ಒಟ್ಟು 626 ಕಡೆಗಳಲ್ಲಿ , 80 ದಾಸರು , 571 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರ್ತನಗೋಪ ಕೃಷ್ಣ | ವಿಠಲ ಪೊರೆ ಇವನಾ ಪ ಅರ್ತು ನಿನ್ನಂಘ್ರಿಯಲಿ | ದಾಸ್ಯ ಕಾಂಕ್ಷಿಪನಾ ಅ.ಪ. ಪತಿ ಸುಪ್ರೀಯ | ಮಧ್ವಾಂತರಾತ್ಮಸದ್ಧರ್ಮರತಿಯಿತ್ತು | ತಿದ್ದಿ ಸಂಸ್ಕತಿಗಳನುಶ್ರದ್ಧಾಳು ವೆಂದಿನಿಸು | ಸಿದ್ಧಾಂತ ಸಥದೀ 1 ಬೋಧ ಓದಗಿಸಿಕಾಯೋ | ಬಾದರಾಯಣದೇವಮೋದದಿಂ ಪ್ರಾರ್ಥಿಸುವೆ | ಹೇ ದಯಾಪೂರ್ಣ 2 ಧ್ಯಾನುಪಾಸನವಿತ್ತು | ಶ್ರೀನಿವಾಸನಮನದಿಕಾಣುವ ಸುವಿಜ್ಞಾನ | ನಿನಾಗಿ ಕೊಡುತಾಮೌನಿಕುಲ ಸನ್ಮಾನ್ಯ | ಜ್ಞಾನದಾಯಕ ಹರಿಯೆದೀನಜನ ಮಂದಾರ | ನೀನಾಗಿ ಪೊರೆಯೊ 3 ಪಿತೃ ಮಾತೃ ಪರಿವಾರ | ವ್ಯಾಪ್ತ ಹರಿಮೂರ್ತಿಯನುಅರ್ಥಿಯಿಂದಲಿ ಭಜಿಪ | ಮತಿಯ ಪಾಲಿಸುತಾಕರ್ತೃತ್ವ ಭ್ರಾಂತಿಯನು | ಹತಮಾಡಿ ಶ್ರೀಹರಿಯೆಕೀರ್ತಿವಂತನ ಗೈಯ್ಯೋ | ಆರ್ತರುದ್ಧರಣಾ 4 ಮುನ್ನವೇ ತ್ಯೆಜಸನು | ನನ್ನೆಯಿಂ ಸೂಚಿಸಿಹಚೆನ್ನ ಅಂಕಿತವನ್ನೆ | ಇನ್ನು ಸ್ಥಿರಪಡಿಸೀಘನ್ನ ಉಪದೇಶವನು | ಚಿತ್ಗಾನಿಗೆ ಇತ್ತಿಹೆನೋಮನ್ನಿಸೀಕೃತ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ನಾದವನಾಲಿಸೋ ನಿತ್ಯದಿ ನಾದದೊಳಗಿನ ನಾದ ಸುನಾದಓಂಕಾರ ನಾದವನರಿವನೆ ಧನ್ಯ ಯೋಗೀಶ ಪ ನಾದದಿಂದಲಿ ಅಷ್ಟಪಾಶವಿಕ್ಕಡಿಯಹುದುನಾದದಿಂದಲಿ ಮದಗಳೆಂಟುಡುಗಿ ಹೋಗುವವುನಾದದಿಂದಲಿ ಅರಿಗಳರುವರೂ ತೊಲಗುವರುನಾದದಿಂದಲಿ ಕರ್ಮವು ದೂರಹುದುನಾದದಿಂದಲಿ ಧರ್ಮವು ವೃದ್ಧಿಪುದುನಾದದಿಂದಲಿ ಬ್ರಹ್ಮವು ಯೋಗೀಶ 1 ನಾದದಿಂದಲಿ ಮೌನ ತನಗೆ ತಾನಾಗುವುದುನಾದದಿಂದಲಿ ಚತುಸ್ಸಾಧನವು ದೊರಕುವುದುನಾದದಿಂದಲಿ ಸಪ್ತ ಭೂಮಿಕೆಗಳಾಗಿಹವುನಾದದಿಂದಲಿ ಜ್ಞಾನವು ಸ್ಥಿರವಹುದುನಾದದಿಂದಲಿ ಚಿತ್ರವಚಲವಹುದುನಾದದಿಂದಲಿ ಸರ್ವರು ಯೋಗೀಶ 2 ನಾದದಿಂದಲಿ ಬುದ್ಧಿ ನಿರ್ಮಲವಾಗುವುದುನಾದದಿಂದಲಿ ಮನವು ಹಿಡಿತದಲಿರುತಿಹುದುನಾದದಿಂದಲಿ ದೃಕ್‍ದೃಶ್ಯ ಸಾಧನವಹುದುನಾದವೆ ಬ್ರಹ್ಮವಹುದುಚಿದಾನಂದನಾದವನ ತೋರಲು ಬಹುದು ಅವನಲಿಭೇದವಿಲ್ಲದೆ ಕೂಡಲುಬಹುದು ಯೋಗೀಶ 3
--------------
ಚಿದಾನಂದ ಅವಧೂತರು
ನಾನೆಂತರಿವೆನೈ ನಿನ್ನಂತರಂಗವ ಸಾನಂದಗೋವಿಂದ ನೀನಿಂದು ದಯೆದೋರು ಪ ಆದಿ ಮೂರುತಿಯೆ ನಾನೀದೀನ ನರ ಭೇದರಹಿತನೇ ಅದರ ಹಾದಿಯರಿಯೆನೊ ವೇದ ವಂದ್ಯನು ನೀನು ಓದನರಿಯದ ನಾನು ಸಾಧುರಕ್ಷಕ ಸ್ವಾಮಿ ಬೇದಯ ತಿಳಿಸೊ 1 ಜ್ಞಾನಪ್ರಕಾಶ ನಾ ಮಾನಾಭಿಮಾನಿ ಮೌನಿರಕ್ಷಕನೇ ಆಂ ಹೀನನಡೆಯವ ದಾನಿಪರಮಾತ್ಮನು ದೀನ ತಾಪತ್ರಿಯೆನು ನೀನಮೃತದವನೈ ನಾನು ಮತ್ರ್ಯನು 2 ಸರುವಲೋಕೇಶಾ ನಾಪರದೇಶಿಯಹುದೋ ಸಿರಿದೇವಿಯರಸಾ ದಾಸ ತಿರಿದುಂಬೊತಿರುಕ ಶರಣಸುಧಾರಕ ಬಿರುದಿನಿಂ ಮೆರೆಯುವ ವರದ ಜಾಜೀಶ ಪೊರೆ ಶ್ರೀನಿವಾಸ 3
--------------
ಶಾಮಶರ್ಮರು
ನಾನೆಲ್ಲಿ ಜ್ಞಾನಿಯು ನಾನೆಲ್ಲಿ ಸುಜನನು ಹೀನ ವಿಷಯಗಳುಂಬ ಶ್ವಾನನಂತಿರುವೆ ಪ ಗಾತ್ರ ಬಳಲಿಸಿ ಮದನಸೂತ್ರ ಬೊಂಬೆಯು ಎನಿಸಿ ನೇತ್ರದಿಂದಪಾತ್ರದವರನು ನೋಡಿ ಸ್ತೋತ್ರಮಾಡುತ ಹಿಗ್ಗಿರಾತ್ರೆ ಹಗಲು ಕೆಟ್ಟ ವಾರ್ತೆಯಲ್ಲಿರುವೆ 1 ಧನದಾಸೆ ಘನವಾಗಿ ಅಣು ಮಹತ್ಕಾರ್ಯದೊಳುತಣಿಸಿ ದಣಿಯಲು ತೃಣವು ದೊರೆಯದಿರಲುಮನೆ ಮನೆಗೆ ಬಾಯ್ದೆರೆದು ಶುನಕನಂತೆ ದಿನಗಳೆವೆಮನುಜ ಪಶುವಿಗೆ ಇನ್ನು ಮುನಿಯೆಂಬಿರೆಂತೋ2 ನಾಲಗೆಯ ರುಚಿಯಿಂದ ಸಾಲದಾಯಿತು ಬಯಕೆಕಾಲ ಕಾಲಕೆ ನೆನಸಿ ಹಾಳಾದರೂಶೀಲಗಳ ಕಳಕೊಂಡು ಚಾಲುವರಿಯುತ ಪರರಆಲಯದ ಉಚ್ಚಿಷ್ಠ ಮೇಲಾದ ಸವಿಯ3 ಸ್ನಾನಧ್ಯಾನವನರಿಯೆ ಸಾನುರಾಗದಿ ಭಕ್ತಿಕೂನ(ಗುರುತು)ವಿಲ್ಲದೆ ಡಂಭ ಮೌನಿಯೆನಿಸಿನಾನಾ ವಿಷಯ ಮನದಿ ನಾ ನೆನೆಸುವೆ ನಿತ್ಯಏನಾದರೂ ಕಷ್ಟ ಕಾಣದಂತಿರುತಿಪ್ಪೆ 4 ಪತಿತರೊಳು ಎನ್ನಂಥ ಪತಿತರೊಬ್ಬರ ಕಾಣೆಗತಿಯು ನೀನಲ್ಲದೆ ಅನ್ಯರಿಲ್ಲಪತಿತ ಪಾವನನೆಂಬೊ ಬಿರುದುಂಟುಮಾಡುವಕ್ಷಿತಿಪತಿ ಶ್ರೀಕೃಷ್ಣರಾಯ ನೀನಹುದೋ5
--------------
ವ್ಯಾಸರಾಯರು
ನಾನೇ ಭ್ರಮಿಸಿದೆನೋ ವಿಷಯ ಸಂಗ ನೀನೇ ನಲಿದಿತ್ತೆಯೋ ಪ. ಗಾನಲೋಲನೆ ಕೃಷ್ಣ ಏನೆಂಬುದರಿಯೆನೊ ಮೌನಿ ಜನಪ್ರಿಯ ಧ್ಯಾನಗಮ್ಯನೆ ರಂಗ ಅ.ಪ. ನೂಕುತ ದಿನ ಕಳೆದೆ ಕಾಕು ಯುಕುತಿಯಲ್ಲಿ ವ್ಯಾಕುಲ ಮನಕಿಲ್ಲ ಶ್ರೀಕಾಂತ ನಿನ್ನಿಚ್ಛೆ ಸುಖದುಃಖ ನಿಕರವ 1 ಆಟ ಪಾಟ ನೋಟವೂ ಊಟ ಕೂಟ ಕಾಟ ಕರ್ಮಗಳೆಲ್ಲವೂ ಹಾಟಕಾಂಬರ ನಿನ್ನಾಟವÉನ್ನಲುಭವ ದಾಟಿಸುವವೊ ತೆರೆ ಏಟಿಗೆ ಕೊಡುವುವೋ 2 ನರಕಕೆ ಕಾರಣವೋ ಹೇ ಶ್ರೀನರ ಹರಿ ನಿನ್ನ ಪ್ರೀತಿ ಕರವೋ ಸಂಚಿತ ಕರ್ಮ ಹರಿಸುತ ವರ ಸುಖ ಪಾಲಿಪ ಗುರುತಿನ ಪರಿಯೋ 3 ದೇಹಕ್ಕೆ ಹಿತಕರವೋ ಇಲ್ಲವೆ ಮನ ದಾಹಕ್ಕೆ ಮೃತ ಕರವೋ ದೇಹ ಮೋಹಾದಿಗಳಳಿದು ನಿಶ್ಚಲ ತತ್ವ ಶ್ರೀಹರಿ ತೋರುವ ತೆರವೊ ಒಂದರಿಯೆ 4 ಪಾಪಕ್ಕೆ ಹಿತಕರವೋ ಇಲ್ಲವೆ ಮನ ದಾಹಕ್ಕೆ ಮೃತ ಕರವೋ ದೇಹ ಮೋಹಾದಿಗಳಳಿದು ನಿಶ್ಚಲ ತತ್ವ ಶ್ರೀಹರಿ ತೋರುವ ತೆರವೊ ಒಂದರಿಯೆ 5 ಪಾಪಕ್ಕೆ ಕಾರಣವೋ ಈ ಕರ್ಮಗಳ ಳಾಪದುದ್ಧಾರಕವೋ ಗೋಪಾಲಕೃಷ್ಣವಿಠ್ಠಲನೆ ಮದ್ಗುರು ಬಿಂಬ ವ್ಯಾಪಾರದ್ವಯ ನಿಂದು ನೀ ಪ್ರೀತನಾಗಲೊ 6
--------------
ಅಂಬಾಬಾಯಿ
ನಾನೇನ ಮಾಡಿದೆ ತಪ್ಪುಗಳನ್ನ ನಾನೇನ ಮಾಡಿದೆ ದೇವರದೇವ ಪ ನಿನ್ನ ದಾಸರ ತಪ್ಪನೆಣಿಸದೆ ಪೊರೆಯುವೆ ನಾನೊಬ್ಬ ದಾಸನೆಂದರಿದು ನೀ ಪೊರೆಯೊ 1 ಭೃಗುವಂತೆ ನಿನ್ನಯ ಎದೆಗೆ ತುಳಿಯಲಿಲ್ಲ ನಗವೈರಿಯಂತೆ ಯುದ್ಧವ ಮಾಡಲಿಲ್ಲ 2 ಅಂಗಾಧಿಪತಿಯಂತೆ ಕೊಂದೆನೆಂದರಿತಿಲ್ಲ ಗಂಗೆಯ ಸುತನಂತೆ ಫಣಿಗೆ ಹೊಡೆಯಲಿಲ್ಲ 3 ನಿನ್ನ ಬಿಟ್ಟನ್ಯ ದೇಶಕೆ ಪೋಗಲಿಲ್ಲಾ 4 ಭಾವದಿ ನುಡಿದಂತೆ ನಿನಗೇನು ಪೇಳಿಲ್ಲ 5 ನಿನ್ನಾ ಕುವರರು ಸುಭದ್ರೆಯ ಮದುವೆಯ ಚೆನ್ನಾಗಿ ತಡೆದಂತೆ ತಡೆಯಲಿಲ್ಲವೊ ನಾನು6 ವಸುದೇವ ದೇವಕಿ ಮುಖ್ಯರಂತೆ ನಿನ್ನ ಮಾ- ನುಷನೆಂದು ನಾನೇನು ತಿಳಿದುಕೊಂಡಿಲ್ಲ 7 ಮೌಲಿಯ ಕದ್ದಂತೆ ಕದ್ದುಕೊಂಡಿಲ್ಲ8 ರಾಜೇಶಹಯಮುಖ ಭಜಕರೊಳಗೆ ಮತ್ತೆ ನಿತ್ಯ ಭಕ್ತರಾರಿಹರು 9
--------------
ವಿಶ್ವೇಂದ್ರತೀರ್ಥ
ನಾಮರೆತರು ನೀಮರೆವರೆ ಹರಿಯೇ ಪ ಅಭಿ | ರಾಮಪೂರ್ಣ ಕಾಮದುಷ್ಟರಾಕ್ಷಸಾಂತಕಅ.ಪ ಸರ್ವತ್ರ ಸರ್ವವಾಗಿ ವ್ಯಾಪಿಸಿನೀನಿರುವೇ ಸರ್ವೇಶ ಸರ್ವಾಧಾರಣಶರಣಜನ ಸುರತರುವೇ 1 ಸುಜ್ಞಾನಮಯ ಸ್ವರೂಪಾಂತರ್ಯಾಮಿಯು ನೀನು 2 ಪರಿ ಎಲ್ಲ ಭಕ್ತರಾ ತ್ವರ | ದಿಂದ ಬಂದು ಪೊರೆವೆ ನೀ ಕರುಣಾ ಸಾಗರಾ 3 ಶುಕ | ಶೌನಕಾದಿ ಮೌನಿ ಹೃದಯ ಪದ್ಮಮಿತ್ರನೆ ನಿನ್ನ | ಧ್ಯಾನ ಮಾಳ್ಪಗುಂಟೆ ಹಾನಿ ದೇವದೇವನೆ 4 ಕರೆದರೆ ಬರದಿರÀಲು ನಮ್ಮ ಕಾವರ್ಯಾರೆಲಾ ವಿಧಿ | ಹರಮುಖಾಮರವಂದಿತ ಗುರುರಾಮ ವಿಠ್ಠಲ 5
--------------
ಗುರುರಾಮವಿಠಲ
ನಾರಸಿಂಹನೆ ಎನ್ನ | ದುರಿತೌಘಗಳನು ದೂರಕೈದಿಸಿ ಘನ್ನ | ಕರುಣಾವಲೋಕನ ಭವ ಭಯವನ್ನ | ಬಿಡಿಸಯ್ಯ ಮುನ್ನ ಪ ಧೀರ ಸುಜನೋದ್ಧಾರ ದೈತ್ಯ ವಿ ದೂರ ಘನಗಂಭೀರ ಶೌರ್ಯೋ ಧಾರ ತ್ರಿಜಗಾಧಾರ ಎನ್ನಯ ಭಾರ ನಿನ್ನದೊ ಹೇ ರಮಾವರ ಅ.ಪ. ಏನು ಬಲ್ಲೆನೊ ನಾನು | ಸುಜ್ಞಾನ ಮೂರುತಿ ಮಾನಸಾಬ್ಜದಿ ನೀನು | ನೆಲೆಯಾಗಿ ನಿಂತು ಏನು ನುಡಿಸಲು ನಾನು | ಅದರಂತೆ ನುಡಿವೆನು ಜ್ಞಾನದಾತನೆ ಇನ್ನು | ತಪ್ಪೆನ್ನೊಳೇನು ಸ್ನಾನ ಜಪತಪ ಮೌನ ಮಂತ್ರ ಧ್ಯಾನಧಾರಣ ದಾನ ಧರ್ಮಗ- ಳೇನು ಮಾಡುವುದೆಲ್ಲ ನಿನ್ನಾ- ಧೀನವಲ್ಲವೆ ಶ್ರೀನಿವಾಸನೆ ದಾನವಾಂತಕ ದೀನರಕ್ಷಕ ಧ್ಯಾನಿಪರ ಸುರಧೇನುವೆನ್ನುವ ಮಾನವುಳ್ಳವರೆಂದು ನಂಬಿದೆ ಸಾನುರಾಗದಿ ಕಾಯೊ ಬಿಡದೆ 1 ತಂದೆತಾಯಿಯು ನೀನೆ | ಗೋವಿಂದ ಎನ್ನಯ ಬಂಧು ಬಳಗವು ನೀನೆ | ಮು- ಕುಂದ ಗುರುಸಖ ವಂದ್ಯದೈವವು ನೀನೆ ನೀನೆ | ಆನಂದ ನೀನೆ ಹಿಂದೆ ಮುಂದೆಡಬಲದಿ ಒಳಹೊರ- ಗೊಂದು ಕ್ಷಣವಗಲದಲೆ ತ್ರಿದಶರ ವೃಂದ ಸಹಿತದಿ ಬಂದು ನೆಲಸಿ ಬಂದ ಬಂದಘಗಳನು ಹರಿಸಿ ನಂದವೀಯುತಲಿರಲು ಎನಗಿ- ನ್ನೆಂದಿಗೂ ಭಯವಿಲ್ಲ ತ್ರಿಕರಣ- ಕರ್ಮ ನಿನ್ನರು ಎಂದು ಅರ್ಪಿಸುವೆನು ನಿರಂತರ 2 ಪ್ರೀಯ ನೀನೆನಗೆಂದು | ಮರೆಹೊಕ್ಕು ಬೇಡುವೆ- ನಯ್ಯ ಗುಣಗಣಸಿಂಧು | ಮೈಮರೆಸಿ ವಿಷಯದ ಹುಯ್ಲಿಗಿಕ್ಕದಿರೆಂದು | ಶರಣನ್ನ ಬಿನ್ನಪ ಇಂದು | ಕೈಬಿಡದಿರೆಂದು ತಾಯನಗಲಿದ ತನಯನಂದದಿ ಬಾಯ ಬಿಡಿಸುವರೇನೊ ಚಿನ್ಮಯ ನ್ಯಾಯ ಪೇಳುವರ್ಯಾರೊ ನೀನೊ ಸಾಯಗೊಲುತಿರೆ ಮಾಯಗಾರನೆ ತೋಯಜಾಸನ ಮುಖ್ಯ ಸುಮನಸ ಧ್ಯೇಯ ಶ್ರುತಿ ಸ್ಮøತಿ ಗೇಯ ಕವಿಜನ ಗೇಯ ಚತುರೋಪಾಯ ಭಕ್ತ ನಿ- ಕಾಯ ಪ್ರಿಯ ಶ್ರೀಕಾಂತ ಜಯ ಜಯ
--------------
ಲಕ್ಷ್ಮೀನಾರಯಣರಾಯರು
ನಾರಾಚ ಕೋದಂಡಧರ ಧೀರ ಪಾಹಿ ಪ ಧರಣೀಸುತಾನಂದ ಸುವಿಹಾರಿ ಪಾಹಿ ಅ.ಪ ಸಾಮಿತ್ರಿ ಭರತಾಗ್ರಜಾತ ಮಾಂಪಾಹಿ ಮೌನಿಜನಸಂಪ್ರೀತ ಶ್ರೀಲೋಲ ಪಾಹಿ ಸೇವ್ಯ ಪಾದಾಬ್ಜಪಾಹಿ ಧೀಮಂತ ಘನ ಪುಣ್ಯನಾಮ ಮಾಂಪಾಹಿ 1 ಭುವನಾಭಿರಾಮಾ ತ್ರಿಮುನಿನುತ್ಯಪಾಹಿ ಭವನಾಶ ಸತ್ಕೀರ್ತಿಕಾಮ ಮಾಂಪಾಹಿ ನವಮೋಹನಾಂಗ ರಾವಣವೈರಿ ಪಾಹಿ ಸುವಿಲಾಸದಾತ ಮಾಂಗಿರಿವಾಸ ಪಾಹಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾರಾಯಣ ಎನ್ನಿರೋ ನಾರಾಯಣ ಎನ್ನಿ ನಾರದÀಪ್ರಿಯನಿಗೆ ನಂದನ ಸುತ ಮುಕುಂದ ಮುರಾರಿಗೆ ಪ ಕೆಟ್ಟ ಅಜಮಿಳನ ಬಂದು ಕ(ಟ್ಟಲ್ಯ)ಮ ಪಾಶದಿ ತಾ ಕಂ- ಗೆಟ್ಟು ಹರಿನಾಮವ ಕರೆಯೆ ಕೊಟ್ಟ ತನ್ನ ಪಟ್ಟಣ ಪದವಿ 1 ಕಾಲಕಾಲಕೆ ಗೋಪಾಲನ ನೆನೆಯದೆ ಬಿಟ್ಟು ಕಾಲಕಳೆಯಲು ಯಮಭಟರು ಕರೆದÀು ಬಾಧಿಸದೆ ಬಿಡರು 2 ಸ್ನಾನ ಜಪ ತಪವ್ಯಾಕೆ ಮೌನ ಮಂತ್ರವ ಬಿಟ್ಟು ದಾನವಾಂತಕ ಕೃಷ್ಣನ್ನ ಧ್ಯಾನದೊಳಿಟ್ಟರಗಳಿಗೆ 3 ಲೆಕ್ಕವಿಲ್ಲದ ದೇಶ ತುಕ್ಕಿ ತಿರುಗಿದರಿಂದೆ ದುಃಖವಲ್ಲದೆ ಜ್ಞಾನ ಮುಕ್ತಿ ದೊರಕುವುದೇನು 4 ಬಿಟ್ಟು ವಿಷಯವ ಭೀಮೇಶಕೃಷ್ಣನಲ್ಲಿಟ್ಟು ಧ್ಯಾನ ಹತ್ತು ಹರಿಪುರ ಸೋಪಾನ ರಕ್ಷಿಸುವ ಖಗವಾಹನ 5
--------------
ಹರಪನಹಳ್ಳಿಭೀಮವ್ವ
ನಾರಾಯಣ ವಿಠ್ಠಲನೆ ನೀನಿವನ ಕಾಪಾಡೊ ಹರಿಯೆ ಪ ನೀರಜಾಸನವಂದ್ಯ ಪೋರ ನಿನ್ನವನೆಂದುಕಾರುಣ್ಯದಲಿ ಕೈಪಿಡಿದು ಕಾಪಾಡೊ ಹರಿಯೇ ಅ.ಪ. ಜ್ಞಾನಾಯು ರೂಪಕ ಸು | ವಾಯುದೇವನೊಳಿದ್ದುನೀನಿವಗೆ ಜ್ಞಾನಾಯು ಸಂಪದವನೀಯೋ |ಮೌನಿಕುಲ ಸನ್ಮಾನ್ಯ ಪೂರ್ಣಪ್ರಜ್ಞರ ಮತದಿ ಜ್ಞಾನಿ ಎಂದೆನಿಸಿವನ ಕಾಪಾಡೊ ಹರಿಯೆ 1 ಗೋವುಗಳೊಳುದ್ಗೀಥ ಕಾವ ಕರುಣಿಯೆ ದೇವಭಾವದಲಿ ನೀನಿದ್ದು ಉದ್ಧರಿಸೊ ಹರಿಯೇ |ಆವ ಭವವನಧಿ ಲಕ್ಷ್ಮೀ ನರಹರಿಯೇನೋವುಗಳ ಪರಿಹರಿಸೊ ಪವನ ಪ್ರೀಯ 2 ಹೆಂಚು ಹಾಟಕದಲ್ಲಿ ಸಮಬುದ್ಧಿ ನೀನಿತ್ತುಪಂಚ ಪಂಚಿಕೆ ತತ್ವ ತರತಮವ ತಿಳಿಸುತ್ತಮಿಂಚಿನಂತಿವನ ಹೃತ್ಪಂಕಜದಿ ಪೊಳೆಯೊವಾಂಛಿತ ಪ್ರದನೆ ಗುರು ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ನಿತ್ಯ ಇಂದಿರಾಧವನೊಲಿಮೆ | ಸಂಧಿಸುವುದೂ ಪ ಪರಮ ಪ್ರಿಯ ಗುರುವರ್ಯ ನರಸಿಪುರ ದಾಸರಪರಮ ಮಂಗಳ ನಾಮ ಸುಸ್ತವನದೀ ||ಉರುತರದ ಸಂಚಿತವು ಮಿಂಚಿನಂದದಿ ಕರೆಗುಗರುವ ವೇತಕೊ ಮನುಜ ಭಜಿಸೊ ನಿತ್ಯಾ 1 ಪಥ ದೊರಕಿತೆನಗೆ2 ಶ್ರೀದಾಸಗುರುತಿಲಕ | ಮೋದತೀರ್ಥರ ಪ್ರೀಯಭೇದಾಗಮಜ್ಞಾನಿ ಪ್ರಾಜ್ಞ ಮೌಳೀ ||ಆದರಿಸಿ ಉದ್ಧರಿಸು | ಮೋದಮಯ ರತ್ನನೇವಾದಿಗಜ ಪಂಚಾಸ್ಯ | ಬುಧಜನರ ಪ್ರೀಯಾ 3 ಜ್ಞಾನ ಪ್ರಕಾಶನೇ | ಜ್ಞಾನ ಮಾರ್ಗವ ತೋರ್ವಪೂರ್ಣೇಂದು ಮತ್ತುದಯ | ಘನಗುಣಜ್ಞಾ ||ಮೌನಿವರ ಕರುಣಿಸಿ | ನಿನ್ನಕಾಂಬುವ ಹದನನೀನೆ ತಿಳಿಸಲಿ ಬೇಕು | ಆ ನಮಿಪೆ ನಿನ್ನ 4 ಮುದ್ದು ಮೋಹನ ದಾಸ ಪದಕಮಲ ಭೃಂಗನೇಸಿದ್ಧಜನ ಸನ್ಮೌಳಿ | ತಿದ್ದಿ ಮನ್ಮನವಾಮಧ್ವಾಂತರಾತ್ಮಗುರು | ಗೋವಿಂದ ವಿಠಲನಮದ್ಗುರುವೆ ಮನ್ನನದಿ | ಸಿದ್ಧಿಸೋ ಜೀಯಾ 5
--------------
ಗುರುಗೋವಿಂದವಿಠಲರು
ನಿತ್ಯ ನೂತನ ಮಹಿಮಭೃತ್ಯನನು ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ ಅ.ಪ. ವಿತ್ತ ಕರ್ತು ನೀನಾಗಿರಲುಆರ್ತರುದ್ಧರ ಕಾರ್ಯ | ಪೂರ್ತಿಗೊಳಿಸೋ 1 ಉದಧಿ ವಿಧಿ ಜನಕ ವಿಶ್ವೇಶ | ಮುದ ಮುನಿಯ ಸದ್ವಂದ್ಯವದಗಿ ವರಪ್ರದನಾಗಿ | ಮುದವನ್ನೆ ಬೀರೋ 2 ಯೇಸೊ ಜನ್ಮದ ಪುಣ್ಯ | ರಾಶಿ ವದಗಿತೊ ಇವಗೆಆಶಿಸುವ ಹರಿದಾಸ್ಯ | ವಾಸವಾನುಜನೇ ಆಸುರೀ ಭಾವಗಳ | ನಾಶನವ ಗೈಯ್ಯುತ್ತಪೋಷಿಸುವುದಿವನ ಹರಿ | ದಾಸ್ಯ ಕರುಣಿಸುತಾ 3 ನಾನು ನನ್ನದು ಎಂಬ | ಹೀನ ಮತಿಯನೆ ಕಡಿದುದಾಸವಾಂತಕ ಸಲಹೊ | ಜ್ಞಾನ ಪ್ರದನಾಗೀಮೌನಿ ಮಧ್ವರ ಮತದಿ | ಸಾನು ಕೂಲಿಸಿ ದೀಕ್ಷೆಮಾನನಿಧಿ ಗುಣಪೂರ್ಣ | ನೀನಾಗಿ ಪೊರೆಯೋ 4 ಸರ್ವವ್ಯಾಪ್ತ ಸ್ವಾಮಿ | ನಿರ್ವಿಕಾರನೆ ದೇವಸರ್ವಜ್ಞ ಸರ್ವೇಶ | ಸರ್ವಸಮ ಮೂರ್ತೇಗುರ್ವಂತರಾತ್ಮಕನೆ | ದರ್ವಿಜೀವಿಯ ಕಾಯೊದುರ್ವಿ ಭಾವ್ಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ನಿತ್ಯ ಮಂದಾರ ತರುವಂತೆಕುಂದದಲ ಭೀಷ್ಟಗಳ ಗರೆವ | ಸುರ ತರುವಾ ಪ ವಾಗೀಶ ಕರಜಾತ | ನಿಗಮಾರ್ಥ ಕೋವಿದರಭೋಗಿಶಯನನ ಭಕುತ | ಭಾಗ್ಯ ದಾತೃಗಳ |ಯೋಗಿ ಕುಲವರ್ಯ ಹೃ | ದ್ರೋಗ ನೀಗುವರಜಾಗು ಮಾಡದೆ ಭಜಿಪ | ಭಕ್ತರನು ಪೊರೆವರನು 1 ಭವ ಭವಣೆ ಹರಿಸು ವರ |ನವ ನವ ಸ್ತೋತ್ರಗಳ | ಕವನ ರೂಪದಿ ಪೇಳಿಪವನಾಂತರಾತ್ಮಕನ | ಪರಿತೋಷ ಗೈದವರಾ 2 ಗರಳ ಅಂಘ್ರಿ ಕಮಲಂಗಳನುನೆರೆನಂಬಿ ಸುಖಿಸುವರ | ಸುರವ ಭಯ ವಿರಹಿತರ 3 ಉಕ್ತಿಯನು ಸ್ವಪ್ನದಲಿ | ಶಕ್ತಹಯಮುಖಪೇಳೆಯುಕ್ತಿಮಲ್ಲಿಕೆ ಮಾಲೆ | ಮೌಕ್ತಿಕವ ನಿತ್ತವರ |ಭಕ್ತಿಪಥ ತೋರಿ | ಕು | ಯುಕ್ತಿಗಳನೇ ಕಳೆದುಮುಕ್ತಿ ಮಾರ್ಗವ ತೋರ್ವ | ಭಕ್ತಿಯೋಗಿಗಳಾ 4 ಮಾಯಿ ಶೈವರು ಶಾಕ್ತ್ಯ | ಅನ್ಯಮತಗಳಗೆದ್ದುಜಯ ಪತ್ರ ಘಂಟೆಗಳ | ವಿಜಯ ಸಾರಥಿಗಿತ್ತು |ಭಯ ವಿನಾಶನು ನಮ್ಮ | ತೋಯಜಾಂಬಕ ಸಿರಿಹಯ ವದನನರ್ಚಿಸುವ | ವಾದಿರಾಜರನೂ 5 ಅದ್ವೈತ ತಮ ಸೂರ್ಯಮೇದಿನೀ ಸುರವಂದ್ಯ | ಶ್ರೀವಾದಿರಾಜರನೂ 6 ಭಾವಿ ಮಾರುತಿಯ | ದಿನ ದಿನದಿ ಪ್ರಾರ್ಥಿಪರಭಾವ ಕೊಲಿಯುತ ತೋರ್ವ | ಹಯ ಮುಖಾತ್ಮಕನು |ಭಾವ ಜನಯ್ಯ ಗುರು | ಗೋವಿಂದ ವಿಠ್ಠಲನಭವ್ಯ ರೂಪವ ಹೃದಯ | ದವಕಾಶದೊಳಗೇ 7
--------------
ಗುರುಗೋವಿಂದವಿಠಲರು
ನಿತ್ಯ ಶುಭ ಮಂಗಳಂ ಭಯ ವಿನಾಶನದೇವ ಶ್ರೀನಿವಾಸನಿಗೆ ಪ. ಮಂಗಳಂ ಜಲಚರಗೆ ಮಂಗಳಂ ಗಿರಿಧರಗೆ ಮಂಗಳಂ ಭೂದೇವಿ ರಕ್ಷಕನಿಗೆ ಮಂಗಳಂ ನರಹರಿಗೆ ಮಂಗಳಂ ಮಾಣವಗೆ ಮಂಗಳಂ ಭಾರ್ಗವಗೆ ದಾಶರಥಿಗೆ 1 ಮಂಗಳಂ ಗೋಪಾಂಗನೆಯರ ಕಾಯ್ದವನಿಗೆ ಮಂಗಳಂ ತ್ರಿಪುರ ಸುರರಳಿದ ಹರಿಗೆ ಮಂಗಳಂ ಹಯವೇರಿ ಕಲಿಮುಖರ ಗೆಲಿದವಗೆ ಮಂಗಳಂ ಶ್ರೀಕೃಷ್ಣ ಶ್ರೀನಿವಾಸನಿಗೆ 2 ಆಪಾದಮೌಳಿ ಪಾವನರೂಪನಿಗೆ ಆಪನ್ನ ರಕ್ಷಕಗೆ ಆದಿರೂಪನಿಗೆ ಆಪದ್ಭಾಂಧವ ಶ್ರೀಗುರುಗಳಂತರ್ಗತಗೆ ಗೋಪಾಲಕೃಷ್ಣವಿಠ್ಠಲಮೂರ್ತಿಗೆ 3
--------------
ಅಂಬಾಬಾಯಿ