ಒಟ್ಟು 2789 ಕಡೆಗಳಲ್ಲಿ , 122 ದಾಸರು , 2090 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವಾನಂದ ಸುಖರೂಪವು ತಾನಿರೆತನ್ನೊಳು ತೋರುವದಿಂತೆಲ್ಲಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಘಟವದಾರೋಪಿಸಲದು ಮೃತ್ತಿಕಾ |ಪಟಗಳು ತಂತುವಿನ್ಹೊರತಿಲ್ಲ1ವಾರಿಧಿಯೊಳು ತೆರೆ ನೊರೆಗಳು ತೋರಲ್ಕವು |ನೀರಲ್ಲದೆ ಅವು ಬ್ಯಾರಿಲ್ಲ2ಸಕ್ಕರೆ (ಇಟ್ಟ) ಫಲ ಸವಿಯಲ್ಲಸಕ್ಕರೆ ಸ್ವಾದನ ಫಾಲಾಕ್ಷನು ಬಲ್ಲ3
--------------
ಜಕ್ಕಪ್ಪಯ್ಯನವರು
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯಕಾಮಿತಪ್ರದ ಸುರಸ್ತೋಮಾಗ್ರಗಣ್ಯ ಪ.ಜನ್ಮ ಜನ್ಮಾಂತರದ ಕರ್ಮಾನುಸಾರದಿಂದುರ್ಮತಿಗೆಳಸಿಯಹಮ್ಮಮತೆಯಲಿದುರ್ಮದಾಂಧನಾದೆದುರಿತದೂರವಿರಿಸುನಿರ್ಮಲಜ್ಞಾನೋಪದೇಶವನಿತ್ತೆನ್ನ 1ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತಭಕ್ತಿಸೌಭಾಗ್ಯವಿರಕ್ತಿಯ ನೀಡುಭೃತ್ಯವತ್ಸಲ ಭವಭಯಹರ ಗಿರಿಜಾ-ಪುತ್ರನೆ ಪರಮಪವಿತ್ರ ಸುಚರಿತ್ರನೆ 2ಸುರಲೋಕವನುಕಾವಧುರಧೀರ ಪ್ರಭು ನಿನಗೀನರಲೋಕವನು ಕಾವದುರು ಕಷ್ಟವೇನುಪರಿಶುದ್ಧ ಸ್ಥಾನಿಕಧರಣೀಸುರಕುಲ-ಗುರುವೆಂದು ಚರಣಕ್ಕೆ ಶರಣಾಗತನಾದೆ 3ಸಾಕುವಾತನು ನೀನೆ ಸಲಹುವಾತನು ನೀನೆಬೇಕು ಬೇಡೆಂಬುವರ ನಾ ಕಾಣೆ ದೊರೆಯೆಲೋಕೇಶ ಸುಕುಮಾರ ಶೋಕಮೋಹವಿದೂರನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ 4ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆಸುತ್ರಾಮಾದಿ ಸುರಮೊತ್ತ ಪೂಜಿತನೆಕರ್ತಲಕ್ಷ್ಮೀನಾರಾಯಣನ ಸಾರೂಪ್ಯನೇದೈತ್ಯದಲ್ಲಣ ವಲ್ಲೀದೇವಿ ಮನೋಹರನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹನುಮ - ಭೀಮ - ಮಧ್ವ ಮುನಿಯನೆನೆದು ಬದುಕಿರೊಅನುಮಾನಂಗಳಿಲ್ಲದಲೆ ಮನದಭೀಷ್ಟಂಗಳನೀವ ಪಪ್ರಾಣಿಗಳ ಪ್ರಾಣೋದ್ದಾರ ಪ್ರಾಣರಲ್ಲುತ್ತಮ ಮತ್ತೆಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕøಷ್ಟ ||ಕಾಣಿರೇನೋ ಕಾಯಕರ್ಮ ಚಕ್ಷುರಿಂದ್ರಿಯಗಳಿಗೆತ್ರಾಣಕೊಟ್ಟು ಸಲಹುವ ಜಾಣಗುರುಮುಖ್ಯಪ್ರಾಣ1ಕಾಮಧೇನು ಚಿಂತಾಮಣಿ ಕಲ್ಪವೃಕ್ಷನಾದ ಸ್ವಾಮಿಪ್ರೇಮದಿಂದ ನೆನಯುವವರ ಭಾಗ್ಯಕ್ಕೆಣೆಯುಂಟೇ ? ||ಸಾಮಾನ್ಯವಲ್ಲವೊ ಈಗ ಮೋಕ್ಷಾದಿ ಸಂಪದದಾತಆ ಮಹಾ ಪರೋಕ್ಷಜ್ಞಾನ ದಾಢ್ರ್ಯ ಭಕುತಿ ಕೊಡುವ 2ಅವತಾರ ತ್ರಯಗಳಿಂದ ಶ್ರೀಹರಿಯ ಸೇವಿಸುವತವಕದಿ ಪೂಜಿಪ ಮಹಾಮಹಿಮೆಯುಳ್ಳವನು ||ಕವಿತೆವಾಕ್ಯವಲ್ಲವಿದು ಅವಿವೇಕವೆಂದೆಣಿಸಬೇಡಿಭವಬಂಧನ ಕಳೆದುಕಾವಪುರಂದರವಿಠಲನ ದಾಸ3
--------------
ಪುರಂದರದಾಸರು
ಹರಿಕಥಾಮೃತ ಸವಿಯ ಹರಿದಾಸರಲ್ಲದೆದುರುಳಮಾನವರದರಪರಿಬಲ್ಲಿರೇನಯ್ಯಪ.ಸ್ತನ ಪಾನದ ರುಚಿಯ ಚಿಣ್ಣರು ಬಲ್ಲರಲ್ಲದೆಮೊಣ್ಣ ಬೊಂಬೆಗಳದರ ಬಗೆ ಬಲ್ಲುವೆ ||ಅನ್ನಪಾನದ ರುಚಿಯ ಕೊನೆ ನಾಲಿಗೆಯಲ್ಲದೆಅಣಿಮಾಡಿಕೊಡುವ ಆಕರಬಲ್ಲುದೇನಯ್ಯ1ನವನೀರದಾರ್ಭಟಕೆ ನವಿಲುಗಳು ನಲಿವಂತೆಕಾವು ಕಾವೆಂಬ ಕಾಕವು ಬಲ್ಲುದೆ ? ||ದಿವಸಕರನುದಯಿಸಲು ಅರಳುವಬ್ಜಗಳಂತೆದಿವಸಾಂಧ ಪಕ್ಷಿಗಳು ಬಗೆಬಲ್ಲುವೇನಯ್ಯ 2ಮೊಲ್ಲೆ - ಮಲ್ಲಿಗೆ ಮುಡಿಯಬಲ್ಲ ಮಾನವರಂತೆಭಲ್ಲೂಕಗಳು ಅದರ ಬಗೆ ಬಲ್ಲುವೆ ?ಫುಲ್ಲಾಕ್ಷ ಶ್ರೀ ಪುರಂದರವಿಠಲರಾಯನನುಬಲ್ಲ ಮಾನವರಲ್ಲದೆಲ್ಲರೂ ಬಲ್ಲರೆ ? 3
--------------
ಪುರಂದರದಾಸರು
ಹರಿದಿನ ಇಂಥ ಹರಿದಿನ ಪ.ಹರಿದಿನದ ಮಹಿಮೆ ಹೊಗಳಲಗಾಧಪರಮಭಾಗವತರಾಚರಣೆಗಾಹ್ಲಾದÀದುರಿತದುಷ್ಕøತ ಪರ್ವತಕೆ ವಜ್ರವಾದಮರುತ ಸದ್ವ್ವ್ರತಕೆಲ್ಲ ಶಿರೋರತ್ನವಾದ ಅ.ಪ.ಭಕ್ತಿಗೆ ಮೊದಲು ವಿರಕ್ತಿ ಬೀಜವೆಂಬಸಕಲ ತಪದೊಳೆಲ್ಲ ಮೇಲೆನಿಸಿಕೊಂಬಮಖಕೋಟಿಗಧಿಕ ಫಲಸ್ಥಿರ ಸ್ತಂಭಮುಕ್ತಿ ಸೋಪಾನ ನಿಧಾನತ್ವವೆಂಬ 1ತ್ವಕ್ ಚರ್ಮ ಅಸ್ತಿ ಮಜ್ಜ ಮಾಂಸರುಧಿರಯುಕ್ತ ಸಪ್ತ ಧಾತುಗಳಿಹ ಶರೀರನಖಕೇಶ ಕಫ ಸ್ವೇದ ಮಲ ಮೂತ್ರಾಗರ ಈನಿಖಿಳಪಾವನ ಮಾಡುವ ನಿರಾಹಾರ2ವರವಿಪ್ರಕ್ಷತ್ರಿಯ ವೈಶ್ಯ ಶೂದ್ರ ಜನರುತರಳಯೌವನ ವೃದ್ಧ ನಾರಿಯರುಕಿರಾತಪುಲತ್ಸ್ಯಾಂದ್ರ ಹೂಣ ಜಾತಿಯವರುಹರಿವ್ರತ ಮಾತ್ರದಿ ಮುಕ್ತಿಯೈದುವರು 3ದ್ವಿಜಗೋವಧ ನೃಪರನು ಕೊಂದ ಪಾಪನಿಜಗುರು ಸತಿಯರ ಸಂಗದ ಪಾಪಅಜಲಪಾನದ ದಿನದುಂಡ ಮಹಾಪಾಪನಿಜನಾಶ ಮೋಕ್ಷ ಪ್ರಾಪ್ತಿಯು ಸತ್ಯಾಲಾಪ 4ಯಾಮಿನಿಯಲಿ ಅನಿಮಿಷದ ಜಾಗರವುಶ್ರೀ ಮದ್ಭಾಗವತ ಶ್ರವಣ ಗೀತಾಪಠಣಪ್ರೇಮವಾರಿಧಿಲಿ ಮುಳುಗಿ ಸಂಕೀರ್ತನೆಯುಧಾಮತ್ರಯದ ಸುಖಕಿದೇ ಕಾರಣವು 5ಅರ್ಧಕೋಟಿ ತೀರ್ಥಸ್ನಾನವೆಲ್ಲ ಅಜಸ್ರಪ್ರಯಾಗ ಕಾಶಿವಾಸವೆಲ್ಲ ಸಹಸ್ರ ಕೋಟಿ ಭೂಪ್ರದಕ್ಷಿಣೆಯೆಲ್ಲಸುಶ್ರದ್ಧೆ ಸಹ ಜಾಗರಕೆ ಸರಿಯಲ್ಲ 6ಪಂಚಮಹಾ ಪಾಪ ಪ್ರಪಾಪವವಗೆವಂಚಕ ಪಿಶುನ ಜನರ ಪಾಪವವಗೆಮಿಂಚುವ ಕ್ಷೇತ್ರವಳಿ ಪಾಪವವಗೆಪಂಚಕವ್ರತ ಪೆತ್ತ ವ್ರತ ಉಲ್ಲಂಘಿಪಗೆ 7ಸರ್ಪಶಯನಗೆ ನೀರಾಜನವೆತ್ತಿ ನೋಡಿಉಪವಾಸದಿ ಭಗವಜ್ಜನ ನೃತ್ಯವಾಡಿಚಪ್ಪಾಳಿಕ್ಕುತ ದಂಡಿಗೆ ಮುಟ್ಟಿ ಪಾಡಿತಪ್ಪೆ ನಾಯಿ ನರಕ ಫಲ ಕೈಗೂಡಿ 8ಶ್ರುತಿಪಂಚರಾತ್ರಾಗಮವು ಸಾರುತಿವೆಯತಿ ಮಧ್ವರಾಯರುಕುತಿ ಪೇಳುತಿವೆಕ್ರತುಪ್ರಸನ್ವೆಂಕಟ ಕೃಷ್ಣ ಮತವೆಕ್ಷಿತಿಪತಿ ಸುರರತಿಶಯದ ಸದ್ವ್ವ್ರತವೆ 9
--------------
ಪ್ರಸನ್ನವೆಂಕಟದಾಸರು
ಹರಿನೀನೇ ಗತಿಯೆಂದು ನೆರೆನಂಬಿದವರನುಮರೆತಿರುವುದು ನ್ಯಾಯವೆ? ಪಗರುಡಗಮನ ನೀ ಸಿರಿಲೋಲನಾರಿಗೆ |ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ ಅ.ಪಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವದೃಷ್ಟಿಯೆನ್ನೊಳಗಿದೆಯೆ?ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನದುಷ್ಟ ಕರ್ಮವ ಬಿಡಿಸಿ ದಿಟ್ಟನೆಂದೆಣಿಸೊ 1ಭುಜಗಶಯನ ನಿನ್ನ ಭಜಕರ ಹೃದಯದಿನಿಜವಾಗಿ ನೀನಿಲ್ಲವೇ?ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನಸುಜನಪಾಲಕನೆಂದು ಭಜನೆ ಮಾಳ್ಪುದ ಕಂಡು 2ಭಾಗವತರರಸನೆ ಯೋಗಿಗಳೊಡೆಯನೆಬಾಗಿ ಬಿನ್ನಯಿಪೆ ನಿನ್ನಸಾಗರ ಶಯನನೆ ನೀಗಿಸಿ ಶ್ರಮವನುಜಾಗುಮಾಡದೆ ಎನ್ನ ಬೇಗದಿ ಕಾಯಯ್ಯ3ತುಂಟರೈವರ ತುಳಿದು ಕಂಟಕನೊಬ್ಬನ ಕಳೆದು |ಎಂಟು ಮಂದಿಯ ಗರುವವನಳಿದು ||ನಂಟ ನೀ ಬಂದೆನ್ನ ಕಂಟಕವನೆ ಬಿಡಿಸಿ |ಉಂಟಾದ ವೈಕುಂಠ ಬಂಟನೆಂದೆನಿಸೊ 4ಧರಣಿಯೊಳಗೆ ನೀ ಸುಜನರ ಸಲಹುವಬಿರುದು ಪಡೆದವನಲ್ಲವೆ? ||ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೊ |ಪರಮಪುರುಷಸಿರಿಪುರಂದರವಿಠಲ5
--------------
ಪುರಂದರದಾಸರು
ಹರಿಪದಯುಗಲವನಿತ್ಯ ನೆನೆದವೆಗೆ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಪರಮಪದವಿಯೇ ಸಾಕ್ಷಿ ||ಹರಿ -ಗುರು ದೂಷಣ ಮಾಡಿದ ಮನುಜಗೆ |ನರಕರೌರವವೆ ಸಾಕ್ಷಿ ಪ.ಕಡುಭಕ್ತಿಯಲಿ ಕೃಷ್ಣನÀ ನೆನೆದರೆ |ನಡೆಯಲಿ ಸತ್ಯವೆ ಸಾಕ್ಷಿ ||ದೃಡ ಭಕುತಿಯಿಂದ ಉಣಬಡಿಸಿದವಗೆ |ಷಡುರಸಾನ್ನವೇ ಸಾಕ್ಷಿ 1ತಾನೊಂದುಂಡು ಪರರಿಗೊಂದಿಕ್ಕುವಗೆ |ಗುಲ್ಮರೋಗವೇ ಸಾಕ್ಷಿ ||ಹೀನನಾಗಿ ಹಿರಿಯರನು ದೂಷಿಪಗೆ |ಹೀನ ನರಕವೇ ಸಾಕ್ಷಿ 2ಕನ್ಯಾದಾನವ ಮಾಡಿದವಗೆ ದಿವ್ಯ |ಹೆಣ್ಣಿನ ಭೋಗವೆ ಸಾಕ್ಷಿ ||ಕನ್ಯಾದಾನವ ಮಾಡದ ಮನುಜಗೆ |ಹೆಣ್ಣಿನ ದೈನ್ಯವೇ ಸಾಕ್ಷಿ 3ಅನ್ನದಾನ ಮಾಡಿದ ಮನುಜಗೆ ದಿ - |ವ್ಯಾನ್ನವನುಂಬುದೆ ಸಾಕ್ಷಿ ||ಅನ್ನದಾನ ಮಾಡದ ಮನುಜಗೆ ತಿರಿ -ದುಣ್ಣುತಿರುವುದೇ ಸಾಕ್ಷಿ 4ಕ್ಷೇತ್ರದಾನ ಮಾಡಿದ ಮನುಜಗೆ ಏತ - |ಛತ್ರವನಾಳ್ವುವದೆ ಸಾಕ್ಷಿ ||ಪಾತ್ರವರಿತು ಧರ್ಮಮಾಡಿದವಗೆ ಸತ್ -ಪುತ್ರರಾಗುವುದೆ ಸಾಕ್ಷಿ 5ಕಂಡ ಪುರುಷರಿಗೆ ಕಣ್ಣಿಡುವ ನಾರಿಗೆ |ಗಂಡನು ಕೇಳುವುದೆ ಸಾಕ್ಷಿ ||ಪುಂಡನಾಗಿ ಪರಸ್ತ್ರೀಯರ ಸೇರುವಗೆ |ಹೆಂಡಿರ ಕಳೆವುದೆ ಸಾಕ್ಷಿ 6ಭಕ್ತಿಯರಿಯದ ಅಧಮನಿಗೊಂದು |ಕತ್ತಲಮನೆಯೇ ಸಾಕ್ಷಿ ||ಮುಕ್ತಿಪಡೆವುದಕೆ ಪುರಂದರವಿಠಲನ |ಭಕ್ತನಾಗುವದೆ ಸಾಕ್ಷಿ 7
--------------
ಪುರಂದರದಾಸರು
ಹರಿಯ ನಂಬದ ನರನು ಗೂಡರಿತು ಇರದ ವಾನರನು ಶ್ರೀಹರಿಯ ಹೊಗಳದ ಕವಿಯು ಭೂಸುರರುಣ್ಣಿಸದ ಹವಿಯು ಪ.ಕರುಣವಿಲ್ಲದ ಅರಸ ಕಾಳೋರಗನಾಡುವ ಸರಸಮಾನಕಿಲ್ಲದ ಮಂತ್ರಿ ತಾ ಗರಹೊಡಕ ಕುಮಂತ್ರಿ 1ಮೆಚ್ಚು ನುಂಗುವ ದೊರೆಯು ಮೀವ ಬಚ್ಚಲಿನ ದೊಡ್ಡಹರಿಯು ಕೈಮುಚ್ಚಿ ನೀಡದ ದಾನ ಹುಸಿರಚನೆ ನಿಧಾನ 2ಧರುಮಕೆ ಕೂಡದ ಸತಿಯು ಯಮಪುರದಾರಿ ಸಂಗತಿಯು ಬಲುಚರಿಗ ಮತ್ಸರಿತನಯಅವ ಅರಗದ ಅಗ್ಗಣಿಯ3ಮೂರ್ಖನ ಗೆಳೆತನ ಜರ್ಜರಿತ ತಂತುವಿತಾನ ಒಣಕರಕರಿ ಕಲಹದ ನೆರೆಯು ಸಾಸಿರ ತೇಳಗಗಚ್ಚಿದ ಸರಿಯು 4ವಂಚಿತವಾದಿ ಬಂಧು ಪ್ರಾಣ ಮುಂಚಿಸುವ ವಿಷಬಿಂದು ಬಹುಕಾಂಚನದಾಸೆ ಬಳಗ ಪ್ರಪಂಚದಳತೆಕೊಳಗ5ಕೊಡದಿಟ್ಟ ಕೊಡಹಣವು ಸುಡುವ ಅಡವಿಲಿ ಬಿದ್ದ ಹೆಣವು ಬಾಯಿಬಡಕನ ಒಡಂಬಡಿಕೆ ಛಿದ್ರಿಡಿದ ಮಣ್ಣಿನ ಮಡಿಕೆ 6ಬ್ರಾಹ್ಮರಿಗುಣಿಸದಸದನದುರ್ಬೊಮ್ಮ ರಕ್ಕಸನ್ವದನಮದ್ಹಮ್ಮಿನಣ್ಣಗಳ ವಿದ್ಯಾ ಮಾಯಮ್ಮನ ಮಹನೈವೇದ್ಯ 7ಓದಿ ಮಲತ ಗುರುಶಿಷ್ಯ ಸದ್ಭೋಧಾಮೃತಪರಿಹೇಯ ಆಪ್ತಾಧಾರಿಲ್ಲದ ಅರಸೆ ಗ್ರಾಮಾದರಿಸುವ ಆಳರಸೆ 8ವೇತ್ತøವಿವರ್ಜಿತ ಸಭೆಯು ಲೋಕತ್ರಯದಲ್ಲಿ ಅಶುಭವು ಕಂಠತ್ರಾಣಿಲ್ಲದ ಗಾನ ಮುದಿ ಎತ್ತೆಳೆದಾಡುವಗಾಣ9ಹುಸಿನುಡಿವ ದೈವಜÕ ತಾ ಹಡದ ಮಗನಿಂದ ಅವಜÕ ದುರ್ವಸುಕಾಂಕ್ಷೆಯ ಭೇಷಜನು ಮಾನಿಸರ ಉಂಬ ಮಾಯಿ ದನುಜನು10ಶ್ರವಣ ಮನನ ಧ್ಯಾನವನು ಬಿಟ್ಟವನೆ ಜೀವಚ್ಛವನುಮಾಧವಪ್ರಸನ್ವೆಂಕಟಮೂರ್ತಿತನ್ನವರಿಗೆ ಕೊಡುವನುಅರ್ಥಿ11
--------------
ಪ್ರಸನ್ನವೆಂಕಟದಾಸರು
ಹರಿಯಲ್ಲದನ್ಯ ದೈವಂಗಳು ಕೈವಲ್ಯವೀವವೇನೈ ಶ್ರೀಹರಿಯ ಕರುಣಾಸಾಗರಕೆ ಕೂಪವಾಪಿಯು ಹೋಲ್ವವೇನೈ ಪ.ಹಳುವದ ಬಿದಿರಮೃತದ ಮಳೆಯಲಿ ಇಕ್ಷುವಹದೇನೈಹಲಕಾಲವರೆಯ ಬೇಯಿಸಿದರೆ ಮೃದುರುಚಿಯಹದೇನೈ 1ಕೆಸರು ಮಳಲು ಮೆದ್ದರೊಡಲಗ್ನಿ ತಣ್ಣಸವಹದೇನೈಬಿಸಿಲ ತೊರೆಗೆ ಮಂಜುವನಿಗೆ ಧಗೆಯತೃಷೆಹೋಹದೇನೈ2ಮಲಯಜಲೇಪಕೆ ಬಲವತ್ತರ ಭವತಾಪ ಶಾಂತವೇನೈಎಳೆಗರು ಮಣ್ಣಾವಿನ ಮೊಲೆಯುಂಡು ಜೀವಿಪುದೇನೈ 3ಹರಿಯೊಪ್ಪದಿರದಾ ಹಲವು ಧರ್ಮಕರ್ಮದ ಕಾರಣೇನೈಕರಿಯುಂಡ ಬೆಳವಲ ಹಣ್ಣಿನ ತಿಳಲೆಂದಿಗುಳಿವುದೇನೈ 4ಏಕೋ ನಾರಾಯಣ ಆಸೀತ್ ಹಾಗಂದಿಲ್ಲವೇನೈಸಾಕು ನ ಬ್ರಹ್ಮಾ ನ ಚ ಶಂಕರ:ಎಂಬೊ ಮಾತದೇನೈ 5ವಾಸುದೇವನ ಡಿಂಗರರಿಗೆ ಅಶುಭ ಹೊಂದಬಲ್ಲದೇನೈಕ್ಲೇಶಾಧಿಕವು ನೋಡಿ ಅವ್ಯಕ್ತಾಸಕ್ತರಿಗಲ್ಲವೇನೈ 6ಪ್ರಸನ್ನವೆಂಕಟಪತಿ ಅರ್ಚನೆದಾರಿಲಿ ಕಂಟಕೇನೈಹುಸಿಯಲ್ಲ ಧ್ರುವಬಲಿವಿಭೀಷಣರೆ ಸಾಕ್ಷಿ ನಂಬಿರಿನ್ನು7
--------------
ಪ್ರಸನ್ನವೆಂಕಟದಾಸರು
ಹರಿಯೆ ನೀನಲ್ಲದಾರ ಕಾಣೆ ಕಾಯ್ವರಮರೆ ಹೊಕ್ಕವರ ಭಯ ಪರಿಹಾರವನು ಮಾಡಿ ಪಶಿವಭಕ್ತಾಗ್ರಣಿ ಬಾಹ್ರ್ಯದ್ರಥ ಗಂಜಾಲೆಮಜಾ ನಿ- |ನ್ನವನಿಂದಳಿಸಿದೆ, ಬಾಣನ ಬಾಗಿಲೂ ||ಭವಕಾಯ್ದಿರಲು ನೀ ತೋಳ್ಗಳನು ಛೇದಿಸುವಾಗ |ಲವಮಾತ್ರ ಪ್ರತಿಕೂಲನಾಗಲಿಲ್ಲ ಶಂಕರನು 1ಹರಿಯೆಂದುದಕೆ ತಾಳದಲೆ ಬಾಧಿಸುತಲಿರೆ |ತರಳನ ಮೊರೆಕೇಳಿಕಂಭದಿಂದ ||ಉರಿಯುಗುಳುತ ಬಂದು ಖಳನುದರವ ಬಗೆದು |ಶರಣ ಪಾಲಕನೆಂಬ ಬಿರುದು ದಕ್ಕಿಸಿಕೊಂಡೆ 2ಸ್ಥಾಣುವಿನವರಬಲದಿಂದಮರರ ಕಾಡೆ |ದಾನವಾನ್ವಯ ಕೊಂದೆ ಭಸ್ಮಾಸು- ||ರನು ಪಾಣಿಯ ತಲೆಯೊಳಿಡುವೆನೆಂಬೊ ಭರದಿ ಬರಲು |ಪ್ರಾಣೇಶ ವಿಠಲ ನೀ ಶಂಕರನನುಳುಹಿದಿ 3
--------------
ಪ್ರಾಣೇಶದಾಸರು
ಹರಿಯೆ, ಕುಣಿಯೆನುತ -ನರ -ಹರಿಯೆ, ಕುಣಿಯೆಂದು ಕುಣಿಸಿದರಯ್ಯ ಪಲೋಕವ ತಾಳ್ದನ ಮನೆಯಲಿ ಪುಟ್ಟಿ |ತೂಕದ ನುಡಿಗಳ ಕದ್ದವನ ||ನಾಕರಿಸಲು ನಿಜ ಗೋಪರೂಪದಿಂದ |ಆಕರಿಸಿದನಾ ಕುಣಿಸಿದರಯ್ಯ 1ಎಡೆಯಿಲ್ಲದೆ ನಡೆವನ ಕೂಡಿರುವವನ |ಹಿಡಿಲೆಂಬನ ಒಡಹುಟ್ಟಿದನ ||ಒಡೆಯನ ಕಂದನ ವೈರಿಯ ಬಂಡಿಯ |ಹೊಡೆದ ಮಹಾತ್ಮನ ಕುಣಿಸಿದರಯ್ಯ 2ಒಣಗಿದ ಮರ ಎಲೆಯಿಲ್ಲದ ಬಳ್ಳಿ |ಬಣತಿಗೆ ಪುಟ್ಟಿದ ವನದಲ್ಲಿ ||ಕ್ಷಣ ಮುನ್ನರಿಯದೆ ಅದರ ಆಹಾರಕೆ |ಫಣಿಯ ಮೆಟ್ಟಿದನ ಕುಣಿಸಿದರಯ್ಯ 3ಮಾವನೊಡನೆ ಮನೆಮಾಡಿ ಗೋಕರ್ಣದಿ |ಆ ವುರಗನ ಮೇಲ್ಮಲಗಿದನ ||ಮೂವರ ಮೊಲೆಯುಂಡ ಮೂಲೋಕವರಿಯದ |ಮೂವರಣ್ಣನೆಂದು ಕುಣಿಸಿದರಯ್ಯ 4ಗೋಕುಲದೊಳಗಿನ ಗೋಪಿಯರೆಲ್ಲ |ಏಕಾಂತದಿ ತಮ್ಮೊಳು ತಾವು ||ಶ್ರೀಕಾಂತನ ನಮ್ಮ ಪುರಂದರವಿಠಲನ |ಏಕ ಮೂರುತಿಯೆಂದು ಕುಣಿಸಿದರಯ್ಯ 5
--------------
ಪುರಂದರದಾಸರು
ಹರಿಯೆನ್ನಿ ಹರಿಯೆನ್ನಿ ಹರಿಯೆನ್ನಿರೈಹರಿಯೆಂದವರಿಗೆಲ್ಲಿದುರಿತದಂದುಗವುಪ.ಹರಿಯೆಂದಜಾಮಿಳಗೆ ನರಕ ತಪ್ಪಿತಾಗಲೆಹರಿಯೆಂದ ಕರಿಗೆ ಕೈವಲ್ಯಾಯಿತುಹರಿಯೆಂದ ತರಳಗೆಉರಗಹಾರಾದವುಹರಿಯೆಂದವಅಕ್ಷಯಸಿರಿಪಡೆದ1ಹರಿಸೇವೆಯನೆ ಮಾಡಿ ವಿರಿಂಚಪದವನುಂಡಹರಿಸೇವೆಯಲಿ ನಿಶಾಚರರಸಾದಹರಿಸೇವೆಯಲಿ ಹರಿವರರ್ಮುಕ್ತರಾದರುಹರಿಸೇವೆಯಲಿ ಮತ್ರ್ಯರು ಸುರರಾದರು 2ಹರಿಪಾದ ಸೋಕಲು ಸ್ಥಿರ ಪಾತಾಳದ ಪಟ್ಟಹರಿಪದ ಸೋಕಿದಅರೆಪೆಣ್ಣಾಗೆಹರಿಪಾದ ಸೋಕಿ ಕಾಳುರಗ ಪಾವನನಾದಹರಿಪಾದ ಸೋಕುವಾತುರವಿಡಿದು ಹರಿಯೆನ್ನಿ 3ಮಂಡೂಕಹಿ ಮುಖದಿ ಕಂಡ ಮಕ್ಷಕವ ತಾನುಂಡೇನೆಂಬುವಪರಿಮೃತ್ಯುವಿನಕುಂಡದಿ ವಿಷಯದಹಿಂಡುವಿಚಾರ್ಯಾಕೆಪುಂಡರೀಕಾಕ್ಷಾಂಘ್ರಿ ಕೊಂಡಾಡಿ ಮನದಿ 4ಯುವತಿ ಮಕ್ಕಳು ಮಂದಿರವನಗಲಿಸುವರುಜವನ ಬಂಟರು ಈ ಕಾಯವ ನೆಚ್ಚದೆಅವಿರಳ ಪ್ರಸನ್ವೆಂಕಟವರದ ರಂಗನಸವಿ ನಾಮಾಮೃತದಾಸ್ವಾದವನುಂಬ ದೃಢದಿ 5
--------------
ಪ್ರಸನ್ನವೆಂಕಟದಾಸರು
ಹೀಗಿದ್ದರೆ ಲೇಸು ಜ್ಞಾನಿಗೆಹೀಗಿದ್ದರೆ ಲೇಸು ಪ.ಸತಿಇದ್ದರೆ ಸಮಹಿತದವಳಾಗಿಸುತನಿದ್ದರೆ ನಿಜಮತದವನಾಗಿ 1ಧನವಿದ್ದರೆ ಸಜ್ಜನಕೆ ವಿಭಾಗಮನೆ ಇದ್ದರೆ ಮಧ್ಯಾಹ್ನಕನ್ನತ್ಯಾಗ 2ಭಕುತಿ ಇದ್ದರೆ ಡಂಭಕವನಳಿದು ವಿರಕುತಿದ್ದರೆ ಭವದಾಶೆಯ ಕಳೆದು 3ಮತಿ ಇದ್ದರೆ ಶುಭಮತಿಯವನಾಗಿಧೃತಿ ಇದ್ದರೆ ದುಷ್ಕøತಿಗಳನೀಗಿ4ಪ್ರಸನ್ವೆಂಕಟೇಶನ ಪ್ರಸಾದವನುಣುತವಿಷಮ ಜನನ ಮೃತಿ ಗಸಣೆ ತಪ್ಪಿಸುತ 5
--------------
ಪ್ರಸನ್ನವೆಂಕಟದಾಸರು
ಹುಚ್ಚು ಮಾಡಿದ ಎನ್ನ ಗುರುವುಈ ಹುಚ್ಚನರಿವೊಡೆ ಸಚ್ಚರಿತರಿಗರಿವುಪಆಶ್ರಮ ಧರ್ಮವು ಹೋಯ್ತುನಿರಾಶ್ರಮವೆಂಬುದು ನಿಜವಾಯ್ತುಕುಶ್ರಮಗಳು ನಾಶವಾಯ್ತುಜೀವಭ್ರಮೆಯೆಂಬುದು ಖಿಲವಾಯ್ತು1ಸ್ನಾನವು ಮನದಿಚ್ಛೆಯಾಯ್ತು ಸಂಧ್ಯಾದಿಜಪವೆಲ್ಲ ಮರತೇಹೋಯ್ತುಮೌನವೆಂಬುದು ಬಹಳವಾಯ್ತು ಗುರುತಾನೆಎಂದೆಂಬ ಧ್ಯಾನವುಪೂರ್ಣವಾಯ್ತು2ಕುಲಗಳೆಂಬುವು ಕಾಣದಾಯ್ತುಕುಲಛಲಗಳು ಮರತೇಹೋಯ್ತುಹೊಲೆ ಶುದ್ಧಗಳು ಬರಡುನುಡಿಯಾಯ್ತುನಿಶ್ಚಲನಿಜಾನಂದವೆಂಬುದೇ ಸತ್ಯವಾಯ್ತು3ಭೇದಾಭೇದವು ಮಾಯವಾಯ್ತುಹಾಳುವಾದಗಳು ಕೇಳದಂತಾಯ್ತುಸಾಧುಸಂಗವ ಬಿಡದಂತಾಯ್ತುಸುವಾದವಮಾಡಿ ಸುಖಿಸುವಂತಾಯ್ತು4ದಯೆ ನಿರ್ದಯೆಗಳ ತೊರೆದಾಯ್ತುಭಯ ನಿರ್ಭಯಗಳು ಅದೃಶ್ಯವಾಯ್ತುಜಯಾಪಜಯಗಳು ಕಾಣದಾಯ್ತು ಸ್ವಕ್ಷೇಮಪರಕ್ಷೇಮಗಳ ವಿಚಾರ ಹೋಯ್ತು5ಕೋಪ ತಾಪವು ಶಮವಾಯ್ತುತಾಪತ್ರಯದಬಿತ್ತು ಮೊಳೆಯದಾಯ್ತುಯೋಗ ವಿದ್ಯೆಯ ಹರಿತವಾಯ್ತುನಿರ್ವಾಣವಾಗಿ ಎಲ್ಲ ಇಂತಾಯ್ತು6ಇಂತಹ ಹುಚ್ಚನು ಎನಗೆ ಕವಿಯಿಸಿನಿರಂತರ ಚಿಂತೆಯ ನೆನ್ನ ಪಾಲಿಗಿರಿಸಿಅಂತರಂಗದಿ ತಾನೆ ನೆಲೆಸಿ ಚಿಂತಾಯಕಚಿದಾನಂದ ತಾ ಬೆರೆಸಿ7
--------------
ಚಿದಾನಂದ ಅವಧೂತರು
ಹುಚ್ಚು ಮುಂಡೆ ನೀನಾಗಬೇಡ ಹೇಳುವೆ ಕೇಳುಹುಚ್ಚು ಮುಂಡೆ ಹುಚ್ಚು ಮುಂಡೆಯು ಅಲ್ಲಬ್ರಹ್ಮವೇ ನೀನಾಗಿಹೆ ಹುಚ್ಚು ಮುಂಡೆಪಸರ್ವದೇಹಕೆ ನರದೇಹವು ಉತ್ತಮ ಹುಚ್ಚು ಮುಂಡೆಇರುವ ದೇಹದಿ ನಿನ್ನ ಸಾರ್ಥಕ ಮಾಡಿಕೋ ಹುಚ್ಚು ಮುಂಡೆಉರ್ವಿಪ್ರಪಂಚವು ಸತ್ಯವೆಂದು ಎನಬೇಡ ಹುಚ್ಚು ಮುಂಡೆತೋರುವುದಿಂದ್ರಜಾಲದ ತೆರದಿ ಸ್ವರ್ಗ ಮತ್ರ್ಯವುಹುಚ್ಚು ಮುಂಡೆ1ಸತಿಸುತರನು ನೀನು ನಂಬಿ ಕೆಡಬೇಡ ಹುಚ್ಚು ಮುಂಡೆಸತಿಯೆಷ್ಟು ಸುತರೆಷ್ಟು ಆದರು ನಿನಗೆ ಹುಚ್ಚು ಮುಂಡೆಮಿತಿಯಿಲ್ಲದ ದೇಹವಾದವು ನಿನಗೆ ಹುಚ್ಚು ಮುಂಡೆಮತಿಗೆಟ್ಟು ಮರೆತು ಜನ್ಮವನಂತವ ತಿರುಗುವರೆ2ಸ್ವಪ್ನದ ಸುಖದಂತೆ ಸಂಸಾರವಿದು ಮೃಷೆ ಹುಚ್ಚು ಮುಂಡೆಇರುವೆನಾಚಂದ್ರಾರ್ಕವೆಂದು ಎಂಬೆಯೋ ಹುಚ್ಚು ಮುಂಡೆಅಪ್ಪಯ್ಯ ಹೋದನು ಮುತ್ತಯ್ಯ ಹೋದನು ಈ ಪರಿಯಿಂದೆ ಹುಚ್ಚು ಮುಂಡೆಮುಪ್ಪಾದೆ ಇಂತು ಭವದ ಸುಳಿಯಲಿ ಬಿದ್ದು ಹುಚ್ಚು ಮುಂಡೆ3ಕಾರ್ಯೋಪಾಧಿ ಯಿಂದ ಹುಚ್ಚು ಮುಂಡೆ ನೀನಾದೆ ಹುಚ್ಚುಮುಂಡೆಕಾರ್ಯಕಾರಣ ಉಪಾಧಿಯು ನಿನಗಿಲ್ಲವು ಹುಚ್ಚು ಮುಂಡೆಕಾರ್ಯಗುಣಗಳಿಂದ ನಿನ್ನ ತಿಳಿವುದು ಕಷ್ಟ ಹುಚ್ಚು ಮುಂಡೆಕಾರಣ ಗುಣದಲ್ಲಿ ತಿಳಿಯೆ ತಿಳಿಸುವೆ ನಿನ್ನ ಹುಚ್ಚು ಮುಂಡೆ4ಹೊಂದು ಸದ್ಗುರುಪಾದ ತಿಳಿ ನಿನ್ನ ಬ್ರಹ್ಮೆಂದು ಹುಚ್ಚು ಮುಂಡೆನಿಂದುನಾಶಿಕಗೊನೆಯ ನೋಡಿ ದೃಷ್ಟಿಯಿಡು ಹುಚ್ಚು ಮುಂಡೆಚಂದ್ರರು ಶತಕೋಟಿ ಬೆಳಗುವರು ತಾವಲ್ಲಿ ಹುಚ್ಚು ಮುಂಡೆಸುಂದರ ಚಿದಾನಂದನಾಗುವೆ ನಿಜದಲ್ಲಿ ಹುಚ್ಚು ಮುಂಡೆ5
--------------
ಚಿದಾನಂದ ಅವಧೂತರು