ಒಟ್ಟು 7318 ಕಡೆಗಳಲ್ಲಿ , 132 ದಾಸರು , 4469 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ | ಸೋಕಿದ ಕೊನೆಧೂಳಿ ಪ ತಾಕಿದ ಮನುಜರಿಗೆ ಕಾಕುಬುದ್ಧಿಗಳೆಲ್ಲ ಪರಿಹಾರವಾಗುವವೊ | ಬೇಕಾದ ಪದವಿಯ ಕೊಡುವನು ಶ್ರೀ ಹರಿ ಅ.ಪ ಮಧ್ವಮತವೆಂಬ ಅಬ್ಧಿಯೊಳಗೆ ಪೂರ್ಣ | ಉದ್ಭವಿಸಿದ ಚಂದ್ರನಾ ಗುಣಪೂರ್ಣನಾ || ಅದ್ವೈತಮತÀ ತಮನಿಧಿ ನಿಶಿಕುಠಾರ | ವಿದ್ಯಾರಣ್ಯವ ಗರುವಕೆ ಪರಿಹಾರ 1 ತತ್ವ ವಾರಿಧಿಗಳ ತತ್ವಸುಧೆಯ ಭಾಷ್ಯ | ವಿಸ್ತರಿಸಿ ಇರಲು ಬೇಗದಲಿ || ಚಿತ್ರವಲ್ಲಭನÀ ಸೇವೆಯ ಮಾಡಿ ಟೀಕಂಗಳ || ಸುತ್ತೇಳು ಲೋಕಕ್ಕೆ ಪ್ರಕಟಿಸಿ ಮೆರೆವರ 2 ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ | ಬಿಂದು ಮಾತ್ರದಿ ನೆನೆಯೆ || ಮಂದ ಮತಿಯಾದರೂ ಅಜ್ಞಾನನಾಶವು | ಸುಂದೇಹÀವಿಲ್ಲವು ಅವಾವ ಕಾಲಕ್ಕೆ 3 ಜ ಎಂದು ಪೊಗಳಲು ಜಯಶೀಲನಾಗುವ | ಯ ಎನ್ನೆ ಯುಮರಾಯನಂಜುವನು || ತೀ ಎಂದು ಪೊಗಳಲು ತೀವ್ರ ಪದವಿ ಉಂಟು | ರ್ಥ ಎಂದು ಪೊಗಳಲು ತಾಪತ್ರಯುಪಶಮನ 4 ಯೋಗಿ ಅಕ್ಷೋಭ್ಯತೀರ್ಥರ ಕರಕಮಲಸಂಜಾತ | ಭಾಗವತರ ಸುಪ್ರೇಮ || ಕಾಗಿಣಿ ತೀರದ ಮಳಖೇಡ ನಿವಾಸಾ | ಶ್ರೀ ಗುರು ವಿಜಯವಿಠ್ಠಲ ಸೇವಕ ಭಕ್ತಾ 5
--------------
ವಿಜಯದಾಸ
ಪಾದ 1ಸುರರ ಮಣಿಮಕುಟಗಳು ಸೋಕಿ ಶೋಭಿಪ ಪಾದಪರಮ ಪಾವನೆ ಲಕ್ಷ್ಮಿ ಪಿಡಿದೊತ್ತುವ ಪಾದಧುರದಿ ನರರಥವೇರಿ ದೇದೀಪಿಸಿದ ಪಾದಹರಿವೈರಿಕರಗಳಲಿ ಹೊಳೆವ ಪಾದ 2ಸಿರಿಯುಳ್ಳ ಕುರುಪತಿಯ ಶಿರವೆರಗಿಸಿದ ಪಾದಪರಿದು ನಾಗನ ಶಿರಗಳೊಳು ಹೊಳೆದ ಪಾದಅರವಿಂದಮುಖಿಯರೊಡನತಿ ನರ್ತಿಸಿದ ಪಾದನೆರೆ ಜರೆದ ಶಿಶುಪಾಲನ್ನೊಳಗಿಟ್ಟ ಪಾದ 3ಕರುಗಳೊಡಗೂಡಿ ಕಾನನದಲಾಡಿದ ಪಾದಕರುಣದಿಂ ಪಾಂಡವರ ಕಾಯ್ದ ಪಾದಮರೆಯೊಕ್ಕ ಸುಜನರಿಗೆ ಮುಕ್ತಿಗೊಡುತಿಹ ಪಾದಸ್ಮರಿಸಲಘರಾಶಿಗಳ ಸಂಹರಿಪ ಪಾದ 4ಬಲಿ ಯಜ್ಞವಾಟಕ್ಕೆ ಬಂದು ನೆಲಸಿದ ಪಾದಬಲು ಬೆಳೆದು ಲೋಕಗಳ ಬಂಧಿಸಿದ ಪಾದಕಲಕಿ ಗಂಗೆಯ ಧರೆಗೆ ಕೋಡಿವರಿಸಿದ ಪಾದಸುಲಭದಿಂ ಭಕ್ತರಿಗೆ ಸುಖವೀವ ಪಾದ 5ಧ್ವಜರೇಖೆುಂ ಕೂಡಿ ಥಳಿಥಳಿಸುತಿಹ ಪಾದವಿಜಯವಹ ವಜ್ರದಿಂದೊಪ್ಪುತಿಹ ಪಾದಗಜವ ಶಿಕ್ಷಿಪಮುದ್ರೆ ಗೋಚರಿಸುತಿಹ ಪಾದನಿಜಪದ್ಮದಿಂ ಲೋಕನಿಧಿಯಾದ ಪಾದ 6ಅರೆಯಾದ ಸತಿಯನಂಗನೆಯ ಮಾಡಿದ ಪಾದಧರೆಯ ಧರಿಸಿಹ ಶೇಷ ಧ್ಯಾನಿಸುವ ಪಾದತರುಣನಾಯಕ ಪುರದಿ ಸ್ಥಿರದಿ ನೆಲಸಿದ ಪಾದತಿರುಪತಿಯ ವೆಂಕಟೇಶ್ವರ ನಿಮ್ಮ ಪಾದ 7ಓಂ ವೃಷಭಾಸುರ ವಿಧ್ವಂಸಿನೇ ನಮಃ
--------------
ತಿಮ್ಮಪ್ಪದಾಸರು
ಪಾದ ಕಿಂಕರ ನನ್ನ ಕೈಬಿಡು- ವುದುಚಿತವೇ ರಂಗ ಪ. ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ- ತದಿ ನೀ ಕಾಯೊ ಎನ್ನೊಡೆಯ ರಂಗ ಅ.ಪ. ಅಜಗರಶಯನನೆ ಬುಧಜನ ನಮಿತನೆ ತ್ರಿಜಗವಂದಿತಪಾದ ಪದುಮಜ ಜನಕನೆ 1 ಶಿಶುವಾಗಿ ಗೋಕುಲದ ಪಶುಗಳ ಸಲಹಿದೆ ಶಶಿಭೂಷಣಸಖ ಶಿಶುವ ಕಾಪಾಡೊ 2 ಸಾಂದೀಪಗೊಲಿದೆ ಸಂದೇಹವಿಲ್ಲ ತಂದೆ ಹೆಳವನಕಟ್ಟೆ ರಂಗ ಕೃಪಾಂಗ 3
--------------
ಹೆಳವನಕಟ್ಟೆ ಗಿರಿಯಮ್ಮ
ಪಾದ ತೋರೆಂದು ಪಗುರುಸರ್ವಭೌಮರ ಅಖಂಡ ಸೇವೆಯ ಮಾಡಿವರಸುಮಂತ್ರಾಲಯದಿ ವಾಸಮಾಡಿಸುರಪನಾಲಯವು ಮಂತ್ರಾಲಯವು ಎಂಬಂತೆಹರಿದಾಸರಾಶಯವ ನಿಜಮಾಡಿ ತೋರಿಸಿದ 1ಉಡುಪಿಯೊಳು ಗುರುಸಾರ್ವಭೌಮರ ವೃಂದಾವನವಚತುರತನದಿಂದ ಪ್ರತಿಷ್ಠಾಪನೆಯ ಮಾಡಿಭರತಖಂಡದ ತೀರ್ಥಕ್ಷೇತ್ರಗಳ ಸಂಚರಿಸಿಭಕುತರಿಗೆ ಶ್ರೀ ಮಠದ ಮ'ಮೆ ತೋರಿದ ಗುರು2ಶ್ರೀ ಸ'ುೀರ ಸಮಯ ಸಂವರ್ಧಿನಿ ಸಭೆಯಸಂಸ್ಥಾಪನೆಯ ಮಾಡಿ ಪಂಡಿತರಿಗೆಭೂರಿ ಸಂಭಾವನೆ ಮೃಷ್ಟಾನ್ನ ಭೋಜನದಿತ್ಟುಗೊಳಿಸುತ ದೇಶ ದಿಗ್ವಿಜಯ ಮಾಡಿದ 3ಶ್ರೀ ಮಠದ ಕೀರ್ತಿಯನು ಶಿಖರಕ್ಕೆ ಮುಟ್ಟಿಸಿಸ್ವರ್ಣಮಂಟಪರಚಿಸಿ ವೈಭವವ ಬೆಳೆಸಿಶ್ರೀಮೂಲರಾಮ ದಿಗ್ವಿಜಯ ಜಯರಾಮರನುಭಕ್ತಿುಂದ ಪೂಜಿಸಿದ ಭಾಗ್ಯಶಾಲಿ 4ಗುರುಸಾರ್ವಭೌಮರಿಗೆ ಪರಮ ಪ್ರೀತಿಯ ಕಂದವರಮಧ್ವಮತ ಸುಧಾಂಬುಧಿಗೆ ಚಂದ್ರಪರಮಾತ್ಮ ಭೂಪತಿ'ಠ್ಠಲನ ಪೂಜಿಸುವಪರಮ ಪ್ರಶಾಂತ ಧೀರೆಂದ್ರ ಸನ್ನಿಧಿವಾಸ 5
--------------
ಭೂಪತಿ ವಿಠಲರು
ಪಾದ ನಂಬೋ ಸಿದ್ಧಾಂತ ಸಾರವ ಹೃದಯದಿ ತುಂಬೋಪ ಶತಕೋಟಿ ಜನ್ಮ ಸುಕೃತದಿ ಅತುಳ ವೈಷ್ಣವಜನ್ಮ ದೊರಕಿತು ನಿಜದಿ ಪಾದ ರಜದಿ ಮುಣುಗುತ ದುರ್ವಿಷಯಗಳನು ನಿಗ್ರಹಿಸೊ ನೀ ತ್ವರದಿ 1 ಈತನ ವಾಕ್ಯವೆ ವೇದವಾಕ್ಯಗಳೆಂದರಿಯೊ ಜಿಷ್ಣು ಸರ್ವೇಶ ಧಾತೃಗಳೊಂದೆಂಬ ದು ರ್ವಾದಿ ದುರ್ಗಜಕೆ ಕೇಸರಿಯಾಗಿರುವ 2 ವಟು ವೃಷ್ಟಿವಂಶ ಲಲಾಮ ತಟಿತಾಭ ಜಗನ್ನಾಥ ವಿಠಲಗೆ ಪ್ರೇಮಾ ಸ್ಫುಟರೂಪತ್ರಯನೆ ನಿಷ್ಕಾಮಾ ನಿ ಷ್ಕುಟಿಲ ಭಾರತಿರಮಣ ಹನುಮಂತ ಭೀಮ 3
--------------
ಜಗನ್ನಾಥದಾಸರು
ಪಾದ ನೋಡಿದೆ ಪ ಚೆನ್ನದೇವಿಯ ಪಾದಕೆರಗಿದೆ ಮನ್ನಿಸೆಂತೆಂದವಳ ಬೇಡಿದೆ ಅ.ಪ. ಚರಣ ಯುಗಳಲಿ ಮೆರೆವ ನೂಪುರಧರಿಸಿ ಪೀಠದೊಳಿಂದಿರೆಜರದ ಶೀರೆಯನುಟ್ಟು ನಡುವೊಳುಹಿರಿದು ಒಡ್ಯಾಣದೊಳು ನಿಂದಿರೆ 1 ಕುಂಡಲ ಮೂಗು ಮುಕುರವುಪರಮ ತೇಜದ ಸೊಬಗ ತಂದಿರೆ 2 ಹೊಳೆವ ಕಂಗಳು ಹಣೆಯ ಕುಂಕುಮಥಳಿಸೆ ಸರಸಿಜ ಮಂದಿರೆಬಿಳಿಯ ಕೊಡೆಯನು ಹಿಡಿವ ತೆರದಲಿಎಳೆಯ ನಾಗವು ಹಿಂದಿರೆ 3 ಬೆರಳೊಳುಂಗುರ ಕುರುಳು ಸುಂದರಹೆರಳು ಸಿಂಗರದಿಂದಿರೆತಿರುಳು ಗಂಧದ ಸರಳ ಮೂರ್ತಿಯತರಳೆ ಎನ್ನಾಯ ಮುಂದಿರೆ 4 ಧೀರ ಭಕುತರ ಪೊರೆವುದಕೆ ಕರವೀರ ಪುರದೊಳು ಬಂದಿರೆಧಾರುಣೀಯೊಳು ಮೆರೆವ ಗದುಗಿನವೀರನಾರಾಯಣನ ಚಂದಿರೆ5
--------------
ವೀರನಾರಾಯಣ
ಪಾದ ಭಕ್ತಿಯಿಂದ ಭಜಿಸು ಮನವೆ ಅರ್ಥಿಯಿಂದ ಪೂಜಿಪರಿಗೆ ವಿತ್ತಾದಿಗಳಿತ್ತು ಕಾಯ್ವ ಪ ಹಿಂದೆ ನಾರದರಿಂದಿರೇಶಗೆ ವಂದಿಸಿ ಬೆಸಗೊಳಲು ಛಂದದಿಂದಲಿ ಸಿಂಧುಶಯನ ಬಂಧಮೋಚಕವೆಂದು ಪೇಳಿದ 1 ತಿಳಿದು ನಾರದರಿಳೆಯೊಳರುಹೇ ಕಲಿತು ಜನಗಳಲ್ಲಾರಂಭಾ ಪಾಲು ಘೃತಾದಿಗಳಿಂದ ಪೂಜಿತ 2 ದ್ವಿಜವಣಿಕ್ ಭೂಭುಜರು ನಿಜಭಕುತಿಯಿಂದ ಯ್ಯಜಿಸೆ ಸೋಜಿಗವನ್ನೇ ತೋರಿದುದರಿಯ 3
--------------
ಪ್ರದ್ಯುಮ್ನತೀರ್ಥರು
ಪಾದ ಮುಖ್ಯ ಪ್ರಾಣಾ ನಂಬಿದೇ ನಿನ್ನಯ ಪಾದಾ ಡಂಬರ ತೊಲಗಿಸಿ ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ಪ ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಹಂಸಮಂತ್ರ ತಪ್ಪದೆ ದಿನದಿನ ಒಪ್ಪದಿಂದಲಿ ಭಜಿಸಿ ತಪ್ಪಿಸೋ ಭವವಾ ಸ ಮೀಪದ ಜೀವ ಕೊ ಅಪ್ಪನಂದದಿ ಪುಣ್ಯ ವಪ್ಪಂತೆ ಕರುಣಿಸೊ ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ 1 ಹತ್ತೇಳು ಎರಡಾಯುತ ನಾಡಿಯೊಳು ಉತ್ತರÀ ಪಾಲಿಸೋ ಉತ್ಕ್ರಮಣದಲ್ಲಿ ನೆತ್ತಿಯದ್ವಾರದಿಂದ ಎತ್ತಮರಿಯಲೀ ಸದದೆ ತತ್ತುವರೊಳು ಜೀವೋ ತ್ತಮನೆ ಸತ್ ಚಿತ್ ಎನಗೆ ಕೊಡು ಉತ್ತರ ಧರಿಸೋ 2 ಅಂತರಂಗದಿ ಉಸುರಾ ಹೊರಗೆ ಬಿಟ್ಟು ಅಂತರಂಗಕ್ಕೆ ಸೇರುವ ಪಂಥದೊಳು ನೀನೆ ನಿಂತು ನಾನಾಬಗೆ ತಂತು ನಡಿಸುವ ಹೊಂತಕಾರಿ ಗುಣವಂತ ಬಲಾಢ್ಯ 3 ಪಂಚಪರಣ ರೂಪನೆ ಸತ್ವ ಕಾಯಾ ಪಂಚೇಂದ್ರಿಯಗಳ ಲೋಪನೆ ಪರಮೇಷ್ಟಿ ಸಂಚಿತಾಗಾಮಿ ಬಿಡಿಸಿ ಕೊಂಚ ಮಾಡೋ ಪ್ರಾರಬ್ಧ ವಂಚನೆ ನೆನೆದೊ ಅಂಚಗಂಚಿಗೆ ಪರಪಂಚವೆ ಓಡಿಸಿ ಪಂಚವಕ್ತ್ರ ಹರಿ ಮಂಚದ ಗುರುವೇ 4 ಯೋಗಾಸನದೊಳಿಪ್ಪ ಯಂತ್ರೋದ್ಧಾರಾ ಭಾಗವತರಪ್ಪಾ ಯೋಗಿಗಳೀಶಾ ವ್ಯಾಸಾ ಯೋಗಿಗೊಲಿದ ವ್ಯಾಸಾ ಶ್ರೀ ತುಂಗಭದ್ರಾ ವಾಸಾ ಬಾಗುವೆ ಕೊಡು ಲೇಸಾ ಜಾಗರ ಮೂರುತಿ5
--------------
ವಿಜಯದಾಸ
ಪಾದ ಲಂಬೋದರಅಂಬರಾಧಿಪ ಮನದ್ಹಂಬಲವ ನೀಡೆಂದು ಪ ನಾಕನಾಥನುತ ಪಿನಾಕಿಸುತ | ಕಾಕುಮತಿಯ ಕಳೆದು ಕಾಯೊಖುವಾಹನೇಕದಂತ 1 ಭದ್ರಮೂರುತಿಯೆ ಕರುಣಾಬ್ಧಿತ್ವರಿತದ್ಧರಿಸು ಎಂದು ನಮಿಪೆ ಅದ್ರಿಜೆ ಕುಮಾರ ನಿರುತ 2 ಸಿಂಧೂರ ವದನನೆ ಸುರವೃಂದ ವಂದಿತವಂದಿಸಿ ಬೇಡುವೆ ಶಾಮಸುಂದರನ ಪ್ರೀತಿ ಪಾತ್ರ 3
--------------
ಶಾಮಸುಂದರ ವಿಠಲ
ಪಾದ ಸೇವೆಯಿಂದಲಿ ಸುಖಿಸೋಳೊ ಲಕ್ಷ್ಮೀಲೋಲ ಪಾಡಿ ತೂಗುವಳೊ ಮೋಹದಲಿ ಯಶೋದ ಯೋಗಿ ಜನರು ಕೊಂಡಾಡಲ್ವಿನೋದ 1 ಜಲಧಿ ಭೂದೇವಿ ಪ್ರಜ್ವಲಿಸುವ ಆಲದೆಲೆಯು ತಾನಾಗಿ ನಿದ್ರೆಹಸಿವು ಬಿಟ್ಟು ನಿರುತದಿ ಆತನ- ಲ್ಲಿದ್ದಳಂಭ್ರಣಿ ಸ್ತೋತ್ರದಲಿ ಭೂದೇವಿ 2 ವಟದ ಎಲೆಯ ಮೇಲೆ ವಟುವಾಗಿ ಮಲಗಿ ಉಂ- ಗುಟವ ಬಾಯೊಳಗಿಟ್ಟು ಮುದದಿ ಚಪ್ಪರಿಸೆ ಕಟುತರದಲಿ ನಾಲ್ಕು ವೇದವ ತೋರುತ ಪಟುತರದಲಿ ಯೋಗನಿದ್ರೆ ಮಾಡಿದನು 3 ಹದಿನಾಲ್ಕು ಲೋಕ ತನ್ನುದರದಲ್ಲಿಡುವ ಪದುಮಾಕ್ಷ ಶ್ರೀಕೃಷ್ಣ ಪರಮಾತ್ಮ ಲಾಲಿ ಅಜಭವಸುರರೆಲ್ಲ ಭಜನೆಯ ಗೈವರು ಮುದದಿ ಶಯನವ ಮಾಡೊ ಮಧು ಮುರಾಂತಕನೆ 4 ಕಡಲಶಯನ ಹರಿ(ಯ) ತೊಟ್ಟಿಲೊಳಿಟ್ಟು ಬಿಡದೆ ನಾರಿಯರೆಲ್ಲ ಪಾಡಿ ತೂಗುವರು ಪೊಡವಿಗೊಡೆಯ ನಿನ್ನ ನಾಮ ಕೊಂಡಾಡಲು ಬಿಡದೆ ಭಕ್ತರ ಕಾಯೊ ಭೀಮೇಶಕೃಷ್ಣ 5
--------------
ಹರಪನಹಳ್ಳಿಭೀಮವ್ವ
ಪಾದ ಸೇವೆಯೊಳಿರುವಂತೆ ಕಾವುದೆನ್ನಯ ಮನ ಪಾವನ ಮೂರುತಿ ಹರಿಯೇ ಪ ಒಲವಿನ ಸಂಸಾರ ಸ್ಥಿರವೆಂದು ನಂಬುತ್ತ ಬರಿದೆ ಪೋಗದೆ ನಿಜದರಿಪಿನೋಳ್ ನಿಲಿಸೆನ್ನಾ ಹರಿಯೇ 1 ಎಂದು ಕುಂದದ ನಿತ್ಯಾನಂದವಾಗಿಹ ನಿಜ ಛಂದದೊಳಿರುವತ್ಯಾನಂದದೊಳ್ ನಿಲಿಸೆನ್ನಾ ಹರಿಯೇ 2 ಮರೆಯವೆ ಇರುವಂತೆ ಎರಕವಾಗಿಸೆನ್ನಾ ಹರಿಯೇ 3 ಆ ಸ್ವಪ್ರಕಾಶದಿ ಸೂಸದೆ ನಿಲುವಂತೆ ಭಾಸುರ ಘನಸುಖವಾಸದೊಳ್ ನಿಲಿಸೆನ್ನಾ ಹರಿಯೇ 4 ಭಾವಭಾವನೆಯಲ್ಲಿ ತೀವಿ ನಾರಾಯಣಾ ಪಾವನ ಗುರುಮೂರ್ತಿ ಸೇವೆ ಶಾಂತಿಯನೀಯೋ ಹರಿಯೇ 5
--------------
ಶಾಂತಿಬಾಯಿ
ಪಾದ ನಂಬಿದೆ ಜನಕೆ ಪಾರುಗಾಣಿಪ ಪರಮ ಕರುಣಿ ಶ್ರೀ ಧೀರೇಂದ್ರವರ್ಯಾ ಪ ನಿತ್ಯ ಅನವರತ ಭಕ್ತಿಯನೆ ಇತ್ತೆನ್ನ ಕಾಯೆಯ್ಯ ಕರುಣಾನಿಧೆ ಅ.ಪ. ವಸುಧೀಂದ್ರ ಕರಕಮಲ ಸಂಜಾತ ವಸುಧೆಯೊಳು ವಾಸವಾಗಿಹ ಭಕ್ತ ಜನಕೆಲ್ಲಾ ವಾಸವಾನುಜ ಶ್ರೀ ವಾಸುದೇವನ ಸರ್ವಜಗಕೆಲ್ಲಾಪಾಯನೆಂಬಾ ವಾಸುದೇವನ ಮತವ ಬೋಧಿಸುತೆ ಸಾತಾರಾ ಪುನಯಾದಿ ನಗರದ ವಾದಿಗಳನೆಲ್ಲಾ ವಾದದಿಂದಲಿ ಗೆದ್ದು ಬಹುಮಾನವನೆ ಪಡೆದು ಮಹಿಯೊಳಗೆ ಬಹು ಖ್ಯಾತಿ ಪಡೆದ ಮಹಾಮಹಿಮ 1 ಭೂರಮಣ ಶ್ರೀಕಾಂತ ಬಹುಕೋಪದಿಂದಲಿ ಕೋದಂಡಪಾಣಿಯಾಗಿ ಭವಜನಕೆ ಮೋಹವನೆ ಬೀರುವಾ ಸಮಯದಲಿ ಬಹು ಭ್ರಾಂತಿಗೊಂಡು ಇರಲು ಭಾರತೀಶನ ದಯದಿ ಭಾಗೀರಥಿಯ ಕೂಡಿ ಬಹುಭಕ್ತಿಯಿಂದ ಒಲಿಸಿ ಭೂಮಿಜೆಯ ಕಳ್ಳನನೆ ಸಂಹರಿಪ ಕಾರ್ಯದಲಿ ಬಹುಸೇವೆಗೈದಂಥ ಪುಣ್ಯಶಾಲಿ 2 ಶ್ರೀರಮಣನಾಜ್ಞೆಯಲಿ ಭಜಿಪ ಭಕ್ತರಿಗೆಲ್ಲ ಬೇಡಿದಿಷ್ಟಾರ್ಥಗಳ ಸಲಿಸುತ್ತಲೀ ಶ್ರೀಕೃಷ್ಣಭಕ್ತರಿಗೆ ಕೃಷ್ಣವಾಗಿಹ ಮನವ ಉತ್ಕøಷ್ಟಗೈಯ್ಯುತ್ತಲೇ ಶ್ರೀಸುರಪನಾಯಕೆ ಸರಿಮಿಗಿಲು ಎಂದೆನಿಪ ಬಹುಭಾಗ್ಯವನ್ನೆ ಪಡೆದು ಶ್ರೀಗುರುತಂದೆವರದ-ಗೋಪಾಲ ಅಸಿ ಬಿಟ್ಟು ಬಿಡದಲೆ ಭಕ್ತಿಯಿಂ ಭಜಿಪ ಗುರುವರ್ಯ 3
--------------
ಸಿರಿಗುರುತಂದೆವರದವಿಠಲರು
ಪಾದ ನೆನೆವ ದಾಸರ ಕಾಮಧೇನು ನೀನಹುದೊ ಪ ಎಂದು ಕಾಂಬೆನು ನಿನ್ನ ಸುಂದರ ಮೂರುತಿಯ ನೆಂದು ಬಯಸುತಲಿರ್ದೆ ಸಂಧಿಸಿತಿಂದಿಗೆ 1 ಕಮಲನಾಭನೆ ನಿನ್ನಯ ಅಮರ ಮಹಿಮೆ ಕಾಣ್ವ ಭ್ರಮೆಯಪಡುತಲಿರ್ದೆ ಕ್ರಮದಿ ಸಾಧಿಸಿತಿಂದು 2 ಚಿನುಮಯ ಶ್ರೀರಾಮ ಘನ ಮಂದಮತಿ ನಾನು ನೆನವು ಮರೆದೆ ಕ್ಷಮಿಸಿ ಕನಿಕರದಿ ಕಾಯೊ 3
--------------
ರಾಮದಾಸರು
ಪಾದಂಗಳ ತೋರಿಸೋ ನಾರಾಯಣ ಪಾದಂಗಳ ತೋರಿಸೊ ಪ ಸಾದರ ಭಕುತಿಯ ನಿನ್ನಲಿ ಇರಿಸೋಮೋದದಿ ಭಜಿಪಂತೆ ನನ್ನದು ಪ್ರೇರಿಸೊ ಅ.ಪ. ನಾಗಾದಿ ಕಪ್ಪತ್ತ ಗಿರಿಯನ್ನೆ ಚಿನ್ನವನ್ನಾಗಿಸಿ ಬಿಡಲೆಂದು ಯತ್ನಿಸುತ್ತಿದ್ದನಾಗಾರ್ಜುನನ ನೀಗಲು ಭುವಿಯೊಳುಬೇಗದಿ ಬಂದಿ ವೀರನಾರಾಯಣ 1 ಮೈಯೊಳು ಕವಚವ ಶಿರದಿ ಕಿರೀಟವಕೈಯೊಳು ಚಕ್ರ ಗದಾ ಶಂಖ ಧರಿಸಿರಯ್ಯನೆ ಗದುಗಿನೊಳಿಳಿದು ಆ ದೈತ್ಯನಹೊಯ್ಯಲು ಬಂದ ಶ್ರೀ ವೀರನಾರಾಯಣ 2 ತೋರ ಕನ್ನಡದಲ್ಲಿ ವರ ಕವಿಯಾದ ಕುಮಾರ ವ್ಯಾಸನಿಂದ ಭಾರತ ರಚಿಸಿದಿಧೀರ ಶ್ರೀ ಪುರಂದರದಾಸರು ಕರೆದಿಹಭಾರತಮಲ್ಲ ಶ್ರೀ ವೀರನಾರಾಯಣ 3
--------------
ವೀರನಾರಾಯಣ
ಪಾದತೋರೋ ಪದ್ಮಾಕ್ಷ ಬಾರೋ ಪ. ಪಾದಪದ್ಮವ ತೋರೋ ಪದ್ಮಾಕ್ಷ ಬಾರೋ ಆದಿಮಧ್ಯಾಂತ ಸ್ವರೂಪ ಮೈದೋರೋ ಅ.ಪ. ಬಲಿಯನ್ನು ತುಳಿದಂಥ, ಭೂಮಿಯನಳೆದಂಥ ಶಿಲೆಯಾಗಿದ್ದವಳ ಕಲುಷವ ಕಳೆದಂಥ 1 ಶಿಶುರೂಪದಿಂದಲೆ ಶಕಟನ ಒದ್ದಂಥ ಶಶಿಮುಖಿಯಶೋದೆಗೆ ಶಿಶುವೆನಿಸಿ ಮೆರೆದಂಥ 2 ಗೊಲ್ಲರ ಮನೆಮನೆಗೆ ಕಳ್ಳನಂದದಿಪೊಕ್ಕು ನಲ್ಲೆಯರ ಕೈಪಿಡಿಗೆ ನಿಲ್ಲದೋಡುವ ಮುದ್ದು 3 ಕಾಳಿಂಗನ ಫಣೆಯೊಳ್ ಕೋಲಾಹಲದಿ ಕುಣಿದ ಕಾಳಿಂಗನರಸಿಯರಿಗೆ ತಾಲೀ ಭಾಗ್ಯವನಿತ್ತ4 ಕರುತುರುಗಳ ಮರೆಸಿ ದೊರೆ ನಿನ್ನರಸಿದ ಪರಮೇಷ್ಠಿಯೆ ತನ್ನ ಕರದಿಂ ಪೂಜಿಸಿದಂಥ 5 ಮಾವ ಕಂಸನ ಕೊಂದು ತಾಯಿ ದೇವಕಿ ವಸುದೇವಸುತ ವಾಸುದೇವನೆಂದೆನಿಸಿದ 6 ಸಿರಿದೇವಿಯೇ ನಿಜಕರಗಳಿಂದೊತ್ತುವ ಪರಮಪಾವನ ಪದಸರಸೀರುಹ 7 ವರಶೇಷಗಿರಿದೊರೆ ಶರಣರ ಮರೆವರೆ ಶಿರಬಾಗಿ ಬೇಡುವೆ ಭರಿಸೆನ್ನನೆನುವೆ 8
--------------
ನಂಜನಗೂಡು ತಿರುಮಲಾಂಬಾ