ಒಟ್ಟು 5968 ಕಡೆಗಳಲ್ಲಿ , 126 ದಾಸರು , 3550 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯೆ ಮುಟ್ಟದಿರೆನ್ನನು ನಿನ್ನಯ ಮೂರುಕಾಯಾಭಿಮಾನವೆನಿಸುವ ಮೈಲಿಗೆಯನು ಹೇಯವಿದೆಂದು ಬಿಟ್ಟರಿಕೆಯ ಮಡಿಯುಟ್ಟೆಬಾಯ ಹೊೈುಸುವೆನಿನ್ನು ತಪ್ಪಿದೆಯಾದರೆ ಪಧೀರತನದಿ ಸದಸದ್ವಿವೇಕವ ತೊಟ್ಟು | ಸಾರಿ ಧನಾದಿ ಭೋಗಗಳ ಬಿಟ್ಟುಸಾರವಲ್ಲೆಂದು ಸ್ವರ್ಗಾದಿ ಸುಖಂಗಳ | ಮೀರಿದ ವಿರತನು ನಾನೆಂದೆನಲ್ಲದೆ ನಿನ್ನನಾರಿಯಬೇಕೆಂದೆನೆ ವಿಷಯವಿ | ಕಾರದೊಳ್ಬಳಿಸಂದೆನೆ ಧ್ಯಾನ ಸಾಧನಕಾರವೆ ಸಾಕೆಂದೆನೆ ಕಲ್ಪಿತವಾದ ಘೋರ ಸಂಸಾರವಸಾರವೆಂದೆನಲ್ಲದೆ 1ಶಮೆುಂದ ಚಿತ್ತ ವಿಕ್ಷೇಪವ ತೊಲಯ | ದಯೆುಂದಿಂದ್ರಿಯಗಳ ತಗ್ಗಿಸಿಕ್ರಮದಿಂ ತಿತಿಕ್ಷೆುಂ ಸಹನವ ಮಾಡಿ | ಯಮಿತೋಪರಮದಲಗ್ಗಳನೆಂದೆನಲ್ಲದೆಸಮತೆುಲ್ಲದೆ ಬಂದೆನೆ ತನು ಭೋಗ | ಮಮತೆಯೊಳಗೆ ನಿಂದೆನೆ ವಿಘ್ನವಿಕ್ರಮಕೊಳಗಾದೆನೆಂದೆನೆ ವೇದಾಂತೋಪಕ್ರಮವೆನ್ನೊಳಾುತೆಂದು ವಿವರಿಸಿದೆನಲ್ಲದೆ 2ದೀಪಿತ ಮೋಕ್ಷೇಚ್ಛೆುಂದ ತೋರುವ ಸಕಲ | ತಾಪತ್ರಯಗಳ ತೊಲಗಿಸಿಈಪರಿ ವೇದಾಂತ ಶ್ರವಣ ಮನನದ ಪ್ರ | ತಾಪದಿಂದರಿಗಳಿಲ್ಲೆನಗೆಂದೆನಲ್ಲದೆನೀ ಪುಸಿಯಲ್ಲೆಂದೆನೆ ಕಲ್ಪಿತ ನಾಮ | ರೂಪವ ನಿಜವೆಂದೆನೆ ತಾದೃಶ್ಯ ವಿಲೋಪಕನಲ್ಲೆಂದೆನೆ ಕೇಳು ಪ್ರತಿಜ್ಞೆಯ | ಗೋಪಾಲಾರ್ಯನೆ ನಾನೆಂದೆನಲ್ಲದೆ3
--------------
ಗೋಪಾಲಾರ್ಯರು
ಮಾರ ಪ. ಮಧುರೆಗೆ ಪೋಗಿ ನಮ್ಮ ಮರೆದ ಅಲ್ಲಿಇದಿರಾದ ಖಳರನು ಜರಿದಕದನಕರ್ಕಶನೆಂಬ ಬಿರುದ ತೋರಿ ತನ್ನಪದಕೆರಗಿದವರ ಪೊರೆದ 1 ಕಂದರ್ಪಕೋಟಿಯ ಗೆಲುವ ಇವಸೌಂದರ್ಯದಿಂದತಿ ಚೆಲುವನಂದನ ಕಂದ ಭಕ್ತರಿಗೊಲಿವ ಇವನಂದನ ಮುನಿವೃಂದಕೆ ಸಲುವ 2 ಕೊಡುವನು ಬೇಡಿದ ಫಲವ ಇವಬಿಡ ಸಖಿ ಖಳರೊಳು ಛಲವಒಡಂಬಡಿಸಿ ರಿಪುವ ಗೆಲುವನೆಂದುಮೃಡ ಬಲ್ಲನಿವನ ಕೌಶಲವ3 ಇಂಥ ಭವದ ದುರಂತ ಬಲುಸಂತಾಪವನುಂಬ ಭ್ರಾಂತಅಂಥಾ ಹರಿಯೊಳೆನ ಪಂಥಸಲ್ಲಸಂತತ ನಿನಗೆ ನಿಶ್ಚಿಂತ 4 ಇನ್ನಾದರೆ ಸುಪ್ರಸನ್ನ ನಮ್ಮಚೆನ್ನಿಗ ಹಯವದನನ್ನವರ್ಣಿಸಿ ವರ್ಣಿಸಿ ನಿನ್ನವನ ತಾರೆಹೆಣ್ಣೆತೋರೆ ಬೇಗದಿ ಅವನ 5
--------------
ವಾದಿರಾಜ
ಮಾರಕೋಟಿ ಸುಂದರಾಂಗ ಪ ಸರುವಾಂತರಯಾಮಿಯೆಂದು ಶೃತಿಯು ನಿನ್ನ ಪೊಗಳವೆಅ.ಪ ಬಲ್ಲಿದನೀ ಒಳಗೆ ಇದ್ದು ಬರಿದೆ ಬನ್ನಬಡಿಸುವರೆ 1 ಶರಣಾಗತ ಪ್ರಾಣನೆಂಬ ಬಿರುದು ಪೋಗದೆ ನಿನಗೆ 2 ಮ್ಮಪ್ಪಕಾಯೊ ಶ್ರೀ ಗುರುರಾಮ ವಿಠಲರಾಯ ಸ್ವಾಮಿ 3
--------------
ಗುರುರಾಮವಿಠಲ
ಮಾರಮಣಾ ಹರಿ ಗೋವಿಂದಾ ಬಾರೋ ಕೊಂಡಾಡಿ ಪಡೆವೆನಾನಂದ ಪ ನಾರದಾದಿ ಮುನಿ ಬೃಂದಾನಂದ ಬಾರೋ ಭಕ್ತಕುಮುದೇಂದು ಮುಕುಂದಾ ಅ.ಪ ನಾನಾ ಜನುಮಗಳೊಳಗುದಿಸಿದೆವಯ್ಯ ಏನೆಂದು ಪೇಳಲಿ ನಿನಗೆ ಜೀಯ ನೀನೆನಗಿತ್ತಾ ತನುಗಳನಳೆಯಲು ಏನಪೇಳಲೈ ಭೂಮಿಗೆ ನಾಲ್ಮಡಿ ಸಾನುರಾಗದಿ ಜನನಿಯಿತ್ತಾ ಘೃತ ಪಾನಕ್ಷೀರ ವಾರಿಧಿಗಿಮ್ಮಡಿಯೋಳ್ ಬಾ 1 ನೋಡಿ | ಮನಕರಗದೆ ರುಕುಮಿಣಿ ರಮಣಾ ಮೃಡ ವಂದಿತ ಸರಸಿಜ ಚರಣಾ ಪಾಡೀ ಕೊಂಡಾಡುತಿರ ದೇಕೆ ನಿಷ್ಕರುಣಾ ಬೇಡಿದರ್ಗೆ ಕೈನೀಡುತೆ ದಾನವ ಮಾಡಲಿಲ್ಲವದರಿಂದ ದರಿದ್ರತೆ ಪೀಡಿಸವೈ ನಾ [ಮಾಡಿದ] ಪಾತಕವಾರ್ಜಿಸಿ ಜನುಮಂಗಳ ಪಡೆದೆನೊ ಬಾ 2 ಸುನಾಮ ನಮಿಸುವೆ ಸುಗುಣ ವಿರಾಮ ಸನ್ನುತ ವರಮಾಧವ ಕೋಮಲಾಂಗ ಸೋಮಶೇಖರಾಧಿಪ ಸುಮಚರಣವ ನೋಳ್ಪೆನೋ ಬಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾರುತಿ ನಿನ್ನಾ ನಿರುತದಿ ಭಜಿಪೆ ತ್ವರಿತದಿ ಹÀರಿ ಸರ್ವೋತ್ತಮನೆಂಬುವ ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು ಪರಿಪಾಲಿಸು ಎಂದು ಶಿರಸದಿ ನಮಿಪೆ ಆರಿಸಿ ನೋಡಲು ಆರಾರು ಇಲ್ಲವೊ ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ ಹರಿ ತಾ ಕರುಣಿಪನೆಂದು ಅರಿತು ನಿನ್ನಯ ದಿವ್ಯ ಚರಣ ಸೇರಿದೆನಯ್ಯಾ ಸರಿಬಂದದ್ದು ಮಾಡೋ ಹರಿ ಕುಲಾವರಿಯಾನೆ ಪರಿಪರಿ ಜನರನ್ನು ಪಾಲಿಸಿ ಎನ್ನನು ದೂರದಿ ಇಟ್ಟರೆ ದೊರೆತನವೇನಯ್ಯಾ ಸಾರುವೆ ಸಾರುವೆ ಸರಸಿಜನಾಭನ ಸುತನೆ ಆರುಮೂರೆರಡೊಂದು ಸಾವಿರಾ ಮೂರೆರಡು ಶತಶ್ವಾಸ ಜಪಗಳನು ಮೂರುಜೀವರಲ್ಲಿ ನೀರಜಜಾಕಲ್ಪ ಪರಿಯಂತರ ಮಾಡಿ ಅವರವರ ಗತಿಯಾ ಮರಿಯದೆ ನೀಡುವಿ ಗಿರಿಶಾನುತಪಾದ ಗುರುಜಗನ್ನಾಥ ವಿಠಲನ್ನ ಅರಿವಂತೆ ಮಾಡೋ ಧೀರಾ ಕರುಣಿಯೇ
--------------
ಗುರುಜಗನ್ನಾಥದಾಸರು
ಮಾರುತೀ ಕೊಡು ಭಕುತಿ ನುಡಿಸು ಕೀರ್ತಿ ಪ ತೋರೊ ನಿನ್ನೊಳು ಇಹ ನಿರ್ಮಲ ಮೂರುತಿಯಅ.ಪ ಶ್ರವಣಮಾಡಲು ಭಕುತಿ ಆವಕಾಲಕು ಇತ್ತು ತವಪದದಾಸರ ದಾಸ್ಯ ಕೊಡಿಸೋ ದೇವ 1 ಕೀರ್ತನದೊಳು ಹರಿಕೀರ್ತಿ ಕೊಂಡಾಡೆ ಸಂ ಕೀರ್ತನ ಭಕುತಿಗೆ ಕರ್ತದಾತ ನೀನೆ2 ಸ್ಮರಣೆಯು ಹರಿಯಲ್ಲಿ ನಿರುತವು ನಿನ್ನಲ್ಲಿ ಕರುಣಿಸಿ ಪೊರೆಯೊ ಗುರುವರ ಸುಂದರ 3 ಪಾದ ಸೇವೆಯ ಕೊಡು ಸಾದರದಿಂದಲಿ ಶ್ರೀಧರನಾ ಕೃಪಾಪಾತ್ರನೆಂದೆನಿಸಯ್ಯ 4 ಅಚ್ಯುತನಿಗೆ ನೀನಚ್ಚುಮೆಚ್ಚಾಗಿಹೆ ನಿಚ್ಚದಿ ಹರಿಪಾದರ್ಚನೆ ಮಾಡಿಸಯ್ಯ 5 ವಂದನಾಭಕುತಿ ಎನ್ನಿಂದ ನೀ ಮಾಡಿಸಿ ನಂದನಂದನಗಾನಂದಪಡಿಸೊ ದೇವ 6 ದಾಸಭಕುತಿ ಭಾಗ್ಯ ಆಶಿಸುವೆನು ನಿನ್ನ ವಾಸುದೇವನ ನಿಜದಾಸನೆ ಸರ್ವದಾ 7 ಸಖ್ಯಭಕುತಿ ಕೊಡೋ ಮುಖ್ಯಪ್ರಾಣೇಶನೆ ಮುಖ್ಯಕಾರಣ ಹರಿಯ ಮುಖ್ಯ ಪ್ರೇಮಪಾತ್ರ 8 ಆತ್ಮನಿವೇದನ ಭಕುತಿಯನ್ನು ಪರ ಮಾತ್ಮನಲ್ಲಿತ್ತು ನಿರ್ಮಲಾತ್ಮನೆಂದೆನಿಸೊ 9 ನವವಿಧ ಭಕುತಿಯ ಕೊಟ್ಟು ಸಲಹೋ ದೇವ ಅವಕಾಲಕು ಪವಮಾನ ನೀನೆ ಗತಿ 10 ಸಂಕಟ ಹರಿಪ ಶ್ರೀ ವೇಂಕಟೇಶನ ದೂತ ಭಂಟನೆಂದೆನಿಸೆನ್ನ ಸಂಕಟ ಹರಿಸಯ್ಯ11
--------------
ಉರಗಾದ್ರಿವಾಸವಿಠಲದಾಸರು
ಮಾರುತೀ ನಮ್ಮಗುರು ಮೂರುತೀ ಪ ಮಾರುತಿ ಕರುಣಿಸು ಜ್ಞಾನಾ ಎನ್ನ ಸೇರಿದ ಸತತ ಅಜ್ಞಾನಾ ಆಹ ದೂರ ಓಡಿಸಿ ಹರಿ ಆರಾಧನೆ ಇತ್ತು ಪಥ ಸರ್ವಾಧಾರ ಉದಾರನೆ ಅ.ಪ. ದ್ವಿತೀಯ ಯುಗದಲ್ಲವತರಿಸಿ ಸೀತಾ ಅತಿ ವೇಗದಿಂದ ಉತ್ತರಿಸಿ ರವಿ ಸುತಗೊಲಿದವನುದ್ಧರಿಸಿ ಆಹಾ ಕ್ಷಿತಿಜದೇವಿಯಳನು ಸ್ತುತಿಸಿ ಮುದ್ರಿಕೆಯಿತ್ತು ದಿವಿಜರ ಸದೆದ ಭಾರತಿಯ ರಮಣನೆ 1 ಕುರುಕುಲದಲ್ಲಿ ಉದ್ಭವಿಸಿ ಬಲು ಗರಳ ಪದಾರ್ಥವ ಸಲಿಸಿ ಚೆಲ್ವ ತರಣಿ ರೂಪವನೆ ಸಿಂಗರಿಸಿ ನೀಚ ತರ ಕೀಚಕನ ಸಂಹರಿಸಿ ಆಹ ಜರೆಯ ಸುತನ ಸೀಳಿ ಧರಣಿಪಾಲಕರನ್ನು ಸೆರೆಯ ಬಿಡಿಸಿ ಕಾಯ್ದ ಪರಮ ಸಮರ್ಥನೆ 2 ಭೂತಳದೊಳಗೆ ಯತಿಯ ರೂಪ ನೀ ತಾಳಿದೆಯೋ ಶುಭಕಾಯ ಮಾಯಿ ವ್ರಾತ ಗೆಲಿದೆ ಮಧ್ವರಾಯಾ ಕಾಯ ಜಾತ ಜನಕಗತಿ ಪ್ರೀಯಾ ಆಹಾ ಭೂತನಾಥನೆ ಪರಮಾತುಮನೆಂಬ ಪಾತಕರರಿ ಜಗನ್ನಾಥವಿಠಲನ ದೂತ 3
--------------
ಜಗನ್ನಾಥದಾಸರು
ಮಾರ್ಗದರ್ಶಕೆ ದೇವಿ ಮಾರ್ಗ ತೋರಮ್ಮ |ಸರ್ವ ಪೂರ್ವದಿ ಕವ್ಯ ಬಾಲನೆಂಬನ ಮಗಳೇ ಪ ಹರಿದೀಕ್ಷೆ ಹರಿತತ್ವ ನಿರ್ಣಯಾದಿಗಳಿರುವನರರು ಕಲಿಯುಗದಲ್ಲಿ ದುರ್ಲಭರು ಎಂದು |ಪರಿಪರಿಯ ಚಿತ್ರಿಸುತ ಸದ್ಬೋಧ ಮಾಡಿರುವೆಹರಿ ಪದಾಬ್ಜದಿ ಭಕುತಿ ಎಷ್ಟಿಹುದೊ ನಿನ್ನಲ್ಲಿ 1 ಶೇಷಾಚಲಕೆ ಬಂದು ಆ ಸುತೀರ್ಥವು ಕಪಿಲಲೇಸಾಗಿ ಮಜ್ಜನವಗೈದು ತಪವಾ |ಸಾಸಿರೊರ್ಷವು ದಿವ್ಯ ಏಕ ಚಿತ್ತದಿ ಗೈದುಭಾಸುರ ಸ್ತೋತ್ರದಿ ಹರಿಯ ತೋಷಿಸಿದೇ 2 ತಂದೆ ತಾಯಿಯು ನೀನು ಬಂಧು ಬಳಗವು ನೀನುಎಂದೆಂದಿU5ಭ್ರಾತ ವಲ್ಲಭನು ನೀನೇ |ಇಂದಿರೇಶನ ಹೊರತು ಮಂದಿ ಬೇರಿಲ್ಲೆನಗೆಎಂದು ನೀತುತಿಸಿ ಹರಿ ಸಂದರ್ಶನವ ಪಡೆದೇ 3 ದ್ವಾಪರದಲಾ ಕವ್ಯ 5À್ನಜಿತು ನೃಪನಾಗೆರೂಪಲಾವಣ್ಯಾತಿಶಯಗಳಿ5 |ಭೂಪ ಕುವರಿಯು ಆಗಿ ನೀಲಾಖ್ಯೆ ಎನಿಸುತ್ತಶ್ರೀ ಪತಿಯ ಕೈ ಪಿಡಿಯೆ ಮನವ ನೀ ಮಾಡ್ಡೇ 4 ದೈತ್ಯ ಸಪ್ತಕರೇವೆ ಗೂಳಿಗಳು ತಾವಾಗಿಸತ್ಯ ಹರಿ ದ್ವೇಷವನೆ ಸಾಧಿಸುವೆವೆಂದೂನಿತ್ಯ ಪುಷ್ಟಾಂಗದಲಿ ಬೆಳೆಯುತ್ತ ನೃಪನಲ್ಲಿಕೃತ್ಯ ಸ್ವಯಂವರ ಕೇಳಿ ಹರ್ಷಿತರು ಆಗೀ 5 ವಿಪರೀತ ಮತಿಯುಳ್ಳ ಅಪರಿಮಿತ ಬಲತೋರ್ವಸಪುತ ಗೂಳಿಗಳನ್ನೆ ಆರು ಬಂಧಿಪರೋ |ನೃಪನೆಂದ ಸುತೆ ನೀಲೆ ಕನ್ಯೆ ಕೊಡುವೆನು ಅವಗೆನೃಪ ನಿಂತು ಪಣತೊಟ್ಟ ಕೌತುಕವ ಕೇಳೀ 6 ಆರು ಬಂದವರೆಲ್ಲ ಹೋರಿಗಳ ಪಿಡಿಯಲ್ಕೆವೀರ್ಯ ಸಾಲದೆ ಮರಳಿ ಹೋಗುತಿರಲೂ |ಮಾರ ಪಿತ ಶಿರಿ ಕೃಷ್ಣ ಹೋರಿ ನಾಸಿಕಗಳಿಗೆದಾರಗಳ ಬಿಗಿಯುತ್ತೆ ಬಂಧವನ ಗೈದಾ 7 ದೇವಿ ಸುಂದರಿ ನೀಲೆ ದಿವ್ಯ ಹಾರವ ಪಿಡಿದು ದೇವ ದೇವೇಶ ಶಿರಿ ಕೃಷ್ಣ ಕಂಠದಲೀಹಾವ ಭಾವದಿ ಬಂದು ಅರ್ಪಿಸಲು ತಕ್ಷಣದಿದೇವ ವಾದ್ಯವು ಮೊರೆಯೆ ಪೂವ ಮಳೆ ಬಿತ್ತು8 ಕೃಷ್ಣ ಮಡದಿಯರಾರು ಮಂದಿಯೊಳು ನೀಲಾಖ್ಯೆಲಗ್ನದುತ್ಸವ ಕೇಳ್ದ ಭಕುತ ಜನರಾ |ಭಗ್ನ ಗೈಸುತ ಪಾಪ ಮಗ್ನವಾಹುದು ಮನವುಕೃಷ್ಣ ಗುರು ಗೋವಿಂದ ವಿಠಲ ಪದದಲ್ಲೀ 9
--------------
ಗುರುಗೋವಿಂದವಿಠಲರು
ಮಾಲೆ ಧರಿಸಿಕೊಂಡೆ ಮಾಧವನೆಂಬ ಮಣಿ ಮಾಲೆ ಧರಿಸಿಕೊಂಡೆ ಪ ಮಾಲೆ ಧರಿಸಿಕೊಂಡೆ ನೀಲಶಾಮನದಿವ್ಯ ಲೀಲೆ ಮೂಲೋಕಕ್ಕೆ ಮೇಲುಮೇಲುಯೆಂಬ ಅ,ಪ ಭವದೂರ ಪಾದವಂದನೆಂಬ ಮುಕುಟ ಧರಿಸಿಕೊಂಡೆ ಮಾದಮರ್ದನನಂಘ್ರಿಸ್ಮರಣೆಂಬ ಕರ್ಣಕುಂಡಲಿಟ್ಟುಕೊಂಡೆ ಭುವನತ್ರಯದ ಮೇಲೆ ಜವನ ನಿರ್ಭಯಕೇಶವನ ದಯವು ಎಂಬ ಭವದೊಳಗೆ ಹೊಕ್ಕು 1 ಜಡಜನಾಭನಚರಣ ದೃಢವೆಂಬ ಮಡಿಯನುಟ್ಟುಕೊಂಡೆ ಕಡಲಶಯನನಡಿಯ ಭಕ್ತೆಂಬ ಕವಚ ತೊಟ್ಟುಕೊಂಡೆ ಪೊಡವಿಗಧಿಕ ಓರ್ವ ಒಡೆಯ ಹರಿ ಅಹುದೆಂಬ ದೃಢನಿಶ್ಚಯದ ಮೇಲ್ಮಾಡಿನೊಳಗೆ ಕೂತು 2 ಅಂಗಜಪಿತನೆಂಬ ಬಂಗಾರ ಕಂಕಣಿಟ್ಟುಕೊಂಡೆ ರಂಗ ಕೃಷ್ಣನೆಂಬ ರತ್ನದ ಉಂಗುರಿಟ್ಟುಕೊಂಡೆ ಮಂಗಲಮಯ ನೀಲಾಂಗ ಶ್ರೀರಾಮನಾಮ ಚಂದ್ರಹಾರ ಹಾಕಿಕೊಂಡು ಶೃಂಗಾರನಾಗಿ ನಿಂತೆ 3
--------------
ರಾಮದಾಸರು
ಮಾವಿನಕೆರೆ 3 ನಮ್ಮೂರ ದ್ಯಾವರೇ ಬೊಮ್ಮನಪ್ಪನು ಎಂದು ಹೊಯ್ಸಿರೋ ಡಂಗುರವನು ಪ ನಿಮ್ಮ ನೆಂಟರಿಗೆಲ್ಲ ನಿಮ್ಮ ಮಕ್ಕಳಿಗೆಲ್ಲಾ ರಂಗಪ್ಪನವನೆಂದು ಸಾರಿಸಾರಿ ಅ.ಪ ಭೋರಪ್ಪನೆಂದರೂ ತಿಮ್ಮಪ್ಪನೆಂದರೂ ಈರಪ್ಪನೆಂದರೂ ಒಬ್ಬನಣ್ಣ ಸಾರಿ ಡಂಗುರವನು ಹೊಯ್ಸಿರಣ್ಣ 1 ಕುರಿಕೋಳಿ ಕೋಣಗಳ ಶಿರವ ತರಿಯಲು ಬೇಡಿ ನರರಂತೆ ಜೀವಿಗಳು ಅವುಗಳಣ್ಣ ಬರಿಯ ಭಕ್ತಿಯೇ ಸಾಕು ಗುರುಡವಾಹನನವನು ಪರಮಾತ್ಮನವನೆಮ್ಮ ಕಾಯ್ವನಣ್ಣ 2 ರಂಗ ನರಶಿಂಗನು ಗಂಗೆಯನು ಹೆತ್ತನೂ ಗಂಗೆಯನು ಹೊತ್ತವನೂ ಒಬ್ಬನಣ್ಣ ಶಿಂಗರದ ಗೋಪಾಲ ಮಾಂಗಿರಿಯ ರಂಗನೂ ಒಬ್ಬನೇ ತಾನೆಂದು ತಿಳಿಯಿರಣ್ಣ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾವಿನಕೆರೆ 4 ನೀನಿಲ್ಲದೆನಗಾರೋ ಮಾಂಗಿರಿಯ ರಂಗ ಪ ಮಾನಾಪಮಾನಕ್ಕೆ ಹೊಣೆಗಾರ ರಂಗಾ ಅ.ಪ ಗಿರಿಯೊಳಗೆ ವಾಸಿಸುವೆ ನರರ ಗೋಜೆನಗೇಕೆ ನರರ ನೇತ್ರಂಗಳಿಗೆ ಹರನಂತೆ ಕಾಂಬೇ ಧರೆಯೊಳಗೆ ವಾಸಿಸುವರಾರ ಹಂಗೆನಗಿಲ್ಲ ಕೊರತೆಯೇ ಎನಗಿಲ್ಲವೆಂದರಿಯಬೇಡಾ 1 ಗಿಯಾದರೇನಯ್ಯ ಸುರಲೋಕಕದು ಪೂಜ್ಯ ಹರನಾದಡೇನಯ್ಯ ಹರಗೆ ಪಿತನೀನು ನರರ ಹಂಗೇಕಿಲ್ಲ ಗಿರಿಯನೇರುವ ಭಕ್ತ [ಜ] ನರಅಂಜಿಟ್ಟಾ ಹರಕೆಗಳು ಸಾಲವೇ ರಂಗ 2 ಶಾಮಜೋಯಿಸ ನಿನ್ನ ಸೋಮಧರನೆಂಬರಿಗೆ ವಿಭೂತಿ ಅಕ್ಷತೆಯ ನೀಡುವಾ ಸೋಮಸುಂದರ ನಮ್ಮ ಮಾಂಗಿರಿಯ ರಂಗಯ್ಯ ಸ್ತೋಮ ಜನಗಳಿಗದು ತಿರುಮಣಿಯೂ ಜೀಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾವಿನಕೆರೆ 6 ಮಾಧವನಿವನೋ ಉಮಾಧವನಿವನೋ ಮಧುಸೂದನನೋ ಗಂಗಾಧರನೋ ಪ ವೇದವನುಲಿದನೋ ನಾದಕೆ ಒಲಿದನೋ ಮೇದಿನಿಗೈದಿ ಮಾಂಗಿರಿಯ ಸೇರಿದನು ಅ.ಪ ಹಿರಿಯ ಕಲ್ಲ ಗುಡಾರದೊಳಿರುವ ಒರಳಲಿ ನಲಿವ ಹರನವೊಲೆಸೆವ ಕರಗಳಿಂದೆಳೆದರೂ ಬಾರನೆಂದೆನುವ ಸ್ಮರಿಸುವ ಮಾನವನೆದುರಲಿ ನಿಲುವ 1 ಎರೆದ ಹಾಲಾದರೂ ಸುರಿದ ನೀರಾದರೂ ದೊರಕದು ಕರಕೆ ತೊಟ್ಟೊಂದಾದರೂ ಹರಕೆ ಹೊತ್ತವರು ನೆರೆನಮಿಸುವರು ಹರುಷದಿ ಕುಣಿದು ಕೊಂಡಾಡುತಿಹರು 2 ಸಾವಿರ ನಾಮನು ದೇವನೀನೊಬ್ಬನು ಭಾವದೊಳಿರುವನು ಕಾವವನು ನೋವ ಬಿಡಿಸುವನು ಪಾವನಚರಣನು ಭಾವುಕಗೊಲಿವನು ಗಿರಿಯ ಮೇಲಿಹನು 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾವಿನುತ ಹರಿ ವಿಠಲ ಸಲಹ ಬೇಕಿವನ ಪ ನೀ ವೊಲಿಯದಿರಲ್ಯಾರುಗತಿ | ಜೀವಿಗಳಿಗಿರುತಿಹರೊ ದೇವ ಅ.ಪ. ದುರುಳ ಕಶ್ಯಪು ತನ್ನ | ತರಳನನು ಪರಿಪರಿಯಉರುತರದಿ ಭಾದಿಸಲು | ಪೊರೆದ ತೆರದಂತೇಶರಣಜನ ವತ್ಸಲಗೆ | ನರಹರಿಯೆ ಕುಲದೈವಕರುಣದಿಂದಲಿ ನೀನೆ | ಪೊರೆಯ ಬೇಕಿವನ 1 ಸೇವ್ಯ ಕಮಲ ಭವ ಮುಖ್ಯ | ಸಕಲ ಜಗಕರ್ತಾ 2 ಕರ ಪಿಡಿದಿವನಮೃತ್ಯುಂಜಯಾರಾಧ್ಯ | ಉತ್ತಮೋತ್ತಮನೆ 3 ಮಾರ ಪಿತ ಹರಿಯೇತೋರುತವರೂಪ ಹೃ | ದ್ವಾರಿಜದಲೆಂದೆನುತಮಾರಾರಿ ಬಿಂಬನಿಗೆ | ಪ್ರಾರ್ಥಿಸುವೆ ಹರಿಯೆ 4 ಪ್ರಿಯತಮನು ನೀನೆಂಬ ಸಥೆಯಿಂದ ಬೇಡುವೆನೊವಯನ ಗಮ್ಯನೆ ಹರಿಯೆ | ವಾಯ್ವಂತರಾತ್ಮಾಹಯಮೊಗಾಭಿಧ ಗುರು ಗೋವಿಂದ ವಿಠ್ಠಲನೆದಯಬೀರಿ ಶರಣನ್ನ ಉದ್ಧರಿಸೊ ದೇವಾ5
--------------
ಗುರುಗೋವಿಂದವಿಠಲರು
ಮೀನಾಕ್ಷಿದೇವಿ ಮಾಮಮ ಮಧುರ ಪ ಸದಾ ನಿನ್ನ ಆನತರಿಗೆ ಡಿಂಗರಿಗನು ನಾನಮ್ಮ ಅ.ಪ ಬಹು ಜನ್ಮದಿಂದ ಮಾಡಿದ ಪುಣ್ಯ ವಿಹಿತ ಫಲದಿಂದ ತವಪದ ಪಂಕೇ ರುಹವ ಕಂಡೆನು ಇಂದಿಗಹಹ ಧನ್ಯನು ನಾನು 1 ಕಲುಷವಿರಹಿತೆ ಕರಪಿಡಿದೀ ಜಲಜಾಕ್ಷನಡಿದಾವರೆಗಳ ತೋರಮ್ಮ 2 ದಾಸರ ದಾಸ್ಯವನು ಕರುಣಿಸಿ ಲೇಸುಪಾಲಿಸೆ ಸುಂದರೇಶನರ್ಧಾಂಗಿಯೆ 3 ಹಿರಿಯರಿಗೆಲ್ಲಾ ವರಗಳ ಕೊಟ್ಟು ಪೊರೆದುದನೆಲ್ಲ ಕೇಳಿ ನಿನ್ನ ಚರಣವ ನಂಬಿದೆ ಸ್ಥಿರ ಮನವನು ಕೊಡೆ 4 ತಾಮಸನರನು ಬಾಲಕನೆಂದು ಪ್ರೇಮದಿ ನೋಡೆ ಗುರುರಾಮ ವಿಠಲನ ತಂಗಿ5
--------------
ಗುರುರಾಮವಿಠಲ
ಮುಕುತಿ ತಮಸು ಎರಡಿಲ್ಲೆ ಕಂಡ್ಯಾ ಮುಕುತಿ ಬೇರೆ ತಮಸು ಬೇರಿಲ್ಲ ಕಂಡ್ಯಾ ಪ ಗುರುಪಾದ ಒಡಗೊಂಡು ಮರುತ ಶಾಸ್ತ್ರವ ನೋಡಿ ಹರಿಯ ಗುಣಂಗಳ ಕೊಂಡಾಡುತ ಪರಮ ಉತ್ತಮರು ಬರಲು ಬನ್ನಿ ಬನ್ನೆಂದು ಎರಗಿ ತಕ್ಕೈಸಿ ಕೊಂಡುಂಬುವದೆ ಮುಕ್ತಿ 1 ನಾನು ನೀನು ಎಂದು ಜ್ಞಾನವನೆ ತಿಳಿಕೊಂಡು ತಾ ನಿಲ್ಲದಿಲ್ಲೆಂದು ಪೇಳಿಕೊಂಬಾ ಈ ನಾಡಿನೊಳಗಿವ ಹೀನವನು ಎಂಬರ್ಥ ಈ ನುಡಿ ಎನಿಸಿಕೊಂಬುದೆ ತಮಸು 2 ಒಂದರೊಳಾನಂತ ಅನಂತದಲಿ ಒಂದು ಒಂದೊಂದು ಅನಂತ ಹರಿಪ್ರೇರಕ ಎಂದು ಗ್ರಹಿಸಿ ಹರಿಗುರು ಹರಿದ್ವೇಷಿಗಳನ್ನ ನಿಂದಕವಾಗಿ ಬಾಳುವದೆ ಮುಕ್ತಿ 3 ಅನ್ನದಾ ಸಮಯ ಇಲ್ಲದೆ ಕಂಡಲ್ಲಿ ತಿನ್ನಲೋಡಿ ಸಮಯವೆನ್ನದೆ ಅನ್ಯರ ಬದುಕ ಪಹರಿಸುವ ಖಲು ಗನ್ನ ಫಾತಕನೆನಿಸಿಕೊಂಬುವದೆ ತಮಸು 4 ಮೀಸಲಾ ಮನದಲ್ಲಿ ವಾಸುದೇವನ ನಿಜ ವಾಸರದಲ್ಲಿ ಜಾಗರಾ ಮಾಡುವಾ ಆಶೆಬಡಕನಲ್ಲ ದೇಶದೊಳಗೆ ಹರಿ ದಾಸನೆಂದು ಪೇಳುವುದೆ ಮುಕ್ತಿ 5 ವ್ರತವಿಲ್ಲ ವಾವಿಲ್ಲ ಮತಿ ಮೊದಲು ಇಲ್ಲಾ ಕಥಾಶ್ರವಣ ಒಂದು ಕೇಳಲಿಲ್ಲ ಪಿತ ಮಾತರನ್ನ ಬೊಗಳುವ ನಾಯಿ ಕು ತ್ಸಿತನು ಎಂದೆನಿಸುವದೆ ತಮಸು 6 ಗುಣ ಒಳ್ಳೇದು ನೀತಿ ಮನ ಒಳ್ಳೇದು ಅಜ ತೃಣ ಜೀವಾದಿಯ ಭೇದಬಲ್ಲನಿವ ಗಣನೆಮಾಡ ವಿಜಯವಿಠ್ಠಲನಲ್ಲದೆ ಕ್ಷಣ ಹೀಗೆ ಎಂದೆನಿಸುವದೆ ಮುಕ್ತಿ 7
--------------
ವಿಜಯದಾಸ