ಒಟ್ಟು 6900 ಕಡೆಗಳಲ್ಲಿ , 126 ದಾಸರು , 4284 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದ ದುರಿತವಾ ಚನ್ನಕೇಶವಾ ನಂದನಂದನಾ ದೂರಮಾಡೆಲೋ ಪ ಆದಿದೇವನೇ ಮರೆಯ ಹೊಕ್ಕೆನೋ ಸಾದುವರ್ಯರ ಮನ್ನಿಸೋ ಹರೇ1 ಭವದಿ ನೊಂದೆನೋ ಬಂಧ ಬಿಡಿಸಲೋ ಅವನಿಪಾಲನೆ ಸಾನುರಾಗದೀ 2 ಸುಜನಪಾಲನೇ ಕುಜನ ಕಾಲನೇ ಭಜನೆ ಮಾಳ್ಪಿನೊ ರಕ್ಷಿಸೋ ಹರೇ 3
--------------
ಕರ್ಕಿ ಕೇಶವದಾಸ
ಬಂದ ಬಂದಾ ಕದರೂರಿಂದ ನಿಂದಾ ಪ. ಬಂದ ಕದರೂರಿಂದ ಕರಿಗಿರಿ ಎಂದು ಕರೆಸುವ ಪುಣ್ಯಕ್ಷೇತ್ರಕೆ ತಂದೆ ಮುದ್ದುಮೋಹನ್ನ ಗುರುಗಳು ತಂದು ಸ್ಥಾಪಿಸೆ ತಂದೆ ಹನುಮನು ಅ.ಪ. ವ್ಯಾಸತೀರ್ಥರು ಸ್ಥಾಪಿಸಿದ ಶ್ರೀ ದಾಸಕೂಟದಿ ಉದಿಸಿದಂಥಾ ವಾಸುದೇವನ ಭಕ್ತವಂಶದಿ ಲೇಸುಮತಿಯಿಂ ಜನಿಸಿ ಭಕ್ತರ ಆಸೆಗಳ ಪೂರೈಸುತಲಿ ಬಹು ತೋಷದಂಕಿತಗಳಿತ್ತು ನಾಶರಹಿತನ ಭಕ್ತರೆನಿಸಿದ ದಾಸವರ್ಯರ ಮಂದಿರಕೆ ತಾ 1 ಶಾಲಿವಾಹನ ಶಕವು ಸಾವಿರ ಮೇಲೆ ಶತ ಎಂಟರವತ್ತೊಂದು ಕಾಲ ಫಾಲ್ಗುಣ ಕೃಷ್ಣ ಪಂಚಮಿ ಓಲೈಸುವ ಪ್ರಮಾಥಿ ವತ್ಸರ ಶೀಲ ಗುರುವಾಸರದಿ ಬುಧರ ಮೇಳದಲಿ ವೇದೋಕ್ತದಿಂದಲಿ ಶೀಲ ಶ್ರೀ ಕೃಷ್ಣದಾಸತೀರ್ಥರು ಲೀಲೆಯಿಂದ ಪ್ರತಿಷ್ಟಿಸಲು ತಾ 2 ರಾಮದೂತ ಶ್ರೀ ಹನುಮ ಬಂದನು ಭೀಮ ಬಲ ವಿಕ್ರಮನು ಬಂದನು ಶ್ರೀ ಮದಾನಂದತೀರ್ಥ ಬಂದನು ಪ್ರೇಮಭಕ್ತರ ಪೊರೆವ ಬಂದನು ಸ್ವಾಮಿಗೋಪಾಲಕೃಷ್ಣ ವಿಠಲನ ಪ್ರೇಮಭಕ್ತನು ದಾಸ ಭವನಕೆ 3
--------------
ಅಂಬಾಬಾಯಿ
ಬಂದ ಶ್ರೀ ಹರಿ ಬಂದ ಪ ಬಂದ ಬಂದ ಮುಚುಕುಂದ ಪರದ ಅರ- ವಿಂದನಯನ ಗೋವಿಂದ ಪರಾತ್ವರ ಕಂದನೆನ್ನ ಮನ ಮಂದಿರಕೀಗಲೆ ನಂದವ ನೀಡುತ ಇಂದಿರೆಸಹಿತದಿ ಅ.ಪ. ಪೊತ್ತವ ಬಂದ ಅಜಿತನುಬಂದ ಚಾರುವರಾಹನು ಭೂಸಹಬಂದ ಪೋರನ ಸಲಹಿದ ಘೋರನು ಬಂದ ಭಾರ್ಗವ ಬಂದ ಕೌರವವಂಶಕುಠಾರನು ಬಂದ ಕಲ್ಕಿಯು ಬಂದ 1 ಉಸುರಲು ಹಯಮುಖಬಂದ ದತ್ತನುಬಂದ ನೀಡಲು ಯಜ್ಞನುಬಂದ ಸಾಧುಹರಿನಾರಾಯಣ ಬಂದ ಶಿಂಶುಮಾರನು ಬಂದ ಧನ್ವಂತ್ರಿಯು ಬಂದ 2 ಶ್ರೀ ವಿಷ್ಣುವು ಬಂದ ಉಲ್ಲಾಸದಿ ಬಂದ ಸಂತೋಷನು ಬಂದ ತೈಜಸ ಕರುಣದಿ ಬಂದ ಮುಕ್ತೇಶನು ಬಂದ ಪರಾದ್ಯನಂತನು ಬಂದ 3 ಜಗನೂಕೂವ ಬಂದ ಪುರುಹೂತ ವಿನುತ ಸಕಲಾರ್ತಿಹರ ತಾ ಬಂದ ವೈರಾಜ್ಯನು ಬಂದ ಶೃತಿ- ನೀಕ ಸುವಂದಿತನಿರುಪಮ ಬಂದ ವಾಕುಮನಕೆ ಸಾಕಲ್ಯಸಿಗದ ಪುಣ್ಯ- ವಿವರ್ಜಿತ ಭಗಲೋಕೈಕ ವಂದ್ಯ ನಿಜಭಕ್ತಗಣ ಜಯಪರಾಕುನುಡಿಯುತಿರೆ ಮೆಲ್ಲ ಮೆಲ್ಲಗೆ4 ಸರ್ವಸಾಕ್ಷಿಗಭೀರ ಪರಾಕು ಸ್ವತಂತ್ರನೆ ಪರಾಕು ಸರ್ವರಪಾಲಿಪ ಸರ್ವರ ರಕ್ಷಿಪ ಸರ್ವಚರಾಚರಭಿನ್ನ ಪರಾಕು ಪ್ರತಿಪಾದ್ಯಪರಾರು ಸರ್ವಕಾಲದಲಿ ಸರ್ವದೇಶದೊಳು ಸರ್ವದೆಶೆಯೊಳು ಸಮನೆ ಪರಾಕು ಪರಾಕು 5 ನಿತ್ಯಾನಿತ್ಯಜಗಜ್ಜನಕ ಸರ್ವೋತ್ತಮ ಸತ್ಯಸಂಕಲ್ಪ ಪರಾಕು ನಿಖಿಳಪ್ರದಾಯಕ ಪರಾಕು ಭೃತ್ಯಾನುಗ್ರಹ ಕಾರಕಶೀಲ ಸದಾಪ್ತತಮ ವಿಶ್ವಾತ್ಮನೆಪರಾಕು ನಿತೈಶ್ಪರ್ಯ ಕೀತ್ರ್ಯಾತ್ಮಕ ಸರ್ವಾತತ ಬಲವಿಖ್ಯಾತಪರಾಕು ನೀತ ಜ್ಞಾನಾನಂದ ಪರಿಪೂರ್ಣನಿತ್ಯತೃಪ್ತ ಮಹಾಂತ ಪರಾಕು ಪರಾಕು 6 ಪರಾಕು ರೂಪಾತ್ಮ ಪರಾಕು ಪುರುಷ ಸೂಕ್ತ ಸುಗೇಯ ಪ್ರಖ್ಯಾತ ಮಹಾಮಹಿಮ ಪರಾಕು ನಾಮಕ ಪರಾಕು ಸುನಾಮ ಓಂಕಾರಾಧಿಪ ಪರಾಕು ವಿಭೂತಿ ಪರಾಕು 7 ಪ್ರೇಮ ಚೊಕ್ಕ ಸೃಷ್ಟಿಗೈವನಿತ್ಯಸುನೇಮ ಕರುಣಾಮಣಿ ಶ್ರೀಕಾಮ ಅಕ್ಕರೆಯಲಿ ಜಗಕಾವ ನಿಸ್ಸೀಮ ಮುಕ್ಕಣ್ಣ ವಿಧಿಸಿರಿ ಸಾರ್ವಭೌಮ ವಿನುತ ಗುಣಲಲಾಮ ಸುನಾಮ ಮೇಘಶ್ಯಾಮ 8 ಸುಂದರ ಬಂದ ಸೃಷ್ಠಿಸ್ಥಿತಿಲಯಗೈವ ಮು- ವೃಂದಕಳೆದು ನಿಜ- ಸುಧಾರ್ಣವ ಬೃಹತೀನಾಮಗ ಮಂದಸ್ಮಿತ ವದನವ ತೊರುವ ಈತನು ಸ್ಯಂದನವೇರಿಹ ಜಯಮುನಿಹೃದಯಗ ಮಧ್ವರಮಾವರ ಶ್ರೀಕೃಷ್ಣವಿಠಲನು ಭವ ಪರಿವಾರದ ಕೂಡಿಯೆ ಬಂದಾ 9
--------------
ಕೃಷ್ಣವಿಠಲದಾಸರು
ಬಂದದೆ ಎನಗೆ ಬರಿದೆ ದೂರು ಬಂದೊಂದು ಅವಗುಣದವನೆಂಬೊ ಮಾತು ಪ ಕಾಮಕ್ರೋಧಂಗಳು ಹೆಚ್ಚಿಸಿ ಮನದೊಳು ತಾಮಸ ಬುದ್ಧಿ ವಿಶೇಷವಾಗಿ ಕಾಮುಕವಾಗಿ ನಡವಳಿ ನಡಸಿದ ಈ ಮನದ ಅಧಿಕಾರಿ ಶ್ರೀಕೃಷ್ಣನೊ ನಾನೊ 1 ಅನ್ಯಾಯ ಅನ್ಯಾಯ ಅಸಡ್ಡಾಳ ಅಪದ್ಧ ನನ್ನ ನಿನ್ನದು ಎಂಬೊ ಬಡದಾಟವು ತನ್ನ ಸ್ಮರಣಿ ತಪ್ಪಿ ವಿಷಯಕ್ಕೆ ಎರಗಿಸಿ ಮುನ್ನ ಮನದ ದಾತಾ ಶ್ರೀಕೃಷ್ಣನೊ ನಾನೊ 2 ಮನೆ ಮನೆಗಳ ಪೊಕ್ಕು ಮಕ್ಕಳಾಟಿಕೆಯಿಂದ ವನುರುತರ ರೂಪಿಗೆ ಸೋತು ಆತು ಕನಿಕರಿಸಿ ಕ್ರಮಗೆಟ್ಟು ತಿರುಗಿಸುವ ತನವು ಮಾಡಿದಾತಾ ಕೃಷ್ಣನೊ ನಾನೊ 3 ನೀತಿ ನಿರ್ಣಯ ಮರೆದು ಪಾತಕದೊಳು ಬಿದ್ದು ಪ್ರೀತಿಯಲಿ ಅತಿಥಿಗಳ ವಂದಿಸದೆ ಯಾತಕ್ಕೆ ಬಾರದಾ ಚರಿತೆ ನಡೆವಂಥ ಚೇತನ ಕಲ್ಪಿಸಿದ ಕೃಷ್ಣನೊ ನಾನೊ 4 ಆವಾವ ದುಷ್ಕರ್ಮಗಳ ಮಾಡಿ ಉತ್ತಮ ದೇವ ಬ್ರಾಹ್ಮಣರ ಪೂಜಿಸಲಿಲ್ಲವು ಶ್ರೀ ವಿಜಯವಿಠ್ಠಲ ವೆಂಕಟಗಲ್ಲದ ಜೀವ ಪುಟ್ಟಿಸಿದಾತ ಕೃಷ್ಣನೋ ನಾನೊ 5
--------------
ವಿಜಯದಾಸ
ಬಂದದ್ದನುಭವ ಮಾಡ್ವೆ ಕಂದನಾಗಿರುವೆ ತಂದೆ ನಿನ್ನಯ ದಯವೊಂದಿರಲಿ ಹರಿಯೆ ಪ ಮಂದಿ ಮಕ್ಕಳು ಎನ್ನ ಕುಂದಿಟ್ಟು ಜರೆಯಲಿ ಬಂಧು ಬಾಂಧವರೆಲ್ಲ ನಿಂದಿಸಿ ನುಡಿಲಿ ಬಂಧನವು ಬಿಡರಿರಲಿ ಎಂದೆಂದು ಮರೆಯದಂತೆ ಇಂದಿರೇಶ ನಿಮ್ಮ ಧ್ಯಾನವೊಂದೇ ಎನಗಿರಲಿ 1 ಭೂಪತಿಗಳೆನ್ನೊಳ್ಕೋಪಮಂ ತಾಳಲಿ ತಾಪಬಡಿಸಲಿ ಮಹಪಾಪಿವನೆನುತ ತಾಪತ್ರಯ ಬಿಡದಿರಲಿ ಪಾಪಲೋಪನೆ ಜಗ ದ್ಯ್ಯಾಪಕನೆ ನಿನ್ನ ಧ್ಯಾಸಪರೂಪ ಎನಗಿರಲಿ 2 ಕಂಡಕಂಡಂತೆ ಜನರು ಭಂಡನೆಂದೆನ್ನಲಿ ತಂಡತಂಡದಿ ಕಷ್ಟ ಅಂಡಲೆದು ಬರಲಿ ಹೆಂಡರು ಸೇರದೆ ಗಂಡನೆಲ್ಲೆಂದೆನಲಿ ಪಂಢರೀಶ ನಿನ್ನ ಪದೆನ್ನ ಮಂಡೆಮೇಲಿರಲಿ 3 ಎತ್ತ ಪೋದರು ಜನರು ಹತ್ರ ಬಡಿಯಲಿ ಎನಗೆ ವಿತ್ತಕೊಟ್ಟೊಡೆಯರು ನಿತ್ತರಿಸದೊದಿಲಿ ಮುತ್ತಿಕೊಂಡ್ವೈರಿಗಳು ಕುತ್ತಿಗೆ ಕೊಯ್ಯಲಿ ಚಿತ್ತಜಪಿತನಿನ್ನ ಭಕ್ತ್ಯೊಂದೆನಗಿರಲಿ 4 ಪೀಡಿಸಲಿ ಬಡತನವು ಕಾಡಿಸಲಿ ದಾರಿದ್ರ್ಯ ಓಡಿಸಲಿ ಪೊಡವಿಪರು ನಾಡ ಬಿಟ್ಟೆನ್ನ ನೋಡಲಿ ಮುನಿದೆನ್ನ ನಾಡದೈವಗಳೆಲ್ಲ ಬೇಡೆನೆ ಶ್ರೀರಾಮ ನಿನ್ನಡಿ ಬಲೊಂದೆನಗಿರಲಿ5
--------------
ರಾಮದಾಸರು
ಬಂದನು ಹನುಮಂತ ಗೃಹಕೇ | ಕಾರ್ಯಸಂಧಿಸಲು ಅನುಗ್ರಹಕೇ ಪ ಮಂದಿರವು ಒಂಟೀಲು ವಂಶ ಸಿ | ಕಂದರಾಬಾದಿನಿಂದಲಿಸುಂದರನು ಬಹುನಂದ ವೀಯುತ | ಮಂದವಾರದಿ ಬಂದ ಹನುಮ ಅ.ಪ. ಮಾಸ | ವೈಶಾಖ ನಿಜ ವಿಶಾಖಾಭಾದಾಸನ ಮನೆಗತಿ ಪ್ರಭಾ | ಯುತ | ಆ ಸಮೀರನು ಅಸ್ಮಲ್ಲಾಭಾ ||ಹರ್ಷದಲಿ ಹನುಮಂತರಾಯರ | ವಶದಿ ಇದ್ದವನಲ್ಪ ಕಾಲದಿವಶವ ಪಡಿಸಲು ವೆಂಕಟಾರ್ಯಗೆ | ನಸುಕಿಲೀ ನಸನಗುತ ಬಂದ 1 ಪರಿ ಮಣಿ |ವರ ಖಚಿತ ರತ್ನ ವಿಶಾಲಾಪರಿ ಪರಿಯ ಆಭರಣ ಭೂಷಿತ | ಸುರ ವಿರೋಧಿಗಳ್ಹನನ ಶಕುತನೆರೆ ಸುವಾನರ ಸೈನ್ಯ ಪರಿವೃತ | ಹರಿಯಲಿಂ ಪಟ್ಟಾಭಿಷಕ್ತ 2 ಭೃತ್ಯ ನಿತ್ಯ ಸೇವಾಸಕ್ತ ಮಾರುತ 3
--------------
ಗುರುಗೋವಿಂದವಿಠಲರು
ಬದರೀನಾಥ ವಿಠಲ | ಪೊರೆಯ ಬೇಕಿವನಾ ಪ ಸದಯ ಹೃದಯನೆ ಇವಗೆ | ಮುದವನ್ನೆ ಬೀರತಲಿಹದುಳದಲಿ ಕೈಪಿಡಿದು | ಕಾಪಾಡೊ ಹರಿಯೇ ಅ.ಪ. ಮೇಶ ಮಧ್ವೇಶ ಮಹಿ | ದಾಸ ನಿನ್ನಡಿ ದಾಸ್ಯಆಸಿಸುವ ಬಾಲಕನ | ಆಶೆಯನು ಸಲಿಸೀ |ಕ್ಲೇಶಗಳ ಪರಿಹರಿಸಿ | ನೀ ಸಲಹೆ ಭಿನ್ನವಿಪೆಹೇಸದಾಗತಿ ವಂದ್ಯ | ವಾಸವಾನುಜನೇ 1 ಲೌಕಿಕದ ಸಂಪತ್ತು | ಬೇಕಾದ ವರವಿತ್ತುಕಾಕು ಸಂಗವ ಕೊಡದೆ | ನೀಕಾಯ ಬೇಕೋ ||ತೋಕನಿಗೆ ನಿನ್ನಲ್ಲಿ | ಭಕುತಿ ಜ್ಞಾನಗಳಿತ್ತುಲೌಕಿಕವನೆಲ್ಲ ವೈ | ದೀಕ ವೆಂದೆನಿಸೋ 2 ಮೋದ ಕೊಡು ಸತತಾ 3 ಸ್ವಾಪದಲಿ ಮತ್ಸ್ಯಾದಿ | ರೂಪಗಳ ಸ್ತೋತ್ರವೆನೆವ್ಯಾಪಾರ ಮಾಡಿಸುತ | ಕೃಪೆ ತೋರ್ದೆ ಹರಿಯೇವೈಪರೀತ್ಸದ ಮನದ ಚಾಪಲ್ಯ ಕಳೆಯಲ್ಕೆಸ್ವಾಪದಲಿ ಸೂಚಿಸುತ | ನೀಪೇಳ್ದೆ ಧೃಡವಾ 4 ಪತಿ ವಿನುತ | ನಾರಾಯಣಾಖ್ಯ ಹರಿಘೋರಭವ ಕೂಪಾರ | ಪಾರಗಾಣಿಸುವಾಭಾರ ನಿನ್ನದು ಎಂದು | ಪೋರನ್ನ ಒಪ್ಪಿಸಿಹೆಧೀರ ಗುರು ಗೋವಿಂದ | ವಿಠಲ ಪೊರೆ ಇವನಾ 5
--------------
ಗುರುಗೋವಿಂದವಿಠಲರು
ಬಂದರು ಹರಿದಾಸರು ಅಲ್ಲಿ | ಗೋವಿಂದನಾಮವ ನೆನೆಯುತಲಿ ಪ ಬರುತಿಹರೂ ಹರುಷಿಪರೂ ತಿರುಪತಿಯಾತ್ರೆಗೆ ಹೋಗುವರು 1 ತಾಳದಲೀ ಮೇಳದಲೀ ಶ್ರೀ ಲೊಲಾಯೆನ್ನುತ ಕುಣಿಯುತಲಿ 2 ನೇಮದಲೀ ಪ್ರೇಮದಲೀ ಗುರು ರಾಮವಿಠಲ ಸಲಹೆನ್ನುತಲಿ 3
--------------
ಗುರುರಾಮವಿಠಲ
ಬಂದಳು ಭಾಗ್ಯನಿಧಿ ಶ್ರೀಧರನರಸಿ ಪ. ಪೊಂದಿದ ಭಕ್ತರಾನಂದದ ಸ್ತುತಿಗಾ ನಂದ ಪಡುತ ಒಂದೊಂದ್ಹೆಜ್ಜೆನಿಡುತಾ ಅ.ಪ. ಕಡಗ ಕಂಕಣ ತೋಳ್ಬಂದಿಯ ಧರಿಶಿ ಬಡನಡು ಬಳುಕುತ ದೃಢಭಕ್ತರೆಡೆಗೆ 1 ಹೆರಳು ಬಂಗಾರದ ಶಿರದ ಮಲ್ಲಿಗೆ ಮುಡಿ ಸರಸದಿಲುದರುತ ವರಪ್ರದ ಮಾತೆ 2 ವರದ ಶ್ರೀ ಶ್ರೀನಿವಾಸ ಸ್ವರ ರಮಣಿಯು ತಾ ಥರಥರದ್ವರಗಳ ಕರುಣಿಸಲೆಮಗೆ 3
--------------
ಸರಸ್ವತಿ ಬಾಯಿ
ಬಂದಳು ಭಾಗ್ಯನಿಧಿ ಶ್ರೀವರನಿಧಿ ಬಂದಳು ಭಾಗ್ಯನಿಧಿ ಪ. ಅರಿಶಿಣ ಕುಂಕುಮ ಪರಿಮಳ ಗಂಧವು ನಿನಗರ್ಪಿಸುವೆನು ತಾಯೆ ಶ್ರೀವರನಿಧಿ 1 ಜಾಜಿ ಮಲ್ಲಿಗೆ ರೋಜಾ ಸಂಪಿಗೆ ಸೋಜಿಗಮಾಗಿಹ ಸುರಗಿ ಅರ್ಪಿಸುವೆನು 2 ಜರಿಯ ಪೀತಾಂಬರ ಝಗಝಗಿಸುತಲಿ ಜಗದೊಡೆಯನ ರಮಣಿ ಶ್ರೀ ವರಲಕ್ಷ್ಮಿ 3 ಕದಳಿ ಖರ್ಜೂರವೂ ಬದಳಿ ದಾಳಿಂಬವು ಮುದದಿ ತೆಂಗಿನಕಾಯಿ ಫಲವ ಅರ್ಪಿಸುವೆನು 4 ಶುಕ್ರವಾರದಿ ಭಕ್ತರ ಮನೆಯೊಳು ನಿತ್ಯ ಪೂಜೆಯಗೊಳ್ವ ಶ್ರೀ ವರನಿಧಿ 5 ಶ್ರೀ ಶ್ರೀನಿವಾಸನ ಪ್ರೀತಿಯ ಲಕ್ಷ್ಮಿ ನೀ ಕರುಣದಿ ಸಲಹೆ ಶ್ರೀ ವರಲಕ್ಷ್ಮಿ 6
--------------
ಸರಸ್ವತಿ ಬಾಯಿ
ಬಂದಾ ಗೋವಿಂದನು ಗೋಕುಲದಿಂದ ಆನಂದ ಮುಕುಂದನು ಪ ಅಂದಿಗೆ ಕಿರುಗೆಜ್ಜೆಯು ಘಲುಘಲುರೆನೆ ಮಂದಹಾಸನಗೆಯಿಂದಲಿ ಶ್ರೀಹರಿ ಅ.ಪ ಕರದಿ ಕಂಕಣ ವಂಕಿಯು ಹೊಳೆಯುತಲಿ ಸಿರದಿ ಕಿರೀಟ ಮುಂ- ಗುರುಳು ಮುಖ ಬೆವರಿನ ಹೊಸ ಕಾಂತಿಯಲಿ ಬೆರಳುಗಳಲಿ ಉಂಗುರ ಥಳಥಳಥಳ ಹೊಳೆಯುವ ಸೊಬಗಿನಲಿ ಕೊರಳೊಳು ಸರಿಗಿಯ ಸರ ಪರಿ ಸರ ಪದಕಗಳ್ಹೊಳೆಯುತಲಿ ಜರಿ ಪೀತಾಂಬರದ ನಡುವಿಲಿ ಕಿರು ಗೆಜ್ಜೆಗಳ್ಹೊಳೆಯುತಲಿ ತರುತುರು ತರುಣೇರು ಮರುಳಾಗುವ ತೆರ ಪರಿಪರಿ ರಾಗದಿ ಮುರಳಿಯ ನುಡಿಸಲು ಸುರರು ಪುಷ್ಪ ವೃಷ್ಟಿಯ ಸುರಿಸುತಲಿರೆ ತುರುಕರು ಮಧ್ಯದಿ ಪೊಳೆವೊ ಚಂದ್ರಮನಂತೆ1 ತುಂಬುರು ನಾರದರೆಲ್ಲರು ಕೂಡಿ ಅಂಬರದಲಿ ನೆರೆದರು ಗಂಧರ್ವಪ್ಸರ ಸ್ತ್ರೀಯರು ಕುಣಿದಾಡಿ ಪರಮಾತ್ಮನ ಸ್ತುತಿಸುತ ರಂಭೆ ಊರ್ವಶಿ ಮೇನಕೆಯರು ಕೂಡಿ ಆನಂದದಿ ನರ್ತಿಸೆ ಇಂದಿರೆ ರಮಣನ ಗುಣಗಳ ಪಾಡಿ ಅಂಬರದಲಿ ದೇವ ದುಂದುಭಿಗಳು ಮೊಳಗಲು ಕಂದರ್ಪನ ಪಿತ ಕರುಣದಿ ಭಕುತರ ಚಂದದಿ ದುರ್ಮತಿ ನಾಮ ವತ್ಸರದಲಿ ಕುಂದಿಲ್ಲದೆ ಸಲಹುವೆನೆನುತಲಿ ತ್ವರ 2 ಸೃಷ್ಟಿಗೀಶನ ಗುಣಗಳ ಪಾಡುತಲಿ ವ- ಶಿಷ್ಠರು ವಿಶ್ವಾಮಿತ್ರ ಕಶ್ಯಪ ಭಾರದ್ವಾಜ ಮುನಿಗಳು ದೇವೇಶನ ಸ್ತುತಿಸುತ ಅತ್ರಿ ಜಮದಗ್ನಿ ಜಾಬಾಲಿಗಳು ಶ್ರೀಕೃಷ್ಣನೆ ಪರನೆಂದು- ತ್ತಮ ಋಷಿಗಳು ಪೊಗಳುತಲಿರಲು ಪರಮೇಷ್ಠಿ ಪಿತನ ತ- ನ್ನಿಷ್ಟ ಭಕುತರನು ಸಲಹಲು ಕಂಕಣ ಕಟ್ಟಿಹ ಕಮಲನಾಭವಿಠ್ಠಲ ತ್ವರ ಶಿಷ್ಟರ ಸಲಹಲು ಸರಸರ ಓಡುತ 3
--------------
ನಿಡಗುರುಕಿ ಜೀವೂಬಾಯಿ
ಬಂದಾ ಬಂದಾ ಉಡುಪಿಲಿ ನಿಂದ ನಿಂದಾ ಪ. ಬಂದ ಗೋಪೇರ ವೃಂದಗಳ ತಾ ನಂದು ದಣಿಸುತ ಸುಂದರಾಂಗನು ಮಂದರೋದ್ಧರ ಬೃಂದೆಯಿಂದಲಿ ಅ. ಮುದ್ದುಸುರಿಸುತ ಗೋಕುಲದೊಳಿರೆ ಕದ್ದು ಬೆಣ್ಣೆಯ ತಿಂದನೆನುತಲಿ ಸುದ್ದಿ ತಾಯಿಗೆ ಪೇಳಿ ಸತಿಯರು ಗದ್ದಲದಿ ತನ್ನ ಗಾರು ಮಾಡಲು ಮುದ್ದು ಯತಿಗಳು ಎದ್ದು ಪೂಜಿಸಿ ಮುದ್ದಿ ಬೆಣ್ಣೆ ನೇವೇದ್ಯವಿಡುತಿರೆ ಸದ್ದು ಇಲ್ಲದೆ ತಿಂದು ಸುಖದಲಿ ಇದ್ದೇನೆಂಬುವ ಬುದ್ಧಿಯಿಂದಲಿ 1 ಭಾರವಿಳುಹಲು ಕೋರೆ ಭೂಮಿಯು ನಾರದಾದ್ಯರ ನುತನು ತಾ ಬರೆ ನಾರಿಯರು ಮನ ಬಂದ ತೆರದಲಿ ಜಾರ ಚೋರನೆನುತ್ತ ಬೈಯ್ಯಲು ಧೀರ ಯತಿಗಳು ಸೇರಿ ಪರಬೊಮ್ಮ ಶ್ರೀರಮಣನೆನ್ನುತ ಸ್ತುತಿಸುವೋ ವಾರುತಿಗೆ ಮೈದೋರಿ ಭಕುತರ ಪಾರಿಗಾಣಿಪೆನೆಂಬ ನೆವದಲಿ 2 ಹಸಿದುಗೋಪರÀ ಯಜ್ಞವಾಟಕೆ ಅಶನ ಬೇಡಲು ಕಳುಹೆ ಗೊಲ್ಲರ ಪಸುಳರಿಗೆ ನೈವೇದ್ಯವಿಲ್ಲದೇ ವಶವೆ ಕೊಡಲೆಂದೆನ್ನೆ ಋಷಿಗಳು ವಸುಧಿಪತಿ ಸರ್ವೇಶನೆಂದರಿ ದಸಮಯತಿಗಳು ಕ್ಷಣ ಕ್ಷಣಕ್ಕೆ ಷ ಡ್ರಸದ ಆರೋಗಣೆಯ ಮಾಡಿಸೆ ಕುಶಲದಲಿ ಮೃಷ್ಟಾನ್ನ ಭುಜಿಸಲು 3 ಬಾಲ ಕಂದಗೆ ತೊಡಿಗೆ ತೊಡಿಸಲು ಲೀಲೆಯಿಂದಲಿ ಗೋಪಿದೇವಿಯು ಕಾಳ ಮಡುವಿಲಿ ಧುಮಿಕಿ ಎಲ್ಲವ ಕಳೆದು ಬರೆ ಆಟಗಳ ಪರೆವೆಲಿ ಶೀಲಯತಿಗಳು ವಾರ ವಾರಕೆ ಬಾಲ ತೊಡಿಗೆ ಶೃಂಗಾರಗೈಯ್ಯಲು ಆಲಯವ ಬಿಟ್ಟೆಲ್ಲಿ ಪೋಗದೆ ಓಲಗವ ಕೈಕೊಳ್ವೆನೆನ್ನುತ 4 ಗೋಪಜನ ಗೋವ್ಗಳನೆ ಕಾಯಲು ಗೋಪಿಯರು ತನ್ನ ಗುಲ್ಲು ಮಾಡಲು ಪಾಪಿ ಕಂಸ ಅಟ್ಟುಳಿಯ ಪಡಿಸಲು ಭೂಪತಿಯ ಪದವಿಲ್ಲದಿರಲು ಈ ಪರಿಯ ಬವಣೆಗಳ ತಾಳದೆ ಗೋಪ್ಯದಿಂದಿಲ್ಲಡಗಿ ನಿಂತು ಗೋಪಾಲಕೃಷ್ಣವಿಠಲ ಯತಿಗಳ ಗೌಪ್ಯಪೂಜೆಯಗೊಂಬ ವಿಭವಕೆ 5
--------------
ಅಂಬಾಬಾಯಿ
ಬಂದು ನಿಮ್ಮಡಿಗಳ ನಾಶ್ರಯಿಸಿದೆ ಪ್ರಭುವೆ ಭವ ಬಂಧನಗಳ ಬಿಡಿಸಿ ನೀ ಕಾಯೊ ಸದ್ಗುರುವೇ ಪ ಎಲ್ಲೆಲ್ಲಿಯೂ ತಿರುಗಿ ಕಾಯುವರ ಕಾಣದೆಲೆ ತಡಮಾಡದೆಮ್ಮಯ ದುಗುಡಗಳ ಪರಿಹರಿಸಿ ಕರುಣದಿಂದಲಿ ಕಾಯೊ ಗುರುರಾಘವೇಂದ್ರಾ 1 ನಿಶೆ ಹಗಲು ನಿನ್ನನು ಸ್ತುತಿಸಿ ಬೇಡುವೆ ಪ್ರಭುವೆ ಗತಿಗಾಣೆ ನಿನ್ಹರತು ಈ ಪೃಥುವಿಯೊಳಗೆ ಅತಿವ್ಯಥೆಯಲೀ ನೊಂದು ಮತಿಯಿಲ್ಲದಂತಿಹೆನು ತ್ವರಿತದಿಂದಲಿ ಕಾಯೊ ಹೇ ಗುರುರಾಜ ಪ್ರಭುವೇ 2 ಜಗವೆಲ್ಲ ನಿಮ್ಮ ಮಹಿಮೆ ಸಾರುತಿರುವುದ ಕೇಳಿ ಭರದಿಂದ ಬಂದೆನೋ ಗುರುರಾಘವೇಂದ್ರಾ ಇಂದೆಮ್ಮ ಅಪರಾಧಗಳ ಎಣಿಸದೆಲೆ ಸಲಹೈಯ್ಯಾ ಕಾರುಣ್ಯಮೂರ್ತಿ ಶ್ರೀ ಗುರುರಾಘವೇಂದ್ರಾ 3
--------------
ರಾಧಾಬಾಯಿ
ಬಂದು ನಿಲ್ಲೆಲೊ ಮನಮಂದಿರದೊಳು ಹರಿ ಇಂದುವದನ ಆನಂದದಿಂದ ಪ. ಮುಂದಗಮನೆರ ಅಂದದಿ ಕೂಡ್ಯರ- ವಿಂದ ಮಧ್ಯದಿ ಬಹು ಸುಂದರ ವೆಂಕಟ ಅ.ಪ. ಗಜವ ಪಾಲಿಸಿದಂಥ ಭುಜಗಶಯನ ಹರೆ ತ್ರಿಜಗದೊಳಗೆ ದಿಗ್ವಿಜಯ ಮೂರುತಿ ಗೋ- ವ್ರಜವ ಪಾಲಿಸಿ ಭೂಭುಜರ ಪೊರೆದೆ ಅಂ- ಬುಜನೇತ್ರ ಅಜಪಿತ ಭಜಿಸಲಾಪೆನೆ ನಿನ್ನ ಭುಜಗ ಭೂಷಣವಂದ್ಯ ರಜ ತಮೊ ಸತ್ವದಿ ತ್ರಿಜಗವ ಸೃಷ್ಟಿಪೆ ಕುಜನರ ಶಿಕ್ಷಿಪೆ ರಜ ತಮೊ ದೂರನೆ ಸುಜನರ ಪೊರೆಯುವ ಋಜುಗಣವಂದಿತ 1 ವ್ಯಾಪ್ತಾ ಜಗದಿ ನಿರ್ಲಿಪ್ತ ಗುಣಗಳಿಂದ ಆಪ್ತ ಜೀವಕೆ ಸುಷುಪ್ತಿ ಕಾಲದಿ ನೀ ಗುಪ್ತನಾಗಿ ಪೊರೆವ ಶಕ್ತನಹುದೊ ತ್ರಿ- ಸಪ್ತ ಇಂದ್ರಿಯಗಳ ತೃಪ್ತಿಗೊಳಿಸು ನಿನ್ನೊಳ್ ಸಪ್ತ ಋಷಿಗಳಿಂದ ಗುಪ್ತರ್ಚನೆಗೊಂಬೆ ಸಪ್ತಜಿಹ್ವನೊಳು ವ್ಯಾಪ್ತನಾಗಿ ಸುರರ ತೃಪ್ತಿಪಡಿಸುವ ವ್ಯಾಪ್ತ ಮೂರುತಿಯೆ ಸಪ್ತ ಸಪ್ತ ಭುವನೇಶ ಪ್ರಕಾಶ 2 ವೇದಸುತಗೆ ಇತ್ತು ಆದರದಿ ಸುಧೆ ಮೋದದಿ ಸುರರಿಗುಣಿಸಿ ಭೂದೇವಿಯನು ಕಾಯ್ದೆ ಬಾಧಿಸೆ ಖಳ ಸುತನ ಭೇದಿಸಿ ಕಂಭ ಬಂದೆ ಪಾದದಿ ಗಂಗೆ ಪೆತ್ತು ಬಾಧೆ ಕ್ಷತ್ರಿಯರಿಗಿತ್ತೆ ಆದರದಲಿ ಸುಗ್ರೀವನ ಪೊರೆದೆ ಯಾದವ ವಂಶ ಮಹೋದಧಿ ಚಂದ್ರ ಸಾಧಿಸಿ ತ್ರಿಪುರರ ಛೇಧಿಸಿ ಕಲಿಮುಖ- ರಾದ ದುಷ್ಟರ ಸೀಳಿ ಬಾಧೆಯ ಬಿಡಿಸಿದೆ 3 ಪದ್ಮನಾಭನ ತೋರೊ ಪದ್ಮಸಂಭವ ಜನಕ ಪದ್ಮನಾಭನೆ ಹೃತ್ಪದ್ಮ ಮಧ್ಯದಿ ವಾಸ ಪದ್ಮ ಬಾಂಧವ ತೇಜ ಪದ್ಮ ನಯನಕರ ಪದ್ಮದಿಂದಲಿ ನೀ ಪದ್ಮಾವತಿಯ ಕೂಡ್ದೆ ಪದ್ಮವೈರಿಯ ಕೋಟಿ ಮುದ್ದು ಮುಖದ ತೇಜ ಪದ್ಮ ಉದರ ಷಟ್ಪದ್ಮದಿ ವಾಸ ಪದ್ಮ ಸರೋವರ ತೀರವಾಸ ಹೃ ತ್ಪದ್ಮ ಮಧ್ಯದಿ ಭೂಪದ್ಮಿನಿ ಸಹಿತ 4 ಆಪಾರ ಮಹಿಮನೆ ಗೋಪಾಲಕೃಷ್ಣವಿಠ್ಠಲ ಭೂಪರೈವರ ಕಾಯ್ದೆ ದ್ರೌಪದಿ ಮಾನದೊಡೆಯ ನೀ ಪ್ರೀತಿಯಿಂದ ಪೋಗಿ ತಾಪವ ಬಿಡಿಸಿದೆ ವ್ಯಾಪಕನೊ ಜಗಸ್ಥಾಪಕನೊ ಬಹು ರೂಪಕನೊ ದುಷ್ಟತಾಪಕನೊ ಹರಿ ಪಾಪ ಹರಿಸಿ ಕರ್ಮಲೇಪನ ಮಾಡದೆ ಪರಿ ಪರಿಯಿಂದ ಕಾಪಾಡೊ ಭಕ್ತರ5
--------------
ಅಂಬಾಬಾಯಿ
ಬಂದು ನಿಲ್ಲೋ ಶ್ರೀಹರೇ-ಬಂದುನಿಲ್ಲೊ ಪ ಇಂದು ಹಿಂದು ನೀನೆಂದಿಗು ತಂದೆ ಗೋ- ವಿಂದ ಅನಿಮಿತ್ತಬಂಧು ಕಣ್ಣಮುಂದೆ ಅ.ಪ ಸ್ವಾಂಶದಿಂದ ಅಭಿವ್ಯಕ್ತಿಯಾದೆ ಪಂ- ಚಾಂಶತೋರಿ ಸರಸ ಜನನ ಮಾಡಿದೆ ಸ್ವಾಂಶನಾಗಿ ಅವತರಿಸಿ ಮೆರೆವ ಸ- ರ್ವಾಂಶದಿಂದಿಹ ತ್ರಿಂಶ ರೂಪನೇ 1 ಸ್ವಗತಭೇದವಿವರ್ಜಿತನೆನಿಸಿ ತ್ರಿಗುಣಮಯದಿ ಬ್ರಹ್ಮಾಂಡ ನಿರ್ಮಿಸಿ ಅಗಣಿತಮಹಿಮಾಧಾರನಾಗಿ ನಿಂದು ಮಿಗೆ ಶೋಭಿಸುವ ವಿರಾಟಮೂರುತಿಯೆ2 ಕಾರಣನೆನಿಸಿದ ಕರ್ಮನಿವೃತ್ತಿಗೆ ಸಾರವಾದ ಜ್ಞಾನಯೋಗ ಮಾರ್ಗವ ನಾರದಾದಿ ಮಹಾಮುನಿಗಳಿಗರುಹಿದ ನರನಾರಾಯಣ ಬದರಿ ಆಶ್ರಯನೇ 3 ಹಂಸಕಪಿಲ ದತ್ತಾತ್ರೇಯ ರೂಪನೆ ಹಂಸರಹಸ್ಯಗಳೆಲ್ಲವ ಪೇಳಿ ಸಂಶಯ ಬಿಡಿಸಿದೆ-ಜೀವಪರಮಾತ್ಮರ ಅಂಶಗಳರುಹಿದ ಹಂಸಮೂರುತಿಯೆ4 ಅಜಪಿತ ನೀ ಗಜರಾಜನ ಸಲಹಿದೆ ಭಜಿಸಿದ ವಾಲಖಿಲ್ಯರ ಕಾಯ್ದೆ ಅಜಹತ್ಯವು ವೃತ್ರವಧೆಯಿಂದ ಕಾಯ್ವ ಬಿ- ಡೌಜನ ಸಲಹಿದ ಗಜರಾಜ ವರದಾ5 ಪುರುಹೂತನ ಅಹಂಕಾರ ಖಂಡಿಸಿ ಕಿರುಬೆರಳಲಿ ಗೋವರ್ಧನಗಿರಿ ಎತ್ತಿ ಪರಿಪಾಲಿಸಿ ಗೋಬೃಂದವನೆಲ್ಲವ ಸುರರಿಂದ ಪೊಗಳಿಸಿಕೊಂಡೆ ಗೋವಿಂದ6 ಬುಧರರಿಯುಲು ಆ ವೇದ ವಿಭಾಗಿಸೆ ಉದಯಿಸಿ ಮುದದಿಂದ ಬದರಿಯ ಸದನದಿ ಬೋಧಿಸುತ್ತಲಿಹ ಬಾದರಾಯಣನೇ7 ಅಖಿಳಾಂಡಕೋಟಿಬ್ರಹ್ಮಾಂಡನಾಯಕ ವಿಕುಂಠಳೆಂಬೊ ಉದರದಿ ಜನಿಸಿ ಲಕುಮಿರೂಪಿಯಾದ ಸುಂದರಿಯ ಕೂಡ ಭೂ- ವೈಕುಂಠ ನಿರ್ಮಿಸಿದ ವೈಕುಂಠಮೂರುತಿಯೆ 8 ಸತ್ಯವ್ರತನೆಂಬೊ ಮನುವಿನುದ್ಧರಿಸಿ ಉತ್ತಮ ಔಷಧಿಗಳೆಲ್ಲವ ಸಲಹಿದೆ ದೈತ್ಯನಾದ ಉನ್ಮತ್ತನ ಕೊಂದು ಶ್ರುತಿಯ ತಂದಿತ್ತ ಮತ್ಸ್ಯಮೂರುತಿಯೆ 9 ಸುರಭಿನೆವನದಿ ಶರಧಿಮಥಿಸೆ ತಾ ಭರದಿ ಬೆನ್ನೊಳು ಧರಿಸಿಹೆ ಮಂದರ ಗಿರಿಧರನೆನಿಸಿದೆ ಕಮಠರೂಪನೆ 10 ಪ್ರಳಯ ಜಲಧಿಯೊಳು ಇಳೆಯನು ಕದ್ದಾ ಖಳಹಿರಣ್ಯನಾ ಶಿರವ ಚೆಂಡಾಡಿ ಜಲಧಿಯ ಶೋಧಿಸಿ ಇಳೆಯನು ತಂದು ಜಲಜಸಂಭವಗಿತ್ತ ಕ್ರೋಢರೂಪನೆ 11 ದುರುಳತನದಿ ತನ್ನ ತರಳನ ಬಾಧಿಪ ಹಿರಣ್ಯಕಶಿಪುವಿನ ಉದರವ ಬಗೆದು ಶರಣನಿಗಭಯವ ಕರುಣಿಸಿ ತೋರಿದ ಸರ್ವವ್ಯಾಪ್ತನೆಂದರುಹಿದ ನರಹರಿಯೇ12 ಬಲಿಯಿಂದಪಹೃತವಾದ ಸಾಮ್ರಾಜ್ಯವ ಸುಲಭದಿಂದಲಿ ಪುರಂದರಗಿತ್ತು ಸಲಹಿದೆ ಒಲಿದು ಬಲಿಯ ಭಕ್ತಿಗೆ ನೀ ಬಾ- ಗಿಲ ಕಾಯ್ದ ವಟು ವಾಮನನೆ 13 ದುರುಳತನದಿ ಆ ಹೈಹಯರೆಂಬ ನರಪರದುರ್ಮದ ಮರ್ದಿಸಲೋಸುಗ ನೃಪರ ಶಿರವನೆಲ್ಲ ತರಿದು ನಿಗ್ರಹಿಸಿದ ಭಾರ್ಗವ ಮೂರ್ತೇ 14 ಶರಧಿ ಬಂಧಿಸಿ ಸೇತುಕಟ್ಟಿ ಕಪಿ- ವೀರರೊಡನೆ ಆ ರಾವಣನಡಗಿಸಿ ಭೂ ಭಾರವನಿಳುಹಿಸಿ ಭೂಮಿಜೆಯನು ತಂದ ಅ- ಸುರ ಮರ್ದನ ದಾಶರಥಿ ರಾಘವ 15 ವಸುಮತಿಭಾರವನಿಳುಹಲೋಸುಗ ವಸುದೇವಸುತ ಶ್ರೀಕೃಷ್ಣನೆನುತಲಿ ಶಿಶುಪಾಲಾದಿಗಳಾಂತಕನೆನಿಸಿದ ಶಶಿಮುಖಿರುಕ್ಮಿಣಿ ಸಹಿತ ಶ್ರೀಕೃಷ್ಣ 16 ವೇದ ಕರ್ಮಗಳಿಗನರ್ಹರೆಲ್ಲರು ಸಾದರದಿಂದಲಿ ಅಧಮರೆಸಗುತಿರೆ ವೇದವಿರುದ್ದವಾದಗಳಿಂದಲೇ ಮೋಹವ ತೋರಿದೆ ಬುದ್ಧಸ್ವರೂಪನೆ17 ದುರುಳತನದಿ ಇಳೆಯಾಣ್ಮರುಗಳು ಕ್ರೂರತನದಿ ಪರಪೀಡಕರಾಗಿರೆ ಪರಿಹರಿಸಲು ಭೂಭಾರಕ್ಕಾಗಿ ಅವ- ತರಿಸಿ ಮೆರೆಯುವ ಕಲ್ಕಿರೂಪನೆ 18 ಏಕರೂಪ ಅನೇಕರೂಪನೆ ಏಕಮೇವ ನೀ ಪ್ರಕಟ ಮಾಡುವೆ ಪಿನಾಕಿ ಪ್ರಮುಖರು ಏಕದೇಶದಿ ಸಾಕಲ್ಯವ ತಿಳಿಯರೊ 19 ದೋಷದೂರ ಶೇಷಾಚಲವಾಸ ಪೋಷಿಸೊ ನಿನ್ನಯ ದಾಸಜನರ ಸರ್ವ ದೋಷಕಳೆದು ಮನೋಕಾಶದಲಿ ನಿಲ್ಲೊ ಶೇಷಗಿರೀಶ ಶ್ರೀ ವೆಂಕಟೇಶನೆ 20
--------------
ಉರಗಾದ್ರಿವಾಸವಿಠಲದಾಸರು