ಒಟ್ಟು 779 ಕಡೆಗಳಲ್ಲಿ , 97 ದಾಸರು , 691 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಶರಣರ ಸುರಧೇನು ಜಯ ಜಯ ಸೀತಾರಮಣ ಪ ಸೊಕ್ಕಿದ ದೈತ್ಯರ ಬಾಧಿಗಾರದಿಹ ದೇವರ್ಕಳ ಮೊರೆಯನು ಕೇಳಿ ಮಿಕ್ಕನುಜರ ಕೂಡ ಬೆಳೆದು ಅಕ್ಕರದಲಿ ಕಾಯದು ಬರಲಿ ನಕ್ಕಿ ಕೈವಿಡಿದನೇ ಜಯತು 1 ಆಖರ ದೂಷಣರಳಿದು ತಾಕಪಿಕರಢಿಯನೆ ಕೂಡಿ ಬೇಕಾದ ಸ್ಥಿರಪದ ನೀಡಿ ಸಾಕೇತ ಪುರಾಧೀಶ ಜಯತು 2 ಲಲನೆ ದಾಮದಲಿ ಕುಳ್ಳಿರಲಿ ಬಲಕವಶಿಷ್ಠ ಭರತ ಶತೃಘ್ನ ಕೂಡೆ ನೆಲಿಛತ್ರ ವಿಡಯೆ ಲಕ್ಷ್ಮಣನು ಉಳಿದಸುರನರರು ಕುಳ್ಳಿರಲಿ ಬೆಳಗಿದಳಾರತಿ ಜಯತು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವ ಜಯದೇವ ಜಯ ರಾಘವ ರಾಮಾ ದಯದಲಿಯಚ್ಚರನೀವದು ಸ್ಮರಿಸಲುತವನಾಮಾ ಪ ಹಭವ ಭವಮುಖರಮೊರೆಯನು ಕೇಳುತಲಿ ದಶರಥ ಕೌಲಸ್ಯರಾ ಬಸಿರಿಂದುದಿಸುತಲಿ ರುಷಿ ಮುಕರಕ್ಷಿಸಿ ತಾಟಕಿ ದೇಹದಿಬಿಡಿಸುತಲಿ ವಸುಧಿಲಿ ಶಿಲೆಯನು ಪಾದದದಿಮೆಟ್ಯುದ್ಧರಿಸುತಲಿ 1 ಹರುಷದಿ ಕೌಶಿಕನೊಡನೆ ಮಿಥಿಲೆಗೆ ಪೋಗುತಲಿ ಹರದು ಮುರಿದು ಜನಕಜೆ ಮಾಲೆಯ ಧರಿಸುತಲಿ ಬರಲಾನಂದದಿ ಭೃಗುಪತಿ ದಶರಥ ದರಶನ ಪಾಡುತಲಿ ಅರಸುತನಕ ಕೈಕೆಯು ಬ್ಯಾಡೆನೆ ನಡೆದೈತ್ವರಿಲಿ 2 ವನದಲಿ ಭಂಗಿಸಿಶೂರ್ಪನಖಿಖರ ದೂಶಣರಾ ಅನುವರ ಕಾಂಚನ ಮೃಗವಾ ಬೆಂಬೆತ್ತಲು ದೂರಾ ಜನಕಜೆಯಾಕೃತಿ ವೈಯ್ಯಲು ಕಪಟದಿದಶಶಿರಾ ಅನುಭಜಟಾಯುವಿನಿಂದಲಿ ಕೆಳಿ ನಡದೆ ಧೀರಾ 3 ಪಥದಲಿ ಮುರಿದುಕಬಂಧವ ಶಬರಿಗೆ ಗತಿನೀಡಿ ಪ್ರಥಮದಿ ಹನುಮನ ಕಂಡು ವಾಲಿಯ ಹತಮಾಡಿ ರತಿಯಲಿ ಸುಗ್ರೀವಜಾಂಭವ ಸೈನ್ಯದ ಲೋಡಗೂಡಿ ಕ್ಷಿತಿಜೆಯಾ ಸುದ್ದಿಯತರಿಸಿ ನಡೆದೈನಲಿದಾಡಿ 4 ಸೇತುವೆ ಗಟ್ಟಿಸಿ ಶರಣವ ಬರಲು ವಿಭೀಷಣನು ಭೀತಿಯ ಹಾರಿಸಿಸೈನ್ಯದಿ ದಾಟಿದೆ ಶರಧಿಯನು ನೀತಿಯ ತಪ್ಪಿದ ರಾವಣ ಕುಂಭಶ್ರವಣರನು ಖ್ಯಾತಿಲಿ ಮಡಹಿದೆ ಅವರಾಸಂತತಿ ಸಂಪದನು 5 ಶರಣಗಸ್ಥಿತಪರಪದವಿತ್ತು ದೇವರ ಶೆರೆಬಿಡಿಸಿ ಮರಳಿದಯೋಧ್ಯಕಪುಷ್ಪಕದಿಂ ಸೀತೆಯವರೆಸೀ ಮೆರೆವತ್ಸಜರಜನನಿಯರ ಸಕಲರಸುಖಬಡಿಸಿ ಸುರಮುನಿಜನರನುಸಲಹಿದೈ ಸಾಮ್ರಾಜ್ಯವನು 6 ನಾಮದಮಹಿಮೆ ಹೊಗಳಲು ಶೃತಿಗಳಿಗಳವಲ್ಲಾ ಪ್ರೇಮದಿಸವಿಸದುಂಬುವ ಶಿವ ಸೀತಾಬಲ್ಲಾ ನೇಮದಿಸುರನಂದಾನ್ನರ ಬವ ತರಿಸಿದರಲ್ಲಾ ಕಾಮಿತ ದಾಯಕ ಗುರುಮಹಿಪತಿ ಪ್ರಭುಶಿರಿನಲ್ಲಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯಾ ಜಯಾ ಪ ಈ ಮುದ್ದುಮುಖವೊ ಮತ್ತೆ ತನುವಿನ ಕಾಂತಿ ಈ ಬಿಲ್ಲು ಈ ಬಾಣ ನಿಂತಭಾವ 1 ಬಂಟ ಈ ಭಾಗ್ಯ ಆವ ದೇವರಿಗುಂಟು ಮೂಲೋಕದೊಳಗೆ 2 ಜಯ ಇನಕುಲೋದ್ಧರಣ ಜಯ ಮುನಿಕೃತ ಶರಣ ಜಯ ದನುಜವಿದಾರಣ ಜಯ ತಮಹರಣ 3 ಧರೆಯೊಳತಿಭಾರವನು ಇಳುಹಿ ಕಮಲಜ ಮುಖ್ಯ ಸುರರ ಮೊರೆಯನು ಕೇಳ್ದು ನರರೂಪ ತಾಳ್ದು 4 ದಶರಥನ ಗರ್ಭದಲಿ ಜನಿಸಿ ಮುನ್ನ ಮುನಿ ಮನೋರಥ ಕಾಯಿದ ಪುಣ್ಯಚರಿತ್ರ5 ಅಸುರರನು ಅಳಿದು ಅಹಲ್ಯಳಿಗಿತ್ತ ವರವಿತ್ತು ಮಿಥಿಳ ಪುರದಿ ಹರನ ಧನುವನುರೆ ಮುರಿದು 6 ಅತುಳ ಬಲದಲಿ ಸೀತೆಯ ಒಲಿಸಿದ ಭಾರ್ಗವ ಮ- ಹಿತÀಳ ಬಲವಂತ ದೇವೋತ್ತುಂಗ ಜಯತು 7 ಭರದಿಂದಲಯೋಧ್ಯಾಪುರವನು ಶೃಂಗರಿಸೆ ಹರುಷತನದಲಿ ರಾಮಗರಸುತನವೆನಲು 8 ಕಿರಿಯ ಮಾತೆಯು ಬಂದು ಭರತನಿಗೆ ಪಟ್ಟವೆನೆ ಸಿರಿಸಹಿತ ಹೊರಹೊಂಟ ಕರುಣಾಳು ಜಯತು 9 ಅನುಜ ಅವನಿಜೆ ಸಹಿತ ವನವಾಸವ ಮಾಡಿ ವನಜಾಕ್ಷ ಪತಿಯಾಗೆಂದು ರಾಕ್ಷಸಿಯು ಬರಲು 10 ಅನುವಾಯಿತೆಂದು ನಾಸಿಕವ ಹರಿದು ಭಂಗಿಸಿದೆ ಬಿನುಗು ಹೊಮ್ಮøಗವೆಚ್ಚ ಘನಮಹಿಮ ಜಯತು 11 ಜಕ್ಕಿದ ವಾಲಿಯನು ಕೊಂದು ಕುಲಸೈನ್ಯ ಸಹವಾಗಿ ನಿಲ್ಲದೆ ಸೇತುವೆಗಟ್ಟಿ ಅಸುರರೊಡಗೂಡಿ 12 ಖುಲ್ಲ ದಾನವ ಕುಂಭಕರ್ಣ ರಣಮುಟ್ಟಿ ಎಲ್ಲರನು ತರಿದಂಥ ಬಲ್ಲಿದನೆ ಜಯತು 13 ದÉೀವಕ್ಕಳು ಹರುಷದಲ್ಲಿ ಪೂಮಳೆಗರೆಯೆ ಭೂಮಿಜೆಯ ಸಹಿತ ಸೌಮಿತ್ರಿಯೊಡಗೂಡಿ 14 ಕ್ಷೇಮದಿಂದಯೋಧ್ಯಪುರದಿ ಸುಖದಲ್ಲಿರ್ದ ಸ್ವಾಮಿ ಶ್ರೀಹಯವದನ ರಘುಕುಲತಿಲಕನಲ್ಲವೆ 15
--------------
ವಾದಿರಾಜ
ಜಲಧಿ | ನಿಮ್ಮ ಮೊರೆಹೊಕ್ಕವರ ಕಾಯ್ದು ಪೊರೆಯುವಿರಿ ದಯದಿ ಪ. ಅರಿಯರು ಜಗದೊಳಗೆ ನರರು ನಿವಿ್ಮೂ ಮಹಿಮೆ ಕರಕರೆಪಡುತಿಹರು ಭವದೊಳಗೆ ಪರಮ ನಮ್ರತೆಯಿಂದ ಚರಣಕೆರಗಲು ಬಂದು ಉರುತರದ ಕಾರುಣ್ಯದಿಂದ ಪೊರೆಯುವಿರಿ 1 ಇಲ್ಲವೊ ಆಸೆ ಆಡಂಬರದ ದ್ರೌವ್ಯದಲಿ ಎಲ್ಲೆಲ್ಲಿ ನೊಡಲು ತತ್ವಬೋಧೆ ಉಲ್ಲಾಸದಿಂದ ಸಜ್ಜನರಿಗರುಹುತ ಮೋದ ಎಲ್ಲೆ ಕಾಣಿಸದಂಥ ಆನಂದವೀವ ಗುರು 2 ತಂದೆ ಮುದ್ದುಮೋಹನವಿಠ್ಠಲನೆಂದೆಂಬ ಬಹು ಚಂದದ ಅಂಕಿತದಿ ಜಗದಿ ಉದಿಸಿ ಮಂದರಿಗೆ ಸುಜ್ಞಾನ ತಂದು ರಕ್ಷಿಸುವಂಥ ಒಂದೊಂದು ಮಹಿಮೆಗಳ ಪೇಳಲೆನ್ನೊಶವೆ 2 ಅನಾದಿಯಿಂದಲಿ ಹೀನ ದೆಸೆಯೊಳಗಿದ್ದು ನಾನಾ ಜನ್ಮದಿ ಬಂದು ಕರ್ಮದಲಿ ತೊಳಲಿ ದೀನತ್ವವೈದುವ ಮಾನವನ ಕರುಣಿಸಿ ಸಾನುರಾಗದಿ ಹರಿಯ ಪದಕೆ ಸೇರಿಸುವಂಥ 3 ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತ ಹರಿ ಎಂತೆಂದು ಶ್ರೇಷ್ಠ ಕನಿಷ್ಠದ ಅರ್ಥ ತತ್ವ ತಿಳಿಸಿ ಕಷ್ಟ ಬಿಡಿಸುವ ಜಗತ್ಕರ್ತ ಒಬ್ಬನೆ ಹರಿಯು ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆನುವ 5
--------------
ಅಂಬಾಬಾಯಿ
ಜವದಿ ಪಾಲಿಸೊ ಪ್ಲವಗೋತ್ತುಮ ಮರುತಾ ನಂಬಿದೆ ನಿರುತಾ ಪ ಅವನಿಶಾರ್ಚಿತ ಪವನಾತ್ಮಜ ಹನುಮಾ ಭವಸುರನುತ ಭೀಮಾ ಅ.ಪ ಮಾರುತಿ ಅಂಜನ ಗರ್ಭದೊಳುದವಿಸಿ ವಾರಿಧಿಯುತ್ತರಿಸಿ ಧಾರುಣಿ ಸುತೆಗತಿ ಹರುಷವಗೊಳಿಸಿದಿ | ನೀ ದ್ವಾಪರ ಯುಗದಿ ನಾರಿಯ ಮೊರೆ ಕೇಳಿ ದುರುಳನ ಶಿರ ತರಿದಿ ಆ ನಾರಿವೇಷದಿ 1 ಅದ್ವೈತರ ನೀನಳಿಸುವಲೋಸುಗದಿ | ಸದ್ಗುರುವರ ಜಗದಿ ಮಧ್ಯಾಸದನ ಸತಿಯುದರದಿ ಜನಿಸಿದಿ | ಸದ್ವೈಷ್ಣವರ ಪೊರೆದಿ ಸಿದ್ಧಾಂತವ ಸ್ಥಾಪಿಸಿ ಬದರಿಗೆ ನೀಪೋದೆ | ಮದ್ವಾಭಿದಾನದಿ 2 ನಂಬಿದೆ ವೃಕೊಜಠರಾ ದಶಶಿರ ಪುರನಾಥಾ ಪತಿ ಶಶಿಕುಲಸಂಜಾತಾ 3
--------------
ಶಾಮಸುಂದರ ವಿಠಲ
ಜಾಣೆ ನಂಬಿದೆ ಇಸ್ಟೇಟರಾಣೀ ನೀನೊಲಿದೆನ್ನ ಪಾಣಿಯೊಳಗೆ ಬಂದು ಕಾಣಿಸಮ್ಮ ಪ ವಾಣಿ ಶ್ರೀಲಕುಮಿಶ ರುದ್ರಾಯಣಿಯರಿಗಿಂತ ಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ ಅ.ಪ ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆ ದನಕರ ಹೊಲಮನೆಯನು ಮಾರಿದೆ ಜನರೊಳಗಪಹಾಸ್ಯಗೊಳಗಾದೆ ಕೇಳಮ್ಮ ವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ 1 ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆ ಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮ ಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥ ಕಾಣಿ ಕೈಪಿಡಿದು ರಕ್ಷಿಸೊ ರಕ್ಷಿಸೋ ನೀನಮ್ಮ 2 ಎಲ್ಲಾ ಹಾಳಾಯಿತು | ಸಾಲ ಬಹಳಾಯಿತು ಜೋಳಿಗೆ ಬಂದಿತು ಕೂಳಿಗೆ ಮನೆ ಮನೆ ಚಾಲುವರಿದೆನಮ್ಮಾ 3 ಹಾರಿ ಹೋಗುವದಮ್ಮಾ ಪಕ್ಕಾರಂಗು ಧಾರುಣೀಶರ ಮಧ್ಯ ತೋರೀದ ಸಮಯದಿ ಆ ರಾಣಿ ವರ್ಗವ ಥರ ಥರ ನಡುಗಿಸುವಿ 4 ಅಕ್ಕರದಲಿ ಎರಡೆಕ್ಕದೊಳು ಬಂದು ಪಕ್ಕನೆ ನೀ ಎನ್ನ ಕೈಯೊಳು ಬಾರೆ ಮುಕ್ಕಣ ಸಖ ತನ್ನ ಬೊಕ್ಕಸದೊಳಗಿನ ರೊಕ್ಕ ಹಾಕಲು ಅವನ ಲೆಕ್ಕಸೆ ನಮ್ಮ 5 ಕಾಮಿತ ದಾಯಿನಿ ಕಾಮಿನಿ ಶಿರೋಮಣಿ ಶಾಮಸುಂದರ ಸಾರ್ವಭೌಮನ ರಾಣಿ ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ ನಾ ಮೊರೆ ಹೊಕ್ಕೆನು ನೀ ದಯಮಾಡು ತಾಯೆ 6
--------------
ಶಾಮಸುಂದರ ವಿಠಲ
ಜೋ ಜೋ ಜೋ ಜೋ ಸಹ್ಲಾದರಾಜ ಜೋ ಜೋ ಜೋ ಜೋ ಪ್ರಹ್ಲಾದನನುಜ ಜೋ ಜೋ ಜೋ ಜೋ ಜಾತರೂಪ ಶಯ್ಯಜ ಜೋ ಜೋ ಜೋ ಜೋ ಭಕ್ತಸುರ ಕಲ್ಪಭೂಜ ಪ ಮನುಜ ಮೃಗಾರ್ಯರ ಸುತನೆನಿಸಿಸುತ ಅಣುಗ್ರಾಮ ಬ್ಯಾಗವಾಟದಿ ಜನಿಸುತ ಮುನಿ ವರದೇಂದ್ರತೀರ್ಥರ ಸೇವಿಸುತ ಅನಿಲ ಸುಶಾಸ್ತ್ರವನರಿತ ಸುದಾತ 1 ಗುರುಧೇನುಪಾಲ ದಾಸಾರ್ಯರ ಮಮತ ಪರಿಪೂರ್ಣದಿಂದ ನೀ ಪರಮ ಪುನೀತ ಸಿರಿಜಗನ್ನಾಥವಿಠಲಾಂಕಿತ ಶರಧಿಜ ಭಾಗದಿ ಪಡೆದ ಪ್ರಖ್ಯಾತ 2 ಸರಸಿಜ ತುಲಸಿ ಸುಮಾಲೆ ಶೋಭಿತ ವರದಿ ಸ್ವಾದಿ ರಾಜೇಂದ್ರಾರ್ಯರ ಪ್ರೀತ ಹರಿಕಥಾಮೃತ ಗ್ರಂಥ ವಿರಚಿತ ಪುರುಹೂತರಾರ್ಯರ ಪ್ರೇಮದ ಪೋತ 3 ಗುಣನಿಧಿ ದ್ವಾಪರದಲ್ಲಿ ಪುಟ್ಟುತ ಫಣಿವರ ಕೇತನ ಮೊರೆ ಲಾಲಿಸುತ ದಿನಮಣಿ ಜಾತನ ದಿವ್ಯ ವರೂಥ ಮಾನಿತ ಮಾನವಿ ಕ್ಷೇತ್ರ ನಿವಾಸ4 ಶ್ರೀ ನಿಧಿ ಶಾಮಸುಂದರ ದಾಸ ದುರಿತ ವಿನಾಶ ಹೀನ ಮತಾಖ್ಯ ಪನ್ನಗಕುಲವೀಶ 5
--------------
ಶಾಮಸುಂದರ ವಿಠಲ
ತಂದೆ ವಿಜಯರಾಯ ವ್ಯಾಳಿಗೆಬಂದ್ಯೊ ವಿಜಯರಾಯ ||ಹಿಂದೇಸು ಜನ್ಮವು ಮುಂದೇಸು ಜನ್ಮವುಒಂದು ತಿಳಿಯದೆಂದಿಗು ಯೆನ್ನಯ ಪ ಸೂರ್ಯನ ಸುತನಂತೆ ಅಲ್ಲಿ ಮಹಶೌರ್ಯ ದೂತನಂತೆ ||ಕಾರ್ಯಾಕಾರ್ಯವು ತಿಳಿಯದೆ ನಿನ ಪರಿಚಾರ್ಯನ ಯೆಳೆತಿರೆ ಭಾರ್ಯಳು ಮೊರೆಯಿಡೆ 1 ಮೋದ ತೀರ್ಥರೆಂ-ದೊದರಿದಳೊದರಿದಳ್ ವಿಜಯರಾಯರೆಂದು 2 ಕರಗಳನೇ ಕಟ್ಟಿ ಯೆಳೆಯುತಿರೆದೊರೆಗಳನೇ ಮುಟ್ಟಿ ||ಸಿರಿ ಮೋಹನ ವಿಠಲನ ಪದವ ತೋರಿಧರಿಗೆ ತಂದುಬಿಟ್ಟೆ ಕರುಣಾಳುವೆ ಯೆನ್ನ 3
--------------
ಮೋಹನದಾಸರು
ತಂದೇ ಕಮಲಾಪತಿಯೇ ಕಂದನ ಬಂಧನವಳಿದ ಹರಿಯೇ ಪ ನಂದನ ಕಂದ ಗೋವಿಂದ ಮುರಾರೇ ಅ.ಪ ಜವನ ಬಾಧೆಗೆ ಪಕ್ಕಾದೆ ನಿನ್ನ ಚರಣವೆ ಗತಿಯೆಂದು ಬಂದೆ 1 ಶರಣರು ಕರೆಯಲು ಬರುವೆ ರಂಗ ತ್ವರಿತದಿ ಪಾಪವ ಕಳೆವೆ ಪರಮದಯಾಕರ ಮಣಿವೆ ಎನ್ನ ಮೊರೆಯ ಲಾಲಿಸದಿರೆ ತರವೆ 2 ಮಂಗಳದಾಯಕ ನೀನೆ | ತ್ರಿಲೋಕಂಗಳ ಸಲಹುವ ನೀನೇ ಮಾಂಗಿರಿರಂಗನು ನೀನೇ | ನಿನ್ನ ದಾಸರ ದಾಸನು ನಾನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು |ಸರ್ಪಶಯನನ ದೂತಾ ||ಇಪ್ಪತು ಒಂದು ಕುಭಾಷ್ಯ ಮುರಿದ | ರಾ ಮ |ತ ಪ್ರವರ್ತಕ ರಾಘವೇಂದ್ರ ಮುನಿಪ ಮಹಾ ಪ ಪ್ರತಿ ವರುಷಕೆ ಬಂದು ಸನುತಿಸಿ ಪೋಗು ಎಂದು |ನತ ಸ್ವಪ್ನದಲಿ ನೀ ಬಂದೂ ||ಹಿತದಿಂದ ಪೇಳಲು ರತನಾಗಿ ಧನದಿ ಮ |ರತು ಬಿಟ್ಟೆ ನಿಮ್ಮನು ಯತಿಕುಲೋತ್ತಮ ಇಂಥಾ 1 ಸ್ನಾನ ಸಂಧ್ಯಾನ ಸುಜಪತಪ ವ್ರತಹೋಮ |ಮೌನ ಮಾರ್ಗಗಳರಿಯೆ ||ಜ್ಞಾನಿಗಳಾನು ಸಂಧಾನ ಪೂರ್ವಕ ಪೂಜೆ |ಯಾನು ಮಾಡದೆ ದುಷ್ಟ ಮಾನವರೊಳಗಿದ್ದೆ 2 ಏಸು ಜನ್ಮದಿ ಬಂದಾ ದೋಷವ ಕಳದು ವಿ |ಶೇಷ ಸುಖವ ಕೊಡುವಾ ||ಈ ಸುವಾರ್ತಿಯ ಕೇಳಿ ಮೊರೆಹೊಕ್ಕೆ ಗುರು ಪ್ರಾ ||ಣೇಶ ವಿಠಲನ ದೂತಾ ಮತಪ್ರೀತಾ 3
--------------
ಗುರುಪ್ರಾಣೇಶವಿಠಲರು
ತಾಮರಸ ಇನ್ನು ಕಾಂಬುವದೆಂದುಪನ್ನಗಾತನ ವಾಹನಾ ಪ ಕಣ್ಣು ಕಾಣದ ಹೀನ ಮಾನವನು ನಾನಾದೆಉನ್ನಂತ ಗುಣ ಪೂರ್ಣ ಕಾಯೋ ಯೆನ್ನ ಅ.ಪ. ಕರಿ ಮಕರಿ ಸೆಣಸ್ಯಾಡಿಹರುಷ ಕುಗ್ಗುತ ಮರುಕದೀ |ಹರಿ ಹರಿ ಹರಿ ಎಂದು | ಕರಿರಾಜ ಮೊರೆಯಿಡಲುತ್ವರದಿಂದ ನೀಯವನ | ಎಡರ ಹರಿಸಿದೆ ದೇವ 1 ಕುರುರಾಜ ಸಭೆಯಲಿ | ತರುಳೆ ದ್ರೌಪದಿ ಸೀರೆಕೌರವಾನುಜ ಸೆಳೆಯಲೂ |ನಾರಿಮಣಿ ನಿಜಪತಿಗಳೈ | ವರಲಿ ಮನ ತಿಳಿದುಹಿರಿಯ ಸಭಿಕರಿಗರುಹಲೂ | ವರ ವೃದ್ಧ ಭೀಷ್ಮಾದಿ |ಬಹುಮಂದಿ ಇರುತ ಕಾಲವ ಕಳೆಯಲು |ಆರಾದರೂ ಬಂದು ಪಾರು ಮಾಡಿದರೇನೊಶೌರಿ ನಿನ್ನನು ಕರೆಯೆ | ಪಾರು ಮಾಡಿದ ದೇವ 2 ಪಾರುಗಾಣಿಸೊ ಎನ್ನ | ಮೂರು ವಿಧ ತಾಪಗಳಮಾರ ಜನಕನೆ ಪ್ರಾರ್ಥಿಪೇ ದೂರ ಮಾಡಿಸೊ ಹರಿಯೆ | ಮೂರು ಗುಣದಿಂದೆನ್ನಬಾರಿ ಬಾರಿಗು ಬೇಡುವೆ |ದುರುಳ ತತ್ವರ ಕಾರ್ಯ | ಕಡೆಗೈಸಿ ಶ್ರೀ ಹರಿಯೆಸುರರ ಸಹಕಾರ ನೀಡೊ |ಗುರುಗಳಂತರ್ಯಾಮಿ | ಗುರು ಗೋವಿಂದ ವಿಠಲನೆಕರುಣದಲಿ ತವ ಚರಣ | ಸರಸಿಜವ ತೋರೋ 3
--------------
ಗುರುಗೋವಿಂದವಿಠಲರು
ತಾರಸೋ ಎನ್ನನು ನೀನು | ಮೊರೆಯ ಹೊಕ್ಕೆನು ಪ ಸುರಭಿ ಚೋರ ವಿದಾರಾ | ಸುರಭಿ ಸಂಸಾರ ಧೀರಾ | ಸುರಭಿ ಭಾಗವತರಾ | ಗುರುತನವರತದಲರಿತವರೋಳಗಿಹೆ 1 ನಗಜಾಮಾತಾಸನ್ನುತಾ | ನಗದಾ ವೈರಿಯಾ ಭ್ರಾತಾ| ನಗದಭಿಮಾನ ಸೂತಾ| ನಗಧರ ದುಗವಾಬ್ಧವಾಸ ನೆ 2 ಗುರು ಘಾತಕಾನುಜೆಯಾ | ಗುರುತಭಿಮಾನ ದೊಡೆಯಾ | ಸುಕರುಣಾಲು ಮೂರುತಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಿಳಿಸು ದಾಸನ ನಿರುತ ನಿಲಯ ಕರುಣಾರ್ಣವ ತಿಳಿಯದಾಡಿದ ವಚನ ಹೊಲೆಗಲಿಸದಿಳೆಯೊಳು ಪ ಗುಪಿತದಿಂ ತವಪಾದ ಜಪಿಸಿ ಆನಂದಿಸದೆ ಅಪರಾಧಿಯಾಗಿರುವೆ ಕೃಪೆಯಿಂದ ಕ್ಷಮಾಮಾಡಿ 1 ಬಿನುಗುಮತಿಗೈದಂಥ ಘನತಪ್ಪುಗಣಿಸದೆ ಚಿನುವiಯಾತ್ಮನೆ ಬೇಗ ಕನಿಕರದಿ ಮೊರೆ ಕೇಳಿ 2 ಸುಲಭಭಜಕರಿಗತಿ ಚೆಲುವ ಶ್ರೀರಾಮಯ್ಯ 3
--------------
ರಾಮದಾಸರು
ತುಂಗಭದ್ರೆ ಸುತರಂಗಿಣಿ ತೀರಗನ್ಯಾರೇ ಪೇಳಮ್ಮಯ್ಯ ಪ ಮಂಗಳ ಮಹಿಮ ಶುಭಾಂಗ ಮೂರುತಿ | ಶ್ರೀ ಹರಿಹರ ಇವ ಕಾಣಮ್ಮ ಅ.ಪ. ಬಹು ಕಂಟಕಿ ಆ ಗುಹನ ತಪಸಿಗೆ | ಮೆಚ್ಚಿದ ಹರ ನೋಡಮ್ಮಮ್ಮ |ಅಹಿ ಭೂಷಣ ತಾ ವರವನು ಕೊಟ್ಟನು | ಬಹು ಬೇಗನೆ ನೋಡಮ್ಮಮ್ಮ|ವಿಹಗವಾಹ ಹರಿ ಮತ್ತೆ ರುದ್ರನಿಂ | ಇವನ ಜೇಯ ನೋಡಮ್ಮಮ್ಮ |ಮಹಿಯೊಳು ಸುರರಾಹವ ಕೆಡಸುತ | ಬಹು ಹಿಂಸಕ ನೋಡಮ್ಮಮ್ಮ 1 ಸುರಲೋಕಕು ಈ ಅಸುರನ ಬಾಧೆಯು | ತಟ್ಟಿತು ನೋಡಮ್ಮಮ್ಮ |ಸುರ ಭೂಸುರರೆಲ್ಲರು ಮೊರೆಯಿಟ್ಟರು | ಹರಿಯಲಿ ನೋಡಮ್ಮಮ್ಮ |ಸಿರಿಯರಸನು ತಾನಭಯವನಿತ್ತವರನು | ಕಳುಹಿದ ನೋಡಮ್ಮಮ್ಮ | ಕರುಣಾಕರ ತಾ ಹರಿಹರ ರೂಪದಿ | ದುರುಳನ ತರೆದ ನೋಡಮ್ಮಮ್ಮ 2 ಕೃತ್ತಿವಾಸ ತಾ ನಿತ್ತ ವರವ ಹರಿ | ಪಾಲಿಸಿದನು ನೋಡಮ್ಮಮ್ಮ | ದಿತಿಸುತನಾಯುವು ದಶಶತಕಳೆಯಲು | ವತ್ತಿದ ಕೆಳಗವನಮ್ಮಮ್ಮ |ಹಿತದಿಂದಲಿ ತಾ ಭಕುತರ ಪೊರೆಯುವ | ಹರಿಹರನ ನೋಡಮ್ಮಮ್ಮ | ದೈತ್ಯನ ಪೆಸರಿಲಿ ಪಾವನವಾಯಿತು | ಈ ಕ್ಷೇತ್ರವು ಕಾಣಮ್ಮಮ್ಮ 3 ದಕ್ಷಿಣ ಪಾಶ್ರ್ವದಿ ಅಭಯ ಹಸ್ತ | ತ್ರಿಶೂಲ ಧರನ ನೋಡಮ್ಮಮ್ಮ | ಅಕ್ಷಿಯ ಮಾನಿಯು ದಕ್ಷಿಣ ಶಿರದಲಿ | ಮೆರೆಯುವನು ನೋಡಮ್ಮಮ್ಮ | ದಕ್ಷಸುತೆಯು ತಾ ವಿರೂಪಾಕ್ಷನ | ಸೇವಿಪಳೂ ನೋಡಮ್ಮಮ್ಮ |ಪಕ್ಷಿವಾಹಗೆ ತಾನರ ಮೈಯ್ಯಾದನು | ತ್ರ್ಯಕ್ಷನು ಕಾಣಮ್ಮಮ್ಮ 4 ಕಂಬು | ಧರನಾ ನೋಡಮ್ಮಮ್ಮ ಲಕ್ಷ್ಮೀವನಿತೆಯು ಕಾಮನ ಜನಕನ | ಸೇವಿಪಳೂ ನೋಡಮ್ಮಮ್ಮ ಶುಮಲಾಂಗ ವನಮಾಲೆಗಳನು | ಧರಿಸಿಹ ನೋಡಮ್ಮಮ್ಮ |ಸಾಮಸನ್ಮುತ ಗುಣಧಾಮನ ಲೀಲೆ | ಇದೆಲ್ಲವು ಕಾಣಮ್ಮಮ್ಮ 5 ಕ್ರೋಶ ಪಂಚ ನಾಲ್ಕಾರದಿ ಮೀಸಲು | ಸುಕ್ಷೇತ್ರವ ನೋಡಮ್ಮಮ್ಮ | ಭಾಸಿಸುವವು ಇಲ್ಲೆಕಾದಶ ವರ | ತೀರ್ಥಂಗಳು ನೋಡಮ್ಮಮ್ಮ | ಈ ಸುಕ್ಷೇತ್ರವು ಆ ಮಹಕಾಶಿಗೆ | ಸಮವೆನಿಸಿದೆ ನೋಡಮ್ಮಮ್ಮ |ಅಸಮ ಮಹಿಮ ಹರಿ ಅಸುರಗೆ ಕೊಟ್ಟನು | ಈ ಪರಿವರ ಕಾಣಮ್ಮಮ |6| ಕೃತಿ ವಿಧಿ ಜನಕನಿಗೂ | ಭೇದವೆ ಸರಿ ಕೇಳಮ್ಮಮ್ಮ ಮೋದಮಯ ಗುರು ಗೋವಿಂದ ವಿಠಲನ | ಲೀಲೆಗಳಿವು ಕಾಣಮ್ಮಮ್ಮ 7
--------------
ಗುರುಗೋವಿಂದವಿಠಲರು
ತುತಿಸಲೆನ್ನೊಶವೆ ನಿನ್ನ ಶ್ರೀ ಗುರುರನ್ನ ಪ ತುತಿಸಲೆನ್ನೊಶವೆ ನಿ -ನ್ನತುಳ ಮಹಿಮ ಮಹಾ ಮತಿವಂತ ಜನರು ಸು - ಮತಿಗೆ ಸಿಲ್ಕದ ನಿನ್ನ ಅ.ಪ ಸ್ಮರಿಪ ಜನರ ಸುರ ತರು ಪಾಪಕಾಂತಾರ ನರ ಸಮ ಸಜ್ಜನ | ಶರಜನಿಚಯ ದಿನ ಪಾದ | ಸರಸಿಜ ಭಜಿಸುವ ಪರಮ ಭಕ್ತರ ಕುಮುದ | ವರ ನಿಚಯಕೆ ಸುಧಾ - ಪರಮ ಕರುಣಿಯು ಎಂದು ನಿನ್ನಯ ಪಾದ ಮೊರೆಯ ಪೊಕ್ಕೇನೊ ನಾನಿಂದು ನೀನೆ ಎನ್ನ ಮೊರೆಯ ಲಾಲಿಸು ಎಂದು ಬಿನ್ನೈಸಿದೆ ಪರಮಕೃಪಾಕರ ಪೊರೆಯೊ ಅನಾಥ ಬಂಧೂ 1 ದಯಕರ ನಿಜ - ಭಕ್ತಾ | ಮಯ ಹರ ಸುಖಸಾರಾ ಶ್ರಯವಾಗಿ ಸಂತತ | ನಯದಿಂದ ನಿಜಜನ ಭಯಕರ ಭವಹರ | ಜಯ ಜಯ ಜಯದಾತ ಜಯ ವಿಜಯಾತ್ಮಜ | ಜಯಕುಲ ದಿಗ್ವಿಜಯ ಜಯ ಕಾಲದಲಿ ನಿಜ | ಹಯಗ್ರೀವಮೂರ್ತಿಯ ದಯದಿಳೆಯೊಳು ಜನಿಸೀ | ಜನ್ಮದಿ ಮೂರ್ತಿ ತ್ರಯ ಪಾದವನೆ ಭಜಿಸಿ - ಧರಿಯೊಳು ಕ್ಷ - ತ್ರಿಯ ಕುಲದೊಳು ಜನಿಸಿ ಯುಧಿ ಭೀಮ - ಶಯನನಿಂದ ಹತನಾಗ್ಯಭüಯ ಸ್ಥಾನವನೆ ಬಯಸಿ 2 ಭೂಸುರ ವರನಾಗಿ | ಕಾಶ್ಯಪಿ ಸ್ಥಳದಲ್ಲಿ ವಾಸಮಾಡಿ ಶಿರಿ ವ್ಯಾಸ ಕೃಷ್ಣ ಪಾದೋ - ಪಾಸನ ಮಾಡುತ | ವ್ಯಾಸಮುನಿ ಆಗಿ ಭಾರ | ತೀಶ ಪ್ರತೀಕವ ವಾಸವಾಸರ ಸ್ಥಾ - ಪಿಸಿ ಯಂತ್ರೋದ್ಧಾರಾ ಶ್ರೀಶ ಮಧ್ವಮುನಿಯಾ - ಸ್ಥಾಪಿಸಿ ಅಲ್ಲಿ ವಾಸವ ಮಾಡಿ ತಾನೂ - ಪುರಂದರ ದಾಸರಾಯರಿಗೆ ಇನ್ನು - ಸುಮಂತ್ರೋಪ - ಅನುದಿನ ವಾಸಮಾಡಿದಿ ನೀನು 3 ಕ್ಷೋಣಿತಳದಿ ಕುಂಭ | ಕೋಣನಗರದಲ್ಲಿ ಕ್ಷೋಣಿದೆವೋತ್ತುಮ | ವೀಣವೆಂಕಟನಾಮಾ - ಕ್ಷೀಣಬಲ ಙÁ್ಞನ ತಾಣ | ಗೊಡದೆ ನಿನ್ನ ಜಾಣತನದಿ ನರ | ಮಾಣವಕನಂತೆ ಪಾಣಿ ಭಿಕ್ಷಾನ್ನವಾ | ಟಾಣಿ ಮಾಡುತ ನೀನು ಕ್ಷೋಣಿಪ ಮನಿಗೆ ಬಾರೇ - ನಿನ್ನ ವೀ - ಶುಭ ಲ - ಕ್ಷಣ ಬ್ಯಾರೆ ಬ್ಯಾರೇ ಇರಲು ನಿನ್ನ ಕ್ಷಣ ಬಿಡದಲೆ ಜನ ಮಣಿದು ನಮಿಸುತಿರೆ 4 ಜನಪ ನಿನ್ನಯ ಮಹ | ಘನ ಚರ್ಯವನೆ ನೋಡಿ ದಿನದಿನದಲಿ ಬಹು | ವಿನಯಪೂರ್ವಕ ಪಾದ ವನಜ ಸೇವಕÀನಾಗಿ |ತನು ಮನ ಧನ ಧಾನ್ಯ ಘನ ನಿನಗರ್ಪಿಸಿ | ನಿನ ಸಂಗವಾಗಲೂ ಜನುಮ ಇಲ್ಲೆಂಬುವ | ಘನ ಙÁ್ಞನ ಭಕುತಿಯ ಮನದಲ್ಲಿ ಯೈದುತಲೆ - ತಾನು ನಿತ್ಯ ಅನುಮಾನ ಮಾಡದಲೆ - ಇರಲು ಅವನ ಘನಸುಖ ರೂಪದಲ್ಲೆ - ಇರುವಂತೆ ಮನಪೂರ್ತಿ ಕರುಣಸಿದ್ಯನುಪಮ ಚರಿತಲ್ಲೆ 5 ಸತ್ಯನಾಮಕ ಸುತ | ಮೃತ್ಯುನಿಂದಲಿ ತಾನು ಸತ್ತುಪೋದ ವಾರ್ತೆ | ಬಿತ್ತರಿಸೆ ಲೋಕದಿ ಉತ್ತುಮ ನೀನಾಗ | ಸತ್ಯ ಸಂಕಲ್ಪವ ಗೊತ್ತು ತಿಳಿದು ಅವನ | ಮತ್ತೆ ಈ ಲೋಕಕ್ಕೆ ತತ್ಕಾಲದಲಿ ತಂದು | ಉತ್ತುಮ ಭಾರ್ಯಳ ಜತ್ತು ಮಾಡಿದ ವಾರ್ತೆಯಾ - ಕೇಳೀ ಶೈವ - ರುತ್ತುಮನಾತ್ಮಜನಾ - ಇವಾನಂತೆ ಸತ್ಯವೆಂದು ಪೇಳಿ ಮತ್ತೆ ಪೊರೆದ್ಯೊ ಜೀಯಾ 6 ಇನತೆ ಮೊದಲಾದ | ಫನತರ ನಿನ ಮಹಿಮೆ ನಿತ್ಯ | ಅನಿಮಿಷ ಮುನಿಜನ ಮನಕೆ ಸಿಲ್ಕದೆ ವೃಂದಾ - |ವನದಲಿ ನೀ ನಿಂತು ವನುತೆ ಸುತ ಧನ | ಧಾನ್ಯ ಮೊದಲಾದ ಅನುದಿನ ಸಲಿಸುತ್ತ ಜನರ ಪಾಲಿಸೊಗೋಸುಗಾ - ಹರಿಯು ನಿನಗೆ ಜನುಮಾವನಿತ್ತನೀಗ - ಅದಕೆ ನಿನ್ನ ಅನುದಿನ ತವಪಾದ ವನಜ ನಂಬಿದೆ ವೇಗ 7 ರಕ್ಷಿಸೋ ನೀ ಎನ್ನ | ಲಕ್ಷ್ಮೀರಮಣ ದೂತ ಮೋಕ್ಷಾದಿ ಪುರುಷಾರ್ಥ - | ಪೇಕ್ಷ ಪ್ರದಾಯಕ ಲಕ್ಷ ಜನರೊಳೆನ್ನ | ವೀಕ್ಷಿಸಿ ಪರಜನಾ - ಪೇಕ್ಷಾ ಮಾಡದಂತೆ | ಲಕ್ಷ್ಮೀಶ ನಾತ್ಮಜ ಭಿಕ್ಷಾನ್ನ ಬೇಡೋದು | ಲಕ್ಷಣವೇನಿದು - ಪೇಕ್ಷಾ ಮಾಡದೆ ನೀ ಎನ್ನಾ - ಕಾಯಲಿಬೇಕು ವಿಕ್ಷೀಸಿ ಙÁ್ಞನವನ್ನಾ - ಭಕುತಿ ಇತ್ತು - ರಕ್ಷಿಸು ಎಂದೆ ನಿನ್ನಾ ಇದೆ ಒಂದಾ ಪÉೀಕ್ಷೆ ಪೂರ್ತಿಸೊ ಕಲ್ಪವೃಕ್ಷ ನೀ ಎನಗೆ ಇನ್ನ 8 ಕಿಟಿಜ ಸರಿದ್ವರ | ತಟ ಕೃತ ಮಂದಿರ ಚಟುಲ ಮಧ್ವಮುನಿ | ಪಟು ಶಾಸ್ತ್ರದಿಂದಲಿ ಕುಟಿಲ ದುರ್ವಾದಿಗ | ಳ್ಥಟನೆ ಮುರಿದು ನಿಜ ಘಟನೆ ಮಾಡಿ ಪ್ರತಿ | ಭಟರಿಲ್ಲದಲೆ ನೀನು ಧಿಟನಾಗಿ ತ್ರಿಜಗದಿ - ಮೆರೆಯುತ ಶಠÀಜನರನು ತ್ವರದಿ - ಮರಿದು ಙÁ್ಞನಿ ಕಟಕ ಸುಪಾಲನದಿ ಪಟೋ ಎನಿಸಿ ಧಿಟಗುರು ಜಗನ್ನಾಥ ವಿಠಲನ್ನ ಭಜಿಸಿದೆ 9
--------------
ಗುರುಜಗನ್ನಾಥದಾಸರು