ಒಟ್ಟು 243 ಕಡೆಗಳಲ್ಲಿ , 58 ದಾಸರು , 235 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಡಿಕೊಂಡಾಡಲೊಲ್ಲರೊ-ರಂಗಯ್ಯ ನಿನ್ನ |ಕೂಡಿಕೊಂಡಾಡಲೊಲ್ಲರೊ ಪಕೇಡಿಗನಿವ ನಮ್ಮ ಕೆಲಸ ಕೆಡಿಪನೆಂದು ಅ.ಪತನ್ನ ತಾಯ ಒಡಹುಟ್ಟಿದಣ್ಣನ ಕೊಂದವನಿವ |ಅನ್ನಿಗರ ಬಿಡುವನೆ? ಎಂದೆಲ್ಲರು ಮಾತಾಡಿಕೊಂಡು 1ತರಳಪುಟ್ಟನೆಂದು ಕರೆದು ಸಲಹಿದರೆ |ಬೆರಳನೆಣಿಸಿ ಕೊಂದ ಕೊಲೆಗಾರನೆಂದು ನಿನ್ನ 2ಆವ ಕಾಯುತ ಹೋಗಿ ಹಾವಿನ ಮಡುವ ಧುಮುಕಿ |ಠಾವವಿಲ್ಲ ಮಾಡಿದ ಕೇವಲ ಹೀನನೆಂದು 3ಗೊಲ್ಲತಿಯರ ಮನೆ ಪೊಕ್ಕು ಪಾಲ್ಬೆಣ್ಣೆ ಮೊಸರುಗಳು |ನಿಲ್ಲದೆ ತಿಂಬುವನಿವ ಕಳ್ಳ ಕೃಷ್ಣನೆಂದು 4ಕರುಣಾಕರಸಿರಿಪುರಂದರವಿಠಲನೆ |ಧರೆಯ ನರರು ನಿನ್ನಚರಿಯಪರಿಯ ಕಂಡು5
--------------
ಪುರಂದರದಾಸರು
ಗೌರೀವರಶಿವ ನಮೋ ನಮೋ | ಶಿವ |ಗೌರೀವರ ಶಿವ ನಮೋ ನಮೋ |ಈಶಪರಾತ್ಪರದೋಷನಿವಾರ |ಕಾಶೀಪುರವರವಾಸ ವಿಶ್ವೇಶ್ವರ 1ಕರಿಚರ್ಮಾಂಬರ ಕರುಣಾಕರ |ಸ್ಮರಿಸಲು ಸರ್ವರದುರಿತನಿವಾರ 2ಭಸ್ಮಾಲೇಪನ ಶಶಿಶೇಖರವೃಷಭವಾಹನ ಸ್ಮಶಾನ ಸಂಚಾರ 3ಸುರ ಗಂಗಾಧರ | ನರರುಂಡಮಾಲಾ |ಕರದಿ ತ್ರಿಶೂಲವು ಉರಗಕುಂಡಲ 4ಜಟಾಮಕುಟ ನೀಲಕಂಠೇಶ್ವರಾ |ಅಡವಿಯೊಳ್ಕೈರಾತನಟನ ಶಂಕರ 5ಷಣ್ಮುಖ ಭೈರವ ಭೃಂಗಿ ಪ್ರಮಥ |ಗಣನಾಥ ವೀರಭದ್ರ | ನಂದಿವಂ ದಿತ 6ಮಂದರಧರಗೋವಿಂದನ ಸಖನೆ |ವಂದಿಪೆದಾಸನ ಪಾಲಿಸು ಶಿವನೆ 7
--------------
ಗೋವಿಂದದಾಸ
ಚೌತಿಯ ದಿವಸರಂಭೆ : ವಾರಿಜಗಂಧಿನಿ ನೋಡಿತ್ತ ಶ್ರುತಿ-ಮೌರಿರಭಸದಿ ಲಕ್ಷ್ಮೀಕಾಂತಭೂರಿವೈಭವದಿ ಪೊರಟನೆತ್ತ ಯಾವಕಾರಣವೆಂದು ಪೇಳೆಲೆ ಸತ್ಯ 1ದೇವರ ಪೂಜೆಗೋಸುಗ ಬಂದಪಾವನಮೂರ್ತಿಯಾದುದರಿಂದ ನಮ್ಮಕಾವನು ಕರುಣಾಕಟಾಕ್ಷದಿಂದ 2ರಂಭೆ : ನೂತನವಾಯ್ತೆ ಕೇಳಲೆ ಜಾಣೆ ಜಗ-ನ್ನಾಥನಿಗ್ಯಾವ ಕುಲವು ಕಾಣೆರೀತಿಯನರುಹಬೇಕೆಲೆ ಬಾಲೆ ಸರ್ವಚೇತನಾತ್ಮನ ನಾಟಕದ ಲೀಲೆ 3ಕೊಂಡಕಾರಣದಿ ಪೂಜೆಗಳೆಲ್ಲಕಂಡು ಪೊಗಳಲು ಕವಿಗು ಸಲ್ಲ ಇನ್ನುಪುಂಡರೀಕಾಕ್ಷನವನೆ ಬಲ್ಲ 4ರಂಭೆ : ರಾಜವದನೆ ಪೂಜೆಯಾದ ಮೇಲೆ ಅಂ-ಭೋಜನಾಭನು ತಾಕ್ಷ್ರ್ಯನ ಮೇಲೆರಾಜಬೀದಿಯೊಳ್ ಬರುವದೇನೆ ಇಂಥಸೋಜಿಗವೇನು ಪೇಳೆಲೆ ಜಾಣೆ 5ಬಟೆನಿಸ್ಸಾಳರವದಿ ಬರುವ ಚಂದಸಟೆಯಲ್ಲ ಕೇಳು ಕರುಣದಿಂದ ನಮ್ಮಕಟಕರಕ್ಷಿಸಲು ಬರುವ ಗೋವಿಂದ6ರಂಭೆ : ಬಳಿಕ ಪಲ್ಲಂಕಿಯೇರಿದ ಕಾಣೆ ಜನ-ಗಲಭೆಗಳಿಂದ ಪೋಗುವದೇನೆನಲವಿನಿಂದಲಿ ಪೊರಟೆಲ್ಲಿಗೆನೆ ಮಹಾ-ಜಲಜನಾಭನ ಮಹಿಮೆಯ ಜಾಣೆ 7ದೀಪವೆಂದೆನುತ ಭಕ್ತರು ಮುದದಿಶ್ರೀಪರಮಾತ್ಮ ವಿಲಾಸದಿ ಭಕ್ತ-ರಾಪೇಕ್ಷೆಗಳನು ಸಲ್ಲಿಸುವಂದದಿ 8ರಂಭೆ : ಸೋಮಾರ್ಕಜ್ಯೋತಿಹಿಲಾಲುಗಳು ಜನ-ಸ್ತೋಮಜೇನುಂಡೆಬಿರುಸುಮಿಗಿಲುವ್ಯೋಮಕೇಶಗಳ ಪೊಗಳತೀರದು ಸರಿಭೂಮಿಯೊಳ್ ಕಾಣೆನೆಂಬಂತಾದುದು 9ಅಮಮ ಇದೇನೆ ಇಂದಿನ ಲೀಲೆ ಜನ-ರಮರಿಕೊಂಡಿಹರೇನಿದು ಬಾಲೆಸಮವಿಲ್ಲ ಇಂತೀ ವೈಭೋಗಕ್ಕೆಲೆ ನ-ಮ್ಮಮರಾವತಿಗಿಂತಧಿಕ ಬಾಲೆ 10ಲಾರ್ತಿ ಹರಣವಾಗ್ವದು ಜಾಣೆಕೀರ್ತಿತರಂಗಮಾಗಿಹುದೇನೆ ಶೇಷ-ತೀರ್ಥವೆಂದರೆ ಕೇಳಿದು ಪ್ರವೀಣೆ 11ರಂಭೆ :ಏಸುದೊಡ್ಡಿತೆ ಕೇಳಲೆ ಬಾಲೆ ಅನಂ-ತಾಸನದಂತೆ ಮರೆವುದಲ್ಲೇನಾಸಿರ ದೀಪಸೋಪಾನದಲೆ ಮಹಾ-ಶೇಷನಿಹನು ಮಧ್ಯದೊಳಿಲ್ಲೇ 12ಊರ್ವಶಿ :ಕರುಣಾಕರನು ನಮ್ಮೆಲ್ಲರನುನಿತ್ಯಪೊರೆಯಲೋಸುಗ ಬಂದನು ತಾನುಸುರುಚಿರ ಮಂಟಪವೇರಿದನು ಭೂ-ಸುರರಿಂದ ವೇದಘೋಷವ ಕೇಳ್ವನು 13ದೃಷ್ಟಾಂತವಾಗಿ ಪೇಳುವದೇನೆ ಬ್ರಹ್ಮಸೃಷ್ಟಿಗೆ ಪೊಸತಾಗಿಹುದು ಕಾಣೆಕಟ್ಟಿಸಿದವನು ಪುಣ್ಯೋತ್ತಮನು ಪರ-ಮೇಷ್ಠಿ ಜನಕನ ಕೃಪೆಯಿನ್ನೇನು 14ಭಜಕರ ಮುಖದಿಂದೆಲ್ಲ ತಾನು ಭೂ-ಭುಜನಾಗಿ ನಡೆಸುವನಿದನೆಲ್ಲನುನಿಜವಾಗಿನಿತ್ಯಸಾಕಾರವನು ತೋರಿತ್ರಿಜಗವನೆಲ್ಲ ರಕ್ಷಿಸುತಿಹನು 15ರಂಭೆ : ಬಿಡದೆ ಇನ್ನೊಂದು ಕೇಳುವೆ ನಾರಿ ಜಗ-ದೊಡೆಯ ಪೊರಡುವ ಕಾಲದಿ ಭಾರಿಬೆಡಿಖಂಬ ಧ್ವನಿಯು ಇದೇನೆ ಪೇಳೆ ಇಂಥಕಡು ಬೆಡಗನು ಉಸುರೆಲೆ ಬಾಲೆ 16ಊರ್ವಶಿ: ಜನರು ಎಲ್ಯಾದರಂಜಿದÀ ಭಯವ ತಮ್ಮತನುವಿಗೆ ಸೋಂಕಲದನೆಲ್ಲವಮನದಿ ಝುಮ್ಮೆನಿಸಿ ಬೆಚ್ಚೋಡಿಸುವ ಖಂಬ-ಧ್ವನಿಯೆಸಗಿದರು ಕೇಳಿದರಂದವ 17ತಿರುಗಿಯೇರಿದನು ಪಲ್ಲಂಕಿಯಲ್ಲಿ ಸುತ್ತು-ಬರುವನು ವೇದನಿನಾದದಲಿವರರತ್ನ ಖಚಿತ ಮಂಟಪದಲ್ಲಿ ನಿಂತನಿರವದಿ ಸುಖದಾಯಕನಲ್ಲಿ 18ಶರಣರ ಪಾಪ ಮನಕೆ ತಾರ ದುಡಿದವರಭೇರಿಗೆರೆವ ಬಿಸಿನೀರವರಲಕ್ಷ್ಮೀನಾರಾಯಣಧೀರ ಸುರು-ಚಿರ ಸಿಂಹಾಸನವೇರಿದ ವೀರ 19
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯಭೋ ಜಯಭೋ ಜಯ ವೆಂಕಟೇಶ ಪ್ರಭೊಜಯಕರ್ತಾ ಭಯಹರ್ತಾಭಯದಾಯಕ ಮೂರ್ತೆ ಪ.ಫಣಿಗಿರಿವರ ಫಣಮಂದಿರ ಪ್ರಣತಮನೋಹರಘನಸದ್ಗುಣಗಣಪೂರ್ಣಘನಶಾಮಲವರ್ಣಮನ್ಮಾನಸ ಮುನಿತಾಪಸ ಮನೋಮಾನಸ ಹಂಸದನುಸುತಹರ ಧನುಸಂಹರ ದಿನಮಣೀಶ ರುಚಿರ 1ವನಜಾಕ್ಷಾವನಿಜಾಂತಕ ವನಜಾಸನ ಜನಕಕನಕಾಕ್ಷಹ ಕನಕಾಲಯ ಕನಕಸ್ತ್ರೀಪ್ರಿಯವನಭ್ರಮಣಾವನಿರಮಣ ವಿನತಾತ್ಮಜಗಮನಅನಿಮಿತ್ತಜ ಅನಸೂಯಜ ಅನಿಮಿಷೇಂದ್ರಾನುಜ 2ಅರಿಧರಧರ ಅರಿಪರಿಹರ ಅರುಣಾಂಬರಧರಚಿರಮಣಿ ರುಚಿರಾಭರಣಾನುಚರಸುರತರುವೀರಸುರಪರಮಾಪ್ತನೆ ಸಾಸಿರ ಕ್ರೀಡಾಶ್ಚರ್ಯಗಾರಕಲಿಕಲುಷಹರ ಕರುಣಾಕರ ಪ್ರಸನ್ವೆಂಕಟೇಶ್ವರ 3
--------------
ಪ್ರಸನ್ನವೆಂಕಟದಾಸರು
ದೇವಕಿಯುದರ ಸಂಜಾತನೆ ತ್ರುವಿಕಾವನ ಪಿತ ಕಮಲಾಕ್ಷನೆ ತ್ರುವಿಶ್ರೀ ವೈಭವಸಚ್ಚಿದಾನಂದ ತ್ರುವಿಭಾವಕಿಗೋಪಿಯ ಕಂದನೆ ತ್ರುವಿ......... ತ್ರುವಿ1ಮಧುರೆಯೊಳುದಿಸಿದ ಮಹಿಮನೆ ಜೋ ಜೋಯದುಕುಲ ತಿಲಕ ಯಾದವರಾಯ ಜೋ ಜೋ ||ಮಧುಕೈಟಭ ಮುರಮರ್ದನ ಜೋ ಜೋಚದುರನಾಗಿ ತುರುಗಳ ಕಾಯ್ದೆ ಜೋ ಜೋ 2ಗೋಕುಲಪಾಲಕ ಗೋವಿಂದ ತ್ರುವಿಶ್ರೀ ಕುಚಕುಂಕುಮಾಂಕಿತ ಕೃಷ್ಣ ತ್ರುವಿ ||ಪಾಕ ಶಾಸನ ಮುಖ್ಯ ಸುರವಂದ್ಯ ತ್ರುವಿಲೋಕವೀರೇಳ ಪೆತ್ತಾತನೆ ತ್ರುವಿ ........... ತ್ರುವಿ 3ಶ್ರುತಿಚೋರ ಸಂಹಾರಕ ದೇವ ಜೋ ಜೋಜತನದಿ ಸುರರಿಗಮೃತವಿತ್ತೆ ಜೋ ಜೋ ||ಕ್ಷಿತಿಯ ಕದ್ದೊಯ್ದನ ಸೀಳ್ದೆ ನೀ ಜೋ ಜೋಮತಿಯುತ ಬಾಲಕನತಿ ರಕ್ಷ ಜೋ ಜೋ 4ಕ್ಷಿತಿಯ ಈರಡಿಗೆಯ್ದ ವಾಮನ ತ್ರುವಿಯತಿವಂಶ ಜನನಭಾರ್ಗವರೂಪ ತ್ರುವಿ ||ಕ್ರತುವ ರಕ್ಷಕ ಕಾಕುತ್ಸ್ಥನೆ ತ್ರುವಿರತಿಪತಿಪಿತಸುರನುತ ಕೃಷ್ಣ ತ್ರುವಿ ......... ತ್ರುವಿ5ಗೋಪಿಕಾನಂದ ಮುಕುಂದನೆ ಜೋ ಜೋಭೂಪರೊಳ್ಕಾದಿ ಬಳಲಿದನೆ ಜೋ ಜೋಶ್ರೀ ಪುರುಷೋತ್ತಮ ನರಸಿಂಹ ಜೋ ಜೋಅಪಾರ ಮಹಿಮಾರ್ಣವ ದೇವ ಜೋ ಜೋ........ಜೋ ಜೋ 6ಮಣ್ಣೊಳಗಾಡಿ ನೀ ಬಂದೆಯ ತ್ರುವಿಬೆಣ್ಣೆಯ ಬೇಡೆ ಬಯ್ದೆನೆ ಕಂದ ತ್ರುವಿಕಣ್ಣ ದೃಷ್ಟಿಗೆ ಕರಗದ ಕಂದ ತ್ರುವಿಚಿಣ್ಣಸುಮ್ಮನೆ ಇರು ಶ್ರೀ ಕೃಷ್ಣ ತ್ರುವಿ ............ ತ್ರುವಿ7ತಾರಕ ಸತಿವ್ರತಹಾರಕ ಜೋ ಜೋವಾರಣ ಹಯವೇರಿ ಮೆರೆದನೆ ಜೋ ಜೋ ||ಸಾರಿದವರ ಸಂತೈಸುವ ಜೋ ಜೋಶ್ರೀ ರಮಾಕಾಂತ ಶ್ರೀ ಕೃಷ್ಣನೆ ಜೋ ಜೋ.......ಜೋ ಜೋ 8ಶರಣಾಗತ ವಜ್ರಪಂಜರ ತ್ರುವಿಕರುಣಾಕರ ಕಮಲಾಕ್ಷನೆ ತ್ರುವಿ ||ಧರಣಿಧರಶಾಯಿ ಶ್ರೀವರ ತ್ರುವಿ ||ವರದ ಶ್ರೀ ಪುರಂದರವಿಠಲನೆ ತ್ರುವಿ ........... ತ್ರುವಿ 9
--------------
ಪುರಂದರದಾಸರು
ನಿನ್ನ ಬೆನ್ನುಬಿದ್ದು ಧನ್ಯನಾದೆನು ಪನ್ನಂಗಶಯನನಿನ್ನ ಬೆನ್ನುಬಿದ್ದು ಧನ್ಯನಾದೆನು ಪಇನ್ನು ಭವದೊಳು ಅನ್ಯರಂಜಿಕೆಯನ್ನು ತಪ್ಪಿಸಿನಿನ್ನ ಕರುಣವನು ತೋರಿದಿ ಸನ್ನುತಾಂಗರೂಢಿಯೊಳು ನಾನು ಮೂಢನಾದೆನು ಧೃಢದಿ ನಿನ್ನಗಾಢಮಹಿಮೆಯ ಅರಿಯದಲೆ ಇನ್ನು ಬಡಬಡಿಸಿಕೊಂಡುಕೇಡಿಗೊಳಗಾಗಿ ಕೆಡುತಲಿರ್ದೆನು ಬಿಡದೆ ಪರರನುಬೇಡಿ ಆಸೆಯಿಂ ಭಂಗಮಾಡುತ ಖೋಡಿಯಪ್ಪುದ ಕಂಡು ನೀನೆಮೂಢನೊಳು ದಯಮಾಡಿ ಕರುಣವನೀಡಿ ಕುರುಹನು ತೋರ್ದಿ ದೇವ 1ಹೊಂದಿಕೊಂಡೀ ಮಾಯಾಜಾಲವನು ಒಂದನರಿಯದೆಮಂದಮತಿಯಾಗಿ ಕೆಡುತಲಿ ನಾನುಬಂಧನದ ಭವದ ಸಿಂಧುವಿನೊಳಗಾಡುತಿರ್ದೆನುನೊಂದು ಬೆಂದೆನುಮಂದಭಾಗ್ಯನ ಮಂದಮತಿಗಳುಒಂದು ಉಳಿಯದಂತೆ ಮಾಡೆನ್ನ್ಹøದಯ ಮಂದಿರದೊಳುನಿಂದುನೀನೆ ಮುಂದಕ್ಹಾಕಿದಿ ಮಂದರೋದ್ಧಾರ2ಮರುಳತನವನು ದೂರಮಾಡಿದಿ ಹರಿಯೆ ಎನ್ನಸರುವ ದುರ್ಗುಣ ತರಿದು ಹಾಕಿದಿ ಕರುಣದೆನ್ನದುರಿತಪರ್ವತಮೂಲ ಕಿತ್ತಿದಿ ಮರೆವು ಹರಿಸಿದಿಪರಮಕರುಣಾಕರನೆ ನಿನ್ನುಪಕಾರ ಮರಿಯೆನಾವಕಾಲದಿಪರರ ಬೇಡದಪದವಿನೀಡಿದಿಶರಣಜನಪ್ರಿಯ ಸಿರಿಯರಾಮ 3
--------------
ರಾಮದಾಸರು
ನೆನೆಯಿರೊ ಭಕುತ ಜನರು-ಅನುದಿನವೂನೆನೆಯಿರೊ ಭಕುತ ಜನರುಗಳು ಪಘನಮಹಿಮನ ಸೇವೆಯ ಮಾಡಿದರಾಮನದಲಿ ನೆನೆದ ಅಭೀಷ್ಟವೀವ ಹನುಮಂತ ಅ.ಪಒಂದು ಯುಗದಿ ಹನುಮಂತಾವತಾರನಾಗಿಬಂದು ನೆರೆದಯೋಧ್ಯಾಪುರಕಾ ||ಬಂದ ಧೀರನ ನೋಡಿ ಸುಜನರೆಲ್ಲ-ನಂದದಿಂದಲಿ ಪಾಡಿ 1ವಾಯು ಕುಮಾರಕ ದ್ವಾಪರದಲಿ ಭೀಮ-ರಾಯನೆಂದೆನಿಸಿದ ಕೌರವ ಬಲದಿ ||ನಾಯಕನಾಗಿ ಬಂದ ದುಃಶಾಸನ-ಕಾಯವಳಿದು ನಿಂದ 2ಕಾಯಜಪಿತನ ಮುಂದೆ ಕೌರವರ ತಂದು ರಾಜ-ಸೂಯಯಾಗವ ಮಾಡಿದ ಬಲವಂತ ||ರಾಯರಾಯರ ಧೀರ-ಹನುಮಂತ-ಪ್ರಿಯ ಜನ ಮಂದಾರ 3ಗುರುಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ-ಕರುಣಾಕರನಾಗಿ ಶರಣರ ಪೊರೆವ ||ಮೆರೆವ ಶ್ರೀ ಹನುಮಂತನ-ದೇವನ ಸ್ಮರಿಸಿರೊ ಗುಣವಂತನ 4ಲಂಕಾಪಟ್ಟಣದ ಸಮೀಪ ಸಮುದ್ರ ದಾಟಿಪಂಕಜನಾಭಶ್ರೀ ಪುರಂದರವಿಠಲನಲೆಂಕ ರಾವಣನ ಗೆದ್ದ-ಈ ಹನುಮಂತ-ಪಂಕಜಮುಖಿಯ ಕಂಡ 5
--------------
ಪುರಂದರದಾಸರು
ನೋಡುವುದೆ ಕಣ್ಣು, ಕೇಳುವುದೆ ಕಿವಿ |ಪಾಡುವುದೇವದನಪಗಾಡಿಕಾರಶ್ರೀ ವೇಣುಗೋಪಾಲನ |ಕೂಡಿಕೊಂಡಾಡುವ ಸುಖದ ಸೊಬಗನು ಅ.ಪಎಳೆದುಳಸಿಯ ವನಮಾಲೆಯಿಂದೊಪ್ಪುವ |ಎಳೆಯ ಗೋವಳರೊಡನಾಡುವ |ತಳಿತ ತರುವಿನ ನೆಳಲಲ್ಲಿ ನಲಿವನ |ನಳಿನನಾಭನ ಮುದ್ದು ನಗೆಯ ಸೊಬಗನು 1ಅರಸಂಚೆಯೋಲು ಕುಣಿವ ನವಿಲಂತೆ ನಲಿಯುವ |ಮರಿಗೋಗಿಲೆಯಂತೆ ಕೂಗುವನ ||ಎರಳೆಯಂತೆ ಜಿಗಿಜಿಗಿದಾಡುವತುಂಬಿ|ಶಿರವ ತಗ್ಗಿಸುವಂತೆ ಝೇಂಕರಿಸುವನ 2ಮೊಲ್ಲೆಮಲ್ಲಿಗೆ ಜಾಜಿ ಪೂಮಾಲೆಗಳ ಧರಿಸಿ |ಚೆಲ್ವೆಯರಿಗೆ ಮುಡಿಸುವನ ||ಜಲಕೇಳಿ ವನಕೇಳಿ ಮೊದಲಾದಾಟಗಳಿಂದ |ಚೆಲ್ಲೆಗಂಗಳ ಮುದ್ದು ಘುಲ್ಲನಯನನ 3ಪೊಂಗೊಳಲೂದುತ ಮೃಗಖಗ ಜಾತಿಯ |ಸಂಗಡಿಸುತಲಿಪ್ಪನ ||ಅಂಗವ ಮರೆತು ನೂರಂಗನೆಯರಲಿ ಬೆಳು-|ದಿಂಗಳೊಳಗೆ ಕುಣಿದಾಡುವ ದೇವನ 4ಮುದುಕಿ ಕುಬ್ಜೆಯ ಡೊಂಕ ತಿದ್ದಿ ರೂಪಿಯ ಮಾಡಿ |ಸೆರಗಪಿಡಿಸಿ ಕೊಂಬನ ||ಕರುಣಾಕರ ಶ್ರೀ ಪುರಂದರವಿಠಲ |ಶರಣಾಗತ ರಕ್ಷಕ ರಮೆಯರಸನ 5
--------------
ಪುರಂದರದಾಸರು
ನ್ಯಾಯದ ನುಡಿ ನರಲೀಲೆಗಿದು ಬಲ್ಲವರಲಿ ಸಲ್ಲದುನ್ಯಾಯದ ನುಡಿ ನರಲೀಲೆಗಿದು ಪ.ಮಾಯಾತೀತ ಮನೋಭವತಾತ ಪರಾಯಣ ತವಗುಣನಾನೆಂತರಿವೆನುಅ.ಪ.ಬಲಿಯನು ಮೆಟ್ಟಿದಬಾಂಬೊಳೆಪುಟ್ಟಿದಪಾದಶ್ರೀದಚೆಲುವೆ ರಮಾಕರನಳಿನಾಶ್ರಯಕರಮಾದಜಲಜಭವಾದಿ ಸುರಾಳಿಗಳರ್ಚಿಪಸುಲಲಿತ ತವ ಪದದೊಲವೆಂತರಿವೆನು 1ಶರಣಾಗತಜನ ದುರಿತನಿವಾರಣ ನೀನು ಇನ್ನೇನುತರುಣೀಮಣಿಯಳ ಸೆರೆಯನು ಬಿಡಿಸುವದಿನ್ನುಕರುಣಾಕರ ನಿನ್ನ ಸ್ಮರಿಸುವಳನುದಿನಸ್ಥಿರಚರಜೀವಾಂತರ ಪರಿಪೂರ್ಣನೆ2ಆಕ್ಷೇಪಿಸದಿರು ರಕ್ಷಿಸು ರಘುಕುಲಚಂದ್ರ ರಾಜೇಂದ್ರಲಕ್ಷ್ಮೀನಾರಾಯಣ ಸದ್ಗುಣ ಗಣಸಾಂದ್ರಈಕ್ಷಿಸು ಕರುಣಾಕಟಾಕ್ಷದಿ ಪೂರ್ವದಲಕ್ಷಣ ಹೊಂದಲಿ ಲಕ್ಷ್ಮಣಾಗ್ರಜನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪೊರೆದಯದಿ ಮಾಧವಾ ಕರುಣದಿ ಶ್ರೀಕೇಶವಾ ಪಉರಗವಿಷ್ಟರ ಸುರಶ್ರೇಷ್ಠ ಸುಧಾಕರ ದುರಿತಹರಾ ಅ.ಪಕರುಣಾಕರ ಸರಸಿಜಾಕ್ಷದಾಮೋದರಸುರತಟಿನೀ ತಾತನೆ ಕರುಣದಿ ಶ್ರೀನಾಥನೇತರಳಪ್ರಹ್ಲಾದನ ಪೊರೆದ ನರಸಿಂಹನೇಸ್ಮರಿಸುವೆನೇ ನರವರನೆ ಗರುಡಗಮನ ಶಂಭುಪ್ರಿಯ 1ಮಂದರೋದ್ಧಾರನೆಸಿಂಧುಗಂಭೀರನೇನಂದನಂದನ ಮುಖಚಂದ್ರ ಪ್ರಕಾಶನೇವಂದಿಪೆನೇ ಸುಂದರನೇಸಿಂzsÀುಶಯನ ಗೋವಿಂದನೇ 2
--------------
ಗೋವಿಂದದಾಸ
ಮಂಗಲಂ ಜಯ ಮಂಗಲಂಮಂಗಲಂಶುಭಮಂಗಲಂಪನೀರೊಳು ಮುಳುಮುಳುಗ್ಯಾಡಿದಗೇಘೋರತಮವ ಹತ ಮಾಡಿದಗೆಮೂರೊಂದು ವೇದವ ತಂದವಗೆಧೀರಗೆ ಮತ್ಸ್ಯವತಾರನಿಗೆ1ಸುರರ ಮೊರೆಯಕೇಳಿಬಂದವಗೇಗಿರಿಯ ಬೆನ್ನಲಿ ಪೊತ್ತು ನಿಂದವಗೆತ್ವರಿತದಿ ಶರಧಿಯ ಮಥಿಸಿದಗೆಕರುಣಾಕರನಿಗೆ ಕೂರ್ಮನಿಗೆ2ಕೆರಳುತ ಕೋರೆಯ ಮಸೆದವಗೆಗುರುಗುರಿಸುತ ಧುರವೆಸೆದವಗೆದುರುಳಹೇಮಾಕ್ಷನ ಮಥಿಸಿದಗೆಧರಣಿಯ ತಂದಗೆ ವರಹನಿಗೆ3ತರಳನು ಸ್ಮರಿಸಲು ಬಂದವಗೆಧುರದೊಳುದೈತ್ಯನ ಕೊಂದವಗೆಕರುಳನು ಕಂಠದಿ ಧರಿಸಿದಗೆಸುರನರವಂದ್ಯಗೆ ನರಸಿಂಹಗೆ4ಬಲಿಯೊಳು ದಾನವ ಬೇಡಿದಗೆನೆಲವನುಈರಡಿಮಾಡಿದಗೆಛಲದಲಿ ಬಲಿಯನು ಮೆಟ್ಟಿದಗೆಚಲುವಗೆ ವಾಮನ ಮೂರುತಿಗೆ5ಹಸ್ತದಿ ಕೊಡಲಿಯ ಪಿಡಿದವಗೆಪೃಥ್ವೀಪಾಲರ ಶಿರ ಕಡಿದವಗೆಧಾತ್ರಿಯ ವಿಪ್ರರಿಗಿತ್ತವಗೇ ಕ್ಷತ್ರಿವಿರೋಧಿಗೆ ಭಾರ್ಗವಗೆ6ದಶರಥ ನಂದನನೆನಿಸಿದಗೆಶಶಿಮುಖಿಸೀತೆಯ ವರಿಸಿದಗೆದಶಶಿರದೈತ್ಯನ ಮಥಿಸಿದಗೆಕುಸುಮಾಕ್ಷನಿಗೆ ಶ್ರೀರಾಮನಿಗೆ7ಮುರಲೀಧರನೆಂದೆನಿಸಿದಗೆದುರುಳಕಂಸನ ಮಥಿಸಿದಗೆತರಳೆ ರುಕ್ಮಿಣಿಯನು ತಂದವಗೆಮುರಹರಮೂರ್ತಿಗೆ ಕೃಷ್ಣನಿಗೆ8ತ್ರಿಪುರರ ಸತಿಯರ ಒಲಿಸಿದಗೆತ್ರಿಪುರರ ಶಿವನಿಂಗೆಲಿಸಿದಗೆಕಪಟದ ಮೋಹನ ರೂಪನಿಗೆನಿಪುಣಗೆ ಬೌದ್ಧಾವತಾರನಿಗೆ9ಹಸ್ತದಿ ಕತ್ತಿಯ ಪಿಡಿದವಗೆಉತ್ತುಮ ಹಯವೇರಿ ನಡೆದವಗೆಮಾತುಳಶಿರವನು ಕಡಿದವಗೆಉತ್ತುಮ ಮೂರ್ತಿಗೆ ಕಲ್ಕ್ಯನಿಗೆ10ಇಂದಿರೆಯರಸಗೆ ಸುಂದರಗೆಸಿಂಧುಮಂದಿರದಲಿ ನಿಂದವಗೆಮಂದಸ್ಮಿತಮುಖ ಚಂದ್ರನಿಗೆಗೋವಿಂದಗೆ ದಾಸನ ವಂದ್ಯನಿಗೆ11xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಮನ್ನಾರು ಕೃಷ್ಣಗೆ ಮಂಗಳ ಜಗವಮನ್ನಿಸಿದೊಡೆಯಗೆಮಂಗಳ ಪ.ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆಕಮ್ಮಗೋಲನಯ್ಯಗೆ ಮಂಗಳ ||ಧರ್ಮಸಂರಕ್ಷಗೆ ದಾನವ ಶಿಕ್ಷಗೆನಮ್ಮ ರಕ್ಷಕನಿಗೆ ಮಂಗಳ 1ತುರುಗಳ ಕಾಯ್ದಗೆ ಕರುಣಾಕರನಿಗೆಗಿರಿಯನೆತ್ತಿದನಿಗೆ ಮಂಗಳ ||ಪುರದ ತಿಮ್ಮಪ್ಪಗೆ ವಾರಿಜನಾಭಗೆಹರಿರ್ವೋತ್ತಮನಿಗೆ ಮಂಗಳ 2ದೇವಕಿ ದೇವಿಯ ತನಯಗೆ ಮಂಗಳದೇವ ತಿಮ್ಮಪ್ಪಗೆ ಮಂಗಳ ||ಮಾವನ ಕೊಂದು ಮಲ್ಲರ ಮಡುಹಿದಪುರಂದರವಿಠಲಗೆ ಮಂಗಳ 3
--------------
ಪುರಂದರದಾಸರು
ಮರೆಹೋಗಿ ಬುಧರೀ ತಾತನ್ನ ವರಗುರು ಸತ್ಯನಾಥನ್ನ ಪ.ಇಂದ್ರಿಯಜಿತ ಸುಜನೌಘ ಚಕೋರಕೆ ಚಂದ್ರನ್ನಮುದಸಾಂದ್ರನ್ನಮಂದರಧರಜಾನಕಿಪತಿ ರಾಮಚಂದ್ರನ ಪ್ರಿಯ ಮುನೀಂದ್ರನ್ನ1ಅಮಲಸುಖತೀರ್ಥ ಪ್ರಮೇಯಸಾಕಲ್ಯನಿರ್ಣಯ ಬಲ್ಲನ್ನಎಲ್ಲಾ ಬಲ್ಲೆಂಬೋ ಮಾಯಿಮತದಲ್ಲಣನ ಪಟುಮಲ್ಲನ 2ರುಕ್ಷಮಾಯಿಗಳ ಶಿಕ್ಷಿಪನ ಸಪಕ್ಷನ್ನ ಕರುಣಾಕ್ಷನ್ನಪಕ್ಷ್ಷಿಗಮನನ ದೀಕ್ಷೆಲಿ ಪೂಜಿಪ ದಕ್ಷನ್ನ ಸುರಪಕ್ಷನ್ನ 3ಶಂಕರನ ಗರ್ವ ಮುರಿದು ಬಿರುದಾಂಕನ್ನ ನಿಶ್ಯಂಕನ್ನಕಿಂಕರಜನಸÀುರಭೂರುಹ ಸುಗುಣಗಣಾಂಕನ್ನ ಶಶಿಗಧಿಕನ್ನ 4ಮರುತಮತಾಗ್ರಣಿಗುರುಸತ್ಯಾಧಿಸುತ ವಿರತನ್ನಾಮಲ ಚರಿತನ್ನಕರ್ತಪ್ರಸನ್ನವೆಂಕಟಪತಿಪದನಿರತನ್ನ ಶುಭಕರತನ್ನ5
--------------
ಪ್ರಸನ್ನವೆಂಕಟದಾಸರು
ಯಾಕೆ ಕಡೆಗಣ್ಣಿಂದ ನೋಡುವೆ-ಕೃಷ್ಣನೀ ಕರುಣಾಕರನಲ್ಲವೆ? ಪಭಕ್ತವತ್ಸಲ ನೀನಲ್ಲವೆ-ಕೃಷ್ಣ ಚಿತ್ತಸುಖದಾತ ನೀನಲ್ಲವೆ?ಅತ್ಯಂತ ಅಪರಾಧಿ ನಾನಾದಡೇನಯ್ಯಇತ್ತಿತ್ತ ಬಾ ಎನ್ನಬಾರದೆ ರಂಗ 1ಇಂದಿರೆಯರಸ ನೀನಲ್ಲವೆ ಬಹು ಸೌಂದರ್ಯನಿಧಿ ನೀನಲ್ಲವೆ?ಮಂದಮತಿ ನಾನಾದಡೇನು ಕೃಪಾಸಿಂಧುನೀ ರಕ್ಷಿಸಬಾರದೆ ರಂಗ2ದೋಷಿಯು ನಾನಾದಡೇನಯ್ಯ-ಸರ್ವ ದೋಷರಹಿತ ನೀನಲ್ಲವೆ?ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯಶೇಷಶಾಯಿ ಶ್ರೀಪುರಂದರವಿಠಲ3
--------------
ಪುರಂದರದಾಸರು
ರಕ್ಷಿಸೆನ್ನ ರಕ್ಷಿಸೆನ್ನನು ಸುರಯಕ್ಷರಕ್ಷಕ ಮಹಾದಕ್ಷ ಯತಿ ಮುನಿ ಪಕ್ಷ ವಿರೂಪಾಕ್ಷಕುಕ್ಷಿಯೊಳು ನೀ ನೆಲಸಿ ಎನ್ನ ಕೃಪೇಕ್ಷಣದಿ ಕೈವಿಡಿದುರಕ್ಷಿಪಅಕ್ಷಯರಾಕ್ಷಸಾಂತಕ ಪಕ್ಷಿವಾಹನ ದೇವಪ್ರಿಯಪವೇದವೇದ್ಯಸುಜನರಕ್ಷ ನಾದಭೇದ್ಯಸಾಧನ ನಾಲ್ಕನು ಸಾಧಿಪ ಸಾಧಕನಾದ ದೇವನೆ ನಿನ್ನ ಪಾದವ ಸ್ತುತಿಪೆನುವೇದ ಸ್ಮøತಿಗಳು ಆದಿಶೇಷನುಸಾಧಿಸುತ ಭೇದಿಸಿಯೆ ನಿನ್ನನುಹಾದಿ ಕಾಣದು ಪೊಗಳ್ವಡೆನಗೆ ಅರಿಯದಾ-ಗಿದೆ ಅನಾದಿ ಮೂರುತಿ1ಹಾರಹೀರ ಫಲಿಸಿದಂಥಾ ಶೂರ ವೀರಸಾರವಿಲ್ಲದ ಸಂಸಾರ ದೂರ ವಿ-ದೂರ ಭಯ ಜರ್ಜರ ಕರುಣಾಕರಸಾರಪೂರಿತಕಾರಣಾತ್ಮಕಮಾರವೈರಿಯೆ ಧೀರ ಜಗದುದ್ಧಾರ ಎನಗೆತೋರಿ ಶಕುತಿಯಸಾರಹೃದಯನೆಗೌರಿ ವಲ್ಲಭನೆ2ಪರಮಪುರುಷ ಪಾರ್ವತೀಪ್ರಿಯಶರಣ ಹೃದಯ ನಿರುತ ಪಾಲಿಪ ಶಂಭುಹರಪಿನಾಕಿಶಿವವರಚಿದಾನಂದಗುರುಅವಧೂತಾತ್ಮ ನಿರುಪಮ ನಿರ್ಮಾಯನಿರವಯ ನಿರುತಪರಮಶಿವ ವಿಶ್ವಹೃದಯಪರತರಾತ್ಮಕಪರಮಮಂಗಳಪರಮಚೈತನ್ಯಾತ್ಮ ವಸ್ತುವೇ3
--------------
ಚಿದಾನಂದ ಅವಧೂತರು