ಒಟ್ಟು 2613 ಕಡೆಗಳಲ್ಲಿ , 114 ದಾಸರು , 2097 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಂಧುಶಯನನೆ ಬಾರೊ ಇಂದಿರಾರಾಧ್ಯನೆ ಬಾರೊಮಂದಿರಜನಯ್ಯನೆ ಬಾರೊ ಇಂದೆನ್ನ ಮನಮನೆಗೆ ಪ.ಬಾರೊ ಭಕ್ತರ ಪಾಲಕ ವೆಂಕಟರನ್ನ ಬಾರೊ ಅ.ಪ.ರಾತ್ರಿನಾಮನರಿಯೆ ಬಾ ಗೋತ್ರಧರ ಬಾರೊಹೇಮನೇತ್ರನ ಸದೆದು ಧರಿತ್ರಿ ತಂದೆ ಪೋತ್ರಿರೂಪಬಾರೊ1ಹರಿಮೊಗದವ ಬಾರೊ ಹರಿಯನುಜನೆ ಬಾರೊಕರಜರ ಸವರಿದ ಹರಿಕುಲೋತ್ತಮರನ್ನ ಬಾರೊ 2ಚೆನ್ನನಾಗಿ ಮೆರೆದೆ ಬಾ ಚೆನ್ನೆವಾಸ ಜರಿದೆ ಬಾಉನ್ನತ ಹಯವೇರಿ ಪ್ರಸನ್ನವೆಂಕಟಾದ್ರಿವಾಸ ಬಾರೊ 3
--------------
ಪ್ರಸನ್ನವೆಂಕಟದಾಸರು
ಸಿರಿಅರಸಂಗೆ ನಮೋಗುರುಮಧ್ವವರಿಯ ವರಸ್ತುತಿ ಪ್ರಿಯ ಪ.ನಿಗಮಾಗಮಾಗಣಿತ ಸುವಿದಿತ ಸುಗುಣ ವಿಹಗಗಮನಘರಿಪು ಉರಗಶಯನ 1ಅಜನುತ ರಾಜರವಿ ವಿಜಿತ ಪ್ರತೇಜಕುಜರಜನೀಚರಹನನಮೂಜಗಜೀವನ2ತನ್ನ ವಂದಿಪರನ್ನು ಹೊರೆವನ್ಯಭಯವನ್ನೋಡಿಪಎನ್ನಯ್ಯ ಪ್ರಸನ್ನವೆಂಕಟನಾಥ ದಾತಾರ 3
--------------
ಪ್ರಸನ್ನವೆಂಕಟದಾಸರು
ಸಿರಿಪತಿ ಧರಾಪತಿ ದುರ್ಗಾಪತಿ ಫಣಿಗಿರೀಶ ಪ.ಅರಿದರಧರಕರ ವರಾಭಯಕರ ಶಿರಾಭರಣಸಿರಿವತ್ಸ ಕೇಯೂರ ಕೌಸ್ತುಭೋರು ಹರೆ ಹರೆ ನಮೋ1ಖಗಾಸನ ಪನ್ನಗಾಸನ ದಿಗೇಶನುತಗಣಿತದ್ಯುಗಸನ್ನಿಭ ಸುಗಾತ್ರ ಸಾಮಗ ಘೋಷಿತಪಾಹಿಪಾಹಿ2ಪರಾತ್ಪರಪಾರಾವಾರವರಹೇಮಾಂಬರಚಾರುಚಿರ ಪ್ರಸನ್ನವೆಂಕಟರಮಣ ಕರುಣಾಳುತ್ರಾಹಿತ್ರಾಹಿ3
--------------
ಪ್ರಸನ್ನವೆಂಕಟದಾಸರು
ಸಿರಿಸೊಕ್ಕಿ ಮರೆಯದೆ ಮುರವೈರಿಯಮರೆಹೋಗು ಮೊರೆಯಿಡು ಮರೆಯದೆ ಮನವೆ ಪ.ಶರೀರವು ಸೆರೆಮನೆ ಸರಿಕಾಣ ಜೀವಕ್ಕೆಸಿರಿಪಂಚಶರನವಸರಕೆ ಮೆಚ್ಚಿಸಿರಿಪತಿ ಶರಣಾನುಸರಣೆ ಭಕುತಿಜ್ಞಾನಸರಕಿಲ್ಲ ಸರಿಯಿತಾಯುಷ್ಯಿರವು ವ್ಯರ್ಥಾಯಿತು 1ಸತಿಸ್ನೇಹ ಸುತಮೋಹಾಶ್ರಿತ ಜನರನು ಬೇಡಿಸ್ಯಾತನೆಯ ಸುತ್ತಿಕೊಂಡು ಶಿಥಿಲಿಪಾಗಸತಿಇಲ್ಲ ಸುತರಿಲ್ಲಾಶ್ರಿತ ಸಹಾಯವಿಲ್ಲವೈವಸ್ವತ ಭೃತ್ಯಶತಕೆ ಈಷತ್ತೂ ಕೃಪೆಯಿಲ್ಲ 2ಪುಸಿನುಡಿ ಪಿಸುಣರ ಪೆಸರಿಸದಲೆನಿತ್ಯಪ್ರಸಾದರ ಪ್ರಸಾದವ ಪ್ರಸನ್ನೀಕರಿಸೆಪೊಸತಾಪೋಪಶಮನ ಪ್ರಸನ್ನವೆಂಕಟಪತಿಯಪ್ರಸಿದ್ಧರ ಪ್ರಸರದ ಪ್ರಸಂಗದೆ ಮುಕುತಿ 3
--------------
ಪ್ರಸನ್ನವೆಂಕಟದಾಸರು
ಸೀತಾಪತೆ ಸ್ವಾಮಿ ಸೀತಾಪತೆವಾತಜನುತ ಭೂತನಾಥಪತೆ ರಾಮ ಪ.ಗುಪ್ತಗುಣತಾಳ ಸಪ್ತಾಘಹನದೀಪ್ತಕಾಯ ಕುಶಸುಪ್ತಜಯ ರಾಮ 1ತಾಟಕಾರಿ ರಘುರಾಮಹರಿಹಾಟಕಪುರಪ ನಿಶಾಟಹರ ರಾಮ 2ಭರ್ತ ನೇಮ ಪರಿಪೂರ್ತ ನಮೋಕರ್ತಪ್ರಸನ್ವೆಂಕಟಾರ್ತಾಶ್ರಯಪಾಹಿ3
--------------
ಪ್ರಸನ್ನವೆಂಕಟದಾಸರು
ಸುಕಾಲಕೆ ಧರ್ಮವ ಮಾಡುವುದೆ ಲೇಸುದುಷ್ಕಾಲಕೆ ಮಾಡಗೊಡದಲ್ಪಾಯು ಪ.ಯೌವನವೆಂಬ ಸುಕಾಲಕೆ ಸುರಮುನಿಸೇವ್ಯನ ಭಾಗವತರ ಮೆಚ್ಚಿಪದಿವ್ಯಜ್ಞಾನ ಭಕ್ತಿ ವೈರಾಗ್ಯವಿರಬೇಕುಹವ್ಯಾಸ ನಡೆಯದು ಮುಪ್ಪು ದುಷ್ಕಾಲ 1ಧನದಾಗಮದ ಸುಕಾಲಕೆಸತ್ಪಾತ್ರರನು ಕರೆದರ್ಚಿಸಿ ಉಣಿಸಿ ಕೃಷ್ಣಾರ್ಪಣ ಬುದ್ಧಿಯಿಂದ ಸರ್ವಸ್ವನೊಪ್ಪಿಸಬೇಕುತನಗಿಲ್ಲದಾಗೆ ದಾರಿದ್ರ್ಯ ದುಷ್ಕಾಲ 2ವೃತ್ತಿಕ್ಷೇತ್ರಿದ್ದ ಸುಕಾಲಕೆ ಶ್ರೀ ಮಧ್ವಶಾಸ್ತ್ರ ವ್ಯಾಖ್ಯಾತರಿಗಿತ್ತು ಜನ್ಮಸಾರ್ಥಕ ಮಾಡಿ ಸಂತೋಷದಲ್ಲಿರಬೇಕುತಾ ಸ್ಥಾನ ಭ್ರಷ್ಟನಾಗಿಹುದೆ ದುಷ್ಕಾಲ 3ಸಂಸಾರಾವಸ್ಥೆಯವರಿಗೀ ಸುಕಾಲಕೆಹಂಸವಾಹನಪಿತನಂಘ್ರಿ ಪದುಮಪಾಂಸುಲಭ್ಯವು ಕೇಚಿತ್ಕಾಲಕೆ ಹರಿಯಲಿಸಂಶಯ ಭಕ್ತಿಯವನಿಗೆ ದುಷ್ಕಾಲ 4ಮುಕ್ತಮಹಿಮಗೆ ಜ್ಞಾನವೆ ದ್ರವ್ಯ ವಿಷಯವಿರಕ್ತಿಯೆ ಭಾಗ್ಯವಿಜಯಭಕ್ತವತ್ಸಲ ಪ್ರಸನ್ವೆಂಕಟೇಶನ ಸೇವಾಸಕ್ತಿಲ್ಲದವಗಾವಕಾಲ ದುಷ್ಕಾಲ 5
--------------
ಪ್ರಸನ್ನವೆಂಕಟದಾಸರು
ಸುಬ್ರಹ್ಮಣ್ಯ163ಸಂತತಂ ತೋಷಂ ದೇಹಿ ತ್ವಂ ದೇಹಿಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ಪ.ದೇಹಿ ದೇಹಿ ತವ ಸ್ನೇಹ ಸುಖ ವಚಂಬ್ರೂಹಿ ಸುವಚನಂ ಗಹನ ಜ್ಞಾನಂ 1ಅಭ್ರೋಡುಪ ನಿಭ ಶುಭ್ರಶರೀರಾದಭ್ರ ದಯಾನಿಧೆ ವಿಭ್ರಾಜಿತಶಂ 2ವಾಸವಸೇನಾಧೀಶ ಖಳಾನ್ವಯನಾಶ ಸ್ವಜನ ಪರಿಪೋಷ ಸುತೋಷಂ 3ಭೂರಿಫಲದ ಭಯದೂರ ಕುಮಾರ ಕುಮಾರಸುಧಾರಾತೀರಗ ಸುಮತಿಂ4ಪನ್ನಗನೃಪಸುಪನ್ನಗನಗಪ ಪ್ರಸನ್ನವೆಂಕಟಪತಿ ಚಿನ್ಮಯ ಭಕ್ತಿಂ 5
--------------
ಪ್ರಸನ್ನವೆಂಕಟದಾಸರು
ಸುರ ಮುನಿಜನನುತಪಾದನಿನ್ನಶರಣು ಪೊಕ್ಕೆನೊ ಗೋವಿಂದ ನೀಚರಕೈಯಲಿ ಕೊಡದಿರೊ ಎನ್ನ ಮೇಲ್ಗಿರಿ ಶ್ರೀನಿವಾಸಪಾವನ್ನಪ.ದುಷ್ಟದೂಷಕ ಸಂಗದಿಂದೆ ನನ್ನನಿಷ್ಠೆ ಜಾರುತಲಿದೆ ತಂದೆ ಸಲೆಭ್ರಷ್ಟನಾಗುವುದೇನು ಚಂದೆ ಬಲುಕಷ್ಟಿಸಿ ಭವದಲಿ ನೊಂದೆ 1ಅಮಿತ ದುರ್ಗುಣ ದೋಷಹಾರಿಶುಭಅಮಲ ಮುಕ್ತಿದಾತ ಉದಾರಿ ಎನ್ನಭ್ರಮಣ ನೀಗಿಸು ಹೊರೆ ಸ್ವಾಮಿ ಹೃತ್ಕಮಲದಿ ಪ್ರಕಟಿಸು ಪ್ರೇಮಿ 2ಅರಿಯೆನರಿಯೆ ಅನ್ಯಮರೆಯೆ ನಿನ್ನಸ್ಮರಣೆಗೆಚ್ಚರವಿತ್ತು ಹೊರೆಯೊಸಿರಿಗುರು ಆನಂದಮುನಿ ದೊರೆಯೆನಿತ್ಯಪರಸನ್ನ ವೆಂಕಟ ಭಕ್ತರ ಸಿರಿಯೆ 3
--------------
ಪ್ರಸನ್ನವೆಂಕಟದಾಸರು
ಸುರನರರ ಸಹಸಕ್ಹರಿ ಸಹಾಯ ಬೇಕುನರಹರಿಯು ಕೊಡದನಕ ದೊರೆವುದೇನು ಪ.ಹರಿಕೊಡದೆ ಅಜಭವರಿಗರಸುತನವೆಲ್ಲಿಯದುಹರಿಕೊಡದೆ ಸಿರಿಸಂಪದೆರವು ತನಗೆಹರಿಕೊಡದೆ ಸಕಳ ಜೀವರಿಗಶನ ದುರ್ಲಭವುಹರಿಕೊಡುವನಿರಲು ಅನ್ಯರಿಗೆ ಸ್ವಾತಂತ್ರ್ಯಿಲ್ಲ 1ಹರಿಯೆ ಜಡಚೇತನರ ಹೊರೆದುದ್ಭವಿಸಿ ಅಳಿವಹರಿಯಾವ ಕಾರ್ಯಕ್ಕೆ ಬೆರೆದು ಬರುವಹರಿಅಂತರ್ಬಹಿರದೊಳು ಭರಿತನಾಗಿಹ ತತ್ವಹರಿಯಿಲ್ಲದಾವ ತಾಣಿಲ್ಲ ನಂಬು ಹರಿಯ 2ಹರಿನುಡಿಯದಾರಿಗುತ್ತರಗುಡಲು ಬಲವಿಲ್ಲಹರಿನುಡಿಯನಾಲಿಪರು ಸಿರಿದಿವಿಜರುಹರಿನುಡಿಯೆ ಗತಿಮತಿಯು ಹರಿಯೆನ್ನ ದಾತಾರಹರಿಪ್ರಸನ್ವೆಂಕಟಪ ನಿರುತ ಬಿಡನೆನ್ನ3
--------------
ಪ್ರಸನ್ನವೆಂಕಟದಾಸರು
ಸುರರಾಜಪೂಜಿತರಾಜ ಪಂಕೇಜಸಖ ಶತತೇಜಪ.ಶ್ರೀನುತ ಶ್ರೀನಿಧಿ ದೀನ ದಯಾನಿಧಿಜ್ಞಾನವಿಹೀನನ ನೀನೆಪೊರೆ1ಜೀಮೂತಶಾಮಲ ರಾಮ ಶುಭಾಮಲನಾಮನೆ ಸಾಮಜಸ್ವಾಮಿ ಸಲಹು 2ದೋಷವಿನಾಶ ಪರೇಶಾಮರೇಶನೆಶೇಷವರಾಸನ ಕೇಶವನೆ ನಮೊ 3ದೂಷಕ ಭೀಷಣ ದಾಸ ವಿಪೋಷಕತೋಷ ವಿಕಾಸ ವಿಹಾಸ ಜಯತು 4ಪಶುಪತಿವಿಷಹರ ಶಶಿನಿಭದಶನಪ್ರಸನ್ನವೆಂಕಟೇಶ ಕರುಣಾಶರಧಿಹರಿ5
--------------
ಪ್ರಸನ್ನವೆಂಕಟದಾಸರು
ಸುಲಭಲ್ಲ ಹರಿಭಕುತಿ ಗುರುಕೃಪೆ ಇಲ್ಲದಿಲ್ಲ ಪ.ಸಿದ್ಧಿ ಸೊಲ್ಲುವ ಗುರುಗಳುಂಟು ಧರೆಯೊಳಲ್ಲಿಗಲ್ಲಿ ಅವರೆಲ್ಲ ಹಿತಕಾರಿಗಳೆಂದಿಗಲ್ಲಸಲ್ಲ ಕೈವಲ್ಯದ ಮಾರ್ಗವ ಬಲ್ಲಬಲ್ಲಿದಭಾರತಿನಲ್ಲಗೆ ಸಲ್ಲಲಿಬಲ್ಮತದಲ್ಲಿರಿರ್ಯೆಲ್ಲ 1ಭವಸಾಗರ ವೈರಾಗ್ಯದ ನಾವೆಲಿನೀಗಿಸಾಗಿ ಜ್ಞಾನಾಗರದಾಗಮವಕೇಳಿವೇಗದೀಗ ನಿರಯಾಗಾರ ತಪ್ಪಿಸದೆ ಶ್ರೀರಂಗ ಬ್ಯಾಗೊದಗ ಸುಜÕನಾಗಿರದೆಮಗೆ ಮ್ಯಾಗೆ ಲೋಗರೋಗರಕಾಗಿ ರಹಿತಧರ್ಮರಾಗಿರೆ ತಾಗೂದು ರೋಗ 2ನಾ ನನ್ನದು ಸಂಪದೆಂಬಭಿಮಾನಿ ನೀಚನುನೀ ನಿನ್ನದು ಕೃಷ್ಣನೆಂಬ ಮತಿವಂತನೆ ಧನ್ಯ ಬಹುಪುಣ್ಯಶ್ಲೋಕರ ವೈಭವವಾಯಿತನ್ಯೋನ್ಯ ನನಗಿನ್ನ್ಯಾತರ ನೆಚ್ಚಿಕ್ಯಣ್ಣ ಪ್ರಸನ್ವೆಂಕಟರನ್ನನಪುಣ್ಯದ್ವಾರನ್ನಾಂತ ಸನ್ನುಮತಿಗನ್ಯದೆ ಏನಣ್ಣ 3
--------------
ಪ್ರಸನ್ನವೆಂಕಟದಾಸರು
ಸುವ್ವಿ ಕೈಟಭಹಾರಿ ಸುವ್ವಿ ಚಾಣೂರದಾರಿಸುವ್ವಿಮಲ್ಲಮುಷ್ಟಿಕರವೈರಿಶ್ರೀ ಕೃಷ್ಣನ್ನಸುವ್ವೆಂದು ಪಾಡಿ ರಕ್ಷಿಪ ಸುವ್ವಿ ಪ.ವಿಶ್ವಬೀಜವ ಪೊತ್ತ ಗಿರಿ ಪೊತ್ತಧರೆಪೊತ್ತಶಿಶು ಕೃಷ್ಣಾಜಿನ ಪರಶು ಧನು ಪೊತ್ತಶಿಶು ಕೃಷ್ಣಾಜಿನ ಪರಶುಧನು ಪೊತ್ತಗವ ಪೊತ್ತ ದಿಗ್ವಸನ ಇಟ್ಟಿಯ ಪೊತ್ತ 1ಶ್ರುತಿಗೆದ್ದವನ ಗೆದ್ದಾಮೃತ ಗೆದ್ದಸತಿಗೆದ್ದದಿತಿಜಬಲಿಕ್ಷತ್ರಿಯರಾಕ್ಷಸರ ಗೆದ್ದದಿತಿಜಬಲಿಕ್ಷತ್ರಿಯ ರಾಕ್ಷಸರ ಗೆದ್ದ ಅಲರ ಗೆದ್ದಪತಿವ್ರತೆ ಅಧರ್ಮಿಗಳ ಗೆದ್ದ 2ಎವೆ ಇಲ್ಲ ಮೃದು ಇಲ್ಲ ಜವದೊಳೆಡಬಲವಿಲ್ಲಕುವರೇಂದ್ರ ವಿಪ್ರಮಾರ್ಗೆಡರಿಲ್ಲಕುವರೇಂದ್ರ ವಿಪ್ರಮಾರ್ಗೆಡರಿಲ್ಲ ಕೃಷ್ಣ ಪ್ರಸನ್ವೆಂಕಟಯೋಗಿಕೃಪೆಗೆ ಕಡೆಯಿಲ್ಲ3
--------------
ಪ್ರಸನ್ನವೆಂಕಟದಾಸರು
ಸುವ್ವಿ ಸುವ್ವಾಲಿ |ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ ಪಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ 1ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದುಬುಧಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ 2ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ 3ಮೃತ್ತಿಕೆಮಾಲೆಅಂಗಾರದಿವ್ಯ ಮಂತ್ರಾಕ್ಷತೆಯು |ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |ಕತ್ತಲಿಲ್ಲ ಶತಸಿದ್ಧ ಮತ್ತೇನುಕೇಳಿ| ಸುವ್ವಿ 4ಪಂಡಿತರು ಮೊದಲಾಗಿಹಸ್ತಿಉಷ್ಟ್ರ ಕುದುರೆಯ |ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||ದಂಡ ಜಗತಿಗೂರಿ ತೋಯ ತೆಗಿಸಿಯವನೀ |ಮಂಡಲದೊಳಗೆ ಪೆಸರಾದರಿವರು | ಸುವ್ವಿ 5ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ |ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ |ಗಟ್ಟಿ ಸಂಕಲ್ಪರಿವರು ಮುನಿವರರು | ಸುವ್ವಿ 6ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ |ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||ನೆಪ್ಪು ಧರೆಗಾಗಲೆಂದುಗುರುಸುಧೀಂದ್ರ ಕುಮಾರ |ಸರ್ಪನ ತೋರಿಸಿ ಸುಪ್ರಖ್ಯಾತರಾದರು | ಸುವ್ವಿ 7ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ |ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ |ಭಜಿಸಿರಿವರನ್ನು ಮಕ್ಕಳು ಬೇಡುವವರು | ಸುವ್ವಿ 8ಮುತ್ತಿನ ಮಾಲಿಕೆನೃಪಭಕ್ತಿಯಿಂದ ಕೊಡಲಾಗಿ |ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ |ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು | ಸುವ್ವಿ 9ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ |ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ |ಸಂದೇಹವಿಲ್ಲದೆ ಸುಲೋಕವನಿತ್ತರು | ಸುವ್ವಿ 10ತುಂಗಾತೀರ ಮಂತ್ರಾಲಯದಲ್ಲಿಶ್ರಾವಣಬಹುಳ |ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು |ಕಂಗಳುಸಾಲವು ನೋಡ ಹೊದ್ದ ಶಾಠಿಯ | ಸುವ್ವಿ 11ಅಂಧಕಬಧಿರಕುಂಟ ನಾನಾ ರೋಗಿಗಳು ಮತ್ತೆ |ಕಂದ ವಜ್ರ್ಯ ಮೊದಲಾದವರಿಗೆಕಾಮ್ಯ| ಸುವ್ವಿ ||ತಂದುಕೊಡುವರು ಬೇಗ ಇತರ ಸಂಶಯವಿಲ್ಲ |ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ 12ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು |ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||ಧಾತಾ ಪಿತ ನಿಲಯವಿದೇನೋಯೆಂದು ತೋರುವದು |ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ | ಸುವ್ವಿ 13ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ |ಒಡ್ಡಿಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||ಕಡ್ಡಿಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ |ದೊಡ್ಡ ರಥವೇರಿ ಮಠವ ಸುತ್ತುವರು | ಸುವ್ವಿ 14ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು |ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು |ಎಷ್ಟು ಪೇಳಿದರೂ ಎನ್ನಿಂದಲಿ ತೀರದು | ಸುವ್ವಿ 15
--------------
ಪ್ರಾಣೇಶದಾಸರು
ಸುಳಾದಿಧ್ರುವತಾಳಬಾಲ ಸೂರ್ಯನಿಭಮಣ್ಯಾಂಕಮೌಳಿಹೀಲಿಯ ಪಿಂಛಪ್ರವಾಳಗುಚ್ಛಮ್ಯಾಲಲರದಂಡೆ ಝೇಂಕರಿಪಾಳಿಬಾಲರಯ್ಯನ ಮೊಗದ ಶೋಭೆಭ್ರೂಲತೆ ವಿಲಾಸ ನೋಟದಿಮಕರಕುಂಡಲವಿಶಾಲೇರಿ ಸಿರಿವತ್ಸಕೌಸ್ತುಭನೀಲಮಾಣಿಕ ವಜ್ರವಲಯ ವೈಜಂತಿವನಮಾಲೆ ತುಲಸಿ ಗಂಧ ಮೌಕ್ತಿಕ ಸರಗಳನೀಲನದ ರತುನದಾಮಪೊನ್ನಚೇಲನೂಪುರ ಕಿರುಗೆಜ್ಜೆಯ ಗೋಪಾಲ ಪರಸನ್ನವೆಂಕಟ ಕೃಷ್ಣ ಶಾಮಲಕಾಯ 1ಮಠ್ಯತಾಳನಂದವ್ರಜದ ಗೋವರ ವೃಂದಾಂಬುಧಿಗೆ ಪೂರ್ಣೇಂದು ನÀಂದಸೂನು ಲಾಸ್ಯವಾಡೆಒಂದೊಂದು ಲಯದಗತಿಹೊಂದ್ಯಮರದುಂದುಭಿಗಳ್ದಂ ಧಳಧಂ ಧಂದಳೆನ್ನೆಗಂಧರ್ವ ತುಂಬುರರು ನಾರಂದ ಮಹತೀಗೀತ ಪ್ರಬಂಧ ಹೇಳೆ ನಂದರಸದಿಂದಾಡುತಿರೆ ಗೋವಿಂದ ದಂದಂ ದಂದಂ ಧಿಮಿಕೆನ್ನಲಂದದಿ ಮದ್ದಳೆ ತಾಳಬಂದಿಮೊಗ ? ತುತ್ತುರಿ ಕಹಳೆ ಕಂಬುವೇಣುಗೂಡಿಅಂದಾಡಿದ ಪ್ರಸನ್ವೆಂಕಟ ಕೃಷ್ಣ ನಲವಿಂದ 2ತ್ರಿವಿಡಿ ತಾಳಶ್ರೀಕಮಲ ಭಭೂರ್ವಪಿನಾಕಿವಿಪಾಹಿಪನಾಕಜಾದ್ಯರ ಚೇಷ್ಟಕಶ್ರೀಕರ ಪ್ರಸನ್ನವೆಂಕಟ ಕೃಷ್ಣಆಕಳಕಾವರ ವಶಗ ಹಾಹಾ 3ಅಟ್ಟತಾಳಅನಂತನಿಗಮನಿಕರಕೆ ನಿಲುಕದಅನಂತಾನಂತ ಗುಣಪರಿಪೂರ್ಣಗೆಧÉೀನುಕಾವರ ಪಳ್ಳಿ ಗೋಟಲೆತೀಯಂ ತೀಯಂ ವೈಯ್ಯ ಅಯ್ಯಾಧೇನುಕಾವರ ಪಳ್ಳಿ ಗೋಟಲೆಜ್ಞಾನಿಜನಕೆಮೋದಹಾನಿ ಖಳರ್ಗೀವಜ್ಞಾನಾನಂದ ಬಾಲ ಪ್ರಸನ್ನವೆಂಕಟ ಕೃಷ್ಣಗೆ 4ಏಕತಾಳವೈಕುಂಠ ವಾರಿಜಾಕ್ಷ ಲೋಕರಕ್ಷತೋಕವೇಷಧರಮುರಹರಶ್ರೀಧರಶ್ರೀಕರ ಗುಣನಿಧೆ ಪುರಾಣಪುರುಷ ಹರೇ ಹರೇಗೋಕುಲಪತೆ ಗೋವರ್ಧನಧರಪಾಕಹ ಮದನಿಕಾರಕರ ಪ್ರಸನ್ವೆಂಕಟ ಕೃಷ್ಣನೆಲೊ ಭಕ್ತವತ್ಸಲ 5ಜತೆಶುಭಕೀರ್ತನೆ ಜಿಹ್ವೆಗೆ ಶುಭಕಥೆ ಕಿವಿಗಳಿಗೆಶುಭಮೂರ್ತಿ ಕಣ್ಗೀಯಯ್ಯ ಪ್ರಸನ್ವೆಂಕಟಕೃಷ್ಣಯ್ಯ
--------------
ಪ್ರಸನ್ನವೆಂಕಟದಾಸರು
ಸುಳಾದಿಧ್ರುವತಾಳರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾತಿಹರ ಸಾಮಗಾನಾದರ ನಿಸ್ಸೀಮ ಗುಣಗಂಭೀರ ಏಕವೀರಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ 1ಮಠ್ಯತಾಳಪಿಂತೆ ಸಮೀರಜನ ಸೇವೆಗೆ ಮೆಚ್ಚತ್ಯಂತ ಪ್ರಸನ್ನನಾಗ್ಯವನ ಶುಭಕರಸಂತತಿಗಭಯವನಿತ್ತಪೆನೆಂದೀಶನಿಂತಿಹೆ ಪ್ರಸನ್ನವೆಂಕಟಪತಿರಾಮಕಂತುಜನಕನಿತ್ಯಾನಂದನೆ ನಿನ್ನಂತವರಿಯೆ ನಿಗಮಾಗಮಕಳವೆ 2ತ್ರಿಪುಟತಾಳನಿರುತ ವೈಕುಂಠ ಮಂದಿರವಿದ್ದುಪರಣ ಕುಟೀರವನಾಶ್ರಯಿಸುವ ಘನತೆಯೆತ್ತವರಪೀತಾಂಬರ ದಾಮವನು ಬಿಟ್ಟುವಲ್ಕಲಧರಿಸಿ ಕಾನನದಿ ಸಂಚರಿಪೋದೆತ್ತನರಲೀಲೆಗಿದು ಶ್ಲಾಘ್ಯವೆಂದು ತೋರಿದೆ ಜಗದೆರೆಯ ಪ್ರಸನ್ನವೆಂಕಟಾದ್ರಿ ರಘುರಾಮ 3ಅಟ್ಟತಾಳಹರವರದಲಿ ಬಲು ಮತ್ತಾದ ರಜನೀಚರವರ ಲಂಕೆಯಲಿ ಬಲಿದು ಗರ್ವದಿಸುರವರರನುರೆ ಬಾಧಿಸಲವರನುಪೊರೆವರು ದಾರಯ್ಯ ನಿನ್ನಿಂದಸ್ಥಿರವರದಾಯಕ ಪ್ರಸನ್ವೆಂಕಟಗಿರಿವರನಿಲಯ ಕೌಸಲ್ಯೆಯ ಕಂದ 4ಆದಿತಾಳಅಕಳಂಕ ಅಕುತೋತಂಕ ಅಕಳಂಕಮಕುಟಕುಂಡಲಕೌಸ್ತುಭಕೇಯೂರ ವಲಯಾಂಕಿತಕೋದಂಡಕಾರ್ಮುಕಪಾಣಿಅಕಳಂಕ ಸುಖತೀರ್ಥವಂದಿತ ಪಾದಕಮಲ ವಿಧಿನುತ ಮಖಪಾಲಕ ಪ್ರಸನ್ನವೆಂಕಟಾಧಿಪ ಅಕಳಂಕ 5ಜತೆಅಂದು ನರಹರಿಯತಿಗೆ ಅಂದದಲ್ಲೊಲಿದಿಲ್ಲಿಬಂದು ನೀನಿಂತೆ ನಿಜರಮಣಿಯೊಡನೆಎಂದೆಂದು ಸತ್ಯಾನಭಿವ ತೀರ್ಥಗುರುಹೃದಯಮಂದಿರನೆ ಪ್ರಸನ್ನವೆಂಕಟವರದ ರಾಮ
--------------
ಪ್ರಸನ್ನವೆಂಕಟದಾಸರು