ಒಟ್ಟು 5063 ಕಡೆಗಳಲ್ಲಿ , 120 ದಾಸರು , 3402 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮಮಪೇಳುವೆÀನೇನ ರಮಣನಾಕೃತಿಯನಾ ಕಮಲ ಪತ್ರಾಂಬಕೀ ಕೇಳು ಸಖೀ ಹುಳುಕು ಮೋರೆಯ ಮತ್ತೆ ಕೊಳಕು ದೇಹದ ಕಾಂತ ಹುಳುಕು ಬೇರನು ಮೆಲುವನರೆರೆÀ ಚಲುವ ಕೋರೆಯದು ಮೊಳಯುದ್ಧ ಮೀರಿಹುದು ತುಟಿಯನ್ನು ಕ್ರೂರರೂಪವನಾಂತ ಧೀರನಹುದು ಪುರದಾಚೆ ಸಂಚಾರ ಮರದಡಿಯೊಳೇ ವಾಸ ವರಹಗಳೆ ಬಾಂಧವರು ಪರಮಚಿತ್ರ ಅರರೆ ಬಣ್ಣಿಪೆನೆ ಕೀಟಿರೂಪಧರನ ಪರಿಯೇನ ಪೇಳ್ವೆನೀ ಕ್ರೂರವರನ ಗುರುಗಳಾಣತಿಯಿಂದ ಪಡೆದೆನಿವನ ವರಶೇಷಗಿರಿವಾಸನೆನೆದ ಹದನ
--------------
ನಂಜನಗೂಡು ತಿರುಮಲಾಂಬಾ
ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರ ಬೊಮ್ಮ ಮಗನೆಂಬೊ ಧೈರ್ಯಕೆ ಪ. ಬೊಮ್ಮನಯ್ಯನ ಸಿರಿರಮ್ಮೆ ಪತಿಯ ಘನ ಪೆರ್ಮೆ ಗುಣಗಣನಿಲಯನ ಅ.ಪ. ಹೊಳೆವ ಶ್ರೀರೂಪು ವಟಪತ್ರದಲ್ಲಿ ಪ್ರಳಯಜಲಧಿಯ ಶಯನನ ಸೆಳೆಮಂಚದ ಮ್ಯಾಲೆ ಮಗ್ಗುಲೊಳಿಟ್ಟು ತನ್ನ ಗೋಪಿ 1 ಚರಾಚರಂಗಳ ಸೃಷ್ಟಿ ಸ್ವಯಿಚ್ಛೆಯಿಂದ ಪುರುಷರೂಪವ ಧರಿಸಿದ ಪರಮಮಂಗಳ ಮೂರುತಿಯ ತನ್ನ ಗೋಪಿ 2 ಕತ್ತಲೆಯನು ನುಂಗಿ ತತ್ವಂಗಳನು ಕೊಂಡು ಮತ್ತೆ ಬೊಮ್ಮಾಂಡದೊಳಗೆ ಪೊಕ್ಕು ತತ್ವಸಾರದಿಂದೊಪ್ಪುವ ಕೊಮರನ ಗೋಪಿ 3 ಅದಭ್ರಸೃಷ್ಟಿಗಳಿಗಗೋಚರನಾದ ಆದಿಮೂರುತಿ ¸ಚ್ಚಿದಾನಂದನ ಸದಾ ತನಯನೆಂದೆತ್ತಿ ಮುದ್ದಿಸಿ ಸುಖ ಗೋಪಿ 4 ಚತುರುಭುಜ ಶಂಖ ಚಕ್ರ ಗದೆ ಪದುಮ ಸುತಪ ಪ್ರಶ್ನೆಗೆ ವರವಿತ್ತ ಶ್ರುತಿಶಿರೋಮಣಿಯೆಂದರಿಯದೆ ತಾ ಗೋಪಿ 5 ಬೊಮ್ಮಕಲುಷಾನಂತ ಸಹಸ್ರಗಳ ನಿಮಿಷಮಾತ್ರದಿ ಪಡೆದನ ಬೊಮ್ಮಾಂಡವೆ ತನ್ನ ರೋಮಕೂಪದಲ್ಲಿಪ್ಪ್ಪ ರನ್ನವೆ ಮಗನೆಂದಳೆ ಗೋಪಿ6 ಅನ್ನಂತ ರವಿತೇಜಕಿರೀಟದ ಅನ್ನಘ್ರ್ಯ ಸರ್ವಾಭರಣ ಪೊನ್ನ ವಸ್ತ್ರವನ್ನುಟ್ಟ ಅದ್ಭ್ಬುತ ಬಾಲಕನ ಗೋಪಿ 7 ಅನ್ನಂತಾನಂತ ಜೀವಗಣಗಳು ಅನ್ನಂತಾನಂತ ಕರ್ಮಗಳು ಅನ್ನಂತಾನಂತ ಗಾಯತ್ರಿಗೆ ಕÀರ್ತೃ ವಿಷ್ಣು ಗೋಪಿ 8 ಅನ್ನಂತಾಸನ ಶ್ವೇತದ್ವೀಪ ವೈಕುಂಠ ದನ್ನವರತ ವಾಸವಾಗಿಪ್ಪನ ಅನ್ನಿಮಿಷರ ಯೋಚನೆಗೆ ಒಲಿದನ ಗೋಪಿ 9 ಧರ್ಮದÀ ವೃದ್ಧಿಗೆ ಧರ್ಮದ ಹಾನಿಗೆ ತನ್ನಿಚ್ಛೆಯಲವತರಿಸಿದ ಮಮ ಪ್ರಾಣಾಹಿ ಪಾಂಡವನೆನಿಸಿದ ಗೋಪಿ 10 ಉದ್ದಾಮ ಕಾಂಚೀದಾಮ ಕಂಕಣ ಶ್ರೀ- ಮುದ್ರೆಯ ಶ್ರೀವತ್ಸಕೌಸ್ತುಭಧರನ ಮಧ್ವಮುನಿಗೆ ತಾನೊಲಿದು ಬಂದನ ಗೋಪಿ 11 ಸರಸಿಜಬೊಮ್ಮಾಂಡ ಒಡೆದಾಗ ವಿರಿಂಚಿ ತೊಳೆದ ಪಾದೋದಕವ ಹರ ಸೇವಿಸಲಾಗ ಶಿವನ ಮಾಡಿದ ಹರಿಯ ಮಗನೆಂದಳೆ [ಗೋಪಿ] 12 ದೇವಕಿ ಉದರದಲ್ಲಿದ್ದಾಗ ಬ್ರಹ್ಮಾದಿ ದೇವರಿಂದಲ್ಲಿ ಕೀರ್ತಿಸಿಕೊಂಡು ಭಾವಕಿ ದೇವಕಿ ವಸುದೇವನಲ್ಲಿ ಪಿತೃ ಗೋಪಿ 13 ಶಿಶುರೂಪವ ತೋರಿದ ಬೊಮ್ಮನ ಕಂಡು ವಸುದೇವಗೆ ನದಿ ಎಡೆ ಬಿಡೆ ಸಾಸಿರನಾಮ ಚಿತ್ರವಾಗಿದ್ದ ಜಗ- ಗೋಪಿ 14 ಪಾಲಗಡಲಲ್ಲಿ ಪವಡಿಸಿಪ್ಪನ ಕಾಲಮೇಲೆ ಮಲಗಿಸಿಕೊಂಡು ನೀಲಮೇಘಶ್ಯಾಮಯೆಂದು ಬಣ್ಣಿಸುತಲಿ ಗೋಪಿ 15 ಆದಿದೇವನು ಬ್ರಹ್ಮಸೂತ್ರವ ಕಲ್ಪಿಸಿ ವೇದ ವಿಭಾಗವ ಮಾಡಿದನ ಆದರದಿಂತುಂತೆಂದು ಕಲಿಸಿ ಸಂ ಗೋಪಿ 16 ಭಾನುಶತಕೋಟಿತೇಜಪ್ರಕಾಶನ್ನ ಆನಂದವನೆ ನೋಡಿ ಮನ ಉಬ್ಬಿ ಆನಂದನಿಧಿಯ ತೊಡೆಯ ಮ್ಯಾಲೆಯಿಟ್ಟು ಗೋಪಿ 17 ಶೃಂಗಾರನಿಧಿಯನ್ನು ಬಾಯೆಂದು ಕರೆದು ರ- ಥಾಂಗಪಾಣಿಯನೆ ಎತ್ತಿಕೊಂಡು ತಿಂಗಳನೋಡಯ್ಯ ಕಂದ ಎಂದಾತನ ಗೋಪಿ 18 ಸನ್ನಕಾದಿಗಳಯ್ಯನ ಪಿತನ ಕರೆ ದೆನ್ನ ಮಾಣಿಕವೆಯೆಂದಪ್ಪಿಕೊಂಡು ಹೊನ್ನ ತಾ ಗುಬ್ಬಿಯೆಂದಾಡು ಎನ್ನಯ್ಯನೆ ಗೋಪಿ 19 ಗಂಭೀರವಾರಿಧಿಗೆ ಅಂಬಾ ಹೂಡಿದ ತೋಳು ಇಂದಿರೆಯನೆ ಅಪ್ಪಿದ ತೋಳು ಶಂಭರಾರಿಯ ಪಿತ ತೋಳನ್ನಾಡೈ ಎಂದು ಗೋಪಿ 20 ಪಾದ ಉ- ದ್ದಂಡ ಬಲಿಯಮೆಟ್ಟಿದ ಪಾದ ಪುಂಡರೀಕಾಯತವಾದ ಪಾದದಿ ಪ್ರ- ಗೋಪಿ 21 ನಿತ್ಯತೃಪ್ತನು ಹಸ್ತ (ಸಿದ?) ನೆಂದೆನುತಲೆ ಇತ್ತ ಬಾ ಹೊರೀಯೆಂದಾದರಿಸಿ ಹೊತ್ತಾರಿಂದಮ್ಮೆ ಉಣ್ಣದಿರಲು ಹೊಟ್ಟೆ ಗೋಪಿ 22 ಅಮ್ಮೆ ಉಂಬುವ ಪುಟ್ಟ ಬಾಯ ಮುದ್ದಿನ ಮಾ ರಮ್ಮೆಯನರಸುವನಚ್ಚರಿಯ ಅಮ್ಮೆ ನೋಡಿ ನಗುವ ಮುದ್ದು ಬಾಲಕನ ಪರ ಗೋಪಿ 23 ತಾಯ ಮೊಗವ ನೋಡುತ್ತಾಕಳಿಸುತ ಬಾಯಲ್ಲೀರೇಳುಲೋಕವ ತೋರೆ ಆಯತೆ ನೋಡಿ ಮರಳಿ ಕಂಗೆಟ್ಟು ವಿಶ್ವ- ಗೋಪಿ 24 ಜ್ಞಾನಘನನ ವಿಶ್ವತೋನಯನನ ಆನಂದಚರಿತ್ರನ ಅವ್ಯಕ್ತನ ಜ್ಞಾನಿಗಳ ಹೃತ್ಕಮಲದೊಳಿಹನ ಕಣ್ಣಮುಚ್ಚಿ ಗೋಪಿ 25 ಹಾಲ ಹರವಿಯ ಒಡೆದು ಬಂದು ಗೋ- ಪಾಲ ನೀನೆಲ್ಲಿಗೆ ಪೋದೆಯೆಂದು ಕಾಲಕರ್ಮಂಗಳಿಗೆ ಕಾರಣವಾದೋನ ಗೋಪಿ 26 ಜಗದುದರ ಜಂಘಿಸುತ ಅಡಿಯಿಡೆ ಮೃಗಲೋಚನೆ ಮೈಮರೆದಿರೆ ಅಗಣಿತಮಹಿಮನು ಚರಿಸುತ ಬರ ಗೋಪಿ 27 ಆಮ್ಮಹಾ ಮತ್ತಿಯ ಮರನ ಮುರಿದು ಸುರರು ಜಯವೆನ್ನೆ ಶ್ರೀಮಣಿ ಶಿವರಿಂದ ಕೀರ್ತಿಸಿಕೊಂಬ ಗೋಪಿ 28 ಕತ್ತಲೆಯೊಳಗಿದ್ದು ಅಂಜಿದ ಮಗನೆಂದು ಶ್ರುತಿಮಂತ್ರಗಳಿಂದುಚ್ಚರಿಸಿ ಮೃತ್ಯುಂಜಯನ ಪಿರಿಯನೆತ್ತಿಕೊಂಡು ಗೋಪಿ 29 ಶೇಷಶಾಯಿಯ ಹಾಸಿ ಮಲಗಿಸಿ ಚಾರು- ವೇಷನ್ನ ನಿದ್ರಿಗೈಸುವೆನೆಂದು ಸಾಸಿರಮುಖಭೂಷಣನ ಪಾಡುತ್ತ ಸಂ- ತೋಷದಿ ಮೈಮರೆದಳೆ ಗೋಪಿ30 ತ್ರಿಗುಣಾತೀತನ್ನ ಪೊಂದೊಟ್ಟಿಲೊಳ್ಮಲಗಿಸಿ ಜೋಗುಳ ಪಾಡುವ ಯಶೋದೆÉಯ ಎಸೆವ ನೀಲವಸ್ತ್ರನು ಪಾಡೆನ್ನೆ ಕೃಷ್ಣ ಅನು- ಗೋಪಿ 31 ಹರಿಯ ಹೊರಿಸುವಳಲ್ಯಲ್ಲಿ ನಿಮ್ಮಣ್ಣ ವರ ಸಿಂಹಾಸನವಾಗಿಪ್ಪನೆಂದು ಸಿರಿಯಕೂಡೇಕಾಂತದಲಿಪ್ಪನ್ನ ಗೋಪಿ 32 ಪಾದ ನಿಮ್ಮಣ್ಣನ ಶಿರದಲೊಪ್ಪಿದೆÀಯೆಲೆ ಕಂದ ಸುರವರರ ಭಾಗ್ಯನಿಧಿಯೆ ಬಲರಾಮ ಗೋಪಿ 33 ಕಣ್ಣಮುಚ್ಚಿದ ಕೃಷ್ಣನೆಂದು ತೊಟ್ಟಿಲ ಬಿಟ್ಟು ಪುಣ್ಯಾಂಗನೆ ಮೈಮರೆದಿರೆ ಅಣ್ಣ ಆಶನು ಬೆಣ್ಣೆಯ ಕಳಹೋದ ಚಿಣ್ಣನ ಕಾಣೆನೆಂದಳೆ ಗೋಪಿ34 ನೀಲಾಂಬರನ ಬೆನ್ನ ಮೆಟ್ಟಿ ನೆಲವಿನ ಮ್ಯಾಲಿನ ಬೆಣ್ಣೆಯ ಮೆಲ್ಲೆ ಕೃಷ್ಣ ಬಾಲಕಿಯರು ಕೂಡಿ ಕಳ್ಳ ಸಿಕ್ಕಿದನೆಂದು ಗೋಪಿ 35 ಹುಟ್ಟ್ಟದ ಬೆಳೆಯದ ಹಸುಳೆ ಅಣ್ಣನ ಬೆನ್ನ ಮೆಟ್ಟಿ ನೆಲವು ಜಗ್ಗಿದನೆಂದು ರಟ್ಟು ಮಾಡಿದಿರೆಲ್ಲ ನೋಡಿರವ್ವಾ ಎನ್ನ ಗೋಪಿ 36 ಕಂದನ ಎತ್ತಿಕೊಂಡು ರಾಜ್ಯದಂಗನೆಯರ ಮಂದಿರವನೆ ಪೊಕ್ಕು ಬರುತಿರೆ ಒಂದೊಂದು ಕೌತುಕವನೆ ಕಂಡಾನಂದ ಗೋಪಿ 37 ಶಶಿಮುಖಿಯಂಗಳದ ಹಾಲಹಳ್ಳ ಮೊಸರ ಮಡುವು ಬಾಗಿಲ ಮುಂದೆ ಪ್ರಸಾದವೆಲ್ಲ ಬೆಣ್ಣೆ ಫಲಿತವಾಗಿರೆ ಗೋಪಿ 38 ವಾರಿಧಿಯೊಳಗಿದ್ದ ಪನ್ನಗಶಾಯಿಯ ತೇರ ಮೇಲೆ ಇದ್ದ ಬಾಲಕನ ಮೂರುತಿ ಒಂದೆಂಬೋ ಅ- ಗೋಪಿ 39 ದ್ರೌಪದಿಗಕ್ಷಯವಿತ್ತನ ಗುರು ಸಾಂ- ದೀಪಗೆ ಸುತನ ತಂದಿತ್ತನ ಪ್ರೀತಿಯಿಂದಲಿ ಯಜ್ಞಪತ್ಯರಿಗೊಲಿದ ಸುಪ್ರ- ಗೋಪಿ 40 ಘಾತಪುತ್ರರ ಆರು ಮಂದಿಯ ತರಹೇಳಿ ಮಾತೆಯೆಚ್ಚರಿಸೆ ಅಂಗೀಕರಿಸಿ ಅತಿ ಬೇಗದಿಂದಣ್ಣನ ತಂದು ತೋರಿದ ಅ- ಗೋಪಿ 41 ಭಕುತ ಶ್ರುತದೇವ ಬಹುಳಾಶ್ವರಾಯಗೊಲಿ ದೇಕ ಕಾಲದಿ ರೂಪೆರಡಾಗಿ ಆ ಕರುಣಾಬ್ಧಿಯ ಮಾಯಾರೂಪಿÀನ ಪರಿ- ಗೋಪಿ 42 ಪೂತನಿ ಶಕಟವತ್ಸಾಸುರ ವೃಷಭÀನ ಪಾತಕಿ ಚಾಣೂರ ಕುಂಜರನ ಘಾತಿಸಿ ಕಂಸನ್ನ ರಂಟೆಯಾಡಿದ ಬಲು ಭೂತನ್ನ ಮಗನೆಂದಳೆ ಗೋಪಿ43 ಬಾಲತನದಲ್ಲಿ ಸಖನಾಗಿ ಬಂದು ಕು- ಚೇಲ ತಂದವಲಕ್ಕಿಯ ಧರಿಸಿ ಮೇಲುತನದಿಂದ ಸೌಭಾಗ್ಯವಿತ್ತ ಶ್ರೀ ಲೋಲನ್ನ ಮಗನೆಂದಳೆ ಗೋಪಿ&ಟಿbsಠಿ
--------------
ವಾದಿರಾಜ
ಅಯ್ಯಯ್ಯೊ ಮೊರೆುಡಲೇಕೆ ಕೇಳಿಸದೆನ್ನಹುಯ್ಯಲು ವೆಂಕಟರಮಣನೆಕಯ್ಯಾರೆ ಋಣಪಿಶಾಚಕೊಪ್ಪಿಸಿದೆಯಾಕೊಯ್ಯಬಾರದೆ ಕೊರಳನು ಕೋಪ ಬಂದರೆ ಪದೇಶ ಕಾಲದ 'ಪರ್ಯಾಸವೋ ನಾ ಮಾಡ್ದದೋಷದ ಬಲುಹೊ ತಿಳಿಯದಲ್ಲಾನೀ ಸಲಹೆಂದು ಕೂಗುವದೆನ್ನೊಳುದಿಸಿದುದೇಸು ಭವದ ಸುಕೃತವೊ ಫಲಿಸದಿದೇಕೆ 1ತಂದೆ ತಾುಗಳು ಪುಣ್ಯವೃಂದವ ಮಾಡ್ದವರೆಂದು ಜನರು ಪೇಳುತಿರುವರೂಕಂದನುದಿಸಿದನೆಂತೆಂದು 'ಗ್ಗಿದರಂತೆಕಂಡೆನಲ್ಲಾ ನರಕವನೀ ಋಣಕೆ ಸಿಕ್ಕಿ 2ಜನಿಸಿದ ಮೂರು ವರುಷಕೆ ನಿನ್ನಯದಾಸನೆನುತ ಮಾತುಳನಿಂದ ನುಡಿಸಿದೆಅನವರತವು ನಿನ್ನ ನೆನಹಪಾಲಿಸಿದೆುೀಯನುಭವವೇನೆಂದರೇಕೆ ನುಡಿಯದಿಹೆ 3ತನುವ ದಂಡಿಪೆನೆ 'ಷಯರುಚಿ ಬಿಡದಿದೆವನಿತೆ ಸುತರ ಮೋಹ ಬಿಡದಿದೆಘನವಾದ ಗುರು'ನನುಗ್ರಹ ದೊರೆತಿದೆಋಣಪೈಶಾಚ'ದೊಂದು ಗಣಿಸದಲೆಯುತಿದೆ 4ಮೊರೆಯ ಲಾಲಿಸದೆ ಕೈಬಿಡಬೇಡ ಚಿಕನಾಗಪುರಪತಿ ವೆಂಕಟರಮಣನೆಮರೆಯೊಕ್ಕೆನೈ ತಿಮ್ಮದಾಸ ನಾನೆಲೆ ಜಗದ್ಗುರುವೆ ಶ್ರೀವಾಸುದೇವಾರ್ಯ ದಯಾಬ್ಧಿಯೆ5
--------------
ತಿಮ್ಮಪ್ಪದಾಸರು
ಅರಣೀ ಗರ್ಭದಿಂ ಸಂಭವ | ಸುರ ಜೇಷ್ಠ ಭ್ರಾತಾಸುರಪತಿ ನುತ ವೈಭವ ಪ ಭವ ಪರಿ ಹರಿಸಾಮಯೆ ಅ.ಪ. ಅಂಬಾರ ಮಣಾ - ಶಂಕರಾ | ಗೌರಿವರಾ |ಜಂಭಾಸುರ ಹರ - ಸುರ ವರ ||ಅಂಬುಜಾಸನ - ಕುವರಾ - ಗಂಗಾಧರಾ |ಹಂಬಲಿಸುವ - ಭಕ್ತರ ||ಶುಂಭ ನಿಶುಂಭರ | ಸಂಹರ ರಾಮನಅಂಬುಜ ಪದ ದ್ವಯ | ನಂಬಿದ ಭಕ್ತನೆ |ತುಂಬಿದ ಭಕುತಿಯ | ಹಂಬಲ ಹರಿಯಲಿಸಂಭ್ರಮದಲಿ ಕೊಡು | ಶಂಭು ವಂದಿಸುವೆ 1 ಪ್ರಮಥರ ಪೋಷ-ಭೂತೇಶ-ಭುವನೆ5ವ್ಯೋಮಕೆ5-ಉಗ್ರೇಶ ||¸5Àುನಸ ಮುನೀಶ - ಕೈಲಾಸ ವಾಸೇಶಅಮರಾರಿ ನಾಶ ಸತೀಶ ||ಕುಮತಿಗಳ್ಮೋಹಕ | ಕುಮತವ ವಿರಚಿಸಿರಮೆಯರಸಗೆ ಬಹು | ಪ್ರಮುದವ ಪಡಿಸಿದೆ |ಅಮರೋತ್ತಮ ನಿಮ | ವಿಮಲ ಪದಾಬ್ಜಕೆನಮಿಸುತ ಬೇಡುವೆ ಸನ್ಮತಿ ಪ್ರದನೇ 2 ಶುಕ | ಶುಕಿ ಭವನೆನಿಸೀ 3
--------------
ಗುರುಗೋವಿಂದವಿಠಲರು
ಅರಿ ಬೇಗನೇ ಪರಮಾತ್ಮ ನೀನೈ ಪರತತ್ವನಾ ತ್ವರಿತದಲಿ ತಿಳಿಯೊ ಪ ಮೂರು ತಾಣಗಳ ಮೀರಿ ಗೋಚರಿಪ ತೋರುತಿಹ ಈ ದೇಹಾದಿಗಳಿಗೆ ಬೇರೆಯಾಗಿಪುದೆ ಪರಮಪದವು ಧೀರ ನೀನರಿಯೊ ಅದೆ ನಾನು ಎಂದು 1 ಕೋಶಪಂಚಕವ ಲೇಸಾಗಿ ಕಳೆದು ವಾಸನೆಯ ಪಾಶವನೆ ಹರಿದೊಗೆದು ಕ್ಲೇಶ ಪಡುವದನು ತ್ಯಜಿಸಿ ಮುದದಿ ನಾಶರಹಿತಾದ ಪದವು ತಾನೆಂದು 2 ಜನನಮರಣಗಳಿಗಾಚೆಗಿರುವಂಥ ಮನವಾಣಿಗಳಿಗೆ ನಿಲುಕದಿರುವಂಥ ಘನಪದವು ಇದುವೆ ಪರಮಾತ್ಮನೈ ಅನುನಯದಿ ಪೇಳ್ವ ಗುರುಶಂಕರಾರ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ ಬಿಟ್ಟಿ ಬಯಸುವ ನರನು ಬಲು ಮೋಸವಂತೆ 1 ಸುಳ್ಳು ಹೇಳುವ ನರಗೆ ಪರದಾಟವಂತೆ ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ ಕುಳ್ಳ ಹೋರಾಡಿದರೆ ಜಯವಿಲ್ಲವಂತೆ 2 ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ ಊರು ಸೇರುವ ಮುನ್ನ ಬಹಳ ದಣಿಯಂತೆ ಕೀರುತಿಯ ಪಡೆಯುವಗೆ ಬಹು ಶತ್ರುವಂತೆ ಮೂರು ಜ್ಞಾನಿಗಳಿರಲು ಭಾರಿ ಸಭೆಯಂತೆ 3 ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ ಹಳ್ಳಿಗಾರನ ಸತ್ಯ ಬಹಳ ಒರಟಂತೆ ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ 4 ಮುಟ್ಟಲಾಗದ ನಾಯಿ ದಾಸಾನುದಾಸ ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ 5 ಮುದಿತನವು ಭೂಷಣವು ಸ್ಥಾನವಿರುವವರಿಗೆ ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ ಹೆದರುವುದೆ ಭೂಷಣವು ದುಷ್ಟಸಂಗದಲಿ ಗದಗದವೆ ಭೂಷಣವು ಭಕ್ತಿರಸದಲ್ಲಿ 6 ತನ್ನ ತಾ ಶೋಧಿಸಲು ಬಲು ದುಃಖವಂತೆ ಅನ್ಯರನು ಶೋಧಿಸಲು ಸಂತೋಷವಂತೆ ಕನ್ನಡಿಯ ನೋಡದಿರೆ ಬಲು ಚೆಲುವನಂತೆ ಕನ್ನಡಿಯ ನೋಡಿದರೆ ತಾನಳುವನಂತೆ 7 ನಗರ ಸುಂದರಲ್ಲಂತೆ ಬಚ್ಚಿಟ್ಟ ಧನವು ತಾ ಕದ್ದವನಿಗಂತೆ ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ 8 ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ ಹೆಂಡದಾ ಪೀಪಾಯಿ ಬಲು ಶಕುನವಂತೆ ಮಂಡೆ ಬೋಳಿರುವವಳು ಬರಬಾರದಂತೆ ತೊಂಡು ಸೂಳೆಯು ಬರಲು ಬಹಳ ಶಕುನವಂತೆ 9 ಖ್ಯಾತಿ ಬಾರದು ನರಗೆ ಬದುಕಿರುವ ತನಕ ಗೋತ ಹೊಡೆದವನು ಬಲು ಗುಣಶಾಲಿಯಂತೆ ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ ಕೋತಿ ಕುಣಿಯುತಿರಲು ನೂರು ಜನರಂತೆ 10 ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ ಅಮೃತ ಸಮವಂತೆ ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ 11 ಸಾಲಿಗ್ರಾಮ ತೊಳೆಯಲತಿ ಬೇಸರಂತೆ ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ ಶೀಲವಾಡುವ ನುಡಿಗೆ ಸಂದೇಹವಂತೆ ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ 12 ಒಳಿತವನು ಜಗದಲ್ಲಿ ತಲೆ ಎತ್ತನಂತೆ ಕಲಿಪುರುಷನಂಥವನು ಬಲು ಮೇಲೆಯಂತೆ ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ 13 ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ 14 ಭೂಮಿ ಎಲ್ಲವು ಇನ್ನು ಉಳುವಾತಗಂತೆ ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ ರಾಮರಾಜ್ಯದಿ ಕಾರು ಓಡಿಸುವವಗಂತೆ ಆ ಮದುವೆ ಕನ್ಯೆಯು ಪುರೋಹಿತಗಂತೆ 15 ಬಕಳಿಸುವ ನಾಯಕರೆ ಸರಕಾರವಂತೆ ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ ಸುಖದ ಅನುಭವ ಜನಕೆ ಕುದುರೆ ಕೊಂಬಂತೆ ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ 16 ಚಂದ್ರಲೋಕಕೆ ಪಯಣ ಕಾದಿರುವುದಂತೆ ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ ಹಿಂದುಳಿದ ಗುಂಪಿಗವಕಾಶವಿಲ್ಲಂತೆ 17 ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ 18 ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ ಅರಿಯುವಜ್ಞಾನಿಗಳು ತಲೆಹರಟೆಯಂತೆ ಅರಿತವನು ನುರಿತನಾದರು ಬೇಡವಂತೆ ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ19 ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಶೈಲವೇರುವ ನರನು ಮೇಧಾವಿಯಂತೆ 20 ನರಬಲಿಯ ಕೊಡುವವರು ಹಿರಿಯ ಜನರಂತೆ ಹಿರಿಯ ಮಾರ್ಗದ ಜನರು ಧರೆ ಭಾರವಂತೆ ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ ಸುರಿಸುವರು ಧನಧಾನ್ಯ ಸುರಿಮಳೆಗಳಂತೆ21 ಮಂತ್ರವಾದಿಯು ನೋಡಿ ಗ್ರಹಭಯವಿದೆಂದ ಯಂತ್ರದಲಿ ನೋಡಿದವ ಹೃದಯರೋಗೆಂದ ಚಿಂತಿಸುತ ಪಂಡಿತನು ಮೋಹಿನಿಯಿದೆಂದ ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ 22 ಶಿಂಗಪ್ಪ ಕದ್ದು ತಾ ಜೈಲು ಸೇರಿದನು ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು ಹೇಂಗ್ರಪ್ಪ ಬದುಕುವುದು ಎಂದು ಫಲವೇನು ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ 23 ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ ಕಾದಾಡಿ ಬದುಕಲನುಭವವಿಲ್ಲವಂತೆ ಓದು ಬದುಕೆಂದರವಕಾಶವಿಲ್ಲಂತೆ ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ25 ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ ಸುಮನಸರು ಆಳುತಿಹರು ಜನವಿಲ್ಲವಂತೆ ಕಮಲೆರಮಣಗೆ ಬಂತು ಪೀಕ್ಲಾಟವಂತೆ ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು26
--------------
ವಿದ್ಯಾಪ್ರಸನ್ನತೀರ್ಥರು
ಅರೋಗಣೆಯ ಮಾಡೊ ಅಂಜನಾದ್ರಿಯ ವಾಸ ಆಲಸ್ಯವೇತಕೋ ಆಯಿತು ವೆಂಕಟೇಶ ಪ ತಳಿಗೆಯ ತೊಳೆದಿಟ್ಟು ಸುಳಿಬಾಳೆ ಎಲೆಯಿಕ್ಕಿ ನಳಿನಲೋಚನೆಯರುಗಳಿಂದ ಅಭಿಘರಿಸಿ ಎಳೆಯ ಮಾವಿನ ಮಿಡಿಯು ಉಪ್ಪು ಬೇವಿನ ಸೊಪ್ಪು ಹುಳಿಗೂಡಿ ಅರೆದಿಟ್ಟ ಶುಂಠಿ ಕಡಲೆ ಹಂಬೆ 1 ಕಣಿಲೆ ಕಂಚಿನಕಾಯಿ ಅಣಿಲೆ ಅಂಬಟನೆಲ್ಲಿ ಒಣಗಿದ ಮೆಣಸಿನ ಉರಿಯು ಉಪ್ಪಿನ ಹೆರೆಯು ಕಣುಮನಕ್ಕೊದಗಿಯೇ ಅಣಿಯಾಯಿತೆಡೆಯೊಳು 2 ಹೆರೆದ ತೆಂಗಿನಕಾಯ ಅರೆದ ಸಾಸಿವೆಯಿಕ್ಕಿ ಅರೆದು ಬೇಯ್ಸಿದ ಓಗರದೊಳು ಕಲಸಿಟ್ಟು ತರಿದ ಗುಳ್ಳದಕಾಯಿ ಹಾಗಲು ಕುಂಬಳಕಾಯಿ ಕೊರೆದ ಬಾಳೆಯಕಾಯಿ ಹುರಿದದೇ ತುಪ್ಪದಿ 3 ಸಣ್ಣಕ್ಕಿಯೋಗರವು ಬೆಣ್ಣೆಕಾಸಿದ ತುಪ್ಪ ಗಿಣ್ಣಲನೊರೆಹಾಲು ಸಣ್ಣ ಮೆಣಸು ಸಾರು ಅನ್ನ ಚಿತ್ರಾನ್ನವು ಮೊಸರನ್ನ ಹೆಸರ್ಹುಗ್ಗಿ ಉಣ್ಣಬಾರೆಲೋ ನೀನು ಇನ್ನು ತಡ ಬೇಡ 4 ಕೇಸಕ್ಕಿಯೋಗರವು ದೋಸೆ ಪಾಯಸವನ್ನು ಬೀಸು ಹಾರಿಗೆಯತಿರಸವು ಮಂಡಿಗೆಯು ಏಸು ಹೋಳಿಗೆ ಬೇಕೈಸನೀ ಉಣಲೇಳು 5 ಚಕ್ಕುಲಿ ಕರಜಿಯಕಾಯಿ ಮನೋಹರವು ಚೊಕ್ಕ ಬಿಳಿಯ ಬೇಳೆಸುಕ್ಕಿನುಂಡೆಯು ಕದಳಿ ರಸಾಯನವು ಇಕ್ಕಿಸಿಕೊಳ್ಳೊ ನೀ ಮಕ್ಕಳಾಟಿಕೆ ಬೇಡ 6 ಏಲಕ್ಕಿ ನಾಗರನಿಂಬೆ ಬೇವಿನಸೊಪ್ಪು ಮೇಲೆ ಒಗ್ಗರಿಸಿದ ನೀರು ಮಜ್ಜಿಗೆಯು ಹಾಲು ಮೊಸರು ಹಸಿಮಜ್ಜಿಗೆ ಸಹವಾಗಿ ಜಲವು ಮುಟ್ಟದ ಹಾಗೆ ಬೇರೆ ಬೇರಿರಿಸಿದೆ 7 ಗಾಯಿತ್ರಿ ಮಂತ್ರದಿಂ ತೋಯವ ಪ್ರೋಕ್ಷಿಸಿ ಬಾಯೊಳು ಪ್ರಣವವನು ಜಪಿಸಲಾಕ್ಷಣದಿ ರಾಯವೆಂಕಟಪತಿಯು ಆಪ್ಯಾಯನವ ಮಾಡಿ ದಾಯವಾಗಿತ್ತನು ಭಕ್ತಜನರಿಗೆಲ್ಲ 8 ಈ ರೀತಿಯಿಂದಲೆ ಆರೋಗಿಸುವುದೆಂದು ವಾರಿಜನಾಭನ ಸಾರಿ ವರ್ಣಿಸಲು ಮೋರೆಯ ಪ್ರಸಾದ ಕರೆದು ಇವನು ನಮ್ಮ ವರಾಹತಿಮ್ಮಪ್ಪನೊಂದುಗೂಡಿರುವನು 9
--------------
ವರಹತಿಮ್ಮಪ್ಪ
ಅಲ್ಲಿನೋಡಿ ಶ್ರೀನಿವಾಸನ ಪ ವಾಸವ ಮಾಡುತ ದಾಸಜನರ ಮನ ತೋಷಪಡಿಸುವುದ ನೋಡಿ 1 ಸಾಧು ಜನರ ಮನ ಮೋದಪಡಿಸುವುದ ನೋಡಿ2 ಪ್ರಾಣನಾಥÀವಿಠಲನು ಸಾನುರಾಗದಲಿ ವೇಣು ಸಿರಿ ಮಾನಿನಿಯಿಂದೊಪ್ಪಿರುವುದ ನೊಡಿ 3
--------------
ಬಾಗೇಪಲ್ಲಿ ಶೇಷದಾಸರು
ಅವನೆವೆ ಯೋಗ್ಯ ನೋಡಿರೈ ಭಕುತಿಗೆ | ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ | ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ | ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ ಆವಗಿರುವ ಕೂಡಿಕೊಂಡು ಹರಿಯ ದಾಸರಾ 1 ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ | ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು | ಜ್ಞಾನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ | ಸ್ವಾನುಭವದ ಸೌಖ್ಯಸಾರ ಸವಿಯನುಂಬನು 2 ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ | ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು | ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ | ದೊಳನವನ ನಲುವ ಗುರುಮಹಿಪತಿ ಪ್ರೀಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಸದೃಶಮಹಿಮೆಯನು ಪ ಬಿಸಜಸಖ ಕಿರಣ ತರಂಗ ವಸುಧೀತಳದೊಳು ಇವರ ಸುಶಿತ ಸತ್ಕೀರ್ತಿಯ ಪಸರಿಸಿರುವುದು ಘನ್ನ ಅ.ಪ ಭಕುತಿಪೂರ್ವಕವಾಗಿ ಸತಲಕ್ಷೇತ್ರವ ಸಂಚರಿಸಿ | ನಿಖಿಲ ಭೂದೇವಗಣಕೆ | ವಿಖಿನಾರ್ಚಿನ ಮೂಲ ಲಕುಮೀಶ ದರುಶನದಿ | ಸುಖವಿತ್ತು ಪಾಲಿಸಿದ ಅಕಳಂಕಮಹಿಮ 1 ಭಯ ಭಕುತಿಯಲಿವರ ಸೇವಿಸುವ ನರರಿಗೆ ಆವಾವ ಭಯವಿಲ್ಲವೋ | ಗೋವತ್ಸನ್ಯಾಯದಲಿ ತಾವು ಬೆಂಬಲರಾಗಿ | ಭೂವರಜನದಿ ವಾಸರಿವರಿಗೆ ಜಯವ 2 ಈ ಯತಿಯೊಲುಮೆಯೇ ರಾಯರೋಲಿಮೆಯೋ ಕೇಳೋ ರಾಯರೊಲಿಯಲು ಗುರುವಾಯು ವಲಿವಾ | ವಾಯು ವಲಿದಾ ಮಾತ್ರದಿ | ಕಾಯಜ ಜನಕ ಯಮರಾಯನಂಬಿಸಿ ಬಿಡಿಸಿ ಕಾಯುವನು 3 ಸು ವಿನಲು ಸುಜ್ಞಾನ | ಶೀ ಎನಲು ಶೀಲತ್ವ | ಕಾಯ ಶುದ್ಧಿಯಲಿ ಇಂದ್ರಾ ಎಂದುಚ್ಚರಿಸಲಾ ಇಂದ್ರಲೋಕ ಸುಖವೊ ನಿಜವೋ 4 ವೃಂದಾರ ಕಾಂಶಜರು | ಸಂದೇಹ ವಿಲ್ಲಿವರ ವೃಂದಾ ಮಂದಾಕಿನಿಯೊಳಗೆ ಮಿಂದ ಫಲಸಂಪ್ರಾಪ್ತಿ ಇಂದಿರಾಪತಿ ಶಾಮಸುಂದರನ ಕರಪಿಡಿವ 5
--------------
ಶಾಮಸುಂದರ ವಿಠಲ
ಅಳಗಿರಿಯಲಿ ಬೆಳಗಿಹೆಯ ಕಳವಳಿಸುವ ಮನ ಸುಳಿವದೆನ್ನಮಲ ಕಳೆದಭಯವನಿತ್ತು ನರಹರಿ ಪ. ಅಳಗಿರಿ ಹತ್ತಲು ಝಳ ಝಳ ಮನಸಲಿ ಸುಳಿದು ಭಯವ ಹರಿಸಿ ತೊಳಲಿದ ಭಕ್ತರಘ ಕಳೆದು ಪೊರೆವೆನೆಂದು ಅ.ಪ. ರಂಗನ ಮದುವೆಯೋಳ್ ವೆಂಕಟೇಶನು ಬೊಮ್ಮಗೆ ಮುಂಗಡ ನಿನಗುಣಿಸೆನೆ ಉಂಡನು ಹರೆ ರಂಗನ ಬೆಟ್ಟ ಬಾಷಿಂಗ ನರಸಿಂಗ ಹಿಂಗದೆ ವೆಂಕಟನ ತೋರಿಸೋ ಎನ್ನ ಕಂಗಳಲಿ ನೋಡುವೆ ಮನದಣಿಯೆ 1 ಬಂದ ಭಕ್ತರಿಗಭಯದಿಂದಲೇರಿಸಿ ಮುನ್ನ ತಂದೆ ತೋರಿ ವೆಂಕಟನ್ನ ರನ್ನನ್ನ ನಿಂದು ಶ್ರೀನಿವಾಸ ತಂದೆ ವರಹರಂತೆ ಇಂದೆನ್ನ ಕುಲದೇವತೆ ತಂದು ತೋರಿದೆ ನಿಮ್ಮ ಮೂವರ ರೂಹವ 2 ನಾರದ ವಂದ್ಯನ ನಾರೇರಿಗೊಲಿದನ ಶೂರ ಶ್ರೀ ಶ್ರೀನಿವಾಸನೆಂಬ ಪೆಸರಿನ ನೀ ಸಾರಿರ್ಪೆ ಪೆಸರ್ವ ನಾಮದಲಿ ನಾರಾಯಣನೆಂದ ಬಾಲನಿಗೆ ಒಲಿದನೆ ಆರಿಗು ವಶವÀಲ್ಲ ದಾರುಣನಿನಾಮ ನರಸಿಂಹ3
--------------
ಸರಸ್ವತಿ ಬಾಯಿ
ಅಳಬ್ಯಾಡೆಲವೊ ರಂಗಮ್ಮ ನಿನ್ನ ಇಳಿಯಾರ ನೋಡುತಿದೆ ಗುಮ್ಮ ಪ ಒದರಿದರೆ ಕೇಳೆಲೆವೊ ತಮ್ಮಾ | ಅದು ಅದರುತಿದೆ ಬೊಮ್ಮಾಂಡ ತಮ್ಮ ಬೆದರಿ ದಿವಿಜರು ತಮತಮ್ಮ | ನಿಜ ಸದನ ಬಿಡುತಿಹರು ನೋಡಮ್ಮ 1 ಬೆರಳುಗುರು ಗಾಯಗಳಿಂದ | ಆ ದುರುಳರನ್ನ ಜಠರ ತಳದಿಂದ ಕರುಳು ಮಾಲಿಕೆ ಕಿತ್ತಿ ತಂದ | ತನ್ನ ಕೊರಳಲಿ ಹಾಕಿಹ ಚಂದ2 ಏಸು ದೈತ್ಯರಾಸಿಗಳನು | ತಾನು ಮೋಸಗೊಳಿಸಿ ಕೊಲ್ಲುವನು ದಾಸನೆಂದರೆ ಕಾಮಧೇನು ಸುಮ್ಮಗಿ | ರುವ ವಾಸುದೇವವಿಟ್ಠಲ ನೀನು 3
--------------
ವ್ಯಾಸತತ್ವಜ್ಞದಾಸರು
ಆ ನಮಿಪೆ ಗುರುಸಂತತಿಗೆ ಸತತ ಗೆ ಜ್ಞಾನ ಭಕ್ಯಾದಿಗಳ ಕರುಣಿಸಲಿ ಎನಗೆಂದು ಪ ಹಂಸನಾಮಕ ಹರಿ ಬ್ರಹ್ಮಗುರುವರ ಸರೋ ಜಾಸನ ಪುತ್ರರೆನಿಸಿಕೊಂಬಾ ಆ ಸನಕ ಸನಂದನ ಕುಮಾರಕರ ಶಿಷ್ಯ ದೂ ರ್ವಾಸಮುನಿ ಜ್ಞಾನನಿಧಿ ತೀರ್ಥ ಪದಾಬ್ಜಗಳಿಗೆ 1 ಗರುಡವಾಹನತೀರ್ಥ ಕೈವಲ್ಲಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞರಾ ವರಕುಮಾರಕ ತಪೋರಾಜ ಸಂಯಮಿ ವಿಮಲ ಅಚ್ಯುತ ಪ್ರೇಕ್ಷರಿಗೆ 2 ಪದ್ಮನಾಭ ನರಹರಿಮುನಿಪ ಶ್ರೀ ಮಾಧವಕ್ಷೋಭ್ಯಯತಿ ಜಯಾರ್ಯ ಧೀಮಂತ ವಿದ್ಯಾಧಿರಾಜ ಸುಕವೀಂದ್ರ ನಿ ಸ್ಸೀಮ ವಾಗೀಶಯತಿ ರಾಮಚಂದ್ರಾರ್ಯರಿಗೆ 3 ವಿದ್ಯಾನಿಧಿ ರಘುನಾಥ ರಘುವರ್ಯೋತ್ತಮ ಕರ ಪದ್ಮ ಸಂಜಾತ ವೇದವ್ಯಾಸರಾ ವಿದ್ಯಾಪತಿ ಅಧೀಶನಿಧಿ ಸತ್ಯವ್ರತ ನಿಧಿಯಾ ಪಾದ ಕಮಲಗಳಿಗೆ 4 ಸತ್ಯಾಭಿನವ ಪೂರ್ಣ ಸತ್ಯವಿಜಯ ಪ್ರೀಯಾ ಸತ್ಯಬೋಧರ ಸತ್ಯಸಂಧವರರಾ ನಿತ್ಯದಲಿ ನೆನೆದು ಕೃತಕೃತ್ಯನಾಗುವೆ ಬಿಂಬ ಮೂರ್ತಿ ಜಗನ್ನಾಥವಿಠಲನ ತೋರಿಸಲೆಂದು 5
--------------
ಜಗನ್ನಾಥದಾಸರು
ಆ ನಮಿಪೆ ವಿಷ್ಣು ಶ್ರೀ ಬ್ರಹ್ಮ ವಾಯು ವಾಣಿ ಭಾರತಿ ಮುಖ್ಯರವತಾರ ಆವೇಶಕಾನಮಿಪೆ ಪ ಮತ್ಸ್ಯ ಕೂರ್ಮ ಭೂವರಹ ನರಸಿಂಹ ದಧಿ ವಾಮನ ತ್ರಿವಿಕ್ರಮ ಭೃಗುಕುಲೋದ್ಭವ ಬುದ್ಧ ಕಲ್ಕಿ ಹಯಾಸ್ಯ ನಾಮ ತಾಪಸ ಮನು ಉಪೇಂದ್ರ ಅಜಿತಾದಿಗಳಿಗಾ ನಮಿಪೆ 1 ದಾಸ ಧನ್ವಂತ್ರಿ ಹರಿ ಹಂಸ ದತ್ತಾ ವ್ಯಾಸ ಕಪಿಲಾತ್ಮಂತರಾತ್ಮ ಪರಮಾತ್ಮ ಯ ಜ್ಞೇಶ ವೈಕುಂಠ ನಾರಾಯಣಾಧ್ಯವತಾರಕಾನಮಿಪೆ 2 ನಾರಾಯಣೀ ಋಷಭ ಐತರೇಯ ಶಿಂಶು ಮಾರ ಯಜ್ಞ ಪ್ರಾಜ್ಞ ಸಂಕರುಷಣಾ ಕ್ಷಿರಾಬ್ದಿ ನಿಲಯ ಯಮನಂದನಾ ಕೃಷ್ಣ ಹರಿ ನಾರಾಯಣ ಧರ್ಮಸೇತು ರೂಪಾದಿಗಳಿಗಾನಮಿಪೆ 3 ಗುಣಗಳಭಿಮಾನಿ ಶ್ರೀ ಭೂ ದುರ್ಗ ದಕ್ಷಿಣಾಂ ಭೃಣಿ ಮಹಾಲಕ್ಷ್ಮೀ ಶ್ರೀ ವಿಷ್ಣುಪತ್ನೀ ಮಾಯಾ ಕೃತಿ ಶಾಂತಿ ಶುದ್ಧ ರು ಕ್ಮಿಣಿ ಸತ್ಯ ಸೀತಾದ್ಯಮಿತ ರೂಪಗಳಿಗಾನಮಿಪೆ 4 ಹೀನಳೆನಿಸುವಳನಂತಾಂಶದಲಿ ಸುಖ ಬಲ ಜ್ಞಾನಾದಿ ಗುಣದಿ ಮಹಾಲಕ್ಷ್ಮಿ ಹರಿಗೆ ಆನಂದ ವಿಜ್ಞಾನ ಮಯನ ವಕ್ಷಸ್ಥಳವೆ ಸ್ಥಾನವಾಗಿಹುದು ಇಂದಿರೆಗೆ ಆವಾಗ 5 ವಿಧಿ ವಿರಿಂಚಿ ಮಹನ್ ಬ್ರಹ್ಮ ಸೂತ್ರ ಗುರು ಮಹಾಪ್ರಭು ಋಜ ಸಮಾನ ವಿಜ್ಞ ಪ್ರಾಜ್ಞ ಹರಿಭಕ್ತಿ ಮೇಧಾವಿ ಮುಕ್ತಿ ಧೃತಿ ಅಮೃತನಿಗೆ 6 ಸ್ಥಿತಿ ಯೋಗ ವೈರಾಗ್ಯ ಚಿಂತ್ಯ ಬಲಸುಖ ಬುದ್ಧಿ ವಿತತಾದಿ ಗೋಪ ಹನುಮ ಭೀಮ ವೃಷಿವರಾನಂದ ಮುನಿ ಮೊದಲಾದ ರೂಪಶ್ರೀ ಪತಿಗಧಿಷ್ಟಾನ ಕೋಟಿಗುಣಾಧಮರು ರಮೆಗೆ ಆ ನಮಿಪ 7 ಸರಸ್ವತಿ ಗಾಯತ್ರಿ ಬುದ್ಧಿ ವಿದ್ಯಾ ಪ್ರೀತಿ ಗುರುಭಕ್ತಿ ಸರ್ವ ವೇದಾತ್ಮಿಕ ಭುಜಿ ಪರಮಾನು ಭೂತಿ ಸಾವಿತ್ರಿ ಸು ಸುಖಾತ್ಮಿಕಾ ಪತಿ ನಾಮಗಳಿವೆಂದರಿದು 8 ಶಿವಕನ್ಯ ಇಂದ್ರಸೇನಾ ಕಾಶಿಜಾ ಚಂದ್ರ ಯುವತಿ ದ್ರೌಪದಿಯು ಭಾರತಿ ರೂಪವು ಪವಮಾನ ಬ್ರಹ್ಮರಿಗೆ ಶತಗುಣಾಧಮ ಸದಾ ಶಿವನ ರೂಪಗಳ ಈ ಪರಿಯ ಚಿಂತಿಸುತ 9 ತತ್ಪುಮಾನ್ನೂಧ್ರ್ವಪಟ ದುರ್ವಾಸ ವ್ಯಾಧ ಅ ಶ್ವತ್ಥಾಮ ಜೈಗೀಷವ್ಯ ತಪ ಅಹಂಕ್ರತು ಶುಕ ವಾಮದೇವ ಗುರು ಮೃತ್ಯುಂಜಯೋರ್ವ ಸದ್ಯೋಜಾತ ತತ್ಪುರುಷಗಾನಮಿಪೆ 10 ನರ ವಯು ಶುಕಕೇಶವೇಶ ಬಲಗೆ ಸಂ ಕರುಷಗಾವೇಶ ಲಕ್ಷ್ಮಣದೇವಗೆ ಗರುಡ ಶೇಷಾಘೋರ ಸಮರು ಶತಗುಣದಿಂದ ಕೊರತೆಯೆನಿಸುವರು ಮೂವರು ವಾಣಿ ದೇವಿಗೆ 11 ಶೇಷಗೆ ಸಮಾನನೆನಿಪಳು ಜಾಂಬವತಿ ರಮಾ ವೇಶ ಕಾಲದಿ ಷಣ್ಮಹಿಷಿಯರ ಒಳಗೆ ಹ್ರಾಸಕಾಲದಿ ಸಮಳು ಐವರಿಗೆ ಜಾಂಬವತಿ ವೀಶಾದ್ಯರಿಗೆ ಹರಿ ಸ್ತ್ರೀಯರ ಸಮರೈದುಗುಣ12 ರೇವತಿ ಶ್ರೀಯುತ ಶ್ರೀ ಪೇಯ ರೂಪತ್ರ ಯಾವಕಾಲದಿ ವಾರುಣಿಗೆ ಪಾರ್ವತೀ ದೇವಿ ಸೌಪರಣಿಗೆ ಸಮ ಷಣ್ಮಹಿಷಿಯರಿಗೆರಡು ಮೂವರೀರೈದು ಗುಣ ಕಡಿಮೆ ಪತಿಗಳಿಗೆ 13 ಕುಶ ವಾಲಿ ಗಾಧಿ ಮಂದ್ರದ್ಯುಮ್ನನು ವಿಕುಕ್ಷಿ ಶ್ವಸನ ಹರಿ ಶೇಷ ಸಂಯುಕ್ತಾರ್ಜುನಾ ಅಶನೀಧರನ ಸುರೂಪಂಗಳಿವು ಮನ್ಮಥನ ನಿತ್ಯ 14 ಪ್ರದ್ಯುಮ್ನ ಸಂಯುಕ್ತ ರುಕ್ಮಿಣೀ ದೇವಿ ಸುತ ಪ್ರದ್ಯುಮ್ನ ಭರತನು ಸನತ್ಕು ಮಾರಾ ಸಾಂಬ ಸ್ಕಂಧ ಸುದರುಶನ ರುದ್ರ ನಾರ್ಧಾಂಗಿನಿಗೆ ದಶಗುಣಾಧಮರೆಂದು15 ಭವ ಪ್ರಾಣ ನಾಮರಗೆ ರೂಪ ಸರ್ಮೋತ್ತುಂಗನು ಕಾಮ ಪುತ್ರಾನಿರುದ್ದಾದಿಗಳು ದಶ ಹೀನ ಈ ಮಹಾತ್ಮರ ದಿವ್ಯ ಅವತಾರರೂಪಗಳಿಗಾನಮಿಪೆ 16 ಪ್ಲವಗ ಬ್ರಹ್ಮಾಂಶಯುಗ್ದೋಣ ಮಾರುತಾವೇಶ ಸಂಯುತ ವುದ್ಧವಾ ಮುರು ರೂಪವು ಬೃಹಸ್ಪತಿಗೆ ಪ್ರದ್ಯುಮ್ನನ ಕು ಮಾರಾನಿರುದ್ಧ ಶತೃಘ್ನ ಅನಿರುದ್ಧನಿಗೆ 17 ತಾರ ಚಿತ್ರಾಂಗದ ಶಚಿ ರೂಪ ಲಕ್ಷುಣ ಈ ರುಗ್ಮವತ್ರಿ ಎರಡು ರತಿರೂಪವು ಆರುಜನ ದಕ್ಷ ಸ್ವಯಂಭುವ ಮನು ಪ್ರಾಣ ಗಿರೈದು ಗುಣಗಳಿಂದಧಮರೆಂದರಿದು 18 ಭೂತಾಭಿಮಾನಿ ಪ್ರವಹ ಪಂಚಗುಣದಿ ಪುರು ಹೊತ ಪತ್ನ್ಯಾದಿಗಳಿಗಧಮನೆನಿಪ ಈತಗವತಾರವಿಲ್ಲವನಿಯೊಳು ಚಂದ್ರ ಪ್ರ ದ್ಯೋತನಾಂತಕ ಸ್ವಯಂಭುವ ಪತ್ನಿ ಶತರೂಪಿ 19 ಸತ್ಯಜಿತ ಜಾಂಬವಾನ್ ವಿದುರ ಗುರು ವಾಯು ಸಂ ಯುಕ್ತ ಧರ್ಮಜ ಯಮಗೆ ರೂಪ ನಾಲ್ಕು ರಾತ್ರಿ ಚರನವತಾರ ಯಿಂದ್ರ ಯುಕ್ತಾಂಗದಾ ದಿತ್ಯ ನವತಾರ ಬ್ರಹ್ಮ ವಿಷ್ಟ ಸುಗ್ರೀವ 20 ಹರಿಯುಕ್ತ ಕರ್ನ ಮನು ಪತ್ನಿ ಶತರೂಪ ನಾ ಲ್ವರು ಸಮರು ಪ್ರವಹಗಿಂದೆರಡು ಗುಣದೀ ಕೊರತಿ ಮಹ ಭಿಷಕು ಮಂಡೂಕ ಶಂತನು ಸುಶೇ ಪಾದ ಪಾದಾರ್ಧಿಕಾನಮಿಪೆ21 ನಾರದಾಧಮ ವರುಣಗಿಂತಗ್ನಿ ಅವ ತಾರ ದೃಷ್ಟದ್ಯುಮ್ನ ಲವ ನೀಲರೂ ಪಾದ ಗುಣದಾಧಮರು ಎಂದು22 ಅಂಗೀರ ಪುಲಸ್ತ್ಯಾತ್ರಿ ಪುಲಹನು ಮರೀಚಿ ಮುನಿ ಪುಂಗವ ದಶಿಷ್ಠ ಕೃತು ಬ್ರಹ್ಮ ಸುತರೂ ತುಂಗ ವಿಶ್ವಾಮಿತ್ರ ವೈವಸ್ವತರು ಸದಾ ಕೆಂಗದಿರಗಧಮರೊಂಭತ್ತು ಜನರೆಂದು 23 ಸಪ್ತ ಋಷಿಗಳಿಗೆ ಸಮನೆನಿಪ ವೈವಸ್ವತನು ಲುಪ್ತವಾಗಲು ಕಡಿಮೆಯೆನಿಪ ಪ್ರಾವಹ ತಾರ ಕ್ಲುಪ್ತ ಒಂದೇ ರೂಪ ಕೃಪೆಯೆಂದು ಕರೆಸುವಳಿಗಾನಮಿಪೆ24 ಹರನಾವೇಶಯುತ ಘಟೋತ್ಕಚ ದುರ್ಮಖನು ನಿಋಋತಿ ಕರೆಸುವನು ರಾಹು ಯುಗ್ಭೀಷ್ಟಕ ನೃಪಾ ನರೆ ಮಿತ್ರ ನಾಮಕನ ರೂಪ ನಾಲ್ವರು ಅಗ್ನಿ ಗೆರಡು ಗುಣದಿಂಧಮರೆನಿಪರೆಂದೆಂದು 25 ಮಾರಾರಿಯುಕ್ತ ಭಗದತ್ತ ತತ್ತನÀಯ ಕು ಬೇರಗೆರಡವತಾರ ವಿಘ್ನೇಶಗೆ ಚಾರುದೇಷ್ಣನು ಒಂದೆ ಇಂದ್ರನಾವೇಶಯುತ ಆರುರೂಪಗಳುಳ್ಳ ನಾಸತ್ಯ ದಸ್ರರಿಗೆ 26 ವಿವಿಧÀ ಮೈಂದ ತ್ರಿಸಿಖ ನಕುಲ ಸಹದೇವ ವಿಭು ಅವತಾರ ಅಶ್ವಿನೀ ದೇವತೆಗಳ ಲವಣಾದಿ ಷಡ್ರಸಗಳೊಳಗಿದ್ದು ಜೀವರಿಗೆ ವಿವಿಧ ಭೋಗಗಳಿತ್ತು ಸಂತೈಪರೆಂದೆಂದು 27 ದ್ರೋಣಾರ್ಕ ದೋಷಾಗ್ನಿ ಧ್ರುವ ವಿಭಾವಸು ವಸ್ತು ಪ್ರಾಣಾಷ್ಟ ವಸುಗಳೊಳಗೆ ದ್ಯುನಾಮಕ ವಾಣೀಶಯುಕ್ತ ಭೀಷ್ಮನು ನಂದಗೋಪಾಲ ದ್ರೋಣನಾಮಕ ಪ್ರಧಾನಾಗ್ನಿಗಿಂದಧಮರೆಂದಾ ನಮಿಪೆ 28 ಭೀಮರೈವತ ವೋಜಜ್ಯೆಕಪಾದ ಹಿರ್ಬದ್ನಿ ಭವ ವಾಮ ಬಹುರೂಪೋಗ್ರಜ ವೃಷಾಕಪಿ ಈ ಮಹನ್ನೆಂಬ ಹನ್ನೊಂದು ರುದ್ರರು ಭೂರಿ ನಾಮಕ ಜೈಕ ಪಾದಹಿರ್ಬದ್ನಿ ಭೂರಿಶ್ರವಗಾನಮಿಪೆ29 ತ್ರ್ಯಕ್ಷನುಳಿಧತ್ತು ರುದ್ರರು ಸಮರು ಶಲ್ಯ ವಿರು ಪಾಕ್ಷನವತಾರ ಕೃಪ ವಿಷ್ಕಂಭುನೂ ಅಕ್ಷೀಣಬಲ ಪತ್ರತಾಪಕ ಸಹದೇವ ರಕ್ಷಘ್ನ ಸೋಮದತ್ತನು ಎನಿಸುತಿಹಗೆ 30 ವಿರೂಪಾಕ್ಷ ವಿಷ್ಕಂಭ ಪತ್ರತಾಪಕ ಮೂರು ಹರನ ರೂಪಾಂತರಗಳಿವು ವಿವಸ್ವಾನ್ ಅರಿಯಮ ಪೂಷ ಭಗ ಸವಿತು ತೃಷ್ಟಾಧಾತ ವರುಣ ಶಕ್ರೋರುಕ್ರಮನು ಮಿತ್ರ ಪರ್ಜನ್ಯಗಾನಮಿಪೆ 31 ಶೌರಿನಂದನ ಭಾನು ಸವಿತ್ರ ನಾಮಕ ಸೂರ್ಯ ವೀರಸೇನನು ಯಮಾವಿಷ್ಟ ತ್ವಷ್ಟಾ ಆರುಜನ ರುಕ್ತರೆನಿಪರು ವುರುಕ್ರ್ರಮ ಶಕ್ರ ವಾರಿಧಿ ವಿವಸ್ವಾನ್ ಮಿತ್ರ ಪರ್ಜನ್ಯರಿಗೆ 32 ಪ್ರಾಣ ನಾಗ ಪಂಚಕ ಅಹಂಕಾರಿಕ ಪ್ರಾಣ ಪ್ರವಹ ನಿವಹ ಸಂವಹ ಸ್ವಹಾ ಕಾಲ ಶ್ವಾಸ ಏ ಕೋನ ಪಂಚಾಶನ್ ಮರುದ್ಗಣಸ್ಥರು ಎಂದು 33 ಶ್ವೇತ ಶಂ ಹನುಮ ಭೀಮ ಯತಿವುದಿತ ಕಾಮ ಜಡಪಿಂಗ ಕಂ ಪನ ವೃದ್ವಹ ಧನಂಜಯ ದೇವದತ್ತರಿಗೆ 34 ಶುಕ್ರ ಶಂಕು ಗುರು ಕಾಂತ ಪ್ರತಿಭ ಸಂವರ್ತಕನು ಪಿಕ ಕಪಿಗಳಿವರು ಮುರುತರು ಸಮೀರಾ ಯುಕುತ ಪಾಂಡು ವರಾಹನು ಎನಿಪ ಸಂಪಾತಿ ಕೇಸರಿ ಶ್ವೇತ ಮರುತನವತಾರ ವೆಂದಾನಮಿಪೆ35 ಪ್ರತಿಭವಂಶನು ಚೇಕಿತಾನೆಂದೆನಿಪ ವಿ ಪ್ರಥು ಸೌಮ್ಯ ಕುಂತೀಭೋಜನೆ ಕೂರ್ಮನು ಕ್ಷಿತಿ ಯೊಳಗೆ ಪ್ರಾಣಪಂಚಕರೊಳು ಪ್ರಾಣ ಗಜ ಅಥ ಗವಾಕ್ಷಾಪಾನ ವ್ಯಾನ ಗವಯನು ಎಂದು 36 ವೃಷನು ಸರ್ವತ್ರಾತನು ವುದಾನಗಂಧ ಮಾ ದ ಸಮಾನನರಿವರು ವಿತ್ತಪನ ಸುತರು ಶ್ವಸನಗಣದೊಳು ಕಿಂಚಿದುತ್ತ ಮರಹಂ ಪ್ರವಹ ಗಸಮರೆನಿಪರು ಪ್ರಾಣ ಪಂಚಕರು ಎಂದೂ 37 ಪ್ರತಿ ವಿಂಧ್ಯ ಧರ್ಮಜನ ಭೀಮಸೇನನ ಪುತ್ರ ಶೃತಸೋಮ ಅರ್ಜುನಜ ಶೃತಕೀರ್ತಿಸಾ ಶತಾನೀಕÀನ ಕುಲಜ ಸಹದೇವಾತ್ಮಜನು ಶೃತಕರ್ಮರಿವರು ದ್ರೌಪದಿ ದೇವಿಗಾತ್ಮಜರಿಗಾನಮಿಪೆ38 ಚಿತ್ರರಥ ಅಭಿಪೌಮ್ರಬಲ ಕಿಶೋರ ಗೋಪಾಲ ರುತ್ತಮರು ಗಂಧರ್ವರೈವರಿಂದ ಯುಕ್ತರಾಗಿಹರು ಕೈಕೇಯರೈವರು ಪಾಂಡು ಪುತ್ರಜರು ವಿಶ್ವದೇವತೆಗಳಿವರೆಂದು39 ಕಾಲ ಕಾಮಲೋಚನದಕ್ಷ ಕೃತು ಪುರೂ ರವ ಸತ್ಯ ವಸು ಧುರಿಗಳಿವರು ವಿಶ್ವೇ ಋಭು ಗುಣ ಪಿತೃತ್ರಯ ದ್ಯಾವ ಅವನಿಪರು ಗಣಪಾದ್ಯರಧಮ ಮಿತ್ರನಿಗೆಂದು 40 ವಸುಗಳೆಂಟಾದಿತ್ಯರೀರಾರು ಒಂದಧಿಕ ದಶರುದ್ರಗಣ ಪಿತೃತ್ರಯ ಬೃಹಸ್ಪತೀ ವಿಶ್ವ ದೇವ ಅಶ್ವಿನಿಗಳೆರಡೈವತ್ತು ಶ್ವಸನಗಣರು ಋಭುವೊಂದು ಎರಡು ದ್ಯಾವಾಪೃಥವಿ 41 ಒಂಭತ್ತು ಕೋಟಿ ದೇವತೆಗಳೊಳು ನೂರು ಜನ ಅಂಬುಜಾಪ್ತರ ಒಳಗುರುರುಕ್ರಮನುಳಿದು ಪದ್ಮ ಸಂಭವನ ಸಹರಾಗಿಹರು ಶತಸ್ಥರಿಗೆ 42 ಮರುತತ್ರಯರು ವನಿಯಮ ಸೋಮ ಶಿವದಿವಾ ಕರರಾರು ರುದ್ರ ಗುರು ಇವರುಕ್ತರೂ ಉರವರಿತ ಎಂಭತ್ತೈದು ಸಮರು ತಮ್ಮೊಳಗೆ ಸರಸಿಜೋದ್ಭವನ ಸುತರೆನಿಪ ಸನÀಕಾದಿಗಳಿಗಾನಮಿಪೆ43 ಸನಕಾದಿಗಳೊಳುತ್ತಮ ಸತತ್ಕುಮಾರ ಶಿಖಿ ತನುಜ ಪಾವಕನು ಪರ್ಜನ್ಯನು ಮೇಘಪ ಎನಿಸುವನು ಶರಭವೊಂದೇರೂಪ ಧರ್ಮರಾ ಜನ ಪತ್ನಿ ದೇವಕಿಯು ಶಾಮಲೆಯ ರೂಪವೆಂದಾ ನಮಿಪೆ44 ಯಮ ಭಾರ್ಯ ಶಾಮಲಾ ರೋಹಿಣಿದೇವಿ ಚಂ ದ್ರಮನ ಸ್ತ್ರೀ ಅನಿರುದ್ಧದೇಹಿ ಉಷಾ ದ್ಯುಮಣಿ ಭಾರ್ಯಾ ಸಂಜ್ಞ ಗಂಗಾ ವರುಣ ಭಾರ್ಯ ಸುಮರಾರು ಜನರು ಪಾವಕಗೆ ಕಿಂಚಿದಧಮರೆಂದಾ ನಮಿಪೆ45 ಪರ್ಜನ್ಯ ಈ ರೆರಡು ವನ್ಹಿಗೆ ಕಡಿಮೆ ಪಾದಮಾನೀ ಸುರಪನಂದನ ಜಯಂತನು ಪ್ರಹಲ್ಲಾದ ಈ ರ್ವರು ಮುಖ್ಯರಧಮ ಪರ್ಜನ್ಯಗೆಂದೆಂದು 46 ಎರಡು ಗುಣ ಪರ್ಜನ್ಯಗಿಂದಧಮಳು ಸ್ವಹಾ ರೆರಡಧಿಕ ಗುಣದಿ ಸ್ವಪತಿಗೆ ನೀಚಳೂ ಹರಿ ಶಕ್ರಸತಿ ಅಶ್ವಿ ಯುಕ್ತಾಭಿಮನ್ಯು ಚಂ ದಿರಜ ಬುಧನವತಾರ ಸ್ವಾಹಾ ದೇವಿಗಧಮಳೆಂದಾ ನಮಿಪೆ 47 ಎನಿಸುವಳು ಶಲ್ಯ ಜರಾಸಂಧನಾತ್ಮಜಾ ಶ್ವಿನಿ ಭಾರ್ಯಾನಾಮಾಭಿಮಾನಿ ಉಷಾ ಘನರಸಾಧಿಪ ಬುಧಗೆ ಕಿಂಚಿದ್ಗುಣ ಕಡಿಮೆ ಅವಳ ಪತ್ನಿಗೆ ದಶಗುಣಾಧಮಳುಯೆಂದು 48 ಧರಣಿಗಭಿಮಾನಿ ಎನಿಸುವ ಸೂರ್ಯಸುತ ಶನೇ ಶ್ವರ ಉಷಾದೇವಿಗೆರಡು ಗುಣಾಧಮ ತರಣಿ ನಂದನಗೆ ಸತ್ಕರ್ಮಾಭಿಮಾನಿ ಪು ಷ್ಕರ ಕಡಿಮೆ ಪಂಚಗುಣದಿಂದ ಎಂದೆಂದು 49 ನಾರದನ ಶಿಷ್ಯ ಪ್ರಹ್ಲಾದ ಬಾಲ್ಹೀಕ ಸ ಮೀರ ಸಂಯುಕ್ತ ಸಹ್ಲಾದ ಶಲ್ಯಾ ಮೂರನೆಯನುಹ್ಲಾದ ಸವಿತ್ರನಾವೇಶದಲಿ ತೋರಿದನು ದೃಷ್ಟಕೇತು ಎನಿಸಿ ಧರೆಯೊಳಗೆ 50 ತಾಮಾಂಶಯುಗ್ ಜಯಂತನು ಬಭ್ರುವಹ ವರು <ಈ
--------------
ಜಗನ್ನಾಥದಾಸರು
ಆ ವೆಂಕಟಗಿರಿನಿಲಯನಂಘ್ರಿ ರಾ ಜೀವಯುಗಳಗಾನಮಿಸುವೆನು ಪ ಸೇವಿಪ ಜನರಿಗಮರ ತರುವೆನಿಸಿ ಧ ರಾವಲಯಾಖ್ಯ ದಿವಿಯೊಳೆಸವ ಅ.ಪ. ನಿಖಿಳ ಜಗತ್ತಿಗೆ ಪಾವನತರವೆಂದೆನಿಸುವುದು ಶ್ರೀ ವಿಧಿಭವ ಶಕ್ರಾದ್ಯರು ಆವನ ಸೇವಕ ಸೇವಕರೆನಿಸುವರು ತಾ ಉತ್ತಮ ಪುರುಷನೆನಿಸಿ ಜಗವ ಸ ದಾವಕಾಲ ಸಂತೈಸುವನು ಜೀವಾಂತರ್ಗತನಾಗಿ ವಿವಿಧ ವೇ ದಾವಳಿಯಿಂದ ತುತಿಸಿ ಕೊಂಬಾ 1 ಪಾತನೊಳಹಿಪ ವಿರೋಧಿಸೆ ತವಸ ತ್ವಾತಿಶಯನ ತೋರೆಂದೆನುತಾ ಜಾತರೂಪ ಶೈಲಾತ್ಮಜನಪ್ಪಿರೆ ವೀತಿ ಹೋತ್ರ ಸಖ ಕಿತ್ತೊಗೆಯೆ ವೀತ ಕರ್ನನಳವಳಿದು ವೇಗ ಧಾತ ಮಹಿಳೆ ತೀರ್ಥದಿ ಭೂ ಲಕ್ಷ್ಮೀಸ ಮೇತನಾಗಿ ಮೋದಿಸುತಿಪ್ಪೆ 2 ಭೂಸುರನೊರ್ವನು ತೊಂಡಮಾನ ಧರ ಣೀಶÀನ ನಿಲಯದೊಳುಳುಹಿ ಸತಿಯ ನೃಪತಿ ಮರೆಯೆ ನಿ ಶ್ವಾಸ ವನೈದಿದಳಾ ಸತಿಯು ಆ ಸಮಯದಿ ದ್ವಿಜವರ್ಯನು ಬೆಸಗೊಳೆ ಕ್ಲೇಶದಿ ಭೂಮಿಪ ಸಂಸ್ತುತಿಸೆ ಕೇಶವ ತಾನಸ್ಥಿಗಳ ತರಿಸಿ ಸು ವಾಸಿನಿ ಶಿಶು ಸಹ ಒಲಿದಿತ್ತಾ 3 ವೃದ್ಧ ಬ್ರಾಹ್ಮಣನು ತುತಿಸೆ ಸಲಿಲದೊಳ ಗದ್ದಿ ಕುಮಾರತ್ವವನಿತ್ತ ಅಧ್ವರವೆಸಗಿದ ಋಷಿಗಳ ಮಂತ್ರದ ಪದ್ದತಿ ತಿದ್ದಿಯಜ್ಞವ ಮಾಡ್ದ ಮಧ್ಯರಾತ್ರಿಯೊಳು ಬೆಸಗೊಂಡ ನೃಪನು ಪದ್ರವ ಕಳೆದಾಯುಧವಿತ್ತು ಮೃದ್ಭಾಂಡವ ರಚಿಸುವನಿಗೊಲಿದವನ ಚೋದ್ಯ ತೋಂಡಮಾನಗೆ ತೋರ್ದ 4 ಸಂಚಿತ ಕುಕರ್ಮಗಳ ಮನೆಯ ಮುರಿದು ಆಗಾಮಿ ಫಲಂಗಳ ಅನುಭವಕೀಯದೆ ಪ್ರಾರಬ್ದಾ ಮೂರ್ತಿ ಚಿಂ ತನೆ ಇತ್ತು ಸ್ವರೂಪಸುಖಾ ಅನುದಿನದಲಿ ವ್ಯಕ್ತಮಾಡಿಸಿ ಕೊ ಟ್ಟನಿಮಿತ್ತಾಪ್ತನೆನಿಸುತಿಪ್ಪ 5 ಏಕಮೇವ ರತ್ನಾಕರ ಮಂದಿರ ಆಕೂತಿಜ ಯಜ್ಞಾಕರನೇ ಲೊಕವಿಲಕ್ಷಣ ಸೂಕರಾತ್ಮ ಪಿ ವಿನುತ ಲಕ್ಷ್ಮೀ ಕಾಂತಾ ಗೋಕುಲ ಮಂದಿರ ಏಕಾಂತಿಗಳ ನಿ ರಾಕರಿಸಿದೆ ಲೋಕೈಕ ಸುಖ ಶೋಕ ರಹಿತ ನಿಜಲೋಕವಿತ್ತು ನಿ ರಾಕುಲ ಸುಖಗಳ ತಾ ಕೊಡುವಾ 6 ದಿನಪನೊಳಗೆ ವೃಜಿನಿ ವಸು ತಾ ಎಂ ದೆನಿಸಿ ಜಯಾಪತಿ ಪ್ರದ್ಯುಮ್ನ ಅನಿರುದ್ಧಾದಿ ಚತುರ್ಮೂತ್ರ್ಯಾತ್ಮಕ ತನಗೆ ತಾನೆ ಪೂಜಕ ಪೂಜ್ಯ ಅನುಪಮ ನಾಮದಿ ಕರೆಸುತಲಿಹ ತ ನ್ನನು ಈ ಪರಿಧೇನಿಸುತಿಪ್ಪ ಮನುಜರಿಗೊಲಿದು ಜಗನ್ನಾಥವಿಠ್ಠಲ ಜನನ ಮರಣಗಳ ಪರಿಹರಿಪಾ 7
--------------
ಜಗನ್ನಾಥದಾಸರು