ಒಟ್ಟು 3371 ಕಡೆಗಳಲ್ಲಿ , 119 ದಾಸರು , 2565 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರುಷವಾಯಿತು ಮನಕೆ ಪ. ನಿರುತದಿ ಎನ್ನಯ ಹೃದಯದಲ್ಲೇ ನಿಂದು ಶ್ರೀ ಅನುದಿನ ಅ.ಪ. ತ್ರೇತ್ರಾಯುಗದಲಿ ಜನಿಸಿ ರಘುಪತಿಯ ದಾಸನೆಂದೆನಿಸೆ ಸೀತೆಗೆ ಉಂಗುರವಿತ್ತು ಶರಧಿಯ ಲಂಘಿಸಿ ಮಾತೆಯ ರತ್ನ ರಘುನಾಥ ಗೊಪ್ಪಿಸಿದೆಯೋ 1 ದ್ವಾಪರ ಯಗದಲಿ ಕುಂತಿಯ ಕುಮಾರನೆಂದೆನಿಸಿ ಪಾಪಿ ರಕ್ಕಸರನು ಸಂಹಾರ ಮಾಡಿ ಪ್ರಖ್ಯಾತಿಯ ಪಡೆದು ಭೀಮನೆಂದೆನಿಸಿ 2 ಮೂರನೆ ಅವತಾರದಿ ಮುನಿ ಮಧ್ವರೆಂದೆನಿಸಿ ಮಾರಮಣನ ಗುಣಗಳ ಪೊಗಳುತಲಿ ಮೂರುತಿ ರುಕ್ಮೀಣೀಶ ವಿಠಲನ ಕರುಣದಿ 3
--------------
ಗುಂಡಮ್ಮ
ಹಲವು ಚಿಂತೆ ಮರೆವುತಿದೆ ಹರಿ ನೆನೆದರೆ ನಮ್ಮ ಕುಲವೆ ಉದ್ಧಾರವಾಗುವ ಕಾಲವೊ ಪ ಕೊಲೆ ಅನೃತ ಕಳವು(ದಶಬಾರ ಪಟ್ಟಾರ) [?] ಸಲೆ ಬಯಸಿ ಸರ್ವರಲಿ ನೆನೆವುತಿದ್ದೆ ಒಲಿದು ವೈಕುಂಠಪತಿ ಒಮ್ಮೆ ನೆನೆದರೆ ಮನಕೆ ಬಲು ಹರುಷವಾಗುವ ಭಾಗ್ಯವೆಲ್ಯೊದಗಿತೊ 1 ಸತ್ಕರ್ಮಗಳ ಲೇಶ ಸ್ವಪ್ನದಲಿ ತಿಳಿಯದು ಮತ್ತತನದಲಿ ನಡೆದ ಮೂರ್ಖನಿಗೆ ಎತ್ತಲಿಂದೊದಗಿತೊ ಎನಗೆ ತಿಳಿಯದು ದೇವ ಉತ್ತಮನ ನೆನೆನೆನೆದು ಉಬ್ಬೇರುತಿಹದೊ 2 ಬಂದ ಕಾರ್ಯವ ಬಿಟ್ಟು ಮಂದಮತಿತನದಿಂದ ಬೆಂದ ದುರ್ವಿಷಯದಲಿ ಬಳಲುತಿದ್ದೆ ತಂದೆ ಕದರುಂಡಲುಗಿ ಹನುಮಯ್ಯನಾ ಪಾದ ಹೊಂದಿದಾ ನೆವದಿಂದ ಹೊಸ ಪರಿಯ ಕಂಡೆ 3
--------------
ಕದರುಂಡಲಗಿ ಹನುಮಯ್ಯ
ಹಸೆಗೆ ಬಾರೊ ಹರುಷಬೀರೊ ಬಿಸಜನಾಭನೇ ಪ ಶಶಿಯ ಸೋದರಿ ಸಹಿತವಾಗಿ ಶಾಮಲಾಂಗನೇ ಅ.ಪ ರತ್ನಖಚಿತ ಪೀಠವಿರಿಸಿ ರಮಣಿ ಮಣಿಯರೂ ಕುತ್ನಿ ಪಟ್ಟಾವಳಿಯ ಹಾಸಿ ಕೋರಿ ಪ್ರಾರ್ಥಿಪರೂ 1 ಭೇರಿ ಮೃದಂಗ ನಾಗಸ್ವರ ನಗಾರಿ ಕಹಳೆಗಳ್ ಧಾರುಣಿ ಸುರವೇದ ಘೋಷ ವಿಸ್ತಾರವಾಗಿರಲ್ 2 ಹಳದಿ ಕುಂಕುಮಾಕ್ಷತೆ ಗಂಧ ಕಳಶ ಕನ್ನಡಿ ಹೊಳೆಯೆ ತಟ್ಟಿಯೋಳ್ ಸುತ್ತ ಜ್ಯೋತಿ ಬೆಳಗುವುದು 3 ಮುದದಿ ನಸು ನಗುತ ಬಲದ ಪದವು ಮುಂದಾಗಿ 4 ಶರಣ ಜನರಭೀಷ್ಟಗಳನು ಸಲಿಸುವಾತನೇ ಗುರುರಾಮವಿಠಲ ಸರ್ವೇಶ ಪುರುಷೋತ್ತಮನೆ 5
--------------
ಗುರುರಾಮವಿಠಲ
ಹಾಲು ಮಾರಲು ಪೋದೇವಮ್ಮ ಗೋಕುಲದೊಳ- ಗ್ಹಾಲು ಮಾರಲು ಪೋದೆವಮ್ಮ ಹಾಲು ಮಾರುವ ಧ್ವನಿ ಆಲಿಸಿ ಕೇಳುತ ಬಾಲಕೃಷ್ಣ ಬಹು ಲೀಲೆ ಮಾಡುತ ಬಂದಪ ಹಸಿರು ಜರದ ಸೀರೆಯನುಟ್ಟು ಕುಸುರಿಕಂಕಣ ಎಸೆವೊ ಹವಳದ ಹಿಂಬಳೆ ಕಟ್ಟು ಮೊಸರಿನ ಕುಂಭ ಕÀುಸುಮ ಮಲ್ಲಿಗೆಯ ಮುಡಿಯಲ್ಲಿಟ್ಟು ಶಶಿವದನೆಯರೆಲ್ಲ ಚೆಂದದಿ ಬರುತಿರೆ ಕುಸುಮನಾಭ ಮುಸುಗೆಳೆದು ಮೊಸರು ಸುರಿದ1 ಬಣ್ಣ ಬಣ್ಣದ ಸೀರೆಯನುಟ್ಟು ಮುತ್ತಿನ ಬಟ್ಟು ಹೊಳೆವೊ ಕಸ್ತೂರಿ ತಿಲಕವನಿಟ್ಟು ಹಾಲಿನಕುಂಭ ಸಣ್ಣಮಲ್ಲಿಗೆ ಮುಡಿಯಲಿಟ್ಟು ಚೆನ್ನಾರ ಚೆಲುವೇರು ಚೆಂದದಿ ಬರುತಿರೆ ಕಣ್ಣು ಸನ್ನೆಮಾಡಿ ಕರೆದು ಮುದ್ದಿಡುವ 2 ಮುಂದೆ ಮುಂದಾಗಿ ಹೋಗುತಿರಲು ಹಿಂದ್ಹಾಲಿನ್ಹರವಿ- ಗೊಂದೊಂದ್ಹರಳು ಮೀಟುತಿರಲು ಧಾರೆಗೆ ಬಾಯಾ- ನಂದದಿಂದೊಡ್ಡಿ ಕುಡಿಯುತಿರಲು ಸÀಂದಣಿಯೊಳು ನಾವು ಒಂದರಿಯದಲೆ ಬಂದಿಳುಹಲು ಬರೀ ಗಡಿಗೆ ಕಾಣಮ್ಮ 3 ಕಡಗೋಲಿಂದೊಡೆದÀು ಗಡಿಗೆಯನು ಬಡವರ ಬೆಣ್ಣೆ ಒಡಲಿಗೆ ಕದ್ದು ತಿಂಬುವುದೇನು ಕಂಡರೆನಗಂಡ ಬಡಿದÀರಿನ್ನೇನು ಮಾಡುವೆ ನೀನು ಗಡಿಬಿಡಿ ಮಾಡುತ ಕತ್ತಲ ಮನೆಯೊಳು ತÀುಡುಗನಂತೆ ತಿರುಗಾಡುವ ತಾನು 4 ಸಿಟ್ಟು ಮಾಡುವುದ್ಯಾತಕಮ್ಮ ಶ್ರೀ ರಮಣನ ಬಿಟ್ಟು ಬಾಹುವುದೆ ಲೇಸಮ್ಮ ಭೀಮೇಶಕೃಷ್ಣನ ಕಟ್ಟಿ ಹಾಕುವುದೆ ಲೇಸಮ್ಮ ಪಟ್ಟುಮಾಡಿ ಪರಹೆಂಗಳೇರೊಳು ಕ- ಣ್ಣಿಟ್ಟ ಮ್ಯಾಲೆ ಒಂದಿಷ್ಟಾದರು ಬಿಡ5
--------------
ಹರಪನಹಳ್ಳಿಭೀಮವ್ವ
ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ ನಿತ್ಯ ಹಾಡಿ ಪ ಮನುಜನ್ನ ಭೋಕ್ತರಿಕಾಯೈದಿ ಧನದಾತ ಸವಸನ ಭೂಷಣ ವಿದ್ಯಾ ಕನಕ ವಿನಯದಿಂದಲಿ ಇಲ್ಲಿ ತನಕ ಬಂದು ಘನವಾಗಿ ಬೇಡುವರು ಮುಕ್ತಿ ಅಹಿಕಾ 1 ಪಾದ ಕರ್ಮ ಭೂ ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು ಪಾವಮಾನಿ ಮತ ಪೊಕ್ಕು ಸುಳಿದು 2 ಒಂದೊಂದು ಪರಿಯಲ್ಲಿ ಸಾಗಿ ಸಾರಿ ನಿಂದಿರದೆ ಇಪ್ಪದು ಕಾವ ಲೇಸಾಗಿ ಅಂದದಿಂದಲಿ ಮೌಳಿ ತೂಗಿ ವೇಗ ಕುಂದನಿಷ್ಟವಾಯಿತು ತಾನೆ ಪೋಗಿ3 ಬೇಕಾದರ್ಥವ ಕೊಡುವದು ವಾಕುವರ ಸಿದ್ಧಿ ಲೋಕ ತುಂಬಿದೆ ಇದೆ ಸುಧಿಕೀರ್ತಿ ತಾ ಕೊಂಡಾಡಿದರಾಗೆ ಬಲು ಚಿತ್ತ ಶುದ್ಧಿ 4 ಸತ್ಯಾಗಿ ಸತ್ಯಬೋಧಯತಿ ಕೈಯ ಗುರು ಸತ್ಯಪ್ರೀಯ ಸ್ತೌತ್ಯರಾಮನ್ನ ಹಾವಿಗೆಯ ನಂಬೆ ಭೃತ್ಯವತ್ಸಲ ವಿಜಯವಿಠ್ಠಲ ಸಹಾಯ5
--------------
ವಿಜಯದಾಸ
ಹಿಗ್ಗದಿರು ಹಿಗ್ಗದಿರು ಮನುಜಪಶುವೆ | ಮುಗ್ಗಿತಗ್ಗುವುದು ಮುಂದರಿಯದಲೆ ಮರುಳಾದೆ ಪ ಆಯುದಲಿ ದ್ರೋಣಸುತ ಕೃಪ ವಿಭೀಷಣನೇನೊ | ಶ್ರೇಯದಲಿ ದಶರಥ ನಹುಷನೇನೊ || ಈಯುದ್ದಕೆ ಮಯಾರ ಧ್ವಜ ಶಿಬಿ ಬಲಿಯೇನೊ | ಮಾಯಾ ಬಿಡುವಲ್ಲಿ ಜಡ ಭರಿತ ನೀನೇನೊ 1 ಶೂರತ್ವದಲಿ ಭೀಷ್ಮ ಅಭಿಮನ್ಯು ನೀನೇನೊ | ಘೋರ ತಪಸಿನಲಿ ವಿಶ್ವಾಮಿತ್ರನೇನೊ || ವಿರುಕುತಿಯಲಿ ಸುರಸೈನ್ಯ ನಾಯಕನೇನೊ | ಹಾರುವ ಬಿಂಕದಲಿ ಗರುಡ ನೀನೇನೊ 2 ಬಲದಲ್ಲಿ ಬಲರಾಮ ಶಲ್ಯ ಕೀಚಕನೇನೊ | ತಿಳಿವಳಿಕೆಯಲಿ ವಿದುರ ಸಂಜಯನೇನೊ || ಒಲಿದು ಪಾಡುವಲಿ ನಾರದ ತುಂಬುರನೇನೊ | ಛಲ ಮಾಡುವಲ್ಲಿ ಧ್ರುವರಾಯ ನೀನೇನೊ 3 ಭಕುತಿಯಲಿ ಪ್ರಹ್ಲಾದ ಪುಂಡರೀಕನೇನೊ | ಭುಕುತಿಯಲಿ ಅಗಸ್ತ್ಯ ಬಕ ನೀನೇನೊ || ಉಕುತಿಯಲಿ ಸೂತ ಸಹದೇವ ಶೌನಕನೇನೊ | ಶಕುತಿಯಲಿ ವಾಲಿ ಯಮರಾಯ ನೀನೇನೊ 4 ಶುಕ ಜನಕ ಸನಕಾದಿಗಳೇನೊ | ಕರ್ಣ ನೀನೇನೊ || ಭೋಗ ಬಡುವಲ್ಲಿ ಮಹಾಭಾಗ ಇಂದ್ರನೇನೊ | ವೇಗದಲಿ ಪುರುಷ-ಮೃಗನು ನೀನೇನೊ 5 ಸಖತನ ಮಾಡುವಲ್ಲಿ ಶ್ವೇತವಾಹನನೇನೊ | ನಿಖಿಳ ಕಥೆ ಕೇಳುವಲ್ಲಿ ಪರೀಕ್ಷಿತನೇನೊ || ಅಖಿಳರನು ಗೆಲುವಲ್ಲಿ ಕಾರ್ತವೀರ್ಯನೇನೊ | ಸುಖದಲ್ಲಿ ಇಪ್ಪದಕೆ ಪವನ ನೀನೇನೊ 6 ವಿತ್ತದಲಿ ನೀನು ವೈಶ್ರವಣನೇನೊ | ಮತ್ತೆ ಕ್ಷಮೆಯಲಿ ಹರಿಶ್ಚಂದ್ರನೇನೊ | ಭೃತ್ಯತನ ಪಡೆವಲ್ಲಿ ಅಕ್ರೂರ ನೀನೇನೊ | ಸುತ್ತವಲಿ ಪ್ರಿಯವ್ರತ ರಾಯನೇನೊ 7 ವ್ರತದಲ್ಲಿ ಅಂಬರೀಷ ರುಕುಮಾಂಗದನೇನೊ | ಸ್ತುತಿಯಲ್ಲಿ ಮುಚುಕುಂದರಾಯನೇನೊ || ಅತಿ ಚೆಲುವತನದಲ್ಲಿ ಮನ್ಮಥ ನಕುಲನೇನೊ | ಕ್ರತು ಮಾಡುವಲ್ಲಿ ಧರ್ಮಪುತ್ರ ನೀನೇನೊ8 ಶಾಪಗಳ ಕೊಡುವಲ್ಲಿ ಬ್ರಹ್ಮಪುತ್ರನೇನೊ | ತಾಪ ತೋರುವಲ್ಲಿ ರವಿ ಅನಳನೇನೊ | ಕೋಪ ಮಾಡುವಲ್ಲಿ ಗಿರಿಜಾರಮಣನೇನೊ | ತಾಪಸಿರ ನಡುವೆ ವಸಿಷ್ಠ ನೀನೇನೊ9 ಉನ್ನತದಲಿ ನೀನು ಮೇರು ಪರ್ವತನೇನೊ | ಘನ ಮದದಲಿ ಧೃತರಾಷ್ಟ್ರನೇನೊ || ಇನ್ನು ಮತಿಯನ್ನು ಕೊಡುವಲಿ ಗಜಮೊಗನೇನೊ | ಮುನ್ನೆ ಕವನದಲ್ಲಿ ಶುಕ್ರದೇವನೇನೊ 10 ಹಮ್ಮಿನಲಿ ಬಾಳದಿರು ಹಿತವಾಗದೊ ನಿನಗೆ | ಆ ಮಹಿಮರ ಸರಿ ನೀನಲ್ಲವೊ || ಸಿರಿ ವಿಜಯವಿಠ್ಠಲರೇಯನ್ನ | ನೆಮ್ಮಬೇಕಾದರೆ ಸೋಹಂ ನಿರಾಕರಿಸು11
--------------
ವಿಜಯದಾಸ
ಹಿಡಿ ಸಾಧು ಸಂತರಾ ಸಂಗೆನ್ನ ಮನವೆ | ಹಿಡಿ ಸಾಧು ಸಂತರ ಸಂಗಾ | ಪೊಡವಿಲಿ ಭವಭಯ ಬಿಡಿಸಿ ಮುಕುಂದನ | ಅಡಿಗಳ ತೋರಿಸಿ ಕಾವುದು ಹಿಡಿಹಿಡಿ ಪ ಐದು ವರುಷ ಮಗನೈದಿದ ತಪದಲಿ | ಸಾಧು ಸಂಗನೇ ಹೊರೆಯಿತು | ಸಾಧಿಸಿ ಗರ್ಭದಲಿರೆ ಸಾಧು ಸಂಗ | ಪ್ರ | ಲ್ಹಾದನ ಯಚ್ಚರಿಸಿತು | ಹಾದಿಯೊಳಗ ರಾಹುಗಳ ರಾಯಾಗಾಗಲು | ಸಾಧು ಸಂಗುದ್ಧರಿಸಿತು | ಮೇದಿನಿಪತಿ ಪರೀಕ್ಷಿತಗೇಳು ದಿನದಲ್ಲಿ | ಬೋಧಿಸಿ ಸದ್ಗತಿ ದೋರಿತು ಹಿಡಿಹಿಡಿ 1 ವನಜಭವನ ಲೋಕದಲಿ ಸಾಧು ಸಂಗವು | ಸನಕಾದಿಕರ ಹೊರೆಯಿತು | ವನದಲಿ ಯದುರಾಯಗಾಗಲು ಸತ್ಸಂಗ | ಅನುಭವ ಸುಖ ದೊರೆಯಿತು | ವಿನಯದಿ ಸತ್ಸಂಗ ದೇಹೂತಿ ಮೊದಲಾದ | ಮುನಿಜನರುದ್ಧರಿಸಿತು | ರಣದಲ್ಲಿ ಅರ್ಜುನಗಾಗಲು ಸತ್ಸಂಗ | ಅನುಮಾನ ನೀಗಿಸಿ ಕಾಯಿತು ಹಿಡಿಹಿಡಿ 2 ಅಂದಿಗೆಂದಿಗೆ ಸಿದ್ಧ ಸಾಧಕರೆಲ್ಲಾ | ನಂದನ ಸುಖ ಬಿಡಿಸಿತು | ಹಿಂದಿನ ಕಥೆಗಳಿರತಿರಲಿನ್ನು ಸತ್ಸಂಗ | ಇಂದೆನ್ನ ಧನ್ಯಗೈಸಿತು | ಪಾದ ಪದುಮಸಂಗ | ನಂದನುದ್ಧರಿಸಿತು | ಯಂದೆಂದಿಗಗಲದೆ ಮುಕ್ತಿಗೆ ಹೊಣೆಯಾಗಿ | ಕುಂದದಾ ಸುಖಕೈಯ್ಯ ಗೊಟ್ಟಿತು ಹಿಡಿಹಿಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿಂದಕೆ ತಿರುಗಿ ನೋಡು ಮನವೆ ಹೊಂದಿಕಿ ಹೊಲಬು ನಿನ್ನ ಸದ್ಗುರುವಿನ ಶ್ರೀಚರಣ ಧ್ರುವ ಹೊಲಬು ಮರೆದ್ಯೊ ಎಂದೆಂದಿಗೆ ಆಗಲದ ಸದ್ವಸ್ತು ಸಂಧಿಸಿಹುದು ಜರೆದ್ಯೊ ಕುಂದಿ ಕುಂದಿ ಕಳೆವ ವಿಷಯಕೆ ಸಂಧಿಸಿ ಬಾಯ್ದೆರದ್ಯೊ ಬಂದು ಬಂದು ಭವಪಾಶಕೆ ಸಿಲ್ಕಿ ಬೆಂದು ಒಡಲನೆ ಹೊರೆದ್ಯೊ 1 ತಿರುಗಿ ನೋಡಲು ತನ್ನೊಳಗೆ ತಾ ತೋರುತ ಅದೆ ಕೌತುಕ ಏರಿ ನೋಡಲು ಆರುಚಕ್ರ ಸುರಿಯುತಿದೆ ಸವಿಸುಖ ಪರಿಪರಿ ಭಾಸುತಿಯಹುದು ಪರಬ್ರಹ್ಮದ ಗತಿ ಹರುಷಾನೇಕ ಸದ್ಗುರುಮುಖ 2 ಸೆರಗವಿಡಿದು ಸಾರುವ ಶ್ರುತಿಯ ತಿರುಗಿನೋಡು ನಿನ್ನೊಳಗೆ ಮರಳಿ ಹುಟ್ಟಿ ಬಾರನೀ ಜನ್ಮಕೆ ಸ್ಥಿರಹೊಂದುವಿ ಗತಿಯೊಳಗೆ ಘನ ಬೆಳಗೆ ಘನ ತನ್ನೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೀಗಾಗಲಿಲ್ಲ ಸುಖವು ಸಕಲರಿಗ್ಯಾಗುವದು ಪ ಮೃಗದ ನಾಭಿಯೊಳಗ ಕಸ್ತೂರಿಡದಕಿಂದ | ಉಗಮ ಪಶುನರಜಿವ್ಹದಲಹುದು 1 ಎರಡು ಕಾರಣದಿಂದ ಸಮ್ಮತವೆಲ್ಲರಿಗೆ | ಮೃಗ ಘಾತವ ನಿಲುವದು 2 ಮಹಿಪತಿ ಸುತ ಪ್ರಭು ದಾಸರಾ ಕೀರ್ತಿ ಚಂದ್ರಾ | ರಾಹು ಕಗ್ಗತ್ತಲೆಯಾ ಕುಂದುವದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೀಗೆ ನಿರ್ದಯ ಮಾಡುವರೆ ಶ್ರೀಮನೃಹರೇ ಪ ಹೀಗೆ ನಿರ್ದಯ ಮಾಡುವರೆ ಕರುಣಾಂಬುಧೆ ಪಾಲನ ಅ.ಪ ನಿರ್ಜರ ಪೋಷಿತ ಘೋರದೈತ್ಯೇಯ ಸಂಹಾರ ಕೌಸ್ತುಭರತ್ನಹಾರ ಭೂಷಿತ ಯದುವೀರ ಮಾರಮಣನೇ 1 ಶಶಿವದನ ನೀರದ ಸಂಕಾಶ ಮಧು ಮುರಾಂತಕ ಕುಂದರದನ ಸುಂದರಗಾತ್ರ ಸದಮಲ ತೇಜ ಕಂಜದಲ ಲೋಚನ ಹರೇ 2 ಗರುಡವಾಹನ ಶ್ರೀಲೋಲ ಕರಿರಾಜವರದ ಸುಸ್ಥಿರ ಕೀರ್ತಿಸಾಂದ್ರಮಂ ದರಧರ ವರ ಹೆನ್ನೆಪುರ ಲಕ್ಷ್ಮೀನರಸಿಂಹ 3
--------------
ಹೆನ್ನೆರಂಗದಾಸರು
ಹುಚ್ಚು ಹಿಡಿಯಿತು ಎನಗೆ | ಹುಚ್ಚು ಹಿಡಿಯಿತು ಪ ಸ್ವಚ್ಛ ಭಾಗವತವ ಕೇಳಿ | ಅಚ್ಯುತನ್ನ ಮಹಿಮೆ ಎಂಬಮೆಚ್ಯಮದ್ದು ಶಿರಕೆ ಏರಿ | ಹುಚ್ಚು ಹಿಡಿಯಿತು ಅ.ಪ. ಶ್ರವಣ ಸ್ತವನ ಸ್ಮರಣೆ ಸೇವೆ | ಅವನ ಅರ್ಚನೆ ವಂದನೆ ಸಖ್ಯಅವ ದಾಸ್ಯ ಆತ್ಮ ಅರ್ಪಣ | ನವವು ವಿಧದ ಭಕ್ತಿಗಳಿಪ 1 ಸಪ್ತ ದಿನದ ಕ್ಲುಪ್ತಿಯಿಂದ | ಸರ್ಪಶಯನ ಮಹಿಮೆ ಶ್ರವಣಶೃತಿ ಬಧಿರ ವಾಯ್ತು ಆತ್ಮ | ರಿಕ್ತ ವಿಷಯ ಶ್ರವಣಕೆಲ್ಲ 2 ಸ್ತವನ ಮಾಳ್ಪ ಶುಕರ ದೇಹ | ಭವಣೆ ಮರೆತು ಕೀರ್ತಿಸಿದರುಅವರ ಕಂಡು ಲೋಕವಾರ್ತೆ | ಸ್ತವನ ಗೈವರ ದೂಡುವಂಥ 3 ಹರಿಯ ಸ್ಮರಿಸಿ ಪ್ರಹಲ್ಲಾದ | ಹರಿಯ ಕಂಡು ಭವವ ಗೆದ್ದಸ್ಮರಿಸಿ ಸ್ಮರಿಸಿ ಅದನ ನಾನು | ನರರ ನಡುವೆ ಮೂಕನಾಗ್ದ 4 ನಿತ್ಯ ಮಾಳ್ಪ ಹರಿಯ ಸೇವೆಅರ್ತುಸಂತರ ಸೇವೆ ವ್ಯತಿ | ರಿಕ್ತಕೆಲ್ಲ ಪ್ರತಿಯ ಭಟಿಪ 5 ಅಂಬೆ ರಮಣನರ್ಚಿಸೀದ | ಕುಂಬಾರ ಭೀಮನ ಕೇಳಿ ನಾನುಅಂಬುಜಾಕ್ಷನರ್ಚನೆಗಲ್ಲದ | ತುಂಬಿದ್ವ್ಯೊಭವ ಚೆಲ್ಲುವಂಥ 6 ಕೃಷ್ಣ ವಂದನ ಅಕ್ರೂರ ಗೈದು | ಸುಷ್ಠು ಹರಿಯ ರೂಪ ಕಂಡಜಿಷ್ಣು ಸಖನ ನಮಿಸದವರ | ಭ್ರಷ್ರ್ರರೆಂದು ಬೈಯ್ಯುವಂಥ 7 ನಿತ್ಯ ನೆನೆಯದವರ | ಕ್ಷಣವು ಅವರ ಸಂಗಜರಿವ 8 ಪಾರ್ಥ ಸಖ್ಯತನದಿ ಪರಮ | ಅರ್ಥ ಪಡೆದುದನ್ನ ಕೇಳಿನಿತ್ಯ ಸಖನ ಮರೆತ ಜನರು | ವ್ಯರ್ಥರೆಂದು ಅರ್ಥಿಲಿ ನಗುವ9 ಭೃತ್ಯ ಬಲಿಯು ತನ್ನನಿತ್ತಸತ್ಯ ವಾರ್ತೆ ಕೇಳಿ ಕೇಳಿ | ಪ್ರವೃತ್ತಿ ಗೈದಿನ್ಯತ ನೆದಿ 10 ನಿಚ್ಚ ಗುರು ಗೋವಿಂದ ವಿಠಲ11
--------------
ಗುರುಗೋವಿಂದವಿಠಲರು
ಹುಚ್ಚುಮನವೆ ನಿನ್ನ ಹುಚ್ಚಾಟವನೆ ಕಂಡು ರೊಚ್ಚುಬರುತಿದೆ ಎನಗೆ ಎಚ್ಚರಿರೆಲೆಲೇ ಪ ಉಚ್ಚೆಕುಣಿಯಲಿ ಬಂದು ಭವದ ಮಾಯಾ ಜಗವ ನೆಚ್ಚಿ ಸಕಲ ಮರೆದು ಮುಂದಿನ ಎಚ್ಚರವೆ ಮರೆತೆಲ್ಲೋ ಪಾಪಿ ಅ.ಪ ಒಳಗೊಂದು ಹೊರಗೊಂದು ತಿಳಿಯುತಲಳಿಯುವಿ ಅಳಿದುಹೋಗುವ ಇಳೆಯ ಸಲೆ ಸುಖಕೊಲಿದು ಮಲದ ಭಾಂಡದಿ ಸಿಲುಕಿ ಅನುದಿನ ಮಲಿನಗುಣದಿಂ ತೊಳಲಿಬಳಲುತ ಗಳಿಸಿಕೊಂಡು ಬಂದ ಸಮಯ ಕಳೆದುಕೊಳ್ಳುವಿಯಲ್ಲೋ ಪಾಪಿ 1 ಹಿಂದೊಂದು ಮುಂದೊಂದು ವಂದಿಸಿ ನುಡಿಯುತ ಮಂದ ನೀನಾಗಿ ಹಂದಿಯು ಮಲ ಮೆದ್ದತೆರದಿ ಕುಂದಿಪೋಗುವ ಬಂಧುಬಳಗಕೆ ನಂದುನಂದೆಂಬ ವಿಷಯಲಂಪಟ ರಂಧ್ರೆಯಲ್ಲಿ ಬಿದ್ದು ಕೆಡುವಿ ಪಾಪಿ 2 ನುಡಿಯೊಂದು ನಡೆಯೊಂದು ಕಡುದೃಢ ನುಡಿಯಾಡಿ ಒಡಲಕಿಚ್ಚಿಗೆ ಬಲು ಮಿಡುಕುತಲಿ ಕೆಡುವ ತನುವಿನ ಮೋಹ ಬಿಡದೆ ಪೊಡವಿಗಧಿಕ ನಮ್ಮೊಡೆಯ ಶ್ರೀರಾಮ ನಡಿಯ ನಂಬದೆ ಮಡಿದುಪೋಗುವಿ ಕಡೆಗೆ ಹೆಡತಲೆಮೃತ್ಯುಗೆದೆಯಾಗಿ 3
--------------
ರಾಮದಾಸರು
ಹುಟ್ಟಿದ್ದು ಫಲವೇನು ಮನುಜನು | ಮುಟ್ಟದೆ ಗುರುಪದವನು ಪ ಬೀರಿ ವಾಗ್ಜಾಲ ಆರಿಗೆ ಸೋಲಾ | ಮೆರೆದನು ಬಹಳ ಮರೆದ ಸ್ಮರಣ ಕೀಲಾ 1 ಪರರುಪಕಾರಾ ಬಾರದಾ ಶರೀರಾ | ಸಿರಿಗಂಧ ಸಾರಾ ಧರಿಸಿದರೇನು ಪೂರಾ 2 ಹವಣಿಸಿಗಾಢಾ ಶ್ರವಣವ ಮಾಡಾ | ಕುಂಡಲ ನೋಡಾ 3 ತನ್ನ ತಾ ಮರೆವಾ ಅನ್ಯರಾ ಜರಿವ | ಮನ್ನಣೆ ತೋರುವಾ ಕನ್ನಿಯ ಪರಿಲಿರುವಾ 4 ನಂದನ ಪ್ರಾಣಾ ತಂದೆ ಮಹಿಪತಿ ಜನಾ | ಹೊಂದನು ಚರಣಾ ಮಂದಗಾಣದ ಕೋಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೂವ ಮುಡಿಸಿದ ಸ್ವಾಮಿ ರುಕ್ಮಿಣಿ ಭಾಮೇರಿಬ್ಬರಿಗೆ ರಂಗಯ್ಯ ಪ ಬಂದು ರುಕ್ಮಿಣಿ ಭಾಮೇರಿಂದತಿ ಸಂಭ್ರಮ್ಮದಿಂದ ರಂಗಯ್ಯ ಕುಂದಣದ ಹಸೆಮ್ಯಾಲೆ ಕುಳಿತಿರೆ ಚೆಂದದಲಿ ನಗುತ ಚಂದ್ರವದನ ತಾ ಚತುರ್ಭುಜದಿಂದಲಿ ಅಂಗನೆಯರ ಆಲಿಂಗನೆ ಮಾಡುತ 1 ಹೂವ ಮುಡಿಸುತ ವಾರಿಜಾಕ್ಷೇರ ವಾರೆನೋಟದಿ ನೋಡಿ ನಗುತ ರಂಗಯ್ಯ ಸಾರಸಮುಖಿ ಸಹಿತ ಸರಸ- ವಾಡುತ ನಾರದರು ನಮ್ಮಿಬ್ಬರ ಕದನಕೆ ಹೂಡಿದರೆ ಹುಚ್ಚಾದಿರೆಂದೆನುತ 2 ಮಲ್ಲೆ ಮಲ್ಲಿಗೆಮೊಗ್ಗು ಶಾವಂತಿಗೆ ಕಮಲ ರಂಗಯ್ಯ ಅರಳು ಮೊಗ್ಗುಗಳು ಝಲ್ಲೆ ಕುಸುಮಗಳು ಎಲ್ಲ ತನಕೈಯಲ್ಲಿ ಪಿಡಿದು ಚೆಲ್ವ ಭೀ- ಮೇಶ ಕೃಷ್ಣ ರುಕ್ಮಿಣಿಗೆ 3
--------------
ಹರಪನಹಳ್ಳಿಭೀಮವ್ವ
ಹೃದಯ ವೃಂದಾವನದೊಳಿರುವ ಕೃಷ್ಣನ ಸಾಧಿಸಿ ನೋಡ್ವೆನೆಂದು ಪೋದರು ಗೋಪಾಂಗನಾ ಪ ನಾದದ ಕೊಳಲನ್ನು ಊದುವ ವೇಳ್ಯದಿ ಸದ್ಭಕ್ತಿವೆತ್ತಿಗೋಪಾಂಗನಾ ವಿನೋದದಿ ಆಧಾರ ಮಾರ್ಗದಿಂದಾ ಪೋದರು ಬೇಗದಿ ಶೋಧಿಸಿ ನೋಡಲಾಗಿ ತ್ಯಾಗಿಸಿ ಕಾಮನಾ 1 ಉಬ್ಬೇರಿ ಮೆಲ್ಭಾಗದಿಂದಾ ವಿನೋದದಿ ಅಬ್ಬರದಿಂದಲೀ ಆ ಷಟದ್ವಾರ ಭೇದದಿ ಗರ್ಭಿತನಾದ ರಾಜಹಂಸೊಹಂಸ್ವರದಿ ಮುಬ್ಬರದಿಂದಲಿ ಪಾಡುತ್ತಾ ರಂಗನ 2 ನಳಿನ ಚಂಪಕಾದಿ ನಾಗ ಪುನ್ನಾಗವು ಕುಂದ ಬಕುಲವು ಮಾಲತಿ ಜಾಜಿ ಹೂವು ಶ್ರಿಲೋಲನಾಮವೂ ಮೇಳಿತವಾಗಿ ಪೋಗಿ ಏರಿದರು ಸುಮನಾ 3 ಮೂರ್ತಿ ಸಂಗೀತ ಕೇಳುತಾ ಆ ಮಹಾ ಮಕುಟದಾ ಬೆಳಕು ನೋಡುತಾ ಶ್ರೀ ಗುರುಮಹಾದೇವನೊಳ್ ರಮಿಸಿ ಸೂಸದಾ ಪ್ರೇಮದಿ ಶಾಂತಿ ಸುಖದೊಳ್ ಬೆರತು ಸಘನಾ 4
--------------
ಶಾಂತಿಬಾಯಿ