ಒಟ್ಟು 3517 ಕಡೆಗಳಲ್ಲಿ , 124 ದಾಸರು , 2540 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಲಹು ಸಲಹು ಹರಿಯೇ ದಯದಿಂದಲಿ| ಇಳೆಯೊಳು ನಾನತಿ ದೀನನು ಪ ಸನ್ಮತಿದಾಯಕ ಸನ್ಮನ ಮುನಿಜನ|ಸನ್ಮತ ಮಾ ಮನೋಹಾರಿ| ಮನ್ಮಥನಯ್ಯನೇ ಉನ್ಮತ ಸುರಹರ| ಚಿನ್ಮಯ ರೂಪ ಉದಾರಿ1 ನಿವಾರಣ ಮಾಡಿದೆ ಶೌರಿ| ಹರಣ ಸಹದಾರುಣ ವಲ್ಲಭ ಕಾರುಣ ಸುರಸಹಕಾರಿ2 ತುಹಿನ ಕಿರಣ ಕುಲಮೌಳಿ| ಮಹಿಪತಿ ನಂದನ ಹೃದಯ ಸರೋವರ| ಹಂಸಪರಮ ವನಮಾಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸವಿದುಣ್ಣ ಬಾರಯ್ಯ ಸಾರಾಭೋಕ್ತಾ ಪವನಾಂತರ್ಗತ ಕಪಿಲಾತ್ಮ ನರಸಿಂಗಾ ಪ ಉಪ್ಪು ಉಪ್ಪಿನಕಾಯಿ ಪತ್ರ ಶಾಖ ಸೂಪ ಒಪ್ಪುವ ಸಂಡಿಗೆ ವ್ಯಂಜನಗಳು ಇಪ್ಪವು ನಿರುಋತಿ ಪ್ರಾಣ ಮಿತ್ರ ಶೇಷ ಸರ್ಪವೈರಿ ದಕ್ಷ ಲೋಕೇಶನಲ್ಲಿಗೆ 1 ಅನ್ನ ಮಂಡಿಗೆ ತೈಲ ಪಕ್ವಂಗಳು ಪರ ಮಾನ್ನ ಭಕ್ಷ ತುಪ್ಪ ಹುಳಿ ಪದಾರ್ಥ ಬೊಮ್ಮ ಜಯಂತರೈ ಸೂರ್ಯ ಕನ್ಯ ಲಕುಮಿದೇವಿ ಪರ್ವತ ಸುತಿ ಇರೆ2 ಕ್ಷೀರ ನವನೀತಧಿಕಾರಣಾಮ್ಲ ಚಾರು ಉದ್ದಿನ ಭಕ್ಷ ಕಟು ದ್ರವ್ಯ ಪಾ ವಾರಿಜಾಸನ ರಾಣಿ ವಾಯು ಸೋಮ ವೈರಿ ಧರ್ಮ ಸ್ವಾಯಂಭುವಂಗಳು ಅಲ್ಲಿ ಹಾಕಿರೆ 3 ಇಂಗು ಯಾಲಕ್ಕಿ ಸಾಸಿವೆಯಿಂದ ವೊಪ್ಪುತಾ ಬಂಗಾರ ಪಾತ್ರಿಯೊಳಗೆ ತಂದಿಡೆ ಸ್ವಾದೋದಕ ಇಡೆ ಅಂಗಜಾ ದುರ್ಗಿಯ ಚಂದ್ರಮಸುತನಿರೆ 4 ವೀಳ್ಯವ ಕೈಕೊಳೊ ಗಂಗಾಜನಕ ಹರಿ ಅಲ್ಲಲ್ಲಿಗೆ ನಿನ್ನ ರೂಪವುಂಟು ಬಲ್ಲಿದಾ ವಿಜಯವಿಠ್ಠಲರೇಯ ಎನಗಿದೆ ಸಲ್ಲೊದೆ ಸರಿ ಲೇಶವಾಪೇಕ್ಷದವನಲ್ಲ5
--------------
ವಿಜಯದಾಸ
ಸಹಾಯವಿಲ್ಲ ಪಾಪಿಜೀವಿಗೆ ಜಗದಿ ಪ ಶಶಿಧರ ಶಿವನ್ವರವು ದಶಶತಭುಜಬಲವು ಪಶುಪತಿ ಕದವ ಕುಶಲದಿಂ ಕಾಯುವ ಅಸಮಬಲವಿರಲವನು ಕುಸುಮಾಕ್ಷಗ್ವೈರೈನಿಸಿ ಅಸುವ ಕಳೆದುಕೊಂಡ 1 ಆರಿಂದ ಮರಣವು ಬಾರದಂತ್ಹಿರಣ್ಯ ಕೋರಿಕೊಂಡ್ಹರನಿಂದ ಮೀರಿ ಮೆರೆಯುತಲಿ ಮೂರುಲೋಕಗಳನ್ನು ಘೋರಿಸಲತಿಶಯ ಮಾರಜನಕ ಮುನಿದು ಸೇರಿಸಿದೆಮಪುರ 2 ಹರನು ಭಸ್ಮಗೆ ಬಲಪರಿಪೂರ್ಣವಾಗಿ ತ ನ್ನುರಿಹಸ್ತ ವರವನ್ನು ಕರುಣಿಸಿಯಿರಲು ದುರುಳಂಗೆ ಘನತರ ಹರನ ಕರುಣವಿರಲು ನರಹರಿ ತಡೆಯದೆ ಉರುವಿದ್ಯರಲವದಿ 3 ನೂರುಯೋಜನ ಮಹ ವಾರಿಧಿಯೊಳು ಮನೆ ಆರು ಕೋಟ್ಯಾಯುಷ್ಯ ಶೂರತಮ್ಮನ ಬಲವು ಮೀರಿದವರ ಬಲ ಮೇರಿಲ್ಲದೈಶ್ವರ್ಯ ಸಾರಸಾಕ್ಷನು ಮುನಿಯೆ ಹಾರಿತು ನಿಮಿಷದಿ 4 ಪರಿ ಬಲವಿರ್ದು ಸಾಫಲ್ಯಹೊಂದದೆ ಲೋಪಾಯಿತು ಸರ್ವರಾಪಾರ ಬಲವು ವ್ಯಾಪಿಸಿ ತ್ರೈಜಗ ಕಾಪಾಡ್ವ ಶ್ರೀರಾಮನಪ ರೂಪಪಾದಕೃಪೆ ನೋಂಪಿ ಸಂಪಾದಿಸದೆ 5
--------------
ರಾಮದಾಸರು
ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ ನೂಕು ಭವದ ಬೇಸರ ದುಷ್ಕರ್ಮವನೀಗ ಪ. ವೇದವ ಗಿರಿಯ ಧರೆಯನುದ್ಧರಿಸಿದವನ್ಯಾರು ಬಾಧಿಪ ಖಳನುದರ ಸೀಳ್ದಗೆ ಸರಿದೋರು ಪಾದನಖದಿ ಬೊಮ್ಮಾಂಡವನೊಡೆದನ ಸಾರು ಕ್ರೋಧದಿ ನೃಪರನು ಕೊಂದವನ ಮಹಿಮೆಯ ಬೀರು 1 ಸೇತುವೆಗಟ್ಟಿದ ರಾಮನಿಂದಿಷ್ಟವ ಬೇಡು ಭೂತರುಣಿಗೆ ಸುಖವಿತ್ತನ ಪೂಜೆಯ ಮಾಡು ಖ್ಯಾತ ದಿಗಂಬರದೇವನ ಕುಶಲವ ನೋಡು ಭೀತಿಯ ಬಿಡುತಲಿ ಭಜನದಿ ಲೋಲ್ಯಾಡು 2 ಮನೆಮನೆವಾರ್ತೆಯ ಬಿಟ್ಟು ಧೇನಿಸುವುದು ಗಳಿಗೆ ಕನಸಿನೊಳಾದರು ಪೋಗದಿರಧಮರ ಬಳಿಗೆ ಗು- ಣನಿಧಿ ಹಯವದನನ ನಿಲಿಸಿಕೊ ಮನದೊಳಗೆ 3
--------------
ವಾದಿರಾಜ
ಸಾಕು ಸಾಕು ಇನ್ನು ಕಷ್ಟ ಅನೇಕಾ ಬೇಕು ಬೇಕು ನಿನ್ನ ಕರುಣ ಪ ಹಿಂದಿನಿಂದ ಎನ್ನ ಹೊಂದಿಬಂದ ದೋಷದಿಂದ ನಾನು ಬಹು ಬಳಲುತಲಿ ----------------------- ಎಂದು ಎಂದು ನಿಮ್ಮಂದ ದ್ವಯಪಾದ ಹೊಂದುವೆ ನಾನೆಂದೆನುತಲಿ----- ಬೆಂದುನೊಂದು ಈ ಚಂದದಿ ಈ ಪರಿಯಿಂದ ನಿನ್ನನಾ ಹೊಗಳುತಲಿ--- ಬೆಂದು ನೊಂದೆ ನಿನ್ನ ಮಂದಿರ ಸೇವಕನೆಂದು ಬಹಳ ಗೋವಿಂದ ಕೃಪಾಳು 1 ಘೋರ ರಾಕ್ಷಸ----ರಿದ ಅವರ ಸಂಹಾರವ ಮಾಡಿದ ಬಲವಂತ ------------------ ವೀರಶೂರ ಗಂಭೀರ ಕೃಪಾಕರ ವಾರಿಜೋದ್ಭವನ ಪಡೆದಂಥಾ ಸಾರಿಸಾರಿ ನಿಮ್ಮ ಸ್ಮರಿಸುವವರಿಗೆ ಸರ್ವ ಸಂಭ್ರಮವು ಮಾಡುವಂಥಾ ಕೀರುತಿ-----ರನು ಯನುತಲಿ ------ನಿಮ್ಮ ಸರ್ವೋತ್ತಮನಂಥಾ 2 ಗಾಧೆ ಬೋಧೆ ಗೊಳಗಾದೆ ಈ ಪರಿ ವೇದಾಂತ---ದೊಂದರಿಯೆ ಸಾಧು ಸಾಧಕರ ಬೋಧೆಗಳೆಂಬುವ ಸದಾ ಕರ್ಣದಿ ಕೇಳರಿಯೆ----ದರೆ ಮಾಧವ ಮಧುಸೂದನ ಧೊರಿಯೆ ವೇದ ಆದಿ ಅಗಾಧ ಗೋಚರನೆ ಪತಿ 'ಹೆನ್ನ ವಿಠ್ಠಲ’ ಹರಿಯೆ 3
--------------
ಹೆನ್ನೆರಂಗದಾಸರು
ಸಾಕು ಸಾಕು ಬಿಡು ಬಡಿವಾರಾ ನಮ್ಮ ಶ್ರೀಕರ ದಾಸರ ಬಿಡಲಾರಾ ಪ. ಚಂಚಲಾಕ್ಷಿಯೊಳ್ ಚದುರತೆ ತೋರುತ ಮಂಚದ ಮೇಲ್ಕುಳ್ಳಿರಲಂದು ಮಿಂಚಿದ ಮೊರೆ ಕೇಳಿ ಮದಗಜನನು ಕಾಯ್ದ ಪಂಚ ಬಾಣ ಪಿತ ವಂಚಿಸನೆಂದಿಗು 1 ಶಂಭುಮುನಿಯು ಕೋಪಾಡಂಬರವನು ತೋರಿ ಅಂಬರೀಷಗೆ ಶಾಪವ ಕೊಡಲು ನಂಬಿದ ಭಕ್ತ ಕುಟುಂಬಿ ಸುದರ್ಶನ ನೆಂಬಾಯುಧದಿಂದ ಸಂಬಾಳಿಸಿದನು 2 ಎಲ್ಲ ವೇದಶಿರಗಳಲಿ ನೋಡೆ ಸಿರಿ- ನಲ್ಲ ವೆಂಕಟಗಿರಿವರ ಹರಿಗೆ ಎಲ್ಲವು ಸರಿಮಿಗಿಲಿಲ್ಲದೆ ತೋರುವ ಖುಲ್ಲ ದೈವಗಣವಿಲ್ಲೆ ಸೇರುವವು 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಾಕು ಸ್ವಾಮಿ ಲೋಕವಾಸವು ಪ ಬೇಕು ನಿಮ್ಮ ಚರಣಸೇವೆ ಲೋಕದಿಂದ ಪಾರು ಮಾಡೆನ್ನ ಅ.ಪ ಕಷ್ಟದಿಂದಿನ್ನು ಜೀವಿಸಲು ನಾ ನೆಷ್ಟು ಪಾಪವ ಮಾಡುವೆನೊ ಇಷ್ಟೆ ಸಾಕಯ್ಯ ಕಷ್ಟನಿವಾರ ಸೃಷ್ಟಿಯಿಂದೆನ್ನ ಪಾರುಮಾಡೊ 1 ಹಲವು ಭ್ರಾಂತಿಗಳಲಿ ನಾನು ತೊಳಲಿಬಳಲಿ ಚಲನೆಗೆಡುತ ದುರಿತ ಸಾಕೈ ಇಳೆಯಿಂದೆನ್ನನು ಗೆಲಿಸು ದೇವ 2 ಸಕಲವಿಧದಿ ದು:ಖರೂಪ ಕಾಕುಸಂಸಾರ ಬಲು ತಾಪ ಭಕುತಜನಪ್ರಿಯ ಮುಕ್ತಿಸೋಮ ಮುಕುತಿ ಕರುಣಿಸು ನಿರುತ ಶ್ರೀರಾಮ 3
--------------
ರಾಮದಾಸರು
ಸಾಗರ ಸ್ಥಿತನಿಲಯ ಭೋಗೀಶ ಕೃತಶಯ್ಯ ವಾಗೀಶಸಂಸೇವ್ಯ ಭಜಕಭಾವ್ಯ ಅನಘ ಕರುಣಾಪಾಂಗ ಮಂಗಳಾಂಗ ಆದಿನಾರಾಯಣಾ ಆನಂದ ಪರಿಪೂರ್ಣ ಆಪನ್ನಿವಾರಣಾ ಅಪ್ರಮೇಯ ಸುರವಿರೋಧಿಕೃತಾಂತ ಸುರರಾಜವÀಂದಿತ ಧರಣೀ ಸುರಾರ್ಚಿತ ದಿವ್ಯಚರಿತ ಮುರಾರಿ ವಿನುತಾದ್ಭುತ ಪ್ರಭಾವ ಸ್ಮರತಾತ ಸ್ಥಿತಿಕರ್ತ ನಿತ್ಯವಿಭವ ವರಶೇಷಗಿರಿವಾಸ ಶ್ರೀನಿವಾಸ
--------------
ನಂಜನಗೂಡು ತಿರುಮಲಾಂಬಾ
ಸಾಧನಕ್ಕೆ ಬಗೆಗಾಣೆನೆನ್ನಬಹುದೆ ಸಾದರದಿ ಗುರುಕರುಣ ತಾ ಪಡೆದ ಬಳಿಕ ಪ ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ ಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆ ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ ಹಿಂಡು ಮಾತುಗಳೆಲ್ಲ ಹರಿಯ ನಾಮ 1 ವಾಗತ್ಯಪಡುವದೆ ವಿಧಿನಿಷೇಧಾರಚರಣೆ ರೋಗಾನುಭವವೆಲ್ಲ ಉಗ್ರತಪವು ಆಗದವರಾಡಿಕೊಂಬುವುದೆ ಆರ್ಶೀವಾದ ಬೀಗುರುಪಚಾರವೇ ಭೂತದಯವು 2 ಮೈಮರೆತು ಮಲಗುವುದೆ ಧರಣಿ ನಮಸ್ಕಾರ ಕೈಮೀರಿ ಹೋದದ್ದೆ ಕೃಷ್ಣಾರ್ಪಣ ಮೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯ ಹೋಯ್ಯಾಲಿತನವೆಲ್ಲ ಹರಿಯ ವಿಹಾರ 3 ಹಿಡಿದ ಹಟ ಪೂರೈಸಲದು ಹರಿಯ ಸಂಕಲ್ಪ ನಡೆದಾಡುವೋದೆಲ್ಲ ತೀರ್ಥಯಾತ್ರೆ ಬಡತನವು ಬರಲದೇ ಭಗವದ್ಭಜನೆಯೋಗ ಸಡಗರದಲ್ಲಿಪ್ಪುದೆ ಶ್ರೀಶನಾಜ್ಞಾ 4 ಬುದ್ಧಿಸಾಲದೆ ಸುಮ್ಮನಿರುವುದೇ ಸಮ್ಮತವು ಯದೃಚ್ಛಾಲಾಭವೇ ಸುಖವುಯೆನಲು ಮಧ್ವಾಂತರ್ಗತ ಶ್ರೀ ವಿಜಯವಿಠ್ಠಲರೇಯ ಹೃದ್ಗತಾರ್ಥವ ತಿಳಿದು ಒಪ್ಪಿಸಿಕೊಳನೆ 5
--------------
ವಿಜಯದಾಸ
ಸಾಧು ಸಜ್ಜನ ಸಂತರ ಸಲಹುವ ಪತಿ ಹರಿ ಯಶೋದ ನಂದನಾ ಪ ಕನಕಾಂಬರಧರ ಕಮಲಸಂಭವ ಪಿತ ಇನಕುಲ ಭೂಷಣ ವೀರಾಧಿವೀರ ಘನಮಕುಟಧರ ಶಿರ ಕಾರುಣ್ಯಸಾಗರ ಅನಿಮಿತ್ತ ಬಂಧು ಜಗದಾದಿ ಪ್ರಿಯ ದಿನಕರ ಕೋಟಿ ತೇಜ ದೇವಾದಿದೇವ ದೀನರಕ್ಷಕ ರಾಮ ಜಾನಕಿ ಪ್ರೇಮಾ ಅನಿಮಿಷ ರೊಡೆಯ ಶ್ರೀ ಆದಿನಾರಾಯಣ ಕನಿಕರಿಸಿ ಎನ್ನಮೇಲೆ ಕೃಪೆ ಮಾಡೋ ಗೋವಿಂದಾ1 ವಾಸುಕಿಶಯನ ಶ್ರೀವಸುದೇವ ತನಯಾ ಸಾಸಿರನಾಮದ ಸರ್ವೇಶಾ ಈಶಾ ವಾಸುದೇವಾಕೃಷ್ಣಾ ವಾರಿಜೋದರ ಶ್ರೀನಿವಾಸ ವೇದೋದ್ಧಾರ ವೈದೇಹಿ ರಮಣ ಭೂಸುರ ವಂದಿತ ಪೂಜಿತ ಸರ್ವತ್ರ ಶ್ರೀಶವೇಣನಾದ ಶೀತ ಜನಪೋಷಾ ಭಾಸುತ ಕೀರ್ತಿ ವಿಶಾಲ ಭಕ್ತವತ್ಸಲ ದಾಸನು ನಾ ನಿನ್ನ ದಯಮಾಡಿ ರಕ್ಷಿಸೆನ್ನ 2 ಸುಂದರ ವದನ ಸುರೇಂದ್ರ ಅರ್ಚಿತ ಪರಮಾನಂದ ಮುಕುಂದ ಮಹಾದೇವನೆ ಹೊಂದಿ ನಿಮ್ಮಯ ಚರಣದ್ವಂದ್ವ ಪೂಜಿಪ ರಂದದಿ ಪುರವಂತ ಬಿರುದುಳ್ಳ ದೇವಾ ಸಿಂಧು ಶಯನನಾದ 'ಶ್ರೀಹೆನ್ನವಿಠ್ಠಲಾ’ ಕರೆದೆನ್ನ ------------------------- ------ ಎನ್ನನ್ನು ಕರುಣಿಸು ಕಾಯೋ
--------------
ಹೆನ್ನೆರಂಗದಾಸರು
ಸಾಮಜ ವಸ್ತ್ರಾಂಗಂ ಸುಮನೋತ್ತುಗಂ ಪ ನಿಗಮ ಶಿರಲೋಲ ಸದಾನಂದಿತಂ ಮೇ ಮನಸಾ 1 ತಾಪ ಭೀಷಣಂ ಈಶ್ವರವಿಶ್ವೇಶನಾದ ಘೋಷಣಂಭಾಸುರ ಕೋಟಿ ಸೇವಿತ ಸಂಕಾಶ ಮಹೇಶ ಸದಾನಂದಿತಂ ಮೇ ಮನಸಾ2 ಪರಮ ಪರಾಪುರುಷಂ ಪಾರ್ವತಿ ಮನೋಹರ ಹರಿ ವಿಶ್ವಾರ್ಚಿತಂವರ ಚಿದಾನಂದ ಗುರುವೇ ಸಾಕ್ಷಾತಂಸ್ಮರಣ ಮನೋನಿಶ್ಚಿತಂ ಮೇ ಮನಸಾ3
--------------
ಚಿದಾನಂದ ಅವಧೂತರು
ಸಾರ ಪ ಪ್ರಶ್ನೆ:ಯಾತರಿಂದಲಿ ಕೇಳೆನ್ನಯಮನ ಬಹು ಪೂತವಾಗುವದು ಗುರುವರೇಣ್ಯ ಭೂತಳದಲಿ ಪರಮ ಪಾವನ ತೀರ್ಥ ಅನುದಿನ 1 ಉತ್ತರ:ಶ್ರಧ್ದ ಪೂರ್ವಕ ಶ್ರವಣಸಾಧನ ಮನ ಶುದ್ಧಿಗೆ ಇದೆ ಮುಖ್ಯ ಕಾರಣ ಉದ್ಭವಿಸುವದು ಭಕ್ತಿ ಜ್ಞಾನ ಅನಿ ಪ್ರಶ್ನೆ:ವಶವಲ್ಲಭವದಿ ಬಂದೊದಗುವ ನಾನಾ ವ್ಯಸನಗಳನು ಪರಿಹರಿಸುವ ಬೆಸಸುವದೆನ ಗೀ ಉಪಾಯವ ಚರಿಸಲೇನು ಗಿರಿಗುಹದಲಿ ತ¥ವÀ| ಉ.ವಸುದೇವಸುತನ ಸಂಕೀರ್ತನ ನಾನಾ ವ್ಯಸನ ಪರಿಹಾರಕ್ಕೆ ಕಾರಣ ಮುಸುಕಿರ್ದ ಮೇಘಕ್ಕೆ ಪವಮಾನ ಭವ ವ್ಯಸನಾಂಧಕಾರಕ್ಕೆ ರವಿಕಿರಣ 2 ಪ್ರ:ಏನು ಮಾಡಲಿ ಸದುಪಾಸನ ದೈವಾ ಧೀನದಿ ಬರುವ ವಿಘ್ನಗಳನ್ನು ಕಾಣೆನು ಪರಿಹಾರ ಕೃತಿಯನ್ನು ಇದ ಉ:ಬಿಡದಿರೊ ಕೃಷ್ಣನ್ನ ಸ್ಮರಣವ ಬರುವ ಯಡರುಗಳನು ಪರಿಹರಿಸುವ ದೃಢಮನದಲಿ ತಿಳಿವದು ಜವ ಪೋಪ ದ್ಯಡರು ಪ್ರಾಪಕವಾದ ಪಾತಕವ 3 ಪ್ರ:ಮೋಕ್ಷಫಲದ ಕಮಲಾಕ್ಷಣ ಅಪ- ರೋಕ್ಷ ವಾಗುವದಕ್ಕೆ ಸಾಧನ ಶಿಕ್ಷಿಸುವದು ಸದುಪಾಸನ ಆ ಉ:ಆದರದಿ ನೈರಂತರ್ಯದಿ ಯುಕ್ತ ಮಾಧವನಂಘ್ರಿಯ ಸ್ಮರಣದಿ ಸಾಧಿತ ಬಿಂಬಾಪರೋಕ್ಷದಿಸ ನ್ಮೊದ ಭರಿತನಾಗಿರು ಜಗದಿ 4 ಪ್ರ:ಏನು ಮಾಡಲು ಮುಕ್ತಿಸಾಧನವಾದ ಜ್ಞಾನ ವಿಜ್ಞಾನ ಸಂಪದವನ್ನ ಕಾಣುವದೆಂದಿಗೆ ತಿಳಿಸೆನ್ನ ಮುಂದೆ ಸಾನುರಾಗದಲಿ ಬೇಡುವೆ ನಿನ್ನ ಉ:ಭಕ್ತಿ ವೈರಾಗ್ಯದಿ ಕೂಡಿದ ಪುರು ಷೋತ್ತಮನಂಘ್ರಿ ಸಂಸ್ಮøತಿಯಿಂದ ಚಿತ್ತದಿ ಜ್ಞಾನ ವಿಜ್ಞಾನದ ಉತ್ಪ- ಮೋದ 5 ಪ್ರ:ಜಲಜನಾಭನ ಪದಯುಗದಲ್ಲಿ ನಿ- ಶ್ಚಲ ಭಕ್ತಿಯೆನಗೆ ಪುಟ್ಟುವದೆಲ್ಲಿ ಬಲುವಿಧ ಭಕುತಿಯ ಬಗೆ ಉ:ಜ್ಞಾನ ವೈರಾಗ್ಯದಿ ಕೂಡಿದ ನಂದ ಸೂನು ಪಾದಾಂಬುಜ ಸ್ಮøತಿಯಿಂದ ಪ್ರಾ- ಣೇಂದ್ರಿಯಾತ್ಮಾದಿಗಳಿಂದ ಅಧಿಕ ಕಾಣಿಸುವದು ಭಕ್ತಿ ಜವದಿಂದ 6 ಪ್ರ:ದೃಢತರವಾದ ವೈರಾಗ್ಯವ ಪೊಂದಿ ಪಡಿವೆನೆಂದಿಗೆ ಮಾಧವನ ದಯವಾ ಗಡನೆ ಪೇಳಿದಕೇನು ಪಾಯವ ನಿ- ಉ:ಜ್ಞಾನ ಭಕ್ತಿಗಳಿಂದ ಕೂಡಿದ ಶಿರಿ ವೇಣು ಗೋಪಾಲನ ಸ್ಮøತಿಯಿಂದ ಕಾಣುವಿ ಸಧೃಡ ವೈರಾಗ್ಯದ ಭಾಗ್ಯ ಶ್ರೀನಿಧಿ ಚರಣಾನು ಗ್ರಹದಿಂದ7 ಪ್ರಃಘನಲೌಕಿಕದಿ ಕೇಳೆನ್ನಯ ಮನ ನಿ- ಪುಣತರವೆನಿಸುವ ದನುದಿನ ಎನಗೆಂದಾಧ್ಯಾತ್ಮ ತತ್ವದಿ ಮನವೆರಗ ಲೆನಿಸುವದದೆ ಮುಕ್ತಿಸಾಧನ ಉ:ಅನುದಿನ ಶ್ರವಣಾದಿ ಸಾಧನ ದಿಂದ ಜನಿತ ಸದ್ಭಕುತಿಯೆ ಕಾರಣ ಮನದೊಳಾಧ್ಯಾತ್ಮ ತತ್ವಗಳನ್ನ ನೋಡಂ ಜನಯುಕ್ತ ನಯನ ದಂದದಿ ಮುನ್ನ 8 ಪ್ರಃಏನಿರುವುದು ಬಿಂಬಲಕ್ಷಣ ಮತ್ತೇ ನೇನು ಮಾಳ್ಪ ಕರ್ಮಗಳನ್ನು ಸಾನುರಾಗದಿ ಪೇಳುವದುಮುನ್ನ ಮನದಿ ಧ್ಯಾನವ ಮಾಡುವೆ ಪ್ರತಿದಿನ ಉ.ಇಂತಿರುವದು ಬಿಂಬ ಲಕ್ಷಣ ಬಹಿ ರಂತರದಲಿ ತಿಳಿವದು ಮುನ್ನ ಸಂತತ ಸೃಷ್ಟ್ಯಾದಿಗಳನ್ನ ದೇ ಹಾಂತಃ ಸ್ವಪ್ನದಿ ಸಂದರುಶನ 9 ಪ್ರ.ಎಲ್ಲಿರುವನು ಬಿಂಬ ದೇಹದಿ ಸಿರಿ ನಲ್ಲನು ವ್ಯಾಪ್ತವೆಂಬರು ಜಗದಿ ಎಲ್ಲದೇಶ ಗುಣಕಾಲದಿಯನ್ನ ಉ:ನಿಂತಿರುವನು ಸರ್ವಜೀವರ ಹೃದ ಯಾಂತರದಲಿ ವ್ಯಾಪ್ತನು ಪೂರಾ ಸಂತತ ಜೀವನ ವ್ಯಾಪಾರ ತಾನೆ ನಿಂತು ಮಾಡಿಸುವನು ನಿರ್ಧಾರ 10 ಪ್ರ:ಎಂತು ಮಾಡಲಿ ಬಿಂಬೋಪಾಸನ ಮುಕ್ತಿ ಪಂಥಕ್ಕೆ ಮುಟ್ಟಲು ಸೋಪಾನ ಅ- ನಂತ ಗುಣಾತ್ಮಕ ಬಿಂಬನ ಗುಣ ಚಿಂತಿಪರಿಗೆ ಬಂಧ ಮೋಚನ ಉ:ಇದೆ ತಿಳಿಬಿಂಬೋಪಾಸನÀ ಚತು ರ್ವಿಧ ದಿಂದಲಾತ್ಮ ಸಮರ್ಪಣ ಮೊದಲು ಆತ್ಮಾನಮೇವಾರ್ಪಣ ದ್ರವ್ಯ ಸದ್ಗುಣ ಕರ್ಮಸಮರ್ಪಣ 11 ಮಾಡಲಾವ ಧರ್ಮಗಳ ಮಾಡಲಿ ಮುನ್ನ ಜೀವರ ಬಂಧ ವಿಮೋಚನ ಮಾಳ್ಪ ಭಾಗವತ ಧರ್ಮಗಳನ್ನು ತಿಳಿದು ಶ್ರದ್ಧೆಯಿಂದಲ್ಲಿ ಮಾಡೋ ಮುನ್ನ ಹೃದ್ಗತ ಬಿಂಬೋಪಾಸಾನ ಮಾಡಿ ಸಿದ್ಧನಾಗಿ ಬಾಳೆಲೋ ಮುನ್ನಾ 12 ಪ್ರ:ಎಂತಿರುವದು ಗುರುಲಕ್ಷಣ ಮುಕ್ತಿ ಪಂಥವ ತೋರಿಸುವವರನ್ನ ಚಿಂತಿಸುವೆನು ಮನದೊಳುಮುನ್ನ ಭಗ ವಂತನ ಮಹಿಮೆ ಪೇಳುವರನ್ನ ಉ:ಜಲಜನಾಭನÀ ಪದಯುಗಲವ ಬಿಟ್ಟು ಚಲಿಸದಿರು ಲವ ನಿಮಿಷಾರ್ಧವ ಇಳಿಯೊಳಗಿಂಥಾ ಸದ್ವೈಷ್ಣವರನ್ನು ತಿಳಿದು ಸೇವಿಸುತಿರು ಮಾನವಾ 13 ಪ್ರ:ಏನು ಕೊಡಲಿ ಗುರುದಕ್ಷಿಣ ಈ ಕ್ಷೋಣಿಯಿತ್ತರು ಸರಿಗಾಣೆ ನಾ ಧ್ಯಾನವ ಮಾಡುವೆ ಪ್ರತಿದಿನಾ ಬಿಂಬ ಜ್ಞಾನವ ಕೊಟ್ಟು ರಕ್ಷಿಪರನ್ನ ಉ:ಆತ್ಮಾರ್ಪಣ ಮೇವದಕ್ಷಿಣ ಸಿರಿ ನಾಥ ನಿಂದನ್ಯ ವಸ್ತುಗಳನ್ನು ಪ್ರೀತಿಸರೆಂದಿಗೂ ಧನವನ್ನು ಈ ಮ- ಹಾತ್ಮರ ಸ್ಮರಿಸುತಲಿರು ಮುನ್ನ 14 ಕ್ಷೇತ್ರ ಕಾರ್ಪರದೊಳಗಿರುವಂಥ ಲಕ್ಷ್ಮಿ ಯುಕ್ತ ನರಸಿಂಹನೊಲಿಸುವಂಥ ಸ್ತೋತ್ರ ಮಾಲಿಕೆಯನ್ನು ಪಠಿಸುತ್ತ
--------------
ಕಾರ್ಪರ ನರಹರಿದಾಸರು
ಸಾರಥಿ ವಿಶ್ವಾಧೀಶ್ವರ ವಿಜಯ ಪಾಲಿಸು ಸತತಂ ವಿಜಯಧ್ವಜ ವೆಂಕಟಗಿರಿ ನಾಯಕಿ ಅಜಿತ ಸಕಲಸುರವೈರಿ ವಿದಾರಣ ಪ. ವೀರಾಗ್ರಣಿ ರಘುವೀರ ವಿದಾರಿತ ಘೋರದಿತಿಜ ಪರಿವಾರ ಶೌರಿ ಕಾರಣ ಧಾರಣ ವದನ ಖರಾರಿ ಕೃಪಾಕರ್ರ(?) 1 ಲಕ್ಷ್ಮಣ ಪೂರ್ವಜ ಋಕ್ಷವಿನುತ ಕಮ ಲಾಕ್ಷ ಶೂರ್ಪನಖ ಶಿಕ್ಷಾ ದಕ್ಷಿಣ ದುರಿತಾರಣ್ಯ ರಮಾಸ್ಪದವಕ್ಷಸ್ಥಳ ವಿಭವೈಕನಿಭೆ ಜಯ ದ್ವಿದಶಾಕ್ಷ ವಿಘಾತನ 2 ರಾಮಾಭಿದ ರಮಣೀಯ ಗುಣಾರ್ಣವ ಕಾಮಿತ ಫಲದಾವನಭೂಮಾ ಭವಾಮಯಹರ ಭಜಕಾಶ್ರಯಧಾಮಾ ಮಾರುತಿಕೃತ ಕಾಮಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂ ಪ. ಭೇರಿತಮ್ಮಟಾದಿ ಭಾರಿವಾದ್ಯಂಗಳು ಭೋರ್ಗರೆಯುತ್ತಿರಲು ನಾರಿ ನಿನ್ನ ಕಾಣಲು ಅ.ಪ. ಭಾವಜಾದಿ ಜನನೀ ಭಾರ್ಗವೀ ಕಲ್ಯಾಣಿ ದೇವದೇವನ ರಾಣೀ ಶ್ರೀಮತೀ ಪದ್ಮಿನೀ 1 ಕ್ಷೀರವಾರಿಧಿಜಾತೆ ಮಾರವೈರಿವಿನುತೆ ವಾರಿಜಾಸನ ಮಾತೆ ಸಾರಿ ಬಾ ಸುಪ್ರಿತೇ 2 ಶೇಷಶೈಲನಿಲಯೆ ವಾಸವಾದಿಗೇಯೆ ವಾಸುದೇವಜಾಯೇ ವಸುಮತೀ ತನಯೇ3
--------------
ನಂಜನಗೂಡು ತಿರುಮಲಾಂಬಾ
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂಪ. ಸಾರಸಾಕ್ಷಿ ಬೇಗ ಚಾರುಪೀಠಕೀಗ ಅ.ಪ. ಭೇರಿ ತಮ್ಮಟಾದಿ ಭಾರಿವಾದ್ಯಂಗಳೂ ಭೊರ್ಗರೆಯುತಿರಲು ನೀರೆ ನೀ ಭರದೊಳು 1 ಭಾರ್ಗವಿ ಕಲ್ಯಾಣಿ ದೇವದೇವನರಾಣಿ ಶ್ರೀಮತೀ ಪದ್ಮಿನಿ2 ಕ್ಷೀರವಾರಿಧಿಜಾತೆ ಮಾರವೈರಿವಿನುತೆ ವಾರಿಜಾಸನ ಮಾತೆ ಸಾರಿ ಬಾ ಪ್ರಖ್ಯಾತೆ 3 ಶೇಷಶೈಲನಿಲಯೆ ವಾಸವಾದಿಗೇಯೆ ವಾಸುದೇವಜಾಯೆ ವಸುಮತೀ ತನಯೆ 4
--------------
ನಂಜನಗೂಡು ತಿರುಮಲಾಂಬಾ