ಒಟ್ಟು 6414 ಕಡೆಗಳಲ್ಲಿ , 131 ದಾಸರು , 4170 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣನಾಥ ಪ್ರಾಣನಾಥ ತ್ರಿಭುವನಚೇಷ್ಟ ಪ್ರದಾತಾ ಪ ಅಖಿಲನೇತಾ ಸುಗುಣಜಾತಾ ಶೂರ ಸೀತಾರಾಘವದೂತ ಅ.ಪ ನೂರು ಯೋಜನ ಶರಧಿಯ ಹಾರಿ ಲಂಕಾಪುರವ ಸೇರಿ ಹರುಷದಿ ಜನಕಕುಮಾರಿಗುಂಗುರವಿತ್ತ 1 ದುಷ್ಟ ದಶಕಂಧರನನು ಮುಷ್ಟಿತಾಡನದಿಂದ ಚೇಷ್ಟರಹಿತನ ಮಾಡಿ ದಿಟ್ಟತನದಲಿ ಮೆರೆದ 2 ಗಂಧಮಾದನ ಗಿರಿಯನು ಒಂದು ಕರದಲಿ ಸುಖದಿ ಪಾದ ದ್ವಂದ್ವಕೆರಗಿದ ಮುಖ್ಯ 3 ಕ್ರೂರನಿಶೇಚರಪತಿ ಪರಿವಾರವನು ಸದೆ ಬಡಿದು ಮೂರು ಜಗಂಗಳ ಮೀರಿದ ಕೀರುತಿಯ ಪೊಂದಿದ 4 ಇನ್ನು ಎರಡವತಾರಗಳನ್ನು ಧರಿಸುತ ಜಗದಿ ಪ್ರ ಸನ್ನ ಮಾಧವವ್ಯಾಸರನ್ನು ಸೇವೆಯ ಮಾಡಿದ 5
--------------
ವಿದ್ಯಾಪ್ರಸನ್ನತೀರ್ಥರು
ಪ್ರಾಣನ್ನೋಡೀರೇ ಮುಖ್ಯ ಪ್ರಾಣನ್ನೋಡಿರೇ ಪ ಕ್ಷೋಣಿಯೊಳಗ ಸುಖ ಬೀರುವ ಪಾದನ ಚರಿತಾ ಸದ್ಗುಣ ಭರಿತಾ ಅ.ಪ. ನರಲೀಲೆಯಲವ - ತರಿಸದ ಅಂಜನಿ ಸುತ-ನೊ ಮಹಾದ್ಬುತನೋ ಮಲೆಯೊ ವಿಕ್ರಮ ಸ್ಥಿತಿಯೋ 1 ಸುರರಾಯುಧವನೆ ಲೆಕ್ಕಿಸ ಕಪಿ ಯಾಗ್ರಣಿಯೊ ವಜ್ರದ ಖಣಿಯೋ ಶರಣರ ವಾಂಛಿತ ಪೂರಿಪ ಮೂಲೋಕ ಗುರುವೋ ಕಲ್ಪ ತರುವೋ2 ರಾಮ ಪದಾಂಬುಜ ಕೊಂಬ ಪರಾಗ ಮಧುಪನೋ ದೇವಾಧಿ ಪನೋ ಪ್ರೇಮದಿ ರಣದಲಿ ಹರಿರಥವಾದ ಮೂರುತಿಯೋ ಪುಣ್ಯ ಮೂರುತಿಯೋ3 ತಾಮಸ ರಾವಣ ನೆದಿಗೊತ್ತದ ಕರಮೋ ಸಿಡಿಲದ ಧರಮೋ ಮ್ಯೋಮಕ ಮೀರುವ ಹನುಮನ ಬಾಲದ ಸರುಳೋ ದೈತ್ಯರ ಉರುಳೋ4 ಕ್ಷಣದಲಿ ಸಂಜೀವನ ಗಿರಿ ತಂದಿಹ ಪದವೋ ಸಾಧುರ ಮುದಮೋ ವನಜ ಭವನ ಪದವಿಯ ಪಡಕೊಂಡಾ ತಪಮೋ ತಾ ಅಪರೂಪಮೋ 5 ದುರಿತ ನಿವಾರಿಪ ಕರುಣಾ ನಿಧಿಯೋ ಭಕ್ತರ ಸುಧೆಯೋ ಅನುದಿನ ಮಹಿಪತಿ ನಂದನ ಸಲಹುವ ದಯಮೋ ಗತಿ ಆಶ್ರಯಮೋ ||6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪ್ರಾಣಾ - ದೇವನೇ | ಸಕಲ ಜಗ | ತ್ರಾಣ ನಾದನೇ ಪ ರೇಣು ವಂತಿರಿಸೊ ಅ.ಪ. ಪಂಚ - ರೂಪನೇ | ಪ್ರಾಣಾದಿ | ಪಂಚ ಕಾರ್ಯನೇ |ವಂಚಿಸಿ ದೈತ್ಯರ | ಸಂಚುಗೊಳಿಸಿ - ನಿ-ಷ್ಕಿಂಚಿನ ಜನಪ್ರಿಯ ಸಂಚಿಂತನೆ ಕೊಡು 1 ಹಂಸ ನಾಮವಾ | ಪ್ರತಿದಿನ | ಶಂಸಿಪೆ ಪವನಾ |ಹಂಸ ಮಂತ್ರವೇಕ | ವಿಂಶತಿ ಸಾಸಿರ ಶಂಸಿಸಿ ಷಟ್ಯತ | ಹಂಸನಿಗೀವೆ 2 ವಿಧಿ | ಪೂರ್ವಕ ಸಾಧನನಿರ್ವಹಿಸುವ ತೆರ | ತೋರ್ದನು ನೀನೇ 3 ವಿಶ್ವ-ವ್ಯಾಪಕಾ | ಹರಿಗೆ ಸಾ | ದೃಶ್ಯ ರೂಪಕಾ |ಅಶ್ವರೂಪ ಹರಿ | ವಶ್ಯನೆನಿಸಿ ಬಹುವಿಶ್ವಕಾರ್ಯ ಸ | ರ್ವಸ್ವ ಮಾಳ್ಪೆಯೊ 4 ದೇವ-ಋಷೀ-ಪಿತ | ನೃಪರು-ನರ | ರೈವರೊಳಗಿರುತಾ |ಜೀವರುಗಳ ಸ್ವ | ಭಾವ ವ್ಯಕುತಿಗೈ ದೀವಿರಿಂಚಾಂಡವ | ನೀ ವಹಿಸಿದೆಯೋ 5 ಶುದ್ಧ-ಸತ್ವಾತ್ಮದ | ದೇಹದೊ | ಳಿದ್ದರೂ ಲಿಂಗದ |ಬದ್ಧ ವಿಹೀನನೆ | ದಗ್ದ ಪಟದ ಪರಿಸಿದ್ಧ ಸಾಧನ ಅನ | ವವ್ಯ ನೆನಿಸುವೇ 6 ಹೀನ-ಸತು ಕರ್ಮವಾ | ಪವಮಾನ | ತಾನೇ ಮಾಡುವಾ |ಜ್ಞಾನದಿಂದಲೇ | ನೇನು ಮಾಳ್ಪುದನುಪ್ರಾಣಪಗೊಂಡು ಕು | ಯೋನಿಯ ಕಳೆವ 7 ಕ | ವಾಟ ಅಹಿಪವಿಪ ಲ-ಲಾಟ ನೇತ್ರಗೆ | ಸಾಟಿ ಮೀರ್ದನೇ 8 ವಾಙ್ಮನೋ-ಮಾಯನೇ | ದೇವ | ಸ್ತೋಮ ದೊಳಗಿಹನೇ |ಶ್ರೀ ಮಹಿನುತ ಶ್ರೀ | ರಾಮಚಂದ್ರ ಗುಣಸ್ತೋಮ ಪೊಗಳ ನ | ಮ್ಮಾಮಯ ಹರ9 ಮೂಲೇಶ ಪದವ | ಪಿಡಿದಿಹ | ಪ್ರಾಣನ ಚರಣಾಕಿಲಾಲಜವನು | ಓಲೈಸುತಲಿಹಕಾಲ ಕರ್ಮದಿಹ | ಕೀಳು ಜೀವನ ಪೊರೆ 10 ಭಾವಿ ಬ್ರಹ್ಮನೇ | ಜೀವರ | ಸ್ವಭಾವ - ವರಿತನೇ ಕಾವ ಕಾಲ್ಪ ಗುರು | ಗೋವಿಂದ ವಿಠಲನಪಾವನ ಚರಣವ | ಭಾವದಿ ತೋರೈ 11
--------------
ಗುರುಗೋವಿಂದವಿಠಲರು
ಪ್ರಾಣಾ ನೀ ಕಲ್ಯಾಣಗುಣ ಗೀರ್ವಾಣಾದ್ಯರ ಮಣಿ ಜೀವಗಣ ಗುಣಕಾರ್ಯತ್ರಾಣ ಅಗಣಿತಮಹಿಮ ಪ ಇನ್ನೆಣೆಯುಂಟೆ ತ್ರಿಭುವನ ತ್ರಾಣ ನಿನ್ನ ಆಣತಿಯಂತೆ ಪಂಚಪ್ರಾಣ ಅಣುಘನತೃಣ ಮೊದಲು ಪಣೆಗಣ್ಣ ಸುರ ಗಣಾದ್ಯಮರರೊಳಗನವರತ ನೀ ಘನ್ನ ಫಣಿರಾಜಗುರು ನಿನಗೆಣೆಯುಂಟೆ ನೀರಜಭ ಮುಖ್ಯಪ್ರಾಣ ಬಾದರಾ ಯಣನನುಗ ಆನಂದಗುಣಭರಿತ ಕೃತಿರ- ಮಣನ ಸುತೆ ರಮಣ ನೀ ಕ- ರುಣಿಸಿದರುಂಟು ಶ್ರೀಹರಿಯ ಕರುಣಾಅ.ಪ ಮರುತಾ ಶ್ರೀ ಹರಿಯಿಂದಲನವರತ ಪ್ರೇರಿತನಾಗಿ ನಿರುತಾ ಜಗಕಾರ್ಯದೊಳು ಸತತ ನೀ ಬಿಡದಿರೆಡರಿಲ್ಲ ಮರುತಾ ಜಗಚೇಷ್ಟಪ್ರದ ನೀನಹುದೊ ಶಕ್ತಾ ವರ ಮಂತ್ರಿಯಾಗಿ ನೀ ಹರಿಗೆ ಭಕ್ತಾಗ್ರಣಿಯೆ ಯಂತ್ರೋ- ದ್ಧ್ದಾರ ಶ್ರೀ ಹನುಮಂತಾ ಬಲಭೀಮ ಗುರುಮಧ್ವಶಾಂತಾ ತ್ರಿಕೋ ಟಿರೂಪಧರ ಖ್ಯಾತ ಸುರಾಸುರನರೋರಗಗಳನವರತ ಸರ್ವವ್ಯಾಪಾರ ನೀ ನಡೆಸಿ ಪೊರೆವ ಸದ್ಗುರುವರ ಸುಸಮೀರಾ ನೀರಜಾಂಡವ ಕೂರ್ಮರೂಪದೊಳು ನಿಂತು ನೀ ಭಾರವಹಿಸಿ ಮೆರೆದೆ ಶ್ರೀ ವಾಯುಕುವರಾ1 ಸೃಷ್ಟಿಗೊಡೆಯನಿಗೆ ನೀನಿಷ್ಟಪುತ್ರ ನಿನ್ನಷ್ಟುಜ್ಞಾನ ಪರಮೇಷ್ಠಿಗಲ್ಲದೆ ಎಷ್ಟು ನೋಡಿದರು ಇತರರಲಿ ಎಳ್ಳಷ್ಟಿರೆಣೆಯಿಲ್ಲ ತುಷ್ಠಿಪಡಿಸುವೆ ಹರಿಯ ಜೇಷ್ಟದಾಯರ ಶ್ರೇಷ್ಟ ಮೂರುತಿ ಕವಿಶ್ರೇಷ್ಟ ನೀನೆನಿಸಿ ಲಂಕಾ ಶ್ರೇಷ್ಟನೆನಿಸಿದ ದುಷ್ಟದೈತ್ಯನಾ ಮರವನ್ನ ಹುಟ್ಟನಡಗಿಸಿ ಸುಟ್ಟಿ ಲಂಕಪಟ್ಟಣವನ್ನು ಪುಟ್ಟಿದಾಗಲೆ ಬೆಟ್ಟ ಹಿಟ್ಟನು ಮಾಡಿ ಆ ದುಷ್ಟಭಾಷ್ಯಗಳ ಕಷ್ಟ ಪರಿಹರಿಸಿ ನಿ- ರ್ದುಷ್ಟತತ್ವವ ತೋರ್ದೆ ಎಷ್ಟು ಶಕ್ತನು ಜೀವ- ಶ್ರೇಷ್ಠಮೂರುತಿ ಸರ್ವ ಕಷ್ಟ ಹರಿಸಿ ನಿನ್ನ ಇಷ್ಟಭಕುತರ ಸೇವೆ ಕೊಟ್ಟು ಶ್ರೀ ಹರಿಯ ಶ್ರೇಷ್ಠಮೂರುತಿ ತೋರೋ ಇಷ್ಟದಾಯಕ ಗುರು ಶ್ರೇಷ್ಠ ಮಾರುತಿಯೆ2 ಈಶ ಪ್ರೇರಣೆಯಿಂದ ಈ ನಶ್ವರದೇಹದೊಳು ಆ ಸಮಯದಲಿ ಅಪಾನನಿಂದೊಡಗೂಡಿ ಪ್ರಾಣೇಶ ನಿನ್ನಿಂದ ಎಲ್ಲ ಚೇತನವಿಹುದೋ ವಾಸವಾಗಿರುವನಕ ಈ ಶರೀರ ಕಾರ್ಯ ಶಾಶ್ವತ ನಡೆವುದೋ ಕಲ್ಪಾವಸಾನ ಮೋಕ್ಷಪರಿಯಂತ ಲೇಶ ಬಿಡದಲೆ ಬಪ್ಪ ಜಡದೇಹದೊಳು ನೀ ವಾಸವಾಗಿಹೆ ದೇವ ಶಾಶ್ವತನಾಗಿ ಆಯಾಸವಿಲ್ಲದಲೆ ಊಧ್ರ್ವಗಮನದಿ ಪ್ರಾಣ ಅಪಾನನಿಂದಗಲಲೀದೇಹ ಭೂಶಯನ ವಾಸ ಜಡವೆಂದೆನಿಸಿ ಆ ಶರೀರವು ಭೂತಪಂಚಕದಿ ಸೇರುವುದು ಪ್ರಾಣೇಶ ನೀನಾಗ ಹರಿಯನ್ನು ಸೇರುವೆ ಏಸು ಚರಿತೆಯೊ ಅನಿಲ ಶಾಶ್ವತನು ನೀನು ಅಶಾಶ್ವತ ದೇಹಗಳ ಮಾಳ್ಪ ನಿನ್ನಯ ಕಾರ್ಯ ಏಸುಕಾಲಕು ದೇಹದಿಂ ಮೃತರೈಯ್ಯ ಜೀವರು ಶ್ರೀಶನಾತ್ಮಜ ನೀನಮೃತನೆನಿಸೀ ಮೆರೆವೆ ಈಶ ಪ್ರೇರಣೆ ನಿನಗೆ- ನಿನ್ನ ಪ್ರೇರಣೆ ಎಮಗೆ ಅಸುಪತಿಯೆ ನಿನಗಿದು ಹೊಸ ಪರಿಯಲ್ಲವೊ ಮೀಸಲಾಗಿರಿಸು ಶ್ರೀ ವೇಂಕಟೇಶನ ಪಾದ ದಾಸನೆನಿಸೊ ಪವನೇಶ ಉರಗಾದ್ರಿವಾಸ ವಿಠಲನ ದಾಸ ಎನ್ನ ಮನದಾಸೆ ನೀ ಸಲಿಸಿ ನಿಜ ದಾಸಜನ ಸಹವಾಸವಿತ್ತು ಅನಿಶ ಭವ ಪಾಶ ಸಡಿಲಿಸಿ ಸುಖವಾಸವೀಯೊ ಗುರು ಮಾತರಿಶ್ವ 3
--------------
ಉರಗಾದ್ರಿವಾಸವಿಠಲದಾಸರು
ಪ್ರಾಣಾಂತರ್ಗತ ಜ್ಞಾನಾನಂದಾ | ಮಯಶ್ರೀನಿವಾಸನೆ ಗೋವಿಂದಾ ಪ ಗಾನಲೋಲನೆ ನಿನ್ನ | ಧ್ಯಾನ ಪಾಲಿಸಿ ಇನ್ನುಜ್ಞಾನವಂತರ ಸಂಗ | ಸಾನು ಕೂಲಿಸಿ ಕಾಯೋ ಅ.ಪ. ಚಾರು ದರ ಕಂಬು ಕಂಠಾ 1 ಅಕ್ಷಿಗಳರವಿಂದ ವಿಸ್ತಾರಾ | ಲಕ್ಷ್ಮಿವಕ್ಷದಿ ಮೆರೆವ ಗಂಭೀರ |ಲಕ್ಷ್ಮಣಾಗ್ರಜ ಸ | ಲ್ಲಕ್ಷಣ ಪುರುಷ ಲೋಕಾಧ್ಯಕ್ಷ ಪಾಂಡವ | ಪಕ್ಷ ಸಜ್ಜನ ತೋಷಾ |ದ್ರುತ - ಅಕ್ಷರಗಳ ಕ್ಷರ ಪೂಜ್ಯ ಚರಣನೆ | ಅಕ್ಷಯಾಂಬರ ತರಳೆಗಿತ್ತವಅಕ್ಷರಳ ಲೆಕ್ಕಿಸದೆ ಬ್ರಹ್ಮನ ಕುಕ್ಷಿಕಮಲದಿ ಸೃಷ್ಟಿಸಿದ ಮಹಿಮ 2 ಸ್ಮರ ತೇಜ ಗುಣಪೂರ್ಣಾದ್ರುತ - ಗುರು ಗೋವಿಂದ ವಿಠಲನೆ ನಿನ್ನಯ | ಚರಣ ನೀರೇರುಹವ ಕಾಂಬುವ ಪರಮ ಸುಖ ಸಂದೇಹವೆಂದೋ | ಪರಮ ಪಾತಕಿಯಾದ ಎನಗೆ 3
--------------
ಗುರುಗೋವಿಂದವಿಠಲರು
ಪ್ರಾಣಾಂತರ್ಗತಪ್ರಾಣ ಅಣು ರೇಣುಚರಾಚರಪೂರ್ಣ ಪ. ಕಾಣೆನು ನಿನ್ನ ಸಮಾನ ಮಾನದ ಪು- ರಾಣಪುರುಷ ಸುತ್ರಾಣ ವರೇಣ್ಯಅ.ಪ. ಪಂಕಜನಾಭ ಶ್ರೀವೆಂಕಟರಮಣನೆ ಕಿಂಕರಜನಮನಃಪ್ರೇಮದನೆ ಶಂಕರಾದಿ ಸುರಸಂಕುಲ ಸೇವಿತ ಶಂಖ ಸುದರ್ಶನ ಗದಾಬ್ಜಹಸ್ತನೆ 1 ಪಾಪಿಯು ನಾ ನೀ ಪಾಪಹ ಪಾವನ ರೂಪ ಪರಾತ್ಪರ ಗೋಪಾಲ ಕಾಪಾಡೆಮ್ಮ ಸಮೀಪಗನಾಗಿ ಜ- ಯಾಪತಿ ಗೋಪತಿ ಶ್ರೀಪತಿ ನೀ ಗತಿ 2 ಚಟುಳ ನೇತ್ರಾವತಿತಟ ನಿಕಟ ಪ್ರಕಟ ವಟಪುರವರ ವೆಂಕಟಧಾಮ ವಟುವಾಮನ ಲಕ್ಷ್ಮೀನಾರಾಯಣ ಪಟುವೀರ್ಯ ತಮಃಪಟಲನಿವಾರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪ್ರಾರ್ಥಿಸುವೆ ರಘುನಾಥತೀರ್ಥರ ಪ್ರಾರ್ಥಿಸುವೆ ಪುರುಷಾರ್ಥಪ್ರದರ ಪ ಸಾರ್ಥಕವಾಗಲು ಪಾರ್ಥಿವ ದೇಹವು ಜಗದಲಿ ಕೀರ್ತಿಗಳಿಸಿದವರ ಅ.ಪ ನೇದೃಶಂ ಸ್ಥಲಿಮಲಂ ಶಮಲಘ್ನಂ ನಾಸ್ಯತೀರ್ಥಂ ಸಲಿಲಸ್ಯಸಮಂ ವಾಃ ನಾಸ್ತಿ ವಿಷ್ಣುಂ ಸದೃಶಂ ನನುದೈವಂ ಸತ್ಯ ವಚನಗಳಿವೆಂದು ಸೂಚಿಸುತ ಆಸ್ತಿಕ ಜನಮನ ರಂಜಕ ತ್ರಿಮಕುಟ ಕ್ಷೇತ್ರನಿವಾಸ ಪವಿತ್ರತಮ ಚರಿತರ 1 ವ್ಯಾಸರಾಜ ಗುರುವರ್ಯ ರಚಿತ ತಾ ತ್ಪರ್ಯ ಚಂದ್ರಿಕಾ ಗ್ರಂಥವನು ವಾಸುದೇವ ನರಹರ್ಯನುಗ್ರಹದಿ ಉರ್ವರಿತವ ವಿರಚಿಸಿ ಮೆರೆದ ಶೇಷಚಂದ್ರಿಕಾಚಾರ್ಯರೆಂಬೊ ಗುರು ವ್ಯಾಸರಾಜರ ಪರಾವತಾರರ 2 ರಾಗ ದ್ವೇಷಗಳ ತೊರೆಯುತ ತ ನ್ನನು ರಾಗದಿಂದ ಭಜಿಸುವ ಜನಕೆ ಭೂಗಕಲ್ಪ ತರುವಂತೆ ಅರಿಷ್ಠವ ನೀಗಿ ಸಾಧು ಭೋಗಗಳೀವ ಯೋಗಿಜನ ಮನೋನಯನ ಪ್ರಸನ್ನ ಶ್ರೀ ರಾಘವೇಂದ್ರರಪರಾವತಾರರ 3
--------------
ವಿದ್ಯಾಪ್ರಸನ್ನತೀರ್ಥರು
ಪ್ರೀತಿಪಾತ್ರ ಬುಧೇಂದ್ರ ಪ ಸತ್ಯಪ್ರಿಯರ ಕುವರಾ ನಿಜ ಭೃತ್ಯರ ಪಾಲಿಪ ಚತುರಾ ಭಯವ ಕಳೆವುತ್ತ ಪೊರೆದೆ 1 ವಿಷವನುಂಡರಗಿಸಿಕೊಂಡ ಧೀರಾ ವೃಷಕೇತು ಪಿತ ಭಕ್ತ ಶೌಂಡಾ ಉಸಿರೆತ್ತಗೊಡದೆ ಸಾಧಿಸಿದೆ ಮಧ್ವಶಾಸ್ತ್ರ 2 ಚರಣಕ್ಕೆ ಶರಣೆಂಬೆನಯ್ಯ ಎನ್ನ ಕರುಣದಿ ಪಾಲಿಸು ಜೀಯಾ ಪಾದ ಭೃತ್ಯರ ಚರಣ ಕಿಂಕರನ ಕಿಂಕರನೆನಿಸುವದೆನ್ನ 3
--------------
ಹನುಮೇಶವಿಠಲ
ಪ್ರೇಮದಿಂದೊಂದಿಸುವೆ ಗುರುವೃಂದಕೆ ಪ ಕಾಮಧೇನುವಿನಂತೆ ಕೊಡಲೆಮಗಭೀಷ್ಟವನು ಅ.ಪ. ಸತಿಯ ಬೇಡುವನಲ್ಲಾ ಸುತರ ಬೇಡುವನಲ್ಲಾಅತಿಶಯದ ಭಾಗ್ಯವನು ಕೇಳ್ವನಲ್ಲಾರತಿಪತಿ ಆಟವನು ಖಂಡಿದಿ ಬೇಗದಲಿಮತಿ ತಪ್ಪಲೆನಗೆ ದುರ್ವಿಷಯದೊಳಗೆಂದ 1 ಶಕ್ತಿ ಬೇಡುವನಲ್ಲ ಯುಕ್ತಿಬೇಡುವನಲ್ಲಾಭಕ್ತಿವಿನಲ್ಲೆಂದು ಕೇಳ್ವನಲ್ಲಮುಕ್ತಿದಾಯಕ ನಮ್ಮ ವಿಠಲನ ಚರಣದಲಿಭಕ್ತಿ ದೃಢವಾಗೆಮಗೆ ಇತ್ತು ರಕ್ಷಿಸಲೆಂದು 2 ಮಾನ ಬೇಡುವನಲ್ಲ ದಾನ ಬೇಡುವನಲ್ಲಾಹೀನತನ ಬ್ಯಾಡೆಂದು ಕೇಳ್ವನಲ್ಲಾಮಾನನಿಧಿ ನಮ್ಮ ಶ್ರೀ ನರಹರಿಯ ಚರಣವನುಕಾಣಿಸುವ ಜ್ಞಾನವನು ದಾನ ಮಾಡೆಮಗೆಂದು 3
--------------
ತಂದೆ ಶ್ರೀನರಹರಿ
ಫಲವಿದು ಬಾಳ್ದ್ದುದಕೆ ಪÀ ಸಿರಿ ನಿಲಯನ ಗುಣಗಳ ತಿಳಿದು ಭಜಿಸುವುದೆ ಅ.ಪ. ಸ್ವೋಚಿತ ಕರ್ಮಗಳಾಚರಿಸುತ ಬಹು ನೀಚರಲ್ಲಿಗೆ ಪೋಗಿ ಯೊಚಿಸದೆ ಖೇಚರವಾಹ ಚರಾಚರ ಬಂಧಕ ಮೋಚಕನಹುದೆಂದ್ಯೋಚಿಸುತಿಪ್ಪುದೆ 1 ನಿಚ್ಚ ಸುಭಕುತಿಯಲಚ್ಯುತನಂಘ್ರಿಗ ತುಚ್ಚ ವಿಷಯಗಳ ಇಚ್ಛಿಸದೆ ಯ ದೃಚ್ಛಾಲಾಭದಿಂ ಪ್ರೋಚ್ಚನಾಗುವುದೆ 2 ಮನೋವಾಕ್ಕಾಯದನುಭವಿಸುವ ದಿನ ದಿನದಿ ವಿಷಯ ಸಾಧನಗಳಿಗೂ ಅನಿಶಾಂತರ್ಗತ ವನರುಹದಳ ಲೋ ಚನಗರ್ಪಿಸಿ ದಾಸನು ನಾನೆಂಬುದೇ 3 ವಾಸವ ಮುಖ ವಿಬುಧಾಸುರ ನಿಚಯಕೆ ಈ ಸಮಸ್ತ ಜಗಕೀಶ ಕೇಶವಾ ನೀಶ ಜೀವರೆಂಬ ಸುಜ್ಞಾನವೆ 4 ಪಂಚ ಭೇದಯುತ ಪ್ರಪಂಚವು ಸತ್ಯ ವಿ ಭವ ಮುಖ ಬಲಿ ವಂಚಕಗೆ ಸಂಚಲ ಪ್ರತಿಮೆ ಅಚಂಚಲ ಪ್ರಕೃತಿಯು ಸಂಚಿಂತಿಸಿ ಮುದ ಲಾಂಭಿತನಹುದೆ 5 ಪಂಚ ಋತುಗಳಲಿ ಪಂಚಾಗ್ನಿಗಳಲಿ ಪಂಚ ಪಂಚರೂಪವ ತಿಳಿದು ಪಂಚ ಸುಸಂಸ್ಕಾರಾಂಚಿತನಾಗಿ ದ್ವಿ ಪಂಚ ಕರಣದಲಿ ಪಂಚಕನರಿವುದೆ 6 ಹೃದಯದಿ ರೂಪವು ವದನದಿ ನಾಮವು ಉದರದಿ ನೈವೇದ್ಯವು ಶಿರದಿ ಪದ ಜಲ ನಿರ್ಮಾಲ್ಯವನೆ ಧರಿಸಿ ಕೋ ಸದನ ಹೆಗ್ಗದವ ಕಾಯುವುದೆ 7 ಪಾತ್ರರ ಸಂಗಡ ಯಾತ್ರೆ ಚರಿಸುತ ವಿ ಧಾತೃ ಪಿತನ ಗುಣ ಸ್ತೋತ್ರಗಳಾ ಶ್ರೋತ್ರದಿ ಸವಿದು ವಿಚಿತ್ರಾನಂದದಿ ಗಾತ್ರವ ಮರೆದು ಪರತ್ರವ ಪಡೆವುದೆ 8 ಹಂಸ ಮೊದಲು ಹದಿನೆಂಟು ರೂಪಗಳ ಸಂಸ್ಥಾನವ ತಿಳಿದನುದಿನದಿ ಸಂಸೇವಿಸುವ ಮಹಾಪುರುಷರ ಪದ ಪಾಂಸುವ ಧರಿಸಿ ಅಸಂಶಯನಪ್ಪುದೆ 9 ವರ ಗಾಯಿತ್ರೀ ನಾಮಕ ಹರಿಗೀ ರೆರಡಂಘ್ರಿಗಳ ವಿವರವ ತಿಳಿದು ತರುವಾಯದಿ ಷಡ್ವಿಧ ರೂಪವ ಸಾ ಅನುದಿನ ಧ್ಯಾನಿಸುತಿಪ್ಪುದೆ 10 ಬಿಗಿದ ಕಂಠದಿಂ ದೃಗ್ಭಾಷ್ಪಗಳಿಂ ನಗೆ ಮೊಗದಿಂ ರೋಮಗಳೊಗೆದು ಮಿಗೆ ಸಂತೋಷದಿಂ ನೆಗೆದಾಡುತ ನಾ ಲ್ಮೊಗನಯ್ಯನ ಗುಣ ಪೊಗಳಿ ಹಿಗ್ಗುವುದೆ 11 ಗೃಹಕರ್ಮವ ಬ್ಯಾಸರದಲೆ ಪರಮೋ ತ್ಸಹದಲಿ ಮಾಡುತ ಮೂಜಗದ ಮಹಿತನ ಸೇವೆ ಇದೆ ಎನುತಲಿ ಮೋದದಿ ಅಹರಹರ್ಮನದಿ ಸಮರ್ಪಿಸುತಿಪ್ಪುದೆ12 ಕ್ಲೇಶಾನಂದಗಳೀಶಾಧೀನ ಸ ಮಾಸಮ ಬ್ರಹ್ಮ ಸದಾಶಿವರೂ ಈಶಿತವ್ಯರು ಪರೇಶನಲ್ಲದೆ ಶ್ವಾಸ ಬಿಡುವ ಶಕ್ತಿ ಲೇಸಿಲ್ಲೆಂಬುದೆ 13 ಏಕೋತ್ತರ ಪಂಚಾಶದ್ವರ್ಣಗ ಳೇಕಾತ್ಮನ ನಾಮಂಗಳಿವು ಸಾಕಲ್ಯದಿಯಿವರರಿಯರೆಂಬುದೆ 14 ಒಂದು ರೂಪದೊಳನಂತ ರೂಪವು ಪೊಂದಿಪ್ಪವು ಗುಣಗಳಾ ಸಹಿತ ಇಂದು ಮುಂದೆಂದಿಗು ಗೋ ವಿಂದಗೆ ಸರಿಮಿಗಿಲಿಲ್ಲೆಂತೆಂಬುದೆ 15 ಮೇದಿನಿ ಪರಮಾಣಂಬು ಕಣಂಗಳ ನೈದಬಹುದು ಪರಿಗಣನೆಯನು ಮಾಧವನಾನಂದಾದಿ ಗುಣಂಗಳ ನಾದಿ ಕಾಲದಲಿ ಅಗಣಿತವೆಂಬುದೆ 16 ಹರಿಕಥೆ ಪರಮಾದರದಲಿ ಕೇಳುತ ಮರೆದು ತನುವ ಸುಖ ಸುರಿವುತಲೀ ಉರುಗಾಯನ ಸಂದರುಶನ ಹಾರೈ ಸಿರುಳು ಹಗಲು ಜರಿ ಜರಿದು ಬಾಳ್ವುದೆ 17 ಆ ಪರಮಾತ್ಮಗೆ ರೂಪದ್ವಯವು ಪ ರಾಪರ ತತ್ತ್ವ ಗಳಿದರೊಳಗೆ ಸ್ತ್ರಿ ಪುಂ ಭೇದದಿ ಈ ಪದ್ಮಜಾಂಡವ ವ್ಯಾಪಿಸಿಹನೆಂದೀಪರಿ ತಿಳಿವುದೆ 18 ವಿಷಯೇಂದ್ರಿಯಗಳಲಿ ತದಭಿಮಾನಿ ಸುಮ ನಸರೊಳು ನಿಂದು ನಿಯಾಮಿಸುತಾ ವಾಸುದೇವ ತಾ ವಿಷಯಂಗಳ ಭೋಗಿಸುವನೆಂದರಿವುದೆ 19 ಮೂಜಗದೊಳಗಿಹ ಭೂ ಜಲ ಖೇಚರ ಈ ಜೀವರೊಳೊ ಮಹೌಜಸನ ಪೂಜಿಸುತನುದಿನ ರಾಜಿಸುತಿಪ್ಪುದೆ 20 ಗುಣಕಾಲಾಹ್ವಯ ಆಗಮಾರ್ಣವ ಕುಂ ಭಿಣಿ ಪರಮಾಣ್ವಾಂಬುಧಿಗಳಲಿ ವನಗಿರಿ ನದಿ ಮೊದಲಾದದರೊಳಗಿಂ ಧನಗತ ಪಾವಕನಂತಿಹನೆಂಬುದೆ 21 ಅನಳಾಂಗಾರನೊಳಿದ್ದೋಪಾದಿಯ ಲನಿರುದ್ಧನು ಚೇತನರೊಳಗೆ ಕ್ಷಣ ಬಿಟ್ಟಗಲದೆ ಏಕೋ ನಾರಾ ಯಣ ಶ್ರುತಿ ಪ್ರತಿಪಾದ್ಯನು ಇಹನೆಂಬುದೆ 22 ಪಕ್ಷಗಳಕ್ಷಿಗಳಗಲದಲಿಪ್ಪಂ ತ್ಯಕ್ಷರ ಪುರುಷನಪೇಕ್ಷೆಯಲಿ ಕುಕ್ಷಿಯೊಳಬ್ಜಜ ತ್ರ್ಯಕ್ಷಾದ್ಯಮರರ ಈಕ್ಷಿಸಿ ಕರುಣದಿ ರಕ್ಷಿಪನೆಂಬುದೆ 23 ಕಾರಣ ಕಾರ್ಯಾಂತರ್ಗತ ಅಂಶವ ತಾರಾವೇಶಾಹಿತ ಸಹಜಾ ಪ್ರೇರಕ ಪ್ರೇರ್ಯಾಂಹ್ವಯ ಸರ್ವತ್ರ ವಿ ಕಾರವಿಲ್ಲದಲೆ ತೋರುವನೆಂಬುದೆ 24 ಸ್ತುತಿಸುತ ಲಕ್ಷ್ಮೀ ಪತಿಗುಣವ ಕೃತಿಪತಿ ಸೃಷ್ಟಿ ಸ್ಥಿತಿಲಯ ಕಾರಣ ಇತರ ಸರ್ವ ದೇವತೆಗಳಿಗಿನಿತಿಲ್ಲೆಂಬುದೆ25 ಪವನ ಮತಾನುಗರವ ನಾನಹುದೆಂ ದವನಿಯೊಳಗೆ ಸತ್ಕವಿ ಜನರ ಭವನಂಗಳಲಿ ಸಂಚರಿಸುತ ಸುಕಥಾ ಶ್ರವಣವ ಮಾಡುತ ಪ್ರವರನಾಗುವುದೆ26 ಪನ್ನಗಾಚಲ ಸನ್ನಿವಾಸ ಪಾ ವನ್ನಚರಿತ ಸದ್ಗುಣಭರಿತಾ ಜನ್ಯಜನಕ ಲಾವಣ್ಯೇಕನಿಧಿ ಜ ಗನ್ನಾಥವಿಠಲಾನಾನ್ಯಪನೆಂಬುದೆ 27
--------------
ಜಗನ್ನಾಥದಾಸರು
ಫಾಲನಯನ ನುತ ಪಾಲಿಸು ಸತತ ಪಾಲಿಸು ಸುರನರ ಜಾಲಸುಚರಿತ ಪ ಲೀಲಾನಟನ ಫಣಿಶೈಲನಿಳಯ ಭಕ್ತ ಪಾಲವಿಧೃತ ವನಮಾಲ ಶ್ರೀಲೋಲ 1 ಬಾಲತನದಿ ನಿಜ ಲೀಲಾ ಚರಿತಗುಣ ಜಾಲವಿಮೋಹಿತ ಬಾಲಾನುಕೂಲ 2 ಧಾರಾಧರಾಭ ಶರೀರ ತಿರಸ್ಕøತ ಮಾರ ವಿಹಗಸಂಚಾರ ಉದಾರ 3 ಸುಜನ ಪರಿ ನಿಗಮ ವಿಚಾರ ವಿಹಾರ 4 ಕರುಣಾವರಣ ನಿಜಶರಣಾಭರಣ ಭಯ ಹರಣ ಸಕಲ ಸುಖಕರಣ ಶ್ರೀರಮಣ 5 ಶೇಷಶಯನ ಕಲಿದೋಷದಮನ ಮೃದು ಭಾಷ ಮನೋಹರಭೂಷ ಸುವೇಷ 6 ಹರಿದಾಸರನು ಬಲು ಹಿರಿದಾಗಿ ಮೆರೆಸುವ ದ್ವಿರದ ವರದ ಶ್ರೀವರದವಿಠಲ 7
--------------
ವೆಂಕಟವರದಾರ್ಯರು
ಫುಲ್ಲನಾಭ ನಿಜತತ್ವ ತಿಳಿಸು ನುತಪ್ರೇಮಿ ಅಲ್ಲದ್ದು ಅಹುದೆನಿಸಿ ಕೊಲ್ಲದಿರು ಸ್ವಾಮಿ ಪ ವಿಪಿನವನು ಸೇರಿ ಬಲು ಗುಪಿತದಿಂ ಕುಳಿತು ಮಹ ತಪವನಾಚರಿಸಲು ಸುಪಥ ದೊರಕುವುದೆ ಕಪಿವರದ ನಿನ್ನಡಿಯ ಕೃಪೆಯಿಲ್ಲದಿರೆ ಇನಿತು ಜಪತ¥ವ್ರತನೇಮ ಸುಫಲ ನೀಡುವುದೆ 1 ತ್ಯಾಗಿಯೆಂದೆನಿಸಿ ಬಲು ಭೋಗ ನೀಗುವುದೆ ಭಾಗವತ ಜನಪ್ರಿಯ ನಾಗಶಾಯಿ ತವ ದಯ ವಾಗದಲೆ ನರನ ಭವ ರೋಗ ತೊಲಗುವುದೆ 2 ಇಲ್ಲದದು ಇಲ್ಲೆನಿಸು ಅಲ್ಲದ್ದು ಅಲ್ಲೆನಿಸು ಸಲಿಸೆನ್ನನು ತವ ಬಲ್ಲಿದ ಶರಣರೊಳು ಎಲ್ಲದೇವರೆಲ್ಲ ಲೋಕ ಎಲ್ಲನಿನ್ನೊಳಗಭವ ಇಲ್ಲ ನಿನ್ನ್ಹೊರತು ಅನ್ಯ ಸಿರಿ ನಲ್ಲ ಶ್ರೀರಾಮ 3
--------------
ರಾಮದಾಸರು
ಬಗಿಯಲಿ ಬ್ಯಾಡಣ್ಣಾ | ಮದದಲಿ ಪ ಒಳ್ಳೆವರಾ ನುಡಿಯಳ್ಹಲಿ ಮಾಡಿ | ಖುಳ್ಳತನದಲೆ ದಿನ ಹೋಗಾಡಿ 1 ಮಾನವ ಸರಿ ಬಗಿಬ್ಯಾಡ | ಹವಣಿಸಿ ಚರಣಕ ನಮಿಸೆಲೋ ಮೂಢಾ 2 ಶಿಷ್ಟಗೆರಗನು ದಾವನು ಬಾಗಿ | ಹುಟ್ಟುವ ಕಾಡ ಬೊಬ್ಬುಲಿ ಮರವಾಗಿ 3 ಸಣ್ಣ ದೊಡ್ಡವರೆನಬಾರದು ಕೇಳು | ಮನ್ನಣೆ ಗೆಲ್ಲಗವರೇ ಮೇಲು 4 ಗುರುವರ ಮಹಿಪತಿ ಸಾರಿದ ನಿಜವಚನಾ | ಧರೆಯೊಳಗಿದೆ ಪರಗತಿ ಸೋಪಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಟ್ಟೆಯ ನೆವದಿಂದ ಬಂದು ತಟ್ಟ ಕವನೆ ಕಂಡು ಕಣ್ಣ ತೆರೆದ ಕೃಷ್ಣವೇಣಿ ನಿಮ್ಮ ಕಂಡೆ ದುಷ್ಟ ಮಾನವರ ಬಾಧೆಗೆ ಅಂಜಿ ಇತ್ತ ಬಂದೆ ಕಷ್ಟ ದುರಿತಗಳ ಕಳೆಯೆ ತಾಯೆ ಪ. ಭೋರಿಡುವ ಮಳೆಗೆ ಹಲ್ಲುಗಿಟಗರಿದು ಶೀತತಲೆ- ಗೇರಿ ಕಂಪಿಸಿ ನಡುಗುತ್ತ ಜಾರಿ ಕೆಸರೊಳು ಬಿದ್ದು ಮತ್ತೇಳುತಲಿ ದಾರಿಯನು ಕೇಳಿಕೊಳ್ಳುತ ಕ್ರೂರವಾಗಿದ್ದ ಜಾಲಿಯ ಮುಳ್ಳನೆ ತುಳಿದು ಹರಿ ನಾರಾಯಣ ಎನ್ನುತ ಹಾರೈಸಿ ನಿಮ್ಮ ದರುಶನಕ್ಕೆ ನಾ ಬಂದೆ ಘೋರ ದುರಿತವನು ಕಳೆಯೆ ತಾಯೆ 1 ನಿತ್ಯ ಕಲ್ಯಾಣಿ ನಿರ್ಜರಸ್ತೋತ್ರೆ ಶುಭಗಾತ್ರೆ ಪ್ರತ್ಯಕ್ಷ ವಿಷ್ಣುಜಾತೆ ಮಾತೆ ವಿಸ್ತರಿಸಲಾರೆ ಶ್ರೀ ವಿಷ್ಣು ಸಂಪ್ರೀತೆ ಸತ್ಪಾತ್ರ ಸಂಪೂಜಿತೆ ಪ್ರೀತೆ ಸತ್ತು ಹುಟ್ಟುವ ಜನ್ಮ ಕೋಟಲೆಯ ಖಂಡ್ರಿಸೆ ಪತಿತ ಪಾವನ ಚರಿತೆ ವ್ಯರ್ಥವಾಯಿತು ಜನ್ಮ ಸಾರ್ಥಕವ ಮಾಡಮ್ಮ ಮುಕ್ತಿಸಾಧನದಾತೆ ಮಾತೆ 2 ಸುರಗಂಗೆ ಕೃಷ್ಣಮಲಾಪಹಾರಿ ಮೂವರು ಕೂಡಿ ಬೆರೆದಿದ್ದ ಸಂಗಮದಲ್ಲಿ ಅರಿಸಿಣ ಅಕ್ಷತೆ ಗಂಧ ಕುಂಕುಮ ತಾಂಬೂಲಗಳ ಹರುಷದಿಂದರ್ಪಿಸುತಲಿ ಥರಥರದಿ ನೆರೆದ ಮುತ್ತೈದೆಯರೆಲ್ಲರು ಮರದ ಬಾಗಿನವ ಕೊಡುತಲಿ ಹರುಷದಿಂದಿಪ್ಪುದನು ಕಂಡೆ ಹೆಳವನಕಟ್ಟೆ ಅರಸು ರಂಗನ ಕೃಪೆಯಲ್ಲಿ ತಾಯೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಬಡವರ ಭಾಗ್ಯನಿಧಿಯೆ ನಿನ್ನ ಅಡಿಗಳಿಗೆರಗುವೆ ಪ. ದೃಢಮತಿ ಕೊಡು ಎಂದು ಬಿಡದೆ ಧ್ಯಾನಿಸುವೆ ಅ.ಪ. ಗುರುಗಳ ಕರುಣವೊ ಹಿರಿಯರ ಬಲವೊ ನಾ ಚರಿಯ ದೇವಾದಿದೇವ 1 ತÀೃಷೆಯಿಂದ ನುಡಿವೆನೊ ನಿನ್ನ ವಶವಲ್ಲವೇ ನಾನು2 ಭಕ್ತರಹಂಕಾರ ಯುಕ್ತೀಲಿ ಕಳೆಯುವ ಶಕ್ತ ನೀನಲ್ಲದೆ ಮುಕ್ತೀಶ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ