ಒಟ್ಟು 5968 ಕಡೆಗಳಲ್ಲಿ , 127 ದಾಸರು , 3551 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನ್ನಿಸಯ್ಯ ಮದನಜನಯ್ಯ ಘನ ಮುನ್ನೀರಶಯ್ಯ ಸ್ವಾಮಿ ಹಯವದನರಾಯಾ ಪ ಬಾರಿಬಾರಿಗೂ ಈತನ ಮಂದಿರದಲಿ ನಿನ್ನ ಚೆನ್ನಿಗ ರೂಪವ ತೋರೋ ನಿನ್ನ ಕರುಣದಿ ಅ.ಪ. ಈಶಾ ಭವಪಾಶಾ ಎಂಬೋ ಬೀಸಿದ ಬಲೆಯೊಳು ಗಾಸಿಗೆರೆದೆನೂ ರಂಗಾ ಕೃಪಾರಿಣ ವಾಸಿ ಪಂಥಗಳು ವಾಸುದೇವನೆ ಲೇಸ ಮಾರ್ಗವ ಕಾಣೆ ನಿನ್ನಾಣೆ ದಾಶರಥಿಯೇ ನಿನ್ನ ದಾಸರ ಕೂಡಿ ಸಂತೋಷಪಡುವ ಸಿರಿಯೆನಗಿತ್ತು ಸಲೆ ಮೀಸಲವ ಮಾಡೋ ದೇವರ ದಯಾಳೊ1 ಪಂಚಭೂತಗಳಲಿ ಪಂಚಾಗ್ನಿಗಳಲಿ ಪಂಚದ್ವಿಗುಣ ಪಂಚರಲಿ ಮತ್ತೆ ಪಂಚಪ್ರಾಣದಲಿ ಪಂಚವಿಂಶತಿ ಮಾರ್ಗ ತೋರೋ ಶ್ರೀಕಾಂತಾ ಪಂಚ ಹಿಡಿಸಿ ಪಂಚೊಂದೋಡಿಸಿ ಪಂಚನಾಲಕು ಭಕ್ತಿ ಕೊಂಚವಾಗದ ಹಾಗೆ ಸಂಚಿತಾಗಮಾ ಮುಂಚೆ ಓಡಿಸೋ ಶ್ರೀವತ್ಸಲಾಂಛನನೇ2 ಶ್ರೀನಿವಾಸನೇ ನಿನ್ನ ಧ್ಯಾನಮಾತ್ರದಿ ಬರುವೋ ಬಿಗನು ಅಘನಾಶÀನವೆಂದೊ ನಾನಿಂದೂ ಬೆಂಬಿದ್ದ ಅಬಲನ ಮನ್ನಿಸೋದಲ್ಲದೆ ಹೀಗೆ ಮುನಿಸೋರೇನೋ ಶ್ರೀಹರೆ ನಿನ್ನ ಸನ್ನಿಧಿಗೊಪ್ಪಿಸಿದೆನೊ ಮನ ಬಂದುದು ಮಾಡೊ ಘನತೆ ನಿನ್ನದು ದೇವಾ ದೀನ ದಯಾನಿಧೆ ಉರಗಾದ್ರಿವಾಸಾ 3
--------------
ಮಹಾನಿಥಿವಿಠಲ
ಮನ್ನಿಸಿ ಸಲಹಯ್ಯ ಎನ್ನ ತಪ್ಪು ಒಪ್ಪಿಕೊ ಮಹರಾಯ ಪ ಮನ್ನಿಸಿ ಸಲಹಯ್ಯ ಪನ್ನಂಗಶಯನನೆ ನಿನ್ನ ಧ್ಯಾನಾಮೃತವನ್ನು ಕರುಣದಿತ್ತು ಅ.ಪ ನಾನಾಜನುಮ ಸುತ್ತಿ ಮತ್ತೆ ಹೀನ ಜನುಮವೆತ್ತಿ ಜ್ಞಾನವಿನಿತಿಲ್ಲದೆ ನಾನಾಪಾಪಗೈದೆ ದೀನಜನರ ಬಂಧು ನೀನೆ ಕ್ಷಮಿಸು ತಂದೆ 1 ಮರವೆ ದೇಹವೊದ್ದು ಸಂಸಾರ ಮರವೆಯೊಳಗೆ ಬಿದ್ದು ಶರಣ ಸತ್ಪುರುಷರ ನೆರವಿನಿತರಿಯದೆ ಮರುಳನಾದೆ ಹರಿ ಮುರಹರ ಕ್ಷಮಿಸಯ್ಯ 2 ಬರಬಾರದು ಬಂದೆ ಬಲು ವಿಧ ದುರಿತದೊಳು ಬೆಂದೆ ಕರುಣದಿ ಕ್ಷಮೆಮಾಡಿ ಪೊರೆಯೊ ಶ್ರೀರಾಮನೆ 3
--------------
ರಾಮದಾಸರು
ಮನ್ನಿಸೊ ಶ್ರೀ ವೆಂಕಟೇಶ ಮಂಜುಗುಣಿಪುರ ವಾಸ ಪ. ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ ಅ.ಪ. ದೇಶದೇಶದಿಂದ ಬಂದ ಜನರಿಗೆ ಮುದದಿಂದ ಲೇಸಿನ ವರನನೀವೆ ನಿರುತ ಕಾವೆ ಭಾಸುರ ಮೋಹನವೇಷ ಭಾನುಕೋಟಿಸುಪ್ರಕಾಶ ಶ್ರೀಸತಿಯ ಪ್ರಾಣೇಶ ಶ್ರೀ ಶ್ರೀನಿವಾಸ 1 ವಾರಿಧಿಯೊಳಗಾಡಿದೆ ಗಿರಿಯ ಬೆ[ನ್ನ] ಲೆತ್ತಿದೆ ಭಾರವಹ ಧರೆಯ ತಂದೆ ದೈತ್ಯನ ಕೊಂದೆ ದುರುಳ ಬಲಿಯನು ಮೆಟ್ಟಿ ದೈತ್ಯನೃಪರನೆ ಕುಟ್ಟಿ ತರುಣಿಗಭಯವನಿತ್ತೆ ತರುವ ಕಿತ್ತೆ 2 ಪುರದ ನಾರಿಯರನು ಪಂಥದಿ ಗೆಲಿದೆ ನೀನು ವರ ಕಲ್ಕಿಯಾಗಿ ತುರಗವನೇರಿ ಮೆರೆದೆ ವರದ ಪ್ರಸನ್ನ ಹಯವದನ ವೆಂಕಟರಾಯ ಪೊರೆಯೊ ಎಂದೆಂದೂ ಎನ್ನ ಪುರುಷರನ್ನ 3
--------------
ವಾದಿರಾಜ
ಮನ್ನೀಸಯ್ಯಾ - ಮನಸಿಜನಯ್ಯಾ |ಮೌನಿಜನರ ಪ್ರಿಯ ಪಂಡರೀರಾಯಾ ಪ ಪರಿ | ಅನಘ ನೀ ಕರುಣಿಸಿ ಅ.ಪ. ಪರಿ ಏನಿದು ಹರಿಮೊರೆ ಕೇಳೆನನ್ನದು | ಪೊರೆವುದು ಜೀಯಾ 1 ಪರಿ ಗೋಪಿ ಜನರ ಪ್ರಿಯದ್ರೌಪತಿ ಗೋಪ್ತಾ | ಬಲು ಆಪ್ತಾ |ಕೈಪಿಡಿಯುವುದೀ | ಪಾಪಿಯಾದೆನ್ನನುಶ್ರೀಪತಿ ಶ್ರೀಹರೇ | ಮುರಾರೇ ||ಲೇಪಿಸು ಕೀರ್ತಿಕ | ಲಾಪಗಳ್ನಿನ್ನ ಸು-ರಾಪಗಪಿತ ಶ್ರೀ ಪಾವನ ಮೂರ್ತೇ 2 ಭವ ಶರ ನಿಧಿಯಲಿ | ಭವಣೆಯ ಪಡಲಾರೆಭವ ಜನಕನ ಪಿತಾ | ಹೇ ದಾತಾ |ಹವಣೆಯು ದಾವುದು | ಭವವನುತ್ತರಿಸಲುತವಪದ ಸ್ಮರಿಸುತಾ | ಸ್ಮರಿಸುತ್ತಾ ||ಸವನ ಮೂರರೊಳು | ಅವಶದಿ ಕೀರ್ತಿಸಿಬೆವರೆಂಬ ವಿರಜೆಯ | ಅವಗಾಹಿಸುವನುಭವವ ಕೊಡಿಸು ಹರಿ | ಅವನಿಜೆ ವಲ್ಲಭಪವನ ವಂದಿತ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಮನ್ಮಥ ಚರಿತೆ340 ವರಸಿದ್ಧಿ ಗಣೀಶನ ಬಲಗೊಂಡೀ- ಶ್ವರನ ಪದಕೆ ನಮಿಸಿ | ಶಾರದೆಯ ಹರುಷದಿ ಸಂಸ್ಮರಿಸಿ | ಚ ತುರ್ಮುಖಗಳ ನೆರೆ ಭಜಿಸಿ ಹರುಷದಿ ನುತಿ ಮಾಡಿ | ಮಾಡಿ- ದ ಕೃತಿಯ ಸುಜನರು ನೋಡಿ 1 ಕಾಮಜನಕ ನಿಷ್ಕಾಮಜನಾಪ್ತ | ಸು- ಧಾಮನ ಸಖ ಹರಿಯು | ಮೂರು ಲೋಕಗಳಿಗೆ ತಾ ದೊರೆಯು | ಎನ್ನಹೃ- ತ್ಕಮಲದೊಳೀಪರಿಯು ಕಾಮನ ಸುಚರಿತೆಯು | ಸಜ್ಜನರು- ಇಹಪರ ಸದ್ಗತಿಯು | 2 ಪೃಥಿವಿಯೊಳಿಹ ಸುಜನರು ಕೇಳಿ | ಮ ನ್ಮಥ ಚರಿತ್ರೆಯನು | ಸಹ- ರ್ಷೋತ್ಕರದಿ ನೀವ್ಗಳಿದನು | ಭಜಿಸೆ ಸ- ದ್ಗತಿಗಳನು ಕೊಡುವನು | ಶತಮುಖವಂದಿತ ಸಿರಿದೇವಿಯರಸ- ನೊಲಿದು ಪಾಲಿಸುವನು | ಜನರ ಕೋ- ರಿದ ಕೋರಿಕೆಗಳನು | ತಾ ಕೊಟ್ಟವರನು ಪಾಲಿಪ ತಾನು 3 ತಾರಕಾಸುರನ ಭಯದಿಂದಲಿ ವೃಂ- ದಾರಕರೆಲ್ಲ ಕೂಡಿ | ಮನದಿ ಆಲೋಚನೆಗಳ ಮಾಡಿ | ವನಜ ಸಂ- ಭವನಡಿಗಳ ಬೇಡಿ | ಯಾರು ನಮಗೆ ದಿಕ್ಕೆಂದು ಕಳವಳಿಸಿ ನಾರಾಯಣನ ತ್ವರಿತದಲಿ | ಕಂಡು ವಂ- ದಿಸಿದರು ತವಕದಲಿ | 4 ವಾರಿಜಾಕ್ಷ ಪರುಷೋತ್ತಮ ವಿಶ್ವಾ- ಧಾರ ಪರಾತ್ಪರನೆ | ಅನಂತನವ- ತಾರ ಕೃಪಾಕರನೆ | ನಾವೆಲ್ಲ ಸೇರಿದೆವೈ ನಿನ್ನನೆ | ತಾರಕಾಸುರನ ಬಾಧೆ ಪರಿಹರಿಪ- ರ್ಯಾರನು ನಾವ್ ಕಾಣೆವೈಯ್ಯ | ಉ-- ದ್ಧಾರ ಮಾಳ್ಪನು ನೀನೆ | ಭಕ್ತಜನ- ವಾರಿಧಿ ಚಂದ್ರಮನೆ | 5 ಎನಲು ಸುರರೊಡನೆ ನುಡಿದನಾಗಲಾ- ವನಜನಾಭ ತಾನು | ಈ ಕಾರ್ಯ- ಕೆನಾ ಮಾಡುವುದೇನು | ಭ- ವಾನೀಧವನಾಗಿ ಶಿವನು | ಘನತಪವನಾಚರಿಸುತ್ತ ಮೇರುಗಿರಿ ಗುಹೆಯೊಳು ಕುಳಿತಿಹನೊ | ಫಾಲದಲಿ ಉರಿಗುಣ್ಣುಳ್ಳವನು | ಏನಾದರು ಸರಿ ತಾ ಲೆಕ್ಕಿಸನು | 6 ಕಾಮನಿಂದ ಶಂಕರನ ತಪಕಿಡಿಸಿ ಕರುಣಿಸಬೇಕೆಂದು ಬೇಡಿ | ಕೊಂ- ಡರವ ನಿಮ್ಮೊಳು ದಯಮಾಡಿ | ತ- ಕ್ಕಯೋಚನೆಗೈಯ್ಯುವ ನೋಡೀ | ತಾಮಸನ ಮುರಿದು ನಿಮಗೆ ಸಂತತವ ಕೊಡುವನು ಮುದಗೂಡಿ | ಎಂದು ಪೇಳಿದ ಶ್ರೀಹರಿಯನುಡಿ | ಕೇಳಿ ಇಂದ್ರನು ಗುರುವನು ನೋಡಿ 7 ಚಂದದಿಂದ ಸೇರಿ | ಸ್ಮರಗೆಯಿದ- ರಂದವೆಲ್ಲವುಸುರಿ | ಅವನಮನ ಶೌರಿ ಕಂದನೆಯಂತಾದರು ತಂದರೆ ಸುಖ- ವೆಂದನುಪಕಾರಿ | ಗುರು ವಂದಿಸೆ ಸುರರ ದೊರಿ | ಬೀಳ್ಕೊಂಡು ಬಂದನು ಕುಸುಮಪುರಿ8 ಕುಸುಮಾವತಿಯಲಿ ಮೀನಕೇತನನ ಶಶಿನಿಭವದನೆಯರು | ಸೇ- ವಿಸುತಿರೆ ಹಸನಾದ ಪನ್ನೀರು | ಪುನಗು ಅಗರು | ಕುಸುಮಶರನ ಉಪಚರಿಸುತ ಬಾಲೆಯ- ರೆಸೆಯಲು ಮೋದದೊಳು | ರತಿ- ಕ್ರೀಡೆಯಲಿ ಮನಕರಗಲು | ಬೃ ಹಸ್ಪತಿಯನಿತರೊಳೈತರಲು 9 ಊಳಿಗದವರಿಂದ್ಹೇಳಿ ಕಳುಹೆ ಗುರು ಕೇಳಿ ಸುದ್ದಿ ಮಾರಾ | ತವಕ ಪರಿಪರಿಯುಪಚಾರ | ಶ್ರೀಪತಿಯ ಕುಮಾರ | ಬಂದಹದ- ನೇನೆನುತ ಪದಾರ | ವಿಂದ- ಕೆರಗಿದನಾ ಕುಸುಮಶರ 10 ಭಯದೊಳಮರರೆಲ್ಲ | ಕ್ಷೀರಸಾಗರಕೆ ಪೋಗಿ ಎಲ್ಲ | ಬಿನ್ನೈ- ಸಲು ಕೇಳಿ ಸಿರಿಯನಲ್ಲಾ | ಅರಘಳಿಗಾಲೋಚಿಸಿ ಎನ್ನೊಳುನುಡಿ- ದನುಕೇಳಿಸಿರಿಯನಲ್ಲಾ | ಖಳಗೆಧರೆ- ಪರಿ ಎಲ್ಲವನು ಬಲ್ಲ 11 ಕಾಮನು ಪುಷ್ಪ ಶರಗಳಿಂದೆಸೆಯಲು ಗೌ- ರಿಮನೋಹರನೂ | ಬ- ಹಿರ್ಮುಖನಾಗುತ ಶಂಕರನೂ | ನಿ- ಕ್ಷೇಮವ ಪಾಲಿಪನು | ರಜತಗಿ ರಿವಾಸಿ ಮಹೇಶ್ವರನು | ಇದಕೆ ಗುರಿಯಾದ ಎನ್ನ ಮಗನು 12 ನಾವು ಪೇಳಿರುವೆವೆಂದು ನಮ್ಮ ಸು- ಕುಮಾರ ಮನ್ಮಥನಿಗೆ | ಇದೆಲ್ಲಾ ಪೇ- ಳಿವಿವರಮಾಗೆ | ಕರೆದುಕೊಂ- ಡ್ಹೋಗಿ ಶಿವನ ಬಳಿಗೆ | ಪಾವಕಾಕ್ಷ ಬಲು ಕರುಣಾನಿಧಿಯಿ- ನ್ನೇನು ಚಿಂತೆ ನಮಗೆ | ಬೇಗನಡೆ ಯೆಂದ ಹರಿಯು ಎನಗೆ | ಸಕಲವೂ ತಿಳಿಸಿದೆ ನಾನಿನಗೆ | 13 ಪರಿಯೋಚನೆ ಮಾಡು | ಸ- ತ್ಕೀರ್ತಿಯ ಸಂಪಾದನೆ ಮಾಡು | ಭರದಿ ಹೂ ಶರಗಳ ನೀ ಹೂಡು | ಹರನ ತಪವ ಭಂಗಿಸಿ ನಮ್ಮೆಲ್ಲರ ಕರುಣದಿ ಕಾಪಾಡು | ತಂದೆಯ- ಪ್ಪಣೆಯ ಮನದಿ ನೋಡು | ಮೂಜಗದಿ ಯಾರು ನಿನಗೆ ಜೋಡು | 14 ಈ ಪರಿಪೇಳಿದ ಗುರುವಿನ ನುಡಿಯನು ಶ್ರೀಪತಿಯ ಕುಮಾರ | ರತಿಯೊಡನೆ ಮಾರ | ನುಡಿದಳಾ ಶಿವನು ಮಹಾಕ್ರೂರ | ಆಪತ್ತೊದಗುವುದೀಗ ಬೇಡ ಎಂ- ಕಂದರ್ಪಮನದಿ ಸೋತು | ಬೃಹಸ್ಪತಿ- ಗೆಂದ ಕಾಮನಿನಿತು 15 ಸಮ್ಮತಿಯಿದು ಕೇಳಿ | ಪೂಶರನ ಬಿಡಲು ಚಂದ್ರಮೌಳಿ | ಕೋಪಿಸಲಾ ಹಣೆಗಣ್ಣೆನಗಾಳೀ | ಬ್ರಹ್ಮಾಂಡಗಳಾದರು ದಹಿಸುವುದು ಎನ್ನಳವೇ ಎಂದಾ | ಈ ಕಾರ್ಯಕೆ ನಾನು ಬಾರೆನೆಂದ | ನುಡಿಗೆ ಸುರ- ಗುರುಮತ್ತಿಂತೆಂದ | 16 ಮರೆಹೊಕ್ಕಿರುವಮರರ ಪಾಲಿಸುನೀ ಕಂದರ್ಪ | ಜಗ- ತ್ಕಾರಣನೈನಿಮ್ಮಪ್ಪ | ಪೇಳ್ದನುಡಿ ನಡಿಸಲು ಬೇಕಪ್ಪಾ | ಪರಿಪರಿಯಲಿ ನೋಡಿದರು ಜಗದೊಳಗೆ ನಿನ್ನ ಸರಿಯಾರಪ್ಪಾ | ನಮ್ಮ ನುಡಿ ಮೀರಬಾರದಪ್ಪಾ | ಅಷ್ಟು ಪೇಳಿ- ದರು ಕಾಮವೊಪ್ಪಾ | 17 ಕಾಮನವೊಪ್ಪಿಸಿ ಕರದೊಯಿದಮರರು ಕೈಲಾಸವ ಸೇರಿ | ಅರುಹಿದರು ಗಿರಿರಾಜ ಕುಮಾರಿ | ಕೇಳಿನಡೆತಂದಳಾಗಗೌರಿ | ವ್ಯೋಮಕೇಶನಿಹ ಗವಿಯ ದ್ವಾರಕೇ ಬರಲು ನೋಡಿ ನಂದಿ | ತಾಯಿನೀ- ನಿಲ್ಲಿಗೇಕೆ ಬಂದಿ | ಏನು ಅ- ಪ್ಪಣೆಯೆಂದನು ನಂದಿ 18 ವಂದನೆ ಒಳಗೆ ಹೋಗುವನು ಇವನನೀ ತಡೆಯಬೇಡವಯ್ಯ | ಎನ್ನ ಕಂದನು ಇವ ಕೇಳಯ್ಯ | ಎಂದು ಪೇ- ಳಿದ ಗೌರಿಯ ನುಡಿಯಾ | ಮುದದಿ ಶಿರದೊಳಾಂತನು ನಂದೀಶ್ವರ ಮುಂದೆ ಕೇಳಿ ಕಥೆಯ | ಅನಿತರೊಳ್ ಬಂದ ಕಾಮರಾಯ | ಪೋಗ ಬಹು- ದೆಂದ ಪ್ರಥಮಗೇಯ | 19 ಕಾಮಪೊಕ್ಕನಂದು | ಕರದಿ ಜ- ಪಮಾಲೆ ಪಿಡಿದು ಮುಂದು | ಮ- ಹಾಮಂತ್ರಗಳ ಜಪಿಸುತಂದು | ನೇಮದೊಳೇಕೋಭಾವದೊಳಿರುತಿಹ ಸೋಮಧರನ ಕಂಡ | ಏ- ನು ಮಾಡುವದೆಂದು ಪ್ರಚಂಡಾ | ಇಕ್ಷುಧ- ನುಶರಗಳ ಕೈಕೊಂಡಾ | 20 ವಿನಯದಿಂದ ಪ್ರಾರ್ಥಿಸಿ ಮಾತಾಡಿಸು- ವೆನೆಂದು ಶಂಕರನ | ನುತಿಸಿ ಬೇಡಿ- ದನು ಶೂಲಧರನಾ | ಎಷ್ಟಾದರು ಕರಗಲಿಲ್ಲವನಮನಾ | ಪರಿಪರಿಯೋ- ಚನೆ ಮಾಡಿ ಮನ್ಮಥನು | ಬೆರಗಾಗುತಾ ನಿಂತಾ ಸಮಯನೋಡುತ- ಲಿರತಿಯ ಕಾಂತಾ | ಮನ ದಿ ಹೊಂದಿದನು ಮಹಾಚಿಂತಾ 21 ನೆಂದು ಯೋಚಿಸಿದನು | ಇ- ಕ್ಷು ಧನುವನು ಜೇ ಹೊಡೆದಾನು | ಮಹೇ- ಶನ ಮರ್ಮಸ್ಥಳಗಳನು | ಪುಷ್ಪ ಬಾಣಗಳೂಡೆಸೆಯೆ ಮ- ಶರಗಳನು ಸುರಿದಾನು | ಜ- ನರೆ ಕೇಳೀಯಾಶ್ಚರ್ಯವನು | 22 ಆ ಮಹೇಶ್ವರನ ಮೂಲ ತಿಳಿಯಲಿಂ- ದ್ರಾದಿಸುರರಿಗಳವೆ | ಕೇಳಿಯೀ ಕಾಮನೇನು ಲಕ್ಷ್ಯವೆ | ಕರಿಚರ್ಮಾಂಬರನಾ | ಮೀನ ಕೇ- ತನನ ಬಾಣಕೆ ಮನಾ | ಬಹಿರ್ಮು- ಖನಾಗಿ ನೋಡಿ ಸ್ಮರನಾ | 23 ಕಣ್ಣುತೆಗೆದು ಮುಕ್ಕಣ್ಣಯಲೋ ನಿನ- ಗೆನ್ನೊಳೇಕೆ ಪಂಥಾ | ಛೀ ಛೀನಡಿ ಹೋಗು ಹೋಗು ಭ್ರಾಂತ | ಎಂದು ತಾ- ತನ್ನನಿಜಸ್ವಾಂತ-| ವನ್ನು ಪೂರ್ವದಂದದಿ ತಪದಲ್ಲಿರಿಸಚ- ಪೋಲ್ವಂದದಲಾ ಶಾಂತಾ | ಶೂರ್ಪಕಾ- ರಿಯು ಎದುರಲಿ ನಿಂತಾ | 24 ನಾನು ಬಂದಾ ಕಾರ್ಯವ ಕೇಳದಲೆ ಇ- ದೇನೀ ಪುರಹರನು | ಛೀಹೋಗೋ- ಗೆಂದು ಗರ್ಜಿಸಿದನು | ಎನುತ ತೆ- ಗೆದೆಚ್ಚ ಪೂಶರವನು | ನಾನಾವಿಧದಲಿ ತನ್ನ | ಚಮತ್ಕಾ- ರಗಳ ತೋರಿಸಿದನು | ಮನದಿ ಭಯಗೊಳುತ ಮನಸಿಜನು | ಮುಂದಾಗುವ ಕಥೆಯ ಕೇಳಿಯಿನ್ನು 25 ಭರ್ಗಕಣ್ದೆರೆದು ನೋಡಲಾಕ್ಷಣದಿ ಭರದಿಂ ಮನ್ಮಥನಾ | ಕೋಪಕಿಡಿ- ಯಿಡುತ ಫಣೆಗಣ್ಣ | ತೆಗೆದು ನೋಡಲು ತಕ್ಷಣ | ಚಿಣ್ಣಾ ಭುಗ್ಗು ಭುಗ್ಗುಯೆಂದೇಳ್ವ ಉರಿಗಳಿಂ ದಗ್ಧನಾದ ಮದನಾ | ಭಸ್ಮದಂ- ತಿದ್ದು ಮರ್ಮಸದನಾ | ಅಗ್ನಿವ್ಯಾ ಪಿಸೆ ಬ್ರಹ್ಮಾಂಡವನಾ 26 ಸುರರು ಕಿನ್ನರರು ಗಡಗಡ ನಡುಗುತ ಬೆರಗಾದರು ನೋಡಿ | ಅವರ- ಶಿರವನಲ್ಲಾಡಿ | ಚರರು ಬಂದು ರತಿಗೀ ಸುದ್ದಿಯ ಪೇಳಿ- ದರು ದುಃಖ ಮಾಡಿ | ಕೇಳಿ ನಾರಿಯರು ಶೋಕವಮಾಡಿ | ರತಿಯು ನೆಲದೋಳ್ ಬಿದ್ಹೊರಳಾಡಿ | 27 ಹಾಹಾರಮಣಾ ಹಾ ನಿಜೇಶ ಹಾ ಪ್ರಾಣಕಾಂತಕಾಮಾ | ಎನ್ನ ಕರ್ಕಶನಿಸ್ಸೀಮ | ಸಾಹಸ ಮಾಡುವೆನೆಂದು ಪೋಗಿ ಶಂ- ಕರನಿಂದಲಿ ಮಡಿದೆ | ಪೇಳಿದಮಾ- ತ್ಕೇಳದೆ ನೀ ನಡೆದೇ | ಪೋಗಬೇ- ಡೆಂದು ನಾನು ನುಡಿದೆ 28
--------------
ಗುರುರಾಮವಿಠಲ
ಮರುಗದೇ ನಿಂತಿಹುದೆ ಮನವು ನಿನ್ನಾಅರಿಯದಪರಾಧ ತಾನಳಿಸುತಿರಲೆನ್ನ ಪನೆರೆಯವರ ಮೈಸಿರಿಯ ನೋಡಿ 'ರಿಯರ ನಡೆಯಮರೆತು ಧನದಲಿ ಮತಿಯನಳಿದೆಯಾಕರಕೊಂಡು ನರತತಿಯ ಕೆಣಕಿುವರ ಸಹನೆಯಪರಿಪಾಕದಿಂ ನೋಡಿ ಬಂದ ಪೀಡನೆಯ 1'ತವರೆಂಬಂತಿರುವ 'ಂಸೆಯನಾಳೋಚಿಸುತ ಜೊತೆಯೊಳಾರೋಗಿಸುತ ಜಾರಿ ನಿಲ್ಲುತಸತಿ ಸುತಾದ್ಯರ ಭೋಗಸಾಧನವ ಕೆಡಿಸುತ್ತಪತಿತರಿಂದರಸುತ್ತ ಪಿಡಿಸಲು[ಕಾ]ಯುತ 2ಪಾದುಕಾರ್ಚನೆಯನ್ನು ಪಾಲಿಸಿದ ಬಗೆಯನುಬೋಧಿಸುತ ಚಿತ್ತವನು ಬೆದರಿಸುವದೆನೀ ದಯಾಸಾಗರನು ನೀಚರುಪಹತಿಯನುಸಾದರದಿ ಬಿಡಿಸಿನ್ನು ಸಾಕು ಮುನಿಸನು 3ಕಾಲ ದೇಶವ ಕಂಡು ಕಾಪಥವ ಕೈಕೊಂಡುಬಾಳಿದರಳು ಕೂತುಂಡು ಭಕ್ತಿ ಮುಂಕೊಂಡುಊಳಿಗವ ಬೆಸಗೊಂಡು ಊರೊಳಗೆ ತಿರುಕೊಂಡುಬಾಲ ಇರಲರಿದಾಡುಬಡಿಯೆ 'ಡುಕೊಂಡು 4ಮಂಗಳಾರ್ತಿಯ ಸೇವೆ ಮಾಣುತಿಹುದೇಗೈವೆಕಂಗಳಿಗೆ ನೀ 'ಭುವ ಕಾಣಿಸಿದೆ ಸುಖವೆತಿಂಗಳೆನಿತಾದರುವೆ ತಿರಿದೂಳಿಗಕೆ ತರುವೆಸಂಗಿನವರೊಳಗಿರುವೆ ಸತತವೆಲೆ ಗುರುವೆ 5ತಪ್ಪಿಗನುಸಾರವಾಗಿ ತಿಳಿಯೆ ಶಿಕ್ಷಿಪೆಯಾಗಿಒಪ್ಪದ ಪದವ ನೀಗಿಪೊಳಿತಾಗಿತೆಪ್ಪಗೂಳಿಗಕಾಗಿ ತಗುಲಿಸುವೆ ನೀನಾಗಿಸುಪ್ರಸನ್ನತೆಯಾಗಿ ಸುಖಬಡುವರಾಗಿ 6ದುರುಳರಹುದಹುದಿವರು ದೂರಿಗೊಳಗಾದವರುಚರಣಾಬ್ಜ ಸೇವಕರು ಚಾರುಮತಿಯವರುದುರಿತ ಶತವಡಿಸಿದರು ದಾಟುವರು ನಿನ್ನವರುಕರುಣಾಬ್ಧಿ ನೀನಿದಿರುಗಾಣೆ ಸುಖಮಯರು7ಸೆರೆಯ ಪರಿಹರಿಸಿನ್ನು ಸುಖಿಸು ಸದ್ಭಕ್ತರನುಗುರು ಸುತರ ಚರಣವನು ಕಂಡು ಬದುಕುವೆನುಬರಿದೆ ಬೇಡುವೆ ನಾನು ಪಾಲಿಸುವ 'ಭು ನೀನುಶರಣಾಗತಪ್ರಿಯನು ಶಾಂತಿದಾಯಕನು 8ಧರೆಯ ಜನರಜ್ಞತೆಯ ದ'ಸಿ ನಿಜ ಸದ್ಗತಿಯಕರೆದೀವ ಗುರುರಾಯ ವಾಸುದೇವಾರ್ಯಕರುಣ ನಾಗನಗರಿಯ ಸ್ಥಿರಗೈದು ಸುವಸತಿಯಒರೆದೆ ಭವ'ಜಯ ವೇದಾಂತಪದ್ಧತಿಯ 9
--------------
ವೆಂಕಟದಾಸರು
ಮರುಳನಾಗಿ ಬಂದು ತೀರ್ಥಪುರಕೆ ಸೇರಿದೆ ಕರಸಿಕೊಳ್ಳೊ ಮನೆಗೆ ಬೇಗ ಕರುಣವಾರಿಧೆ ಪ. ಸರಸಿಜಾದಿ ವಂದ್ಯ ನಿನ್ನ ಚರಣಕಮಲವ ಮರಳಿ ಮರಳಿ ಬೇಡಿಕೊಳುತ ಮಹಿಮೆ ಕೇಳುತ ಸ್ವರಗಳಿಂದ ಪೊಗಳುತಿರುವ ಸುಖವ ತ್ಯಜಿಸುತ 1 ಮೂಲೆ ನಾಲ್ಕರಲ್ಲಿ ಪುಷ್ಪಮಾಲೆಯಿರಿಸುತ ಮೇಲುಗಟ್ಟು ಬಿಗಿದು ದೀಪಮಾಲೆ ಬೆಳಗುತ ಗಾಳಿದೇವನೆಂದ ತತ್ವಮೂಲ ತಿಳಿವುತ ಶ್ರೀಲಲಾಮ ನಿನ್ನ ಪೂಜೆ ಮಾಡದೇಳುತ 2 ಇಂದಿರೇಶ ಎನ್ನ ತಪ್ಪನೊಂದ ನೋಡದೆ ತಂದೆ ಎನ್ನ ಕರಸಿಕೊಳ್ಳೊ ಹಿಂದೆ ದೂಡದೆ ಚಂದನ ಸ್ವರೂಪ ಪರಾನಂದ ಕಾರಣಾ ಭುಜಗ ಗಿರೀಶ ಭಕ್ತಭೂಷಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮರುಳು ಜೀವ ಏನು ಕಾಣುವೆ ಕೊನೆಗೆ ಪ ಸರ್ವಸಮರ್ಪಣೆ ಮಾಡದೆ ಇದರೊಳು ಅ.ಪ ಯಮನವರೆಳೆಯದೆ ಬಿಡುವರೆ ಛೀ ಹುಚ್ಚಾ 1 ಇಂದ್ರಿಯಂಗಳು ನಿನ್ನಾಧೀನವಲ್ಲ ಬಂದಮಾರ್ಗ ಸುಖ ಮರೆತು ಹೋದೆಯಲ್ಲ ಮುಂದಿನ ಗತಿ ಗೋತ್ರ ಮೊದಲಿಗೆ ಇಲ್ಲ ಮುಪ್ಪುತನವು ಹತ್ತಿರೇ ಬಂದಿತಲ್ಲ 2 ಕರ್ಮವೆಂಬುವುದೊಂದು ಅನಾದಿಯಾಗಿ ಧರ್ಮವ ಗಳಿಸುವವನೆ ಪರಮತ್ಯಾಗಿ ನಿರ್ಮಲ ಮನದಿ ದುರಾಶೆಯ ನೀಗಿ ಮರ್ಮವನರಿತುಕೊಂಡವನೇ ಮಹಾಯೋಗಿ3 ಭೋಗದಾಸೆಯ ಬಿಡು ಮೂರುದಿನದ ಬಾಳು ಕೂಗುತಿಹವು ಶೃತಿ ಸ್ಮøತಿಪುರಾಣಗಳು 4 ಸತಿಸುತರನು ನಾನೆ ಸಾಕುವೆನೆಂದು ಮತಿಗೆಟ್ಟು ಭ್ರಾಂತಿ ಹೊಂದುವೆ ನೀ ಮುಂದು ಮಿತಿಯ ಬರಹ ತಪ್ಪುವುದಿಲ್ಲ ಎಂದು ಪತಿ ಗುಣಸಿಂಧು 5 ಆಹಾರ ನಿದ್ರೆಯಲ್ಲವೆ ನಿನ್ನ ಆಟ ಸಾಹಸ ನೋಡೆ ಮಾಳಿಗೆಯ ಓಡ್ಯಾಟ ಮೋಹದಿಂದಲಿ ಮುಂದೆ ಬರುವುದು ಗೂಟ ಮೂಜಗದೊಳಗೆಲ್ಲಾ ಇದು ಗೊಂಬೆ ಆಟ 6 ಕಾಮಕ್ರೋಧಗಳು ಬಿಡಲಾರೆಯೇನೊ ಪಾಮರ ಜೀವ ಅಸ್ವಾತಂತ್ರಾ ನೀನೊ ಯಾಮಯಾಮಕೆ ಗುರುರಾಮವಿಠಲನಂಘ್ರಿ ನೇಮದಿಂದಲಿ ಭಜಿಸಿ ಸುಖವಾಗುವುದು ಕಾಣೊ7
--------------
ಗುರುರಾಮವಿಠಲ
ಮರೆತಿರಲಾರೆ ಪ್ರಿಯನ ಮಾರನಯ್ಯನ ಪ ಇರುಳು ಹಗಲು ಅನುಸರಿಸಿ ತಿರುಗುತಲಿ ಸುರತ ವಾರ್ತೆಗಳನಾಡಿಸುತ ನಲಿಸುತಿಹನ ಅ.ಪ ಎನಗೆ ಬೇಕಾದುದ ತನಗೆ ತಾ ಕೊಡುತಲಿ ಮನಕೆ ಹರುಷವ ಕೊಡುವನ ತ್ರಿಲೋಕ ಸುಂದರನ 1 ಎನ್ನ ನೋಡುತಲಿ ಹಿಗ್ಗುತಲಿರುವನ ಕಣ್ಣಲಿ ಕಾಣದ ಘಳಿಗೆ ಯುಗವಾಗಿರುವುದೆಲೆ 2 ಪ್ರೇಮದಿ ಬಿಗಿದಪ್ಪುತ ಮುದ್ದಿಸಿ ಲಾಲಿಪನ 3 ಚದುರನ ಸರಸವು ವಿಧ ವಿಧ ಲೀಲೆಗಳ 4 ಜನುಮ ಜನುಮಕು ಇವನೆ ಪ್ರಿಯನಾಗಿರ- ಅನುದಿನ 5 ಅವನಿಲ್ಲದ ಸೌಖ್ಯವು ನರಕಕ್ಕೆ ಸಮ ಸವಿಯಾಗದು ಅಮೃತವು ವಿಷವಾಗುವುದೆಲೆ ಮನಕೆ 6 ಬೆರೆವ ಸುಖಕೆ ಇನ್ನು ಸರಿಯಾವುದೆ ಜಗದೊಳು 7
--------------
ಗುರುರಾಮವಿಠಲ
ಮರೆತು ಹೋದೆನೊ ದೇವ ರಂಗಯ್ಯ ರಂಗ ಸಿರಿದೇವಿ ರಮಣನೆ ಪರನೆಂದು ತಿಳಿಯದೆ ಪ ನೀರೊಳು ಮುಳುಗುತ್ತ ಮೀನಮತ್ಸ್ಯನು ಎಂದು ವೇದವ ತಂದಿತ್ತೆ ದೇವೇಶನೆ ವಾರಿಧಿಶಯನನೆ ವಾರಿಜಾಕ್ಷನು ಎಂದು ಸಾರಸಾಕ್ಷನ ಗುಣ ಸ್ಮರಿಸದೇ ಮನದಲಿ 1 ಬೆಟ್ಟ ಬೆನ್ನಿಲಿ ಪೊತ್ತು ಪೊಕ್ಕು ನೀರೊಳು ಬೇಗ ಭಕ್ತರನುದ್ಧರಿಸಿದ ದೇವನ ಪೃಥ್ವಿಯ ಕೋರೆಯಿಂದೆತ್ತಿ ಅಸುರನ ಕೊಂದ ಸಿಸ್ತು ತೋರಿದ ಪರವಸ್ತುವ ಸ್ಮರಿಸದೆ 2 ಘುಡು ಘುಡಿಸುತ ಬಂದು ಒಡಲ ಸೀಳಲು ಖಳನ ಅಡವಿ ಮೃಗವು ಎಂದು ಬೆರಗಾದೆನೊ ಹುಡುಗನಂದದಿ ಪೋಗಿ ಪೊಡವಿಪಾಲಕನ ಬೇಡಿ ಕೊಡಲಿಯ ಪಿಡಿಯುತ್ತ ತಾಯತರಿದನ ಸ್ಮರಿಸದೆ 3 ನಾರಿಯನರಸುತ ವನವ ಚರಿಸಿದಿ ನಾರಿಚೋರನ ಕೊಂದೆ ವಾನರ ಸಹಿತ ನವನೀತ ಚೋರನೆ ಮನೆಮನೆಗಳ ಪೊಕ್ಕು ಗಾರು ಮಾಡಿದ ಕೃಷ್ಣ ಹರಿಯೆಂದು ಸ್ಮರಿಸದೆ 4 ಬೆತ್ತಲೆ ನಿಂತರು ಉತ್ತಮ ನೆನಿಸಿದಿ ಸತ್ಯಮೂರುತಿ ಪುರುಷೋತ್ತಮನೆ ಕತ್ತಿ ಕಯ್ಯಲಿ ಪಿಡಿದು ಮತ್ತೆರಾವುತನಾಗಿ ಸುತ್ತಿ ಸುತ್ತಿದ ಸರ್ವೋತ್ತಮನರಿಯದೆ 5 ಭಕ್ತವತ್ಸಲಸ್ವಾಮಿ ಭಯನಿವಾರಣನೆಂದು ಭೃತ್ಯರು ನೃತ್ಯದಿ ಕುಣಿಯುವರೊ ಸತ್ಯ ಸಂಕಲ್ಪನೆ ಸತ್ಯಭಾಮೆಯ ಪ್ರಿಯ ಭಕ್ತರೊಡೆಯ ಪರವಸ್ತುವ ಸ್ಮರಿಸದೆ6 ಕರುಣವಾರಿಧಿಯೆಂದು ಸ್ಮರಿಸುವ ಭಕುತರ ಪರಿ ಅಘಗಳು ಪರಿಹಾರವೊ ಪತಿ ಕಮಲನಾಭ ವಿಠ್ಠಲ ಸ್ಮರಿಸದೆ ಅಪರಾಧ ಸಲಹೆಂದು ಸ್ಮರಿಸದೆ 7
--------------
ನಿಡಗುರುಕಿ ಜೀವೂಬಾಯಿ
ಮರೆಯದಿರು ಮರೆಯದಿರು ಹರಿಯನು ಪಾಪಿ ಪ ಮರೆಯದಿರೆ ನೀ ಮೈಕುಂಠಕೆ ಪೋಪಿಅ.ಪ. ಮೂರು ದಿನ ಬಾಳ್ವ ಸಂಸಾರವ ನೋಡಿ ಬಾರಿ ಹರುಷಿಸದಿರು ನೀನೆಲೊ ಖೋಡಿ 1 ಮತಿವಂತನಾದರೆ ಹರಿಪುರಕೆ ಪೋದಿ ಸತಿಸುತರ ನಂಬೆ ನಿನ ಬಾಯಲಿ ಬೂದಿ 2 ಸಿರಿಯ ನಂಬಿದ ದುರ್ಯೋಧನ ಬಿದ್ದ ಹರಿಯ ನಂಬಿದ ಭೀಮಸೇನನು ಗೆದ್ದ 3 ಆನೆ ಕುದುರೆ ರಥ ಭಂಡಾರವು ನಿಂದೆ ಪ್ರಾಣ ಹೋಗುವಾಗವು ಬಾರವು ಹಿಂದೆ 4 ರಂಗೇಶವಿಠಲನ ನಂಬಿದವ ಜಾಣ ಅಂಗನೆಯರ ನಂಬಿದ ಮನುಜನೆ ಕೋಣ 5
--------------
ರಂಗೇಶವಿಠಲದಾಸರು
ಮರೆಯದಿರುವರೋ ನಿನ್ನ ಸ್ಮರಣೆಯಾ ನೀನು ಪ ಗರಿಯಾ ಚರಿಯಾ ಮರಿಯಾ ನೆರಿಯಾ | ಸೇರಿ ಕ್ರೂರ ಮಾರಿದಾರಿ ಜಾರಿ ದೂರಸಾರದೇ ಅ.ಪ ಕಡಲಶಯನೆಚ್ಚರಾ ಕಳೆದು ಹೊರಿಯಲುದರಾ | ಬಿಡದೋಲೈಸಿ ಘನಮದರಾ | ಕಡಿಯಾ ಕಿಡಿಯಾ ನುಡಿಯಾ ಪಡಿಯಾ | ಬೇಡಿ ಕಾಡಿ ಓಡಿ ಆಡ ಬ್ಯಾಡ ಗಾಢ ಮೂಢನೇ 1 ತರಳ ಪ್ರಾಯ ಮುಪ್ಪಿಂದೆ ತೀರಲಾಯುಷ್ಯ ಬರುದೇ | ಯರಗುವಾಯಮ ತಾ ನಿಲದೇ | ತ್ವರಿಯಾ ಧರಿಯಾ ಕುರಯಾ ಮರಿಯಾ | ವೈರಿ ಮೀರಿ ಹಾರಿ ತೂರಿ ಹೊರುವಂದದಿ 2 ಮಿನಗು ಬೆಳಗ ಘನ ಮಹಿಪತಿ ಸುತ ಪ್ರಿಯನಾ | ಅನುಭದಿಸದಿಹುದೇನಾ | ಅನುವೇ ಮನವೇ ಗುಣವೇ ದನವೇ | ಜ್ಞಾನ ಹೀನ ಮಾನ ದೀನ ಆನನದಲೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರೆಯದೆ ಸಲಹೆನ್ನನು ಯಾದವಗಿರಿ- ದೊರೆ ಮಂಗರಾಯ ನೀನು ಸರ್ವಜೀವೋತ್ತಮನೆ ನಿನ್ನನು ಮರೆಯಹೊಕ್ಕೆನು ಮಾರುತಾತ್ಮಜ ಕರೆದು ಭಕÀುತರಿಗ್ವರವ ನೀಡುವೊ ಭಾರತೀಶ ಪ ಸೀತಾವಲ್ಲಭ ರಾಮರ ಪಾದಾಂಬುಜ ದೂತನೆಂದೆನಿಸಿದೆಯೊ ಮಾತೆಗಿಟ್ಟ ಮುದ್ರಿಕೆಯನು ಘಾತಕ ರಾವಣನ ಪುರಕೆ ಕಾರ್ತೀಕದುತ್ಸವ ಮಾಡಿ ಮಂಗ- ಳಾರ್ತಿ ಬೆಳಗಿದೆ ಬಾಲದಿಂದ 1 ಬಕ ಹಿಡಿಂಬಕ ಕೀಚಕ ಕಿಮ್ಮೀರ ಮಾಗಧ ಮುಖ್ಯ ಪ್ರಮುಖರನು ಸಕಲ ಅನುಜರ ಸಹಿತ ದುರ್ಯೋಧನನ ಪ್ರಾಣವ ಸೆಳೆದÀು ಬ್ಯಾಗನೆ ನಕುಲ ಧರ್ಮಜನಾ ಸಾದೇವ ದ್ರೌಪದಿಗೆ ಸುಖ ಸಂತೋಷ ನೀಡಿದೆ 2 ಮಧ್ಯಗೇಹರಲ್ಲಿ ಜನಿಸಿ ಸುಜನರಿಗೆ ಶುದ್ಧಶಾಸ್ತ್ರವ ಬೋಧಿಸಿ ಗೆದÀ್ದು ಮಾಯಾವಾದಿಗಳ ವಾದಪ್ರ- ಸಿದ್ಧನೆನಿಸಿದೆ ಮಧ್ವಮುನಿ ಮುದ್ದು ಭೀಮೇಶಕೃಷ್ಣನ ಪ್ರ- ಸಿದ್ಧಿ ಮಾಡಿದೆ ಪರಮ ಗುರುವೆ 3
--------------
ಹರಪನಹಳ್ಳಿಭೀಮವ್ವ
ಮರೆಯದೆ ಸಲಹೊ ಮಾರುತೀಶ ಎನ್ನ ಶರಣೆಂಬೆನು ನಿನ್ನ ಪ ಶರಣಾಗತರನು ಬಿಡದೆ ಪೊರೆವ ಫನ್ನ- ಗಿರಿ ಅಂಜನೆತನಯಅ.ಪ ವನನದಿಗಿರಿಗುಹೆಗಳಲಿ ನಿನ್ನ ರೂಪ ತೋರುವುದೈ ಭೂಪ ಶರಧಿ ಲಂಘಿಸಿ ರಾವಣನಿಗೆ ತಾಪ ಪುಟ್ಟಿಸಿದೆಯೊ ರಘುಪ- ನಡಿಗಳ ಬಿಡದೆ ಸೇವಿಸುವರ ಪಾಪ ಮಾಡುವಿ ನಿರ್ಲೇಪ ಸಡಗರದಲಿ ನಿನ್ನೊಡೆಯನ ತೋರಪ್ಪ ಘನಗಿರಿ ಹನುಮಪ್ಪ 1 ಊರಿನಲಿ ಊರ್ಹೊರಗು ನಿನ್ನ ಮೂರ್ತಿ ಎಷ್ಟ್ಹೇಳಲಿ ಕೀರ್ತಿ ಪಾಡುತ ಪೊಗಳ್ವರು ನಿನ್ನಯ ಸತ್ಕೀರ್ತಿ ವರ್ಣಿಸುವುದೆ ಅರ್ಥಿ ಪಾಮರನೊಮ್ಮೆ ಪಾಡಲು ನಿನ್ನ ವಾರ್ತೆ ಪರಿಹಾರವೋ ಭೀತಿ ನಾಡೊಳು ನಿನ್ನ ಭಜಿಸುವವರ ಸಂಗ ನೀಡು ಕೃಪಾಪಾಂಗ2 ಕಡಲ ಶಯನನ ಅಡಿಗಳ ಸೇವಿಸುತ ಕಡುಹರುಷವ ಪಡುತ ಬಿಡದೆ ನಿನ್ನಯ ಸೇವಕರಿವರೆನುತ ಶ್ರೀಶಗೆ ಪೇಳುತ್ತ ಕೊಡಿಸುವಿ ಮುಕ್ತಿಯ ಧೃಡಭಕ್ತರಿಗೆ ಸತತ ರಾಮರ ಸ್ಮರಿಸುತ್ತ ಕಮಲನಾಭ ವಿಠ್ಠಲನನು ಸೇವಿಸುತಭಕ್ತರ ಸಲಹುತ್ತ3
--------------
ನಿಡಗುರುಕಿ ಜೀವೂಬಾಯಿ
ಮರೆಯೊಕ್ಕೆ ನಿನ್ನನು ಮರುಗಿ ರಕ್ಷಿಸಬೇಕು ಶಂಕರೇಶಾಗಿರಿಜೆಯಾಣ್ಮನೆದೇವ ಕೆರೆಗೋಡಿಪುರದೀಶ ಶಂಕರೇಶಾ ಪಮರಳಿ ಮರಳಿ ಗರ್ಭಕುರುಳಿ ನಾನೊಂದೆನುಪರಿಪರಿ ಕರ್ಮದ ಫಲಗಳನುಣಲಾಗಿದುರಿತ ತೊಲಗದೀವರೆಗು ನಾನೇಗೈವೆಕರುಣಾರಸ ನಿನಗೇತಕುದಿಸದಿದೆ 1ಸೂತ್ರಧಾರಕ ನೀನು ಸಕಲಜೀವರಿಗೆಲ್ಲಪಾತ್ರ ಕೃಪೆಗೆ ನಾನು ಪ್ರೇಮದಿಂ ನೋಡಿನ್ನುಗೋತ್ರಾರಾತಿ ವಂದಿತ ಪಾದಕಮಲನೆಸ್ತೋತ್ರವ ಮಾಳ್ಪುದ ಮೊದಲೆ ನಾನರಿಯೆನು2ಮರತಿ ಪುಟ್ಟದು ನಾನಾವಿಧ ಭವಸುಖದಲಿವರೆತರಿತೆನೆನಿಸಿದ ಕರ್ಮದ ಬಲುಹಿನಿಂಬೆರೆತು ಬಯಲ ಮೋಹದಲಿ ಮೋಸಹೋದೆನುಕುರಿತು ಕಾಮ್ಯವ ಭಜಿಸಿದೆನೊ ನಿನ್ನನು3ಉರಿಗಣ್ಣ ದೃಷ್ಟಿಯಿಂ ದುರಿತವ ದಹಿಸಿನ್ನುವರಶಶಿನೇತ್ರದಿಂ ನೋಡಿ ತಾಪವ ಪರಿಹರಿದಶ್ವನೇತ್ರದಿ ಜ್ಞಾನವನರುಹಿಸುಶರಣಾಗತನಪರಾಧವನೆಣಿಸದೆ 4 ಪರಾಕು ಶಂಕರೇಶಾ5
--------------
ತಿಮ್ಮಪ್ಪದಾಸರು