ಒಟ್ಟು 3520 ಕಡೆಗಳಲ್ಲಿ , 121 ದಾಸರು , 2542 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೋಹಮೆಂದು ಸುಖಿಸು ವಿಗತ ಮೋಹದಿಂದ ಸಂತತಂದೇಹ ದೇಹದೊಳಗೆ ತೋರ್ಪನೀ ಹಿತಾತ್ಮನೀತ ಪರಮ ಪಘನದ ರತುನಮಂಟಪವನು ಶುನಕವೇರಿ ತನ್ನ ನೆಳಲಕನಲಿ ನೋಡಿ ಗಳಹಿ ತಾನಿದೆಂಬುದರಿಯದೆಮನದೊಳನ್ನವೆಂದು ಭ್ರಮಿಸಿ ಮತ್ತೆ ಕಡಿಯಲದರೊಳೊಡದು*ನೆನೆವ ತನ್ನ ರಕುತವನ್ನು ಸವಿವ ರೀತಿಯಲಿವಿನುತ ಜೀವ ತನ್ನ ಛಾಯೆಯನು ಸಮಸ್ತರೊಳಗೆ ನೋಡಿನೆನೆದಿದನ್ಯವೆನುತ ಭ್ರಾಂತನಾಗಿ ಮಾಯೆುಂದನುಭವಿಸುವೆನಿದನಿದೊಲ್ಲೆನೆನುತ ಭೇದ ಬುದ್ಧಿುಂದಮನುಮಥಾಗ್ನಿುಂದ ಬೆಂದು ಮನದಲಿದ್ದ ಕಾರಣಂ 1ನರರು ಗಜವ ಪಿಡಿಯೆ ಕಪ್ಪ ಕೊರವುತದರ ನಡುವೆ ತಿಟ್ಟನಿರಿಸಿ ಕಣ್ಣಿಯಲ್ಲಿ ಕಟ್ಟಿಯದರ ಸುತ್ತಲೂನೆರಹಿ ಕಾಷ್ಠ ಮೃತ್ತುಗಳನು ನಿಜದಪ್ಪಿರಮಾಡೆ ಭ್ರಮಿಸಿಕರಿಣಿಗಾಗಿ ಬಂದು ಗಜವು ಮರೆದು ಬಿದ್ದ ರೀತಿುಂದುರೆ ವಿರಿಂಚಿ ಕೂಪ ಸಾಮ್ಯವಾದ ನರಶರೀರಮಂಮರೆಸಲದರ ಮೇಲೆ ಚರ್ಮವೆನಿಪ ಮಾಯೆುಂದ ನರರುಮರೆತು ತಾವಿದೆನ್ನುತದರಲಿದ್ದ ಕಾರಣಂ 2ಮರೆದು ತನ್ನ ತಾಣವನ್ನು ಮೆರೆದುಲಂಘಿಸುತಲಿ ಭೇಕವಿರಲು ಹೊಂಚಿ ಪಿಡಿದು ಪಾವು ಪಿರಿದು ದೇಹಮಂನೆರೆದು ನುಂಗಲಾರದಿರುತಲಿರಲು ಭೇಕ ತನ್ನ ಹಸಿವಿಗಿರದೆ ಬಾಯ ತೆಗೆದು ನೊಣನನರಸಿ ಪಿಡಿವ ರೀತಿುಂನರರು ತಮ್ಮ ಕಾಲಸರ್ಪ ಉರುಬಲದನು ಮರೆತು ಭೋಗಪರತೆುಂದ ಕಾಮರೋಷ ವಿರಸರಾಗುತಿರಲು ನೀನರಿದನಿತ್ಯವೆಲ್ಲವೆಂದು ಮೆರೆದು ಗೋಪಾಲಾರ್ಯ ಪದವನೆರೆದು* ಭಕತಿುಂದ ನೋಡಿ ಪಾಡಿ ಹರುಷದಿಂದ ನೀ 3
--------------
ಗೋಪಾಲಾರ್ಯರು
ಸ್ಮರಿಸಿ ಬೇಡುವೆನು ನಾ ಹೇ ಗುರು ಸಾರ್ವಭೌಮಾ ಪ ನಿರುತ ನೀ ಪೊರೆ ಎನ್ನ ವಾದಿಗಜಸಿಂಹ ಅ.ಪ. ದಿತಿಸುತಗೆ ಸುತನೆನಿಸಿ | ಅತಿಮುದದಿ ಸುರಮುನಿಯ ಮತ ಹಿಡಿದು ಹರಿಯ ಮಹಿಮೆ ಪಿತಗೆ ಪೇಳಿ ಪತಿಯ ಸ್ತಂಭದಿ ಕರೆದ ಪ್ರಹ್ಲಾದ ರಾಜ 1 ಬಾಲ್ಯದಲಿ ಯತಿಯಾಗಿ ಲೀಲೆಯಿಂದಲಿ | ಭೂಮಿ ಪಾಲಗೊದಗಿರ್ದ ಕುಹು ಯೋಗ ಬಿಡಿಸಿ ಖೂಳ ಮಾಯಳ ಜಯಿಸಿ ಚಂದ್ರಿಕಾ ಗ್ರಂಥವನು ಪೇಳಿ ಹರಿಪೀಠವೇರಿದ ವ್ಯಾಸರಾಜ 2 ಕಾಮರಿಪುನುತ ಮೂಲರಾಮ ಪದಯುಗ ಕುಮುದ ಸೋಮನೆನಿಸುವ ಭಕ್ತಸ್ತೊಮಕ್ಕೆಲ್ಲ ನೇಮದಿಂದಲಿ ವಿವಿಧ ಕಾಮಿತಾರ್ಥ ಸ್ಫುಟತ ಗಾತ್ರ ಪಾವನ ಚರಿತ್ರ 3 ಶಾಂತತೆಯ ಪೊಂದಿ ಮಂತ್ರಾಲಯದಿ ವೃಂದಾವ ನಾಂತರದೊಳಿರುತ ಸಿರಿಕಾಂತ ಹರಿಯಾ ಚಿಂತಿಸುತಲಿಹ ಸರ್ವತಂತ್ರ ಸ್ವತಂತ್ರ ಕರು ಣಾಂತರಂಗನೆ ರಾಘವೇಂದ್ರ ಯತಿವರ್ಯಾ 4 ಮೂಕ ಬಧಿರಾಂಧತ್ವಗಳ ಪೊಂದಿ ಧರಣಿಯೊಳು ವ್ಯಾಕುಲವ ಪಡುವವರನುದ್ಧರಿಸುತ ನಾಕಪತಿವಿನುತ ಜಗನ್ನಾಥವಿಠಲನ ಮಧುಪ ನೀ ಕೊಟ್ಟು ಸಲಹೆನ್ನಭೀಷ್ಟ ಸಮುದಾಯ 5 ಇತರ ಯತಿವರೇಣ್ಯರ ಸ್ತೋತ್ರ
--------------
ಜಗನ್ನಾಥದಾಸರು
ಸ್ಮರಿಸಿ ಸುಖಿಸೆಲೋ ಮಾನವಾ ಪ ಸರಸಿಜಾಸನ ಸತತ ನೆನೆವ ಹರಿನಾಮವನು ಅ.ಪ ಜವರಾಯ ಕಿಂಕರರ ಹಿಮ್ಮೆಟ್ಟಸಿದ ನಾಮ ಧ್ರುವರಾಯಗೊಲಿದ ಘನವು ಈ ನಾಮ ನವನೀತರೂಪದಿಂದ ಘನವ ತಾಳ್ದಿಹ ನಾಮ ಸುವಿಲಾಸದಿಂ ಪಾರ್ಥಗೊಲಿದಿರ್ಪನಾಮವನು 1 ಸನಕಾದಿ ಮುನಿಗಳು ಸತತ ಭಜಿಸುವ ನಾಮ ಅನಿಲಜಾತನಿಗೊಲಿದ ಪರಮನಾಮ ವನಚಾರಿಯಾಗಿದ್ದ ಶಬರಿಗೊಲಿದ ನಾಮ ವನಚರರ ಗರುವವನು ಮುರಿಯುವ ನಾಮ 2 ಪಾಂಚಾಲಿಗಕ್ಷಯದ ವರವನಿತ್ತಾ ನಾಮ ಪಾಂಚಜನ್ಯವ ಸಿರಿಯೊಳೆಸೆಯುತಿಹ ನಾಮ ವಂಚಕರ ಹೃದಯಗಳ ಭೇದಿಸುತ್ತಿಹನಾಮ ಚಂಚಲೆಯರುತ್ಸಾಹದಿಂ ಭಜಿಪ ನಾಮವನು 3 ದುರುಳದೈತ್ಯರ ಮನವ ಕದಡಿ ಕಲಕುವ ನಾಮ ಶರಣಾಗತಾವಳಿಯ ಪೊರೆಯುತಿಹನಾಮ ತರಳಪ್ರಹ್ಲಾದ ತಾ ಪಿತಗೊರೆವ ನಾಮವನು 4 ಮಾಂಗಿರೀ ವರಾಗ್ರದೊಳು ಮರೆಯುತಿಹ ಸಿರಿನಾಮ ಶೃಂಗಾರ ಶ್ರೀ ಪಾಂಡುರಂಗ ನಾಮ ಗಂಗಾಧರಾನುತ ಸುಖದಾತ ಶ್ರೀನಾಮ ಮಂಗಳಕರ ರಾಮದಾಸನುತ ನಾಮವನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸ್ಮರಿಸಿದದರಘನನಾಶನ ಸ್ಮರಿಸಿದವರಘನಾಶಸ್ಮರನಯ್ಯನಂಘ್ರಿ ಯುಗ ಸರಸಿಜವ ಪೂಜಿಸುವಗುರು ವಿಜಯರಾಯರ ಚರಣಾಬ್ಜ ಸಾರಿದವದುರಿತಾಬ್ಧಿ ಮೀರಿದವ ಹರಿಪುರವ ಸೇರಿದವನೊ ಪ ಅಘ ಬಂಧ ಪರಿಹರ ಮಾಡುತಾ ಜನರು 1 ಇನಿತು ಜನಸಮುದಾಯದೊಳು ಯಿರುತಿರ್ದ ಇಭವರದ ನನುದಿನವು ಗಾಯನದಿ ಕೊಂಡಾಡಿ ಮನಮುಟ್ಟಿವಿನಯಾತಿಶಯದಲ್ಲಿ ಗುರುವರ್ಯರಾ ಸೇವೆ ಘನವಾಗಿ ಮಾಡಿ ಮುದದಿ ||ತನುವೆತ್ತಿ ವರಸರಿತ ತೀರದಾ ಅಣು ಬದರಿಜನ ಶ್ರೇಷ್ಠರೊಳು ಹರಿಯ ದಾಸ ಪೆಸರಲಿ ಬಂದುಘನ ಯಾದವಾದ್ರಿ ಪಟ್ಟಣದೊಳಗೆ ಯಿದ್ದು ಬಗೆ ಜನನಿ ಅನುಜಾತಿ ಸಹಿತ 2 ಕೆಲವು ದಿನ ಸಂಸಾರ ಗಲಭಿಯೊಳು ಯಿರುತಿರ್ದುಜಲದೊಳಗೆ ಅಂಬುಜವು ಮಿಳಿತವಾಗಿದ್ದ ತೆರಹಳಿದು ದುಷ್ಟಾಸಿಯನು ಕಳೆದು ಕಡು ಮಮತೆಯನು ಪುಳಕೋತ್ಸ ಮನದಿ ತಾಳಿ ||ಜಲದೊಳುತ್ತಮವಾದ ಭಾಗೀರಥೀ ಯಾತ್ರಿಛಲ ಭಕುತಿಯಿಂದಲಿ ಮಾಡಿ ಮೋದದಿ ಹರಿಯಹಲವು ಬಗೆ ಲೀಲೆಯನು ಹರುಷದಿಂದಲಿ ಯಿನ್ನು ತಿಳಿದು ಗುರು ಕರುಣ ಬಲದಿ 3 ಮೂರ್ತಿ ಮನದೊಳು ಕಂಡು ಸುಖವನಧಿಯಲ್ಲಿ ಲೋಲ್ಯಾಡಿಕೊಳುತ ||ಅಲ್ಲಿಂದ ತೆರಳಿ ಗಿರಿಯಲ್ಲಿದ್ದ ವೆಂಕಟನಸಲ್ಲುವಾ ಭಕುತರೊಳು ಸಲೆ ಶ್ರೇಷ್ಠನೆಂದೆನಿಸಿಮಲ್ಲ ಮರ್ದನನಾದ ಮುರಹರನ ಮಹಿಮೆ ಮನ ಬಲ್ಲನಿತು ವಿಸ್ತರಿಸುತ ಜನರು 4 ಈ ತೆರದಿ ಇಭವರದನಾತುಮದೊಳಗೆ ತಂದುಭೂತಳದ ಬಲು ವಿಧದ ತೀರ್ಥಕ್ಷೇತ್ರಗಳಲ್ಲಿಪ್ರೀತಿಯಿಂದಲಿ ಪರಮ ಪುರುಷನ್ನ ಧೇನಿಸುತ ಖ್ಯಾತಿ ಮಹಿಯೊಳಗೆ ಮೆರದು ||ವಾತಜಾತನ ಮತದ ವೊಳಗಿಪ್ಪ ವೈಷ್ಣವರತಾತನೆಂದೆನಿಸಿ ಸುಖವ್ರಾತದೊಳಗಿಡುವಲ್ಲಿಚಾತುರ್ಯದಿಂದ ಬಲುದಾತನೆನಿಸುತಲಿ ಭವತೀತರನ ಮಾಡಿ ಪೊರವ ಜನರು 5 ಆ ಬಗೆಯಲೀ ಕಮಲನಾಭ ಕರುಣಿಸಿ ಯಿವರಈ ಭುವನದೊಳು ಯಿಟ್ಟು ಜನರ ವುದ್ಧರಿಸುವಲೋಭದಿಂದಲಿ ಸಕಲ ಸಜ್ಜನರ ಸನ್ಮಾರ್ಗ ಲಾಭದೊಳು ಸೇರಿಸಿದನೊ ||ತ್ರ್ರಿಭುವನದೊಡೆಯನ್ನ ಕಥೆಯ ತಿಳಿಸುವ ಜನಕೆಶೋಭಿಸುವ ಗಾಯನದ ಸೊಬಗಿನಿಂದಲಿ ಕೇಳಿಶ್ರೀಭೂರಮಣ ವೊಲಿದು ಪಾಲಿಸುವನಾಮೇಲೆ ಶೋಭನ ಗತಿಯ ನೀವನೊ 6 ಕಲುಷ ವಾಕು ವುಪಜೀವರಿಗೆ ಏಕ ಮನದಿಂದಿರುವದೇ ಈ ಕಲಿಯುಗದಲಿಸಾಕಾರ ಗುಣಪೂರ್ಣ ಶ್ರೀನಿವಾಸನು ಬಿಡದೆ ಸಾಕುವನು ಸಮ್ಮೊಗದಲಿ ಜನರು 7 ದೇವಮುನಿ ನಾರದನು ಜೀವಿಗಳನುದ್ಧರಿಪಭಾವದಲಿ ಯಮಪುರಿಯ ದೇವನಲ್ಲಿಗೆ ಪೋಗಿಸಾವಧಾನದಿ ಸಕಲ ಸತ್ಕಾರಕೊಳಗಾಗಿ ನೋವು ಬಡವರನೀಕ್ಷಿಸಿ || ಸಾವಧಾನದಿ ಕೇಳಿ ಕಲಶಾರುಣೀ ಭಕ್ತ- ರಾವಳಿಯ ಸಲಹುವ ದೇವ ದೇವೇಶನನುತಾ ವದರಿ ಕೂಗಲಾ ಜೀವರೆಲ್ಲರು ಕೇಳಿ ಪಾವಿತ್ರವನೆಗೈದರೊ ಜನರು 8 ಭವ ಸಿರಿ ಚರಣಕೆ ಜನರು 9 ಸಿರಿ ತರಣಿ ಶರಧಿ ಶಯನನ ತೋರುವ ಜನರು 10 ದಾನವಾಂತಕ ದನುಜರನ್ನು ಸಂಹರಿಸುವಾಜ್ಞಾನಪೂರ್ಣನು ಗುಪ್ತ ತಾನಾಗಿ ಜಗದೊಳಗೆಹಾನಿ ವೃದ್ಧಿಂಗಳಿಗೆ ಹೊರಗಾಗಿ ಜೀವಿಗಳ ಮಾಣದಲೆ ಪರಿಪಾಲಿಪ ||ಕ್ಷೋಣಿಯೊಳು ಭಕುತರಘ ಹಾನಿಗೈಸುವ ಬಗಿಗೆಈ ನಿರುದ್ಧಕೆ ಯಿವರಧೀನ ಮಾಡಿದ ನಮಗೆವೇಣುಗೋಪಾಲ ವಿಠಲರೇಯ ತಾನೊಲಿದು ಸ್ವಾನಂದವನೆ ವುಣಿಸುವ ಜನರು 11
--------------
ವೇಣುಗೋಪಾಲದಾಸರು
ಸ್ಮರಿಸು ಗುರು ಸಂತತಿಯನು ಮನವೇ ಪ ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ಅ.ಪ. ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ ಪರಮೇಷ್ಠಿ ತತ್ಸುತರು ಸನಕಾದ್ಯರಾ ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ ಕೈವಲ್ಯ ಯತಿವರರ 1 ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ ಸೂನು ಸುತಪೋರಾಜ ವರಕುಮಾರಾ ಅಚ್ಯುತ ಪ್ರೇಕ್ಷರಂಘ್ರಿಗಳ ಆ ನಮಿಪೆನನವರತ ಭಕ್ತಿ ಪೂರ್ವಕದೀ 2 ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ ಪ್ರೋಚ್ಚಾಬ್ಜನಾಭ ನರಹರಿ ಮಾಧವಾ ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ ತೋಚ್ಛಾಟನವಗೈದ ಜಯತೀರ್ಥ ಗುರುವರರ 3 ವಿದ್ಯಾಧಿರಾಜ ರಾಜೇಂದ್ರ ಸುತಪೋನಿಧಿ ಜ ಯಧ್ವಜರ ಪುರುಷೋತ್ತಮ ಬ್ರಹ್ಮಣ್ಯರಾ ಮಧ್ವ ಸಿದ್ಧಾಂತ ಸ್ಥಾಪಕ ವ್ಯಾಸರಾಯ ಪ್ರ ಸಿದ್ಧ ಶ್ರೀನಿವಾಸಯತಿಗಳ ಪವಿತ್ರ ಪದ 4 ಲಕ್ಷ್ಮೀ ಕಾಂತರನ ಶ್ರೀಪತಿ ರಾಮಚಂದ್ರರನ ಲಕ್ಷ್ಮೀ ವಲ್ಲಭ ಲಕ್ಷ್ಮೀ ನಾಥಪತಿಯಾ ಲಕ್ಷ್ಮೀ ನಾರಾಯಣರ ಶ್ರೀ ರಘುನಾಥ ಸು ಭಿಕ್ಷುಗಳ ಜಗನ್ನಾಥ ಗುರುಗಳನಾ 5 ಮೂರ್ತಿ ವಿ ಶ್ರೀನಾಥ ಗುರುವರರ ಕರಕಮಲಜಾತ ವಿ ದ್ಯಾನಾಥ ಯತಿಗಳನು ಅನುದಿನದಿ ಮರೆಯದಲೆ 6 ವಿಧ್ಯಾಧಿರಾಜರ ಕವೀಂದ್ರ ವಾಗೀಶರ ಸ್ವ ಸಿದ್ಧಾಂತ ಸ್ಥಾಪಿಸಿದ ರಾಮ ಚಂದ್ರಾ ಅದ್ವೈತ ಕುಮುದ ದಿನಪ ವಿಬುಧೇಂದ್ರಾರ್ಯ ಸದ್ವೈಷ್ಣವಾಗ್ರಣಿ ಜಿತಾಮಿತ್ರ ಮುನಿವರರ 7 ರಘುನಂದನ ಸುರೇಂದ್ರ ವಿಜಯೀಂದ್ರ ಸುಧೀಂದ್ರ ವಾರಿಧಿ ರಾಘವೇಂದ್ರಾರ್ಯರಾ ನಿಗಮಾರ್ಥ ಕೋವಿದ ಸುಯೋಗೀಂದ್ರ ಸೂರೀಂದ್ರ ಜಗತೀತಳದಿ ಪ್ರಸಿದ್ಧ ಸುಮತೀಂದ್ರರ 8 ಸಾಧುಜನಸನ್ನುತ ಉಪೇಂದ್ರರಾಯರ ವೇದ ವೇದಾಂಗ ಚತುರ ವಾದೀಂದ್ರ ಯತಿಯಾ ದ್ಯಾದಾನಾಸಕ್ತ ವರದೇಂದ್ರ ಯತಿವರರ 9 ರಾಮವೇದವ್ಯಾಸರಂಘ್ರಿ ಕಮಲಗಳ ಹೃ ತ್ತಾಮರಸದೊಳು ಪೂಜಿಸಿದ ಬಗೆಯನ್ನು ಧೀಮಂತರಿಗೆ ತಿಳಿಸಲೋಸುಗದಿ ನವರತ್ನ ಹೇಮ ಮಂಟಪ ವಿರಚಿಸಿದ ಭುವನೇಂದ್ರರಾ 10 ಪವಮಾನ ಮತ ಪ್ರವರ್ತಕರೊಳುತ್ತಮರೆನಿಪ ಭವ ಗೆದ್ದಾ ಸುಬೋಧ ಸುಜನೇಂದ್ರರಾ ಅವನಿತ ದೊಳಗೆ ಅಭ್ಯಧಿಕರನ ಮಾಡಿ ಸ ತ್ಕವಿಗಳನೆ ಸಂತೈಸಲೆಂದು ಸ್ಥಾಪಿಸಿದವರಾ 11 ಹರಿಯ ಸಂಸ್ಮರಣೆ ಅಹರ್ನಿಶಿಗಳಲಿ ಮಹ ವಿಪ ತ್ಪರಿಹಾರಗೈಸುವುದು ಗುರುಗಳ ಸ್ಮರಣೇ ಪರಮ ಸೌಖ್ಯವನೀವದಾದಾವ ಕಾಲದಲಿ ಪೊರೆವ ಜಗನ್ನಾಥ ವಿಠ್ಠಲವೊಲಿದು ನಿರುತಾ12 ನವ ವೃಂದಾವನ
--------------
ಜಗನ್ನಾಥದಾಸರು
ಸ್ಮರಿಸುವರಘಹರ ರಾಘವೇಂದ್ರ ಗುರುಆರುಮೊರೆ ಇಡುವೆನು ತವಪದದಲ್ಲೀ ಪ ಸುರತರು ನಿನ್ನನು | ನಿರುತದಿ ನುತಿಸುವವರವನೆ ಕರುಣಿಸು | ಗುರು ರಾಘವೇಂದ್ರ ಅ.ಪ. ಕೃತ ಯುಗದೊಳು ತಾ | ಮುನಿ ಕಶ್ಯಪನಸುತನಲಿ ಮೋದದಿ | ಸುತನಾಗಿ ಜನಿಸುತ |ಪಿತನತಿ ಬಾಧೆಗೆ | ಅಳುಕದೆ ಮನ್ಮಥಪಿತನಧಿಕೆಂದು ಬಹು | ಸಾರಿದೆ ಗುರುವರ 1 ಜನಪ ಪ್ರತೀಪನ | ಸುತ ವರನೆನಿಸುತಜನಿಸುತ ಪ್ರೀತಿಲಿ | ದ್ವಾಪರದಲ್ಲೀ |ಘನಬಲ ಬಾಹ್ಲೀಕ | ನೆನಿಸುತ ನೀನೂಅನಿರುದ್ಧ ಮೂರ್ತಿಯ | ಸೇವಿಸಿ ಮೆರೆದೆ 2 ನ್ಯಾಯಾ ಮೃತ ಚಂ | ದ್ರಿಕೆಗಳ ರಚಿಸುತಮಾಯ ಮತವನು | ಪರಿಪರಿ ಜೆರೆಯುತ |ಕಾಯ ಜನಯ್ಯನ | ಕೀರ್ತಿಯ ಬೀರುತತೋಯಜಾಕ್ಷ ಹರಿ | ಅಧಿಕೆಂದು ಸಾರಿದೆ 3 ಸಂಗವ ತೊರೆದು | ಸುಧೀಂದ್ರರ ಕರಜನೆತಂಗಾತೀರದಿ | ಮಂತ್ರಾಲಯದಲಿ |ಮಂಗಳ ಮಹಿಮನ | ಧ್ಯಾನವ ಗೈಯುತತುಂಗ ವಿಕ್ರಮ ಹರಿ | ಪರನೆಂದು ಸಾರಿದೆ 4 ವಾತನ ಮತ ವಿ | ಸ್ತರಿಸಿದ ಧೀರನೆದ್ವೈತ ದುಂದುಭಿಯ | ಮೊಳಗಿಸಿದಾತನೆ |ದೂತರ ಪ್ರಿಯ ಗುರು | ಗೋವಿಂದ ವಿಠಲನಪ್ರೀತಿಲಿ ಭಜಿಸುವ | ದಾಸಾಗ್ರಣಿಯೇ 5
--------------
ಗುರುಗೋವಿಂದವಿಠಲರು
ಸ್ಮರಿಸುವೆ ಮುರಹರನ | ಪರಮ ಪುರುಷನ ಧುರದಿ ಸುರಪ ನರನ | ಪೊರೆದ ದೇವನ ಪ ವನಜ ಸನ್ನಿಭ ಲೋಚನ | ಜನಕಜೆ ಮನ ವನಜ ಭಾಸ್ಕರ ಕೇಶವನ | ದನುಜ ಕಾಲನ 1 ಭಕುತ ಪಾಲಕ ಅಜೀತ ಮುಕುತಿ ಪ್ರದಾತ ಲಕುಮಿ ಸುರವರ ಪೂಜಿತ | ವಿಖಿನನ ಪಿತ2 ಸಾಮಜ ಪಾಲಾ ಸನ್ನುತ ಗೋಪಾಲಾ ಭೂಮಿಜೆ ಲೋಲಾ 3
--------------
ಶಾಮಸುಂದರ ವಿಠಲ
ಸ್ಮರಿಸುವೆನು ಸದ್ಭಕ್ತಿಯಲಿ ಶ್ರೀರಾಮನ ಗುಣಧಾಮನ ಸಿರಿವಿರಿಂಚಾದ್ಯಮರಗಣ ಸಂಸ್ತುತ್ಯನ ಸಂತೃಪ್ತನಾ ಪ ಆದಿಯಲಿ ಝಷನಾಗಿ ನಿಗಮವ ತಂದನ ಮುನಿವಂದ್ಯನ ಭೂಧರಾಧರ ದಿವಿಜರಿಗೆ ಸುಧೆಗರೆದನ ಸುರವರದನ ಕಾದು ಕಿಟರೂಪದಲಿ ಭೂಮಿಯ ತಂದನ ಗುಣವೃಂದನ ಬಾಧಿಸಿದ ರಕ್ಕಸನ ತರಿದು ಪ್ರಲ್ಹಾದನ ತಾ ಪೊರೆದನ 1 ತುಳಿದನ ಅವಗೊಲಿದನ ಕೊಡಲಿ ಪಿಡಿದಾ ಕ್ಷತ್ರಿಕುಲ ವಿರಾಮನ ಭೃಗು ರಾಮನ ಮೃಡನೊರದಿ ಯುನ್ಮತ್ತ ದೈತ್ಯರು ಬಾಧಿಸೆ ಧರಿ ಪ್ರಾರ್ಥಿಸೆ ಜಡಜ ಪೀಠಾದ್ಯಮರರಾ ಮೊರೆ ಕೇಳ್ದನ ಧರೆಗಿಳಿದನ 2 ದಶರಥನ ಸತಿಯುದರದಲಿಯವತರಿಸಿದ ಮುದಗರಿಸಿದ ಬಿಸರುಹಾಪ್ತನ ವಂಶವನು ಉದ್ಧರಿಸಿದ ಮೈಮರಸಿದ ದಶದಿಶೆದಿ ಸುರರೆಲ್ಲ ಪೂಮಳೆಗರೆದರು ಸುಖಸುರಿದರು ಅಸಮಲೀಲೆಯ ತೋರ್ದರಘುಕಲಚಂದ್ರನ ಸುಖಸಾಂದ್ರನ 3 ಗಾಧಿಸುತನಧ್ವರವ ಕಾಯ್ದ ಸಮರ್ಥನ ಜಗಕರ್ತನ ವೇದಧನು ಮೊದಲಾದ ಕಲೆಗಳ ತಿಳಿದನ ಮುನಿಗೊಲಿದನ ಹಾದಿಯಲಿ ಶಿಲೆಯಾದ ಅಹಲ್ಯಳ ಪೊರೆದನ ಸಿರಿವರದನ ಮೋದದಲಿ ಹರಧನು ಮುರಿದ ಗಂಭೀರನ ಬಹುಶೂರನ 4 ಜನಕಭೂಪತಿ ತನುಜಳೆನಿಸಿದಸೀತೆಯ ಭೂಜಾತೆಯಾ ಘನಹರುಷದಲಿ ವಲಿಸಿಕರವನು ಪಿಡಿದನ ಯಶಪಡೆದನ ದನುಜರುಪಟಳತೋರಲಾಕ್ಷಣ ಸೀಳ್ಪನ ಸುರರಾಳ್ದನ ತನಗೆ ತಾನೇ ಸೋಲಿಸಿದ ಜನಮೋಹನ ಖಗವಾಹನ 5 ಜನಕನಾಜ್ಞವ ಪಾಲಿಸಿದ ದಯವಂತನ ಅಘಶಾಂತನ ಅನುಜಸತಿಸಹ ಪುರದಿ ತಾಪೊರಮಟ್ಟನ ಅತಿಧಿಟ್ಟನ ವನದಿ ಬಹು ಮುನಿಗಳ ಕಾರಾರ್ಚಿತನಾದನ ಸುಪ್ರಸಾದನ ಅನುಜ ಭರತಗೆ ದಯದಿ ಪಾದುಕೆ ಕೊಟ್ಟನ ಸಂತುಷ್ಟನ 6 ಮನುಜರಂದದಿ ಸತಿವಿಯೋಗವತೋರ್ದನ ಕುಜನಾರ್ದನ ವನಿತೆಯಂಜಲ ಫಲಗಳನು ತಾಮೆದ್ದನ ಶ್ರುತಿಸಿದ್ಧನ ದನುಜರಿಪು ಹನುಮಂತನನು ಸಾರೆ ಗರೆದನ ಕರುಣಿಸಿದನ ವನಜ ಸಖಸುತನೊಡನೆ ಸಖ್ಯವ ಮಾಡ್ಡನ ವರನೀಡ್ಡನ 7 ಲೀಲೆಯಿಂದಲಿ ತಾಳ ಮರಗಳ ಸೀಳ್ದನ ನೆರೆಬಾಳ್ದನ ವಾಲಿಯನು ಸಂಹರಿಸಿದತಿಬಲವಂತನ ಶ್ರೀಕಾಂತನ ಮೇಲೆನಿಪ ರಕ್ಕಸರನೆಲ್ಲರ ತುಳಿದನ ಅಸುಸೆಳೆದನ ಶ್ರೀಲತಾಂಗಿಯ ಕ್ಷೇಮವಾರ್ತೆಯ ಕೇಳ್ದನ ಮುದತಾಳ್ದನ 8 ಗಿರಿಗಳಿಂದಲಿ ಶರಧಿಯನು ಬಂಧಿಸಿದನ ಸಂಧಿಸಿದನ ಹರಿಗಳೆಲ್ಲರ ಕೂಡಿಲಂಕೆಯ ಸಾರ್ಧನ ರಣದಿರ್ದನ ಉರುಪರಾಕ್ರಮಿ ರಾವಣನ ಶಿರಕಡಿದನ ಹುಡಿಗೆಡೆದನ ವರವಿಭೀಷಣ ಭಕ್ತಗಭಿಷೇಚಿಸಿದನ ಪೋಷಿಸಿದನ 9 ಸಿರಿಸಹಿತ ಪುಷ್ಪಕವನೇರಿದ ಚಲುವನ ಅತಿ ಪೊಳೆವನ ತ್ವರದಿಶೃಂಗರಿಸಿದ ಅಯೋಧ್ಯಕೆ ಬಂದನ ಅಲ್ಲಿ ನಿಂದನ ಭರತ ಪ್ರಾರ್ಥಿಸಲಾಕ್ಷಣದಿ ಮೊರೆ ಕೇಳ್ದನ ಧರಿಯಾಳ್ದನ ಸರಸಿಜಾಸನ ಪ್ರಮುಖರಾರ್ಚನೆ ಕೊಂಡನ ಕೋದಂಡನ 10 ಮರುತಸುತನಿಗೆ ಅಜನ ಪದವಿಯನಿತ್ತನ ಬಹುಶಕ್ತನ ಚರಣಸೇವಕ ಜನಕಭೀಷ್ಟದಾತನ ವಿಖ್ಯಾತನ ನಿರುತ ಸನ್ಮುನಿಹೃದಯ ಮಂದಿರ ವಾಸನ ಜಗದೀಶನ ಸ್ಮರಣೆ ಮಾತ್ರದಿ ದುರಿತರಾಶಿಯ ತರಿದನ ಸುಖಗರೆವನ 11 ದೇವಕೀ ವಸುದೇವ ಸುತನೆಂದೆನಿಪನ ಜಗಕಧಿಪನ ಮಾವನನು ಸಂಹರಿಸಿ ಶಕಟನ ಕೊಂದನ ಆನಂದನ ಗೋವು ಕಾಯುತ ಗಿರಿಯ ಬೆರಳಲಿ ಆಂತನ ಬಹುಶಾಂತನ ಗೋವ್ರಜದಿ ಗೋಪಿಯರ ವಸನವ ಕಳೆದನ ಅಹಿತುಳಿದನ 12 ಲೋಕನಾಥನು ಪಾರ್ಥಸಾರಥಿಯಾದನ ಸುಪ್ರಮೋದನ ನೇಕ ಪರಿಭಗವತ್ಸುಗೀತೆಯ ಪೇಳ್ದನ ತಮಸೀಳ್ದನ ಆ ಕುರು ಕುಲವ ತರಿದ ಪಾಂಡವ ಪ್ರಾಣನ ಸುಪ್ರವೀಣನ ಆಕುರುಪ ಭೀಷ್ಮನಿಗೆ ಮುಕ್ತಿಯ ಕೊಟ್ಟನ ಅತಿಶ್ರೇಷ್ಟನ 13 ಕಪಟನಾಟಕ ನಗ್ನರೂಪದಿ ನಿಂತನ ನಿಶ್ಚಿಂತನ ತ್ರಿಪುರದಲಿ ಜಲಜಾಕ್ಷಿಯರ ವ್ರತ ಭÀಂಗನ ನಿಸ್ಸಂಗನ ಕೃಪಣವತ್ಸಲ ತುರಗವೇರಿ ತಾನಡೆದನ ಅಸಿಪಿಡಿದನ ಅಪರಿಮಿತ ಬಹುಕ್ರೂರ ಯವನ ವಿಘಾತನ ಪ್ರಖ್ಯಾತನ 14 ಈ ವಿಧದಿ ಬಹುಲೀಲೆ ಗೈವ ಸುಚರಿತನ ಜಗಭರಿತನ ಭಾವಶುದ್ಧಿಲಿ ಭಜಿಸುವವರಘಕಡಿವನ ಗತಿಕೊಡುವನ ಪಾವಮಾನಿ ಮತಾನುಗರ ಕರಪಿಡಿವನ ಭವತಡೆವನ ದೇವತತಿ ಸದ್ವಿನುತ ವರದೇಶ ವಿಠಲನ ನಿಷ್ಕುಟಿಲನ 15
--------------
ವರದೇಶವಿಠಲ
ಸ್ಮರಿಸೆನ್ನ ಮನವೇ ಯಾದವ ರಾಯನಾ| ಸರಸಿಜೊವನುತ ಭಕುತರ ಪ್ರೀಯನಾ ಪ ವರನಿಗ ಮೋಯಿದವನಾ ಶೀಳಿ ಎಳಹಿದವನಾ| ಶರಧಿ ಮಥನ ಗೋಸುಗನ ಪೊತ್ತನಾ ಧರಣಿಯಾ ತನ್ನ ಕೋರೆ ದಾಡಿಲಿರಿಸಿದಿಹನಾ| ಶರಣ ಪ್ರಲ್ಹಾದನ ಸುಸ್ಮರಣೆ ಗೊಲಿದನಾ1 ಭೂಸುರೋತ್ತಮನಾಗಿ ದಾನವ ಬೇಡಿದನಾ| ಹೇಸದೇ ಕ್ಷತ್ರಿಯರ ಕುಲ ಕೊಂದನಾ| ವಾಸು-ಕ್ಯಾ ಭರಣನ ಧನುವ ಮುರಿದವನಾ| ವಾಸವಾತ್ಮಜ ಮಿತ್ರ ದೇವಕಿ ಕಂದನಾ2 ಪತಿವೃತೆ ನಾರಿಯರ ವೃತಭಂಗ ಮಾಡಿದನಾ| ಸಿತ ಹಯವೇರಿದ ಶ್ರೀ ಜಗದೀಶನಾ| ಪತಿತ ಪಾವನನಾದಾ ಅನಂತಾವತಾರನ| ನುತ ಗುರು ಮಹಿಪತಿ ನಂದನ ಪ್ರೀನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ಮರಿಸೊ ಮಾನವನೆ ಗುರುಚರಣ ಅಂತ: ಕರಣ ಶುದ್ಧಿಯಲಿ ಮರೆಯದೆ ಪ್ರತಿದಿನ ಪ ದುರಿತ ಘನತತಿ ಮರುತ ಶ್ರೀ ರಘುದಾಂತ ತೀರ್ಥರ ಕರಜ ಶ್ರೀ ರಘುವೀರ ತೀರ್ಥರ ಚರಣಯುಗಲವ ಹರುಷದಿಂದಲಿ ಅ.ಪ ಧರೆಯೋಳ್ ಸುಂದರ ಸುರಪುರದಿ ಜನಿಸಿ ಗುರು ವಿಠ್ಠಲಾರ್ಯರ ಚರಣಾನುಗ್ರಹದಿ ವರ ಶಬ್ದ ಶಾಸ್ತ್ರವ ತ್ವರದಿ ಕಲಿತು ತುರಿಯಾ ಶ್ರಮವನೆ ಸ್ವೀಕರಿಸಿ ಗುರುಮುಖದಿ ಮರುತ ಶಾಸ್ತ್ರವನರಿತು ಧರ್ಮದೊಳಿರುತ ವಿಷಯದಿ ವಿರತಿಯಲಿ ಅನವರತ ಪ್ರವಚನ ನಿರತ ಸದ್ಗುಣ ಭರಿತ ಪಾವನ ಚರಿತರಂಘ್ರಿಯ 1 ಹೇಮಾಲಂಕೃತ ರತ್ನನಿಚಯಯುಕ್ತ ಹೇಮ ಮಂಟಪದಿ ಸುಂದರ ಶುಭಕಾಯಾ ಶ್ರೀ ಮನೋಹರ ಕವಿಗೇಯಾ ಬ್ರಹ್ಮ ವ್ಯೋಮ ಕೇಶಾದಿ ನಿರ್ಜರಗÀಣಶೇವ್ಯಾ ಭೂಮಿ ಸುರಜನ ಸ್ತೋಮಕನುದಿನ ಕಾಮಿತಾರ್ಥವ ಗರಿವ ಸೀತಾರಾಮರಂಘ್ರಿಯ ತಾಮರಸವನು ನೇಮದಿಂದರ್ಚಿಪರ ಶುಭಪದ2 ಪರಿಶೋಭಿಸುವ ಕಾಷಾಯ ವಸ್ತ್ರ ವರನಾಮ ಮುದ್ರಾಲಂಕೃತ ತನುಸಿರಿಯ ಗುರು ಅಕ್ಷೋಭ್ಯರ ಶುಭಚರಿಯ ಗ್ರಂಥ ವಿರಚಿಸಿದರು ನವರತುನ ಮಾಲಿಕೆಯ ಧರಣಿಯೊಳು ಸಂಚರಿಸುತಲಿ ಬಲು ಕರುಣದಿಂದಲಿ ಶರಣು ಜನರಘ ಭವ ಭಯಹರಣ ಗುರುವರ ಚರಣಯುಗಲವ3 ವಿನುತ ಸಮೀರ ಕೃತ ಸಾರಶಾಸ್ತ್ರವನೆ ಬೋಧಿಸುತ ಸಜ್ಜನರ ಘೋರ ಸಂಸೃತಿ ಭಯದೂರ ಮಾಡಿ ತೋರಿ ಸನ್ಮಾರ್ಗ ದೀಪಿಕೆಯ ಸುಸಾರ ಸೇರಿದವರಘ ದೂರ ಪರಮೋದಾರ ಗುಣ ಗಂ- ಸೂರಿಜನ ಪರಿವಾರನುತ ಜಿತ- ಮಾರ ಶ್ರೀ ರಘುವೀರ ತೀರ್ಥರ 4 ಶೇಷಾಚಲದಿ ಶಿಷ್ಯಗಣದಿ ಬಂದ ಶ್ರೀ ಸತ್ಯ ಪ್ರಮೋದ ತೀರ್ಥರ ಸ್ವರ್ಣೋತ್ಸವದಿ ತೋಷಬಡಿಸುತ ನಿರ್ಭಯದಿ ಉಪನ್ಯಾಸ ಮಾಡಿದರು ವೀಶಗಮನ ಸುರೇಶ ಭಕುತರ ಸಿರಿ ನರಕೇಸರಿಗೆ ಪ್ರಿಯದಾಸ ಕೊಡಲಿವಾಸ ಕರ್ಮಂದೀಶರಂಘ್ರಿಯ 5
--------------
ಕಾರ್ಪರ ನರಹರಿದಾಸರು
ಸ್ಮಾರ್ತರು ನಾಮವ ಧರಿಸಿ ಯಥಾರ್ಥವು ಹರಿನಾಮವ ಬಹಳ ವಿಸ್ತರಿಸಿ ಪ ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ ಚನ್ನಕೇಶವ ರಾಯನೆಂದೆಂಬ ನಾಮ ಉನ್ನತವಾಗಿಹ ನಾರಾಯಣ ನಾಮ ಮಾಧವ ನಾಮವ 1 ಅಂತರಂಗದಿ ಗೋವಿಂದನ ನಾಮವ ಸಿರಿ ನಾಮವ ಸಂತತ ಮಧುಸೂದನನೆಂಬ ನಾಮವ ಪಂಥವಿಡಿದು ತ್ರಿವಿಕ್ರಮ ನಾಮವ 2 ಅನುದಿನ ವಾಮನ ನಾಮವ ವನಜಾಕ್ಷ ಶ್ರೀಧರ ಗುಣ ನಾಮವ ವಿನಯದಿ ಹೃಷಿಕೇಶನೆನುತಿಹ ನಾಮವ ತನುವಾದ ಪದುಮನಾಭನ ನಾಮವ 3 ಅಂದದೊಳು ಧರಿಸಿರುವ ದಾಮೋದರ ನಾಮ ಚಂದದಿ ವಾಸುದೇವನ ನಾಮವ ಕುಂದದೆ ಸಂಕರ್ಷಣನೆಂಬ ನಾಮವ ಬಂಧನ ಪರಿಹಾರ ಪ್ರದ್ಯುಮ್ನ ನಾಮವ 4 ಅರ್ಥಿಯಿಂದಲೆ ಅನಿರುದ್ಧನ ನಾಮವ ಉತ್ತಮ ಪುರುಷೋತ್ತಮ ನಾಮವ ಭಕ್ತಿಯಿಂದಲೆ ಅಧೋಕ್ಷಜನೆಂಬ ನಾಮವ ಮೃತ್ಯುವು ಕಾಣದ ನರಹರಿ ನಾಮವ 5 ಅಚ್ಯುತ ನಾಮವ ನಿಶ್ಚಯಿಸಿ ಜನಾರ್ದನ ನಾಮವ ಬಚ್ಚಿಡಬೇಡ ಉಪೇಂದ್ರನ ನಾಮವ ಸಿರಿ ನಾಮವ 6 ದುಷ್ಟನಿಗ್ರಹವಾದ ಕೃಷ್ಣನ ನಾಮವ ಬೆಟ್ಟದ ವರಾಹತಿಮ್ಮಪ್ಪನ ನಾಮವ ಅನುದಿನ ಘನ ನಾಮವ ಸೃಷ್ಟಿಯೊಳು ಉತ್ತಮ ಸ್ಮಾರ್ತನೆ ವೈಷ್ಣವ 7
--------------
ವರಹತಿಮ್ಮಪ್ಪ
ಸ್ವಾಗತವು ಸ್ವಾಗತವು | ಯತಿವರ್ಯರೇಯೋಗೀಶ ಶ್ರೀಕೃಷ್ಣ | ಮೂತ್ರ್ಯುಪಾಸಕರೇ ಪ ವಿಶ್ವಭಿಧರಂತಸ್ಥ | ವಿಶ್ವರೂಪಿಯ ಹರಿಯವಿಶ್ವಸರ್ಜನ ಸ್ಥಿತೀ | ವಿಶ್ವಸಂಹರವಾ |ವಿಶ್ವತೊಮುಖವಾಗಿ | ಗುಣ ಕ್ರಿಯವ ಕೊಂಡಾಡೆವಿಶ್ವೇಶ ತೀರ್ಥರೆಂದುರು | ಕೀರ್ತಿಯುಕ್ತರೇ 1 ಬೋಧ | ಸಿದ್ಧ ಪಡಿಸಿದರೇ 2 ಶರಣ ಜನರಭಿಲಾಷೆ | ನಿರುತ ಪಾಲಿಸಿ ಪೊರೆವಸರಳ ಹೃದಯರೆ ನಿಮ್ಮ | ಚರಣದ್ವಂದ್ವಗಳಾ |ವರ ರಜವ ಶಿರದಲ್ಲಿ | ಧರಿಸುತ್ತ ಧನ್ಯನೆಹೆಮರಳಿ ಮಮಕುಲವೆಲ್ಲ | ಉದ್ಧಾರವಾಯ್ತು 3 ಕಾಲ | ಸೀಮೆ ಮೀರಿದ ಸಮಯನೇಮ ಮೀರದೆ ವೈಶ್ವ | ಹೋಮಾದಿ ಶೇಷಾ |ಪ್ರೇಮದಿಂ ವಿದ್ಯಾರ್ಥಿ | ಸ್ತೋಮ ಕುಣಿಸುತ ನಿತ್ಯಸಾಮ ಸನ್ನುತನ ನಿ | ಷ್ಕಾಮ ಭಜಿಸುವರೇ 4 ಕಾಣ್ವೋಪ ನಿಷದರ್ಥ | ಕನ್ನಡ ಸುಪದ್ಯದಲಿಇನ್ನು ರಚಿಸಿರ್ಪುದಕೆ | ಮುನ್ನುಡಿಯನಿತ್ತೂ |ಅನ್ನಂತ ಗುಣ ಗುರೂ | ಗೋವಿಂದ ವಿಠ್ಠಲನನನ್ನೆಯಿಂ ಭಜಿಸೆ ಪ್ರ | ಸನ್ನ ಮಾರ್ಗದರೇ 5
--------------
ಗುರುಗೋವಿಂದವಿಠಲರು
ಸ್ವಾಮಿ ಗುರು ಗೋವಿಂದ ವಿಠಲ ಪೊರೆ ಇವನಾ ಪ ಶ್ರೀಮನೋಹರನಂಘ್ರಿ | ಕಮಲಕಾಂಕ್ಷಿಪನಾ ಅ.ಪ. ಶರಧಿ | ಮೇಶ ಮಧ್ವೇಶಾ 1 ತುಂಗೆ ತೀರದಿ ಧವಳ | ಗಂಗೆ ತಟವಾಸಯತಿಪುಂಗವರ ಕರುಣಾ | ಪಾಂಗ ವೀಕ್ಷಣವಾಮಂಗಳ ಸ್ವಪ್ನದಲಿ | ಕಂಗಳಿಂದಲಿ ಕಂಡುಸಂಗ ಸಾಧುಗಳ ಉ | ತ್ತುಂಗ ಬಯಸುವನೋ 2 ಜಲಜನಾಭನ ಭಜಿಸೆ | ಕುಲವು ಪ್ರಾಧಾನ್ಯಲ್ಲಹಲವಾರು ದೃಷ್ಠಾಂತ | ಕೇಳಿ ಬರುತಿಹುದೋಸುಲಭ ನೀನೆಂತೆಂದು | ಬಲವಿನಿಂ ಪ್ರಾರ್ಥಿಸುವೆತಿಳಿಪುವುದು ಮರುತಮತ | ಹಲವು ತತ್ವಗಳಾ 3 ಪಾದ್ಯ | ಚೀರ್ಣ ಸತ್ಕತಿಯವನುಪೂರ್ಣಗೈಸಿವನ ಪ್ರಾಚೀನ ಕರ್ಮಗಳಾ 4 ನಾಮಾಧಿಕಾರಿ ಇವ | ನಾಮಸ್ಮøತಿ ಸರ್ವದಾನೇಮದಿಂ ಫಲಿಸಿವಗೆ | ಸೋಮಧರನುತನೇಕಾಮಜನಕನೆ ಗುರೂ | ಗೋವಿಂದ ವಿಠಲಯ್ಯಈ ಮಾತು ಸಲಿಸೆಂದು | ಸ್ವಾಮಿ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಸ್ವಾಮಿ ನೀನೇ ತಂದೆ ನೀನೇ ಯೆನ್ನಯ ಬಂಧು ಪ್ರೇಮದಿಂದಲಿ ಯೆನ್ನ ಸಲಹಯ್ಯ ಬಂದೇ ಪ ಐದು ಹುಲಿಗಳು ಬಂದು ಗಾರುಮಾಡುತಲೆನ್ನ ಕೈದಿನಲ್ಲಿಟ್ಟಿಹವು ಬಿಡಿಸಯ್ಯ ಹರಿಯೇ ಕೈದಿನಲ್ಲಿಟ್ಟೆನ್ನ ಕೆಲಸಕ್ಕೆ ಎಳತಂದು ಬÁಧೆಯ ಕೊಡುತಿಹವು ಬಿಡಿಸಯ್ಯ ಹರಿಯೇ 1 ಭವವೆಂಬ ಮೃಗರಾಜ ಬಗೆಯುತ್ತ ದೇಹದ ಜವದಿಂದ ತಿನ್ನುವಾ ಬಿಡಿಸಯ್ಯ ಹರಿಯೇ ಅವನಿಯೊಳು ಹುಟ್ಟು ಸಾವೆಂಬ ಗಜನಕ್ರಗಳು ತಿವಿದೆನ್ನ ಹೆಳೆಯುದರು ಬಿಡಿಸಯ್ಯ ಹರಿಯೇ 2 ಆರು ವೈರಿಗಳೆÀನ್ನ ಕಾಯವನು ಪಿಡಿದೊಯ್ದು ಯೆರಿಸೀ ಸುಡುತಿಹರು ಬಿಡಿಸಯ್ಯ ಹರಿಯೇ ಮಾರಿ ವಶಮಾಡುವದು ಬಿಡಿಸಯ್ಯ ಹರಿಯೇ 3 ಅನ್ಯರನು ಕಾಣೆ ನಾದೇವ ನಿನ್ನುಳಿದೀಗ ನೀನೆನ್ನ ಅಪರಾಧ ಕ್ಷಮಿಸೋ ಮರೆಹÉೂಕ್ಕೇ ಗಮನ ಶ್ರೀ ಚನ್ನಕೇಶವನೆ ಸನ್ನುತದಾಸನನು ಬಾಲನೆಂತೆಣಿಸೋ 4
--------------
ಕರ್ಕಿ ಕೇಶವದಾಸ
ಸ್ವಾಮಿ ವೆಂಕಟರಮಣ ಭೂಮಿಪಾಲಕ ದೇವ ಸಂಜೀವ ಪ ಸುರರು ಅಸುರರೆಲ್ಲ ಶರಧಿಯ ಮಥಿಸಲು ಸಿರಿಯು ಜನಿಸಿ ಬಂದು ಹರಿಯ ಸೇರಿದಳು 1 ಸತಿ ಕುಸುಮಮಾಲೆಯನು ಅತಿ ಹರುಷದಿ ಜಗತ್ಪತಿಗೆಯಿಕ್ಕಿದಳು 2 ವಾರಿಧಿಯಾಕ್ಷಣ ಧಾರೆಯನೆರೆಯಲು ವಾರಿಜಾಂಬಕ ಲಕ್ಷ್ಮಿ ಒಡನೆ ನಿಂದಿರಲು 3 ಫಣ್ಭಿಹ್ತ್ರ1ಸೆಮಣಿಯೊಳು ರಮಣಿಯನೊಡಗೊಂಡು ಗುಣನಿಧಿಯು ಒಪ್ಪಿರಲು ತರುಣಿಯರೆಲ್ಲ 4 ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು ಅಚ್ಯುತ ಮಹಾಲಕ್ಷ್ಮಿಗಚ್ಚಬೇಕೆನುತ 5 ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ ಪುಣ್ಯವಂತೆಗೆ ಕೈಗರ್ಣವ ಕೊಡಲು 6 ಸಿರಿ ತನ್ನ ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು 7 ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ 8 ಅಂಗೈಯ ಅರಿಸಿಣವ ಮುಂಗೈಗೆ ಒರಸುತ್ತ ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ 9 ಅಭಯ ಹಸ್ತವನಿತ್ತ ತ್ರಿಭುವನದೊಡೆಯನು ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು 10 ಸತಿ ಕೈಯ ಅರಿಶಿಣವ ಪತಿಯಾದಿಕೇಶವನ ನುತಿಸಿ ಊರಿದಳು 11 ಸಿರಿಯೆನೆತ್ತಿದ ಕೈಯ ಹರಿ ತಾನು ತೋರಿಸಲು ಸಿರಿ ನಾರಾಯಣ ಎಂದು ಅರಿಶಿಣವ ತಿಮುರೆ 12 ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು ವೆಂಕಟೇಶನ ಕರಪಂಕಜಕೆ ತಿಮುರೆ 13 ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು ಮಧುಸೂದನ ಶ್ರೀವತ್ಸದೆದೆಯ ತೋರೆನುತ 14 ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ 15 ವಾಮನನನಾಗೆ ಶ್ರಮವನು ಪಟ್ಟೆನುತ ಭೂಮಿಯ ಅಳೆದ ಪಾದವಿತ್ತಲು ತಾರೆನುತ16 ಕಾದಲನು ಕಾಣುತ್ತ ಪಾದವನಿತ್ತನು ಶ್ರೀಧರನೆನುತಲಿ ಅರಸಿನವ ತಿಮುರೆ 17 ವಾಮಪಾದವ ಕಂಡು ಭಾಮಿನಿ ತಾರೆನೆಲು ಸೋಮಸನ್ನಿಭ ಹೃಷಿಕೇಶ ತಾನಿತ್ತ 18 ಪದ್ಮಬÁಂಧವ ತೇಜ ಪದ್ಮಸಂಭವ ಪೂಜ ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ 19 ಆ ಮಹಾ ನಾಮದ ದಾಮೋದರನ ಕಂಡು ಭಾವೆ ಮಹಾಲಕ್ಷುಮಿ ವೀಳ್ಯವ ಕೊಡಲು 20 ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ ಪೂಸಿದನರಿಸಿನದ ಎಣ್ಣೆಯ ಮೊಗಕೆ 21 ಪಂಕಜಾಕ್ಷನ ಕಂಡು ಕಂಕಣದ ಹಸ್ತವನು ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ 22 ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ ಉದ್ಧರಿಸಿ ನವ ಪ್ರದ್ಯುಮ್ನ ನಗುತ 23 ಅನಿರುದ್ಧ ನಗುತಲೆ ಘನಕುಚಮಂಡಲಕೆ ಅರಿಸಿನವ ತಿಮುರೆ 24 ಪುರುಷರೊಳು ಉತ್ತಮನು ಹರುಷವನು ತಾಳಿಯೆ ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ 25 ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ 26 ನಾರಸಿಂಹನು ಸತಿಯ ಮೋರೆಯಿಂದಾರಭ್ಯ ಓರಣವಾಗಿಯೇ ಅರಿಸಿನವ ತಿಮುರೆ 27 ನೆಚ್ಚಿಯೆ ಹರಿ ತಾನು ಅಚ್ಚ ಕರ್ಪೂರದೆಲೆಯ ಅಚ್ಯುತ ಕೊಡಲು 28 ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ ತನಗೆ ವಲ್ಲಭ ನಿಜನಾದನೆನುತ 29 ಆ ಪರಮಹಿಮನು ರೂಪಸಂಪನ್ನ ದ- ಯಾಪರನಾಗಿಯೆ ಉಪೇಂದ್ರ ತಾನೊಲಿದು 30 ಹರಯೆಂಬ ನಾಮದಿ ಹರದಿ ಮಾಲಕ್ಷ್ಮಿಯ ವರಸಿದ ಶ್ರೀಹರಿಯು ಹರದಿಯರ್ಪೊಗಳೆ31 ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ 32 ವರಮಹಾಲಕ್ಷುಮಿಗೆ ವರಾಹತಿಮ್ಮಪ್ಪಗೆ ಅರಸಿನದೆಣ್ಣೆಯ ರಚಿಸಿದ ಪರಿಯು 33
--------------
ವರಹತಿಮ್ಮಪ್ಪ