ಒಟ್ಟು 601 ಕಡೆಗಳಲ್ಲಿ , 49 ದಾಸರು , 546 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿಯಲೋ ರನ್ನಾ ನಿನ್ನೊಳು ನಿನ್ನ ಪ ಅನ್ನವ ನೀಡು ತುಪ್ಪವ ಕೊಡುಚೆನ್ನಾಗಿ ಉಣ್ಣುವವನಾರೋ ಅವನಾರೋ 1 ಹೋಳಿಗೆ ಹಿಸುಕಿ ಹಾಲೊಳು ಕುಸುಕಿಹೋಳಿಗೆ ಉಂಬವನ್ಹೆಸರೇನೋ ಹೆಸರೇನೋ2 ಜಡಕೆಯು ಇಲ್ಲಾ ಇದೆಲ್ಲಾಮೃಢ ಚಿದಾನಂದ ನೀನೆನ್ನು ನೀನೆನ್ನು 3
--------------
ಚಿದಾನಂದ ಅವಧೂತರು
ತಿಳಿಯಿರೋ ಸಮ್ಮಿಂದ ಹೇಳುವೆ ಸುಧಾನಂದ ಪ ಉಂಬವ ತಾನಾರು ಉಣಬಲ್ಲವನಾರುಸಂಭವಿಸುವನಾರು ಸಮನಿಸಿ ಇಂಬಾಗಿಹನಾರು 1 ಕಣ್ಣಿಂದಲೆ ನೋಡಿ ನೋಡುವ ಕಣ್ಣು ಕಾಂಬುದೆ ಖೋಡಿಕಣ್ಣೊಳಗದೆ ನೋಡಿ ಕಂಡಾ ಕಣ್ಣಹುದೆಂದಾಡಿ 2 ಕಿವಿಯಿಂದಲೆ ಕೇಳಿ ಕಿವಿಯನು ಕಿವಿಯೆ ಗಯ್ಯಾಳಿಕಿವಿಯೆ ದಿವಾಳಿ ಕಿವಿಗಾ ಕಿವಿಗರಿವಹುದ್ದೇಳಿ 3 ನಾಲಗೆ ನುಡಿಯಿರಲಿ ನುಡಿವುದೆ ನಾಲಗೆ ಬರಿ ತೊಗಲುನಾಲಗೆಯೊಳಗಿರಲು ಮೂಲದ ನಾಲಗೆಯಲಿ ಬರಲು 4 ಮೂಗಿನ ಮೂಲಕ ಪ್ರಾಣ ಅರಿವಡೆ ಮೂಗು ಬಲ್ಲುದೆ ಕೋಣಮೂಗರಿದವ ಜಾಣ ಮೂಗದು ನಿರ್ವಾಣ5 ತನುವಿನ ಒಳಗಿರ್ದು ಚೇತನ ಜನಿಸುತಲಿರುತಿರ್ದುಇನಿತಾದಲಿರ್ದು ಬೆಳಗುವ ತಾನೆ ತಾನಿರ್ದು 6 ರೂಪಕೆ ವಿರಹಿತನೆ ತೋರ್ಪಾ ರೂಪವೇ ತಾನಿಹನಾಲೇಪಕೆ ದೂರಿಹನಾ ಚಿದಾನಂದಪತಿ ಗುರುವವನಾ7
--------------
ಚಿದಾನಂದ ಅವಧೂತರು
ತುಪಾಕಿ ಸಾಧನವನು ತ್ವರಿಯ ಬಿದ್ದು ಮಾಡುತಿರುವೆಶಾಬಾಸು ಶಿವನೇ ನೀನಣ್ಣ ಪೇಳುವೆನಣ್ಣ ಪ ಮೌನವೆಂದೆನಿಪ ಮುಸೈದೆ ಸಹಿತಾಗಿಜ್ಞಾನ ಪಡೆದಳವ ಬಗಿಯಣ್ಣಾ ಸಾಧಿಸು ಅಣ್ಣಧ್ಯಾನವೆಂದೆನಿಪ ತಲೆಕಟ್ಟನೆ ಕಟ್ಟಿಆನಂದವನೆ ಆಡಣ್ಣ ಸಾಧಿಸು ಅಣ್ಣ 1 ಆರು ಚಕ್ರವೆಂಬ ಆರು ಕಟ್ಟಿನ ತುಪಾಕಿಧೀರತನದಿಂದ ಪಿಡಿಯಣ್ಣಾ ಸಾಧಿಸು ಅಣ್ಣಮೂರಾವಸ್ಥೆಯೆಂಬ ಮೂವೆರಳ ಮದ್ದ ಹೊಯ್ದಪೂರಾಯದವನ ಮಾಡಣ್ಣ ಸಾಧಿಸು ಅಣ್ಣ2 ಇಡಾಪಿಂಗಳವೆಂಬ ಎರಡು ಗುಂಡನೆ ಹಾಕಿರೂಢಿ ಎಂಬ ಗಜವ ಜಡಿಯಣ್ಣ ಸಾಧಿಸು ಅಣ್ಣಕೂಡಿಹ ಸತ್ವನೆಂಬ ಕೂರಿ ರಂಜಕವರೆದುಗೂಡು ಗುರು ಜಾವಿಗೆ ಒತ್ತಣ್ಣ ಸಾಧಿಸು ಅಣ್ಣ 3 ಆಸನ ನಳಿಕೆಯೆಂಬ ಆಧಾರವನೆ ಆಂತುವಾಸರ ಹೊಗ್ಗೊಡಬೇಡಣ್ಣ ಸಾಧಿಸು ಅಣ್ಣನಾಸಿಕಾಗ್ರವು ಎಂಬ ನೊಣನ ದಿಟ್ಟಿಸಿ ನೋಡಿಸೂಸದೆ ಏರಿಸಿ ನಿಲ್ಲಣ್ಣ ಸಾಧಿಸು ಅಣ್ಣ4 ಬರಿಯ ಪ್ರಣವವೆ ಎಂಬ ಬೆರಳ ಬೊಬ್ಬೆಯನಿಟ್ಟುಭರದಿ ಭೀತಿಯನಳಿಯಣ್ಣಾ ಸಾಧಿಸು ಅಣ್ಣಗುರು ಚಿದಾನಂದನು ಎಂಬ ಗುರಿ ಭ್ರೂಮಧ್ಯವೆ ಇರೆಗುರಿಯ ತಾಗುವಂತೆ ಇಡಣ್ಣ ಸಾಧಿಸು ಅಣ್ಣ5
--------------
ಚಿದಾನಂದ ಅವಧೂತರು
ತ್ಯಜಿಸಬಾರದೋ ನೀವು ಸಜ್ಜನರ ಸಂಗತ್ಯಜಿಸಬಾರದೋ ನೀವು ಪ ದರುಶನ ಮಾಡೆ ದುರ್ದೋಷವು ಹರಿವುದುಸ್ಪರ್ಶವ ಮಾಡೆ ಪ್ರಪಂಚವು ಹರಿವುದು 1 ಮಾತು ಆಡುತಲಿರೆ ಮೈಯದು ಮರೆವುದುಪ್ರೀತಿಯಿಂ ಶರಣೆನೆ ಪರಿಣಾಮ ತೋರ್ಪುದು 2 ವಾಸನೆ ಇರೆ ನಿರ್ವಾಸನೆಯಹುದುಸೂಸುತಲಿಹ ಮನ ನಿಶ್ಚಿತವಹುದು 3 ಸಂಶಯವಿರೆ ನಿಃಸಂಶಯವಹುದುಹಂಸೋಹಂ ಭಾವ ಸಹಜಾವಾಗಿ ನಿಲ್ಲುವುದು 4 ಸುದತಿ ಇಹಪರ ತಾ ಬಿಡಲು ಬಹುದುಸುಧಾ ಚಿದಾನಂದನ ಬೆರೆತರೆ ತ್ಯಾಗ ಮಾಡಲು ಬಾರದು 5
--------------
ಚಿದಾನಂದ ಅವಧೂತರು
ದಣಿದು ಮಲಗಿದೆನು ನಾನು-ದಣಿದು ಮಲಗಿದೆನುಮಣಿದೆ ಗುರುವಿಗೆ ಹಣಿದೆ ಶತ್ರುಗಳತಣಿದೆ ರಕ್ತವ ಕುಣಿದೆ ತಲೆಗಳಘಣ ಘಣ ಘಣ ಘಣ ನಾದವ ಕೇಳುತಮಣಿಮಯ ಮಂಟಪ ಉನ್ಮನಿ ಬಯಲಲಿ ಪ ತರಿಸಿ ತಾಪವನು ಕಾಲಲಿ ಒರೆಸಿ ಮಮತೆಯನುಹರಿಸಿ ಸಂಶಯ ಹುರಿಸಿ ದುರ್ಗುಣಕೊರೆಸಿ ವ್ಯಸನವ ಜರಿಸಿ ಮದಗಳಸುರಿ ಸುರಿ ಸುರಿವ ಸುಧಾ ಕಾರಂಜಿಯಮೆರೆವ ಸಹಸ್ರಾರ ಚಪ್ಪರ ಮಂಚದಿ 1 ಹೊಡೆದು ವಾಯುಗಳ ತುಂಡರಿಸಿ ಕ್ಲೇಶಗಳಮಡಿಯೆ ಈಷಣವು ಕಡಿಯೆ ಕಲ್ಪನೆಕೆಡೆಯೆ ಭ್ರಾಂತಿಯು ಒಡೆಯೆ ಶತ್ರುಗಳುಕಿಡಿ ಕಿಡಿಯುಗುಳುತ ವಿಷ ಮೂರ್ಧ್ನಿಯಬಿಡಿ ಮುತ್ತುದುರುವ ಹಂಸತೂಲದಿ2 ಬಳಿದು ವ್ರತಗಳನು ಎಳೆದು ಮತಗಳನುತುಳಿದು ಗರ್ವವ ತೊಳೆದು ಶೋಕವಮುರಿದು ರಾಗವ ಸೆಳೆದು ಮಾನವಥಳಥಳ ಬೆಳುದಿಂಗಳಿನೊಳುಬಲು ಚಿದಾನಂದ ಬ್ರಹ್ಮವೇ ಆಗಿಯೆ 3
--------------
ಚಿದಾನಂದ ಅವಧೂತರು
ದಶವಿಧ ನಾದವು ಭಕ್ತರಿಗೆ ಕೇಳುತಿದೆದಶವಿಧ ನಾದವು ಭಕ್ತರಿಗೆ ಕೇಳುತಿದೆದುಶ್ಮಾನರು ಇಬ್ಬಗೆಯಾಗಲು ದೆಸೆ ಬಿರಿಯಲುಯೋಗಿಯ ಕಿವಿ ಎರಡರಲಿ ಪ ಛಿಣಿ ಛಿಣಿ ಎಂಬ ಚಿನ್ನಿನ ನಾದವು ಚಿತ್ಕøತಿಯಾಗಿ ಚಿಮ್ಮತಿರೆಝಣಝಣವೆಂಬ ಝಿಲ್ಲಿಯ ನಾದವು ಝೇಂಕಾರದಿ ಝೇಂಕರಿಸುತಿದೆಎಣಿಕೆಯಿಲ್ಲದೆ ನಾಗಸ್ವರದ ಧ್ವನಿ ಎಡೆದೆರೆಪಿಲ್ಲದೆ ಕೂಗುತಿದೆಧಣಧಣ ಎನಿಪ ತಾಳನಾದವು ದಟ್ಟಣೆಯಾಗಿ ತುಂಬುತಿದೆ 1 ಮೃಣು ಮೃಣು ಎನಿಪ ಮೃದಂಗ ನಾದವುಮುಂಕಾಟ್ಟಾಗಿಯೆ ನುಡಿಯುತಿದೆತನನಾ ಎಂಬ ವೀಣಾಸ್ವರವು ತಂಪಾಗೆಲ್ಲವ ಮುಚ್ಚುತಿದೆಘನಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ2 ಭೇರಿಯ ನಾದವು ಧಮಧಮ ಎನುತಲಿ ಬಹಳಾಗಿಯೆ ಭೋಂಕರಿಸುತಿದೆಘೋರದಿ ಮೇಘದ ನಾದವು ಘರ್ಜಿಸುತಿದೆ ಘುಡಿ ಘುಡಿಸುತಿದೆನೂರಾರು ಸಿಡಿಲಂತೆ ನೂಕು ನುಗ್ಗಡಿಸುತಿದೆವೀರ ಚಿದಾನಂದ ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ3
--------------
ಚಿದಾನಂದ ಅವಧೂತರು
ದಶವಿಧ ನೌಬತ್ತಾಗುತದಣ್ಣದಶವಿಧ ಸೌಬತ್ತಾಗುತದೆದುಸುಮಾನರ ಎದೆ ಇಬ್ಬಗೆಯಾಗಲುದೆಸೆ ಬಿರಿಯಲು ಯೋಗಿಯ ಕಿವಿಯೆರಡಲ್ಲಿ ಪ ಚಿಣಿ ಚಿಣಿ ಎಂಬ ಸಿಂಜಿಣಿನಾದವುಚಿತ್ಕøತಿಯಾಗಿ ಚಿಮ್ಮುತಿದೆಝಣಝಣಕೃತವೆಂಬ ಝಿಯಾನಾದವುಝೇಂಕಾರದಿ ಝೇಂಕರಿಸುತಿದೆಎಣಿಕೆಯು ಇಲ್ಲದೆ ನಾಗಸ್ವರ ಧ್ವನಿಎಡದೆರಪಿಲ್ಲದೆ ಕೂಗುತಿದೆಘಣಘಣ ಎನಿಪ ತಾಳದ ನಾದವುದಟ್ಟಣೆಯಲಿ ತಾ ತುಂಬುತಿದೆ 1 ಮೃಣು ಮೃಣು ಎನಿಪ ಮೃದಂಗ ನಾದವುಮುಂಕಟ್ಟಾಗಿಯೆ ನುಡಿಯುತಿದೆ ತನನಾ ಎಂಬವೀಣಾ ಸ್ವನವು ತಂಪಾಗೆಲ್ಲವ ಮುಚ್ಚುತಿದೆಘನ ಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ 2 ಭೇರಿಯ ನಾದವು ಧಮಧಮ ಎನುತಲಿಧಾಂಧಮ ಧಾಂಧಮ ನುಡಿಯುತಿದೆಘೋರದಿ ಮೇಘದ ನಾದವು ಗರ್ಜಿಸುತಿದೆಘುಡಿ ಘುಡಿಸುತಿದೆ ನೂರಾರು ಸಿಡಿಲಂತೆನೂಕು ನುಗ್ಗಡಿಸುತಿದೆ ವೀರ ಚಿದಾನಂದವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ 3
--------------
ಚಿದಾನಂದ ಅವಧೂತರು
ದಶವಿಧ ಬ್ರಹ್ಮರ ಮನೆಯಲಿ ಭಿಕ್ಷವ ಕೊಳುತಿಹ ಅವಧೂತದಶವಿಧ ಬ್ರಹ್ಮರ ವಿವರವನೀಗಲೆ ಪೇಳುವೆ ಪ್ರಖ್ಯಾತ ಪ ಸತ್ಯವು ಶೌಚವು ಸಮಸ್ತ ಬ್ರಹ್ಮವು ಸರ್ವದಿ ದಯವಿಟ್ಟಿಹನುನಿತ್ಯವು ತತ್ವವು ಈತನು ಬ್ರಾಹ್ಮಣರೊಳಗೆ ಬ್ರಾಹ್ಮಣನು 1 ಮಾಯೆಯು ಇಲ್ಲವು ಸ್ನಾನಕರ್ಮದಲಿ ದೇವಗೋವು ಪ್ರಿಯನುಆಯುಧದಿಂ ರಣ ಜಯಿಸುವನೀತನು ಬ್ರಾಹ್ಮಣ ಕ್ಷತ್ರಿಯನು2 ಸಿದ್ಧವು ಕರ್ಮದಿ ದೇವಗೋವುಗಳ ಪೂಜಿಸುತಿಹನೀತಉದ್ದಿಮೆ ಮಾಡುವ ನಾನಾ ಬ್ರಹ್ಮರೊಳು ವೈಶ್ಯನೆ ಇವನೀತ 3 ಚಲ್ಲಣ ಹಾಕಿಯೆ ಮಿಣಿನೊಗ ಹೊತ್ತಿಹನೀತಎಲ್ಲ ಕೃಷಿಯ ವ್ಯವಹಾರವನು ಮಾಡುವ ಬ್ರಾಹ್ಮಣರೊಳು ಇವ ಶೂದ್ರ 4 ಹಲಬರು ಇಹೆವೆಂದು ಸ್ವಯಂಪಾಕಕೆತ್ತುವ ಮಾಡುತ ಬಹುಜಾಲಆಚಾರದ ಸೋಗಿನಲಿ ಹೊರಗುಂಬುವರು ಬ್ರಾಹ್ಮಣಮಾರ್ಜಾಲ 5 ಎಡಗೈ ಅರಿಯನು ಬಲಗೈ ಅರಿಯನು ನುಡಿವನು ಬಿರುಮಾತಉಡುವನು ಹಬ್ಬಕೆ ಧೋತ್ರವ ಬ್ರಾಹ್ಮಣರೊಳಿವನೀಗ ಕುರುಬ 6 ಚೋರರ ಕೂಡಿಯೆ ಪಾಲನೆಕೊಂಬನು ಮಾಡುತ ಬಲು ಘಾತಆರಾದರನು ಅರಿಯನು ಬ್ರಾಹ್ಮಣರೊಳವ ಕಿರಾತ 7 ಕಾಣನು ಭೇದವ ತಂದೆ-ತಾಯಿಯಲಿ ಜೀವರುಗಳ ನೋಡಪ್ರಾಣವ ಕೊಂಬನು ಬ್ರಹ್ಮೆಂತೆನ್ನದೆ ಬ್ರಾಹ್ಮಣರೊಳಿವ ಕಟುಕಾ 8 ಬಗೆ ಬಗೆ ನಾಮವು ನಿರಿವುಡಿಧೋತ್ರವು ಸಂಧ್ಯಾಧಿಗಳವ ದೃಶ್ಯಸೊಗಸನೆ ಮಾಡಿಯೆ ಕಣ್ಣನೆ ಹಾರಿಪ ಬ್ರಾಹ್ಮಣರೊಳಿವ ವೇಶ್ಯಾ9 ಸಹೋದರಿ ರಜಕೀಪರಿಭಾಳಾಮಾಯಾದಿ ಸ್ವಪಚಳ ಹೋಗುವ ಬ್ರಾಹ್ಮಣರೊಳಿವ ಚಂಡಾಲ10 ಪರಿ ದಶವಿಧ ಬ್ರಹ್ಮರುಗಳಲಿ ಭಿಕ್ಷೆಯ ಬೇಡುತಭೂಪ ಚಿದಾನಂದ ಅವಧೂತ ಸದ್ಗುರು ಮನವೊಪ್ಪಿಯೆ ಉಂಬ 11
--------------
ಚಿದಾನಂದ ಅವಧೂತರು
ದೀಪ ಮುಟ್ಟಿಸಿ ಅಕ್ಕ ದೀಪ ಮುಟ್ಟಿಸಿ ಅಕ್ಕದೀಪ ಮುಟ್ಟಿಸೆ ಮನೆಗೆ ಈಗ ದೇವರು ನಿನಗೆ ಕಾಣಬಹುದು ಪ ದೇಶಿಕ ಕರುಣೆಂಬೆ ಅಕ್ಕ ದಿಟ್ಟದ ಬೆಂಕಿಯು ಅಕ್ಕನಾಸಿಕ ಕೊನೆ ಭ್ರೂಮಧ್ಯದ ಒಲೆಯುನಂದದ ತೆರದಲಿ ವೈನದಲಿಟ್ಟೆ 1 ಕಾಮ ಕ್ರೋಧವೆಂಬುವ ಅಕ್ಕ ಕರಡನೆ ಹಾಕಿ ಅಕ್ಕಸೋಮ ಸೂರ್ಯಸ್ವರ ಕೊಳವಿಯಲೂದಿಸೂರಿಯ ಕೋಟಿ ಎಂಬ ಉರಿಯನೆ ಮಾಡಿ 2 ಜ್ಞಾನ ಜ್ಯೋತಿಯು ಅಕ್ಕ ಘನವಾಗಿ ಮುಟ್ಟಿಸೆ ಅಕ್ಕತಾನು ತಾನಾದ ಮನೆಮನೆ ಹೊಕ್ಕುತಾನಾದ ಚಿದಾನಂದ ಬ್ರಹ್ಮವ ಕಾಣುವ 3
--------------
ಚಿದಾನಂದ ಅವಧೂತರು
ದೀಪವಿದ ಬೆಳಗುವೆನು ದೇವ ನೀ ನೋಡುವ್ಯಾಪಿಸಿದ ತಿಮಿರವನು ಪರಿಹರಿಸಿ ರಂಜಿಸುವ ಪಸಕಲ ದೇವಾತ್ಮಕದ ತಿಲ ತೈಲವಾಗಿರಲುಅಕಲುತ ವರ್ತಿುಂ ಮಿಳಿತವಾಗಿ ಪ್ರಕಟವಾಗಿರುವಗ್ನಿ ಪ್ರಭೆಯೊಡನೆ ಸ್ಫುಟವಾಗಿಮುಖ ಸಮೀಪದಿ ಮೂರು ಲೋಕಗಳ ಬೆಳಗುತಿಹ 1ಜ್ಞಾನವೇ ಗೋಘೃತವು ಮೂರ್ತಿಗಳೆ ವರ್ತಿಗಳುನೀನಿದಕೆ ಮೂಲ ಕಾರಣವಸ್ತುವೂಸಾನುಕೂಲದಿ ಗುಣಗಳೊಂದಾಗಿ ಚಿತ್ತಿನೊಳುಲೀನವಾಗಿರೆ ನಿರ್ಮಲಾಕೃತಿಯ ತಾಳಿರುವ 2ಎನ್ನ ಜೀವವೆ ದೀಪ ನಿನ್ನ ಪಾದವೆ ಬ್ರಹ್ಮಭಿನ್ನ ಭಾವವನುಳಿದು ಪೂರ್ಣರೂಪದಲಿನಿನ್ನೊಳಗೆ ನಿಲಿಸೆನ್ನ ಪುಣ್ಯತಮವೆಂದೆನಿಪಸ್ವರ್ಣಮಯ ತಿರುಪತಿಯ ವಾಸ ವೆಂಕಟರಮಣ 3 ಓಂ ಸಚ್ಚಿದಾನಂದವಿಗ್ರಹಾಯ ನಮಃ
--------------
ತಿಮ್ಮಪ್ಪದಾಸರು
ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದುದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ ಮಗ ಬುದ್ಧಿವಂತನಾಗಲಿಲ್ಲವೆಂದೆಂಬಮಗಳಿಗೊದಗಲಿಲ್ಲ ಅಳಿಯ ಎಂದೆಂಬಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದುಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು1 ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದುಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದುಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದುಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು 2 ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದುಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದುಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದುಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು3 ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದುಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದುಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು 4 ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದುನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದುಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದುಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು 5
--------------
ಚಿದಾನಂದ ಅವಧೂತರು
ದುಃಖವಿಲ್ಲವೋ ಪರಮಾತ್ಮನಿಗೆ ಲಿಂಗದ ದೇಹದದುಃಖವಿಲ್ಲವೋ ಪರಮಾತ್ಮನಿಗೆ ಪ್ರತ್ಯಗಾತ್ಮನಿಗೆದುಃಖವುಂಟೆ ನಿಜ ನಿರ್ಲಿಪ್ತಗೆಮಿಕ್ಕ ಥಳಥಳ ಸಾಕ್ಷಿಬ್ರಹ್ಮಂಗೆಪ ಜಲದೊಳು ಹೊಳೆವ ಇಂದುವಿಂಗೆಜಲದ ಕಂಪವು ಹೊಳೆವುದೇ ಪೂರ್ಣಚಂದ್ರಗೆಆ ಪರಬ್ರಹ್ಮಂಗೆ ಹೊಳೆಯಲು ಲಿಂಗದಿಲಿಂಗದ ಗುಣಗಳು ಕೆಲವನು ತಿಳಿಯಲು ಪುಣ್ಯಾತ್ಮನಹೆ 1 ಪರಿ ಆತ್ಮಂಗೆ ಲಿಂ-ಗಾದಿ ಜನ್ಮವೊಂದುಗುಡೆ ಕಷ್ಟಪಡುವಿಕೆಲಿಂಗವೆ ಅಳಿಯಲು ನಿತ್ಯಾತ್ಮನುತಭಂಗವ ಕಳದೇ ಚಿದಾನಂದ ಬ್ರಹ್ಮನಹನು 2
--------------
ಚಿದಾನಂದ ಅವಧೂತರು
ದುರಿತ ಬ್ರಹ್ಮಾಸ್ತ್ರಜಯಜಯ ಜಯತು ಪ್ರತಿಯಿಲ್ಲದಸ್ತ್ರಾ ಪ ಉಟ್ಟಿಹ ಕಾಶಿಯ ಉಡಿಗೆತೊಟ್ಟಿಹ ಎದೆ ಕಟ್ಟುಕಟ್ಟಿದ ಖಡ್ಗ ಕಠಾರಿರಕ್ತದ ತಿಲಕವಿಟ್ಟುಮುಷ್ಠಿಯಲಿ ಮುದ್ಗರ ಶೂಲಧನು ಶರವಳವಟ್ಟುಬಿಟ್ಟ ಕಂಗಳ ಕಿಡಿಯುಛಟಛಟ ಛಟವಿಟ್ಟು 1 ಏರಿಸಿ ಪಟ್ಟೆಯ ಹಲಗೆಎಡಬಲ ನೋಡದೆಹರಿಯ ಘನ ಶತ್ರುವಿನನಾಲಗೆ ಹಿಡಿದೆಳೆಯೆವೀರ ಮಂಡಿಯ ಹೂಡಿಅವುಡನೇ ಕಡಿಕಡಿದೇಹಾರಿಸಿದೆ ತಲೆಗಳನುಹಾ ಎನುತಲಿ ಬಿಡದೆ 2 ಮುಕುಟ ಕಾಂತಿಯಮಿಹಿರಕೋಟೆಯ ಕಳೆಯು ಹಳಿಯೆಲಕಲಕನೆ ಬೆಳಗುತಿಹಕುಂಡಲ ಸರಪಳಿಯೆಚಕಚಕನೆ ಮೂಗುತಿಯಮುತ್ತು ಹೊಳೆಹೊಳೆ ಹೊಳೆಯೇಸಬಲೆ ಎನಿಪ ಚಿದಾನಂದಬಗಳಾಂಬ ತಿಳಿಯೆ3
--------------
ಚಿದಾನಂದ ಅವಧೂತರು
ದೃಷ್ಟಿ ಇರಬೇಕಯ್ಯ ಬ್ರಹ್ಮದಿ ದೃಷ್ಟಿಯಿರಬೇಕುದೃಷ್ಟಿಯಿಲ್ಲದಿರಲು ಅನುಭವ ಪಟು ದೊರಕದು ಪ ಆಲಿಯು ನಿಂತೆ ಆಲಿಯ ಗೊಂಬೆಯು ತಿರುಗದಲಿರಬೇಕುಆಲಿಯು ಮುಚ್ಚದೆ ಆಲಿಯ ರೆಪ್ಪೆಯು ಬಡಿಯದಲಿರಬೇಕು 1 ಅನಿಮಿಷ ದೃಷ್ಟಿಯಂದದಿ ಬ್ರಹ್ಮವ ಆಲಿಸುತಿರಬೇಕುಅನಿಮಿಷದಂದದಿ ಕಣ್ಣಿನ ಗುಡ್ಡೆ ತಿರುಗದಲಿರಬೇಕು2 ದೃಷ್ಟಿಯು ಕುಳಿತಾ ದೃಷ್ಟಿಯು ಮುಂದಕೆ ಸಾಗಲಿರಬೇಕುದೃಷ್ಟಿಯು ತಾನೆಡಬಲಕೆ ಸರಿಯದೆ ದೃಷ್ಟಿಯು ಇರಬೇಕು 3 ಕುಳಿತಾ ಸ್ಥಳವು ತಪ್ಪಲು ಮತ್ತೆಯು ಕುಳಿತುಕೊಳ್ಳಬೇಕುಥಳಥಳ ಹೊಳೆಯುವ ಬೆಳಗದ ಪಸರಿಸಿ ತರನಾಗಿರಬೇಕು 4 ಉದಯಾಸ್ತಮಾನವು ದಿವರಾತ್ರಿಯುಡುಗಿ ಇರಬೇಕುಚಿದಾನಂದ ಸದ್ಗುರು ತಾನಾಗಿಯೆ ತಾನೆ ಇರಬೇಕು 5
--------------
ಚಿದಾನಂದ ಅವಧೂತರು
ದೇವ ದೇವತೆಗಳ ಸ್ತುತಿ 1 ಅಂಬ ಕಟಾಕ್ಷಿಸೆ ಅಂಬಅಂಬ ಪರಾಂಬ ಬಗಳಾಂಬ ಪ ಮಧು ಕೈಟಭಾರಿಯೆ ಮಹಿಷಾಸುರೇಶ್ವರಿಯೆಕದನ ಶುಂಭಾಂತಕಿ ಕರುಣಾ ಕೃಪಾಕಟಾಕ್ಷೆ1 ಪರಮ ಪಾವನದೇವಿ ಪಂಡಿತ ಜನ ಸಂಜೀವಿಶರಣ ಜನರ ತಾಯಿ ಸುಧಾ ಶರಧಿ ಸಂಭಾವಿ2 ನಾರಾಯಣಿ ಭದ್ರೇ ನರಸಿಂಹಿಣಿ ರೌದ್ರಿವಾರಾಹಿ ಕಾಳಿಯೆ ಗೌರಿ ಉಮಾಮಹೇಶ್ವರಿ ಶಂಕರಿ 3 ನಿತ್ಯ ನಿಗಮ ಸ್ತುತ್ಯ ಚಿದ್ರೂಪೇನಿತ್ಯ ನಿರ್ವಿಕಾರಿ ನಿಂದಕಜನಸಂಹಾರಿ 4 ಚಿದಾನಂದಾವಧೂತೇ ಚಿನ್ಮಯ ಬಗಳ ಪ್ರಖ್ಯಾತೇಬೋಧ ಸದ್ಗುರುನಾಥೇ ಭಕ್ತವಿಲಾಸ ಪ್ರೀತೆ 5
--------------
ಚಿದಾನಂದ ಅವಧೂತರು