ಒಟ್ಟು 3030 ಕಡೆಗಳಲ್ಲಿ , 117 ದಾಸರು , 2252 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೆ ಸುಬುದ್ಧಿ ನಿನ್ನ ಕಾಣದೆ ಇರಲಾರೆ ಕಾಣೆ ಸಖಿ ಜಾಣೆ ಪ್ರವೀಣೆ ಪ.ಮಾರನ ಶರಗಣ ದಾರುಣ ನೀಗವ್ವನಾರಿ ನಾರೀಮಣಿ ಕಾಳಾಹಿವೇಣಿತೋರೆ ನಿನ್ನಧರದಸಾರಸುಧೆಯೆನಗೆಚಾರುಹಿತಾನಂದ ಕಾರಣ ನೀರೆ1ಮಂದಗಮನೆ ಕೇಳೆ ಇಂದಿಗೆ ನಿನ್ನರವಿಂದಶರನಿಟ್ಟಧ್ವರ್ಯ ಕುಚದ್ವಂದ್ವವಹೊಂದಲು ಬಂದಿಹ ಅವನೊಳುಹಿಂದುಮುಂದಾಡಲಿ ಬೇಡೆನಿಂದುಮಾತಾಡೆ2ಪಂಕಜಗಂಧಿ ಮುದಾಂಕಿತಳೆ ನಿನ್ನಸೋಂಕಲು ಪ್ರಸನ್ವೆಂಕಟೇಶಭೋಂಕನೆ ಬಂದಿಹ ಚಿಂತಾಯಕ ಹೃದಯಪರಿಯಂಕದಿ ಸುಖಿಸೇಳೇಣಾಂಕ ಮುಖಿ 3
--------------
ಪ್ರಸನ್ನವೆಂಕಟದಾಸರು
ಬಾರೊ ಮುನಿಸೇತಕೆಭಾವಜನಯ್ಯಪಮಾವನಳಿಯನೆ ಬಾರೊ ಭಾವತನಯನೆ ಬಾರೊ |ಮಾವನ ಮಡದಿಯ ಮಗಳ ಸೊಸೆಯಗಂಡ1ಅತ್ತಿಗೆಮೈದುನನೆ ಬಾರೊ ಅತ್ತಿಗೆಯ ಮಗಳಗಂಡ|ಮತ್ತೆ ಮೇಲೆ ಅತ್ತಿಗೆಯ ಪುತ್ರಿಯ ಮುದ್ದಾಡುತ 2ಅಂಬುಜನಯನನೆ ಬಾರೊ ಆದಿಮೂಲನೆ ಬಾರೊ |ಕಂಬದಿಂದೊಡೆದು ಬಂದ ಪುರಂದರವಿಠಲಯ್ಯ 3
--------------
ಪುರಂದರದಾಸರು
ಬಾರೋ ಗೋಪಾಲ ಬಾಲ ಸುಶೀಲದೇವಕಿ ಬಾಲಕಂಸಾರಿಶ್ರೀಲೋಲಪಗುರುಳು ಕೂದಲು ಹೊಸ ಅರಳೆಲೆಹೊಳಪುಕೊರಳ ಕೌಸ್ತುಭಹಾರ ಸರಗಳ ಝಳಪು 1ಮುದ್ದು ಬಾಲನೆ ಹೊಸ ಬೆಣ್ಣೆಮುದ್ದೆಯ ನೀವೆಸದ್ದು ಮಾಡದೆ ಬಾರೊ ಉದ್ಧವÀಸಖನೆ 2ಕಂಠದೊಳಸಲಿ ವೈಕುಂಠ ಶ್ರೀಪತಿಗೆಸೊಂಟಗೆಜ್ಜೆಯು ಕಿರುಗಂಟಿಗಳೊಲಿಯೆ 3ಭಕ್ತಿಯಿಂದಲಿ ಕರವೆತ್ತಿ ಪ್ರಾರ್ಥಿಸುವೆನುಅಪ್ರಮೇಯನೆ ಪುರುಷೋತ್ತಮ ನಮಿಪೆ 4ಕರುಣದಿಂದಲಿ ಬಾರೊಕಮಲಸಂಭವನಯ್ಯಕಮಲನಾಭ ವಿಠ್ಠಲ ನಮಿಸುವೆ ಸತತ 5
--------------
ನಿಡಗುರುಕಿ ಜೀವೂಬಾಯಿ
ಬಾರೋ ನಮ್ಮ ಮನೆಗೆ ಬೇಗನೆ ಗೋಪಾಲಕೃಷ್ಣಬಾರೋ ಶ್ಯಾಮ ಸುಂದರಾಂಗನೆ ಪಬಾರೊ ಭಾಮೆ ರುಕ್ಮಿಣೀಶ ಬಾರೊಯೋಗಿಹೃದಯವಾಸಬಾರೊ ದ್ವಾರಕಾಪುರೀಶ ಬಾರೊ ಭಕ್ತಜನರ ಪೋಷ ಅ.ಪಅಂದಿಗೆ ಕಾಲ್ಗೆಜ್ಜೆ ಸರಪಣಿ ಪಾಡಗರುಳಿಯುಕೆಂದಾವರೆಯು ಪೋಲ್ವಪಾದದಿನಂದಗೋಪತನಯಗೋಪವೃಂದದೊಳಗೆ ಕುಣಿದು ನಲಿದುಇಂದಿರೇಶ ಶ್ರೀಶನೆ ಬಂದೊಂದುಹೆಜ್ಜೆನಿಡುತ ಮುದದಿ 1ಉಟ್ಟದಟ್ಟಿಯು ಪಟ್ಟೆಚಲ್ಲಣ ಹವಳಕಟ್ಟುಗಟ್ಟಿ ಸರಪಣಿ ಕಿರುಗಂಟೆಯುಕಟ್ಟಿದ ಉಡುದಾರಗೆಜ್ಜೆಶ್ರೇಷ್ಠತನದಿ ಮೆರೆಯುತಿರಲುಪುಟ್ಟಬಾಲರೊಡನೆ ಪುಟ್ಟಪುಟ್ಟ ಹೆಜ್ಜೆನಿಡುತ ನಲಿದು 2ದುಂಡು ಕರಕೆ ಗುಂಡು ಬಿಂದಲಿ ಮುಂಗೈಮುರಿಗೆಉಂಗುರಗಳು ಶೋಭಿಸುತಲಿಬಂದಿ ಬಾಪುರಿಗಳು ತೋಳಬಂದಿ ನಾಗಮುರಿಗಿ ಕರದಿಚಂದ್ರನನ್ನು ಪಿಡಿದು ನಲಿದಸುಂದರಾಂಗ ಚೆಲುವ ಕೃಷ್ಣ 3ಪದಕ ಮುತ್ತಿನ ಸರಗಳ್ಹೊಳೆಯುತವೈಜಯಂತಿಮಾಲೆಸರಿಗೆ ಏಕಾವಳಿಗಳೊಲಿಯುತಪದುಮನಾಭ ನಿನಗೆ ದಿವ್ಯಮುದದಿಕೌಸ್ತುಭಮಾಲೆ ಹೊಳೆಯೆಯದುಕುಲೇಶ ಉಡುಪಿವಾಸಉದದಿ ಶ್ರೀಶಉದ್ಧವಸಖನೆ4ಸೋಮಸೂರ್ಯರ ಕಾಂತಿ ಸೋಲಿಪ ಮುಂಗುರುಳು ಮುಖವುಕಾಮಜನಕ ಕಮಲಲೋಚನಹೇಮಮಣಿ ಕಿರೀಟಕುಂಡಲಪ್ರೇಮತೋರ್ವ ಫಣಿಯ ತಿಲಕಶ್ರೀ ಮಹೀಶ ಶ್ರೀಶನೆ ಶ್ರೀ-ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ
ಬಾಲನ ನೋಡಿರೆನಿವಾಳಿಸಿಆಡಿರೆಕಾಲಅಂದುಗೆಕೈ ಕುಣಿಸದೆ ಸವಿಮಾತಾಲಿಪನ ನಮ್ಮಪ್ಪನ ಪ.ಬಾಲಕರನ್ನನ ಉಂಗುರುಗುರುಳಿನ ಸುಳಿಯೊಭೃಂಗಾವಳಿಯೊ ಶ್ರೀಲೋಲನ ವಿಸ್ತರ ಬಾಳವು ಕಳೆಗೇಡಿಯೊಪೊಂಗನ್ನಡಿಯೊಪಾಲ್ಗಡಲ ಪ್ರಭುವಿನೀ ಬಟ್ಟಗಲ್ಲಗಳೊಮರಿಯಾವಿಗಳೊಶೂಲಿಯ ಮುತ್ತಿದ ತಿದ್ದಿದ ಹುಬ್ಬಿನ ಹೊಳವೊನಿಂಬ ಸುದಳವೊ 1ಯದುಕುಲ ತಿಲಕನ ಢಾಳಿಪ ಕಂಗಳ ಠಾವೊತಾವರೆ ಹೂವೊಮದನನಯ್ಯನ ಮೀಟಿದ ಮೂಗಿನ ಕೊನೆಯೊಸಂಪಿಗೆ ನನೆಯೊಸದಮಲ ಲೀಲನ ಸೊಬಗಿನ ನಾಸಾಪುಟವೊಮುತ್ತಿನ ಬಟುವೊವಿಧುವಂಶೇಂದ್ರನ ವೃತ್ತ ಮನೋಹರ ವದನೊಮೋಹದ ಸದನೊ 2ಸುರರುಪಕಾರಿಯ ಎಳೆದುಟಿಯ ಕೆಂಬೊಳವೊಬಿಂಬದ ಫಲವೊಗರುಡಾರೂಢನ ಮೊಳೆವಲ್ಲುಗಳ ಬಿಳುಪೊಕುಂದಕುಟ್ಮಳವೊಕರುಣಾಂಬುಧಿಯ ಕಿವಿ ಶುಕ್ತಿಯೊ ಗದ್ದೊಮುದ್ದಿನ ಮುದ್ದೊಶರಣರ ಪ್ರಿಯನ ತ್ರಿರೇಖೆಯ ಕಂದರವೊ ಸುಂದರದರವೊ 3ದೇವಕಿತನಯನ ಪುಷ್ಟಯುಗಳದೋರ್ದಂಡೊಕಲಭದ ಶುಂಡೊದೇವವರೇಣ್ಯನ ಕರತಳದಂಗುಲಿ ಸರಳೊಕೆಮ್ಮಾಂದಳಿಲೊಭಾವಿಕ ಜನಜೀವನ ಪೀನೋನ್ನತ ಉರವೊವಜ್ರದ ಭರವೊಸೇವಕಪಕ್ಷನ ಉದರದವಲ್ಲಿತ್ರಿವಳಿಯೊ ಅಮರರಹೊಳಿಯೊ 4ಅಜನಯ್ಯನ ಅಚ್ಯುತನ ನಾಭಿಯ ಸುಳಿಯೊಅಮೃತದೊಕ್ಕುಳಿಯೊತ್ರಿಜಗದ ಗರ್ಭ ವಿನೋದಿಗಳರಸನ ಮಣಿಯೊಪಚ್ಚದ ಮಣಿಯೊಸುಜನರ ಮಾನಿಯ ಬಟ್ಟದೊಡೆಯ ಸಂರಂಭೋಎಳೆವಾಳೆಯ ಕಂಭೋಗಜವರದನ ಗೋವಿಂದನ ಜಾನುಗಳ ಪೊಗರ್ವೊಹರಿಮಣಿಯ ಪೊಗರ್ವೊ 5ತ್ರಿಗುಣಾತೀತನಂತನ ಜಂಘಗಳಿಳಿಕ್ಯೊ ಶರಬತ್ತಳಿಕ್ಯೊನಿಗಮಾಗಮ್ಯನ ಚರಣಯುಗಂಗಳ ನಿಜವೊಅರುಣಾಂಬುಜವೊಮೃಗನರರೂಪನ ಅನುಪಮ ನಖಗಣ ಮಣಿಯೊಬಾಲಖಮಣಿಯೊಸುಗಮನ ಪದತಳದಂಕುಶ ಧ್ವಜಾಂಬುರೇಖೆÉ್ಯೂೀವಿದ್ಯುರ್ಲೇಖೆÉ್ಯೂ 6ಆಭರಣಗಳಿಗೆ ಆಭರಣವೆ ಎಳೆಗರುವೆ ಕಲ್ಪತರುವೆಸೌಭಾಗ್ಯದ ಶುಭಖಣಿಯೆ ನಂದಾಗ್ರಣಿಯೆ ಚಿಂತಾಮಣಿಯೆ ನಿನ್ನ ಬಿಗಿದಪ್ಪುವ ಭಾಗ್ಯವಿನ್ನೆಂತೊಉಮ್ಮುಕೊಡು ನಮ್ಮಮ್ಮಶ್ರೀಭೃತ ಪ್ರಸನ್ವೆಂಕಟ ಕೃಷ್ಣ ತಮ್ಮ ಬಾ ಪರಬೊಮ್ಮ 7
--------------
ಪ್ರಸನ್ನವೆಂಕಟದಾಸರು
ಬಿಡು ನಾಚಿಕೆಯನು ಉಗ್ಗಡಿಸು ಚಕ್ರಿಯನುಹಿಡಿಯೈ ವೈಕುಂಠ ಚಾವಡಿಯವನಡಿಯ ಪ.ಎಳೆತನ ಯೌವನ ಮುಪ್ಪೆಂದಲಸಿಸಿ ಹೆಬ್ಬುಲಿಯಂಥ ಮೃತ್ಯುಗಂಟಲ ಬಲೆಗೆಸಿಲುಕಿ ಸಿಲುಕಿ ಸಂದುಗಡಿಯದ ಲೇಖವನಳಿಯೆ ರಾಮನ ಪೊಗಳೆಲೆಲೆ ಜೀವವೆ 1ಅಹಂಕಾರ ವಾರಿಧಿಯಲ್ಲೀಸಾಡಿ ಬರೆಬಹಿರ ಸದ್ಗುಣದಿ ನಿರಯಕೆ ಸಾಗದೆಅಹರ್ನಿಶಾಂಬುಜನಾಭನೊಲಿವಂತೆ ಭಕುತಿಯಸಹಸ ಸಾಧಿಸು ಡಂಭವ್ಯಾಕೆನ್ನ ಮನವೆ 2ಯೋಚನೆಗೊದಗದ ಅನಂತ ಮಹಿಮನೆಂದುವಾಚಿಸ್ಯವನ ಕರ್ಮಗುಣ ನಾಮವಲೋಚನ ದಣಿಯೆ ಪ್ರತಿಮೆಯ ನೋಡಿ ಪ್ರಸನ್ವೆಂಕಟಾಚಲಪತಿ ಮುಂದೆ ಕುಣಿದಾಡು ಗಡ 3
--------------
ಪ್ರಸನ್ನವೆಂಕಟದಾಸರು
ಬಿಡೆ ನಿನ್ನ ಚರಣವಉಡುಪಿಕೃಷ್ಣನೆಭವಕಡಲ ದಾಟಿಸು ಕೈಯವಿಡಿದು ಪಾಲಿಸು ತಂದೆ ಪ.ಧÀ್ರುವಶುಕಪ್ರÀಹ್ಲಾದಬಲಿಅಜಾಮಿಳನುದ್ಧವ ಅಂಬರೀಷ ವಿದುರ ಮುಖ್ಯರುತವ ಪಾದವಿಡಿಯಲವರಿಗಿಂಬು ನೀಡ್ದಹವಣವ ಬಲ್ಲೆ ನಾನೇನ ಮಾಡಿದರೇನ 1ಪಾಂಚಾಲಿಮಾನವಕಾಯ್ದೆ ಪೆರರಿಗಂದುಅಚ್ಯುತನಿನ್ನಂಗುಟವು ಸೋಂಕಲುನಿಚ್ಚಳ ಸತಿಯಾದಳೆಂಬ ಸಾಹಸಕೇಳಿಮುಚ್ಚು ಮರೆಯ ಮಾಡಿದರೆ ನಿಮ್ಮ ಮರೆಯೆನು 2ನಿನ್ನ ಪಾದಾಂಬುಜ ಧ್ಯಾನ ಮರೆಯದಂತೆಎನ್ನ ಮನದ ವಕ್ರಗತಿಯ ತಿರ್ದುಮನ್ನಿಸು ತಂದೆ ಪ್ರಸನ್ನವೆಂಕಟ ಕೃಷ್ಣಪೂರ್ಣಪ್ರಜ್ಞಾರ್ಚಿತ ಚರಣಕಮಲನೆ 3
--------------
ಪ್ರಸನ್ನವೆಂಕಟದಾಸರು
ಬಿಡೆನೊ ನಿನ್ನಂಘ್ರಿ ಶ್ರೀನಿವಾಸ ನನ್ನದುಡಿಸಿಕೊಳ್ಳೆಲೊ ಶ್ರೀನಿವಾಸ ನಿನ್ನುಡಿಯ ಜೀತಲ್ಲೊ ಶ್ರೀನಿವಾಸ ನನ್ನನಡೆ ತಪ್ಪು ಕಾಯೊ ಶ್ರೀನಿವಾಸ ಪ.ಬಡಿಯೊ ಬೆನ್ನಲಿ ಶ್ರೀನಿವಾಸ ನನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾಬಡವ ಕಾಣೆಲೊ ಶ್ರೀನಿವಾಸ ನಿನ್ನೊಡಲ ಹೊಕ್ಕೆನೊ ಶ್ರೀನಿವಾಸ 1ಪಂಜುವಿಡಿವೆನೊ ಶ್ರೀನಿವಾಸ ನಿನ್ನೆಂಜಲ ಬಳಿದುಂಬೆ ಶ್ರೀನಿವಾಸ ನಾಸಂಜೆ ಉದಯಕೆ ಶ್ರೀನಿವಾಸ ಕಾಳಂಜಿಯ ಪಿಡಿವೆನೊ ಶ್ರೀನಿವಾಸ 2ಸತ್ತಿಗೆ ಚಾಮರ ಶ್ರೀನಿವಾಸ ನಾನೆತ್ತಿಕುಣಿವೆನೊ ಶ್ರೀನಿವಾಸ ನಿನ್ನರತ್ತುನ ಹಾವಿಗೆ ಶ್ರೀನಿವಾಸ ನಾಹೊತ್ತು ನಲಿವೆನೊ ಶ್ರೀನಿವಾಸ 3ಹೇಳಿದಂತಾಲಿಹೆ ಶ್ರೀನಿವಾಸ ನಿನ್ನಾಳಿಗಾಳಾಗಿಹೆ ಶ್ರೀನಿವಾಸ ಅವರೂಳಿಗವ ಮಾಳ್ಪೆ ಶ್ರೀನಿವಾಸ ನನ್ನಪಾಲಿಸೊ ಬಿಡದೆ ಶ್ರೀನಿವಾಸ 4ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳಕುನ್ನಿ ನಾನಾಗಿಹೆ ಶ್ರೀನಿವಾಸಕಟ್ಟಿನಿನ್ನವರೊದ್ದರೆ ಶ್ರೀನಿವಾಸ ನನಗಿನ್ನು ಲಜ್ಜ್ಯಾತಕೆ ಶ್ರೀನಿವಾಸ 5ಬೀಸಿ ಕೊಲ್ಲಲವರೆ ಶ್ರೀನಿವಾಸ ಮುದ್ರೆಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕಘಾಸಿಗಂಜೆನಯ್ಯ ಶ್ರೀನಿವಾಸ ಎಂಜಲಾಸೆಯಬಂಟನಾ ಶ್ರೀನಿವಾಸ6ಹೇಸಿ ನಾನಾದರೆ ಶ್ರೀನಿವಾಸಹರಿದಾಸರೊಳು ಪೊಕ್ಕೆ ಶ್ರೀನಿವಾಸಅವರಭಾಸೆಯ ಕೇಳಿಹೆ ಶ್ರೀನಿವಾಸ ಆವಾಶೆಯ ಸೈರಿಸೊ ಶ್ರೀನಿವಾಸ 7ತಿಂಗಳವನಲ್ಲ ಶ್ರೀನಿವಾಸವತ್ಸರಂಗಳವನಲ್ಲೊ ಶ್ರೀನಿವಾಸ ರಾಜಂಗಳ ಸವಡಿಪೆ ಶ್ರೀನಿವಾಸ ಭವಂಗಳ ದಾಟುವೆ ಶ್ರೀನಿವಾಸ 8ನಿನ್ನವ ನಿನ್ನವ ಶ್ರೀನಿವಾಸ ನಾನನ್ಯವನರಿಯೆನೊ ಶ್ರೀನಿವಾಸ ಅಯ್ಯಾಮನ್ನಿಸೊ ತಾಯ್ತಂದೆ ಶ್ರೀನಿವಾಸ ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ 9
--------------
ಪ್ರಸನ್ನವೆಂಕಟದಾಸರು
ಬುತ್ತಿಯ ಕಟ್ಟೊ - ಮನುಜಾ ||ಬುತ್ತಿಯ ಕಟ್ಟೊ ಪ.ಬುತ್ತಿಯನ್ನು ಕಟ್ಟಿದರೆ |ಎತ್ತಲಾದರುಣ್ಣಬಹುದು ಅಪಧರ್ಮವೆಂಬ ಮಡಿಕೆಯಲ್ಲಿ |ನಿರ್ಮಲ ಗಂಗೆಯನುತುಂಬಿ ||ಸುಮ್ಮಾನದಿಂದಲಿ ಬೇಗ |ಒಮ್ಮನಕ್ಕಿಯ ಅನ್ನಬಾಗಿ 1ಅರಿವು ಎಂಬ ಅರಿವೆಯ ಹಾಸಿ |ಗರಿಮೆ ಹಾಲ - ಮೊಸರ ತಳಿದು ||ಪರಮವೈರಾಗ್ಯದಿಂದ |ಸಿರಿಹರಿಗರ್ಪಿತವೆಂದು 2ಕರ್ತು ಪುರಂದರವಿಠಲನ |ತತ್ತ್ವವೆಂಬ ಬುತ್ತಿಯನ್ನು ||ಹತ್ತಿರ ತಂದಿಟ್ಟುಕೊಂಡು |ನಿತ್ಯವುಂಡು ತೃಪ್ತಿಪಡೆಯೊ 3
--------------
ಪುರಂದರದಾಸರು
ಬುದ್ಧಿಯ ಪೇಳೇ ಗೋಪಮ್ಮ ನಿನ್ನಮುದ್ದು ಮಗನ ಲೂಟಿ ಘನವಾದುದಮ್ಮ ಪಸದ್ದು ಇಲ್ಲದ ಹಾಗೆ ಬಂದಾನೆಕದ್ದು ಬೆಣ್ಣೆಯನೆಲ್ಲ ತಿಂದಾನೆಎದ್ದೊಮ್ಮೆ ನೋಡಿ ನಾ ಗದ್ದಲ ಮಾಡಲುಸದ್ದು ಮಾಡದೆ ಕೃಷ್ಣ ಹದ್ದನೇರುತ ಪೋದ 1ಜಲಜ ಗಂಧಿನಿಯರು ಕೂಡೀ ನಾವುಜಲದೊಳಾಡುವುದನ್ನು ನೋಡೀಜಲಜನಾಭನು ಮರದ ತಲೆಯ ಮೇಲ್ಕಟ್ಟಿದಸುಲಿದಿಟ್ಟ ಸೀರೆಯ ಬಲರಾಮನನುಜ 2ಹಾಲ ಮಾರಲು ಪೋದ ಮಗಳಾ ಕಂಡುಮೇಲೆ ಬೀಳುತ ಮಾಡೆ ಜಗಳಾಶಾಲೆಯ ಸುಲಿದು ಬತ್ತಲೆ ನಿಲ್ಲಿಸಿದನುಮೂರ್ಲೋಕದೊಡೆಂiÀುಶ್ರೀಲೋಲಗೋವಿಂದ 3
--------------
ಗೋವಿಂದದಾಸ
ಬೆದರದಿರೊ ಬೋವು ಬರಲಿಲ್ಲ ನಿನ್ನಮೃದುಲ ಸವಿ ತೊದಲು ಮಾತಾಡೊ ಬಾಲ ಪ.ಕಣ್ಣೆವೆಯಿಕ್ಕದೆ ನೋಡಬ್ಯಾಡನಿನ್ನ ಮೈಮರವಿಟ್ಟಾಡ ಬ್ಯಾಡಗುನ್ನಗನ್ಯೆಳೆದಂಬೆಗಾಲಿಕ್ಕಬ್ಯಾಡಹೊನ್ನೋಲೆ ಕೆಂಪೇರೆ ಹುಯಿಲಿಡಬ್ಯಾಡ 1ನೆಲವಿದು ದೈನ್ಯವ ಬಿಡಬ್ಯಾಡಕೊಲ್ಲುವರ್ಯಾರಿಲ್ಲ ಕೊಲೆಗಂಜಬ್ಯಾಡನಲವ ಬಿಟ್ಟಡವಿಯನೈದ ಬ್ಯಾಡಕಳವಲಿ ಹುದುಗಿಕೊಂಡಿರಬ್ಯಾಡ 2ಹುಸಿಗೆ ಬೇಸರಬ್ಯಾಡ ಕೃಷ್ಣಮ್ಮಹೊಸ ಕಲ್ಕ್ಯಾಟಬ್ಯಾಡ ನಮ್ಮಮ್ಮಪ್ರಸನ್ನವೆಂಕಟಪತಿ ಪರಬೊಮ್ಮ ನಿನ್ನಕುಶಲಕ್ಕೇನೇನುಪಾಯವಿಲ್ಲಮ್ಮಾ 3
--------------
ಪ್ರಸನ್ನವೆಂಕಟದಾಸರು
ಬ್ರಹ್ಮಾಂಡದೊಳಗಿದ್ದ ಚರ್ಯೆಯ ತಂದು |ಪಿಂಡಾಂಡದೊಳಗೆಲ್ಲ ತೋರಬೇಕೆಂದು |ಪುಂಡಲೀಕನ ಭಕ್ತಿಗೆ ತಾನೆ ಬಂದು |ಪಾಂಡುರಂಗ ನಾಮ ರೂಪದಿ ನಿಂದೂ ಜೋ ಜೋ ||ಜೋ ಜೋ ಜೋ ಶ್ರೀ ಗಂಗಾಧರನೆ ಜೋ ಜೋ ಜೋಶ್ರೀ ವತ್ಸಧರನೇ ಜೋ ಜೋ ಜೋ ಶ್ರೀ ಶಶಿಧರನೇ |ಜೋ ಜೋ ಜೋ ಶ್ರೀ ದತ್ತಾತ್ರೇಯನೇ ಜೋ ಜೋ ಜೋ1<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ತನ್ನ ವಾಯು ಸಾಧು ಸಂತರೊಳಾಡಿ |ತನ್ನ ಸ್ಫುರಣಿ ಮಾಯಗಳಿತವೆ ಕೂಡಿ |ತನ್ನ ಸ್ವಸುಖವೆ ಬೋಧರಿಯೆತ್ತಿ ನೋಡಿ |ತನ್ನಿಂದುತ್ಪತ್ತಿ ಸ್ಥಿತಿ ಲಯವು ತೋರಡಗಿ | ಜೋ ಜೋ2ನಿತ್ಯಶುದ್ಧಬುದ್ಧಸರ್ವಾಂತರಾತ್ಮಾ |ಸತ್ಯ ಶಾಶ್ವತ ಸಾಧು ದಯ ಸಾರ್ವಭೌಮಾ |ಪ್ರತ್ಯಾತ್ಮ ಪರಮಾತ್ಮ ಐಕ್ಯಮೇಕಾತ್ಮಾ |ನಿತ್ಯಅಪರೋಕ್ಷನಿರ್ಗುಣ ನಿಜ ಧಾಮಾ ಜೋ ಜೋ3ಕಾಶೀ ನಿವಾಸಿ ವಿಶ್ವೇಶ ವೃಷಾತ್ಮಾ |ನಾಸಿಕತ್ರ್ಯಂಬಕ ನೀನೆ ಮಹಾತ್ಮಾ |ವಾಸುದೇವನ ಪ್ರಾಣ ಪ್ರಿಯ ಪರಮಾತ್ಮಾ |ಕ್ಲೇಶಭಕ್ತರಿಗಾಗಿ ವಾಸಿಸುವಾತ್ಮಾ ಜೋ ಜೋ4
--------------
ಜಕ್ಕಪ್ಪಯ್ಯನವರು
ಬ್ರಹ್ಮಾದಿಕರನು ಪರಬ್ರಹ್ಮದಿಚ್ಛಿಲಿ ಪಡೆದಳಮ್ಮಪರಂಜ್ಯೋತಿ ಪರಬ್ರಹ್ಮಿಣೀಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವಾಣಿ ಕಲ್ಯಾಣಿಫಣಿವೇಣಿ| ರುದ್ರಾಣಿಶರ್ವಾಣಿಸುವಾಣಿ ಗೀರ್ವಾಣಿ ವರದೆ | ಗಾಣಿತ್ರಿನಯನ ಅಜನ ರಾಣಿ ಶಂಕರ ಪ್ರಾಣಿ ಪುಸ್ತಕಪಾಣಿನಾರಾಯಣೀ1ಅಂಬೆ ಲೋಕಾಂಬೆ ಭ್ರಮರಾಂಬೆ ಮೂಕಾಂಬೆಹರಡಿಂಬೆ ಪ್ರತಿಬಿಂಬೆ ಕುಚಕುಂಭೆ ಸಾಂಬೆ |ರಂಭೆ ಹೇರಂಬೆ ಶರಣೆಂಬೆ ವರಗೊಂಬೆ ಭಕ್ತರಬೊಂಬೆ ಹೊಳೆವ ಗೊಂಬೆ2ಕಾಳೆ ಹಿಮ ಬಾಳೆ ಭೂ ಪಾಳೆ ಕುಸುಮಾಳೆವನಮಾಳೆಕಂದರಮೌಳೆ ಕುಟಿಲ ಕುರುಳೆ |ಕೇಳಿನಿನ್ನಯ ಲೀಲೆ ಕಾಲಿಗೆರಗುವರಘವ ಮೂಲಕೆತ್ತೆತ್ತಿಬಿಸುಟುವ ಕೃಪಾಳೆ3ಬೇಕೆಂಬೊ ಬಯಕಿತ್ತು ಸಾಕು ಸಾಕೆನಿಸುವರುಲೋಕದೊಳಗ್ಯಾರುಂಟು ನಿನ್ನ ಬಿಟ್ಟು |ಏಕೆ ವಿವೇಕೆ ಎನ್ನೀ ಕುಟಿಲಗುಣನೋಡ ಬೇಕೆಕ್ಷಮೆಮಾಡಿದರೆ ಮೈಯುಳಿಯುವದು4ಕಾಯಜನ ಮಾತೆ ಸಿತಕಾಯನರ್ಧಾಂಗಿ ಜಗಕಾರ್ಯನಿರ್ಮಿಸುವ ನರರುದಿಸಿ ಮೂರು || ಕಾಯಡಗಿ ಹೋದನಿಷ್ಕಾಯ ಪರಶಕ್ತ್ಯೆನ್ನ ಕಾಯ್ದುಕೊಳ್ಳೆಲೆತಾಯಿ ಸ್ತ್ರೀಯರನ್ನೆ5ಸಾರಿದರಹೊರೆವಸಂಸಾರದೊಳು ಮುಳುಗಿದರೆತಾರಿಸುವ ತವಕದಿಂತರುಳೆತರುಣೀ |ಸೇರಿಸುತ ತಿರುಗಿ ತನು ಬಾರದ್ಹಾದಿಗೆ ಒಯ್ದುತಾರಿಸುವ ಸ್ಥಿರದಿ ನೀ ತೋಯಜಾಕ್ಷಿ6ಕುಸುಮಸರ್ಪಾದಿಗಳು ಕುಸುಮಗಂಧಿಯ ಪದಕೆಕುಸುಮವೃಷ್ಟಿಗವು ದೇವಿಯ ಸುಕೃತಿಗಳೂ |ಕುಸುಮದೊಳು ಕರಕಂಜ ಕುಸುಮದೊಳುವರವಿಡಿದ ಕುಸುಮಶರರಿಪುಶಂಕರನ ಶಂಕರೀ7
--------------
ಜಕ್ಕಪ್ಪಯ್ಯನವರು
ಭಕ್ತರೆಂದರೆ ನೈಜ ಭಕ್ತರವರು ಪ.ಚಿತ್ತಜನಯ್ಯನ ಚರಿತಾಮೃತಕೆ ಮನವಿಟ್ಟು ಅ.ಪ.ಅಧಿಯಾತ್ಮ ತಾಪಗಳುಅಧಿಭೂತ ಕ್ಲೇಶದನುಭವಅಧಿದೈವದಟ್ಟುಳಿಯನೆಣಿಸರತಿ ಬಲವಂತರ್ಮಧು ಮಥನಗಲ್ಲದರ ಬಗೆಗಂಜರು 1ವೇದತಂತ್ರವಾಕ್ಯದಿಂದುಪದೇಶಮಾಡಿದರೆ ಮೋಹನಕೊಳಗಾಗರುವದಿಸಿ ಬಲವತ್ಸ್ನಾನವ ಮಾಡಿ ಬೆದರಿಸಲುಕದಲದಂತಃಕರಣದ್ಹರಿದಾಸರು 2ಬದಿಗೆ ಬಂದಡಲಾವದುರಿತಕೋಟಿಗಳನ್ನುತುದಿಗಾಲಿಲೊದ್ದು ಸಲೆ ತಲೆವಾಗರುಹುದುಗೊಂಡು ಷಡುವರ್ಗ ರಿಪುಗಳನು ಗೆದ್ದುಹರಿಪದಲಂಪಟ ಜ್ಞಾನಾಂಬುಧಿಗಳು 3ವಿಧಿಭವೇಂದ್ರಾದಿ ಸುರರಾಳ್ದ ಲಕುಮೀಪತಿಯಸುದಯಾರಸನುಂಬುವ ಬೋಧನವರುಸದಮಲ ಗುಣಾನಂತ ಪ್ರಸನ್ವೆಂಕಟಪತಿಯಹೃದಯವಲ್ಲಭರೆನಿಪಅಚಲಮತಿಯವರು4
--------------
ಪ್ರಸನ್ನವೆಂಕಟದಾಸರು
ಭಕ್ತವತ್ಸಲ ಬಂದು ಬಾಗಿಲಲಿ ನಿಂತುಎತ್ತ ಹೋದನೆಂದು ಧಿಗಿಲು ಎನುತಮತ್ಯಾಕೆ ಬರಲಿಲ್ಲವೊ ಅರ್ಜುನರಾಯ ಪ.ವೀರರಾಯರÀ ಸೇವೆ ಪರಿಪರಿ ಮಾಡಿದ್ದುಮರೆತುಕೊಂಡು ಧರ್ಮ ದೊರೆಯಾಗಿ ಕುಳಿತ 1ಪಾಂಚಾಲಿ ರಮಣನು ಪಂಚ ಪಗಡೆಯನಾಡಿವಂಚನೆ ಮಾಡದೆ ಹಂಚಿಕೆಯಲಿಕುಳಿತ 2ಧಿಟ್ಟ ಭೀಮರಾಯ ಹುಟ್ಟು ಬಚ್ಚಿಟ್ಟುಕೊಂಡುಸಿಟ್ಟಿಲಿಂದ ಮೈ ಮುಟಿಗ್ಯಾಗಿ ಕುಳಿತ 3ಪುಂಡ ಭೀಮರಾಯ ಮಂಡಿ ಕೆದರಿಕೊಂಡುಖಂಡಗನ್ನವ ಉಂಡು ದಿಂಡೆನ್ಹಾಂಗ ಕುಳಿತ 4ಚಲ್ವ ಅರ್ಜುನರಾಯ ಬಿಲ್ಲು ಮೂಲೆಗೆ ಇಟ್ಟುಒಲ್ಲಿಯ ಮುಸುಕು ಹಾಕಿ ಎಲ್ಲೋ ಹೋಗಿ ಕುಳಿತ 5ಹೆÀಚ್ಚಿನ ಗಾಂಡೀವ ಬಚ್ಚಿಟ್ಟು ಕೋಣ್ಯಾಗೆಹುಚ್ಚನ್ಹಾಂಗೆಮಾರಿಮುಚ್ಚಿಕೊಂಡು ಕುಳಿತ6ಚದುರ ನಕುಲರಾಯ ಎದುರಿಗೆ ಬಾರದೆಹೆದರಿಕೊಂಡು ತಾನು ಕುದುರೆ ಮನೆಯ ಹೊಕ್ಕ 7ಧನವೆತ್ತಿಸಹದೇವಘನವಿದ್ಯಾನರಿಯದೆದನಕರುಗಳನ್ನೆಲ್ಲ ಅನುಸರಿಸಿ ಇರುವ 8ಪಾಂಡವರೆ ಶ್ರೇಷ್ಠರು ಧೈರ್ಯವೆ ಇರಲೆಂದುಶೌರಿಕುರುರಾಯಗೆ ತಾ ನುಡಿದನು9ಇಷ್ಟೂರು ಹರಿಗಂಜಿ ಬಿಟ್ಟರು ಕೈಕಾಲುಧಿಟ್ಟ ಬಲರಾಮ ತಾ ‌ಘಟ್ಯಾಗಿ ಕೈ ಹೊಯಿದನು 10ಇಷ್ಟೊಂದು ಗಾಬರಿ ದಿಟ್ಟೆಯರೆ ಆಗದಿರಿಕೊಟ್ಟನುಅಭಯದಿಟ್ಟ ರಾಮೇಶ11
--------------
ಗಲಗಲಿಅವ್ವನವರು