸಲ್ಲಿಸೇವಸ್ತ್ರಾಭರಣ ಹೇಮಾಭೀಷೇಕಾದಿಗಳಅರ್ಪಿಸಿದ ಭಕ್ತಿಯಿಂ ಕೃಷ್ಣಾಜಿಪಂತ 8ಈ ರೀತಿ ಪೂಜೆ ಮರ್ಯಾದೆಗಳ ತಾ ಕೊಂಡುಹರಿಕೃಷ್ಣ ಶ್ರೀಶನಿಗೆ ಸಮಸ್ತ ಅರ್ಪಿಸುತಹೊರಟರು ಮುಂದಕ್ಕೆ ದಿಗ್ವಿಜಯ ಕ್ರಮದಲ್ಲಿಪುರಿ ಜನರು ಜಯ ಘೋಷ ಮಾಡುತಿರಲು 9ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 10 ಪ
--------------
ಪ್ರಸನ್ನ ಶ್ರೀನಿವಾಸದಾಸರು
167ಅಂಜಿಕಿನ್ನೇತಕಯ್ಯ-ಸಜ್ಜನರಿಗೆ |ಅಂಜಿಕಿನ್ನೇತಕಯ್ಯ ಪಸಂಜೀವರಾಯರ ಸ್ಮರಣೆ ಮಾಡಿದ ಮೇಲೆ ಅ.ಪಕನಸಿನೊಳ್ ಮನಸಿನೊಳ್ ಕಳವಳವೇತಕೆಹನುಮನ ನೆನೆದರೆ ಹಾರಿ ಹೋಹುದು ಪಾಪ 1ರೋಮ ರೋಮಕೆ ಕೋಟಿ ಲಿಂಗವುದುರಿಸಿದಭೀಮನ ನೆನೆದರೆ ಬಿಟ್ಟು ಹೋಹುದು ಪಾಪ 2ಪುರಂದರವಿಠಲನ ಪೂಜೆಯ ಮಾಡುವಗುರುಮಧ್ವರಾಯರ ಸ್ಮರಣೆ ಮಾಡಿದ ಮೇಲೆ3
--------------
ಪುರಂದರದಾಸರು
45ಅನುದಿನದಲಿ ಬಂದು ತನುವ ಸೂರೆಯಗೊಂಡು |ಎನಗೊಂದು ಮಾತ ಪೇಳೊ ಜೀವವೆ ! ಪಘನಕೋಪದಲಿ ಬಂದು ಯಮನವರಳೆದೊಯ್ವಾಗ |ನಿನಕೂಡಿನ್ನೇತರ ಮಾತೂ ಕಾಯವೆ! ಅ.ಪಬೆಲ್ಲದ ಹೇರಿನಂತೆ ಬೇಕಾದ ಬಂಧು - ಬಳಗ |ನಿಲ್ಲೊ ಮಾತನಾಡತೇನೆ ಜೀವವೆ ||ನಿಲ್ಲಗೊಡದೆ ಬಂದು ಯಮನವರೆಳೆದೊಯ್ವಾಗ |ಬೆಲ್ಲ ಬೇವಾಯಿತಲ್ಲೋ ಕಾಯವೆ ! 1ಸತ್ಕರೆ ಹೇರಿನಂತೆ ಸವಿದುಂಡು ಪಾಯಸವ |ದಿಕ್ಕೆಟ್ಟು ಹೋಗುತೀಯೋ ಜೀವವೆ ||ದಕ್ಕಗೊಡದೆ ಬಂದು ಯಮನವರೆಳೆದೊಯ್ವಾಗ |ಸಕ್ಕರೆ ವಿಷವಾಯ್ತೋ ಕಾಯವೆ ! 2ಅಂದಣದೈಶ್ವರ್ಯ ದಂಡಿಗೆ - ಪಲ್ಲಕ್ಕಿ |ಮಂದಗಮನೆಯರು ಜೀವವೆ ||ಮಂದಗಮನೆ ಯಾರೊ - ಮಡದಿ - ಮಕ್ಕಳು ಯಾರೋ -ಬಂದಂತೆ ಹೋಗ್ತೀನಿ ಕಾಯವೆ ! 3ಸೋರುವ ಮನೆಯಲಿ ಧ್ಯಾನ - ಮೌನಾದಿಗಳು |ಬೇರಿತ್ತು ನಿನ್ನ ಮನಸು ಜೀವವೆ ||ನೀರಮೇಲಣ ಗುಳ್ಳೆ ತೋರಿ ಹಾರಿದಂತೆ |ಯಾರಿಗೆ ಯಾರಿಲ್ಲ ಕಾಯವೆ ! 4ಹುಟ್ಟಿದ್ದು ಹೊಲೆಯೂರು ಬೆಳದದ್ದು ಮೊಲೆಯೂರು |ಇಟ್ಟದ್ದು ಈ ಊರು ಜೀವವೆ ||ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ |ಗಟ್ಟ ಪೂಜೆಯ ಮಾಡೊ ಕಾಯವೆ ! 5
--------------
ಪುರಂದರದಾಸರು
ಅಗ್ರಪೂಜೆಯ ಮಾಡಿದಾ ಧರ್ಮಜ ತಾನುಅಗ್ರಪೂಜೆಯ ಮಾಡಿದಾ ಪರಾಜರಾಜರಗೂಡಿ ರಾಜಸೂಯದಿ ಧರ್ಮ-ರಾಜನು ಹರಿಗೆ ರಾಜರ ಸಭೆಯೊಳು ಅ.ಪಶುದ್ಧಾಚಮನ ಸಂಕಲ್ಪದಿಪಾದತೊಳೆದಿತ್ತಸದ್ಭಕ್ತಿಯಲಿ ಗಂಧಾಕ್ಷತೆ ವೇದವೇದ್ಯಗೆ 1ವಸನಾಭರಣದಿವ್ಯಕುಸುಮಧೂಪವು ದೀಪತೃಷೆನೈವೇದ್ಯವನಿತ್ತು ಕ್ಲೇಶನಾಶನಿಗಂದು 2ಕ್ರಮುಕವರ್ಪಿಸಿ ನೀಲಾಂಜನವೆತ್ತಿ ಧ್ಯಾನಿಸಿಸುಮವಿತ್ತು ಬಲವಂದು ಚಕ್ರವಿಕ್ರಮಗೆ 3ಪೊಡಮಟ್ಟಘ್ರ್ಯವ ಬಿಟ್ಟು ಒಡನೆ ಯಜ್ಞಾಂತದಿಬಿಡೆ ಬ್ರಹ್ಮಾರ್ಪಣ UÉೂೀವಿಂದನ ಪಾದದ್ವಂದ್ವಕೆ 4
--------------
ಗೋವಿಂದದಾಸ
ಅಂತರಂಗದಲಿ ಹರಿಯ ಕಾಣದವ ತಾ ಹುಟ್ಟುಗುರುಡನೊಸಂತತ ಶ್ರೀ ಕೃಷ್ಣಚರಿತೆ ಕೇಳದವ ಜಡಮತಿಯೆ ಕಿವುಡನೊ ಎಂದೆಂದಿಗೂ ಪ.ಹರುಷದಿಂದಲಿ ಮುರಹರನ ಪೂಜೆಯ ಮಾಡದವನೆ ಕೈ ಮುರಿದವನೊಕುರುವೀರ ಸೂತನ ಮುಂದೆ ಕೃಷ್ಣ ಎಂದುಕುಣಿಯದವನೆ ಕುಂಟನೊ ||ನರಹರಿ ಪಾದೋದಕ ಧರಿಸದ ಶಿರ ನಾಯುಂಡ ಹಂಚು ಕಾಣೊಸುರವರ ಕೃಷ್ಣ ಪ್ರಸಾದವಿಲ್ಲದ ಊಟಸೂಕರಭೋಜನವೋ1ಅಮರೇಶ ಕೃಷ್ಣಗರ್ಪಿತವಲ್ಲದಕರ್ಮ ಅಸತಿಯ ವ್ರತನೇಮವೊರಮೆಯರಸಗೆ ಪ್ರೀತಿಯಿಲ್ಲದ ವಿತ್ತವು ರಂಡೆ ಕೊರಳಸೂತ್ರಕಮಲನಾಭನ ಪೊಗಳದಸಾರ ಸಂಗೀತ ಗಾರ್ದಭರೋದನವೊಮಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ 2ಜರೆ ಹುಟ್ಟು ಮರಣವ ತಡೆವ ಸುದ್ದಿಯ ಬಿಟ್ಟುಸುರೆಯ ಸುರಿಯ ಬೇಡವೊಸುರಧೇನು ಇರಲಾಗಿ ಶ್ವಾನನ ಮೊಲೆಹಾಲಕರೆದು ಕುಡಿಯಬೇಡವೊಕರಿ ರಥ ತುರಗವೇರಲು ಇದ್ದು ಕೆಡಹುವ ಕತ್ತೆ ಏರಲಿಬೇಡವೊಪರಮ ಪುರುಷ ಪುರಂದರವಿಠಲನಿರಲು ನರರ ಭಜಿಸಬೇಡವೊ 3
--------------
ಪುರಂದರದಾಸರು
ಅರ್ಚನೆ ಮಾಡಿರಯ್ಯ ಶ್ರೀ ಭಗವದರ್ಚನೆ ಮಾಡಿರಯ್ಯಅರ್ಚನೆ ಮಾಡುವ ಅರ್ಚಕ ಬುಧರಿಗೆಅರ್ಚಿಪ ಪದದಲ್ಲಿಅಚ್ಯುತದೊರೆವನೆಂದುಪ.ಅಂತರಂಗದ ಶುದ್ಧಿಲಿ ತನ್ನ ಬಾಹ್ಯಂತರ ಪರಿಪೂರ್ಣನಚಿಂತಿಸಿ ಸರ್ವಸ್ವತಂತ್ರ ಶ್ರೀ ಹರಿವೇದತಂತ್ರೋಕ್ತ ಪಥದಿ ನಿರಂತರ ಮರೆಯದೆ 1ಪೃಥುಧ್ರುವ ಅಂಬರೀಶ ಸುಧರ್ಮಜ ದಿತಿಜೋದ್ಭವ ಅಕ್ರೂರಕೃತವರ್ಮ ಸಾತ್ಯಕಿ ಯದುಕುಲ ಸುರಖಷಿಯತಿತತಿ ಅರ್ಚಿಸಿ ಅತಿಧನ್ಯರಾದರೆಂದು 2ಅನಂತಮೂರ್ತಿಯೊಳು ತನಗೊಂದು ಧ್ಯಾನಕ್ಕೆ ತಂದುಕೊಂಡುಆನಂದತೀರ್ಥರ ಸಂತತಿಗಳಿಂದತಾನು ಇಷ್ಟನಾಗಿ ನಾರಾಯಣನಾತ್ಮನೆಂದು 3ಬ್ರಹ್ಮಸ್ತೋತ್ರದಿ ಸಹಸ್ರ ಸನ್ನಾಮಪೂರ್ವಕ ಸ್ತೋತ್ರದಿಶ್ರೀಮತ್ಪಂಚಸೂಕ್ತ ಪಂಚಾಮೃತ ಸ್ನಾನರಮ್ಯಾಯುಧ ಕೌಸ್ತುಭಮಣಿ ಮಾಲೆಯಿಂದ 4ಧ್ಯಾನಾವಾಹನ ಸ್ನಾನ ಸುಪಾದ್ಯಾಚಮನಾಘ್ರ್ಯ ಧೂಪದೀಪ ಪ್ರಸೂನ ತುಳಸಿ ಗಂಧಮೋಘ ನೈವೇದ್ಯದಿಂಮಾನಸಾರ್ಚನೆ ಪ್ರತ್ಯಕ್ಷಾಗಲಿ ಎಂತೆಂದು 5ವೀರಾವರ್ಣದ ಮಧ್ಯದಿ ಶ್ರೀ ಮಧುಕೈಟಭಾಂತಕ ಕೃಷ್ಣನಕೋಟಿಕಾಂಚನ ರತ್ನಾಭರಣವೈಜಯಂತಿಕಿರೀಟಕುಂಡಲದಾಮಹಾರ ನೂಪುರಗಳಿಂದ6ದಿವ್ಯಾಂಬರ ಭೂಷಣ ನವರತುನ ಭವ್ಯ ಮಂಟಪವಸನಅವ್ಯಾಕೃತಾಧ್ಯಕ್ಷ ಶ್ರೀಭೂಮುಕ್ತಾಮುಕ್ತಸೇವ್ಯಮಾನನಾಪಾದ ಮೌಳ್ಯಾಂತ ವೀಕ್ಷಿಸಿ7ಬಹು ನೀರಾಂಜನಗಳಿಂದ ಸದ್ವೇದೋಕ್ತ ಗಹಗಹನ ಸೂತ್ರಂಗಳಿಂದಅಹಿವರಶಯನಜ ಭವಾಹಿಪ ವಿಪ್ರವಂದ್ಯಮಹಿಮನನಂತನೆಂತೆಂದು ಪರವಶದಿಂದ 8ತಾಳದಂಡಿಗೆ ಜಾಗಟೆ ಶಂಖ ಮದ್ದಳೆ ಕಂಸಾಳೆಭೇರಿಆಲಾಬುತಂಬೂರಿಭಾಗವತಗಾನಮೇಳೈಸಿ ತುತೂರಿ ವಾಜಂತ್ರಿ ಘೋಷದಿಂದ 9ಅಲವಬೋಧರು ಪೇಳಿದ ಪೂಜಾವಿಧಿಗಳ ಪ್ರದಕ್ಷಿಣೆ ಪ್ರಮಾಣಲಲಿತ ಗೀತ ನೃತ್ಯ ಬಲು ಪ್ರೇಮದಲಿ ಮಾಡಿಹೊಳೆವ ಬಿಂಬಾತ್ಮನ ಕಾಂಬ ಲವಲವಿಕೆಯಿಂದ 10ಆತ್ಮ ಕರ್ತೃತ್ವನೀಗಿಸರ್ವಾಂತರಾತ್ಮ ಪರಮಾತ್ಮನೆಂದುಆತ್ಮ ಮತ್ತೆ ಜಾÕನಾತ್ಮ ಪ್ರೇರಕ ಪ್ರೇರ್ಯಾತ್ಮ ನಿವೇದನ ಭಕ್ತಿ ನವಕಗಳಿಂದ 11ಸರ್ವೇಂದ್ರಿಯ ಮನಸ್ಥ ಮುಖ್ಯಪ್ರಾಣನೋರ್ವ ನಿಯಂತ್ರಹರಿಸರ್ವ ಪ್ರೇರಕನೆಂಬೊ ವಿಜ್ಞಾನಮಾರ್ಗದಿಸರ್ವಕಾಲದಲಿ ಸರ್ವಸಮರ್ಪಣೆಯೆಂದು 12ಮಂದಜನರು ಭಕ್ತಿಲಿ ದೂರ್ವನೀರಿಂದೆ ಪೂಜೆಯ ಮಾಡಲುತಂದೆ ಪ್ರಸನ್ವೆಂಕಟಕೃಷ್ಣ ಕಾರುಣ್ಯಸಿಂಧುಪ್ರಸನ್ನಾತ್ಮಬಂಧು ಮುಕ್ತಿಯನೀವ13
--------------
ಪ್ರಸನ್ನವೆಂಕಟದಾಸರು