ಒಟ್ಟು 15585 ಕಡೆಗಳಲ್ಲಿ , 137 ದಾಸರು , 6785 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುದಿಯ ನಿಗಮವ ಕೇಳು ತಂದೆ ಶ್ರೀ ಹರಿಯೆಹುದುಗಿಹವು ಮಂತ್ರಗಳು ಹೊರೆವೆ ನೀ ದೊರೆಯೆ ಪಮೂರು ವೇದಗಳಿಂದ ಮಾಡಿ ಕ್ರತುಗಳ ಜನರುಸೇರಿ ಭೂಸ್ವರ್ಗಗಳ ಸವಿದು ಭೋಗ್ಯಗಳಾಭೂರಿ ಜನ್ಮಗಳೆತ್ತಿ ಬಳಲುತಿರೆ ಜಗವನ್ನುತೋರಲೋಸ್ಕರ ಮಂತ್ರತತಿಗಳಿಹವಾಗಿ 1ಮಂತ್ರಂಗಳಲಿ ಸ್ವಾಮಿಮೂರ್ತಿವತ್ತಾಗುತಿರೆ ಯಂತ್ರ ಪೀಡಿತ ಜನರನೆತ್ತಿ ಬದುಕಿಸಲುತಂತ್ರವಿದ ಮಾಡಿದೆ ನೀ ತಂದೆ ಲೋಕಕ್ಕೆ ಸ್ವಾತಂತ್ರನಾಗಿಹನೆಂದು ತಿಳುಹಿಕೊಡೆ ದೇವ 2ಈ ರೀತಿಯಲಿ ನೀನು ಯಜ್ಞಕಧಿಪತಿಯಾಗಿಸೇರಿ ಮಂತ್ರಂಗಳಲಿ ಸದ್ರೂಪನೆನಿಸಿಕೋರಿದರ್ಥವ ಕೊಟ್ಟು ಕಾಯುತ್ತ ಸಂಸಾರಪಾರ ತಿರುಪತಿಯನ್ನು ಪಡೆದ ವೆಂಕಟಪತಿಯೆ 3ಓಂ ಮಧುರಾಕೃತಯೇ ನಮಃ
--------------
ತಿಮ್ಮಪ್ಪದಾಸರು
ತುಪಾಕಿ ಬಾರೊ ಮಾಡೊ ಮನುಜ ತುಪಾಕಿ ಬಾರೊ ಮಾಡೊ ಪ ತುಪಾಕಿ ಬಾರೊ ಮಾಡೊ ಸೊಬಗಿನಿಂದ ನೀ ಭುಜಗಶಯನ ಶ್ರೀಹರಿಯ ಧ್ಯಾನವೆಂಬ ಅ.ಪ ಚಿತ್ತಶುದ್ಧಿಯೆಂಬ ಮದ್ದು ತುಂಬಿ ಭರ್ತಿಮಾಡಿಕೊಳವೆಯ ಸತ್ಯಗುಣವೆಂಬ ಛಡಿ ಪಿಡಿ ದೊತ್ತಿ ಜಡಿಯೊ ಭಕ್ತಿ ಬಾಹ್ವಿನಿಂದ ಎತ್ತಿ ಸಾಮಥ್ರ್ಯದಿ ಮಿಥ್ಯದೇಹವನು ಹತ್ತಿ ಬೇಂಟೆನಾಡೊ 1 ಅಂಟಿಕೊಂಡು ಬರುವ ಬೇಗ ತಿಳಿ ಎಂಟು ಕೋಣನ ಸುಳಿವ ಗಂಟಲಕ್ಕೆ ಹಾರುತಿರುವ ಆರುಹುಲಿ ಬಂಟನಾಗಿ ತರಿಯೆಲವೊ ವೈ ಕುಂಠನ ಕೃಪೆಯೆಂಬ ಬಂಟಬಲವು ಕೂಡಿ ಬೇಂಟೆನಾಡೆಲೊ 2 ಮೂರುಮಂದಿರವ ಕಟ್ಟಿಕೊಂಡು ಧೀರನಾಗಿ ನಲಿಯೊ ಸಾರಿಬರುವ ಏಳು ಕೊಳ್ಳಗಳ ಹಾರಿ ಮುಂದಕೆ ನಡೆಯೊ ಘೋರ ದುರ್ಗುಣ ಮೃಗ ಸೂರೆಮಾಡಿ ಮಹಧೀರ ಶ್ರೀರಾಮನ ಚಾರುಚರಣ ಸೇರು 3
--------------
ರಾಮದಾಸರು
ತುಪಾಕಿ ಸಾಧನವನು ತ್ವರಿಯ ಬಿದ್ದು ಮಾಡುತಿರುವೆಶಾಬಾಸು ಶಿವನೇ ನೀನಣ್ಣ ಪೇಳುವೆನಣ್ಣ ಪ ಮೌನವೆಂದೆನಿಪ ಮುಸೈದೆ ಸಹಿತಾಗಿಜ್ಞಾನ ಪಡೆದಳವ ಬಗಿಯಣ್ಣಾ ಸಾಧಿಸು ಅಣ್ಣಧ್ಯಾನವೆಂದೆನಿಪ ತಲೆಕಟ್ಟನೆ ಕಟ್ಟಿಆನಂದವನೆ ಆಡಣ್ಣ ಸಾಧಿಸು ಅಣ್ಣ 1 ಆರು ಚಕ್ರವೆಂಬ ಆರು ಕಟ್ಟಿನ ತುಪಾಕಿಧೀರತನದಿಂದ ಪಿಡಿಯಣ್ಣಾ ಸಾಧಿಸು ಅಣ್ಣಮೂರಾವಸ್ಥೆಯೆಂಬ ಮೂವೆರಳ ಮದ್ದ ಹೊಯ್ದಪೂರಾಯದವನ ಮಾಡಣ್ಣ ಸಾಧಿಸು ಅಣ್ಣ2 ಇಡಾಪಿಂಗಳವೆಂಬ ಎರಡು ಗುಂಡನೆ ಹಾಕಿರೂಢಿ ಎಂಬ ಗಜವ ಜಡಿಯಣ್ಣ ಸಾಧಿಸು ಅಣ್ಣಕೂಡಿಹ ಸತ್ವನೆಂಬ ಕೂರಿ ರಂಜಕವರೆದುಗೂಡು ಗುರು ಜಾವಿಗೆ ಒತ್ತಣ್ಣ ಸಾಧಿಸು ಅಣ್ಣ 3 ಆಸನ ನಳಿಕೆಯೆಂಬ ಆಧಾರವನೆ ಆಂತುವಾಸರ ಹೊಗ್ಗೊಡಬೇಡಣ್ಣ ಸಾಧಿಸು ಅಣ್ಣನಾಸಿಕಾಗ್ರವು ಎಂಬ ನೊಣನ ದಿಟ್ಟಿಸಿ ನೋಡಿಸೂಸದೆ ಏರಿಸಿ ನಿಲ್ಲಣ್ಣ ಸಾಧಿಸು ಅಣ್ಣ4 ಬರಿಯ ಪ್ರಣವವೆ ಎಂಬ ಬೆರಳ ಬೊಬ್ಬೆಯನಿಟ್ಟುಭರದಿ ಭೀತಿಯನಳಿಯಣ್ಣಾ ಸಾಧಿಸು ಅಣ್ಣಗುರು ಚಿದಾನಂದನು ಎಂಬ ಗುರಿ ಭ್ರೂಮಧ್ಯವೆ ಇರೆಗುರಿಯ ತಾಗುವಂತೆ ಇಡಣ್ಣ ಸಾಧಿಸು ಅಣ್ಣ5
--------------
ಚಿದಾನಂದ ಅವಧೂತರು
ತುಂಬಿ ಬಂದಾಗ) ನಂಬಿದೆನೊ ಸ್ವಾಮಿ ನಂಬಿದೆನೊ ಪ. ಅಂಬುಜಾಕ್ಷ ಸ್ವಪ್ನದಿ ನೀ ತುಂಬಿದಾನಂದ ವಾರ್ತೆಯ ಅ.ಪ. ಈರೇಳು ಲೋಕದ ಜನಕೆ ಮೂರಾವಸ್ಥೆಗಳಲಿ ನೀನೆ ಪ್ರೇರೇಪಿಸುವನೆಂದು ವೇದ ಸಾರವಾಗಿದೆ ನಾರದಾದಿ ಸಕಲ ಮುನಿ ವೀರರೆಲ್ಲ ಸ್ವಪ್ನವು ನಿ- ಸ್ಸಾರವಲ್ಲವೆಂದು ಪೇಳ್ವಾಧಾರದಿಂದ ಭ್ರಮೆಯ ಬಿಟ್ಟು 1 ನಾನು ನನ್ನದೆಂಬ ಬಹು ಹೀನ ಮತಿಯ ಪೇಳ್ವ ನರಗೆ ತಾನಾಗಿ ಬಂದುಸುರಲನುಮಾನಕರವೆಂದು ಶ್ರೀನಿಕೇತನ ನಿನ್ನ ಚರಣ ಮಾನಿಯೆಂದು ಮನ್ನಿಸಿ ಸ್ವಪ್ನಾನುಸರಿಸಿ ಶುಭವ ಪೇಳಿ ದೀನಭಾವ ಕಳೆವಿಯೆಂದು 2 ಇಂದಿರೇಶ ಎನ್ನೊಳಿರುವ ಕುಂದನೊಂದನೆಣಿಸದೆ ಈ ಅಂದದಿಂದಲೆಂದೆಂದಿಗು ತಂದೆ ಕರುಣಿಸು ಸುಂದರಾಂಗ ಶೇಷಗಿರಿ ಮಂದಿರ ನಿನ್ನ ಪಾದಾರ ವಿಂದ ಭಕ್ತಿ ಇತ್ತು ನಿತ್ಯಾನಂದಗೊಳಿಸಿ ಸಲಹೊ ಬೇಗ 3
--------------
ತುಪಾಕಿ ವೆಂಕಟರಮಣಾಚಾರ್ಯ
ತುಂಬಿತು ಬೆಳೆದಿಂಗಳು-ಈ ವನದೊಳುತುಂಬಿತು ಬೆಳೆದಿಂಗಳು ಪ ತುಂಬಿತು ಬೆಳೆದಿಂಗಳೀವನದೊಳಗೆಲ್ಲಅಂಬುಜನಾಥನು ಬಾರ ಕಾಣಕ್ಕ ಅ.ಪ. ಮಾಗಿ ಹೋಗಿ ವಸಂತವು ಬರುತಿದೆಕೋಗಿಲೆ ತುಂಬಿಲ್ಲಿ ಕೂಗುತಿದೆಆಗಲೆ ಎಳೆಮಾವು ತಳಿರೇಳುತಲಿದೆನಾಗಶಯನ ಕೃಷ್ಣ ಬಾರ ಕಾಣಕ್ಕ1 ಕಟ್ಟಿದ್ದ ಬಿಳಿಯೆಲೆ ತೊಟ್ಟಾರುತಲಿದೆಪಟ್ಲ ಜಾಜಿಯ ಮೊಗ್ಗು ಅರಳುತಿದೆಬಟ್ಟೆ ಬಟ್ಟೆಲಿ ನೋಡಿ ಕಣ್ಣು ಝುಮ್ಮಿಟ್ಟಿತುಧಿಟ್ಟತನದ ರಂಗ ಬಾರ ಕಾಣಕ್ಕ 2 ಕಾದ ನೀರು ಎಲ್ಲ ಆರಿ ಹೋಗುತಲಿದೆಕಾಯ್ದ ಮಲ್ಲಿಗೆ ಹೂವು ಬಾಡುತಿದೆಮದನನ ಬಾಧೆಯು ಬಹಳವಾಗಿದೆ ಈಗಮದನನೈಯನು ಕೃಷ್ಣ ಬಾರ ಕಾಣಕ್ಕ3 ಅಡವಿಲಿ ಕೆರೆಕಟ್ಟೆ ಕುಡಿವೋರಿಲ್ಲದೆ ಬತ್ತಿನಡೆವೋರಿಲ್ಲದೆ ದಾರಿ ಹಸಗೆಟ್ಟಿತುಕಾಡಮಲ್ಲಿಗೆ ಹೂವ ಕುಯ್ದು ಮುಡಿವರಿಲ್ಲನೋಡದೆ ಎನ್ನ ಜೀವ ಹಸಗೆಟ್ಟಿತಮ್ಮ 4 ಹಾಸಿದ್ಹಾಸಿಗೆ ಮಂಚ ಹಸಗೆಟ್ಹೋಗುತಿದೆಪೂಸಿದ ಶ್ರೀಗಂಧ ಬೆವರುತಿದೆಲೇಸಾದ ನಮ್ಮೆದೆ ಮಿಂಚೇರುತಲಿದೆವಾಸುದೇವನು ಕೃಷ್ಣ ಬಾರಕಾಣಕ್ಕ 5 ಕಾಯ ಹೊಳವು ಮಾಡಿ ಕುಚವ ಸೋರೆಯಮಾಡಿಮನವೆಂಬ ತಂತಿಯ ಹೂಡಿಕೊಂಡುಎರಡು ಕಂಗಳನ್ನು ಎರಡು ತಾಳವÀ ಮಾಡಿಮೇಳಕೊಪ್ಪುವೆ ರಂಗ ಬಾರ ಕಾಣಕ್ಕ6 ಒಳದೊಡೆ ನಡುಗಿತೆ, ನೆರಿಯು ಹಾರುತಲಿವೆಕಳಕಳಿಸುತಲಿದೆ ಕಳವಳವುಪುಳಕವಾಗುತಲಿದೆ ಕಳೆಯುಗುಂದುತಲಿದೆನಳಿನಾಭನು ಕೃಷ್ಣ ಬಾರ ಕಾಣಕ್ಕ7
--------------
ವ್ಯಾಸರಾಯರು
ತುರು ಮನವಾರ್ತೆಯಹರಿಬಲೆಯೊಳುಬಿದ್ದು ಹಲುಗಿರಿವುದ ನೋಡಿಪರಮವೈರಾಗ್ಯ ಖಡ್ಗದಿ ಮೋಹ ಪಾಶವಪರಿದು ಜ್ಞಾನಾಮೃತ ಪಾನಗೈಯೆಂದೆನು 1ಪರಧನವನು ಕಳಬೇಡ ಕೊಲ್ಲುವರೆಂದುವರದರು 'ುೀರಿಕದ್ದೊಡನೆ ಕೊಳದಿ ಸಿಕ್ಕಿಕೊರಗುತೆಲ್ಲರಿಗೆ ಪಲ್ಗಿರಿವಂತೆ ಬಯಲಿಗೆಬೆರತು ನೀ ಮುಂಗೆಡಬೇಡೆಂದು ಪೇಳಿದೆ 2ತಿರಿದುಂಬ ಪಾಪಿಗೆ ತುಪ್ಪ ಸಕ್ಕರೆ ಪಾಲುಬೆರೆದ ಮೃಷ್ಟಾನ್ನ ತಾ ಬರೆ ಸುಖದಿಂದುಂಡುುರದನ್ಯರೆಂಜಲಿಗೆರಗುವಂದದಿ ಪೂರ್ವದಿರವ ಬಯಸಿ ನೀನೀತೆರದಲಿ ಕೆ[ಡದೆ] 3ಹರಿಸ್ಮರಣೆಯ ಮಾಡು ಹರಿಕಥೆಗಳ ಕೇಳುಹರಿಯನರ್ಚಿಸಿ ನೋಡಿ ಹರುಷದಿಂ ಕುಣಿದಾಡುಹರಿ ಸರ್ವೋತ್ತಮನೆಂದು ಹಸನಾಗಿ ಬಾಳುವೆ'ರಿಯರೊಪ್ಪುವ ಮಾರ್ಗ 'ೀಗಿರು ನೀನೆಂದೆ 4ದೂಸುವವನಿಂದ ದೋಷ ಪೋಪುದು ನಿನ್ನಪೋಸುವವನಿಗೆ ಪುಣ್ಯ ಕೈಸಾರ್ವುದುರೋಷ ಹರ್ಷಗಳ ದೂರದಿ ಬಿಟ್ಟುಶ್ರೀಹರಿದಾಸರ ದಾಸರದಾಸ ನೀನಾಗೆಂದೆ 5ಶ್ರವಣಸುಧಾಪಾನ ರುಚಿಯ ಕಂಡರೆ ನೀನುಭವದುಃಖವೆಂಬ ಬಾಡಿದಗಂಜಿಗುಡಿವೆಯಾಸು'ವೇಕತನ ತಾನು ಸುಮ್ಮನೆ ದೊರೆವದೆಅ'ವೇಕತನವ ಬಿಟ್ಟಾನಂದಬಡುಯೆಂದೆ 6ಸಾರಿಗೆ ಸಾರಿಗೆ ಸಾರಿದರೆಯು ನಿನ್ನದಾರಿಯ ಬಿಡೆಯಲ್ಲ ದುಕ್ಕ ತೊಲಗದಲ್ಲಹೊರಲಾರೆನು ನಿನ್ನ ಹತ್ತಿರೆ 'ಧಿ ನನ್ನಸೇರಿಸಿ ಪೇಳಿದೆ ಸುಖಿಯಾಗಿ ಬಾಳೆಂದು 7ಸಾರಿದೆ ಸಾರಿದೆ ಕೆಡಬೇಡ ಭವಸುಖಹಾರುವದಿದು ನಿಜವಲ್ಲ ಸನ್ಮುಕ್ತಿಗೆದಾರಿಗೊಡದು ಸತ್ಸಂಗವ ಮಾಡಿ 'ಚಾರಿಸಿ ನಿನ್ನ ನೀ ಸುಖಮಯನಾಗೆಂದೆ8ಆಶೆಯ ಬಿಡಲೊಲ್ಲೆ ಆನಂದಬಡಲೊಲ್ಲೆಪೊಸದೆ 'ಷಯದ ಪೇರಡ'ಯೊಳಗೆಮೋಸಗೈವಳು ಮೃತ್ಯುವದರಿಂದ ಶ್ರೀಹರಿದಾಸರ ಜೊತೆಯ ಬಿಟ್ಟೊರ್ವ ಪೋಗದಿರೆಂದೆ 9ಬಲ್ಲೆಯ ಬಲ್ಲೆಯ ಗುರುಪದ ಸೇವೆಗೆಬಲ್ಲೆಯ ಬಲ್ಲೆಯ ಹರಿಕಥೆಗೇಳ್ಪರೆಬಲ್ಲೆಯ ಬಲ್ಲೆಯ ಹರಿನಾಮ ಸ್ಮರಣೆಯಕೊಲ್ಲುವೆ ಸಟೆಯಲ್ಲಿ ಕೇಳು ನೀ ನೀ ಮೇಲು 10ಗುರುಕರುಣವದೆಂಬ ಘಾಳಿ ಬೀಸಲಿ ತಾಳುತರಗೆಲೆಯಂತ್ತೆತ್ತಿ ತಂದು ಜ್ಞಾನಾಗ್ನಿಯೊಳ್‍ಉರು' ನಿನ್ನಯರೂಪನಡಗಿಸದಿಪ್ಪೆನೆವರಟು ಮಂಡೆಯದೆ ನಿನ್ನೊಡನೇಕೆ ಹಾರಲಿ 11ಬರಡು ಮನದೊಳೆ ಬರಿಜಗಳ'ದೆಂದುಗುರುವಾಸುದೇವಾರ್ಯ ಗುಪಿತದಿಂ ಚಿಕನಾಗಪುರದಿ ಜ್ಞಾನಾಮೃತಪಾನ ಗೈಸಿದುದರಿಂಬೆರೆದೆನಾತನೊಳು ನೀನಿರು ಪೋಗು ಬಯಲಾಗು 12
--------------
ವೆಂಕಟದಾಸರು
ತುರುಕರಿಲ್ಲದ ಊರೊಳು ಇರಬಾರದು ಪ ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ ಅ.ಪ. ತುರುಕರು ಕರೆದರೆ ಉಣಬಹುದು ಉಡಬಹುದುತುರುಕರಿಂದಲಿ ಜಗಕೆ ಪರಮ ಸೌಖ್ಯಾ ||ತುರುಕರ ಸೇವೆ ಮಾಡಿದ ಮಾನವೋತ್ತಮನುಎರಡೊಂದು ಋಣದಿಂದ ಮುಕ್ತನಾಹಾ 1 ತುರುಕರಾ ನಿಂದಕನು ಪರಮ ದುಃಖಿಯು ಸಿದ್ಧತುರುಕರ ಅರ್ಚಿಸಿದವಗೆ ಪರಮ ಪದವೀ ||ತುರುಕರಿಗೆ ಗ್ರಾಸವಿತ್ತವನ ಫಲಕೆಲ್ಲು ಸರಿಗಾಣೆಸರಿಗಾಣೆ ಧರೆಯೋಳು ಅವನೆ ಧನ್ಯಾ 2 ಪತಿ ಬೈಗು ಬೆಳಗೂ ||ತುರುಕರಾ ಪಾಲ ಶ್ರೀ ಗೋಪಾಲಕೃಷ್ಣನ್ನಸ್ಮರಣೆ ಮಾಡುತಲಿರೆ ಮೋಹನ್ನ ವಿಠಲ ಒಲಿವಾ 3
--------------
ಮೋಹನದಾಸರು
ತುರುಗಾಯ ಬಂದ ಗೋಪಿಯ ಕಂದಆನಂದದಿಂದ ಪ ಮೃಗ ಜಲಚರ ಮೋಹಿಸೆತರಳೇರ ಮನ ಸೂರೆಯಾಗೆ ಕೊಳಲಿನಿಂದ ಅ.ಪ. ತಂದೆಯ ಕಂದನೆಂದು ಕೊಂಕುಳೊಳಿಟ್ಟುಕಂದನ ಕೆಳಗಿಟ್ಟುಅಂದಿಗೆ ಗೆಜ್ಜೆ ಕಿವಿಗಳಿಗಿಟ್ಟುಮುತ್ತಿನ ಬಟ್ಟುಹೊಂದಿಸಿ ಗಲ್ಲದಲ್ಲಿ ತಾನಿಟ್ಟುಕಸ್ತೂರಿಯ ಬಟ್ಟುಮುಂದಾಗಿ ಮೂಗಿನ ಮೇಲಳವಟ್ಟುಮನೆಬಾಗಿಲ ಬಿಟ್ಟುಕಂದರ್ಪನ ಶರದಿಂದ ನೊಂದು ಬಹುಕಂದಿ ಕುಂದುತಲಿಂದುವದನೆಯರುಇಂದಿರೇಶನಾನಂದದ ಗಾನಕೆಚಂದ್ರಮುಖಿಯರೊಂದಾಗುತ ಬರುತಿರೆ 1 ಮುರಳಿಯ ಸ್ವರಕೆ ಮೋಹಿತರಾಗೆಕರುಗಳನು ತಂದುಕರದಿಂದಲೆತ್ತಿ ತೊಟ್ಟಿಲೊಳಗೆಇರಿಸುತ್ತ ಹಾಲಬೆರಸುತ್ತ ಮಜ್ಜಿಗೆ ಮೊಸರಿನೊಳಗೆಪರಮಾತ್ಮನ ನೆನೆದುಹೊರಟರು ಬಿಸಿಲು ಚಳಿ ಮಳೆಯೊಳಗೆಮನೆಮನೆಯೊಳಗೆತರಳರ ಬೆದರಿಸಿ ಮಾರ್ಜಾಲಕೆ ಮೊಲೆತ್ವರಿತದಿ ಉಣಿಸುತ ಸರಿಸರಿಯೆನುತಲಿಪರಿಪರಿ ಭ್ರಾಂತರಾಗಿ ನೋಡುತಪುರಮಾರ್ಗಕೆ ಬರುವರು ನಿರುಕಿಸುತ 2 ಮದನ ಶತಕೋಟಿ ತೇಜನು ಬಂದಸ್ತ್ರೀರೆದುರಲಿ ನಿಂದಅಧರಾಮೃತ ಪಾನವ ಮಾಡಿರೆಂದಬಾಯಾರಿದಿರೆಂದಬದಿಯಲ್ಲಿ ಬಂದು ಕುಳ್ಳಿರಿಯೆಂದಅವರಿರವನೆ ನೋಡ್ದಚದುರೇರ ಮೋಹಕನೆ ನಾನೆಂದವಾದ್ಯದ ರವದಿಂದಸದಯನೆದುರ ರಂಭೆ ಊರ್ವಶಿ ಮೇನಕೆಒದಗಿ ನಾಟ್ಯಗಳ ಚದುರತನದಲಾಡೆಮಧುಸೂದನ ಭಕ್ತರ ಕಾಯ್ವುದಕೀವಿಧದೊಳಗಾಡಿದ ರಂಗವಿಠಲ ತಾ 3
--------------
ಶ್ರೀಪಾದರಾಜರು
ತುಳಸಮ್ಮ ಎನಗೊಲಿಯಮ್ಮ ವಿಲಸಿತವಿಮಲೆ ನೀ ಕಲ್ಯಾಣಮಾಡೆನಗೆ ಪ ನಿಲಯನಿಲಯದಲಿ ನಿಂದು ಭಕ್ತ ಕುಲವನುದ್ಧರಿಸಿದಿ ಇಂದುಮುಖಿ ಮಲಿನಹರಣೆ ದಯಸಿಂಧು ಅಹ ಕುಲವನುದ್ಧರಿಸೆನ್ನ ಹೊಲೆಯ ಬವಣೆಯಲಿ ಕಳವಳಪಡಿಸದೆ ಸಲಹು ಬೇಗೆನ್ನಮ್ಮ 1 ಭಯದೂರೆ ಜಯಕಾರೆ ಜಗಕೆ ಲೋಕ ತ್ರಯದ ಜನನಿ ಎನ್ನ ಮನಕೆ ಬೇಗ ಜಯವ ನೀಡಿ ಮಾಡು ಜೋಕೆ ಅಹ ರಮೆ ದಯಯುತೆ ನಿನ್ನ ದಯದಿ ಬೇಡುವೆನವ್ವ ಭವಭವದಲಿ ಎನ್ನ ಜಯವ ಪೊಂದಿಸಿ ತಾಯಿ 2 ಜಲಜನಾಭನ ಮೋಹಮಾಲೆ ನೀನು ಬಲು ದಯಾನ್ವಿತಭಕ್ತ ಶೀಲೆ ಎನ್ನ ಗಳವೆ ಪೊಗಳಲು ನಿನ್ನ ಲೀಲೆ ಆಹ ಚೆಲುವ ಶ್ರೀರಾಮನ ಕೂಡಿಕೊಂಡೆನ್ನೊಳು ನೆಲೆಗೊಳ್ಳು ಬಿಡದೆ ವರ ಫಲ ಪ್ರದಾಯಿನಿ 3
--------------
ರಾಮದಾಸರು
ತುಳಸಿ ತುಳಸಿ ಪೂಜೆ ಮಾಡಿ ಹರಿ ಪ್ರೇಮದ ಪ. ಹಳದಿ ಕುಂಕುಮ ಪರಿಮಳದ ಗಂಧದಿ ಅಂಗಳದಿ ಶೋಭಿಪ ಹರಿಸತಿ ಅ.ಪ. ಆದಿಯಲಿ ತಾ ಮೋದದಿಂದಲೆ ಮಾಧವ ಪ್ರಿಯೆಯನು ದ್ರೌಪದಿ ಪೂಜಿಸೆ ಮೋದದಿಂದಕ್ಷಯ ಪಾತ್ರೆಯೊಳ್ ಪಾಕವ ಸತಿ ತುಳಸಿ 1 ಪರಿಪರಿ ಭಾಗ್ಯಕೆ ಹಿರಿಮೆ ಶ್ರೀ ತುಳಸಿ ಯೆಂ ದರುಹಿದ ನಾರದ ವರ ವಚನವು ಎಂದು ಪರಮಾದರದೊಳು ಪೂಜಿಸಿ ತುಳಸಿಯ ಹರಿಗೆ ಅರ್ಪಿಸೆ ಹರುಷವ ಕೊಡುವ 2 ಉದಯ ಕಾಲದಿ ಮುದದಿ ಪೂಜಿಸಿ ಮಧುರ ಸ್ವರದಿ ಮಾಘದ ಮಾಸದಲಿ ಮುದದಲೊಂದಿಸೆ ವದಗಿದಾಪತ್ತನು ಚದರಿಸಿ ಕಳೆದು ಶ್ರೀ ಶ್ರೀನಿವಾಸನ ಮುದದಿ ತೋರುವ ಶ್ರೀ ತುಳಸಿ 3
--------------
ಸರಸ್ವತಿ ಬಾಯಿ
ತುಳಸಿ ದೇವಿ ನಮಿಸಿ ಬೇಡುವೇ | ನಿಮ್ಮ ಪಾದಒಲುಮೆಯಿಂದ ಭಜಿಸಿ ಪಾಡುವೇ ಪ ತಾಪ ಅ.ಪ. ಹರಿಯ ನಯನಧಾರೆ ಸಂಭವೇ | ಕಾಯೆ ತಾಯಿಸಿರಿಯ ರಮಣ ನಮಿತ ಪ್ರೀಯಳೇ ||ವರ ಸುವರ್ಣ ಪುಷ್ಪವಮಿತ | ಎರ5Àಮಿಸಿ ಬೇಡಿದಾರುಹರಿಯು ಒಪ್ಪ ನಿಮ್ಮದಳ | ವಿರಹಿತವಾದ ಪೂಜೆಯನ್ನ 1 ಸರಸಿಜಾಕ್ಷಿ ನಿನ್ನ ಮೃತ್ತಿಕಾ | ಫಾಲದಲ್ಲಿಧರಿಸುವರ ಅಘಕೆ ಪಾವಕಾ ||ಕರಣ ತೀರ್ಥಾದಿಗ¼5 | ವರದಳಗಳ್ ದ್ವಿನವಗಳನ್ನಧರಿಪ ಜನರ ಭಿ್ಟ5ವಿತ್ತು | ಘೋರ ಪಾಪವನ್ನು ಕಳೆವೆ 2 ಸುಜನ ತ್ರಿವಿಧ ತಾಪ 3
--------------
ಗುರುಗೋವಿಂದವಿಠಲರು
ತುಳಸಿದೇವಿ ಪದಕೇ | ನಾರೇರು | ಬೆಳಗಿರಿ ಆರುತಿಯಾ ಪ ಬೆಳಗುವುದೂ ನಮ್ಮ | ಅಳಗಿರಿ ರಂಗನಲಲನೆ ಶ್ರೀ ತುಳಸಿಗೆ | ಕಲಿಮಲ ಹಾಗೆ ಅ.ಪ. ದಳಪ್ರತಿ ದಳದಲ್ಲಿ | ಶ್ರೀಹರಿ | ನೆಲಸಿಹ ತಾನಲ್ಲಿಒಲಿಮೆಲಿ ಭಕುತರ | ಹಲವು ಸೇವೆಗಳಿಗೊಲಿದು ಅಭೀಷ್ಟವ | ಸಲಿಸುವ ದೇವಿಗೆ 1 ಅಮೃತ | ಕಲಶವ | ಧರಿಸುತ ಧನ್ವಂತ್ರಿಬರಲು ನಯನದಿಂ | ಮರುಳೆ ಆನಂದಕೆವರ ಬಿಂದೋದ್ಭವೆ | ಹರಿ ಪ್ರಿಯೆ ತುಳಸೀ 2 ಇಂಬು ತೋರಿ ಇರಲುಅಂಬುಜಾಕ್ಷ | ಗುರು ಗೋವಿಂದ ವಿಠಲನ |ತುಂಬಿ ದ್ವೈಭವದಿ | ಸಂಭ್ರಮ ಸೇವಿಪ 3
--------------
ಗುರುಗೋವಿಂದವಿಠಲರು
ತುಳಸಿಯ ಸೇವಿಸಿ ಪ ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆ ಯೆಂಬನಿತರೊಳು ಮಾಡುವಳು ಯಾತಕನುಮಾನವಯ್ಯ ಅ.ಪ. ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ | ಪದುವನಾಭನು ತಾನು ಉದುಭವಿಸಿ ಬರಲಂದು | ಉದಕವುತ್ಸಹದಿಂದಲದೆ ತುಳಸಿ ನಾಮನಾಗೆ || ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು | ಒದಗಿ ಸುಜನರು ತಮ್ಮ ಸದನದಲಿ ನಿತ್ಯ ತಿಳಿದು ವೃಂದಾವನ ರಚಿಸಿದರೈಯ1 ಮೂಲದಲಿ ಸರ್ವ ತೀರ್ಥಗಳುಂಟು ತನ್ಮದ್ಯೆ | ಕಾಲ ಮೀರದೆ ಸರ್ವ ನದನದಿಗಳಮರಗಣ | ಮೂರತಿಯು ವಾಲಯವಾಗಿಪ್ಪುದು || ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು | ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ | ಧರಿಸಿದ ಮನುಜ ಕಾಲನಾಳಿಗೆ ಶೂಲನೊ2 ಉದಯದೊಳಗೆದ್ದು ನೀರೆರೆದು ಮಜ್ಜನಗೈದು | ತುದಿ ಬೆರಳಿನಿಂದ ಮೃತ್ತಿಕೆಯ ಫಣಿಯೊಳಗಿಟ್ಟು | ತದನಂತರದಲಿ ಭಜನೆ || ವದನದೊಳು ಗೈಯೆ ಧರೆಯೊಳಗಿದ್ದ ಸರ್ವವದ | ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ | ಜನ್ಮಗಳಘವ ತುದಿ ಮೊದಲು ದಹಿಪುದಯ್ಯ3 ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ | ಆವವನ ಮನೆಯಲ್ಲಿ ಹರಿದಾಸರಾ ಕೂಟ | ಪಾವಮಾನಿಯ ಮತದೊಳು || ಆವವನು ಕಾಂತ್ರಯವ ಕಳೆವ ನಾವಲ್ಲಿ | ವಾಸುದೇವ ಮುನಿ ದೇವಾದಿಗಣ ಸಹಿತ | ಭಾವಿಸಿರಿ ಭಾವಙ್ಞರು 4 ಕಂಡರೆ ದುರಿತಕ್ಕೆ ಕೆಂಡವನು ಬೀರುವುದು | ಕೊಂಡಾಡಿದರೆ ಪುಣ್ಯವ ಪರಿಮಿತವುಂಟು ಮೈ-| ಜನನವಿಲ್ಲ ಸಲೆ ದಂಡ ವಿಟ್ಟವ ಮುಕ್ತನೊ || ಚಂಡಾಲ ಕೇರಿಯೊಳು ಇರಲು ಹೀನಯವಲ್ಲ | ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು | ಯೋಗ್ಯ ಫಲ ಕಂಡವರಿಗುಂಟೆ ಅಯ್ಯ5 ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ | ಸ್ತೋತ್ರವನೆ ಮಾಡುತ್ತ ದಿವ್ಯಾವಾಗಿಹ ತ್ರಿದೊಳ | ತುಂಬಿ ವಿತ್ತಾದಿಯಲಿ ತಾರದೆ || ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ | ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ - | ತರಬೇಕು ಹೊತ್ತು ಮೀರಿಸಲಾಗದೊ6 ಕವಿ ಮಂಗಳವಾರ ವೈಥೃತಿ ವ್ಯತೀಪಾತ ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ ಇವುಗಳಲಿ ತೆಗೆಯಾದಿರಿ ನವವಸನ ಪೊದ್ದು ಊಟವ ಮಾಡಿ ತಾಂಬೂಲ- ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ ಕೊಂಡಾಡುತಿರಿ ದಿವಸಗಳೊಳಯ್ಯ 7 ದಳವಿದ್ದರೇ ವಳಿತು ಇಲ್ಲದಿದ್ದರೆ ಕಾಷ್ಟ ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು ತೊಳೆ ತೊಳೆದು ಏರಿಸಲಿಬಹುದು ತುಳಸಿ ಒಣಗಿದ್ದರೂ ಲೇಶದೋಷಗಳಲ್ಲಿ ತುಳಸಿ ವಿರಹಿತವಾದ ಪೂಜೆಯದು ಸಲ್ಲದು ಮಾಡಿ ಜಲಜಾಕ್ಷನರ್ಚಿಸಿರೈಯ್ಯ 8 ಸದನ ಹೊಲೆಮಾದಿಗರ ಸದನ ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ ವ್ಯರ್ಥ ತುಳಸಿ ಬಲು ಪ್ರಾಧಾನ್ಯವೊ ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ ನೆಲೆಯ ನಾ ಕಾಣೆನಯ್ಯ9 ಸತಿ ಪ್ರಹ್ಲಾದ ನಾರದ ವಿಭೀಷಣನು ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು ವಿವರವನು ತಿಳಿದರ್ಚಿಸಿ ತವಕದಿಂ ತಂತಮ್ಮ ಘನ ಪದವನೈದಿದರು ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು ನೀಗಿ ಭವದೊರರಾದರೈಯ 10 ಉದಯಕಾಲದೊಳೆದ್ದು ಆವನಾದರು ತನ್ನ ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ ಸ್ತೋತ್ರಮಾಡಿದ ಕ್ಷಣಕೆ ಮದ ಗರ್ವ ಪರಿಹಾರವೊ ಇದೆ ತುಳಸಿ ಸೇವಿಸಲು ಪೂರ್ವದ ಕಾವೇರಿ ನದಿಯ ತೀರದಲೊಬ್ಬ ಭೂಸುರ ಪದಕೆÉ ವ್ಯೋವ ಸಿರಿ ಪ್ರಿಯಳಾದ ಮದನತೇಜಳ ಭಜಿಸಿರೈದು 11
--------------
ವಿಜಯದಾಸ
ತೆರಳಿ ಪೋದರು ದಿವ್ಯ ನರಹರಿಯ ಪುರಕೆ ಶ್ರೀ ವರತಂದೆ ಮುದ್ದುಮೋಹನರೂ ಪ. ಕರಿಗಿರಿ ಕ್ಷೇತ್ರದಲಿ ತೊರದು ಭೌತಿಕ ದೇಹ ಪರಮ ಉಲ್ಲಾಸದಿಂದಾ ನಂದಾ ಅ. ಪರಿಪರೀ ಪೂಜಿಸಿದ ಪರಮ ಭಕ್ತರಿಗೆ ತಾವ್ ತೆರಳುವೋಪರಿ ತಿಳಿಸದೇ ಪರಮ ಕರುಣಾಳು ಹೆಂಗರುಳಿನಾ ಖಣಿ ಎಂಬ ತೆರವೆಲ್ಲರಿಗೆ ಮರೆಸದೇ ಪರಮಸುಜ್ಞಾನಿಯಾದಂಥ ಶಿಷ್ಯರಾ ಕರೆಸಿ ಅಗಲಿಸಿಕೊಳ್ಳದೇ ಪರಮ ಸಾಧ್ವೀಪತ್ನಿ ವರ ಪುತ್ರರಿರುತಿರಲು ಕಿರಿಶಿಷ್ಯನೊಬ್ಬನೆದುರೊಳ್ | ಜವದೊಳ್ 1 ಎಂಭತ್ತು ಮೇಲೆರಡು ವತ್ಸರವು ಧರಣಿಯೊಳು ಸಂಭ್ರಮದಿ ಧೃಡ ಕಾಯದೀ ತುಂಬಿ ತತ್ವಾಮೃತವು ಸುಜನರಾ ಹೃದಯದಲಿ ಕುಂಭಿಣಿಯೋಳ್ ದಾಸತ್ವದೀ ನಂಬಿಕೆಗಳಿತ್ತು ಸುಜ್ಞಾನಿಗಳಿಗಂಕಿತವು ಅಂಬುಜಾಕ್ಷನ ನಾಮದೀ ಒಂಭತ್ತು ವರ್ಷದಿಂ ಬೆಂಬಿಡದೆ ಕಾಯ್ದೆನ್ನ ಕುಂಭಿನಿಯ ತೊರೆದು ಈಗಾ | ಬೇಗಾ 2 ಶಾಲಿಶಕ ಸಾಹಸ್ರ ಅಷ್ಟ ಶತ ಅರವತ್ತು ಮೇಲೆರಡು ವಿಕ್ರಮದಲೀ ಕಾಲ ಮಧ್ಯಾಹ್ನ ಚೈತ್ರದ ಶುದ್ಧ ಶ್ರೀ ರಾಮ ನವಮಿ ಭೌಮವಾಸರದಲಿ ಆಲಿಸುತ ದಿವ್ಯ ಮಂತ್ರ ಶ್ರವಣ ಕೀರ್ತನವ ಶೀಲ ಶ್ರೀ ಗೋಪಾಲಕೃಷ್ಣವಿಠಲನ ಪುರಕೆ ಆಯಾಸಗೊಳದೆ ಮುದದೀ ತ್ವರದೀ 3
--------------
ಅಂಬಾಬಾಯಿ
ತೆರಳಿದರು ವಿಜಯರಾಯರು ವಿಜಯ ವಿಠಲನ ಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ಪ ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕ ರವು ಗುರುವಾರ ಪ್ರಥಮ ಯಾಮದೀ ಪವನಾಂತರಾತ್ಮಕ ಶ್ರೀ ಹರಿಯ ದರ್ಶನೋ ತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ 1 ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪ ಗಿರಿಯೆಂಬ ಗ್ರಾಮದಿ ವಿಬುಧರ ಮುಖದಿ ಭಾಗವತ ಬ್ರಹ್ಮಸೂತ್ರ ಭಾರತ ಗೀತ ಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಲಿ 2 ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರ ನಿಕರಗಳ ಕವನ ರೂಪದಲ್ಲಿ ರಚಿಸಿ ಭಕತರಿಗೆ ಸನ್ಮಾರ್ಗ ತೋರಿ ಸಂತೋಷದಲಿ ವಿಖನಸಾರ್ಚಿತ ಜಗನ್ನಾಥ ವಿಠಲನ ಪದಕೆ 3
--------------
ಜಗನ್ನಾಥದಾಸರು