ಒಟ್ಟು 330 ಕಡೆಗಳಲ್ಲಿ , 66 ದಾಸರು , 285 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮದೂತ ರಮ್ಯಚರಿತ ಸ್ವಾಮಿಹನುಮನೆ ಪ ಕಾಮಿತಫಲದಾತ ನಮ್ಮ ಕಾವನು ನೀನೆ ಅ.ಪ ಆಶಸಮುದ್ರವನ್ನು ದಾಟಿ ಮೋಸಗಾರರಂ ನಾಶಗೊಳಿಸಿ ದಾಶರಥಿಯ ತೋಷ ಪಡದೆ ನೀಂ 1 ತರುಣಿ ದ್ರೌಪದಿ ದೇವಿಯ ತಾತ್ಪರಿಯ ನಡೆಸಿದೆ 2 ಕಲಿಯುಗದಲಿ ಹುಲುದನುಜರಗೆಲಿದೆ ಗುರುವರ ಜಲಜನೇತ್ರ ಗುರುರಾಮವಿಠ್ಠಲನ ಕಿಂಕರ 3
--------------
ಗುರುರಾಮವಿಠಲ
ರಾಮಾನುಜರೇ ನಮೋ ನಮೋಸ್ವಾಮಿ ಲಕ್ಷ್ಮಣ ರೂಪ ನಮೋ ನಮೋ ಪ ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾನಿಡುಶಿಖಿ ಯಜ್ಞೋಪವೀತದಿಂದತೊಡೆದ ದ್ವಾದಶನಾಮ ಶ್ರೀ ಚೂರ್ಣದಿ ಒಪ್ಪುವಒಡೆಯ ರಾಮಾನುಜರೆ ನಮೋ ನಮೋ 1 ಪಂಕಜನಾಭನ ಪಾವನ ಮೂರುತಿಶಂಕೆಯಿಲ್ಲದೆ ನೆನೆವರ ಪಾಲಿಪನೆಮುಂಕೊಂಡು ಶ್ರುತಿಮತ ಚಾರ್ವಾಕರ ಗೆದ್ದಓಂಕಾರ ಮೂರುತಿ ನಮೋ ನಮೋ 2 ಕೇಶವ ಪಾದಾಂಬುಜ ಮಧುಕರಾಪಾಷಂಡ ಗರ್ವಹರ ಗುರುತಿಲಕಶೇಷಾವತಾರಿ ಮುನೀಶವಂದಿತ ಆದಿಕೇಶವ ಮೂರುತಿ ನಮೋ ನಮೋ 3
--------------
ಕನಕದಾಸ
ರುದ್ರದೇವರು ದೇವತೆಗಳ ದೇವ ಮಹದೇವ ದೇವ ಆವ ನಿಮಗೆ ಸರಿಯು ಕಾವುದೆಮ್ಮನು ಸರ್ವ ಪ ಮೂರನೆ ತತ್ವದ ಒಡೆಯನು ನೀನಯ್ಯ ಕಾರುಣಿಕ ಜನರಿಗಾರ್ಹ ಭಾವಕೆ ಮಾರಮಣನಾ ನೆನೆದು ಮೈಮರೆದು ನೀ ತಾರಕಾ ಉಪದೇಶಿ ಕಾಸಿ ವಾಸಿ 1 ಗಂಗೆಯ ಧರಿಸಿ ನೀ ಭಂಗಬಡುವ ಜನರ ಪೂತನ ಮಾಡಿದ್ಯೊ ಅಂಗಜನಯ್ಯನ ಭಕುತ ಶಿಖಾಮಣಿಯೆ ನಿ ಸ್ಸಂಗ ಜನರ ಪ್ರಿಯ ಸನಕಾÀದಿ ವಂದ್ಯ 2 ಮೋಸಗೊಳಿಸುವಿಯೊ ದುರ್ಜನರ ನಾನೀಶನೆಂದು ವಾಸುದೇವವಿಠಲಗಲ್ಲದವರ ಲೇಸು ಬೋಧಿಸುವಿಯೊ ಯೋಗ್ಯರನು ನೋಡಿ ಎನ್ನಲಿ ವಾಸ ಮಾಡೊ ಎನ್ನ ಮನದೊಡೆಯ 3
--------------
ವ್ಯಾಸತತ್ವಜ್ಞದಾಸರು
ಲೀಲೆಯೊಳಾಡಿಸೊ ಹರಿ ನಿನ್ನ ಲೀಲೆಯೊಳಾಡಿಸೊ ಪ ಲೀಲೆಯೊಳಾಡಿಸೊ ಕಾಲಕಾಲದಿ ನಿನ್ನ ಶೀಲನಾಮವೆನ್ನ ನಾಲಗ್ಗೆ ಕರುಣಿಸು ಅ.ಪ ಮಂದಮತಿಯ ಹರಿಸೋ ಮನ ಗೋ ವಿಂದನೊಳೊಡಗೊಡಿಸೊ ಎಂದೆಂದಿಗು ಆ ನಂದನ ಕಂದನ ಪಾದ ಮನಮಂದಿರದಿರಿಸೊ 1 ಶೀಲಗುಣವ ಕಲಿಸೊ ಭವಗುಣ ಜಾಲವ ಪರಹರಿಸೊ ಪಾಲಿಸಿ ನಿಮ್ಮ ಧ್ಯಾನಲೋಲನೆನಿಸಿ ಯಮ ದಾಳಿ ನೀಗಿಸಿ ಭವಮಾಲೆಯ ಗೆಲಿಸೊ 2 ಮೋಸ ಮಾಯ ಹರಿಸೊ ವಿಷಯ ದಾಸೆಯ ಪರಿಹರಿಸೊ ಭಾಸುರಕೋಟಿಪ್ರಭೆ ಸಾಸಿರನಾಮದ ಶ್ರೀಶ ಶ್ರೀರಾಮ ನಿಮ್ಮದಾಸೆನಿಸೊ 3
--------------
ರಾಮದಾಸರು
ಲೋಕನೀತಿ ಅಧಿಕಾರಿಯಾಗಬೇಕು ಅದಕಾಗಿ ದುಡಿಯಬೇಕು ಪ ಅಧಿಕಾರಿಯಾಗುವುದು ಸುಲಭವಲ್ಲ ಎದೆಚಾಚಿ ಜಗದಿ ಹೆಮ್ಮೆಯ ತೋರುವ ಅ.ಪ ಶಾಶ್ವತವಿರಬೇಕು ಅದನೀಶ್ವರ ಕೊಡಬೇಕು ವಿಶ್ವವಿದ್ಯಾನಿಲಯವ ಸೇರುತಲಿ ಶಶ್ವದಿ ಪರವಿದ್ಯಾಶಾಖೆಯಲಿ 1 ಭೂಷಣವೆನಗೆಂದು ನೀ ಮೋಸ ಹೋಗಬೇಡ ಸಾಸಿರ ಸಾಸಿರ ಸ್ಥಾನಗಳಿಗೆ ನೀ ಆಸೆ ಪಡದೆ ಹರಿಶಾಸನ ಸಭೆಯ 2 ಕಮ್ಮಿಯ ಪ್ರತಿಫಲಕೆ ನೀ ಸಮ್ಮತಿ ಕೊಡದಿರೆಲೊ ಮರ್ಮವರಿತು ಪರಲೋಕವ ಪಡೆಯಲು ಹಮ್ಮನು ಮುರಿಯುವ ಕಾರ್ಮಿಕ ಸಭೆಯ 3 ಕಾಲವರಿತು ಸತತ ನೀ ಮೇಲಕೇಳಬೇಕು ಬಾಲಗೋಪಾಲನು ನೆಲೆಸುವುದಕೆ ಹೃದ ಯಾಲಯ ರಚನೆಯ ಚತುರ ಶಿಲ್ಪಿಯ 4 ಶ್ರವಣ ಮಾಡಬೇಕು ಶಾಸ್ತ್ರವ ಮನನ ಮಾಡಬೇಕು ಶ್ರವಣ ಮನನ ನಿಧಿ ಧ್ಯಾಸನದಿಂದ ಪ್ರ ಸನ್ನ ಹರಿದಯದಿ ಸಿಗುವ ಮುಕುತಿಗೆ 5
--------------
ವಿದ್ಯಾಪ್ರಸನ್ನತೀರ್ಥರು
ವಾಯುದೇವರು ಆನಂದ ಸಾಧನ ತಿಳಿ ಕಂಡ್ಯಾ ಮನವೆ ಪ ಶಕುತಿಯು ಇದ್ದಷ್ಟು ತಿಳಿದು ಮತವು ಬಲು ಯುಕುತಿಯಿಂದಲಿ ನೀ ಒಲಿಸು ಕಂಡ್ಯ ಭಕುತಿಯು ಗುರುಗಳ ಪದದಲಿ ಮಾಡಲು ಮುಕುತಿಯು ಕರವಶವಾಗುವದೊ ಸಿದ್ಧ 1 ತಿಳಿಯದಿದ್ದರೆ ನೀನು ತಿಳಿದವರ ಬಳಿಯಲ್ಲಿ ಮಿಳಿತನಾಗಿ ಪೋಗಿ ತಿಳಿದುಕೊಳ್ಳೊ ಖಳಜನ ಸಹವಾಸ ಕುಮತಗಳಭ್ಯಾಸ ಒಳಿತಲ್ಲವೊ ನಿನಗೆಂದಿಗನ್ನ 2 ಪ್ರವಚನ ಮಾಡುವ ಬುಧಜನ ಪೇಳುವ ಸುವಚನ ಕೇಳಿ ನೀ ಬದುಕು ಕಂಡ್ಯಾ ಭವ ಛಳಿ ಬಾಧಿಗೆ ಪ್ರವಚನ ಬಾಹೋದೆಂದಿಗನ್ನ3 ಇದ್ದವರಿಗೆ ಕೊಟ್ಟು ಅವರ ಹಿಂದೆ ಇಷ್ಟು ಮೆದ್ದರೆ ಕೋಟಿ ಭೋಜನದ ಪುಣ್ಯ ಗೆದ್ದರು ಇವರನ್ನ ನಂಬಿದ ಜನರು ಬಿದ್ದರು ದೂಷಕ ಜನ ತಮದಿ 4 ಕಾಸುವೀಸಕೆ ನೀನು ಮೋಸಗೊಳಲು ಬ್ಯಾಡ ತಾಸು ಘಳಿಗೆ ನೆಚ್ಚಲು ಬೇಡ ಏಸೇಸು ಸುಕೃತದಿ ದೊರಕಿತು ಈ ಮತ ವಾಸುದೇವವಿಠಲನ್ನ ಪಾಡೊ 5
--------------
ವ್ಯಾಸತತ್ವಜ್ಞದಾಸರು
ವಾರಿಜಗಣ ನಿಲಯೇ ಕಮನೀಯೆ ತಾಯೇ ಕಾಯೇ ನರಹರಿ ಜಾಯೇ ಪ ಸಾರಸಭವಮುಖ ಸುರ ಮಹನೀಯೆ ಚಾರುವದನೆ ಜಾಂಬೂನದ ಛಾಯೆ ಅ.ಪ ನಿನ್ನ ಕಟಾಕ್ಷ ಮಹಾಸುರಧೇನು ನಿನ್ನ ಮನವು ಚಿಂತಾಮಣಿಯು ನಿನ್ನಯ ಕರಗಳು ಸುರತರುವೆನಗೆ ಇಂದಿರೆ 1 ಹೃನ್ಮಂದಿರದಲಿ ಜ್ಞಾನವನು ಮನ್ಮಂದಿರದಲಿ ಭಾಗ್ಯವನು ಅಮ್ಮ ಬೆಳಸೆ ಕಮಲೆ ಸುವಿಮಲೆ ಇಂದಿರೆ 2 ಈಶನಂಘ್ರಿಯಲಿ ಭಕ್ತಿಯನು ಹರಿ ದಾಸದಾಸ್ಯದಲಿ ಶಕ್ತಿಯನು ಮೋಸಕೆ ಸಿಗದ ವಿರಕ್ತಿಯನು ಕರುಣದಲಿ ನೀಡೆ ಪ್ರಸನ್ನೆ3
--------------
ವಿದ್ಯಾಪ್ರಸನ್ನತೀರ್ಥರು
ವಾಸುದೇವ ನಿನ್ನ ದಾಸನಾಗಲು ಬಲು ಆಸೆಯ ಪೊಂದಿ ಸಂತೋಷದಲಿರುವೆನೊ ಪ ಈ ಸಂಸಾರದ ಮೋಸಕೆ ಸಿಲುಕೆ ನಾ ಶ್ರೀಶನ ಚರಣವ ಲೇಶ ಭಜಿಸಲಿಲ್ಲ ಪಾಶಕೆ ಸಿಲುಕದ ಸುಜನರುಗಳ ಸಹ ವಾಸವಿತ್ತು ಅವಕಾಶವ ನೀಡೊ ಅ.ಪ ಸಾರುತಲಿರುವ ಸಮೀರ ಸಮಯಗಳ ಸಾರವನರಿಯದೆ ದೂರಿದೆ ನಿನ್ನನು ಯಾರ ಕರುಣವೊ ತೋರಿತು ಮನದಲಿ ಘೋರತರದ ಅಪರಾಧಗಳೆಲ್ಲವು ಭೂರಿ ದಯದಿ ನಿನ್ನ ಚಾರು ಚರಣದಲಿ ಸೇರಿಸೊ ಮನವ 1 ಪರಿಪರಿ ವಿಧದ ಕುಶಾಸ್ತ್ರಗಳೋದಲು ಬರಿಗಾಳಿಯ ಗುದ್ದಿ ಮುರಿದವು ಕರಗಳು ಸಿರಿರಮಣನೆ ನಿನ್ನ ಪರಿಚಾರಕನೆಂಬೊ ಅರಿವಿನಿಂದಲೆ ಪರತರ ಸುಖವೆಂದು ಪರಿಪರಿಯರುಹುವ ಗುರು ಮಧ್ವರಾಯರ ವರಶಾಸ್ತ್ರಗಳಿಗೆ ಸರಿಯುಂಟೆ ಜಗದೆ 2 ಅನ್ಯಸೇವೆಗಳಲ್ಲಿ ಅನ್ಯಾಯದಿ ಕಾಲ ಮುನ್ನ ಕಳೆದುದನು ಮನ್ನಿಸೆಲೋ ಹರಿ ನಿನ್ನ ಸೇವೆಯ ಸುಖವನ್ನು ಅರಿತೆನೊ ಎನ್ನ ಮನಕೆ ಬಲವನ್ನು ಕರುಣಿಸುತ ಇನ್ನಾದರು ಚ್ಯುತಿಯನ್ನು ಪೊಂದಿಸದೆ ನಿನ್ನ ದಾಸನಲಿ ಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು
ವಿಷಯಾಸೆ ಬಿಡಲೊಲ್ಲದೋ ದೇವ ಪ. ವಸುದೇವಸುತ ನಿನ್ನ ವಶವಾಗೋತನಕ ಅ.ಪ. ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿದು ಪರರನ್ನೆ ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆ ಕಂಡಕಡೆಒದಗಿ ಪರಸದನಕಾಗಿ ಪೋಗಿಮದಗರ್ವದಿಂದ ಗುರುಹಿರಿಯರಿಗೆ ವಂದಿಸದೆಕದನವನೆ ತೆಗೆದು ಬಂದು ನಿಂದುಇದೆ ಸಾಧನವೆಂದು ಉದರ ನೆವದಿ ತಿರುಗಿಸುದತಿಯರ ಸುಖಬಡಿಸಿ ಮದನವೆಗ್ಗಳನಾದೆ 1 ಓದುವೆನು ವಿದ್ಯೆಗಳ ಓದನದ ಬಯಕೆಯಲಿಸಾಧುಶಾಸ್ತ್ರಗಳ ಮರೆದು ತೊರೆದುಕಾದುವೆನು ತರ್ಕವ್ಯಾಕರಣ ಬಲದಿಂದಬೀದಿಬೀದಿಯಲಿ ಚರಿಸಿ ಅರಸಿಮಾಧವನ ಪೂಜಿಸದೆ ಪರರ ಅನ್ನವನುಂಡು ಶೋಧಿಸದೆ ಪುಣ್ಯಪಾಪ ಲೇಪಕ್ರೋಧದಿಂದಲಿ ಇನಿತು ಪರಿಪರಿಯ ಬವಣೆÀಯಿಂದಬೋಧನೆಗೆ ಒಳಗಾಗಿ ಕುಧರ್ಮವನು ಪಡೆದೆ2 ಪರರ ಸೌಭಾಗ್ಯ ವಿದ್ಯಾ ಮಕ್ಕಳ ಕಂಡುಮರುಗಿ ಮನದೊಳಗೆ ಕೊರಗಿ ಸೊರಗಿತರತರಕೆ ಪರರಾಂಗನೆಯರ ಚೆಲುವಿಕೆ ಕಂಡು[ತೆರೆದ] ಕಣ್ಣಿಂದ ನೋಡಿ ಬಾಡಿಎರಗಿ ಮನ ಅವರಲ್ಲಿ ಏಕಾಂತದಲಿ ಕಂಡುಕರದಿ ಸನ್ನೆಯನು ಮಾಡಿ ಕೂಡಿಹೊರಗೆ ಗುಣವಂತನೆಂದೆನಿಸಿ ಧರೆಯೊಳಗೆ ಪಾಮರ ಬುದ್ಧಿಯಿಂದ ಸಂಚರಿಸಿ ನಿನ್ನನು ಮರೆದೆ3 ದೇಶದೇಶಕೆ ಧನದಾಸೆಗಾಗಿ ನಡೆದುಬ್ಯಾಸರದೆ ಮನೆ ಮನೆಗೆ ಪೋಗಿ ಕೂಗಿಭೂಸುರೋತ್ತಮರು ನಾವೆಂದು ಪರರಮುಂದೆಹೇಸದಲೆ ಪೇಳಿಕೊಂಡು ಭಂಡುಮೋಸಗೊಳಿಸಿ ಪರರ ಆಶ್ರಯವನೆ ಮಾಡಿಭೇಷಜವ ತೋರಿ ಕಳೆದೆ ಪೊಳೆದೆಈಸುಪರಿ ಧನವ ತಂದು ಕೂಳನೆ ಹಾಕಿಆಸತಿಸುತರೆನಗೆ ಗತಿಯೆಂದು [ಗುಣಿಸಿದೆ] 4 ಕಾಯದಾಸೆಗಾಗಿ ನೋಯಬಯಸದಲೆ ಉ-ಪಾಯವ ಚಿಂತಿಸುತ್ತಲಿತ್ತಹೇಯವಿಲ್ಲದೆ ಸ್ನಾನ ಸಂಧ್ಯಾವಂದನೆ ತೊರೆದುತೋಯಿಸದೆ ದೇಹವನ್ನು ಇನ್ನುಮಾಯಮೋಸಗಳಿಂದ ಬಾಯಿಗೆ ಬೇಕಾದ್ದುಆಯಾಸಪಟ್ಟು ತಂದು ತಿಂದುಶ್ರೀಯರಸ ಹಯವದನರಾಯನೆ ನಾ ನಿನ್ನಮಾಯವನು ತಿಳಿಯದನ್ಯಾಯದಿಂದಲಿ ಕೆಟ್ಟೆ 5
--------------
ವಾದಿರಾಜ
ವಿಸ್ತರಿಸಿ ಬರುವನೊ ರುಕ್ಮಿಣಿಗೆ ಹಸ್ತಕಳ ಕಳಹುವನೊಮಿತ್ರೆ ದ್ರೌಪತಿ ಸುಭದ್ರೆ ಮುಯ್ಯಾಒಯ್ಯೋ ವರ್ತಮಾನವೆಲ್ಲ ಅರುಹೋನು ವಿಸ್ತರಿಸಿ 1 ಹೇಳದೆ ಹೋಗುವನೊ ಅಥವಾ ಸುದ್ದಿತಿಳಿಯದೆ ಕಳುಹುವನೊಭಾಳ ಚರ್ಚೆಯ ಮಾತು ಭಾಮೆಯಕಿವಿಗೆ ಬೀಳದಂತೆ ಕಾಳಿ ಹಿಡಿಸುವನೊ2 ಮೊದಲಿಗೆ ಅರುಹುವನೊ ಅಥವಾಬೆದರದೆ ನಗುವನೊಮದಗಜಗಮನೆಯರ ಎದೆ ಧಿಗಿಲೆಂಬಂತೆಚದುರ ಚರ್ಚೆಯ ಡಂಕಿ ಹೊಯ್ಸುವನೊ 3 ಎಚ್ಚರ ಕಳಹುವನೊ ಅಥವಾನಿದ್ರೆ ಬೆಚ್ಚಲಿ ಹೋಗುವನೊಮತ್ತÀನೇತ್ರಿಯರ ಮನಕೆ ನಡುವಂತೆಚರ್ಚೆಮಾತಿನ ಭೇರಿ ಹೊಯ್ಸುವನೊ4 ದಾಸಿಯ ಕಳಹುವನೊ ಅಥವಾಕಂಡು ಹಾಸ್ಯವ ಮಾಡುವನೊಮೋಸಗೊಳಿಸಿ ಆಭಾಸ ಉಕ್ತಿಗಳಿಂದ ಆಕಾಶವಾಣಿಯಿಂದ ನುಡಿಸುವನೊ5 ಅರಿಯದೆ ಹೋಗುವನೊ ಅಥವಾಮೈಮರೆಯದೆ ನಗುವನೊಶ್ರೀಶರಾಮೇಶನರಸನ ಸತಿಯರ ಚರ್ಚಿಸಿ ಹರುಷಮಾಡಿ ಹರಿಯು ಬರುವನೊ 6
--------------
ಗಲಗಲಿಅವ್ವನವರು
ವ್ಯಾಸರಾಯ ನಿನ್ನ ಅನುದಿನಾ | ಸ್ಮರಿಪ ಜನಕೆತೋಷದಿಂದ ಲೀವೆ ಸಾಧನಾ |ವಾಸುದೇವ ಕೃಷ್ಣಲೀಲೆ | ರಾಶಿಗುಣವ ಬೋಧಿಸುತ್ತಶ್ರೀಶ ಪಾದಪದುಮ ಕಾಂಬ | ಲೇಸು ಮುಕ್ತಿ ಮಾರ್ಗತೋರ್ವೆ ಅ.ಪ. ಏಸೊ ಮುನಿಗಳಿದ್ದು ಮಾಡದಾ | ಶಾಸ್ತ್ರವೆಂಬ ಭೂಷಣಂಗಳ್ಹರಿಗೆ ತೊಡಿಸಿದಾ |ಕೇಶವನೆ ಸರ್ವೋತ್ತಮನು | ದೋಷದೂರನೆಂದು ತಿಳಿಸಿಮೋಸಪಡಿಪ ಮಾಯಿ ಮತವ | ಘಾಸಿಮಾಡಿ ಜಯವ ಪಡೆದೆ 1 ವಾಸುದೇವ ವಾಲೀಲೆಯಏಸೊ ವಾದಿ ಜಯದ ಪತ್ರ | ಭೂಷಣಗಳ್ ಶ್ರೀಶಗಿತ್ತೆ 2 ಶೇಷನಾವೇಶದಿಂದಲಿ | ಪುಟ್ಟಿ ನೀವುವ್ಯಾಸರಾಯರೆಂಬ ಪೆಸರಲಿ |ದೇಶ ಪತಿಗೆ ಬಂದ ಕುಹು | ದೋಷಯೋಗ ಹರಿಸುತ ಸಿಂಹಾಸನೇರಿ ಜಗದಿ ಬಹಳ | ಭಾಸುರ ಸುಕೀರ್ತಿ ಪಡೆದೆ 3 ನ್ಯಾಯ ಗ್ರಂಥವೆಂದು ಕರೆಸಿಹ | ಚಂದ್ರಿಕಾದಿನ್ಯಾಯಾ ಮೃತವು ತರ್ಕ ತಾಂಡವ |ಗೇಯದಿಂದ ತುಚ್ಛ ಭಾಷ್ಯ | ಗಾಯನ ಮಾಡ್ದದುರ್ಮತೆನ್ನ ಮಾಯಿಮತವ ಗೆದ್ದು ಮಧ್ವ | ಧೇಯ ಸಾಧಿಸೀದ ಗುರುವೆ 4 ಪರಮ ಶಿಷ್ಯರೆಂದು ಮೆರೆವರಾ | ವಿಜಯಿಂದ್ರವರ ಸುವಾದಿರಾಜರೆಂಬರಾ |ಗುರುಗಳಾಗಿ ಯತಿ ಸುರೇಂದ್ರ | ವರ ಸುಪುತ್ರ ಭಕ್ಷೆ ಬೇಡೆಪರಮ ಹರುಷದಿಂದ ವಿಜಯ | ಇಂದ್ರರನ್ನ ಕಳುಹಿ ಪೊರೆದೆ 5 ಜ್ಞಾನಿಯರಸ ವ್ಯಾಸ ಮುನಿಗಳಾ | ಮನುಜರೆಂದುಹೀನ ಜನರು ಪೇಳೆ ಆವರ್ಗಳಾ |ಭಾನುಸೂನು ನರಕ$ನೇಕ | ಕಾಣಿಸುತ್ತ ಹಿಂಸಿಸೂವಶ್ರೀನಿವಾಸ ಹರಿಯ ಮುಂದೆ | ಗಾನ ಗೈದು ಆಡುತಲಿಪ್ಪ 6 ಪರಮಹಂಸ ಮುನಿಯು ಮನದಲಿ | ಪೂಜೆಗೈದುಹರಿಯ ಕಾಂಬ ಹೃದಯ ಗುಹೆಯಲಿ |ಗುರುವರ ಬ್ರಹ್ಮಣ್ಯ ಪೂಜ್ಯ | ಗುರು ಗೋವಿಂದ ವಿಠ್ಠಲಾನಚರಣ ವನಜ ಧ್ಯಾನಾಸಕ್ತ | ವರ ಸುನವ ವೃಂದಾವನಸ್ಥ 7
--------------
ಗುರುಗೋವಿಂದವಿಠಲರು
ವ್ಯಾಸರಾಯರ ಸೇವೆ ಲೇಸಾಗಿ ಮಾಡಲು ದಾಸನೆಂದೆನಿಸಿಕೊಂಬ ಪ ಸಾಸಿರನಾಮದ ವಾಸುದೇವನ ಭಕ್ತ ಕಾಷಾಯ ವಸ್ತ್ರಧರಅ.ಪ ತಾ ಸಹಗಮನದಿ ಪತಿಸಹ ಪೋಗುವ ಆ ಸ್ತ್ರೀಯು ಬ್ರಹ್ಮಣ್ಯತೀರ್ಥರಲ್ಲಿಗೆ ಪೋಗೆ ಶ್ರೀಶ ಬದರಿಯಲ್ಲಿ ಪೇಳಿದ ಮಹಿಮೆಯ ಆ ಸುಮಹಿಮ ಪ್ರಹ್ಲಾದನ್ನ ಸ್ಮರಿಸುತ್ತ ಮೋಸ ಬರುವುದೆಂದಾಲೋಚನೆ ಇಲ್ಲದೆ ಸತಿ ವಂದಿಸೆ ಸುಮಂಗಲ್ಯವನಿತ್ತು ಆ ಸಮಯದಿ ಮಂತ್ರಾಘ್ರ್ಯಾವನೆ ಕೊಂಡು ತಾ ಸುಮ್ಮಾನದಿ ಬನ್ನೂರಿಗೆ ಪೋಗ್ಯತಿ ಯಾ ಸತಿಪತಿಯ ಪ್ರಾಣವನುಳಿಹಿ ರನ್ನ ತಾ ಸಮೀಪದಿ ಮಠದಲ್ಲಿ ವಾಸಮಾಡಿಸಿ ಕುಸುಮಾಕ್ಷತೆ ಫಲ ಮಂತ್ರಿಸಿ ಆಕೆಗೆ ಕೊಟ್ಟು ಆ ಸುಮಂಗಲಿಯಲ್ಲಿ ಪ್ರಹ್ಲಾದ ಪುಟ್ಟಿದ ಆ ಸಮಯದಿ ಚಿನ್ನದ ಹರಿವಾಣದಲಿ ಶಿಶು ತಾನು ಬಿಡದೆ ಕಣ್ವ ನದಿಯಲ್ಲೀ ಶಿಷ್ಯರಿಗೆ ತೊಳಸಿ ತಂದು ಮಠಕೆ ಆಗ ವಾಸುದೇವನಭಿಷೇಕ ಕ್ಷೀರವನ್ನು ಆ ಸುರಭಿಯ ಕರೆದಭಿಷೇಕÀವನೆ ಕೊಂಡ ಲೇಸಿನಿಂದಲಿ ಮೊಲೆಯುಂಡು ಬೆಳೆದನು ವಾಸವನುತ ದೇವೇಶನ ಪಾಡುತ ವಾಸವಾದರು ಮಳೂರಿನಲಿ1 ಆ ಶಂಕುಕÀರ್ಣನೇ ಶೇಷಾವೇಶದಲ್ಲಿ ಶ್ರೀಶನ ಕÀಂಭದಿ ತೋರಿಸಿದಾತನೆ ತಾ ಸುಮ್ಮಾನದಿ ನರಸಿಂಹನ ಪೂಜೆಗೆ ತಾಸು ಬಿಡದೆ ಆಸೆ ತೀರಿಸಿದಾತನೆ ಈಸು ಮಹಿಮೆಗೆ ವ್ಯಾಸ ನಾಮಕರಣವು ಆ ಸುಮನೋಯತಿ ಆಶೀರ್ವಾದವಮಾಡೆ ತಾ ಸುಮ್ಮನಿರದಲೆ ಕೃಷ್ಣನ್ನ ಸ್ಮರಿಸುತ್ತ ಈ ಶಿಶುಬೆಳೆಯೆ ಆಭರಣದಿ ಶೋಭಿತ ವೀ ಸುಮತಿಯ ಮಂಗುರುಳಿಗೆ ಮುತ್ತಿನ ಗೊಂಡೆ ಆ ಸುಮನೋಹರಗಳೆಲೆ ಮಾಗಾಯಿ ಭೂಸುರ ನಿಕರವ ಮೋಹಿಪ ಬಗೆವಂಟಿ ಭೂಸುರ ಕರ್ಣಕೆ ಚಳತುಂಬು ಬಾವಲಿ ನಾಸಿಕಛಂದವು ಪದ್ಮವಿಕಸಿತ ಮುಖನೇತ್ರ ಸೂರ್ಯ ಕಾಂತಿಯ ಮುಖ ಫಣೆ ತಿಲಕನ ನೃ ಕೇಸರಿ ಪ್ರಾಯಗೆ ಹಾರಪದಕÀವಿಟ್ಟು ಆ ಸುಕರಗಳಲಿ ಉಂಗುರ ಪೊಳೆಯುತ ಆ ಸುಕಾಂತಿಯ ಕಡಗ ಸರಪಳಿ ವಂಕಿಯೂ ಲೇಸು ವಡ್ಯಾಣವ ನಡುವಿಗೆ ಧರಿಸಿ ಆ ಸಣ್ಣ ಪಾದಕ್ಕೆ ಗೆಜ್ಜೆ ಕಾಲ್ಗಡಗವು ಈ ಶಿಶುವಿನ ಹರಿ ಆಡಿಸುವಾ 2 ವರ್ಷವೈದಕೆ ಚೌಲ ಅಕ್ಷರಾಭ್ಯಾಸ ವತ್ಸರ ಉಪನಯನ ಮಾಡಿ ಧೀರಗೆ ಸಪ್ತ ವರ್ಷಕೆ ತುರ್ಯಾಶ್ರಮ ಕಾರುಣ್ಯದಿಂದ ಶ್ರೀಪಾದರಾಯರಲ್ಲಿ ಅರುಹಿಸಲು ವೇದಶಾಸ್ತ್ರ ನಿಗಮಪಾಠ ಸಾರವ ತರ್ಕತಾಂಡವ ಚಂದ್ರಿಕೆಯ ಮಾಡಿ ಸೂರಿಶಿಷ್ಯ ವಾದಿರಾಜನ್ನ ಪಡೆದೆಯೋ ಶೂರಕೇಸರಿಯಂತೆ ವಾದಿದಿಗ್ಗಜಗಳ ಧಾರಿಣಿಯಲ್ಲಿ ತಲೆ ಎತ್ತದಂತೆ ಮಾಡಿ ನೂರೆಂಟು ಮಂದಿ ಶೂರವಾದಿಗಳಿಂದ ವಾರಿಧಿ ಕಟ್ಟಿ ಮಾರುತಿಯನು ಪ್ರತಿಷ್ಠೆಯ ತಾಮಾಡಿ ಶ್ರೀ ರುಕ್ಮಿಣಿಪತಿ ಗೋಪಾಲ ಕೃಷ್ಣನ ಸಾರಸಾಕ್ಷನ ಸೇವೆ ಅನುದಿನವು ಮಾಡಿ ಪುರಂದರ ದಾಸರಿಗಂಕಿತಾ ಪಾರ ಕುಹುಯೋಗವ ನೂಕಿ ಭೂಷತಿಯನು ಕಾಯ್ದ ಪಾರ ಮಹಿಮೆ ಫಾಲ್ಗುಣ ಬಹುಳ ಚೌತಿಯು ಶ್ರೀ ರಮಣನ ಪುರಿಯಾತ್ರೆಗೆ ರಥವೇರಿ ತೋರಿದ ವರದ ವಿಜಯವಿಠ್ಠಲನಾ ಪಾ ಸೇರೀದರಿವರು ಆನಂದದಿ * 3 * ಈ ಕೀರ್ತನೆ ವರದ ವಿಜಯವಿಠಲಾಂಕಿತದಲ್ಲಿ ದಾವಣಗೆರೆಶ್ರೀನಿವಾಸದಾಸಕೃತ ವ್ಯಾಸರಾಜ ಚರಿತೆಯಲ್ಲಿ ಉಪಲಬ್ಧವಿದೆ.
--------------
ವಿಜಯದಾಸ
ವ್ಯಾಸರಾಯರು ಗೋಪಾಲಕೃಷ್ಣನ ಭಕ್ತಿಯಿಂದಲಿ ಭಜಿಸುವ ನಮ್ಮ ಗುರು ವ್ಯಾಸಮುನಿರಾಯ ಪ. ಹೇಸಿ ವಿಷಯಗಳಿಗೆ ಮೋಸ ಹೋದೆನು ನಾನು ಭಿಲಾಷೆಗಳ ಪೂರೈಸೊ ಅ.ಪ. ಹಿಂದೇಳ ಜನ್ಮಗಳು ಬಂದು ಪೋದವಯ್ಯಾ ಇಂದು ವಸುಧಿಯೊಳಗೆ ಬಂದೆನಯ್ಯಾ ಭವದೊಳಗೆ ನೊಂದೆನಯ್ಯಾ ಬಹಳ ಬೆಂದೆನಯ್ಯ ಅಘಕೂಪದೊಳು ಬಿದ್ದೆನಯ್ಯ ಉದ್ಧರಿಸು ಜೀಯ್ಯಾ 1 ವಂದಿಸುವೆನು ನಿಮಗೆ ನವವೃಂದ ವನದಲಿ ಇರುವೋರು ಇಂದಿರೇಶನ ನೋಡುವೋರು ಆನಂದಪಡುವೋರು ಸಿಂಧುಶಯನ ತಂದು ತೋರಿಸೋ ಇಂದು ನಿಮ್ಮಯ ಪಾದವೊಂದೆ ಭಜಿಪೆ ತಂದೆ ಮಾಡೆಲೊ ಸತ್ಕøಪೆ 2 ಯೆಷ್ಟು ಜನುಮದ ಪುಣ್ಯ ಫಲಿಸಿತು ಎನಗೆ ವೈಷ್ಣವಾ ಜನ್ಮ ದೊರಕಿತು ಕೊನೆಗೆ ದುಷ್ಟ ಸಂಗವಾ ದೂರದಿ ಮಾಡಯ್ಯ ಶಿಷ್ಟ ಜನ ಸಂಗದೊಳಗೆನ್ನಿಡಯ್ಯಾ ಅಭೀಷ್ಟಗಳ ನೀಡಯ್ಯ ಕಾಳಿಮರ್ಧನ ಕೃಷ್ಣನ ತೋರಿಸಯಾ ಪಾಲಿಸಯ್ಯಾ 3
--------------
ಕಳಸದ ಸುಂದರಮ್ಮ
ಶೇಷಾಚಲ ಮಂದಿರ-ಇಂದಿರೇಶ ಪ. ಪಾದ ಸ್ಮರಣೆಯಿತ್ತು ಅ.ಪ ಕರಣಕ್ರಿಯಕರ್ಮಂಗಳೆಲ್ಲವು ಜಡವು ಕರ್ಮ ನಿನ್ನ ನಿಯಮನವಿಹುದು ನಿರುತ ಪರವಶನಾಗಿ ನಾ ಮಾಳ್ಪೆನೆಂಬ ಈ ದುರಭಿಮಾನದಿ ನಾ ಭವಕೊಳಗಾದೆನೊ 1 ವಿಷಯಂಗಳೆಲ್ಲ ಜ್ಞಾನಗೋಳಕದಿ ಬಂದು ಎನ್ನ ವಿಷಮಗೊಳಿಸಿತು ಮನ ಅಭಿಮಾನದಿಂದಲಿ ಹೃಷೀಕಪನೆ ಎನ್ನ ಮನವಿಷಮತೆಯ ಹರಿಸಿ ಪೋಷಿಸೊ ನಿರುತ ಕೃಪಾಕರ ಮೂರುತೇ 2 ದೋಷದೂರನೆ ನಿನ್ನ ವಿಸ್ಮರಣೆಯಿಂದಲಿ ವಾಸುಕೀಶಯನ ನೀ ಭೂತಾವಾಸ ನೀನಾಗಿರೆ ಮೋಸಹೋದೆನ್ನನು ಪೋಷಿಸಬೇಕಯ್ಯ 3 ಕುಟಿಲ ಮನದಲಿ ನಿನ್ನ ಭಕುತನೆಂದೆನಿಸಿದೆ ವಟಪತ್ರಶಾಯಿ ನೀ ಹಟ ಸಾಧನಕ್ಕೆ ಒಲಿಯೆ ದಿಟಭಕುತಿಯ ಕೊಟ್ಟು ಕಡೆ ಹಾಯಿಸಯ್ಯ 4 ತನುಛಾಯೆ ಕ್ರಿಯೆಯು ತನ್ನ ತನುವನಾಶ್ರೈಸಿದಂತೆ ನಾ ನಿನ್ನ ಪ್ರತಿಬಿಂಬನಾಗಿರಲು ಸದಾ ಎನ್ನ ಕ್ರಿಯೆಗಳೆಲ್ಲಾ ನಿನ್ನ ಆಣತಿಯಂತಿರೆ ಘನಮಹಿಮನೆ ನಿನ್ನಾಕ್ರಿಯವನರಿಯದೆ ಹೋದೆ5 ಪನ್ನಗಾಚಲನಿಲಯ ಆಪನ್ನರಕ್ಷಕ ನೀನಿರೆ ಬನ್ನಬಡಲ್ಯಾಕಯ್ಯ ಅನ್ಯರನಾಶ್ರಯಿಸಿ ಮನೋವಾಕ್ಕಾಯ ಕರ್ಮವನರ್ಪಿಸಲು ಸನ್ಮತಿಯನೆ ಇತ್ತು ಸತತ ಸಲಹಯ್ಯ 6 ಸರ್ವಸತ್ತಾಪ್ರದನೆ ಸರ್ವಪ್ರವೃತ್ತಿಪ್ರದನೆ ಸರ್ವರಂತರ್ಯಾಮಿ ಮಮಕುಲಸ್ವಾಮಿ ಉರಗಾದ್ರಿವಾಸವಿಠಲ ನಿನ್ನಯ ದಿವ್ಯ ಚರಣಸ್ಮರಣೆಯನಿತ್ತು ಕಾಯೊ ಕಮಲಾಕಾಂತ7
--------------
ಉರಗಾದ್ರಿವಾಸವಿಠಲದಾಸರು
ಶ್ರೀ ಕೃಷ್ಣ ಚರಿತ್ರೆ ಅಧ್ಯಾಯ ಒಂದು ರಾಗ:ಸೌರಾಷ್ಟ್ರ ತಾಳ:ತಿವಿಡೆ ಸ್ವರ ಋಷಭ ಶ್ರೀ ರಮಣ ಚರಣಾರವಿಂದವ ಆರಡಿ ಪರಿಯಾಗಿ ಸೇವಿಸಿ ಶ್ರೀ ರಮಾ ಬ್ರಹ್ವಾದಿ ಗುರುಪದ ಸೇರಿ ಸೇವಿಸುವೆ| ನಾರಿಮಣಿ ಶಿರಿದೇವಿ ಅಪಾರ ಮಹಿಮೆಯ ತಿಳಿವುದಕೆ ಪೂರ ಮನಗಂಡಿಲ್ಲ ಮತ್ತಿನ್ನಾರು ಬಲ್ಲವರು 1 ಆರಗೊಡವಿನ್ನೇನು ಮತ್ತಿನ್ನಾರು ದೂರಿದರೇನುಸರ್ವವು ಪೂರಮಾಡುವ ನಮ್ಮ ಗುರುಗಳ ಪೂರದಯವಿರಲು| ಮನದಲಿ ಘೋರತರ ಅಭಿಲಾಷೆ ಯೋಗ್ಯತೆ ಮೀರಿ ಇರುವುದು 2 ಮನಸಿನಲಿ ಮಾತ್ಸರ್ಯವಿಲ್ಲದೆ ಘನಕವೀಶ್ವರಗಳಿಗೆವಂದಿಸಿ ಅನುಸರಿಸಿ ಭಾಗವತವನು ಬಹುವಿನುತ ದಶಮ ಸ್ಕಂದದರ್ಥವ ಕನ್ನಡಿ ತೋರಿಸಿದಂತೆ ಸ್ಪಷ್ದದಿ ಕನ್ನಡಿಲ್ಹೇಳುವೆನು 3 ಪದ್ಯ ಭಾರ ಆಘೋರದುಃಖವನು ಶ್ರೀ ರಮೇಶನ ಸ್ತುತಿಸುತಿರುವ ಕಾಲದಲಿ| ಸಾರ ಸಾರಿ ಹೇಳಿದನು ವೃಂದಾರ ಕರುಗಳಿಗೆ 1 ಪದ, ರಾಗ:ಯರಕಲಕಾಂಬೋದಿ ಅಟತಾಳ ಸ್ವರಧೈವತ ಕೇಳಿರೋ ಭೋ ದೇವತೆಗಳಿರಾ ಹೇಳುವೆ ಹರಿಭಾವವ ಹೇಳಿರೋ ನಿಮ್ಮವರಿಗೆಲ್ಲಾ ಭಾಳ ಸಂತೋಷದಿಂದಲೇ ಪ ಇಷ್ಟುದಿವಸ ಭೂದೇವಿ ಕಷ್ಟವ ಬಟ್ಟಳು ಬಹಳ ಸ್ಪಷ್ಟವಾಗಿ ಆಕೆಯಾ ಕಷ್ಟವು ದೂರಾಗುವುದಿನ್ನು || ವಿಷ್ಣುನಾಜ್ಞೆಯಲಿ ನೀವು ವೃಷ್ಣಿ ಕುಲದಲ್ಹುಟ್ಟಿರೋ|| ವಿಷ್ಣುತಾ ದೇವಕಿಯಲ್ಲಿ ಕೃಷ್ಣನಾಗಿ ಹುಟ್ಟುವಾ1 ಪದ ಈ ವಚನವ ಕೇಳಿ ದೇವತಿಗಳಾಗ ಹರಿಸೇವೆ ಆಗಲಿಯೆಂಬೋ ಭಾವದಲಿ ಜನಿಸಿದರು| ಈ ವಸುಧಿಯೊಳಗವರು ಭಾವಕನು ಕಶ್ಯಪ ವಿಭಾವಸುವನ ಪೋಲ್ವ ವಸು ದೇವನಾದನು ಅದಿತಿದೇವಿ ತಾ ಜನಿಸಿದಳು ದೇವಕಿಯು ಆಗಿ| ದೇವ ಪೂಜಕನು ವಸುದೇವ ತಾ ಪ್ರೀತಿಯಲಿ ದೇವಕಿಗೆ ಕೊಟ್ಟ ಸದ್ಭಾವದಲಿ ಬೇಕಾದ್ದು ದೇವಕಿಯಲಿ ವಸುದೇವ ರಥವೇರಿದನು ಆವಾಗ ಕಂಸ ತಾ ತೀವ್ರ ನÀಡಿಸಲಾವತ್ತಿಗಾಯಿತಲ್ಲೆ ವಿಯದ್ವಾಣಿ ಪದ, ರಾಗ(ದೇಸಿ) ಅಟತಾಳ, ಸ್ವರಷಡ್ಜ ಕೇಳು ಕಂಸನೆ ನಿನಗೇಳುವೆ ನಾ ಬಂದು| ಕೇಳು ಕಂಸಾ|| ಬಹಳ ದಿವಸ ಬಾಳಿ ಇರುವವನಲ್ಲ ಕೇಳು ಕಂಸ ಪ ಮಂಗಳಾಂಗಿಯು ಈಕೆ ತಂಗಿ ಎಂದೆನಬೇಡ ಕೇಳು ಕಂಸಾ| ತಂಗಿಯ ಮಗನೇ ನಿನ್ನಂಗಕ್ಕೆ ವೈರಿಯು ಕೇಳು ಕಂಸಾ|| 1 ಭಂಡ ನಾನೆಂದು ಉತ್ಕಂಠಿದಿಂದರ ಬೇಡ ಕೇಳು ಕಂಸಾ| ಎಂಟನೆಯವ ನಿನ್ನ ಘಂಟಸಿ ಕೊಲ್ಲುವನು ಕೇಳು ಕಂಸಾ|| 2 ವೈರಿ ದಾವಾತಿದ್ದಾನೆಂದೆನ ಬೇಡ ಕೇಳು ಕಂಸಾ| ಶುದ್ಧ ಅನಂತಾದ್ರೀಶ ಅವತಿಳಿ ಕೇಳು ಕಂಸಾ|| 3 ಪದ್ಯ ನುಡಿದಿರುವ ಆ ಸತ್ಯವಾಣಿಯ ಕೇಳಿ ಮೃತ್ಯುಗಂಜಿಕೀನ್ನ ಹೊತ್ತುಗಳೆಯದಲೆ ಆ ಹೊತ್ತು ಕೊಲಬೇಕೆಂದು ಸತ್ವರದಿ ಕೇಶದಲಿ ಒತ್ತಿ ಹಿಡಿದು ಕತ್ತಿ ಹಿರಿದೆತ್ತಿದನು ಕÀಂಸಾ| ಆ ವೃತ್ತಿಯನು ತಿಳಯುತಲೆ ಅತ್ಯಂತವಾಗಿ ತನ್ನ ಚಿತ್ತದಲಿ ಮಿಡುಕಿ ಮದಮತ್ತ ಕಂಸಗೆ ನುಡಿದ ಒತ್ತಿ ಈ ಪರಿಯಾ || 1 ಪದ, ರಾಗ:ಆನಂದಭೈರವಿ ಆದಿತಾಳ ಬೇಡಲೊ ನೋಡಿ ಈಕೆಯಲಿ ಮಾಡು ಮಮತೆಯನು ಮಾಡಬೇಡ ಹಿಂಸಾ|| ಪ ಯಾಕೆಕೊಲ್ಲುವಿಯೋ ನೀ ಕರುಣಿಸು ಸಣ್ಣಾಕಿ ನಿರ್ಮಲಾಂಗಿ|| 1 ಕೊಂದರೆ ಎನಗೆ ಕೇಡು | ಮತ್ತದರಿಂದ ನಿನಗೆ ಕೇಡು ತಿಳಿದು ನೋಡು|| 2 ಏಸು ದಿವಸ ನೀನು ಬದುಕುವಿ ನಾಶವಿಲ್ಲವೇನು| ಮೋಸವಾಗದಿರು ಶ್ರೀಶ ಅನಂತಾದ್ರೀ ಕೋಪಿಸುವನು 3 ಆರ್ಯಾ ಬಹಳ ರೀತಿಯಲಿ ಹೇಳಿಕೊಂಡರೂ ಕೇಳಲಿಲ್ಲ ಕಂಸನು ಶೌರಿಯು ಹೀಗೆ || 1 ಪದ, ರಾಗ:ಅನಂದ ಭೈರವಿ ತಾಳ:ಆದಿ ಬೇಡಿದ್ದು ಕೊಡುವೆನು ನಾನು| ಪ ಜೇವ ಹತ್ಯವೇ ಮುಂಚೆ ಕೇವಲ ನಿಂದ್ಯದು ಸ್ತ್ರೀ ವಧಕಂತು ಇನ್ನು ದಾವುದು ಸರಿಯದು || 1 ಹುಟ್ಟುದರೀಕೆಯ ಹೊಟ್ಟೆ | ಮಕ್ಕಳು ಘಟ್ಟಿ ಮನಸು ಮಾಡಿ ಕೊಟ್ಟುಬಿಡುವೆನು ಕೇಳು || 2 ಬಲ್ಲಿದಾನಂತಾದ್ರಿವಲ್ಲಭನ ಆಣಿ|| 3 ಪದ, ರಾಗ:ಯರಕಲಕಾಂಬೋಧಿ ಶೌರಿಯ ವಚನವ ಕೇಳಿ ವೈರಿಯ ಕಂಸನು ಆಗ ಮೋರೆಯ ತೆಗ್ಗಿಬಿಟ್ಟನು ನಾರಿಯ ಕೊಲ್ಲುವದು | ವೈರಿಯ ಭಯ ಕಳೆವುತ ನಾರಿಯ ಕರಕೊಂಡು ||1 ಮುಂದಾ ದೇವಕಿಯಲಿ ಕಂದನು ಆದಾಕ್ಷಣಕೆ ತಂದೊಪ್ಪಿಸಿದನು ಕಂಸಗೆ ನೊಂದ ವಸುದೇವ| ಮುಂದಾ ಕಂಸನ ನೋಡಿ| ಮನನ ಹಾಸ್ಯದಿ ಮತ್ತ ಕಂದನ ತಿರಿಗಿ ಒಪ್ಪಿಸಿ ಆಗಂದನು ಈ ಪರಿಯು || 2 ಶಿಷ್ಟನೆ ನೀಕೇಳೈ ಬಂದಿಷ್ಟಿಲ್ಲಿವನಿಂದೆನಗೆ| ಸ್ಪಷ್ಟದಿ ನಿನಗ್ಹೇಳುವೆ ಎನಗಷ್ಟಮನೇ ವೈರಿ| ದುಷ್ಟನ ಮಾತಿಗೆ ಶೌರಿಯು ತುಷ್ಟನು ಇದು ಎಂದು || 3 ಪದ, ರಾಗ:ಕನ್ನಡ ಕಾಂಬೋದಿ ತಾಳ:ಬಿಲಂದಿ ಮುಂದ ಶೌರಿಯು ತನ್ನ ಮಂದಿರಕ್ಕೆ ಪೋಗಲು ಬಂದ ನಾರದನು ಆಗಲ್ಲೆ ಕಂಸ ಇದ್ದಲ್ಲೆ || 1 ಮಾಡಿದಾ | ಮಾತನಾಡಿದಾ|| 2 ಸುದ್ದಿಯಂಬೋದ್ಹುಟ್ಟಿತು | ಕೆಲಸ ಕೆಟ್ಟಿತು|| 3 ದಾವ ಮೊತೇನ್ಹೇಳಲಿ ದೇವದೇವ ಶ್ರೀಹರಿ ದೇವಕಿಯಲ್ಲಿ ಪುಟ್ಟುವಾ| ನಿನ್ನ ಕೊಲ್ಲುವಾ|| 4 ಅಸುರರಾದವರುಗಳಾ ಅಸುಗಳನ್ನೆ ಹೀರುವಾ ವಸುಧಿ ಭಾರವನಿಳಿಸುವಾ ಕೀರ್ತಿ ಬೆಳಿಸುಮವಾ|| 5 ನಂದಗೋಪಾದಿUಳೆÀಲ್ಲ ನಂದ ಬಾಂದವರು ಮತ್ತು ಮುಂದ ವಸುದೇವಾದಿಗಳು | ದೇವತಿಗಳು|| 6 ಇನ್ನಕೇಳು ಇವರ ಹೊರ್ತು ಅನ್ನರಾದವರು ಎಲ್ಲಾನಿನ್ನ ಅನುಸರಿಸೆ ಇರುವುವರು | ಅಸುರರೇ ಅವರು|| 7 ಮೂಲದಲ್ಲೇ ಮುಂಚೆ ನೀ ಕಾಲನೇಮಿಯೆನಿಸಿ ಈ ಕಾಲಕ್ಕೆ ಕಂಸನಾಗಿರುವಿ | ಮೈಮರ್ತು ಇರುವಿ || 8 ನಿನ್ನ ಪೂರ್ವ ವೈರಿಯು ಚನ್ನಿಗಾನಂತಾದ್ರೀಶಾ ನಿನ್ನ ಕೊಲ್ಲುವನೆಂಬುದದು |ನಿನಗೆ ತಿಳಿಯದು || 9 ಧಿಟ್ಟ ನಾರದನು ಮುನಿಮುಟ್ಟಿ ಬಂದ್ಹೀಂಗನಲು ಥಟ್ಟನೆ ಕಂಸ ಭಯಬಟ್ಟು ಅವರಿಬ್ಬರಿಗೆ ಘಟ್ವ ಬೇಡಿಯ ಬಿಗಿದು ಹುಟ್ಹುಟ್ಟದವರನ್ನ ಬಿಟ್ಟು ಬಿಡುದಲೆÀ ಕೊಂದ ಹುಟ್ಟಿದಾಕ್ಷಣಕೆ|| ಹುಟ್ಟುಗ್ರ ಸೇನನಲಿ ಹುಟ್ಟಿದಾರಭ್ಯ ಬಹು ದಿಟ್ಟಾದ ಸ್ನೇಹವನು ಬಿಟ್ಟ ಆ ಕಂಸ ಕಂಗೆಟ್ಟು ಬಹುಕಾಸೋಸಿ ಬಟ್ಟವನ ಬಂದಿಯ ಲ್ಲಿಟ್ಟುತಾನೆ ಆದ ಪಟ್ಟಕಾಧಿಪತಿಯು|| 1 ಪದ:ರಾಗ:ಶಂಕರಾಭರಣ ಸ್ವರ:ಷಡ್ಜ, ತಾಳ:ಆದಿ ಯೂದವರನ್ನು ಬಹುಪೀಡಾ ಬಡಿಸೀದಾ || 1 ದುಷ್ಟನ ಕೈಯೊಳು ಸಿಕ್ಕು ಶಷ್ಟ ಬಡಲಾರೆವು ಎಂದು ಅಷ್ಟೂರು ನಿಲ್ಲದೆ ದೇಶಭ್ರಷ್ಟರಾಸರು|| 2 ಅನುಬಂಧಿಗಳೆಂಬುವರು ಅನುರಾಗದಿಂದಲ್ಲೆ| ಅವನ ಅನುಸರಿಸಿಕೊಂಡಿರುತಿಹರು ಅನುದಿನದಲ್ಲಿ||3 ಕ್ರೂರಾಗಿ ಇರುವೊನು ಕಂಸಾ ನಾರಿ ದೇವಕ್ಕಿ ದೇವಿಯು ಆರು ಮಹಾಕಾಳಿಯ ಹರೊ ಆಜ್ಞೆಯಿಂದ ಕೀಳುತು ರೋಹಿಣಿ ಗರ್ಭದೊಳಿಟ್ಟಳು|| 4 ದೇವಕಿದೇವಿಯು ವಸುದೇವಾದಿಗಳೆಲ್ಲ ಗರ್ಭ ಸ್ರಾವವಾಯಿತೆಂದೊದರಿದರು ಆ ವ್ಯಾಳ್ಯದಲ್ಲಿ|| 5 ಎಂಟನೆ ಗರ್ಭಾಗಿ ಶ್ರೀ ವೈಕುಂಠೇಶ | ನಿಂತಾನು ಸಾಧು ಕಂಟಕರನ್ನು ಕೊಲ್ಲುವೆ ನೆಂದುತ್ಕಂಠದಿಂದಲಿ || 6 ಶಂಜಾಕ್ಷಿ ದೇವಕಿ ದೇವಿ ಶಂಜನಾಭನುದರವೆಂಬೋ ಪಂಜರದೊಳಿರಲು ತೇಜಃ ಪುಂಜಳಾದಳು7 ಇಂಥಾಕಿಯ ಕಂಡು ಕಂಸಾನಂತಾದ್ರೀಶ ಗರ್ಭದಲ್ಲಿ ನಿಂತಾನೆಂದು ತಿಳದೀಪರಿ ಚಿಂತಿ ಮಾಡಿದಾ|| 8 ಪದ:ರಾಗ:ಶಂಕರಾಭರಣ ಏನು ಮಾಡಲಿ | ನಾ ಇನ್ನೇನು ಮಾಡಲಿ | ಏನು ಮಾಡಲೇನು ವಿಷ್ಟು ತಾನೆ ಬಂದಿನ್ನೇನು ಗತಿ ಇನ್ನೇನು|| ಪ ವೀರರೊಳಗೆ ಸೇರಿ ಎನ್ನ ಮಾರಿ ಹ್ಯಾಂಗ ತೋರಲಿನ್ನೇನು ||1 ತಂಗಿ ವಧ ಜಗಂಗಳೊಳಗೆ ಅಮಂಗಳಿದು ಸು
--------------
ಅನಂತಾದ್ರೀಶ - ಕಥನಕಾವ್ಯಗಳು