ಒಟ್ಟು 9830 ಕಡೆಗಳಲ್ಲಿ , 132 ದಾಸರು , 5659 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿ ನಡಿಯಿರೋ | ನಂಬಿ ನಡಿಯಿರೋ | ಗುರುಪಾದವಾ ನಡಿಯಿರೋ ನಂಬಿ ನಡಿಯಿರೋ | ನೇಮದಲಿ ಅತಿ | ಪ್ರೇಮದಲಿ ಪ ತಿರುಗುವರೇ ನೀ ಮರಗುವರೇ | ಇಹದೇನೋ ಗುಣವಹುದೇನೋ | ತಾರಕರಿಲ್ಲ ಪೋಷಕರಿಲ್ಲಾ | ಸುವರುಂಟೆ ಬೆಳಗುವರುಂಟೆ1 ಬಾಳಿ ತೊಳಲಿ ಘನ ಬಳಲಿ | ಬಂದೀಗ ನೀ ನಿಂದೀಗ | ಹಾದಿಯನು ತಿಳಿ ಭೇದಿಯನು | ಶರಣವನು ಪಿಡಿ ಚರಣವನು 2 ನಿರ್ಜರ ತರುವೆ ಸರ್ವರ | ನಿಜದರುವೆ ಕರುಣವಗರವೇ | ಪಾಡುತಲೀ ನಲಿದಾಡುತಲಿ | ಡ್ಯಾಡಿ ನಮನವನೇ ಮಾಡಿ | ಸ್ವಾನಂದದ ಸುಖ ಸೂರ್ಯಾಡಿ | 3 ಮೌಳಿ ಉಚ್ಛಿಷ್ಟ ಚಾಂಡಾಳಿ | ಳೆಂಬೋಪಾಸನ ಧ್ಯಾಸನಾ | ಹಾದಿಲಿ ನಡೆವರೇ ನೋಡುವರೇ | ಅಮೃತ ಕೊಂಡಂತಾಯಿತು ಗುಣಹೇತು 4 ತಿಗಳ್ಯಾಕೆ ಚಿಂತಿಗಳ್ಯಾಕೆ | ಆಚರಿಯಾ ನೀ ಕೇಳರಿಯಾ | ಗೋವಿಂದಾ ಶ್ರೀ ಮುಕ್ಕುಂದಾ | ಇಹಪರವು ನಿಜ ಸುಖದರವು 5 ಮನದೊಳಗೆ ಈ ಜÀನದೊಳಗೆ | ಡಂಭವ ದೋರುತ ಎರೆಯುತ | ತೋರುವುದಲ್ಲಾ ಗುಣಸಲ್ಲಾ | ಕಿಡಿಸುವರೇ ನೀ ಧರಿಸುವರೇ6 ವಾರ್ತೆಗಳಾ ಮನೆವಾರ್ತೆಗಳಾ | ಪ್ರಾಣವನು ಅಪಾನವನು | ಹಾರಿಸಿದೀ ನೀ ತೋರಿಸಿದೀ | ಏನಾದರೂ ಏನಿಲ್ಲಾ ಸಮ್ಯಕ್ | ಜ್ಞಾನವಾಗದೆ ಸಿಲ್ಕುವದೀ 7 ಸೌಮ್ಯದಲಿ ನಿಷ್ಕಾಮ್ಯದಲಿ | ಸವನಿಟ್ಟು ರತಿಗಳನಿಟ್ಟು | ನಿಲದ್ಹಾಂಗ ಚಲಿಸದಲ್ಹಾಂಗ | ಗುರುವಾಜ್ಞೆಯಲಿ ಅಭಿಜ್ಞೆಯಲಿ 8 ಭಕ್ತಿಯಲಿ ನಿಜವೃತ್ತಿಯಲಿ | ಮಹೀಪತಿಯಾ ಸುಚರಿತೆಯಾ | ಪಡಕೊಂಡವರನವರಿತಾ ಸುಖಭರಿತಾ | ಭವ ಸುಗಮದಲಿ ನೀ ಬೇಗದಲಿ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿ ಭಜಿಸಿರೈಯ್ಯಾ ಶರಣರು ಪ ನಂಬಿ ಭಜಿಸಿರೈಯ್ಯಾ ಶರಣರು|ಅಂಬುಧಿವಾಸ ಶ್ರೀ ದೇವನಾ| ಹಂಬಲ ಬಿಡಿ ಅನ್ಯ ಮಾರ್ಗದಾ| ಅಂಬುಜಾಂಬಕ ಪರದೈವನು ಗಡಾ| 1 ತ್ರಿಮೂರ್ತಿಯೊಳು ಮಿಗಿಲಾರೆಂದು ನೋಡಾ| ಲಾ ಮುನಿಯಮರರು ಕಳುಹಲು| ಪರದೈವವೆಂದನು ಗಡಾ|2 ದೇವಾ|ಸುರರೆಲ್ಲ ತವಕದಿ ಕುಳಿತಿರೇ| ಇಂದಿರೆ ಬಂದು|ಹರಿಗೆ ಮಾಲೆಯ ಹಾಕಿದಳು ಗಡಾ 3 ಶ್ರೀ ಚರಣವ ತೊಳೆಯಲು| ಸುರನದಿ ಬರೆ| ಮೃಢ ಶಿರಸದಿ ಧರಿಸಿದ ಗಡಾ4 ಮೂರಕ ಮೂರ ಮೂರುತಿಯಾಗಿ ಗುಣ| ಮೂರಕದೂರವದೆನಿಸುವಾ| ಸಾರಿದವರಾ ಕಾವಾ ಮಹಿಪತಿಸುತ| ಸಾರಥಿಯಾಗಿ ರಕ್ಷಾಪ ಗಡಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿ ಭಜಿಸಿರೋ _ ಜನರೆಲ್ಲರೂ _ ನಂಬಿ ಭಜಿಸಿರೊ ಪ ಅಂಬುಜಾಕ್ಷ ಪ್ರಿಯಾ _ ನಮ್ಮ ಜಯರಾಯರಾ ಅ.ಪ ಕ್ಲೇಶ ಯಾತಕೇ ಕಾಸು ಕಳಕೊಂಡು _ ಅತಿಘಾಸಿ ಯಾತಕೇ ಶ್ರೀಶನಂಘ್ರಿ ಭಜಕರಾದ _ ವಾಸವಾವೇಶರಿವರ ಪಾದ ಆಶೆಯಿಂದ ಭಜಿಸಲೂ _ ವಾಸುದೇವನೊಲಿವನು 1 ನೇಮ ಯಾತಕೇ _ ನಿಷ್ಠೆ ಯಾತಕೇ ಹೋಮ ಯಾತಕೇ _ ಕಷ್ಟಯಾತಕೇ ಪ್ರೇಮದಿಂದಲೀ _ ಇವರ ಭಜಿಸಲೂ ತಾಮಸಗುಣ _ ತಾನೇ ಓಡೋದು 2 ಮಧ್ವಶಾಸ್ತ್ರದ _ ಚಂದ್ರರಿವರು ಅದ್ವೈತವಾದವ _ ಗೆದ್ದಸಿಂಹರು ಮಧ್ವರಾಯರಾ _ ಮುದ್ದುಮೊಮ್ಮಗ ಸಿದ್ಧಸೇವ್ಯರು _ ಸುಧೆಯ ಕರ್ತರು 3 ಇವರ ಧ್ಯಾನವೂ _ ಜ್ಞಾನದಾಯಕಾ ಇವರ ಪೂಜೆಯೂ _ ಪಾಪನಾಶನ ಇವರ ಸ್ಮರಣೆ _ ಕಲಿವಿ ಭಂಜನೆ ಇವರ ಸೇವೆಯು _ ಮುಕ್ತಿಸೋಪಾನ 4 ಶ್ರೀಕಳತ್ರನಾ _ ಆಜ್ಞೆಯಿಂದಲಿ ನಾಕದಿಂದಲೀ _ ಇಲ್ಲಿ ಬಂದರು ಏಕಮನದಿ _ ಶರಣು ಹೋಗಲು ಪಾಪನಾಶನ _ ಪುಣ್ಯವೆಗ್ಗಳಾ 5 ಮಳಖೇಡದೀ _ ನೆಲಸಿ ಇಪ್ಪರೂ ನಳಿನನಾಭನ _ ಒಲಿಸುತನುದಿನಾ ನಲಿಸಿ ಮನದೊಳು _ ಒಲಿಸುವಾತನೆ ಶೀಲವಂತನು _ ಧನ್ಯ ಮಾನ್ಯನು6 ನರನ ವೇಷದಿ _ ಸುರರ ಒಡೆಯನೊ ಹರಿಯ ಕರುಣದಿ _ ಮೆರೆಯುತಿರ್ಪರು ಶರಣಜನರ _ ದುರಿತರಾಶಿಯ ತರಿದು ಶೀಘ್ರದಿ _ ಪೊರೆಯುತಿಪ್ಪರು7 ಎತ್ತಿನ್ವೇಷದಿ _ ವಾತದೇವನ ಪ್ರೀತಿ ಪಡೆದು _ ಖ್ಯಾತಿಆದರು ಮತ್ತೆ ಯತಿಯಾಗಿ _ ಕೀರ್ತಿಯಿಂದಲಿ ಬಿತ್ತರಿಸಿದರು, ತತ್ತ್ವಶಾಸ್ತ್ರವ 8 ಕಾಗಿನೀನದೀ _ ತೀರವಾಸರು ವಿಗತರಾಗರು _ ನಿತ್ಯತೃಪ್ತರು ಜಾಗರೂಕದಿ _ ಪೊಗಳಿ ಪಾಡಲು ನಿಗಮವೇದ್ಯನು _ ಬೇಗ ಪೊರೆಯುವ 9 ಶೇಷಾವೇಷದಿ _ ವಾಸಿಸುವರು ಶೇಷಶಯನನ _ ದಾಸರೀವರು ಬೆಸರಿಲ್ಲದೆ _ ಆಸೆ ತೊರೆದು ದಾಸನೆನ್ನಲು _ ಪೋಷಿಸೂವರು 10 ಕೆರೆಯ ಏರಿಯು _ ಬಿರಿದು ಪೋಗಲು ಮೊರೆಯ ಇಟ್ಟರು _ ಇವರ ಅಡಿಗೆ ಭರದಿ ಕರುಣದಿ ಹರಿಯ ಸ್ತುತಿಸಿ ಕರದಿ ಮುಟ್ಟಲು _ ಏರಿ ನಿಂತಿತು 11 ಯರಗೋಳದ _ ಗುಹೆಯ ಒಳಗೆ ಮರುತದೇವನ _ ಕರುಣದಿಂದಲಿ ಪರಿಪರಿಯಲಿ _ ಬರೆದು ಟೀಕೆಯ ಕರೆದು ಸುರಿದರು _ ತತ್ತ್ವಕ್ಷೀರವ 12 ಇವರ ನಾಮವು _ ವಿಜಯ ಸೂಚಕ ಇವರ ಕೀರ್ತನೆ _ ಭವಕೆ ಔಷಧ ಇವರ ಕರುಣದಿ _ ಅನಿಲನೊಲಿವನು ಇವರ ಶಿಷ್ಯರೇ _ ಅವನಿಶ್ರೇಷ್ಠರು 13 ಸರ್ವಕ್ಷೇತ್ರದ _ ಯಾತ್ರೆಯಾ ಫಲ ಸರ್ವದಾನವ _ ಮಾಡಿದ ಫಲ ಇವರ ಪಾದವ _ ನಂಬಿ ಭಜಿಸಲು ತವಕದಿಂದಲಿ _ ತಾನೇ ಬರುವುದು 14 ಜಯತೀರ್ಥರ _ ಹೃದಯವಾಸಿಯು ವಾಯುಹೃದಯಗ _ ಕೃಷ್ಣವಿಠ್ಠಲನು ದಯದಿ ನುಡಿಸಿದಾ _ ಪರಿಯು ಪೇಳಿದೆ ಜೀಯ ಕೃಷ್ಣನೆ _ ಸಾಕ್ಷಿ ಇದಕ್ಕೆ15
--------------
ಕೃಷ್ಣವಿಠಲದಾಸರು
ನಂಬಿ ಭಜಿಸು ಹರಿಯಾ| ಅಂಬುಜನಾಭನ ಹಂಬಲದಿಂದಾ ಪ ಶ್ರವಣ ಕೀರ್ತನ ಮೊದಲಾಗಿಹ ನವವಿಧ| ಹವಣದ ಭಕುತಿಯ ಸವಿಸವಿಯಿಂದಾ 1 ಏನೂ ಇಲ್ಲದ ಮೂರು ದಿನದ ಸಂಸಾರಕ| ನಾ ನನ್ನದು ಯಂದೆನುತಲಿ ಶ್ರಮಿಸದೆ 2 ಶರೀರಿಂದ್ರಯಗಳು ಸ್ಥಿರವಿದ್ದ ಕೈಯಲಿ| ಜರೆ ಬಂದೆರಗುತ ಮರೆಸದೆ ಮುನ್ನಾ 3 ಕೇಳೀಕೋ ಗುರುವಿನಾ ತಿಳಿಯದಿದ್ದರೆ ಕೀಲರಿ| ಹೇಳುವ ಸ್ಪಹಿತವ ಜಾಳಿಸಿ ಸಂಶಯ4 ಹೊಂದಿದವರ ಕೈಯ್ಯಾ ಎಂದೆಂದು ಬಿಡನೆಂದು| ತಂದೆ ಮಹಿಪತಿ ಕಂದಗ ಸಾರಿದ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿಗಿಟ್ಟ ಸಂಸಾರ ಇದು ನಂಬಿ ಹಂಬಲಿಸದಿರು ಪೂರಾ ಪ ಕಾಯವೆಂಬುದು ಸ್ಥಿರವಲ್ಲಾ ಅತಿ ಮಾಯಕೆ ಬಂದು ಸಿಕ್ಕಿದೆಲ್ಲಾ ಬಾಯಿ ರುಚಿಗಳು ಬಿಡು ಎಲ್ಲಾ ರುಚಿ ರುಚಿಸೆಲ್ಲಾ ತಂದೆ ತಾಯಿಗಳು ಇನ್ನು ಹೊಂದಿದ ಅದರಲ್ಲೆ ಬಗೆ ಮಾಯದೊಳು ಇರುವಾಗೆ ಆನಂದ ತೋರುವದು ನಿನ್ನೊಳಗೆ 1 ಧೊರೆತನ ದೌಲತ್ತು ಸ್ಥಿರವೆಂದು ಪರಿ ಪರಿಯಲಿ ವಿಹರಿಸು ಎಂದೂ ಪರಮಾತ್ಮನ ಭಜನಿಲ್ಲದೆಂದೂ ವ್ಯರ್ಥ ಪಾಪಕೆ ಒಳಗಾಗಿ ಕೆಡುವೆಂದೂ 2 ಬದುಕು ಬಾಳುವೆ ನಂಬಿಕೊಂಡು ಮುಂದೆ ತುದಿಗಾಣದೆ ಹೋಗ್ವದು ಕಂಡೂ ----------------------- ---------------------- 3 ಅಷ್ಟೂ ಶ್ರೀಹರಿ ಮಾಯವೆಂದೂ ಸ್ಪಷ್ಟದಿ ಮನದಲಿ ತಿಳಿಯಿಂದೂ ಶಿಷ್ಟ ಹೆನ್ನ ವಿಠ್ಠಲನೆಂದೂ ಉತ್ಕøಷ್ಟದಿ ಹೃದಯದಿ ಸ್ಮರಿಸಿಂದೂ 4
--------------
ಹೆನ್ನೆರಂಗದಾಸರು
ನಂಬಿಗೆಯೆ ಕಾರಣವು ತಿಳಿಯೊ ಇದ ನುಂಬದೇ ಹಸಿವಲ್ಲೊ ಚೀ ಮಂಕುಮರುಳೇ ಪ ಜಂಭವÀನರಡಿದ ವಿಶ್ವಂಭರನು ಮೂಢಾ 1 ಅಲ್ಲವೆಂದೆನಿಸದೆ ನಿಲ್ಲು ಗುರುಪಾದ ಬಲ್ಲ ಬೆಡಗಿನ ಬೆಳಕು ಅಲ್ಲಿ ಕಾಣುವೆ 2 ಅರಮನೆಯೊಳಿರುತಿಹ ವುರುಗನನು ತೋರಿದಾ ಪರಮಗುರು ಶ್ರೀ ತುಳಶಿರಾಮದಾಸನನು ಯೀತ 3
--------------
ಚನ್ನಪಟ್ಟಣದ ಅಹೋಬಲದಾಸರು
ನಂಬಿದವರ ಇಂಬಾದಾ ಕಮ ಲಾಂಬಕನೇ ನಿನ್ನ ನಾಮ ಮಹಿಮೆಯಂತೋ ಪ ಪಾತ-ಕವ ಮಾಡಿಯಮ ದೂತರೆಳೆತರುತಿರಲು ಧಾತುಗಂದಿ ಅಜಮಿಳ ಭೀತಿಯಲಿ ಸುತನಾರಾಯಣ ನೆನಲು ಬಂದು ಖ್ಯಾತಿ-ನಾಮ ಹರಿಯಿತೋ ನೀಹೊರೆದೆಯೋ 1 ಪ್ರೇಮದಿಂದೋದಿ ಪಗಿಳಿಯಾ ವ್ಯಾಮೋಹ ಅಂತ್ಯದಲಿ ಕಾಮಿನಿ ಗಣಿಕೆ ದೇಹ ಬಿಡಲಾರದೇ ರಾಮರಾಮಾ ಮಾತಾಡೋಯನ್ನೆ ನಾಮವೇ ಗತಿ ನಿಡಿತೋ ನೀನೀಡಿದೆಯೋ 2 ಅಂದಿಗಿಂದಿಗ್ಯಾದ ಭಕ್ತ ವೃಂದ ದವಸರದಲ್ಲಿ ಛಂದದಿಂದ ಬಂದು ಕಾಮ್ಯ ಪೂರಿಸುವ ತಂದೆ ಮಹಿಪತಿ ಸ್ವಾಮಿ ನಾಮಾ ನಂದಬಲ್ಲ ನಲ್ಲದೇ ನಿನ್ನಾರು ಬಲ್ಲರೋ||3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿದೆ ತವ ಚರಣ ಸಲಹೋ | ಅಂಬುಧಿಸುತೆ ರಮಣ ವಿನುತ ಮನ | ದ್ಹಂಬಲವನು ಸಲಿಸೆಂದು ನಿರುತ ನೆರೆ ಪ ತಾವರೆದಳನಯನಾ ಭವಹರಣ ತವಕದಿ ಸುಜ್ಞಾನವಗರೆಯೋ 1 ತಂದೆ ನಾ ಜನಿಸುತ ಭೂಸುರ ಜನ್ಮದಿ ಹಿಂದಿನ ಸುಕೃತದಲಿ ಬಂದೆನೊ ಭುವಿಯೊಳ್ ನೊಂದೆನೋ ಕರುಣಿಸು 2 ಹೇಸಿ ಸಂಸಾರದ ಪಾಶÀವ ಬಿಡಿಸುತ ಶ್ರೀಶಾಮಸುಂದರವಿಠಲನೆ ದೋಷವ ನೋಡದೆ | ಪೋಷಿಸು ಮರೆಯದಲೆ ವಾಸುಕಿಶಯನನೆ 3
--------------
ಶಾಮಸುಂದರ ವಿಠಲ
ನಂಬಿದೆ ನಮ್ಮಮ್ಮನ ನಂಬಿದೆ ಪ ಕದಂಬ ಕರರ್ಚಳ ನಂಬಿದೆ ಅ.ಪ. ಕರವೀರದೊಳಗಿರುತಿಹಳು ರವಿ ಕಿರಣ ಕಾಂಚನ ಪೀಠ ನಿಧಿತಳು ಸುರತರುಣಿ ಸಂಘಾತ ಸೇವಿತಳು ಆಹಾಹರಿಯ ವಕ್ಷದಿ ಕೂತು ಕರುಣ ಕಟಾಕ್ಷದಿಪರಿವಾರ ಜನಕೆಲ್ಲ ಸುರಿವಳು ಸುಖವನ್ನು 1 ಕರದಿ ಕಂಕಣ ತೋಡೆ ಬಳೆಯು ನಾಗಮುರಿಗೆ ವಂಕಿಯುಶೋಭ ಸಿರಿಯು ಪಾದಾಭರಣದ ಕಲಕಲಧ್ವನಿಯು ಆಹಾಕರಣದಿ ವಾಲಿ ಕಂಠದಿ ಸರ ಸುರಗಿಯುಭರಮ ಮೇಖಳ ಕಾಂತಿ ಹರವಿಲಿ ಬೆಳಗೋದು 2 ಮುಖವನೋಡಲು ಸೋಮಬಿಂಬ ದಿವ್ಯ ಚಿಕುರಮ ಭ್ರಮರದಂಬನಾಸ ಮುಖದಿ ಮಣಿಯು ರವಿಬಿಂಬ ಆಹಾವಿಕಸಿತ ಸುಮಮಾಲೆ ವಿಕಸರ ಫಣಿವೇಣಿಚಕಚಕಿತಾಭರಣಳಕಳಂಕ ಚಲಿವಿಯ 3 ಕವಿ ಭುವನದೊಳಿರುವಳ 4 ದೇಶಕಾಲಗಳಿಂದಸಮಳು ಹರಿಗಾಸುಗುಣಗಳಿಂದಾಸಮಳುಸುಖರಾಶಿ ಸೌಂದರ್ಯ ಸೌಭಗಳು ಆಹಾವಾಸುದೇವನ ಭಕ್ತಿರಾಶೆ ಪೂರೈಸುತಿಂದಿ-ರೇಶನು ಚ್ಛಾಂಗದಿ ತಾ ಸುಖಿಸುವಳಂಬ 5
--------------
ಇಂದಿರೇಶರು
ನಂಬಿದೆ ನಾನಿನ್ನ ಚರಣವನಂಬಿಗ ಅಂಬೆಗಳ ಸುತನೆ ಕೋ ಬ್ಯಾಗಂಬಿಗ ಪ ಇಂಬಾಗಿ ದಡ ಸೇರಿಸೆನ್ನನೇನಂಬಿಗ ತುಂಬಿ ನದಿ ಸೂಸುತಲಿದೆ ನೋಡಂಬಿಗ ಅ.ಪ. ಕರ್ಮವೆಂಬ ಪ್ರವಾಹವ ನೀ ನೋಡಂಬಿಗ ಚರ್ಮದಿಂದೇಳು ಹೊದ್ದಿಕಿ ಅಂಬಿಗ ಮರ್ಮ ಒಂಭತ್ತು ರಂಧ್ರ ಉಂಟಂಬಿಗ ಶರ್ಮವಿದಕೆ ಕಾಯದ್ಹರಿಗೋಲಂಬಿಗ 1 ಆಳ ಬಹಳ ಗೊತ್ತಾಗದಂಬಿಗ ಶೆಳವು ಘನ ಉಳ್ಳುಹುದು ನೋಡಂಬಿಗ ಸುಳಿಗಾಳಿಗೆ ಸಿಗಿಸದಿರೊ ಅಂಬಿಗ ಬಳಸಿ ಕೊಂಡೊಯ್ಯೋದು ಒಳ್ಳೇದೆ ಅಂಬಿಗ 2 ಸಂಚಿತಾಪ್ತಿ ಇವರೊಳುಂಟಂಬಿಗ ಭಾರ ಜಡಿಯೋದು ನೀ ನೋಡಂಬಿಗ ವಂಚಕ ಮಾತು ರಾಗವು ಹೆಚ್ಚಂಬಿಗ ಚಂಚಲಗೊಂಡು ಭ್ರಮಿಸೋದು ಕಾಣಂಬಿಗ 3 ಆಶಾಜಲ ಮೇಲೆ ಮೇಲೆ ಬರುವುದಂಬಿಗ ಮೋಸ ಮಾಡುವುದೇನೊ ಕೊನೆಗೆ ಅಂಬಿಗ ಪೊಸ ಪೊಸ ಕಾಮತೆರೆ ತುಂಬಾಯಿತಂಬಿಗ ಲೇಶವಾದರು ಬತ್ತದು ನೋಡಂಬಿಗ4 ಅಷ್ಟ ಆನೇ ಒಳಗಿಟ್ಟುಕೊಂಡಿಹುದಂಬಿಗ ಹುಟ್ಟು ಹಾಕೋದು ಬಿಟ್ಟು ಜಲ್ಲೆ ಕೊಳ್ಳಂಬಿಗ ಬೆಟ್ಟ ಆರಕ್ಕೆ ಸಿಕ್ಕಿಸದೆ ನೋಡಂಬಿಗ ನೆಟ್ಟ ನಡುವಿನ ಪಥದಿ ಒಯ್ಯೋ ಅಂಬಿಗ 5 ಸುತ್ತ ಕಾರ್ಮುಗಿಲು ಬಂತಲ್ಲೊ ಅಂಬಿಗ ಹತ್ತು ಹನಿಗಳು ಬಿತ್ತು ನೋಡಂಬಿಗ ಎತ್ತಿ ನಡೆಸೋದು ಶಕ್ತಿ ನಿನ್ನದು ಕಾಣಂಬಿಗ ಹತ್ತಿಸೊ ಭಕ್ತಿದಡಕಿನ್ನಂಬಿಗ 6 ಮರಕಟಿ ಸೇರಿಹದಿದರೊಳಗಂಬಿಗ ಕರೆಕರೆಗೆ ಗುರಿ ಮಾಡೊದಿದೆ ಅಂಬಿಗ ಸರಿಯಾಗಿ ನಡೆಸೊ ಇನ್ನಾದರಂಬಿಗ ವರದವಿಜಯ ರಾಮಚಂದ್ರವಿಠಲ ನೀನಂಬಿಗ 7
--------------
ವಿಜಯ ರಾಮಚಂದ್ರವಿಠಲ
ನಂಬಿದೆನು ಚರಣಗಳ ಪಾಲಿಸೈ ಹರಿಯೇ ನಂಬಿದೆನು ಶ್ರೀ ಚನ್ನಕೇಶವನೆ ದೊರಿಯೇ ಪ ಸರಳೆ ದ್ರೌಪದಿಯಂತೆ ಕರಿರಾಜ ಧೃವರಂತೆ ದುರುಳ ಕನಕಾಸುರನ ನಿಜತನುಜನಂತೇ ಖಗರಾಜ ಕಪಿಯಂತೆ ವರತತ್ತ್ವ ಭೋಧಿಸಿದ ಯತಿಗಣಗಳಂತೇ 1 ಗೌತುಮನ ಸತಿಯಂತೆ ಯಾದವರ ಪಡೆಯಂತೆ ಭೂತಳದಿ ಪೆಸರಾದ ಹರಿದಾಸರಂತೇ ಕೋತಿ ಜಾಂಬವನಂತೆ ಅಮರೇಶ ಸುತನಂತೆ ಆತುರದಿ ನಂಬಿರುವ ಶ್ರೀ ಲಕ್ಷ್ಮೀಯಂತೆ 2 ನಾನಿತ್ತ ಪೂಜೆಯಿಂ ನಾಗೈದ ಭಜನೆಯಿಂ ನಾನಿಂದು ಮಾಡಿದಾ ಹರಿಸ್ಮರಣೆಯಿಂದ ನೀನೊಲಿದೆಯಿಂತೆಂದು ದೃಢವಾಗಿ ನಂಬಿದೆನು ಹೀನನನು ಸಲಹಯ್ಯ ಸ್ವಾಮಿ ಕೇಶವನೇ 3
--------------
ಕರ್ಕಿ ಕೇಶವದಾಸ
ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ- ರಂಭಸೂತ್ರಳೆ ಇಂಬುದೋರಿನ್ನು ಪ. ಅಂಬುಜಾಂಬಕಿ ಶುಂಭಮರ್ದಿನಿ ಕಂಬುಗ್ರೀವೆ ಹೇರಂಬ ಜನನಿ ಶೋ- ಣಾಂಬರಾವೃತೆ ಶಂಭುಪ್ರಿಯೆ ದಯಾ- ಲಂಬೆ ಸುರನಿಕುರುಂಬಸನ್ನುತೆ ಅ.ಪ. ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ- ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ- ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ- ಗಾರೆ ರಿಪುಸಂಹಾರೆ ತುಂಬುರು ನಾರದಾದಿಮುನೀಂದ್ರ ನುತಚರ- ಸೂರಿಜನ ಸುಮನೋರಥಪ್ರದೆ 1 ವಿಶಾಲಸುಗುಣಯುತೆ ಮುನಿಜನ- ಲೋಲತರುಣಮರಾಳೆ ಸಚ್ಚರಿತೆ ನವಮಣಿ ಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ- ಬಾಲೆ ನೀಲತಮಾಲವರ್ಣೆ ಕ- ರಾಳಸುರಗಿ ಕಪಾಲಧರೆ ಸುಜ- ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ2 ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ- ಪರಾಕು ಶರಣಜನೈಕಹಿತದಾತೆ ಸುರನರ- ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ- ವಾಕುಕಾಯದಿಂದ ಗೈದಾ ನೇಕ ದುರಿತವ ದೂರಗೈದು ರ- ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ3 ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ- ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ- ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ- ಲ್ಲಾಸೆ ಯೋಗೀಶಾಶಯಸ್ಥಿತೆ ವಾಸವಾರ್ಚಿತೆ ಶ್ರೀಸರಸ್ವತಿ ದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ4 ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ- ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ- ವಾಮಭಾಗ ಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯ ಶ್ರೀಮಹಾಲಕ್ಷ್ಮಿ ನಾರಾಯಣಿ ರಾಮನಾಮಾಸಕ್ತೆ ಕವಿಜನ- ಸೋಮಶೇಖರಿ5
--------------
ತುಪಾಕಿ ವೆಂಕಟರಮಣಾಚಾರ್ಯ
ನಂಬಿದೆನೊ ನಿನ್ನ ಅಂಬುಜನಯನ ಕೃ ಪಾಂಬುಧೆ ದೃಢದಲಿ ಪ ಸಂಭ್ರಮದಲಿ ಕಿವಿ ತುಂಬುತಿರುವ ಆ ಡಂಬರ ವಚನಕೆ ಮುಂಬರಗೊಳ್ಳುತ ಅ.ಪ ನವ ಘನ ನಿಭಕಾಯ ನಿನ್ನಯ ಕರುಣಮಯ ಸಹಾಯ ವಿಲ್ಲದೆ ಬಿಗಿಯುತಿರುವ ಮಾಯಾ ಪಾಶವ ತೊರೆಯಲಳವೆ ಜೀಯಾ ನಿನ್ನಯ ದಯವ ಪಡೆದ ಪರಿಯನರುಹುವ ಯತಿವರೇಣ್ಯ ಗುರುಮಧ್ವರಾಯರ ಪರಮ ಸಮಯ ಸಾರಗಳನು ಸಂತತ ಶ್ರವಣ ಮನನ ಧ್ಯಾನಗಳಿಂದ ಪರಿಚಯ ಪಡೆದು ದು ಷ್ಟ ವಿಷಯಗಳಲಿ ಮತಿಯನು ಮುರಿಯುವಂತೆ ಕರುಣಿಸೋ ಸುಗುಣಾಲಯ 1 ನೀರಜದಳ ನೇತ್ರ ವರ ಸುಖ ಚಿನ್ಮಯೈಕ ಗಾತ್ರ ಸುಜನ ಮಿತ್ರ ಸುರವರ ಸರಸಿಜಭವ ಪುತ್ರ ರುಚಿರರ ಮುಕುಟಾಕ್ಷಪಾತ್ರ ನಿನ್ನಯ ವಿವಿಧ ಲೀಲೆಗಳು ಚಿತ್ರವಿಚಿತ್ರವು ಅರಿತೆನೆಂದು ತಿಳಿದು ಮೆರೆಯುತಲಿರುವ ನರರ ಮದವ ಮುರಿದು ದೈನ್ಯದಿಂದಲಿ ಮರೆತೆನೆಂದು ದಿನದಿನದಲಿ ಭಜಿಪರ ಪೊರೆವ ಪರಮ ಕರುಣಾರಸಮಯನೆ 2 ದೀನಭಕುತರನ್ನು ಪೊರೆಯುವ ದಾಸಿಯೆಂದು ನಿನ್ನ ಪೊಗಳುವ ಮಾನತತಿಗಳನ್ನು ಸಂತತ ಧ್ಯಾನ ಮಾಡಿ ಎನ್ನ ಕ್ಲೇಶವ ಮೌನದಿಂದ ಇನ್ನೂ ಸಹಿಸುತ ಜಾನಕೀಶ ತವ ಪಾದಕಮಲದ ರೇಣುವನ್ನು ಶಿರದಿ ಧರಿಸುತಲಿ ಅನು ಮಾನವನ್ನು ತೊರೆದು ಮುದದಿ ಸುವಿಮಲ ಜ್ಞಾನಮೂರ್ತೆ ಜ್ಞಾನಿವರ ಪ್ರಸನ್ನನೆ ನೀನೆ ಎನ್ನ ರಕ್ಷಕನೆಂದರಿಯುತ 3
--------------
ವಿದ್ಯಾಪ್ರಸನ್ನತೀರ್ಥರು
ನಂಬಿದೆನೊ ನಿನ್ನ ಪಾದಾರವಿಂದಾ ಇಂಬು ಈವದು ಎನಗೆ ವೈಕುಂಠಪುರದೊಳಗೆ ಪ ಮಲಭಾಂಡದಲ್ಲಿ ಪೊಕ್ಕು ನೆಲೆಗಾಣದಲೆ ಸಿಕ್ಕು ಸಲೆ ಸೊರಗಿ ತಿರುಗಿದೆನೊ ಬಳಲಿ ಮರುಗಿ ಉಳಿವದಕುಪಾಯವನು ಒಂದರೆ ಕಾಣೆನೊ ಎಲೊ ಬಲುದೈವ ನೀನೆ ದಯಾಳು ಎಂದೂ 1 ಕೈವಲ್ಯ ಕೊಡುವಲ್ಲಿ ಮಂಡಲದೊಳು ಎಣಿಯಾರು ನಿನಗೆ ಭಂಡಕಾಯವ ತೆತ್ತು ಬರಲಾರೆ ನಿನ್ನ ತೊತ್ತು ನಿತ್ಯ ಎಳೆನೋಟದಲಿ ನೋಡು 2 ಯದುಕುಲಲಲಾಮ ಸುರಸಾರ್ವಭೌಮ ಮಹಿಮ ಮದನಪಿತ ಕಾಳಿಂಗಭಂಗ ರಂಗಾ ಮಧುಸೂದನ ವಿಜಯವಿಠ್ಠಲ ಲಕುಮಿನಲ್ಲಾ ಹೃದಯದೊಳು ಪೊಳೆವ ಬಲು ವಿಚಿತ್ರ ಚಲುವಾ 3
--------------
ವಿಜಯದಾಸ
ನಂಬಿದೇ ಗುರುವರಾ ನಂಬಿದೇಪ ನಂಬಿದೆ ಗುರುಸಾರ್ವಭೌಮಾ ತುಂಟುಮನದೊಳು ಹರಿಭಕ್ತಿ ನಿಸ್ಸೀಮಆಹಾ ಅಂಬುಜೋದ್ಭವಪಿತನ ಕಂಭದಿ ತೋರಿದ ಶಂಬರ ಕುಲದೀಪ ಪ್ರಹ್ಲಾದ ವ್ಯಾಸಮುನಿಯೇ ಅ.ಪ. ದಾಸನೆಂದಡಿಗೆ ಬಿದ್ದೆನೋ ಈಗ ದೋಷ ನಾಶಮಾಡೋ ಎನಗೆ ಬೇಗ ಆಹಾ ವಾಸುಕಿಶಯನನ ಬ್ಯಾಸರದೆ ಸ್ತುತಿಸಿ ಈಶನ ಸರ್ವತ್ರವ್ಯಾಪ್ತಿಯನರುಹಿದ ಭೂಪ 1 ಪಾತಕರೊಳಗೆ ಅಗ್ರೇಸರನಾನು ಪೂತಮಾಡುವರೊಳಗೆ ನಿಸ್ಸೀಮ ನೀನು ಆಹಾ ತಾತನಪ್ಪಣೆಯಂತೆ ವ್ಯಾಸರಾಜಾಎನಿಸಿ ಖ್ಯಾತಿಯಿಂದಲಿ ತರ್ಕತಾಂಡವರಚಿಸಿ ಮೆರೆದೇ 2 ತಾಪಸಶ್ರೇಷ್ಠ ಬ್ರಹ್ಮಣ್ಯಕುವರನಾದೆ ಗೋಪಾಲಕೃಷ್ಣನ್ನ ಕುಣಿಕುಣಿದಾಡಿಸಿ ಭೂಪನ ಕುಹಯೋಗ ಕಳೆದ ಯತಿಕುಲತಿಲಕ 3 ಮಧ್ವಶಾಸ್ತ್ರಗಳ ಮಂದರರಿಯದಿರಲು ಮುದದಿಂದ ಪದಸುಳಾದಿಗಳ ರಚಿಸಿದೆ ನೀನು ಆಹಾ ಆದರದಿಂದಲಿ ಪುರಂದರಕನಕರಿಗೆ ಸದುಪದೇಶವ ಕೊಟ್ಟು ಜಗದುದ್ಧಾರಮಾಡಿದ ಪ್ರಭುವೇ 4 ಮತ್ತೆ ಪುಟ್ಟಿದೆ ವೆಂಕಣ್ಣಭಟ್ಟ ನೆಂದೆನಿಸೀ ಮತ್ತ ಕೇಸರಿಯಂತೆ ಮಧ್ವಶಾಸ್ತ್ರದಿ ಮೆರೆದೇ ಆಹಾ ಕತ್ತಲೆ ಅದ್ವೈತವಾದಗಳಿಗೆಲ್ಲಾ ಕತ್ತಿಎನಿಸಿದ ಪರಿಮಳಾಚಾರ್ಯ ಗುರುವೇ 5 ವಿಪ್ರನು ದಿಟ್ಟತನದಿ ನಿನ್ನ ಗಂಧವ ತೇದುಕೊಡುಎನೆ ಕ್ಷಿಪ್ರದಿ ತೋರಿದೆ ನಿನ್ನ ಮಹಿಮೆಯಜಗಕೇ ಆಹಾ ಅಪ್ಪ ಶ್ರೀರಾಮರ ಪೂಜಿಸಬೇಕೆಂದು ಒಪ್ಪಿಸನ್ಯಾಸವ ರಾಘವೇಂದ್ರನಾದ 6 ಮುದದಿ ದೇಶ ದೇಶವ ಚರಿಸಿದೇ ಸಮಯದಿ ಸುಜನರಕ್ಲೇಶಗಳಳಿದೇ ಆಹಾ ಮೋದಮುನಿಯ ಗ್ರಂಥಗಳಿಗೆಲ್ಲ ಟಿಪ್ಪಣಿ ಮಾಡುತ ಬುಧರಿಗೆ ತತ್ವ ಕನ್ನಡಿ ತೋರ್ದ ಗುಣಗಣನಿಧಿಯೇ7 ಪರಿಪರಿ ಮಹಿಮೆಯ ತೋರುವ ಗುರುವೇ ಸುರತರು ಅಂದದಿ ಹರಕೆ ಗಳೀವೆ ಪ್ರಭುವೇ ಆಹಾ ಮೂರೆರಡು ಒಂದುನೂರು ವರುಷ ಪರಿಯಂತ ಸಾರಿಸಾರಿದವರ ಪೊರೆದು ಮೆರೆಯುವ ದಿವಿಜವಂದಿತ ಗುರು8 ದಯದಿಂದ ನೋಡೆನ್ನ ದೀನೋದ್ಧಾರ ಭವ ಬಿಡಿಸು ಕರುಣಾಸಾರ ಆಹಾ ಜಯತೀರ್ಥವಾಯ್ವಂತರ್ಗತ ಶ್ರೀಕೃಷ್ಣ ವಿಠಲನ ಹೃ- ದಯಮಂದಿರದಿ ತೋರೆನಗೆ ಗುರುಸಾರ್ವಭೌಮ 9
--------------
ಕೃಷ್ಣವಿಠಲದಾಸರು