ಒಟ್ಟು 29700 ಕಡೆಗಳಲ್ಲಿ , 137 ದಾಸರು , 8961 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗತಿಯಾರೋ ಈ ಜಗದಿ ಮತಿಗೆಟ್ಟ ಮನುಜ ಕ್ಷಿತಿನಾಥ ಹೆಜ್ಜಾಜಿ ಕೇಶವನ ಹೊರತು ಪ ಸತಿಯ ಪರದೊಳು ನೋಡೆ ಪುಣ್ಯವರ್ಥಕೆ ಕತೆಗೆ ಸುತರಿರುವರೆಂದೆನಲು ಋಣಮುಗಿವೊವರೆಗೇ ಅತಿಶಯದ ಬಾಂಧವರು ಮಿತ್ರಮಂಡಲಿಯೆಲ್ಲ ಸ್ತುತಿಯುಕ್ತ ಮರ್ಯಾದೆ ಪಡೆಕೊಳ್ಳುವನಕ 1 ತಂದೆ ತಾಯಿಗಳೆಲ್ಲ ಮುಂದಳಿದು ಹೋಗುವರು ಬಂದ ತನ್ನಧಿಕಾರ ಬಲುಮೆಯಿರುವಾಗ ಬಂದಿದ್ದ ಧನಧಾನ್ಯಗಳು ನಿಲ್ಲದೋಡುವುವು ಬಂಧನದ ಕಾಲದೊಳಗೊಬ್ಬರೂ ಬರರೂ 2 ಕರಿ ಧ್ರುವನು ಪಾಂಚಾಲಿ ಪ್ರಹ್ಲಾದ ಪ್ರಭೃತಿಗಳ ಪರಮಪಾವನರೆನಿಸಿ ಪೊರೆದಂಥ ಹರಿಯ ಉರುತರದ ನೋಟದೊಳು ನಿರುತ ನೆನೆಯಲು ನಿನ್ನ ಕರಪಿಡಿದು ಕಾಯುವನು ಸುಂದರಶ್ಯಾಮ 3
--------------
ಶಾಮಶರ್ಮರು
ಗತಿಯೆಂದು ನಂಬಿದೆ ನಿನ್ನ ಕಾಯೊ ಎನ್ನ | ಲಕ್ಷ್ಮೀ ವಿಶ್ವಮೋಹನ್ನ ಪ ಗತಿಯಿಲ್ಲದವರಿಗೆ ಗತಿನೀನಲ್ಲವೆ ಸ್ವಾಮಿ ಸತತನಿನ್ನಯ ಪಾದಾಶ್ರಿತರಲ್ಲವೆ ನಾವು ಅ.ಪ ಅಗಣಿತಗುಣಪೂರ್ಣನೆಂದು ದೀನಬಂಧು | ಸ- ರ್ವಗಸರ್ವಾಂತರ್ಯಾಮೀ ಮೊರೆಹೊಕ್ಕೆನಿಂದು ಜಗದಾದಿಕಾರಣ ಜಲಜಾತ ನಯನ ಪ- ಶೌರಿ 1 ನಾಥನು ನೀನು ಅನಾಥರಿಗೆಲ್ಲ 2 ಶರಣಾಗತ ರಕ್ಷಾನತಸುರಧೇನು ಗುರುರಾಮವಿಠ್ಠಲ ಕರುಣಾಸಾಗರನು ಎಂ- ದರಿತು ನಿನ್ನಡಿಗಳ ಭಜಿಸಿ ಬೇಡುವೆನು 3
--------------
ಗುರುರಾಮವಿಠಲ
ಗದ್ಯ ದಂಡಕ ಅಧರ ಚುಬುಕ ದಂತಗಳ 10 ಅಗರು ಚಂದನದಮುತ್ತಿನ ಮಲುಕು ಪೆಂಡೆಯಸರ ಕೊರಳಲ್ಲಿಹತ್ತೆಗಟ್ಟಿದ ವಾಗ್ಗೊರಳು ಮುತ್ತುಗಳಮುತ್ತು ಮಾಣಿಕ ನವರತ್ನದ ಚಿಂತಾಕ-ವತ್ತಿ ಸೇರಿದ ಕಂಠಮಾಲೆ ಸರಗಳ 20 ಮಣಿ ತಾಯಿತ್ತುಮೆರೆವ ಹಮ್ಮೀರ ತಾಯಿತಿ ಕಾಂತಿಗಳಕಡಗ ಕಂಕಣ ಸುರಿಗೆ ಬಿಚ್ಚು ಬಳೆಗಳುಹಿಡಿವುಡಿಯಲ್ಲಿ ವಜ್ರದ ಥಳವುಗಳಕಡು ಮೋಹವಾದ ಮುರುಡಿಯ ಸರಪಣಿಝಡಿವ ಮುಂಗೈಯ ಮುರಾರಿ ಕವಡೆಯ30 ನೀಲ ವೈಜಯಂತಿ ಮಾಲೆ ಶೋಭಿಸುವ 40 ಕದಳಿ ನಖ ಚಂದ್ರಿಕೆಯ 50 ಕಮಲ ವಾಸವಾಗಿಪ್ಪ ಕೃಷ್ಣನಪದುಮ ಚರಣಕ್ಕೆ ನಮೊ ನಮೊ ನಮೋ ಎಂಬೆ ನಾ. 60
--------------
ವ್ಯಾಸರಾಯರು
ಗಂಧವಾಹನ ಮತವ ಪೊಂದವರು ಹಂದಿನಾಯಿಗಳಾಗಿ ಬಹುಕಾಲ ಕಳೆದಂತೆ ಪ ಇಳೆಯಾಣ್ಮನಿಲ್ಲದಾ ನಾಡು ಶೋಭಿಸದಂತೆ ಜಲವಿಲ್ಲದಾ ವಾಪಿ ಕೂಪದಂತೆ ನಳಿನ ಬಾಂಧವ ಮಿತ್ರನುದಯಿಸದ ದಿನದಂತೆ ಕುಲಹೀನನಾದವರ ಸಂಗಮಾಡಿದಂತೆ 1 ಕೋಣನಾ ಸಮ್ಮುಖದಿ ವೀಣೆ ಬಾರಿಸಿದಂತೆ ಜಾಣತನವಿಲ್ಲದಾಮಾತ್ಯನಂತೆ ವಾನರನ ಕೈಯಲ್ಲಿ ಮಾಣಿಕವ ಕೊಟ್ಟಂತೆ 2 ಶಾಮಸುಂದರನಾಮ ವರ್ಣಿಸದÀ ಕವಿಯಂತೆ ಪಾಮರಗೆ ಪೌರಾಣ ಪೇಳಿದಂತೆ ಕಾಮಾದಿಗುಣ ಬಿಡದೆ ಸನ್ಯಾಸಿಯಾದಂತೆ ಕೋಮಲಾಂಗದ ಸತಿಗೆ ಕ್ಲೀಬ ದೊರಕಿದಂತೆ 3
--------------
ಶಾಮಸುಂದರ ವಿಠಲ
ಗರುಡನೇರಿ ಬಂದ ಸಿರಿರಮಣನು ತಾನು ಪ ಗರುಡನೇರಿ ಬಂದ ಸಿರಿರಮಣನು ತನ್ನ ಶರಣ ಕರುಣದಿ ಪೊರೆಯಲೋಸುಗ ಭರದಿ ಅ.ಪ. ಕರಿರಾಜನು ಅಂದು ಕ್ರೂರ ನಕ್ರಗೆ ಸಿಲ್ಕಿ ತೆರವಿಲ್ಲದೆ ಕೂಗುತ ಚೀರುತಿರಲು ಸುರರು ಮೊದಲಾಗಿ ಸತಿಸುತ ಬಾಂಧವರು ಅರಿತು ಅರಿಯದಂತೆ ತ್ರಾನದಿಂದ್ದಾಗ 1 ಉತ್ತಾನಪಾದನು ಚಿತ್ತದಿ ಮರುಗದೆ ಮತ್ತೆ ಬÁಲನ ಕರೆದು ಮನ್ನಿಸದೆ ಅತ್ತ ಸಾರೆಂದು ಸುರುಚಿ ನೂಕಿದ ಮೇಲೆ ಚಿತ್ತಜನಯ್ಯನ ಸ್ಮರಿಸಿದ ಮಾತ್ರದಿ 2 ನೀಚ ರುಕ್ಮನು ತನ್ನನುಜಾತೆಯನಂದು ಮಾಚಿಸಿ ಶಿಶುಪಾಲಗೀವೆನೆಂದು ಯೋಚಿಸಿ ಮನದೊಳು ಹರಿಯ ದೂರುತಲಿರೆ ತಾ ಚಿಂತೆ ತಾಳಿದ ರುಕ್ಮಿಣಿಯ ಕೈಪಿಡಿಯಲು 3 ಅಕ್ಷಯ ಪಾತ್ರೆಯ ತೊಳೆದು ಪಾಂಚಾಲೆ ಪಕ್ಷಿದೇರನ ಧ್ಯಾನದೊಳು ಕುಳಿತಿರಲು ಭಿಕ್ಷೆ ಬೇಡುತ ಬಂದು ದೂರ್ವಾಸ ಮುನಿಪನು ಶಿಕ್ಷಿಸೆನೆಂದಾಗ ಸತಿಗೆ ಮುಂದೋರದಂದು 4 ಗರುವ ಪಾರ್ಥನು ಅಂದು ಗಂಗಾ ಶಾಪದಲಿ ಅಸುವ ತೊರೆದು ರಣದೊಳು ಬಿದ್ದಿರಲು ಅರಿತು ಮನದೊಳು ಅನಿಲಜನೊಡಗೂಡಿ ಸಿರಿ ರಂಗೇಶವಿಠಲನು 5
--------------
ರಂಗೇಶವಿಠಲದಾಸರು
ಗರುಡನೇರುವ ಕೃಷ್ಣ ಹೊರಡುವನೀಗ ಸಖಿನೋಡೋಣ ನಾವೆಲ್ಲ ಈಗ ಬಾರೆ ನೀರೆ ಪ. ಗಗನದಿ ಬೆಳಗುವ ಹಗಲು ಬತ್ತಿಗÀಳೆಷ್ಟುಹಗಲು ಬತ್ತಿಗಳೆಷ್ಟು ಮುಗಿಲಿಗೆ ಮುಟ್ಟೋಬಿರಸೆಷ್ಟ ಬಹುಶ್ರೇಷ್ಠಮುಟ್ಟೋ ಮಿಂಚಿನಂತೆ ಹೊಡೆವೊ ಬಾಣಗಳು ಕಡಿಯಿಲ್ಲ ನಲ್ಲೆ 1 ಎಡಬಲ ಭಾವೆ ರುಕ್ಮಿಣಿ ಮಡದಿಯರೊಪ್ಪುವ ಮಡದಿಯ ಹಿಂದೊಪ್ಪುವ ಬೆಡಗು ವರ್ಣಿಸಲು ವಶವಲ್ಲ ನಲ್ಲೆಬೆಡಗು ವರ್ಣಿಸುವೊ ಅವರಾರೆ ಚತುರ್ಮುಖನು ಖಡಿಸೋತು ಕೈಯ ಮುಗಿದಾನೆ ತಾನೆ2 ಕೃಷ್ಣನರಸಿಯರುಉಟ್ಟ ಪಟ್ಟಾವಳಿಯ ಬೆಳಕು ಅಷ್ಟು ಇಷ್ಟೆಂಬ ಮಿತಿ ಇಲ್ಲ ನಲ್ಲೆ ಅಷ್ಟು ಇಷ್ಟೆಂಬ ಮಿತಿ ಇಲ್ಲ ಸೂರ್ಯನಾಚಿಬಿಟ್ಹೋದ ತಮ್ಮ ಮನೆತನಕ ಸುಜನಕೆ 3 ಮದನ ತಾ ನಾಚಿ ಮನೆಗ್ಹೋದ ಅಗಾಧ4 ಕಡಗ ಸರಪಳಿ ಗೆಜ್ಜಿ ನಡುವಿನೊಡ್ಯಾಣ ಪದಕ ನಡುವಿನೊಡ್ಯಾಣ ಪದಕ ಇಡವೊಕುಂಡಲದ ಮುಕುಟವೆ ಚಂದವುಮುಕುಟದ ಕಾಂತಿಗೆ ಅಡಗಿವೆ ತಾರೆ ಗಗನದಿ ಮುದದಿ 5 ಫುಲ್ಲ ನಯನೆಯರ ಮುತ್ತಿನ ಝಲ್ಲೆ ವಸ್ತದ ಬೆಳಕುಎಲ್ಲೆಲ್ಲು ಇಲ್ಲ ಜಗದೊಳು ಕೇಳುಎಲ್ಲೆಲ್ಲೂ ಇಲ್ಲ ಜಗದೊಳು ಚಂದ್ರನಾಚಿಖಡಿ ಸೋತು ಕೈಯ ಮುಗಿದಾನೆÉ ತಾನೆ6 ಕೌಸ್ತುಭ ವೈಜಯಂತಿ ಹಾರ ಶೋಭಿಸುವ ಬೆಳಕೆಷ್ಟು ಬಹುಶ್ರೇಷ್ಠ7 ಮಂದಗಮನೆಯರು ಹರಿಯ ಗಂಧ ಕಸ್ತೂರಿ ಸೊಬಗುಛಂದ ವರ್ಣಿಸುವವರ್ಯಾರ ತೋರೆಛಂದ ವರ್ಣಿಸುವ ಅವರ್ಯಾರೆ ಚತುರ್ಮುಖನ ಛಂದಾಗಿ ನಾಚಿ ಕೈ ಮುಗಿದ ಸುಕರ 8 ನಲ್ಲೆಯರು ರಮೆ ಅರಸು ಮಲ್ಲಿಗೆ ಮುಡಿದ ಚಂದ ಮಲ್ಲಿಗೆ ಮುಡಿದ ಚಂದ ಎಲ್ಲೆಲ್ಲೂ ಇಲ್ಲಧsರೆ ಮ್ಯಾಲೆ ಎಲ್ಲೆಲ್ಲೂ ಇಲ್ಲ ಧರೆ ಮ್ಯಾಲೆ ಸರಸ್ವತಿಯುಚಲ್ವಿ ತಾ ನಾಚಿ ನಡೆದಾಳೆ ಕೇಳೆ 9
--------------
ಗಲಗಲಿಅವ್ವನವರು
ಗರುವ ರ'ತನ ಮಾಡು ಗುರುರಾಯನೇಸರ್ವದಾ ಮನದೊಳಗೆ ನಿಲ್ಲು ಮ'ಪತಿರಾಯ ಪಅಹಂಕಾರವನು ಅಳಿಸು ಮಮಕಾರವನು ಮರೆಸುಸಕಲಕ್ಕು ಶ್ರೀ ಹರಿಯ ಪ್ರೇರಣೆ ಎಂದೆನಿಸುಲಕು'ುವಲ್ಲಭನ ಕರೆತಂದು ಹೃದಯದಲಿ ನಿಲಿಸುಭಕುತಿಯನು ಹರಿಗುರುಗಳಲಿ ಸ್ಥಿರವಾಗಿ ಇರಿಸು 1ಆರು ಅರಿಗಳಗೆಲಿಸು ಮೂರುದಿನದಿನಬೆಳೆಸುಮೂರುರಾಶಿಯ ಬಿಡಿಸಿ ಮೂರು ವ್ರತ 'ಡಿಸುಮೂರಾರು'ಧ ಭಕುತಿ ಮೂರು ಕಾಲಕೆ ಕೊಟ್ಟುಮುರಾರಿ ಮೂರುತಿಯ ಮನದೊಳಗೆ ನಿಲಸು2ಮನಪ'ತ್ರವ ಮಾಡು ಮನದೊಳಗೆ ನೀಕೂಡುಮನದ ವ್ಯಕ್ತಿಗಳನು ಅಂತರಮುಖವ ಮಾಡುಜನುಮ ಜನುಮದಿ ಹರಿಯ ದಾಸರ ಮನೆಕಾಯ್ವಶುನಕನೆಂದೆನಿಸಿ ಭೂಪತಿ'ಠ್ಠಲನ ತೋರು 3
--------------
ಭೂಪತಿ ವಿಠಲರು
ಗರುವವು ನಿನಗ್ಯಾಕೆಲೋ ಎಲೋ ಜರ ನಾಚಿಕೆ ಬಾರದೇನೆಲೋ ಎಲೋ ಪ ಮರುಳನೆ ನಿನಗೀಪರಿ ಗರುವ್ಯಾತಕೋ ಅರಿತು ನೋಡ್ಹಿರಿಯರನೆಲೋ ಎಲೋ ಅ.ಪ ಘನತೆಲೊಸಿಷ್ಠನೇನೆಲೋ ಎಲೋ ಜನಕ ಭಾಗ್ಯದೊಳೆಲೋ ಎಲೋ ಮನುಗಳಲ್ವ್ಯಾಸನೇನೆಲೋ ಎಲೋ ನೀ ಮುನಿಗಳೋಳ್ಯುಕನೇನೆಲೋ ಎಲೋ ಮನೆತನದಲಿ ಘನದಶರಥನೆ ದಿನಮಣಿಯೆ ನೀ ಪ್ರಭೆಯೋಳೆಲೋ ಎಲೋ 1 ಧುರದಿ ಕಾರ್ತರ್ವ್ಯನೇನೆಲೋ ಎಲೋ ನೀ ನರಿವಿನೋಳ್ಪ್ರಹ್ಲಾದನೇನೆಲೋ ಎಲೋ ವಿರಸದಿ ರಾವಣನೇನೆಲೋ ಎಲೋ ನೀ ಸ್ಥಿರತನದ್ವಿಭೀಷಣನೇನೆಲೋ ಎಲೋ ಹರಿ ಒಲುಮೆಲಿವರ ಅಗಸ್ತ್ಯನೇನು ಸುರ ಗುರುವೇ ನೀ ಮತಿಯೋಳೆಲೋ ಎಲೋ 2 ತ್ರಾಣದಿ ವಾಲಿಯೇನಲೋ ಎಲೋ ನೀ ಜಾಣರೋಳ್ಬಲಿಯೇನೆಲೋ ಎಲೋ ಜ್ಞಾನದಿ ವಾಲ್ಮೀಕಿಯೇನೆಲೋ ಎಲೋ ನೀ ಗಾನದಿ ನಾರದನೇನೆಲೋ ಎಲೋ ದಾನದೊಳಗೆ ಹರಿಶ್ಚಂದ್ರನೇನೋ ನಿ ಧಾನದಿ ನಳನೇನೆಲೋ ಎಲೋ 3 ಪದವಿಯೊಳ್ಧ್ರುವನೇನೆಲೋ ಎಲೋ ನೀ ನಿಧಿಯೋಳ್ಕುಬೇರನೆಲೋ ಎಲೋ ಮದನನೆ ಪುರುಷರೋಳೆಲೋ ಎಲೋ ವರ ಮದದಿ ಕಶ್ಯಪನೇನೆಲೋ ಎಲೋ ಸದಮಲ ಕುಲದಲಿ ಗೌತಮ ಮುನಿಯೇ ನೀ ಕದನದಿ ಕುರುಪನೇನಲೋ ಎಲೋ 4 ನುಡಿವಲಿ ನರನೇನೆಲೋ ಎಲೋ ನೀ ಕೊಡುವಲಿ ಕರ್ಣನೇನೆಲೋ ಎಲೋ ಇಡುವಲಿ ಧರ್ಮನೇನಲೋ ಎಲೋ ನೀ ಕೆಡುಕಲಿ ಶಕುನಿಯೇನೆಲೋ ಎಲೋ ಕಡುಗಲಿತನದಲಿ ಕಲಿಭೀಮನೇ ಸಡಗರದಿಂದ್ರನೇನೆಲೋ ಎಲೋ 5 ಯುಕ್ತಿಲಿ ದ್ರೋಣನೇನೆಲೋ ಎಲೋ ನೀ ಶಕ್ತಿಲಿ ನಕುಲನೇನೆಲೋ ಎಲೋ ಭಕ್ತಿಲ್ವಿದುರನೇನೆಲೋ ಎಲೋ ನೀ ವೃತ್ತಿಲಿ ಸಹದೇನವನೇನೆಲೋ ಎಲೋ ಚಿತ್ತಶುದ್ಧಿಯಲಿ ವೀರ ಸುಧನ್ವನೆ ತೃಪ್ತಿಲಿ ಭೀಷ್ಮನೇನೆಲೋ ಎಲೋ 6 ದಿಟ್ಟರೋಳ್ಗರುಡನೇ ನೆಲೋ ಎಲೋ ನೀ ಶಿಷ್ಟರೋಳ್ಹನುಮನೇನೆಲೋ ಎಲೋ ಸೃಷ್ಟಿಯೋಳಾರನ್ಹೋಲ್ವೆಲೋ ಎಲೋ ನೀ ಭ್ರಷ್ಟನಾಗುವಿ ಯಾಕೆಲೋ ಎಲೋ ಬಿಟ್ಟುಗರ್ವಮಂ ಶಿಷ್ಟಶ್ರೀರಾಮನ ಮುಟ್ಟಿಭಜಿಸಿ ಉಳಿಯೆಲೋ ಎಲೋ 7
--------------
ರಾಮದಾಸರು
ಗರ್ವಿಸುವದು ತರವೆ ಗರ್ವಿಸುವದು ತರವಲ್ಲ ನೀವಿದ ಕೇಳಿ ಸರ್ವೇಶನೊಪ್ಪನೀ ನಡತೆಯ ಕಂಡರೆ ಪತೊಗರಿ :ಬೆಲ್ಲವೆ ಬಾ ನಾನು ತೊಗುರಿಬೇಳೆಯು ನನಗುಲ್ಲಾಸದಿಂದೊಂದು ಯೋಚನೆ ತೋರಿತುಎಲ್ಲರು ಒಬ್ಬಟ್ಟು ಒಳ್ಳಿತೆಂದೆಂಬರುಬಲ್ಲವರಾದರೆ ವಿವರಿಸದಿರುವರೆಸಲ್ಲದ ಮಾತನಾಡಲಿಬೇಡ ಸತ್ಯವನಿಲ್ಲಿ ನನ್ನೊಳು ಪೇಳು ಮತ್ತೆ ನಾಲುವರಿರುವಲ್ಲಿ ನ್ಯಾಯವ ತಿದ್ದಿಕೊಂಬ ನಾವಿಬ್ಬರುಇಲ್ಲದ ಬಳಿಕ ಗೋಧಿಯ ದೆಸೆುಂದೇನುಸಲ್ಲದ ತುಪ್ಪವನೇನ ಮಾಡಲಿಬೇಕುಒಳ್ಳೆಯತನ ನಿನ್ನೊಳು ಇರುವುದಿದನೆಲ್ಲವನೆನಗೆ ಪೇಳು ಸಟೆಯ ಪೇಳಬಲ್ಲೆನೆ ನಾ ನಿನ್ನೊಳು ನಿಮ್ಮೊಳು ನಾನೆಬಲ್ಲಿದನಲ್ಲವೆ ಕೇಳು ನನ್ನನೆ ಯೆಲ್ಲಾಕೊಳ್ಳುವರವನಿಯೊಳು ನೀನೂ ಸ್ವಲ್ಪವಲ್ಲವೆ ನಿಜ ನಮ್ಮೊಳು ಕೋಪಿಸಬೇಡಸಲ್ಲದ ವಸ್ತುಗಳು ಗೋಧಿಯು ಎಣ್ಣೆಯಲ್ಲವೆ ನಿತ್ಯದಲ್ಲೂ ತುಪ್ಪವ ಬಿಡುಪೊಳ್ಳುನುಡಿದರೆನ್ನ ಮಾತೆಲ್ಲ ಪಾಳು 1ಬೆಲ್ಲ :ಏನೆಲೆ ತೊಗುರಿಬೇಳೆಯೆ ನನ್ನ ಸ್ವಲ್ಪವೆಂದೇನು ಕಾರಣವನು ಕಂಡು ನನ್ನೊಡನೀಗನೀನುಸುರಿದೆ ಮಾತು ಹೆಚ್ಚಿ ಬರುತಲಿದೆುೀ ನಡೆ ನಿನ್ನಯ ಶ್ರೇಷ್ಠವದೆನಿಟಷ್ಟೂನಾನಿಲ್ಲದಿರಲು ಸೀಯಾಗುವದೆಂತುರೆನೀನು ಸುಮ್ಮನೆ ಹೇಳಿಕೊಂಬೆ ತನ್ನಯ ಸ್ತುತಿತಾನೆ ಮಾಡಿಕೊಂಬ ಮನುಜಗೆ ನರಕವೆಂಬೀನಿಗದಿಯನರಿತರೆ ಪರನಿಂದೆಯನೀನೆಚ್ಚರಂಗೆಟ್ಟು ಮಾಳ್ಪೆಯ ಇನ್ನಭಿಮಾನವನೀಗ ುರುಯೆನ್ನೆಡೆಯೊಳುನೀನಿರಬೇಡ ಸಾರು ಹೆಚ್ಚುಗೆ ನಿನ್ನದೇನದನೆನಗೆ ತೋರು ದುರ್ಜನರು ತಾವೀನುಡಿ ನಿಜವೆಂಬರು ಸತ್ಪುರುಷರುಮಾನಸದಲಿ ಒಪ್ಪರು ನಿನಗೆ ಅಭಿಮಾನ ಮೊದಲು ಇದ್ದರೂ ಹಾರು ಮುಂದುಜಾಣತನವೆಯಾದರೂ ಹೆದರದಿಪ್ಪೆಹೀನಾಯವೆ ಬಂದರೂ ನಾಲುವರೆನ್ನದೀನಡೆಯೆನ್ನುವರು ಎಂಬುದನೀಗನೀನರಿಯದೆ ಬಂದೆುದು ಪಾಪ ಬೇರು 2ಗೋಧಿ :ಹೋಗಲೆ ತೊಗುರಿ ಬೆಲ್ಲಗಳಿರ ನನ್ನನುಕೂಗಿ ಬೈವಿರಿ ಗೋಧಿ ಯೋಗ್ಯದ ವಸ್ತು ತಾನಾಗದು ಎಂದು ಕೊಬ್ಬಿದ ಮಾತನಾಡುತ ನೀಗಿಕೊಂಬಿರೆ ನಿಮ್ಮ ಮಾನವ ಸದರ ನಿಮಗಾಗಿದೆ ಕೊರಗಿಪರೆ ಮಾತಿನ ಪರಿಯೇಗುವುದೆನಿಸದಿರೆ ನಿಮ್ಮನು ತೃಣಕಾಗಿ ನಾ ಕಾಣುವರೆ ಕಾಣೆನು ಮಾನಹೇಗೆ ನಿಮ್ಮೊಳು ಹೋಗೆ ಯೆನಗೆ ಸಮನಾಗಲು ನೀವು ಬಲ್ಲಿರೆ ುೀ ಯಾಳೆಗೆಹೋಗಿ ನೀವು ಕೊಬ್ಬಿದರೆ ಈಶ್ವರ ಕೃಪೆಯಾಗುವದೆಂತೆನ್ನು ಮರೆಯೊಗಲೊಲ್ಲಿರೆ 3ಎಣ್ಣೆ :ಹರಟಿಕೊಂಬಿರೆ ನೀವೆ ನಿಮ್ಮೊಳು ನನ್ನನುಜರೆಯುತಲೆಣ್ಣೆುಂದೇನೆಂದು ನಾನಿಲ್ಲದಿರಲು ನೀವೆಂತೊಂದು ಗೂಡಿ ಬಾಳುವಿರಿದನರಿಯದೆ ಮುಂಗೆಟ್ಟು ನುಡಿದರೇನಾುತೀಪರಿಯಹಂಕಾರ ಲೇಸಲ್ಲ ಹೀನಾಯವುಬರುವದು ಪರರ ನಿಂದಿಸಿ ಜೀವಿಸುವುದುತರವಲ್ಲ ಸದ್ಗತಿಗೆಟ್ಟು ಕೊನೆಗೆ ಬರದಿರದು ನರಕ ಬೆಂಕಿುಂ ಮೂರುವೇಳೆ ನೀಕೊರಗುವೆ ಬೆಲ್ಲವೆ ಕೇಳು ತೊಗುರಿಯೆ ನೀನಿರದೆ ಸಾರಿಯೊಳು ಬೇಯುವೆ ಗೋಧಿಕೊರಗುವೆ ಕಲ್ಲಿನೊಳು ಚಚ್ಚಿಸಿಕೊಂಡುಇರುವದೆ ನಿಮ್ಮವೊಲು ಕಷ್ಟವದೆಂಬದರಿುರೆ ನೀವು ನನ್ನೊಳು ುಂಥಾ ನಡೆಬರುವುದೆ ಬಹು ಕೇಳಾ ಹೀನಾಯವುಬರದಿರದೀ ಬಾಳು ಯಾತಕೆ ಸುಖಕರ ಮಾರ್ಗ ತಾ ನಿಮ್ಮೊಳು ುಲ್ಲವು ುದನರಿಯದೆ ನಿಮ್ಮಳಲು ಬಿಡದು ನನ್ನಮರೆಯೊಕ್ಕು ಬದುಕುವದಿದು ಬಹುಮೇಲೂ 4ತುಪ್ಪ :ಜಗದೊಳು ನೀವೆ ಬಲ್ಲಿದರೆಂದು ನಿಮ್ಮೊಳುನಿಗದಿಯ ಮಾಡಿಕೊಂಬಿರಿ ಗರ್ವ ಹೆಚ್ಚಿತೆಸುಗುಣವಂತರು ನೀವಾದರೀಪರಿಯಲ್ಲಿಬಗುಳಿಕೊಂಬಿರೆ ತುಪ್ಪವಂ ಬಿಡುಯೆನ್ನುತಮಿಗೆ ಸುರತತಿ ಮೊದಲಾಗಿ ನನ್ನಿಂದಲಿಸೊಗಸಾಗಿ ಕೃಪೆವಡೆವರು ನಾನಿಲ್ಲದೆಮಿಗೆ ಶುದ್ಧರಾಗುವಿರೆಂತು ಬರಿದೆ ನಿಮ್ಮನಿಗದಿಯ ಪೇಳಿಸಿಶಾನಿಗೆ ನನ್ನ ನೀವಗಲಲು ರುಚಿಕರವೆಂತು ನಾನೊಪ್ಪೆನುನಿಗಮದ ಮಾತಿದುವೆ ಸಟೆಯ ಮಾಡಿಸೊಗಸಾಗಿ ಬಾಳಿ ನೀವೆ ಅನ್ಯಾಯಗಳಗಣಿತವಾಗಿುವೆ ನನ್ನಯ ನ್ಯಾಯನಿಗದಿಯಾದರೆ ಹೋಗುವೆ ತಪ್ಪಿದರೆ ಈಜಗದೊಳಗ್ನಿಯ ಪೊಗುವೆ ನಿಮಗೆ ಆಣೆಯಗಲಿದರಿಲ್ಲಿಂದವೆ ಪೋಟಾಟವೆಜಗದೊಳುತ್ತಮ ವಸ್ತುವೆ ನಾನೆಂಬರುಬಗೆುರೆನ್ನನು ನೀವೆ ಮೊಂಡರುಯೆಂದುಖಗವಾಹನಗೆ ಪೇಳುವೆ ಚಿಕ್ಕನಾಗನಗರಕೆ ನಡೆುರಿ ನ್ಯಾಯವ ತಿದ್ದುವೆ 5ಒಟ್ಟಾಗಿ :ದೇವ ಭಕ್ತಾವನ ಪಾವನ ಚರಿತ ಸುರಾವಳಿನುತಪಾದಭಾವಜ ಜನಕ ರಮಾವಲ್ಲಭಾನಂತ ಗೋವಿಂದ ಮಾಧವನೀವರಿಯದೆ ಪೋಗಲಾವಗತಿ ನಮಗೀ ವಸುಧೆಯೊಳ್ಮುನಿಭಾವಿತ ಚರಣನೆಸಾವಧಾನದೊಳು ಪರಾಮರಿಸಿುಂತಪ್ಪದಾವಲ್ಲಿುದ್ದಡಲ್ಲಿಗೆ ತಕ್ಕ ಶಿಕ್ಷೆಯನೇ ವಿರಚಿಸಿ ಗುಣವಿದ್ದಲ್ಲಿ ರಕ್ಷಿಪುದಾವ ಪರಿಯಲಾದರು ಜಗನ್ನಾಥನೆುೀವ್ಯವಹಾರವನು ನಿಗದಿಗೈದುನೀವೊಲಿದೆಮ್ಮುವನು ರಕ್ಷಿಸಬೇಕು ದೇವಾದಿದೇವ ನೀನು ಅನಾಥರ ಕಾವಲ್ಲಿ ದಯಾವಂತನುಸುಜನಪತಿ ಭಾವಿತ ಪಾದಪದ್ಮನು ನೀನೆ ಗತಿನಾವರಿದನ್ಯರನು ಬಾಳುವೆವೆಂತುರಾವಣಾರಿಯೆ ನೀನು ಕೈಪಿಡಿ ಗತಿುವರೆದಿಕ್ಕು ನೀನು ಮಾಡಿನ್ನೇನುಭಾವಿಸೆವನ್ಯರನು ನಮ್ಮಿಂದಲಿಸೇವೆಗೊಳುವ ನೀನಿರಲು ಭಜಿಸದೆ ನಾವು 6ಬರಿದೆ ಜಗಳವಾಡಬೇಡವೀಚೆಗೆ ಬನ್ನಿಒರೆಯುವೆ ಬುದ್ಧಿಯ ಕೇಳಲಿಚ್ಛಿಸಿದರೆತರುಣನಾಗಾಖ್ಯಪುರದ ವೆಂಕಟೇಶನುಗುರುವಾಸುದೇವಾವತಾರವ ತಾಳಿಯೆಕರುಣದಿಂ ತಿಮ್ಮದಾಸನ ಬಹುದೋಷವ ಪರಿದಾಳ್ದನೆಂಬ ಬಿರುದಪೊತ್ತು ನಾನೀಗಮೆರೆಯುವೆನೀವೆಲ್ಲ ಬರಿ ಮಾತ ಮಾಡದೆಶಿರದಲಿ ಹೊತ್ತು ನನ್ನಯ ನುಡಿಗೇಳಲುಬರುವುದು ಕೀರ್ತಿ ಮೂಜಗದೊಳಗದರಿಂದನೆರೆುೀಗ ನೀವೆಲ್ಲರೂ ಒಂದಾಗಿಯೆುರಲು ಸೌಖ್ಯವದೆಂಬರು ವಿಂಗಡದಿ ನೀವಿರಲು ಜನರು ಬೈವರು ಕೂಡಲು ನನ್ನಗುರುದಯ ಬಹುದೆಲ್ಲರು ಹಿಗ್ಗುವರು ಮತ್ತರಿತು ಸಾರವ ಕೊಂಬರು ಬಹಳ ಶ್ರೇಷ್ಠರುವದರಿಯದಿದ್ದರೂ ಹೊಣೆಯ ನೀವೆನೆರೆ ನಿಮ್ಮನೀ ಜನರು ಬೈಯದ ಹಾಗೆಉರು ಶಿಕ್ಷೆಯನೆ ಮಾಳ್ಪರು ಯಾರೆಂಬಿರೆಅರಿುರಿ ಗಂಗಪ್ಪ ಹೊಣೆ ಹೋಗಿನ್ನಾದರು7
--------------
ತಿಮ್ಮಪ್ಪದಾಸರು
ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ ಗಳಿಗಿಯೊಳು ದೋರಿಕೊಡುವರು ಅಂತರಂಗವ ಧ್ರುವ ಹೊಟ್ಟಿಗೆ ಮೊಟ್ಟಿಗೆ ಕಟ್ಟು ಹೋಗಬ್ಯಾಡಿರೊ ಹುಟ್ಟಿಬಂದ ಮ್ಯಾಲೆ ಹರಿನಾಮ ಘಟ್ಟಗೊಳ್ಳಿರೊ ಗುಟ್ಟಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ 1 ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ ಕಣ್ಣಗೆಟ್ಟು ಹೋಗಿ ನೀವು ದಣ್ಣನೆ ದಣಿಯಬ್ಯಾಡಿರೊ ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ 2 ಉರ್ವಿಯೊಳು ಬಂದು ನೀವು ಗರ್ವಹಿಡಿಯ ಬ್ಯಾಡಿರೊ ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟ ನೋಡಿರೊ ಅರ್ವಪಥವ ಬಿಟ್ಟು ಮರ್ವಿಗ್ಹೋಗಬ್ಯಾಡಿರೊ ಸರ್ವಸಾರಾಯ ಸುಖ ಹರಿಯ ಭಕ್ತಿ ಮಾಡಿರೊ 3 ಕಾಮ ಕಳವಳಿಗಿನ್ನು ಕುಣಿದು ಕೆಡಬ್ಯಾಡಿರೊ ನೇಮದಿಂದ ಸ್ವಾಮಿ ಶ್ರೀಪಾದ ಬೆರೆದು ಕೂಡಿರೊ ನಾಮರೂಪಕವಗಿ ಬಿದ್ದು ಹಮ್ಮು ಹಿಡಿಯಬ್ಯಾಡಿರೊ ತಾಮಸೆಂಬ ದೈತ್ಯನ ಸುಟ್ಟು ಹೋಮಮಾಡಿರೊ 4 ಭವ ಬಂಧವಾದ ದುಸ್ತರ ಹೋಳಿಯಾಡಬೇಕು ಒಂದೆ ಸೀಳಿ ಮದಮತ್ಸರ ಹೇಳಿಕೊಟ್ಟ ಗುರುವಿನ ಕೊಂಡಾಡಬೇಕು ಎಚ್ಚರ ಬೋಧ ಶ್ಯಾಸ್ತರ 5 ಲೋಕವೆಲ್ಲ ಬಂದು ಹೊನ್ನ ಹೆಣ್ಣು ಮಣ್ಣಿಗಾಯಿತು ಬೇಕಾದ ವಸ್ತು ಬಿಟ್ಟು ಪೋಕುಬುದ್ಧಿಗ್ಹೋಯಿತು ಸುಖ ಸೂರೆಗೊಳ್ಳದೆ ತೇಕಿ ದಣಿದುಹೋಯಿತು ಏಕವಾಗಿ ನೋಡಲು ದೈಥಯ್ಯಗೊಟ್ಟಿತು 6 ಮಹಿಪತಿಯ ಸ್ವಾಮಿಯ ನೆನೆದು ಒಮ್ಮೆ ನೋಡಿರೊ ಇಹಪರಸುಖ ಸೂರ್ಯಾಡಿ ನಲಿದಾಡಿರೊ ಮಹಾಮಹಿಮೆದೋರುತದೆ ಮಯ್ಯ ಮರಿಯಬ್ಯಾಡಿರೊತ್ರಾಹಿತ್ರಾಹಿ ಎಂದು ಮನಗಂಡು ಕುಣಿದಾಡಿರೊ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗಳಿಸಿದೆ ನಾಕಳತಿ ತಿಳಿಯದೆ ನಿನ್ನಳತಿ ಅಳೆದು ಹಾಕಿ ತೊಳಲಿ ಬಳಲಿದೆ ಚಿತ್ತ ಹೊಲತಿ 1 ಏಸು ಜನ್ಮ ತಾಳಿ ಹೆಸಲಿಲ್ಲ ಮೂಳಿ ಘಾಸಿಯಾದೆ ಸೋಶಿಲಿನ್ನು ಆಶಿಯಲಿ ಬಾಳಿ 2 ವಿಷಯದಾಶಿವಳಗ ವಶವನೀಗೊಂಡಲಗ ಪಶುವಿನಂತೆಗಳದಿ ಜನ್ಮವ್ಯಸನದಾಶಿ ಕೆಳಗೆ 3 ಏನ ನೀನಾದರ ಜ್ಞಾನಹೀನನಾದರೆ ಭಾನುಕೋಟಿ ತೇಜನ ನೀ ಶರಣು ಪುಗು ಇನ್ನಾರೆ 4 ಪಿಡಿದು ನಿಜಖೂನ ಪಡೆದುಕೋ ಸುಜ್ಞಾನ ಬಿಡದೆ ಸಹಲುತ್ಹಾನೆ ಮಹಿಪತಿಯ ಸ್ವಾಮಿ ಪೂರ್ಣ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗಾಂಜ ಸೇದುವ ಬನ್ನಿ, ತಿಳಿವಿನ ಗಾಂಜ ಸೇದುವ ಬನ್ನಿಗಾಂಜ ಸೇದಿದರೆ ನಿಮಗೆ ಭವವಿಲ್ಲ ವೆನ್ನಿ ಪ ಅವಗುಣವೆಂಬ ಭೂಮಿ ಶೋಧಿಸಿ ಅಗೆತ ಮಾಡಿದ ಗಾಂಜಸವನಿಸಿದ ಖೂರಾಕು ಹಾಕಿದ ಸತ್ವವಾದ ಗಾಂಜ1 ಸಾಧನೆ ಎಂಬ ನೀರು ಕಟ್ಟಿದ ಸಡಕು ಆದ ಗಾಂಜಭೇದವೆಂಬ ಕಳೆಯ ಕೆತ್ತಿದ ಬೋಧವೆಂಬ ಗಾಂಜ 2 ಭಜನೆ ಭಾವದಿಂದ ಬೆಳೆದ ಬಡಕು ಆದ ಗಾಂಜಕುಜನವೆಂಬ ಎಲೆಗಳ ಚಿವುಟಿದ ಕಡಕು ಆದ ಗಾಂಜ 3 ನಾನು ಎಂಬ ಹೂವು ಉದುರಿದ ನೊಣ ಹಾರದ ಗಾಂಜಜ್ಞಾನವೆಂಬ ಗೊಂಡೆಗಳಳಿದ ಘನ ತಾನಾದ ಗಾಂಜ 4 ಏನೇನ ಅರಿವು ಎಲ್ಲ ಅಡಗಿದ ಏಕವಾದ ಗಾಂಜತಾನೆ ಚಿದಾನಂದ ಸದ್ಗುರು ವಾದ ತಾನೆ ತಾನಾದ ಗಾಂಜ5
--------------
ಚಿದಾನಂದ ಅವಧೂತರು
ಗಾಡಿ ಪಾಳ್ಯ ಹನುಮಾ | ತವ ಪದಬೇಡಿ ಭಜಿಪೆ ಭೀಮಾ ಪ ಈಡು ರಹಿತ ತವ | ಮಹಿಮೆಗಳನು ಕೊಂ-ಡಾಡ ಬಲ್ಲನೇ | ಪಾಮರನು ನಾಅ.ಪ. ಸತಿ ವತ್ಸರ ಪೂರ್ವದಿಹಿತಧಾಗಮನವ | ಸೂಚಿಸಿ ಸ್ವಪ್ನದಿ 1 ಸತಿ ತೈಜಸ ಪೇಳಿದನಿಜ ಭಾವವ ತಾ | ಸುಜನರಿಗ್ವೊರೆದು2 ಮಣಿ ಸಹ ವಿರಲವನೂ ||ಘನ ಸಂತಾನವು ಇರದಿರೆ ದಂಪತಿಮನವನು ಹರಿಪದ | ವನಜದಲಿರಿಸೀ 3 ಒಡಗೂಡಿ ಸೇವಕರಾ | ತರಿದನು | ಗಿಡ ಗಂಟಿಯ ವಿವರಾ ||ಅಡವಿಯೊಳೊಡ | ಮೂಡಿದ ಬರಿ ಶಿಲೆಕಂಡು ಮನದಿ ಬಯ | ಲಾಶೆಯೊಳಿರಲೂ 4 ಮಲಗಿರೆ ಮನನೊಂದೂ | ಸ್ವಪ್ನದಿ | ಬಲ ಹನುಮಂತನು ಬಂದೂ ||ಚೆಲುವ ತನ್ನಯ ರೂಪ | ತೋರಿಸಿ ಪೇಳಲುಒಲಿಸಿ ಗಂಧದಲಿ | ಲಿಖಿಸಿ ಪೂಜಿಸಿದ 5 ಮೊಗವನು ದಕ್ಷಿಣಕೆ | ತಿರುಗಿಸಿ | ನಗವನು ಮೇಲಕ್ಕೇ ||ನೆಗಹಿ ತನ್ನ ಎಡ | ಹಸ್ತದೊಳಗೆ ಬಲಭಾಗ ಕೈಯ್ಯ ತಾ | ನಿರಿಸಿಹ ಕಟಿಯಲಿ 6 ಚಾರು ಮತಿಯಲಿ 7 ಸ್ಥಿರ ಚರ ಸುವ್ಯಾಪ್ತಾ | ಮರುತ | ಶರಣ ಜನರ ಆಪ್ತಾ ||ಸುದತರು ಭಕುತರ | ಹರಕೆ ಪೂರೈಸುವೆನಿರುತ ಹರಿಯ ಪದ | ರತಿಯನೆ ಕೊಡುವುದು 8 ಕೋವಿದರರಸನ್ನಾ | ಗುರು | ಗೋವಿಂದ ವಿಠಲನ್ನಾ ||ಓವಿ ತೋರೊ ಮಮ | ಹೃದ್ವನಜದೊಳಗೆ ಪಾವಮಾನಿಯೆ ಮ | ತ್ಪ್ರಾರ್ಥನೆ ಸಲಿಸೀ 9
--------------
ಗುರುಗೋವಿಂದವಿಠಲರು
ಗಾಡಿಕಾರ ಶ್ರೀಕೃಷ್ಣ ರನ್ನ ಬಿಡದಿರೊ ಎನ್ನ ಪ. ಬಡವರ ರಕ್ಷಿಪನ್ನ ಅಡಿಗೆರಗುವೆ ನಿನ್ನ ಅ. ಪ. ಕಡಲ ಮಗಳ ಗಂಡ ಒಡಲೊಳು ತೋರ್ದಜಾಂಡಪಿಡಿದ ದಂಡ ದೋರ್ದಂಡ ಬೇಡಿದಿಷ್ಟ ದಾನಶೌಂಡ 1 ಶರಧಿ ಮಧ್ಯದಿ ಪುರವÀ ನಿರ್ಮಿಸಿದ ಧೀರಈರೇಳು ಭುವನೋದ್ಧಾರ ನೀರದಶ್ಯಾಮಲಾಕಾರ 2 ವೃಂದಾರಕೇಂದ್ರ ಗೋವಿಂದ 3 ಸಂಜೀವ 4 ಮಧ್ವಮುನಿಪನೊಡೆಯ ಶುದ್ಧಯತಿಗಣಪ್ರಿಯಶುದ್ಧವಾದಾಗಮಜ್ಞೇಯ ಮುದ್ದುಹಯವದನರಾಯ 5
--------------
ವಾದಿರಾಜ
ಗಾಡಿಪಂಥ ಮಾಡಬೇಡೆಲೈ ಪ. ಮಾರುತಿಸೇವ್ಯನೆ ಧೀರ ದಾತಾರನೆ ಕೋರಿ ಭಜಿಪೆ ಬೇಗ ಬಾರೈ ಸುಂದರ 1 ನಾರಿಯರ್ನಿನ್ನನು ಸಾರಿಕರೆವರೈ ಧಾರಣಿಜಾತೇಸಹ ಸಾರಿ ಬಾಬಾ ಬೇಗ 2 ಭವಭಯದೂರನೆ ಭಕ್ತಮಂದಾರನೆ ಭಾವಜ ಜನಕನೆ ದೇವಾದಿದೇವನೆ3 ಶೇಷಗಿರೀಶನೆ ದಾಸಜನಾಶ್ರಯನೆ ವಾಸವವಂದಿತನೆ ಶ್ರೀ ವಾಸುದೇವನೆ 4
--------------
ನಂಜನಗೂಡು ತಿರುಮಲಾಂಬಾ