ಒಟ್ಟು 6051 ಕಡೆಗಳಲ್ಲಿ , 130 ದಾಸರು , 3175 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮನ ನೋಡಿರೈ ಮಂಗಳ ನಾಮನ ಪಾಡಿರೈ ಪ ಪೂಜಿತನ ಸೀತಾನ್ವಿತನ ಅ.ಪ ದಶರಥ ಗೃಹದಿ ಸುಜನರ ಸಲುಹಿ ಬೆಸಗೊಳಲಂದು ಸೀತಾವರನಾ 1 ಚಿಂತಿಸು ರಾಮನ ಶುಭಲಕ್ಷಣಗಳನೇಕ ಕರ್ಮವಿಪಾಕ ದೊಳಗೀ ವಿಷಯಾ- ಖರೆಯ ಯತಿಕುಲವರ್ಯ ಚರಣ ಸುಜನೋದ್ಧರಣ 2 ಕುಂದಣ ಮಣಿಮಯದ ಕಿರೀಟ ಯುಕ್ತಲಲಾಟ ಚಿನ್ಮಯಗಾತ್ರದಿ ಮಿನುಗುವ ರತ್ನಾಭರಣ ಜಿತರವಿ ಕಿರಣ ಹರಣ ಕರುಣಾಪೂರ್ಣ ರಿಪುಕುಲಮಥನಾ 3 ಶುಭಕಾಯಾಕವಿಜನಗೇಯಾ ಹೇಮ ಕೊಳುವ ಮನದೊಳು ಪೊಳೆವ ವೇದಾ ಮನಕತಿಮೋದಾ ಮುನಿ ಸಂಶೇವÀ್ಯ 4 ಶುಭಚರಿಯ ಬಹು ಆ ಮಂದಿರದಿ ಪಾರಾ- ಸುನಾದ ಕೇಳಲು ಮೋದ ಪೊಕ್ಕರು ಗೃಹದಿ 5 ಪೊಂದಿರೆ ಮುದವ ಪುಡಕಿದರಾಗೆ ಬಾಲವ ಹೀಗೆ ಕುಂಡಲಿಶಯನ ಶ್ರೀರಾಮನೆ ದರ್ಶನವಿತ್ತ ಲಕ್ಷ್ಮಣಸಹಿತ6 ಧರೆಯೊಳು ಬಹುಯತಿಕರ ಪೂಜಿತ ಪದಪದುಮಸ- ಧಾಮ ನಿರುತ ಶೇವಿಸುವ ಧರೆಸುರ ನಿಕರಕೆ ಕೊಡುವ ಬೇಡಿದ ವರವ ಶರಣು ಜನಕೆ ಸುರ ತರುವೆನಿಸಿದ ಸುರಪ್ರಿಯ ಕಾರ್ಪರನಿಲಯ ತರು ಪಿಪ್ಪಲಗತ ಶಿರಿನಾರಸಿಂಹನೆ ಈತ ಶ್ರೀರಘುನಾಥಾ7
--------------
ಕಾರ್ಪರ ನರಹರಿದಾಸರು
ರಾಮನ ನೋಡಿರೋ ನಮ್ಮ ಸೀತಾರಾಮನ ನೋಡಿರೋ ಪ ರಾಮನನೋಡುತ ಪ್ರೇಮವ ಸುರಿಸುತ ನಾಮವ ನುಡಿಯುತ ನೇಮದಿ ಬೇಡುತ ಅ.ಪ ಅಜಭವಾದಿಗಳರಸನೀತಾ ಮತ್ತೆ ನಿಜಭಕುತರಿಗೆ ಮುಕ್ತಿಪ್ರದಾತ ತ್ಯಜಿಸಿ ದುಷ್ಟರಸಂಗ ಭಜಿಸಿ ಶಿಷ್ಯರ ಸಂಗ ಭುಜಗಭವವೆಂದರಿತು ನಿಜಸುಖಮೆಲ್ಲಲು 1 ಪಾದ್ಯ ಮತ್ತೆ ನಿತ್ಯಾನಿತ್ಯ ಜಗಸೃಜಿಪ ದೇವದೇವೇಶ ಮುಕ್ತಾಮುಕ್ತಾಶ್ರಯ ಸತ್ಯ ಪ್ರಾಣನ ಹೃಸ್ಥ ಉತ್ತಮೋತ್ತಮನೆಂದು ಎತ್ತಿಕೈಗಳ ಮುಗಿದು 2 ಭಕ್ತಿಯಿಂದಲಿ ನೋಡೆ ಸರ್ವಾಘಹರವೋ ಮತ್ತೆಪಾಡಲು ಕಾಮಿತ ಕರಗತವೊ ಹಸ್ತಿವರದನ ನೋಡೆ ಮತ್ತರಿಗೆ ಸಾಧ್ಯವೆ ವತ್ತುತ ಗೃಹಕೃತ್ಯ ಬೇಗ ಉತ್ತಮರಲ್ಲಿ 3 ಸುಲಭವಲ್ಲವೊ ಇಂಥಾ ಸಮಯ ಘಳಿಸಿ ನೋಡೀದವನೆ ಕೃತಾರ್ಥ ನಿತ್ಯ ಸಲಹುತ್ತಿರುವಂಥ ಅಲವ ಮಹಿಮಾರ್ಣವ ಲಲನೆ ಲಕ್ಷ್ಮಿಯ ನಾಳ್ವ 4 ಸರ್ವನಾಮಕ ನಿವನೂ ಮತ್ತೆ ಸರ್ವಪ್ರೇರಕ ಬಲಖ್ಯಾತ ನಿಹನೂ ಸರ್ವ ಸರ್ವಾಧಾರ ಸರ್ವೇಶ ಶಾಶ್ವತ ಸರ್ವಗುಣಗಣ ಪೂರ್ಣ ಸರ್ವವ್ಯಾಪ್ತನಾದ 5 ಆರಿಲ್ಲ ಸಮವಧಿಕ ಇವಗೇ ಮತ್ತೆ ಆರು ಕಾಣರು ನೆಲೆಯ ಸಾಕಲ್ಯ ಸತ್ಯ ಸಾರವಿಲ್ಲದ ಜಗದಿ ಸಾರನೊಬ್ಬನೆ ಇವನು ತೊರು ಪಾದಗಳೆಂದು ಸಾರಿಬೀಳುತ ಅಡ್ಡ 6 ಶರಣೆಂದ ವಿಭೀಷಣಗೆ ಪಟ್ಟ ಕಟ್ಟಿದನೂ ಕರುಣದಿಂದಲಿ ಶಬರಿಯ ಪೊರೆದವನು ದುರುಳ ಪಾಪಿಯ ದೊಡ್ಡ ಕವಿಯ ಮಾಡಿದ ಮಹಿಮ ಕರುಣ ಬೇಕಾದವರು 7
--------------
ಕೃಷ್ಣವಿಠಲದಾಸರು
ರಾಮನ ಪಟ್ಟದಾನೆ ಎಂದವರು ಬಿಡದಾದರೇನಯ್ಯ ಪ ಎಪ್ಪತ್ತು ಏಳ್ಕೋಟಿ ಕವಿನಾಯಕರಿಗೆಲ್ಲ ಮುಖ ರಾಮಗೆನೀ ಜಪ್ಪಿದಶೂರ ಉದಾರ ವಯ್ಯಾರ 1 ರಾಕ್ಷಸರನ್ನು ಟೊಂಕವ ಮುರಿದ ನಿಶ್ಚಂಕ ಬಿರುದಂಕ್ತ 2 ತನ್ನಯ್ಯನಿಗೋಪ್ಪಿಸಲು ಭಂಜಕ ಅಂಜನ ಪುತ್ರ 3 ಮರಳಿಬಂದು ಇತ್ತೆರಾಮಗೆ ಚೂಡಾಮಣಿಯ ನೀಧೀರ 4 ಹಗ್ಗದಿ ಕಟ್ಟಿ ನಂದಿತಳೆಯಲಿ ನಿಂದಿರಿಸಿ ಪೂಜಿಸುವರೋ 5
--------------
ಕವಿ ಪರಮದೇವದಾಸರು
ರಾಮನಾಮ ಕೀರ್ತನೆ ಮಾಡೊ ಮುದಗೊಡೊ ಪ ಹೃತ್ತಾಮರಸದಿ ನೋಡೋ ಕೊಂಡಾಡೊ ಅ.ಪ ವರಋಷಿ ಎನ್ನಿಸಿದಾತನ ಮರುತಾತ್ಮಜಾದಿ ನುತನ ಸುಚರಿತನ 1 ಬ್ರಹ್ಮಾದಿದೇವ ವಂದ್ಯನಾ ರಾಜೇಂದ್ರನಾ 2 ಭರತ ಶತೃಘ್ನ ಲಕ್ಷ್ಮಣ ಸೇವ್ಯನ ಸರಸಿಜಗಾಪ್ತಜ ಭಾವ್ಯನ ನೃಪಾಗ್ರಗಣ್ಯನಾದನ ವಿನೋದನಾ 3
--------------
ಗುರುರಾಮವಿಠಲ
ರಾಮನಾಮ ಸ್ಮರಣೆಯ ಮಾಡದೆ ನೀ ಪಾಮರನಾಗದಿರೊ ಮನುಜ ಪಾಮರನಾಗದಿರೊ ಪ ತಾಮಸಗುಣಬಿಟ್ಟು ಪ್ರೇಮದಿಂದಲಿ ನಮ್ಮ ಸ್ವಾಮಿಯ ನೆರೆ ನಂಬಿರೋ ಅ.ಪ ದೇಹವನಿತ್ಯವೋ ಮೋಹಪಡಬ್ಯಾಡವೋ ಲೇಶ ಸುಖ ಕಾಣೆನು 1 ಹಗರಣವಹ ವ್ಯಕ್ತಿಗಳನು ನಂಬುತಾ ನಗೆಗೀಡಾಗದಿರೊ 2 ಹೊರಗೊಳಗಿದ್ದು ನಮ್ಮ ಗುರುರಾಮವಿಠ್ಠಲ ಕರತಳವಾಗುವುದು3
--------------
ಗುರುರಾಮವಿಠಲ
ರಾಮನಾಮದಿ ಪಾಮರರಿಗೆ ಪ್ರೇಮ ಪುಟ್ಟುವುದೆ ಪ. ಭೃತ್ಯ ನ್ಯಾಯವರಿಯದ ಕಾಮಿಗಿದರೊಳು ನೇಮ ಬಪ್ಪುದೆ ಅ.ಪ. ದಾಶರಥಿ ಎನಿಸಿ ಜಗದೊಳು ಶ್ರೀಶನವತರಿಸೆ ಕೌಶಿಕನ ಮಖ ಘಾಸಿಗೈಯ್ಯುವ ದೋಷಿಗಳ ತಾ ನಾಶಗೈಸಿದ 1 ಶಿಲೆಯ ಪೆಣ್ಗೈದು ಲಲನೆ ಸೀತೆಯ ಒಲುಮೆಯಿಂ ವರಿಸಿ ಕುಲವನಳಿದನ ಛಲವ ಭಂಗಿಸಿ ಲಲನೆ ಸಹಿತದಿ ನೆಲಸೆ ಪುರದಲಿ 2 ಅನುಜ ಸ ಹಿತ ವನಕೆ ಬರೆ ಖ್ಯಾತಿ ರಾವಣನಾ ತಳೋದರಿ ಪ್ರೀತಿಸಲು ವಿಘಾತಿಗೈಸಿದ 3 ಮಾಯಾಮೃಗ ಕಂಡು ಪ್ರಿಯ ನೀಡೆನೆ ಸಾಯಕವನೆಸೆಯೆ ಕಾಯ ಬಿಡುತಿರೆ ಹೇಯ ರಾವಣ ಪ್ರಿಯಳನುಯ್ಯೆ ನೋಯ್ದ ಮನದಲಿ 4 ಬೆಟ್ಟವನೆ ಕಂಡು ಕುಟ್ಟಿ ವಾಲಿಯ ಪಟ್ಟ ಕಪಿಗಿತ್ತು ಶ್ರೇಷ್ಠ ಹನುಮಗೆ ಕೊಟ್ಟು ಉಂಗುರ ಪಟ್ಟದರಸಿಗೆ ಮುಟ್ಟಿಸೆಂದ 5 ಕೇಳಿ ಶ್ರೀ ವಾರ್ತೆ ತಾಳೀ ಹರುಷವ ಬೀಳು ಕೊಂಡಲ್ಲಿಂ ತಾಳೆ ಕೋಪವ ಕೇಳಿ ವನಧಿ ಸೀಳು ಆಗಲು ಶಿಲೆಯ ಬಿಗಿದ 6 ದುಷ್ಟ ರಾವಣನ ಕುಟ್ಟಿ ಶಿರವನು ಪಟ್ಟದರಸಿ ಕೂಡಿ ಶ್ರೇಷ್ಠ ಭರತಗೆ ಕೊಟ್ಟು ದಶರ್Àನ ಪಟ್ಟವಾಳಿದ ದಿಟ್ಟಯೋಧ್ಯೆದಿ 7 ರಾಮ ರಾಮನೆಂಬಾ ಹನುಮಗೆ ಪ್ರೇಮದಿಂದೊಲಿದು ಧಾಮ ಅಜಪದ ನೇಮಿಸಿ ಮುಂದೆ ಸೋಮನೆನಿಸಿದ ಭಾನು ವಂಶಕೆ8 ಬೆಟ್ಟದೊಡೆಯನ ಇಷ್ಟು ಮಹಿಮೆಯ ಮುಟ್ಟಿಮನ ಭಜಿಸಿ ದಿಟ್ಟ ಗೋಪಾಲಕೃಷ್ಣವಿಠ್ಠಲ ಶ್ರೇಷ್ಠನೆನ್ನುವ ಶ್ರೇಷ್ಠಗಲ್ಲದೆ 9
--------------
ಅಂಬಾಬಾಯಿ
ರಾಮನಾಮವ ನುಡೀವೆ ಶ್ರೀರಾಮ ನಿನ್ನನು ಪಿಡೀವೆ ಪ ಧಾಮ ನೀ ಬಿಟ್ಟೇಳು ಸುರಧಾಮನಾ ಪಿಡಿ ಕೇಳು ಆಮ್ಯಾಲ ಪೇಳು ಕಾಮಿನೀಯಾತ್ಮಜರಗತಿ ಯಿನ್ನಾವುದೈ ಈ ಪರಿಯು ಮಾಡಲು ರಾಮರಾಮನುತಡಿಗಡಿಗೆ ನುಡಿದೀ ಮನೆಯೆ ಭವವೀಯವರಿವೆನು 1 ರಥಕೆ ಕುದುರೆಗಳೆರಡು ಭವರಥಕೆ ದಂಪತಿ ಜೋಡು ರಥ ನಡೆಸಿ ನೋಡು ಪಥವು ಗಮನಕೆ ಸುಲಭವಲ್ಲವೆ ಇತರ ಭಯವದಕೆನಿತಹುದು ಪೇಳ್ ಸತತನಿಲಸುತ ಗತಿಯ ತೋರಲು ಪತನೆಡರುಗಳ ಕಥೆಯನರಿಯಿಸು 2 ಪೆರ್ಮರವೆ ನೀ ಪುಟ್ಟಿ ಸಲೆಗಾರ್ನೆರಳು ಮಾಡಿಟ್ಟಿ ಮೂರ್ಲೋಕ ತೊಟ್ಟ ಶೇರಲದ ನರವಿರ್ಹಗಳು[?] ಹರಿಹರಿಯೆನುತ ಬಾಯ್ತೆರದು ನುಡಿಯಲು ಸುರತರು
--------------
ನರಸಿಂಹವಿಠಲರು
ರಾಮನಾಮವ ನೆನೆ ಮನವೆಪ ರಾಮ ಎಂದವನೆ ಧನ್ಯನೆಂದು ಶ್ರುತಿತತಿಗಳು ಪೊಗಳುತಿರೆ ಅ ತರುಣತನದಿ ದಿನ ದಾಟಿತು ಸುಮ್ಮನೆಶರೀರದೊಳು ಸ್ವರವಾಡುತಲೆತರುಣಿ ಸುತರು ಸಂಸಾರವೆಂಬಶರಧಿಯೊಳಗೆ ಮುಳುಗಿರದೆ ಮನವೆ 1 ಬಗೆಬಗೆ ಜನ್ಮದಿ ಜನಿಸಿದೆ ನಾಳೆಗೆಸಿಗುವುದೆ ನಿಜದಿಂ ಈ ಸಮಯಮುಗುಧನಾಗಿ ಮತ್ತೆ ಜನಿಸಿ ಬರುವುದುಸೊಗಸು ಕಾಣುವುದೆ ಛಿ ಮನವೆ 2 ಚಿಂತೆಯನೆಲ್ಲ ಒತ್ತಟ್ಟಿಗಿಟ್ಟುಅಂತರಂಗದಲಿ ಧ್ಯಾನಿಸುತಕಂತುಪಿತ ಕನಕಾದಿಕೇಶವನಎಂತಾದರೂ ನೀ ಬಿಡಬೇಡ ಮನವೆ3
--------------
ಕನಕದಾಸ
ರಾಮನಾಮವ ಪಾಡೆಲೊ ಮನುಜಾ ಪ ರಾಮನಾಮವ ಪಾಡಿ ಈ ಸಭೆಯೆಲ್ಲಾ ನೋಡಿ ಕಾಮಾಕಲಭಿಮಾನನು ಕಾಮಿನಿಗೇಳಿದ ಸೀತಾ 1 ಸಾಧಿಸಿದಾರೊಳು ನೀ ಸಂಭ್ರಮವಾಗೊ ಯೆಲೊ ಶೋಧಿಸಿ ನಿನ್ನೊಳು ನಿಜಸಾಧನ ಕೇಳುವ ಸೀತಾ 2 ಇಂತೀ ಪರಿಯೊಳು ಮಹದಂತರವಿಹುದಿದಾ ಹಂತವರ ಕಂಡು ನೀ ವೇದಾಂತದೊಳು ನಿಂದು 3 ಭರತಪುರೀಶನನ್ನು ಮರೆತರಾಗುವುದುಂಟೆ ಅರಿತು ನೋಡಿಕೊಂಡು ನೀ ಪರಮತತ್ವವಿದೆಂದು 4
--------------
ಚನ್ನಪಟ್ಟಣದ ಅಹೋಬಲದಾಸರು
ರಾಮನಾಮವನು ನೆನಿಯಬಾರದೆ | ನೇಮದಿ ಮನವೆ ಸದ್ಗತಿಯ ತೋರದೆ ಪ ಹೃತ್ತಾಪ ದೂರಮಾಡಿ ಶಾಂತಿಸುಖವಿತ್ತದರಿಯಾ 1 ಜಲದೊಳು ತೇಲಿಸಿದನು ಅಚಲಗಳ | ಸುಲಭದುದ್ದರಿಸಿತು ವಿಪಿನಚಾರಿಗಳಾ 2 ಈ ಮಹಿಯೊಳು ಮಹಿಪತಿ ಪ್ರೀಯನಾ | ನಾಮನಿಧಾನಕ ಸರಿಯ ಕಾಣೆ ನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮನಾಮವೆನ್ನು ಮನವೆ ನಿನ್ನ ಪಾಮರಪಾತಕನಾಶನವೆ ಬರಿನೇಮವ್ರತಗಳು ನಿಷ್ಫಲವೆ ಪರಂಧಾಮ ಭಜನೆ ಮೋಕ್ಷಪ್ರದವೆ ¥ಶೀಲತನವುನೀಬಿಡಬೇಡಾ ನಾನ್ ಶೀಲನೆಂದುನೀಹೇಳಬೇಡಾ ಶ್ರೀ ಲೋಲನಸ್ಮರಣವ ಮರಿಬೇಡಾ ಇಹ ಜಾಲಿಮನಸಿನಲಿ ತರಬೇಡಾ 1ಕಾಲದೇಶವನನುಸರಿಸಿ ನೀನು ಲೀಲೆಯಾಗಿ ಕ್ರಮದಲಿ ನಡಸಿ ಶ್ರೀಫಾಲಯನಸ್ತುತ ಘನತೆನಿಸೀ ಏವೇಳೆಯು ಶ್ರೀರಾಮನ ಜಪಿಸಿ 2ಕುಲಧನಯೌವನ ಬಲದಿಂದಾ ನಿಜ ತಿಳಿಯದೆಸುಮ್ಮನೆ ಮದಬಂದದಲಿಸಿಲುಕದೆ ಸುಜ್ಞಾನದಿಂದಾ ಗುರಿ ತಿಳಿದುಭಯಭೇದಸ್ಥಿತಿ ಚಂದಾ 3'ಮಲತುಲಸಿರಾಮನೆನ್ನುವದು ರಂಗಸ್ವಾ'ುದಾಸನಿಗೆ ಪ್ರಾಪ್ತವದುಸಮರಸ ಸದ್ಗುಣ ಲಭಿಸುವದು ಸರ್ವ ಶೇಷೈಕ್ಯವು ಒಂದಾಗುವದು 4
--------------
ಮಳಿಗೆ ರಂಗಸ್ವಾಮಿದಾಸರು
ರಾಮನೆಯಖಿಲ ಜಗತ್ಸ್ವಾಮಿ [ಯೌ] ದಾರ್ಯ ಜಯತು ಪ ಸಾಮಗಾನಪ್ರಿಯ ಕೋಮಲಶರೀರ ಜಯ ತಾಮರಸನಯನ ಲಕ್ಷ್ಮೀ ಮನೋಹರನೆ ಜಯ ಮಾಧವ ಮೂರ್ತಿ ಕೀರ್ತಿ ಜಯ ನೇಮಿ ಜಗದಂತರ್ಯಾಮಿ ಚಾತುರ್ಯ ಜಯತು 1 ರಾಮಕೃಷ್ಣ ಮುರಾರಿ ಜಯತು ಮೇಘ ಶ್ಯಾಮ ಅಚ್ಯುತಾನಂತ ಜಯತು ನಿ- ಸ್ಸೀಮ ಲೋಕಶರಣ್ಯ ಜಯತು ಸಾರ್ವ- ಭೌಮ ವಿರಾಡ್ರೂಪ ಜಯ ಜಯತು 2 ಶ್ರುತಿ ಸ್ತೋಮ ಸಂಸ್ತುತ ಜಯ ಜಯತು ವೈಕುಂ- ಠೇತಿ ಸುಕ್ಷೇಮ ಲೋಕಾರಾಧ್ಯ ಜಯತು ಸುತ್ರಾಮಾರ್ಚಿತಾಂಘ್ರಿಯುಗಳ ಜಯತು ಜ್ಯೋತಿ ಪರಂಜ್ಯೋತಿ ನಿರಾಮಯ ವೇಲಾಪುರೀಶನೆ ಜಯತು3
--------------
ಬೇಲೂರು ವೈಕುಂಠದಾಸರು
ರಾಮಪದಸರಸೀರುಹಭೃಂಗರೋಮಕೋಟಿಲಿಂಗ ಅಸುರಮದಭಂಗ ಪ ಒಂದು ನಿಮಿಷಕೆ ಪೋಗಿ ಸಂಜೀವನವ ತಂದೆÀಂದುಗೊರಳನ ಭಜಕ ನಂದನನ ನೀ ಕೊಂದೆಇಂದ್ರಸೂನುವಿನ ಭಕುತಿಗೆ ರಥಾಗ್ರದಿ ನಿಂದೆಮಂದರಧರನ ಮುಂದೆ ಸುರ-ವೃಂದವರಿಯೆ ಪುರವ ಹೋಮಗೈದು ಬಂದೆ 1 ಉರುಗದೆಯಿಂದ ಕೌರವನ ತೊಡೆಗಳ ತರಿದೆಧುರದಲ್ಲಿ ಮಾಗಧನ ಮರ್ಮಸ್ಥಳ ಮುರಿದೆದುರುಳ ದುಶ್ಶಾಸನನ ಕರುಳುಗಳನೆ ಹಿರಿದೆಕರವೆತ್ತಿ ಬಲವೆರಡ ಕರೆದೆಗುರು ಮಧ್ವಮುನಿಯಾಗಿ ಶಾಸ್ತ್ರ್ರಗಳನೊರೆದೆ 2 ಧರೆಯೊಳತ್ಯಧಿಕ ಸೋದೆಪುರನಿವಾಸಸಿರಿ ಹಯವದನನ ಪರಮಪ್ರಿಯ ದಾಸನೆರೆನಿನ್ನ ನಂಬಿರ್ದ ಭಕ್ತರಿಗೆ ಕೊಡು ಲೇಸಕರುಣವಾರಿಧಿ ಪುಣ್ಯವಾಸ ಜಗಕೆಗುರುವೆನಿಸಿ ಮೆರೆದೆ ಮುಖ್ಯಪ್ರಾಣೇಶ 3
--------------
ವಾದಿರಾಜ
ರಾಮಭಜೇ ತೇ ಪದಯುಗಳಂ ಸೀತಾ ಪ ರಾಮಭಜೇ ತೇ ಪದಯುಗಳಂ ರಾಮ ಸುಂದರ ಘನಶ್ಯಾಮ ರಘೂದ್ವಹ ಅ.ಪ ದಶರಥ ಹೃದಯಾನಂದಕರಂ ತ್ರಿ ದಶಗಣ ಚಿತ್ತಾಮೋದಕರಂ 1 ಪೂರಿತ ಕೌಶಿಕಜನಂ ಸಂ ತಾರಿತ ಗೌತಮ ಲಲನಾಂ 2 ಖಂಡಿತ ಶಂಕರಚಾಪಂ ಪರಿ- ದಂಡಿತ ಭಾರ್ಗವ ಕೋಪಂ 3 ಸ್ವೀಕೃತ ಜಾನಕೀಹೃದಯಂ ದೂ ರೀಕೃತ ಪಾತಕನಿಚಯಂ 4 ಪಾಲಿತ ಮಾತಾಪಿತೃ ವಚನಂ ಸಂ ಲಾಲಿತ ಮುನಿಜನ ಸ್ತುತಿರಚನಂ 5 ಭರತ ಸಮರ್ಪಿತ ನಿಜರಾಜ್ಯಂ ಮುನಿ ವರಭಾರದ್ವಾಜಾರ್ಪಿತ ಭೋಜ್ಯಂ 6 ದಂಡಕಾರಣ್ಯಂ ಪಾವನಚರಣಂ ಉ- ದ್ದಂಡ ವಿರಾಧಾ ಪಾತಕಹರಣಂ 7 ಕುಂಭಜಾರ್ಪಿತ ಶರಕೋದಂಡ ಸಂ ರಂಭ ನಿರ್ಜಿತ ರಾಕ್ಷಸದಂಡಂ 8 ಪಂಚವಟೀತಟ ಕೃತವಾಸಂ ದೃ ಗಂಚಲ ಧೃತಗಜದುಲ್ಲಾಸಂ 9 ಶೂರ್ಪನಖೀ ವಚನಾಲೋಲಂ ಸಹ ಜಾರ್ಪಿತ ವಿವಿಧಾಯುಧ ಜಾಲಂ 10 ರೂಪನಿರ್ಜಿತ ಸುಮಬಾಣಾಂಗಂ ವಿ ರೂಪಿತ ದುಷ್ಟ ಶೂರ್ಪನಖಾಂಗಂ 11 ಖರತರ ಖರದೂಷಣಕಾಲಂ ಸುರ ನರವರ ಮುನಿಗಣ ಪರಿಪಾಲಂ 12 ಮಾಯಾಮೃಗಾರ್ಪಿತ ಬಾಣವರಂ ಜ- ಟಾಯು ಸಂಪಾದಿತ ಲೋಕವರಂ13 ರಾವಣಹೃತ ನಿಜಪತ್ನೀಕಂ ಲೋ- ಕಾವನಗತ ಕೋಪೋದ್ರೇಕಂ14 ಸಾಧಿತ ಶಬರೀ ಮೋಕ್ಷಕರಂ ಕ- ಬಂಧ ಬಂಧನ ಮೋಚನ ಚತುರಂ 15 ವಾತ ತನೂಭವ ಕೃತಸ್ತೋತ್ರಂ ಪಂ ಪಾತಟ ನಿರ್ಮಿತ ಸುಕ್ಷೇತ್ರಂ 16 ಶಿಕ್ಷಿತ ಸಂಕ್ರಂದನ ತನುಜಂ ಸಂ- ರಕ್ಷಿತ ಚಂಡಕಿರಣ ತನುಜಂ 17 ಸೀತಾಲೋಕನ ಕೃತಕಾಮಂ ನಿಜ ದೂತಾಮೋದನ ಸುಪ್ರೇಮಂ 18 ನಿಜಕರ ಭೂಷಣ ದಾತಾರಂ ಧುರ ವಿಜಯ ವನಾಲಯ ಪರಿವಾರಂ 19 ಧೂತಾಹೃತ ಶುಭದೃಷ್ಟಾಂತಂ ವಿ- ಜ್ಞಾತ ನಿಜಸ್ತ್ರೀ ವೃತ್ತಾಂತಂ 20 ಭೀಷಣ ಜಲನಿಧಿ ಬಂಧಕರಂ ವಿ ಭೀಷಣ ಸಂರಕ್ಷಣ ಚತುರಂ21 ಶೋಷಿತ ರಾವಣ ಜಲಧಿಂ ಸಂ- ತೋಷಿತ ದೈವತಪರಿಧಿಂ 22 ಸೀತಾ ಸಮಾಶ್ರಿತ ವಾಮಾಂಕಂ ಪರಿ- ಪಾತಕ ನಿಜನಾಮಾಂಕಂ 23 ಸ್ವೀಕೃತ ಸಾಕೇತಾವಾಸಂ ಅಂ- ಗೀಕೃತ ಮಾನುಷವಿಲಾಸಂ 24 ವರವ್ಯಾಘ್ರ ಪ್ರಭೂಧರ ಕಲ್ಪತರುಂ ಶ್ರೀ ವರದವಿಠಲಮತಿಶಯ ರುಚಿರಂ 25
--------------
ವೆಂಕಟವರದಾರ್ಯರು
ರಾಮಮಂತ್ರದ ನೆನಪು ಮನಕಂಟಬೇಕು ರಾಮನಾಮದಿ ರಸನೆ ನಲಿಯುತಲಿರಬೇಕು ಪ ರಾಮಮೂರ್ತಿಯ ಕಣ್ಣು ಕಾಣುತಲಿರಬೇಕು ರಾಮಕಥೆಯ ಕಿವಿ ಕೇಳುತಲಿರಬೇಕು ಅ.ಪ ರಾಮಪಾದದ ತೀರ್ಥ ಕಂಠಕಿಳಿಯಬೇಕು ರಾಮ ಪ್ರಸಾದವು ತುಳಸಿಯಾಗಿರಬೇಕು ರಾಮನ ನಿಲಯವೇ ಕ್ಷೇತ್ರವೆನಿಸಬೇಕು ರಾಮನ ಭಜನೆಯೆ ದಿನಚರಿಯಾಗಬೇಕು 1 ರಾಮನಯೋಧ್ಯೆಯೆ ಹೃದಯವಾಗಲಿಬೇಕು ರಾಮಮಂತ್ರದ ಜಪ ಚಿತ್ತದಿ ನಿಲಬೇಕು ರಾಮನೇ ಮಾಂಗಿರಿರಂಗನೆನಲಿಬೇಕು ರಾಮಗೆ ಸಕಲವ ಅರ್ಪಿಸಬೇಕು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್